* ರಮೇಶ್ ನಿಂಬೆಮರ್ದಳ್ಳಿ
ಕುವೆಂಪು ವಿಶ್ವವಿದ್ಯಾಲಯದ ಸ್ಥಳೀಯ ಸಂಸ್ಕೃತಿಕಗಳ ಅಧ್ಯಯನ ಕೇಂದ್ರ'ದ ನಾಡಿನ ಚಿಂತಕರೆನಿಸಕೊಂಡವರು
ಧ್ವನಿಯೆತ್ತಿದ ಬಗ್ಗೆ ಡಾ ರಾಜಾರಾಮ್ ಹೆಗಡೆಯವರ ಲೇಖನ ಹಿಂದಿನ ಸಂಚಿಕೆಯಲ್ಲಿ ಪ್ರಕಟವಾಗಿತ್ತು.
ಈ ಕೇಂದ್ರದ ಬಗ್ಗೆ ಮತ್ತು ವಿವಾದದ ಹಿನ್ನೆಲೆಯ ಬಗ್ಗೆ ಮಾಹಿತಿ ಇದ್ದರೆ ಒಳ್ಳೆಯದಿತ್ತು ಎಂದು ಹಲವು
ಓದುಗರು ತಿಳಿಸಿದ್ದರು. ಆದ್ದರಿಂದ, ಕನ್ನಡ ನಾಡಿನ ಬುದ್ಧಿಜೀವಿಗಳು ಈ ಕೇಂದ್ರವನ್ನು ವಿರೋಧಿಸಲು
ಕಾರಣವಾದ, ಬಾಲಗಂಗಾಧರ ಅವರ ಚಿಂತನೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಅವರ ಕಿರು ಸಂದರ್ಶನವೊಂದನ್ನು
ಇಲ್ಲಿ ಪ್ರಕಟಿಸಲಾಗಿದೆ.
- ಚಿಂತನ ಬಯಲು ಸಂಪಾದಕ
ಪ್ರೊ. ಎಸ್. ಎನ್. ಬಾಲಗಂಗಾಧರ, ಪ್ರಸ್ತುತ ಜಾಗತಿಕ ಮತ್ತು ಭಾರತೀಯ ಬೌದ್ಧಿಕ ವಲಯದಲ್ಲಿ ಕೇಳಿಬರುತ್ತಿರುವ ಬಹುಮುಖ್ಯ ಹೆಸರು. ಭಾರತದ ಸಂಸ್ಕೃತಿಗಳ ವೈಜ್ಞಾನಿಕ ಅಧ್ಯಯನಕ್ಕೆ ಒಂದು ಹೊಸ ಒಳನೋಟವನ್ನು ಬಾಲಗಂಗಾಧರ ನೀಡಿದ್ದಾರೆ. ಇವರ ಚಿಂತನೆಗಳು 'ಗತ' ಭಾರತದ ಹುಡುಕಾಟಕ್ಕೆ ಹೊಸ ಭರವಸೆ ಹುಟ್ಟು ಹಾಕಿವೆ. ಇಡೀ ಭಾರತದ ಬುದ್ಧಿ ಜೀಗಳ ಆಲೋಚನೆಗಳಿಗಿಂತ ಭಿನ್ನವಾದ ಮತ್ತು 'ಕ್ರಾಂತಿಕಾರಿ'ಯಾಗಿರುವ ಇವರ ಚಿಂತನೆಗಳು ಆ ಕಾರಣಕ್ಕೇ ಸಾಕಷ್ಟು ರೋಧ ಎದುರಿಸುತ್ತಿವೆ. ಅಕಡೆಮಿಕ್ ವಲಯದಲ್ಲಿ ನಡೆಯುತ್ತಿರುವ ಅಧ್ಯಯನಗಳು, ಚಿಂತನೆಗಳು ಮತ್ತು ಒಟ್ಟಾರೆ ಭಾರತದ ಸಂಸ್ಕೃತಿಗಳ ಕುರಿತು ಇರುವ ನಿರೂಪಣೆ ಅಥವಾ ಗ್ರಕೆಯ ಬಗ್ಗೆ ಬಹುತೇಕರಿಗೆ ಏನೋ ಒಂದು ತೆರನಾದ ಅಸಮಾಧಾನ ಇದೆ. ಈಗಿನ ಸಿದ್ಧಾಂತಗಳು, ಅಧ್ಯಯನ ಮಾರ್ಗಗಳು 'ನಮ್ಮ'ನ್ನು ನಾವು ಸೂಕ್ತವಾಗಿ ಅರ್ಥಮಾಡಿಕೊಳ್ಳುವಲ್ಲಿ ಸರಿಯಾಗಿ ಸಹಕರಿಸುತ್ತಿಲ್ಲ ಎನ್ನುವ ಕೊರಗು ಹಲವು ಬುದ್ಧಿ ಜೀಗಳನ್ನೂ ಕಾಡುತ್ತಿದೆ. ಇಂಥ ಕೊರಗಿಗೆ, ಅಸಮಾಧಾನಕ್ಕೆ ಎಸ್.ಎನ್ ಬಾಲಗಂಗಾಧರ ಸೈದ್ಧಾಂತಿಕ ರೂಪ ನೀಡಿದ್ದಾರೆ. ಈ ಸಿದ್ಧಾಂತದಲ್ಲಿ ಅವರು ಹೀಗೆ ನಮ್ಮ ನೆರಗೆ ಬರುತ್ತಾರೆ; ಮೊದನೆಯದು, ಭಾರತದ ಸಂಸ್ಕೃತಿಗಳ ಮತ್ತು ಇಲ್ಲಿನ ಸಾಮಾಜಿಕ ವ್ಯವಸ್ಥೆಯ ಕುರಿತು ಈವರೆಗೆ ಬಂದಿರುವ ನಿರೂಪಣೆಯಲ್ಲಿ ಇರುವ 'ದೋಷ' ಏನು ಎನ್ನುವುದನ್ನು ಅವರು ತೋರಿಸಿಕೊಡುತ್ತಾರೆ. ಎರಡನೆಯದು, ಹಾಗೆ 'ದೋಷಪೂರಿತ' ವರಗಳ ಹಿಂದೆ ಇರುವ ಗ್ರಕೆ ಯಾವುದು?, ಅದು ಭಾರತದ ಸಮಾಜವನ್ನು ಹಾಗೆಯೇ ಗ್ರಸಿದ್ದು ಯಾಕೆ?, ಎನ್ನುವುದನ್ನು ಮನದಟ್ಟು ಮಾಡಿಕೊಡುತ್ತಾರೆ. ಮೂರನೆಯದು, ಪಾಶ್ಚಾತ್ಯರಿಂದ ನಿರೂಪಿಸಲ್ಪಟ್ಟಿರುವ ದೋಷಪೂರಿತ ವಿವರಣೆಗಳಿಂದ ಹೊರಬಂದು ನಮ್ಮ ಸಂಸ್ಕೃತಿಯನ್ನು ಹೊಸದಾಗಿ ಶೋಧಿಸಿಕೊಳ್ಳುವ ಮಾರ್ಗಗಳನ್ನು ಅವರು ತೋರಿಸುತ್ತಾರೆ.
ಮೂಲತಃ ಬೆಂಗಳೂರಿವರಾದ ಪ್ರೊ. ಎಸ್. ಎನ್. ಬಾಲಗಂಗಾಧರ, ಪ್ರಸ್ತುತ ಬೆಲ್ಜಿಯಂ ದೇಶದ
ಘೆಂಟ್ ವಿಶ್ವದ್ಯಾಲಯದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿದ್ದು, 'ಸಂಸ್ಕೃತಿಗಳ ತುಲನಾತ್ಮಕ ಅಧ್ಯಯನ'
ಭಾಗದ ನಿರ್ದೇಶಕರಾಗಿದ್ದಾರೆ. ಇವರು ರಿಲಿಜನ್, ಪಾಶ್ಚಾತ್ಯ ರಾಜಕೀಯ ಚಿಂತನೆಗಳು, ಸೆಕ್ಯುಲರಿಸಂ,
ಭಾರತೀಯ ಸಂಸ್ಕೃತಿ, ಸಂಪ್ರದಾಯಗಳು, ವಸಾಹತುಶಾಹಿ ಪ್ರಜ್ಞೆ, ವಸಾಹತೋತ್ತರ ಚಿಂತನೆಗಳು, ಇತಿಹಾಸ,
ಭಾರತೀಯ ಕಾನೂನು ವ್ಯವಸ್ಥೆ, ಇತ್ಯಾದಿ ಚಾರಗಳ ಕುರಿತು ಸಂಶೋಧನೆಯಲ್ಲಿ ನಿರತರಾಗಿದ್ದಾರೆ.
'ಹೀದನ್ ಇನ್ ಸ್ ಬ್ಲೈಂಡ್ನೆಸ್' (ಕನ್ನಡ ಅನುವಾದ; 'ಸ್ಮೃತಿ- ವಿಸ್ಮೃತಿ ಭಾರತೀಯ
ಸಂಸ್ಕೃತಿ'), ' ಶಲ್ ನಾಟ್ ಸೀಸ್ ಫ್ರಮ್ ಎಕ್ಸ್ಪ್ಲೊರೆಶನ್' (ಕನ್ನಡ ಅನುವಾದ; 'ಹುಡುಕಾಟವನ್ನು
ನಿಲ್ಲಿಸದಿರೋಣ'), 'ರಿ ಕಾನ್ಸೆಪ್ಚುಯಲೈಸಿಂಗ್ ಇಂಡಿಯಾ ಸ್ಟಡೀಸ್', 'ಭಾರತದಲ್ಲಿ ಜಾತಿವ್ಯವಸ್ಥೆ
ಇದೆಯೇ?' ಹಾಗೂ 'ಪೂರ್ವಾವಲೋಕನ' ಇವುಗಳು ಬಾಲಗಂಗಾಧರ ಅವರ ಮಹತ್ವದ ಕತಿಗಳು. ಇವರ ಚಾರಗಳನ್ನಾಧರಿಸಿ
ಜಗತ್ತಿನ ಹಲವೆಡೆ ಸಂಶೋಧನೆಗಳು ನಡೆಯುತ್ತಿವೆ ಮತ್ತು ಹಲವು ಸ್ವತಂತ್ರ ಕೃತಿಗಳೂ ಹೊರ ಬಂದಿವೆ.
ಎರಡು ರಾಷ್ಟ್ರಗಳ (ಪಾಶ್ಚಾತ್ಯ ಮತ್ತು ಪೌರಾತ್ಯ ರಾಷ್ಟ್ರಗಳ) ನಡುವೆ ಇರುವ ನಿರ್ದಿಷ್ಟ
ರೀತಿಯ ಸಂಬಂಧವನ್ನು ವಸಾಹತುಶಾಹಿ ಎನ್ನುತ್ತಾರೆ. ಈ ಸಂಬಂಧವು ಅಧಿಕಾರ, ಶೋಷಣೆ ಮತ್ತು ಹಿಂಸೆಯನ್ನೂ
ಒಳಗೊಂಡಂತೆ ಅನೇಕ ಆಯಾಮಗಳನ್ನು ಹೊಂದಿದೆ. ಆದರೆ ಎರಡು ದೇಶಗಳ ನಡುನ ಸಂಬಂಧವನ್ನು ವಸಾಹತು ಸಂಬಂಧವೆಂದು
ಕರೆಯಬೇಕಾದರೆ ಕೆಲವು ಮಾನದಂಡಗಳ ಅವಶ್ಯಕತೆ ಇದೆ. ಇಲ್ಲದಿದ್ದರೆ, ಅಧಿಕಾರ, ಶೋಷಣೆ ಮತ್ತು ಹಿಂಸೆ
ಇರುವುದೆಲ್ಲವೂ ವಸಾಹತು ಸಂಬಂಧವೆಂದು ತಪ್ಪಾಗಿ ಕರೆಯುವ ಸಂಭವವಿದೆ. ಅಂತಹ ಮಾನದಂಡಗಳಲ್ಲಿ ವಸಾಹತುಪ್ರಜ್ಞೆಯೂ
ಒಂದು. ಎರಡು ದೇಶಗಳ ನಡುವೆ ಇರುವ ಸಂಬಂಧವು ವಸಾಹತು ಸಂಬಂಧವೆಂಬುದನ್ನು ಗುರುತಿಸುವಲ್ಲಿ ವಸಾಹತು
ಪ್ರಜ್ಞೆಯು ನಮಗೆ ಸಹಾಯ ಮಾಡುತ್ತದೆ. ಈ ಪ್ರಜ್ಞೆಯು ವಸಾಹತು ಪ್ರಭುಗಳು ಮತ್ತು ಅವರ ಪ್ರಜೆಗಳು ಪ್ರಪಂಚವನ್ನು
ಹೇಗೆ ಗ್ರಹಿಸುತ್ತಾರೆ ಹಾಗೂ ಒಬ್ಬರನ್ನೊಬ್ಬರು ಹೇಗೆ ನೋಡುತ್ತಾರೆ ಎಂಬುದಕ್ಕೆ ಸಂಬಂಧಪಟ್ಟಿದೆ.
2. ಭಾರತದ ಬೌದ್ಧಿಕ ವಲಯ ಮತ್ತು ಇಲ್ಲಿನ ಜನತೆ ವಸಾಹತು ಪ್ರಜ್ಞೆಯ ಪ್ರಭಾವಕ್ಕೆ ಒಳಗಾಗಿದೆಯೇ?
ಆಗಿದ್ದರೆ ಅದರ ಸ್ವರೂಪವೇನು?
ಹೌದು, ಇಬ್ಬರೂ ವಸಾಹತು ಪ್ರಜ್ಞೆಯ ಪ್ರಭಾವಕ್ಕೆ ಒಳಗಾಗಿದ್ದಾರೆ. ಭಾರತದ ಸಂದರ್ಭದಲ್ಲಿ
ಅವರು ಹೇಗೆ ಮತ್ತು ಏಕೆ ವಸಾಹತು ಪ್ರಜ್ಞೆಯ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು
ವಸಾಹತು ಪ್ರಜ್ಞೆ ಎಂದರೇನು ಎಂಬುದರ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆಯಿದೆ. ಭಾರತದಲ್ಲಿ ವಸಾಹತು
ಪ್ರಜ್ಞೆಯು ಮುಂದಿನ ರೂಪವನ್ನು ಪಡೆದುಕೊಂಡಿದೆ: ನಮಗೆ ನಮ್ಮ ಸ್ವಂತ ಅನುಭವವನ್ನೇ ಸರಿಯಾಗಿ ಗ್ರಸಲು
ಅಸಾಧ್ಯವಾಗಿದೆ. ಅಂದರೆ, ಭಾರತೀಯರು ಪ್ರಪಂಚವನ್ನು ನೋಡಲು ಮತ್ತು ತಮ್ಮ ಸ್ವಂತ ಅನುಭವವನ್ನು ವಿವರಿಸಲು
ವಸಾಹತು ಪ್ರಭುಗಳ ಭಾಷೆಯನ್ನು ಮತ್ತು ಪರಿಕಲ್ಪನೆಗಳನ್ನು ಬಳಸಿಕೊಳ್ಳುತ್ತಾರೆ. ಭಾರತದ ಬಗ್ಗೆ ವಸಾಹತು
ಪ್ರಭುಗಳು ಸ್ಟಷ್ಟಿಸಿದ ಕಥೆಗಳು ವೈಜ್ಞಾನಿಕ ವರಣೆಗಳಾಗಿಲ್ಲದ್ದಿದ್ದರೂ ಸಹ ನಮ್ಮ ಬುದ್ಧಿಜೀಗಳು ಈ
ಕಥೆಗಳನ್ನೇ ವೈಜ್ಞಾನಿಕ ವಿವರಣೆಗಳೆಂದು ಪುನರ್ಪುತ್ಪಾದಿಸುತ್ತಿದ್ದಾರೆ. ಈ ಕಥೆಗಳು ಯೂರೋಪಿನವರು
ಭಾರತವನ್ನು ಹೇಗೆ ಗ್ರಸುತ್ತಾರೆ ಎಂಬುದನ್ನು ತಿಳಿಸುತ್ತವೆ. ನಾವು ಈ ಕಥೆಗಳನ್ನು ಭಾರತೀಯ ಸಮಾಜದ
ಕುರಿತ ವೈಜ್ಞಾನಿಕ ಸತ್ಯಗಳು(fact) ಎಂದು ಭಾಸಿದ್ದೇವೆ. ಅಂತಹ ಕೆಲವು ಸತ್ಯಗಳು ಈ ಮುಂದಿನಂತಿವೆ:
ಭಾರತದಲ್ಲಿ ಹಲವು ರಿಲಿಜನ್ನುಗಳಿವೆ; ಭಾರತದಲ್ಲಿ ಹಿಂದೂಯಿಂಸ ಇದೆ ಮತ್ತು ಇದು ಭಾರತದ ರಿಲಿಜನ್ನು;
ಈ ರಿಲಿಜನ್ನು ಭಾರತದ ಸಾಮಾಜಿಕ ರಚನೆಗೆ ಆಧಾರವಾಗಿದೆ; ಈ ಸಾಮಾಜಿಕ ರಚನೆಯು ಹಲವು ಶತಮಾನಗಳ ಕಾಲ
'ದಲಿತರ'ನ್ನು ಶೋಷಣೆ ಮಾಡಿ 'ಜಾತಿವ್ಯವಸ್ಥೆ' ಎಂದು ಕುಖ್ಯಾತಿಯನ್ನು ಪಡೆದಿದೆ; ಬುದ್ಧಿಸಂ ಐತಿಹಾಸಿಕವಾಗಿ
ಹಿಂದೂಯಿಸಂನ ವಿರುದ್ಧ ಹೋರಾಟ ಮಾಡಿದೆ; ಬ್ರಾಹ್ಮಣರು ಹಿಂದೂಯಿಸಂನ ಪ್ರೀಸ್ಟ್ಗಳು ಮತ್ತು ಇವರು ದಲಿತರನ್ನು
ಹಲವು ಶತಮಾನಗಳ ಕಾಲ ನಿಯಂತ್ರಿಸಿದ್ದಾರೆ; ಭಾರತೀಯರು 'ಅನೀತಿವಂತರು' ಮತ್ತು ಎಥಿಕ್ಸ್ ಇಲ್ಲದವರು,
ಏಕೆಂದರೆ ಅವರು ಭ್ರಷ್ಟರಾಗಿದ್ದಾರೆ; ಇತ್ಯಾದಿ. ಇಂದು, ನಮ್ಮ ಬೌದ್ಧಿಕ ಜಗತ್ತು ಈ ವಾದಗಳನ್ನು ಭಾರತೀಯ
ಸಮಾಜದ ಕುರಿತ ಸತ್ಯಗಳು (fact) ಎಂಬಂತೆ ಪಠಿಸುತ್ತಿದೆ.
3. ಹಾಗಿದ್ದರೆ ಪಾಶ್ಚಾತ್ಯ ಮೂಲದಿಂದ ಹುಟ್ಟಿದ ಮತ್ತು ವಸಾಹತು ನಿರೂಪಣೆಯನ್ನೇ ಆಧರಿಸಿ
ಭಾರತದಲ್ಲಿ ಬೆಳೆದು ಬಂದಿರುವ ಇತಿಹಾಸ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಮನಃಶಾಸ್ತ್ರ ಮುಂತಾದ ಸಮಾಜವಿಜ್ಞಾನಗಳು
ಕೂಡ ವಸಾಹತು ಪ್ರಜ್ಞೆಯ ಕೂಸುಗಳೇ ಆಗಿರಬಹುದಲ್ಲವೇ?
ಹೌದು, ಅದರಲ್ಲಿ ಯಾವುದೇ ಅನುಮಾನ ಬೇಡ. ನಮ್ಮ ಸಮಾಜಶಾಸ್ತ್ರಗಳು ಯೂರೋಪಿನವರು ತಮ್ಮ
(ಪಶ್ಚಿಮ) ಮತ್ತು ನಮ್ಮ (ಭಾರತ) ಬಗ್ಗೆ ಹೇಳಿದ್ದನ್ನೇ ವಿವೇಚನೆ ಇಲ್ಲದೆ ಪುನರ್ಪುತ್ಪಾದಿಸುತ್ತಿವೆ.
ಅಷ್ಟೂ ಸಾಲದೆಂಬಂತೆ, ಈ ಸಮಾಜಶಾಸ್ತ್ರಗಳು ಪಶ್ಚಿಮದವರು ಸ್ಟಷ್ಟಿಸಿದ ಕಥೆಗಳ ಸತ್ಯದ ಕುರಿತು ಸಾಕ್ಷ್ಯಾಧಾರಿತ
(empirical) ಪರಿಶೀಲನೆಯನ್ನು ಮಾಡುತ್ತಿವೆ ಎಂದು ನಂಬಿಕೊಂಡಿದ್ದೇವೆ.
4. ಮೇಲಿನ ವರಣೆಗಳು ನಿಜ ಎಂದಾದಲ್ಲಿ, ಭಾರತೀಯರು ಈಗಲೂ ವಸಾಹತುಶಾಹಿಯ 'ಬೌದ್ಧಿಕ
ದಾಸ್ಯ'ದಲ್ಲೇ ನರಳುತ್ತಿದ್ದಾರೆ ಎಂದಾಯಿತು.

5. ಭಾರತದಲ್ಲಿ ವಸಾಹತು ಪ್ರಜ್ಞೆಯ ಅಪಾಯಗಳೇನು? ಇದು ಉಂಟು ಮಾಡಬಹುದಾದ ದುಷ್ಪರಿಣಾಮಗಳ
ಸ್ವರೂಪ ಯಾವ ಬಗೆಯದು?
ಇಂದಿನ ನಮ್ಮ ಭಾರತವನ್ನು ನೋಡಿದರೆ ವಸಾಹತು ಪ್ರಜ್ಞೆಯ ಪರಿಣಾಮಗಳೇನು ಎಂಬುದು ತಿಳಿಯುತ್ತದೆ.
ಅಂದರೆ 'ಮೀಸಲಾತಿ'ಯನ್ನು ಕುರಿತ ಕಾನೂನುಗಳಿಂದ ಹಿಡಿದು ಸಮುದಾಯಗಳ (ಉದಾಹರಣೆಗೆ 'ದಲಿತರು' ಮತ್ತು
'ಮೇಲ್ಜಾತಿಗಳು') ನಡುವಿನ ದ್ವೇಷದವರೆಗೆ ನಮ್ಮ ಸಾಮಾಜಿಕ ಮತ್ತು ರಾಜಕೀಯ ನೀತಿಗಳು ವೈಜ್ಞಾನಿಕ ಸಂಶೋಧನೆಯ
ಮೇಲೆ ನಿಂತಿಲ್ಲ, ಬದಲಿಗೆ ಭಾರತದ ಕುರಿತ ಯೂರೋಪಿನವರ ಕಥೆಗಳನ್ನು ಆಧರಿಸಿವೆ. ಒಂದು ವೇಳೆ ಯೂರೋಪಿನವರ
ಕಥೆಗಳನ್ನೇ ನಾವು ಮುಂದುವರಿಸಿದರೆ, ಭವ್ಯ ಭಾರತದ ನಿರ್ಮಾಣದ ಎಲ್ಲಾ ಸಾಧ್ಯತೆಗಳನ್ನು ನಾಶ ಮಾಡುತ್ತೇವೆ.
ನಮ್ಮ ಸಾಂಸ್ಥಿಕ ರಚನೆಗಳು ನಿರ್ನಾಮವಾಗುತ್ತಿವೆ, ನಮ್ಮ ಶೈಕ್ಷಣಿಕ ವ್ಯವಸ್ಥೆಯು ಆಳವಾದ ಸಂಕಷ್ಟದಲ್ಲಿದೆ,
ನಮ್ಮ ರಾಜಕೀಯ ವ್ಯವಸ್ಥೆಯು ಅಧೋಗತಿಗೆ ಇಳಿಯುತ್ತಿದೆ, ಹೇಳುತ್ತಾ ಹೋದರೆ ಕೊನೆಯೇ ಇಲ್ಲ. ನಮ್ಮನ್ನು
ಆಳುವ ಗಣ್ಯರು ಮತ್ತು ಭಾರತೀಯ ಬುದ್ಧಿಜೀಗಳು ಯೂರೋಪಿನವರು ನಮಗೆ ಕಲಿಸಿದ್ದನ್ನೇ ಪಠಿಸುತ್ತಿರುವುದೇ
ಇದಕ್ಕೆ ಕಾರಣ.
6. ಹಾಗಿದ್ದರೆ ಈ ವಸಾಹತು ಪ್ರಜ್ಞೆಯಿಂದ ಬಿಡಿಸಿಕೊಳ್ಳುವ ಅಥವಾ ನಿರ್ವಸಾಹತೀಕರಣದ
ಪ್ರಕ್ರಿಯೆ ಹೇಗೆ? ಈ ಪ್ರಕ್ರಿಯೆಗೆ ನಿಮ್ಮ ಚಿಂತನೆ ಮತ್ತು ಸಂಶೋಧನಾ ಯೋಜನೆ ಹೇಗೆ ಅವಕಾಶ ಮಾಡಿಕೊಡುತ್ತದೆ?
ವಸಾಹತು ಪ್ರಜ್ಞೆಯಿಂದ ಹೊರಬರಲು ನಮಗಿರುವುದು ಒಂದೇ ಒಂದು ಮಾರ್ಗ. ಅದೇನೆಂದರೆ, ನಮ್ಮ
ಬೌದ್ಧಿಕ ಜಗತ್ತು ಹೇಳುತ್ತಿರುವ ಕಥೆಗಳ ಉಗಮ ಸ್ಥಾನವು ಪಾಶ್ಚಾತ್ಯ ಸಂಸ್ಕೃತಿಯೇ ಎಂಬುದನ್ನು ಮೊದಲು
ಅರ್ಥಮಾಡಿಕೊಳ್ಳುವುದು. ಪಾಶ್ಚಾತ್ಯ ಸಂಸ್ಕೃತಿಯು ವ್ಯಕ್ತಿ ಮತ್ತು ಸಮಾಜವನ್ನು ನೋಡುವುದೇ
ಕ್ರಿಶ್ಚಿಯಾನಿಟಿಯ ಕಣ್ಣಿನಿಂದ. ಅಲ್ಲದೇ ಆ ಚಾರಗಳೇ ಸಮಾಜ ವಿಜ್ಞಾನಗಳಲ್ಲಿ ತುಂಬಿಕೊಂಡಿವೆ.
ಹಾಗಾಗಿ ಕ್ರಿಶ್ಚಿಯನ್ ರಿಲಿಜನ್ನಿನ ತತ್ವಗಳಿಗೆ ಹೊರತಾದ ಸಮಾಜ ಜ್ಞಾನಗಳನ್ನು ಪುನರ್ರಚಿಸುವ
ತುರ್ತು ನಮ್ಮ ಮುಂದಿದೆ. ಸಮಾಜ ಜ್ಞಾನಗಳ ಸ್ವರೂಪದ ಕುರಿತು ಮೂಲಭೂತವಾಗಿ ಪುನರಾಲೋಚಿಸುವ ಮೂಲಕವೇ
ನಾವು ಇದನ್ನು ಆರಂಭಿಸಬೇಕಿದೆ.
ಈ ರೀತಿಯ ಕೆಲವು ಒಳನೋಟಗಳ ಮೂಲಕವೇ ನನ್ನ ಸಂಶೋಧನಾ ಕಾರ್ಯಕ್ರಮವು ಅಸ್ತಿತ್ವಕ್ಕೆ
ಬಂದಿದೆ. ನಮ್ಮ ಕಾಳಜಿಗಳ ಹಿನ್ನೆಲೆಯಲ್ಲಿ ಸಮಾಜ ವಿಜ್ಞಾನಗಳಿಗೆ ಪ್ರಸ್ತುತತೆಯನ್ನು ಒದಗಿಸುವುದಷ್ಟೇ
ಈ ಕಾರ್ಯಕ್ರಮದ ಉದ್ದೇಶವಲ್ಲ. ಈ ಸಂಶೋಧನಾ ಯೋಜನೆಯನ್ನು ನಾನೊಬ್ಬನೇ ಮಾಡಿ ಮುಗಿಸಲು ಸಾಧ್ಯವಿಲ್ಲ;
ಹಲವಾರು ಜನರಿಗೆ ವೈಜ್ಞಾನಿಕ ಸಂಶೋಧನೆಯಲ್ಲಿ ತರಬೇತಿ ನೀಡಬೇಕಾಗಿದೆ. ಹಾಗೆಯೇ ಅವೈಜ್ಞಾನಿಕವಾಗಿ ಚಿಂತಿಸುವ
ಮತ್ತು ಐಡಿಯಾಲಜಿಗಳಿಂದ ಪ್ರಭಾವಿತರಾದ ಬುದ್ಧಿಜೀಗಳಿಗೆ ಸಾಧ್ಯವಾದಲ್ಲೆಲ್ಲಾ ವೈಜ್ಞಾನಿಕವಾಗಿ ಆಲೋಚಿಸುವಂತೆ
ಸವಾಲು ಹಾಕುತ್ತಿದ್ದೇನೆ.
7. ಸ್ಮೃತಿ- ವಿಸ್ಮೃತಿ: ಭಾರತೀಯ ಸಂಸ್ಕೃತಿ, ಹುಡುಕಾಟವನ್ನು ನಿಲ್ಲಿಸದಿರೋಣ, ಪೂರ್ವಾವಲೋಕನ
ಇವು
ಕನ್ನಡದಲ್ಲಿ ಬಂದಿರುವ ನಿಮ್ಮ ಕೆಲವು ಕತಿಗಳು. ಇವುಗಳ ಮೂಲಕ ನೀವು ಯಾವ ವಿಚಾರಗಳನ್ನು ಮಂಡಿಸುತ್ತಿದ್ದೀರ?
ನನ್ನ ಪ್ರಕಟಿತ ಪುಸ್ತಕಗಳಲ್ಲಿ ವೈಜ್ಞಾನಿಕ ದ್ಟಷ್ಟಿಕೋನಕ್ಕೆ ಬುನಾದಿಯನ್ನು ಹಾಕಿದ್ದೇನೆ.
ಉದಾಹರಣೆಗೆ, ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಸ್ಥಳಿಯ ರಿಲಿಜನ್ಗಳಿಲ್ಲ ಎಂಬುದನ್ನು ನನ್ನ ಮೊದಲ
ಪುಸ್ತಕದಲ್ಲಿ ತೋರಿಸಿದ್ದೇನೆ. ಅಂದರೆ, ಭಾರತೀಯ ಸಂಸ್ಕೃತಿಯಲ್ಲಿ ಹಿಂದೂಯಿಸಂ, ಬುದ್ಧಿಸಂ, ಜೈನಿಸಂಗಳು
ಅಸ್ತಿತ್ವದಲ್ಲಿಲ್ಲ. ಜೊತೆಗೆ ಭಾರತದಲ್ಲಿ ಈ ರೀತಿಯ ರಿಲಿಜನ್ಗಳನ್ನು 'ಸ್ಟಷ್ಟಿಸುವ' ಒತ್ತಡಕ್ಕೆ
ಪಶ್ಚಿಮದ ಸಂಸ್ಕೃತಿ ಹೇಗೆ ಮತ್ತು ಏಕೆ ಒಳಗಾಯಿತು, ಹಾಗೂ ಈ ಒತ್ತಡವು ಹೇಗೆ ಕ್ರಿಶ್ಚಿಯನ್ ರಿಲಿಜನ್ನಿನ
ಸ್ವರೂಪದಲ್ಲಿಯೇ ಇದೆ ಎಂಬುದನ್ನು ತೋರಿಸಿದ್ದೇನೆ. ನಾನು ರಿಲಿನ್ನಿನ ಕುರಿತು ಒಂದು ಊಹಾಸಿದ್ಧಾಂತ
(ಹೈಪೋಥೀಸಿಸ್)ವನ್ನು ಬೆಳೆಸಿದ್ದೇನೆ. ಅದು ಪಾಶ್ಚಾತ್ಯ ಸಂಸ್ಕೃತಿಯು ಹೇಗೆ ಮತ್ತು ಯಾವ ರೀತಿಯಲ್ಲಿ
ಕ್ರಿಶ್ಚಿಯನ್ ರಿಲಿಜನ್ನಿನ ಕೂಸು ಹಾಗೂ ಕ್ರಿಶ್ಚಿಯನ್ ವಿಚಾರಗಳು ಹೇಗೆ ಆಧುನಿಕ ಸಮಾಜ ವಿಜ್ಞಾನಗಳ
ಬುನಾದಿಗಳಾಗಿವೆ ಎಂಬುದನ್ನು ವಿವರಿಸುತ್ತದೆ.
ನನ್ನ ಎರಡನೆಯ ಪುಸ್ತಕದಲ್ಲಿ, 'ಸೆಕ್ಯುಲರಿಸಂ ಸಮಸ್ಯೆ'ಯನ್ನು ಒಳಗೊಂಡಂತೆ ನನ್ನ ಸಂಶೋಧನಾ
ಯೋಜನೆಯ ಹಲವಾರು ಪರಿಣಾಮಗಳನ್ನು ಚರ್ಚಿಸಿದ್ದೇನೆ. ಸೆಕ್ಯುಲರಿಸ್ಟ್ ಚಿಂತಕರು ರಿಲಿಜನ್ನಿನ ಹಿಂಸೆಗಳಿಗೆ
ಸೆಕ್ಯುಲರಿಸಂ ಒಂದು ಪರಿಹಾರವೆಂದು ನಂಬಿದ್ದಾರೆ, ಆದರೆ ನಾನು ಭಾರತದಲ್ಲಿ ರಿಲಿಜನ್ನಿನ ಹಿಂಸೆಯು
ಹುಟ್ಟುತ್ತಿರುವುದೇ ಸೆಕ್ಯುಲರಿಸಂ ತತ್ವದಿಂದಾಗಿ ಎಂದು ತೋರಿಸಿದ್ದೇನೆ.
8. ಅ)ಭಾರತೀಯರಾದ ನಾವು ದಿನನಿತ್ಯ ಒಂದಿಲ್ಲೊಂದು ರ್ಧಾರ್ಮಿಕ ಆಚರಣೆಗಳನ್ನು ಮಾಡುತ್ತಲೇ
ಇರುತ್ತೇವೆ. ಇದನ್ನು ನೋಡಿದರೆ ನಮ್ಮ ಇಡೀ ಬದುಕೇ ಆಚರಣೆ, ನಂಬಿಕೆಗಳ ಬುನಾದಿ ಮೇಲೆ ನಿಂತಿದೆ ಎನಿಸುತ್ತದೆ.
ಅಂತಹುದರಲ್ಲಿ ಹಿಂದೂ ಎನ್ನುವುದು ಒಂದು 'ಧರ್ಮ'ವೇ ಅಲ್ಲ ಎನ್ನುವುದು ಸರಿಯೇ?
ಬ) ನಮ್ಮ ಕಣ್ಣೆದುರೇ ದಲಿತರ ಮೇಲೆ ಮೇಲ್ಜಾತಿಗಳು ದೌರ್ಜನ್ಯ ನಡೆಸುತ್ತಿವೆ. ಜಾತಿ
ಕಚ್ಚಾಟಗಳು ಪ್ರತಿದಿನ ನಡೆಯುತ್ತಲೇ ಇವೆ. ಅಸ್ಪೃಶ್ಯತೆ ಜೀವಂತವಾಗಿದೆ. ಹೀಗಿದ್ದೂ ಭಾರತದಲ್ಲಿ ಜಾತಿ
ವ್ಯವಸ್ಥೆಯೇ ಇಲ್ಲ ಎನ್ನುತ್ತೀರಾ. ಇದನ್ನು ಹೇಗೆ ವಿವರಿಸುತ್ತೀರಾ?
ಮೊದಲನೆಯದಾಗಿ, 'ರಿಲಿಜನ್' ಅನ್ನು 'ಧರ್ಮ' ಎಂದು ಅನುವಾದಿಸುವುದು ಸಂಪೂರ್ಣ ತಪ್ಪು
ಎಂದು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಎರಡನೆಯದಾಗಿ, ನಮಗೆ ರಿಲಿಜನ್ ಮತ್ತು 'caste
system' ಕುರಿತಂತೆ ಒಂದು ಸಿದ್ಧಾಂತ ಅಥವಾ ಹೈಪೋಥೀಸಿಸ್ನ ಅವಶ್ಯಕತೆ ಇದೆ. ಭಾರತದಲ್ಲಿ ಅವುಗಳ ಅಸ್ತಿತ್ವವನ್ನು
ಚರ್ಚಿಸಲು ಕೇವಲ ಒಂದು ವ್ಯಾಖ್ಯಾನ ಅಥವಾ ಇನ್ನೇನೋ ಸಾಕಾಗುವುದಿಲ್ಲ. ಈ ಎರಡು ಅಂಶಗಳನ್ನು ನಾವು ಅರ್ಥಮಾಡಿಕೊಳ್ಳದಿದ್ದರೆ,
ಅವುಗಳ ಕುರಿತು ಯಾವುದೇ ಸ್ಪಷ್ಟತೆಯನ್ನು ಹೊಂದದೇ ಕೊನೆರಹಿತ ಚರ್ಚೆಯಲ್ಲಿ ಕಾಲ ಕಳೆಯಬೇಕಾಗುತ್ತದೆ.
(ಅ) ಮೊದಲನೆಯ ಅಂಶಕ್ಕೆ ಸಂಬಂಧಿಸಿದಂತೆ, ದೇವಸ್ಥಾನಗಳಿಗೆ ತೆರಳುವುದು, ಮನೆಯಲ್ಲಿ
ಅಥವಾ ಇತರೆಡೆ ಪೂಜಾ ಕಾರ್ಯದಲ್ಲಿ ತೊಡಗುವುದನ್ನು ತೋರಿಸಿ ಹಿಂದೂಯಿಸಂಅಸ್ತಿತ್ವದಲ್ಲಿದೆ ಎಂಬುದನ್ನಾಗಲೀ,
ಅದೊಂದು ರಿಲಿಜನ್ ಎಂಬುದನ್ನಾಗಲೀ ತೋರಿಸಲು ಸಾಧ್ಯವಿಲ್ಲ.
(ಬ)ಎರಡನೆಯ ಅಂಶಕ್ಕೆ ಸಂಬಂಧಿಸಿದಂತೆ, ನಾವು ಏನನ್ನು ನೋಡುತ್ತೇವೋ ಅದರ ಕುರಿತು ನಾವು
ತುಂಬಾ ಸ್ಪಷ್ಟವಾಗಿರಬೇಕು. ಅಂದರೆ, ಕೆಲವು ನಿರ್ದಿಷ್ಟ 'ಜಾತಿ'ಗಳು ಬೇರೆ ಕೆಲವು ನಿರ್ದಿಷ್ಟ ಜಾತಿಗಳಿಂದ
ಶೋಷಣೆಗಳಿಗೆ ಒಳಗಾಗುವುದನ್ನು ನಾವು ನೋಡುತ್ತೇವೆ. ಹಾಗೆಂದ ಮಾತ್ರಕ್ಕೆ 'ಜಾತಿ ವ್ಯವಸ್ಥೆ' ಇದೆ ಎಂದು
ತೀರ್ಮಾನಿಸಲು ಸಾಧ್ಯವಿಲ್ಲ. ಅದರಿಂದ ಭಾರತದಲ್ಲಿ ಅನ್ಯಾಯವಿದೆ ಹಾಗೂ ಹಲವಾರು ಜಾತಿ ಗುಂಪುಗಳ ನಡುವೆ
ವೈಷಮ್ಯದೆ ಎಂದು ಹೇಳಲಿಕ್ಕಷ್ಟೇ ಸಾಧ್ಯ. ಆದಾಗ್ಯೂ, ಇದು ಏನನ್ನು ಸೂಚಿಸುತ್ತದೆ? ಈ ವಿದ್ಯಮಾನಗಳ
ಕುರಿತಂತೆ ಈಗಾಗಲೇ ತಿಳಿಸಿದಂತೆ ಸೂರ್ಯ ಮತ್ತು ಭೂಮಿಯ ಉಪಮೆಯನ್ನು ನೀಡಿ ವಿವರಿಸಬಹುದು: ನಾವು ಆಕಾಶದಲ್ಲಿ
ಸೂರ್ಯನ ಚಲನೆಯನ್ನು 'ನೋಡುತ್ತೇವೆ' ಮತ್ತು ಆ ಮೂಲಕ ಹಗಲು ಮತ್ತು ರಾತ್ರಿಗಳನ್ನು ಅನುಭವಿಸುತ್ತೇವೆ.
ಹಾಗೆಂದ ಮಾತ್ರಕ್ಕೆ ಸೂರ್ಯ ಭೂಮಿಯ ಸುತ್ತ ಸುತ್ತುತ್ತಾನೆಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಕೆಲವರು
ದೇವಸ್ಥಾನಗಳಿಗೆ ಹೋಗುತ್ತಾರೆ; ಕೆಲವರು ಪೂಜೆಯನ್ನು ಮಾಡುತ್ತಾರೆ; ಕೆಲವು ಜಾತಿಗಳು ಶೋಷಣೆಗೊಳಗಾಗಿವೆ
ಮತ್ತು ಕೆಲವು ಜಾತಿಗಳು ಪರಸ್ಪರ ಕಚ್ಚಾಡಿಕೊಳ್ಳುತ್ತವೆ ಎಂದು ನಾವು ಏನನ್ನು ನೋಡುತ್ತೇವೋ ಅಷ್ಟನ್ನು
ಮಾತ್ರ ಹೇಳಬಹುದಷ್ಟೆ. ನಾವು ಭಾರತದಲ್ಲಿ ರಿಲಿಜನ್ ಅಥವಾ caste system ಅಸ್ತಿತ್ವದಲ್ಲಿದೆ ಎಂದು
ಸಾಧಿಸಿ ತೋರಿಸಬೇಕೆಂದರೆ, ಈ 'ನಿಜಾಂಶ'ಗಳಿಗಿಂತ ಹೆಚ್ಚಿನದೇ ಬೇಕಾಗುತ್ತದೆ.
9. ನಿಮ್ಮ 'ಪೂರ್ವಾವಲೋಕನ' ಪುಸ್ತಕದಲ್ಲಿ 'ಪ್ರತ್ಯಭಿಜ್ಞಾನ' ಎಂಬ ಪರಿಕಲ್ಪನೆಯನ್ನು
ಬಳಸುತ್ತೀರ. ನಮ್ಮ ಮುಂದಿನ ಪೀಳಿಗೆಗೆ ಅದರ ಅಗತ್ಯ ಹೆಚ್ಚಿದೆ ಎನ್ನುತೀರ. ಅದನ್ನು ವಿವರಿಸುರಾ?
ತುಂಬಾ ಸರಳವಾಗಿ ಹೇಳುವುದಾದರೆ, ಇದು ಭವಿಷ್ಯವನ್ನು ಸೂಚಿಸುತ್ತದೆ. ಭಾರತದ ಪುನರುಜ್ಜೀವನವು
ಮುಂದಿನ ದಶಕಗಳಲ್ಲಿ ನಡೆಯುತ್ತದೆ ಎಂಬುದರಲ್ಲಿ ನನಗೆ ನಂಬಿಕೆ ಇದೆ. ಅಂತಹ ಘಟನೆಯು ಕೇವಲ ಭಾರತದಲ್ಲಷ್ಟೇ
ಅಲ್ಲ ಇಡೀ ಪ್ರಪಂಚದಾದ್ಯಂತ ಭಾರೀ ಪ್ರಮಾಣದಲ್ಲಿ ಪ್ರಭಾವ ಬೀರಲಿದೆ. ಇಂತಹ ಘಟನೆಯು ಜರುಗಲು ಇರಲೇಬೇಕಾದ
ಪೂರ್ವನಿಬಂಧನೆ ಎಂದರೆ ನಾವು ವಸಾಹತು ಪ್ರಜ್ಞೆಯಿಂದ ಹೊರಬರುವುದು. ಇಂತಹ ಸೃಜನಶೀಲ ಸ್ಪೋಟವು ಪ್ರಾರಂಭಿಕ
ಹಂತದಲ್ಲಿ ಈ ಮುಂದಿನ ಸಂಗತಿಗಳನ್ನು ಮರುಶೋಧ ಮಾಡುವ ನಿಟ್ಟಿನಲ್ಲಿ ಮುಂದೆ ಸಾಗುತ್ತದೆ: ನಾವು ಯಾರು,
ನಮ್ಮ ಸಂಸ್ಕೃತಿಯಿಂದ ನಾವೇನು ಕಲಿಯಬಹುದು ಹಾಗೂ ನಮ್ಮ ಅನುಭವವನ್ನು ಮರಳಿ ಪಡೆಯುವುದು ಹೇಗೆ. ಪ್ರತ್ಯಭಿಜ್ಞಾನ
ಎಂಬ ಪದವು ಈ ಅರ್ಥದಲ್ಲಿ ನಾವು ಕಲಿತು ಮರೆತಿರುವ ಸಂಗತಿಯನ್ನು ಪುನರ್ ಕಲಿಯುವ ಪ್ರಕ್ರಿಯೆಯನ್ನು
ಸೂಚಿಸುತ್ತದೆ.
10. ಮುಂದಿನ ದಿನಗಳಲ್ಲಿ ನಿಮ್ಮ ಚಿಂತನೆ ಅಥವಾ ಸಂಶೋಧನಾ ಯೋಜನೆಯ ಸ್ವರೂಪ ಏನು?
ಈ ಪ್ರಶ್ನೆಗೆ ನಾನು ಸರಿಯಾಗಿ ಉತ್ತರಿಸಲು ಸಾಧ್ಯಲ್ಲ ಎನಿಸುತ್ತದೆ. ಭವಿಷ್ಯವು ಏನನ್ನು
ತರಬಲ್ಲದು ಎಂಬುದು ನನಗೆ ತಿಳಿದಿಲ್ಲ. ಏನೇ ಆದರೂ, ನನಗೆ ಇಷ್ಟಂತೂ ತಿಳಿದಿದೆ: ಭಾರತದಲ್ಲಿ ತುಂಬಾ
ಉತ್ಕೃಷ್ಟವಾದ ಮತ್ತು ಆಳವಾದ ಕೆಲಸ ನಡೆಯುತ್ತದೆ. ಮುಂದಿನ ಕೆಲವು ದಶಕಗಳಲ್ಲಿ ಈ ಪ್ರಕ್ರಿಯೆಯು ಸೃಜನಶೀಲ
ಸ್ಫೋಟವಾಗಿ ಹೊರಮುಖವಾಗಿ ಹಬ್ಬಲಿದೆ ಎಂಬುದು ನನ್ನ ನಂಬಿಕೆ. ಸದ್ಯಕ್ಕೆ, ಈ ಸಾಂಸ್ಕೃತಿಕ ಆಂದೋಲನಕ್ಕೆ
(cultural movement of people) ಹಲವು ವ್ಯಕ್ತಿಗಳು ಧ್ವನಿಯನ್ನು ನೀಡುತ್ತಿದ್ದಾರೆ. ನನ್ನ ಸಂಶೋಧನಾ
ಕಾರ್ಯಕ್ರಮ ಅಂತಹ ಒಂದು ಧ್ವನಿ ಎಂಬುದು ನನ್ನ ನಂಬಿಕೆ. ಪರಿಸ್ಥಿತಿಯನ್ನು ನಾನು ಗಮನಿಸುತ್ತಿರುವಂತೆ,
ಈ ಚಳುವಳಿಯು ವಿಷಯ-ಆಧಾರಿತವಾದುದಲ್ಲ (ಭಾರತೀಯ ಸ್ವತಂತ್ರ ಹೋರಾಟ ಅಥವಾ ಅಣ್ಣಾ ಹಜಾರೆಯವರ ಚಳುವಳಿಗಳಂತೆ).
ಆದರೆ ಇದು ಅನುಭವ ಮಂಟಪ ಅಥವಾ ಪಶ್ಚಿಮದ ವೈಜ್ಞಾನಿಕ ಕ್ರಾಂತಿಗೆ ಅನುರೂಪವಾದುದು. ಈ ಚಳುವಳಿಗೆ ವೈವಿಧ್ಯಮಯ
ಧ್ವನಿಗಳು ಹಾಗೂ ಮುಖಗಳು ಇವೆ. ನನ್ನ ಸಂಶೋಧನಾ ಕಾರ್ಯಕ್ರಮವು ಭಾರತದಲ್ಲಿ ಈ ಸಾಂಸ್ಕೃತಿಕ ಪುನರುಜ್ಜೀವನ್ನು
ಚುರುಕುಗೊಳಿಸುವ ಆಶಯವನ್ನು ಹೊಂದಿದೆ.
ಭಾರತದಲ್ಲಿ ಜಾತಿಗಳಿವೆ, ಜಾತಿವ್ಯವಸ್ಥೆ ಇಲ್ಲ: ಪ್ರೊ ಎಸ್. ಎನ್. ಬಾಲಗಂಗಾಧರ ಅವರ ಸಂದರ್ಶನ