03 May 2013

* ಡಾ. ಕಿರಣ್ ಗಾಜನೂರು


ದೇವನೂರರ ಕುರಿತು ಅಪಾರ ಗೌರವ ಇಟ್ಟುಕೊಂಡೆ ಈ ಮಾತು ಹೇಳುತ್ತಿದ್ದೇನೆ ಅವರ ಲೇಖನದಲ್ಲಿ ಲಾಜಿಕ್ಕೆ ಇಲ್ಲ ಇನ್ನು ತಪ್ಪುಗಳನ್ನು ಹೇಗೆ ಗುರುತಿಸುವುದು ಈಗ ಒಬ್ಬರೂ ಒಂದು ಸಂಶೋಧನೆಯ ಮೂಲಕ ನಿಮಗೆ ಒಂದು ಪ್ರಶ್ನೆ/ವಾದ ಕೇಳುತ್ತಾರೆ ಎಂದು ಇಟ್ಟುಕೊಳ್ಳಿ ಅದಕ್ಕೆ ನೀವು ಬೌದ್ಧಿಕವಾಗಿ ಅಂಧರೆ ಆ ವ್ಯಕ್ತಿ ಯಾವ ಸಂಶೋಧಾನ ವಿಧಾನ ಬಳಸಿ ಯಾವ ಮಾಹಿತಿಯ ಆಧಾರದ ಮೇಲೆ ತನ್ನ ವಾದ ಮಂಡಿಸುತ್ತಿದ್ದಾನೆ ಅದರಲ್ಲಿರುವ ದೂಷಗಳೇನು ಅವನು ಬಳಸಿದ ವಿಧಾನ ಮತ್ತು ಪಡೆದ ಮಾಹಿತಿ ಹೇಗೆ ಆ ವಸ್ಥುವಿನ ಸರಿಯಾಗಿ ವಿವರಿಸುವಲ್ಲಿ ಎಡವಿದೆ ಎಂಬುದನ್ನು ಲಾಜಿಕಲಿ ಸಾಧಿಸಬೇಕಾಗುತ್ತದೆ. ಆದರೆ ದೆವನೂರರ ಬರಹದಲ್ಲಿ ಈ ಅಂಶವೇ ಇಲ್ಲ ಅವರೂ ಇದುವರೆಗೂ ನಂಬಿಕೊಂಡು ಬಂದ ಐಡಿಯಾಲಜಿಯನ್ನು ವಿವರಿಸಿದ್ದಾರೆ ಅಷ್ಟೆ ಈ ರೀತಿಯಾದರೆ ಯಾರೂ ಬೇಕಾದರೂ ಮಾತನಾಡಬಹುದು ಆದರೆ ಅದರಿಂದ ಎನೂ ಪ್ರಯೋಜನ? ಅದೂ ಅಲ್ಲದೆ ದೆವನೂರು ಮತ್ತು ಅವರ ಹಿಂಬಾಲಕರು ನಂಬಿದ ವಿಷಯಗಳೇ ಅಂತಿಮ ಅವರ ವಿವರಣೆಗೆ ವಿರುಧ್ಧದ ಸಂಶೋಧನೆ ಯಾರೂ ಮಾಡಬಾರದು ಮಾಡಿದರೆ ಅವರ ಮೇಲೆ ಕಣ್ಣಿಡಿ ವಿಚಾರಣೇ ಮಾಡಿ ಎಂಬಿತ್ಯಾದಿ ಮಾತನಾಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವ ವಿಷಯವು ಅಲ್ಲ ಒಂದೂ ಕಾಲದಲ್ಲಿ ಆರ್.ಎಸ್.ಎಸ್ ನವರನ್ನು ಯಾವ ಯಾವ ಕಾರಣಕ್ಕೆ ಇವರುಗಳು ವಿರೋಧಿಸಿದ್ದರೂ ಇವತ್ತು ಅವೇ ಲಕ್ಷಣಗಳನ್ನು ಇವರು ಅವಾಹಿಸಿಕೊಂಡು ಮಾತನಾಡುತ್ತಿದ್ದಾರೆ ಇತರರ ಸಂಶೋಧನೆ ಟೀಕಿಸುತ್ತಿದ್ದರೆ. ಅಂದರೆ ಯಾರೂ ಸಂಶೋಧನೆಯನ್ನೆ ಮಾಡಬಾರದು ಮಾಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದೂ ಎಚ್ಚರಿಸುತ್ತಿದ್ದಾರೆ ಇನ್ನು ಮುಂದೆ ಹೋಗಿ ಜಿನ್ನಾ ನೀಡಿದಂತೆ ಡೈರೆಕ್ಟ್ ಆಕ್ಷನ್ ಗೆ ಕರೆನೀಡುತ್ತಿದ್ದಾರೆ ನನಗೆ ಆಶ್ಚರ್ಯವಾಗುವುದೇ ಇದಕ್ಕೆ ಯಾರೂ ಎನೇ ಸಂಶೋಧನೆ ಮಾಡಲಿ ನಾವು ಅವರೂ ಎತ್ತುವ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ ಆ ಮಟ್ಟದ ಸೈಂಧಾಂತಿಕ ಪಕ್ವತೆ ನಾವು ನಂಬಿದ ಸಿಂಧಾಂತಕ್ಕೆ ಇದೆ ಎಂದು ಆತ್ಮವಿಶ್ವಾಸದಿಂದ ನುಡಿಯುಬೇಕಾದ ಈ ಚಿಂತಕರೂ ಹೀಗೆ ವರ್ತಿಸುತ್ತಿರುವುದು ನಮ್ಮ ಸಂಶೋಧನಾ ಮಾದರಿಯ ವೈಪಲ್ಯ ತೋರಿಸುತ್ತದೆ”  ಪೇಸ್ ಬುಕ್ ನಲ್ಲಿ ನಾನೂ ಪ್ರಕಟಿಸಿದ ಈ ಬರಹಕ್ಕೆ ಹಲವರು ಅನೇಕ ರೀತಿಯ ಪ್ರಶ್ನೆಗಳನ್ನು/ಟೀಕೆಗಳನ್ನು ಮಾಡಿದ್ದಾರೆ ಅವೆಲ್ಲವುಗಳನ್ನು ಒಂದೂ ಚರ್ಚೆಯ ಮಾದರಿಯಲ್ಲಿ ಕೆಳಗೆ ಬರೆದಿದ್ದೇನೆ ನೋಡಿ. . . .
ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಮತ್ತು ನಡೆದಿರುವ ಶೋಷಣೆಗಳ ಕುರಿತು ಅವುಗಳ ನಿವಾರಣೆಯಗಳ ಕುರಿತು ಇಲ್ಲಿರುವ ಎಲ್ಲರ ಪ್ರಯತ್ನ ಮತ್ತು ಭಾವನೆ ಎಲ್ಲವೂ ತುಂಬಾ ಗೌರವಿಸುವ ವಿಚಾರಗಳೆ ಅಂದರೆ ನಮ್ಮೇಲ್ಲರ ಹಾನೆಸ್ಟ್ ಗುರಿ ಒಂದೇ ಅದು ನಮ್ಮ ಸಮಕಾಲಿನ ಸಮಾಜದ ಶೋಷಣೆಗಳನ್ನು ಹೊಗಲಾಡಿಸಬೇಕು.

ಆದರೆ, ನಮ್ಮ ದಾರಿ ಬೇರೆ ಬೇರೆ ಉದಾಹರಣೆಗೆ ಆಧುನಿಕ ಭಾರತದ ಜಾತಿ ಶೋಷಣೆಗಳನ್ನು ಹೋಗಲಾಡಿಸಲು ರಾಜರಾಮರ ಕಾಲದಿಂದಲೂ ಪ್ರಯತ್ನಗಳು ನಡೆಯುತ್ತಿವೆ ಅವರು ಒಂದು ದಾರಿ ಬಳಸಿದರೆ ಗಾಂಧಿ ಒಂದು ಮಾರ್ಗ ಅನುಸರಿಸಿದ್ದಾರೆ ಅಂಬೇಡ್ಕರ‍್ ಮತ್ತೊಂದು ದಾರಿ ಅನುಸರಿಸಿದ್ದಾರೆ ಇವೆನ್ ಸೊ ಕಾಲ್ಡ್ ಬಲಪಂಥಿಯರೂ ಅವರದೇ ಅದ ದಾರಿಯನ್ನು ಅನುಸರಿಸಿದ್ದಾರೆ ಅದರೆ ಪಲಿತಾಂಶ ಮಾತ್ರ ಅಂದುಕೊಂಡಷ್ಟು ದೊರಕಿಲ್ಲ ಇಂದಿಗೂ ಶೋಷಣೆಗಳು ಅವಮಾನಗಳು ನಡೆಯುತ್ತಲೇ ಇವೆ ಇವತ್ತು ಆ ಶೋ಼ಣೆಗಳನ್ನು ಅರ್ಥ ಮಾಡಿಕೊಳ್ಳಕು ಬಾಲು ಹೊಸ ಒಂದೂ ಮಾರ್ಗ ತೋರುತ್ತಿದ್ದಾರೆ ಅಷ್ಟೆ ಅದರೆ ನಮ್ಮಲ್ಲಿ ಬಹಳ ಜನರಿಗೆ ಬಾಲು ಅವರು ಶೋಷಣೆಯನ್ನು ಅರ್ಥಮಾಡಿಕೊಳ್ಳಲು ಎಲ್ಲರಂತೆ ಒಂದೂ ಮಾರ್ಗವನ್ನು ತೋರಿಸುತ್ತಿದ್ದಾರೆ ಎಂದೂ ತಿಳಿಯುತ್ತಿಲ್ಲ ಬದಲಾಗಿ ಬಾಲು ಶೋಷಣೇಗಳೇ ಇಲ್ಲ ಎನ್ನುತ್ತಿದ್ದಾರೆ ಎಂದೂ ಅರ್ಥಮಾಡಿಕೊಂಡಿದ್ದಾರೆ (ಅದೂ ಸತ್ಯವಾಗಿದ್ದರೆ ನಾನೇ ಅವರನ್ನು ಒಪ್ಪುವುದಿಲ್ಲ) ಇದು ಸಮಸ್ಯೆಯ ಮೂಲ ಒಂದೂ ವೇಳೆ ಬಾಲು ತೋರಿಸುತ್ತಿರುವ ಮಾರ್ಗವೂ ಶೋಷಣೆಯನ್ನು ಅರ್ಥಮಾಡಿಸಲೂ ವಿಪಲವಾದರೆ ಮತ್ತೂಬ್ಬರು ಮತ್ತೂಂದು ದಾರಿ ತೋರಿಸುತ್ತಾರೆ ಅದರೆ ಅದಕ್ಕಿಂತ ಮುಂಚೆ ಬಾಲು ತೋರಿರುವ ದಾರಿಯ ಸಮಸ್ಯಗಳೇನು ಅದು ಹೇಗೆ ಸಮಾಜದ ಶೋಷನೆಗಳನ್ನು ಅರ್ಥಮಾಡಿಕೊಳ್ಳಲು ತೆಡೆಯಾಗಿದೆ ಎಂಧೂ ಯಾರದರೂ ತೋರಿಸಬೇಕಿದೆ ಆದರೆ ಇದುವರೆಗಿನ ನಮ್ಮ ವಿದ್ವತ್ ವಲಯದ ಚರ್ಚೆ ನಿಜ ಅರ್ಥದಲ್ಲಿ ಬಾಲುರ ಸೈದ್ದಾಂತಿಕ ಮಟ್ಟದ ಸಂಶೋಧನೆಯ ಕುರಿತು ಯಾವುದೆ ಆಸಕ್ತಿದಾಯಕ ಮತ್ತು ಅಗತ್ಯ ಪ್ರಶ್ನೆಯನ್ನೆ ಎತ್ತದೆ ತಾನೇ ತಾನಾಗಿ ಡಂಕಿನ್ ಮತ್ತು ಬಾಲು ಅವರಿಗೆ ವಿಜಯವನ್ನು ಒದಗಿಸಿದೆ. ಅದ್ದರಿಂದ ಸಮಾಜಿಕ ಸಮಸ್ಯಗಳ ಕುರಿತು ಸಮಾನ ಆಸಕ್ತಿ ಹೊಂದಿರುವ ನಾವು ಬಾಲು ಅವರನ್ನು ಒದಿ ಅಥವಾ ಮಾತನಾಡಿ ಅವರ ತಪ್ಪಿದ್ದರೆ ಇದೂ ನಿಮ್ಮ ಸಮಸ್ಯ ಎಂದೂ ತೋರಿಸಬೇಕಿದೆ.
ಈ ನೆಲೆಯಲ್ಲಿ ಬಷೀರ‍್, ದಿನೇಶ್,ದಯಾನಂದ,ಸಾಹಿಲ್, ಅಕ್ಷತಾ, ಹುಲಿಕುಂಟೆ ಮೂರ್ತಿ, ಅರುಣ್ ಜೋಳದ (ಇವರೆಲ್ಲರೂ ಸಮಾಜಿಕ ತಾಣಗಳಲ್ಲಿ ಬಾಲು ಬರವಣಿಗೆಗೆಳ ಕುರಿತು ಚರ್ಚಿಸುತ್ತಿದ್ದಾರೆ) ಇತರೆ ಸಮಾನ ಮನಸ್ಸಿನ ಎಲ್ಲರೂ ಒಮ್ಮೆ ಸಿ.ಎಸ್.ಎಲ್.ಸಿ ಗೆ ಭೇಟಿಕೊಟ್ಟು (ನಾನೂ ಇರುತ್ತೇನೆ) ನಾವು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತದ್ದೇವೆ, ನಿಮ್ಮ ವಾದಗಳು ನಮ್ಮಲ್ಲಿ ಕೆಲವೂ ಗೊಂದಲಗಳನ್ನು ಹುಟ್ಟಿಹಾಕಿವೆ, ಸೋ.. ನಿಮ್ಮ ಸಂಶೋಧನೆ ಏನೂ? ಹೇಗೆ ಮಾಡುತ್ತಿದ್ದಿರ? ಇದರ ಉದ್ದೇಶ ಏನೂ? ಒಬ್ಬ ಪ್ರಜ್ಞಾವಂತನಾಗಿ ನನಗೆ ತಿಳಿಯುವ ಹಕ್ಕಿದೆ ವಿವರಿಸಿ. ಎಂದೂ ಅವರೂಡನೆಯೆ ನೆರವಾಗಿ ಚರ್ಚಿಸಿ, ಅ ನಂತರ ಅವರ ವಾದಗಳನ್ನು ವಿಮರ್ಶಿಸಿದರೆ ಖಂಡಿತ ಕರ್ನಾಟಕದ ಮಟ್ಟಿಗಿನ ಪ್ರಮುಖ ಚರ್ಚೆಗೆ ನಾವೂ ಮುಖಾಮುಖಿಯಾದಂತೆ ಆಗುತ್ತದೆ. ಮತ್ತು ಇತರರಿಗೆ ನಾವು ಒಂದೂ ಒಳ್ಳೆ ಮಾದರಿಯನ್ನು ಹಾಕಿಕೊಟ್ಟಂತೆ ಆಗುತ್ತದೆ.ಇಲ್ಲವಾದರೆ,ಮೇಲೆ ತಿಳಿಸಿದ ನಾವುಗಳೇ ೨ದಿನ ಎಲ್ಲರೂ ಒಟ್ಟಿಗೆ ಎಲ್ಲಾದರೂ ಕುಳಿತು ಬಾಲುವಿನ ವಾದಗಳನ್ನು ಓದಿ ಚರ್ಚಿಸಿ ಮುಖ್ಯವಾದ ಪ್ರಶ್ನಗಳನ್ನು ಪಟ್ಟಿಮಾಡಿ ಒಂದು ಲೇಖನ ಮಾಡಿ ಪ್ರಕಟಿಸಿದರೆ ಅದೂ ಇನ್ನೂ ಉತ್ತಮ ಪ್ರಯತ್ನವಾಗುತ್ತದೆ? ಈ ನಿಟ್ಟಿನಲ್ಲಿ ನಾವೂ ಯೋಚಿಸಬೇಕಿದೆ ಇದ್ಯಾವುದನ್ನು ಮಾಡದ ನಾವು, ಕೇವಲ ನಮಗೆ ದೂರೆತ ಸೆಕೆಂಡರಿ ಸೋರ್ಸ್‌ಗಳ ಆಧಾರದ ಮೇಲೆ ಒಬ್ಬ ವ್ಯಕ್ತಿಯ ೪೫ ವರ್ಷದ ಸಂಶೋಧನೆಯನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ. . . ಮತ್ತು ನಮ್ಮಗಳ ಮೂಲ ಉದ್ದೇಶಗಳೂ ( ಸಮಾಜದ ಶೋಷಣೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಹರಿಸಲು ) ಈಡೇರುವುದಿಲ್ಲ. ಸೋ, ನಾವೂ ಬದಲಾಗಬೇಕಿದೆ. ಪ್ರಶ್ನೆ ಮಾಡುವ ನಮ್ಮ ಮಾದರಿಗಳೂ ಬದಲಾಗಬೇಕಿದೆ.
ಗೆಳೆಯರೆ,ಈ ನೆಲೆಯಲ್ಲಿ ಮಾತನಾಡಿದ್ದಕ್ಕೆ ಮೇಲೆ ತೀಳಿಸಿದ ಲೇಖಕರು ದೇವನೂರರು ಸಂತನ ಹಾಗೆಯೇ ಬದುಕಿದ್ದಾರೆ, ಸಂತನ ಹಾಗೆಯೇ ಮಾತನಾಡಿದ್ದಾರೆ. ಲಾಜಿಕ್ಕು, ಸಂಶೋಧನೆಯ ವೈಧಾನಿಕತೆ, ವಾದ, ತರ್ಕ ಎಲ್ಲದಕ್ಕೂ ಮಣ್ಣುಬಿದ್ದು ಹೋಗಲಿ. ನಮಗೆ ಬೇಕಿರುವುದು ಕಣ್ಣಮುಂದೆ ನಿಗಿನಿಗಿ ಕೆಂಡದಂತಿರುವ ಸತ್ಯಗಳು.ಮನುವಾದಿ ಅಜೆಂಡಾ ಹೇರಲು ಬಂದಿರುವವರ ಸೋ ಕಾಲ್ಡ್ ಸಂಶೋಧನೆಗಳಲ್ಲ. ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಅದಕ್ಕೆ ನಾನು, ನಮ್ಮ ವ್ಯವಸ್ಥೆಯಲ್ಲಿ ನಿತಿ ನಿರೂಪಣೆಗಳು ಸಾಮಾಜಿಕ ಸಂಶೋಧನೆ ರೂಪಿಸಿದ ಜ್ಞಾನದ ಮೇಲೆ ಆಗುತ್ತವೆಯೇ ಹೊರತು ಸಂತನ ಹಾಗೆ ಬದುಕುವುದರಿಂದ ಅಲ್ಲ ದೇವನೂರು ಸಂತರಾದರೆ ರವಿಶಂಕರ್ ಅವರ ತರ ಮಠ ತೆರೆದು ಬಂದವರಿಗೆ ಅಧ್ಯಾತ್ಮಿಕತೆ ಹೇಳಿಕೊಡಲಿ ನಾನೂ ಹೋಗುತ್ತೇನೆ ಆದರೆ ಅವರು ಸಾಮಾಜಿಕ ಚಿಂತಕರೂ ಅಂತಲೇ ತಮ್ಮನ್ನು ಕರೆದುಕೋಳ್ಳುತ್ತಾರೆ ಅಂತಾದಮೇಲೆ  ಶೋಧನೆಯ ವೈಧಾನಿಕತೆ, ವಾದ, ತರ್ಕ ಎಲ್ಲವನ್ನೂ ಕಲಿಯಲೇಬೇಕು ಅಲ್ಲವೆ. ಎಂಬ ನನ್ನ ಮಾತಿಗೆ ಸಾತ್ವಿಕ್ ಅವರು ಸರ್.. ಲಾಜಿಕ್ಕು, ಸಂಶೋಧನೆಯ ವೈಧಾನಿಕತೆ, ವಾದ, ತರ್ಕ ಬೇಡ ಎಂದರೆ ಹೇಗೆ ಸರ್.. ಅಂಬೇಡ್ಕರರ ಬರಹಗಳು ಅವರ ಎದುರಾಳಿಗಳಿಗೆ ಪಾಠ ಕಲಿಸಿದ್ದೇ ಅವರ ಸಂಶೋಧನೆ, ತರ್ಕಗಳ ಮೂಲಕ. ಇಲ್ಲವಾಗಿದ್ದಲ್ಲಿ ಅವರ ಎದುರಾಳಿಗಳು ಅವರನ್ನು ಭಾವುಕತೆ ಬಂಧನದಲ್ಲಿ ಸಿಲುಕಿಸಿಬಿಡುತ್ತಿದ್ದರು. ಅವರ ಅಪಾರ ಓದು ಮತ್ತು ಅದರಿಂದ ದಕ್ಕಿದ ತಾಳ್ಮೆ ಅವರನ್ನು ಅಂಥ ಹೀನ ಮತ್ತು ಭ್ರಷ್ಟ ಸಮಾಜದ ನಡುವೆಯೂ ಆತ್ಮವಿಶ್ವಾಸ ಕಳೆದುಕೊಳ್ಳದಂತೆ ಮಾಡಿದ್ದು ಎಂಬುದು ನನ್ನ ನಂಬಿಕೆ. (ಈಗ ಅಂಬೇಡ್ಕರರನ್ನು ಓದಲು ಆರಂಭಿಸಿದ್ದೇನೆ. ಅದರ ಪೋರ್ಸ್ ನಲ್ಲಿ ಹೇಳಿದ ಮಾತಿರಬಹುದು ಎಂಬ ಮಾತುಗಳನ್ನು ಸೇರಿಸಿದರು ಇದನ್ನೆ ಮುಂದುವರಿಸಿ ನಾನು ನಮ್ಮಗಳ ಅಂತಿಮ ಉದ್ದೇಶ ಕನ್ನಡದ ಮಟ್ಟಿಗೆ ಒಂದೂ ಸಂಶೋಧನೆ ಈ ಮಟ್ಟಿಗೆ ಚರ್ಚೆಗೆ ಗ್ರಾಸವಾಗುತ್ತಿರುವುದು ನಮ್ಮಂತ ಯುವ ಸಂಶೋಧಕರಿಗೆ ಅಸರೆಯಾಗಲಿದೆ ಆದರೆ ಚರ್ಚೆ ಸಂಶೋಧನಾ ಎಲ್ಲೆ ಮಿರಿ ವಯಕ್ತಿಕ ಮಟ್ಟದ ಟಿಕೆಗಳಾಗಿ ಬದಲಾಗುತ್ತಿದೆ ಇದರಿಂದ ಯಾರಿಗೂ ಪ್ರಯೋಜನವಿಲ್ಲ? ಎರಡೂ ಕಡೆಯವರೂ ಸಂಯಮದಿಂದ ತಾಳ್ಮೆಯಿಂದ ಬೌದ್ಧಿಕವಾಗಿ ಚರ್ಚಿಸಿದರೆ ಒಂದೂ ದೊಡ್ಡ ಯುವ ಪೀಳಿಗೆ ಇದರಿಂದ ಲಾಭ ಪಡೆಯಲಿದೆ. . . . ಈ ನಿಟ್ಟಿನಲ್ಲಿ ನಾವು ಯೋಚಿಸಬೇಕಿದೆ ಎಂಬುದಾಗಿ ವಿವರಿಸಿದೆ.
ಇದಕ್ಕೆ ದಯಾನಂದ ಅವರು, ವಚನಚಳುವಳಿ ಯಾವ ಕಾರಣಕ್ಕೆ ಆಯಿತೋ ತಿಳಿದಿಲ್ಲ ಆದರೆ ಅದರಿಂದ ಜನರಿಗೆ ಒಳ್ಳೆಯದಾಗಿದೆ ಇಷ್ಟು ಸಾಕು ಒಂದೂ ಸಂಶೋಧನೆ ಮೂಲ ಉದ್ದೇಶವೇ ಇದು ವಚನಚಳುವಳಿ ಇದನ್ನು ಇಗಾಗಲೇ ಸಾಧಿಸಿರುವುದರಿಂದ ಅವುಗಳ ಕುರಿತ ಸಂಶೋಧನೆ ಅನಗತ್ಯ ಎಂಬ ಮಾತನ್ನು ಹೇಳಿದರು ಅದಕ್ಕೆ ನಾನು ಹಾಗಲ್ಲಾ ದಯಾ ನಾನೂ ನಿವೇ ಮಾತನಾಡುವ ನಮ್ಮ ವ್ಯವಸ್ಥೆಯಲ್ಲಿ ಕಾಯ್ಧೆ ಕಾನೂನುಗಳು ಯಾವುದರ ಆಧಾರದ ಮೇಲೆ ರೋಪುಗೊಳ್ಳುತ್ತವೆ ಮೇಲೆ ತಿಳಿಸಿದಂತೆ ಅದು ಸಮಾಜ ಸಂಶೋಧನೆ ಕಟ್ಟಿಕೊಟ್ಟ ಜ್ಞಾನದ ಆಧಾರ ಮೇಲೆ ಅಲ್ಲವೆ? ಹಾಗಾದರೆ ನಮ್ಮನ್ನು ಪ್ರತಿನಿಧಿಸುವ ಜ್ಞಾನದ ಆಧಾರದ ರೋಪುಗೊಂಡ ಕಾನೂನುಗಳು ಎಕೆ ಜನರಿಗೆ ಶೋಷಿತರಿಗೆ ನ್ಯಾಯ ಒದಗಿಸುತ್ತಿಲ್ಲ ಸಫಾಯಿ ಕರ್ಮಚಾರಿಗಳ ಕುರಿತ ನಿಮ್ಮ ಸಂಶೋಧನೆ ಮತ್ತು ಬರವಣಿಗೆ ಪ್ರಭುತ್ವದ ಅಂದರೆ ಕಾನೂನಿನ ಈ ದೋರಣೆಯನ್ನು ಖಂಡಿತ ಗುರುತಿಸಿರುತ್ತದೆ ಎಂದೂ ನಾನೂ ಭಾವಿಸಿದ್ದೇನೆ ( ದಯಾನಂದ ಕರ್ನಾಟಕದ ಸಫಾಯಿ ಕರ್ಮಚಾರಿಗಳ ಕುರಿತು ಹೋರಾಡುತ್ತಿರುವವರಲ್ಲಿ ಪ್ರಮುಖರು) ಮತ್ತು ಅದು ನಿಮ್ಮ ಅನುಭವಕ್ಕೂ ಬಂದಿರುತ್ತದೆ. ಸೊ ಇದರ ಅರ್ಥ ಸಫಾಯಿ ಕರ್ಮಚಾರಿಗಳ ಕುರಿತಂತೆ ನಮ್ಮ ಸಂಶೋಧನೆಗಳು ರೋಪಿಸಿರುವ ಜ್ಞಾನ ನಿಜವಾದ ಅರ್ಥದಲ್ಲಿ ಅವರ ಬದುಕನ್ನು ಅಲ್ಲಿನ ಬವಣೆಗಳನ್ನು ವಿವರಿಸುತ್ತಿಲ್ಲ ಅಂತ ಅಲ್ಲವೆ? ಅದಕ್ಕಾಗಿಯೇ ಅಲ್ಲವೇ ತಾವು ರಾಜ್ಯ ಎಲ್ಲಾ ಸುತ್ತುವುದು ಮತ್ತು ಬರೆಯುವುದು ಮುಂದೂಂದು ದಿನ ನಿಮ್ಮ ಅಭಿಪ್ರಾಯವೇ ನಮ್ಮ ಸಪಾಯಿ ಕರ್ಮಚಾರಿಗಳ ಕುರಿತ ಜ್ಞಾನ ಎಂದೂ ನಿರೂಪಿತವಾದರೆ ಆದರ ಆಧಾರದ ಮೇಲೆ ನೀತಿ ನಿರೋಪಣೆಗಳು ರಚಿತವಾದರೆ. . . .ಹೇಗಿರುತ್ತದೆ ಇದನ್ನೆ ಸಂಶೋಧನೆ ಎನ್ನುವುದು ಅಲ್ಲವೆ ಇದಕ್ಕೆ ಸಂಶೋಧನೆಯ ವೈಧಾನಿಕತೆ, ವಾದ, ತರ್ಕ ಎಲ್ಲವನ್ನೂ ಕಲಿಯಲೇಬೇಕು ಇಲ್ಲವಾದರೆ ನಿಮ್ಮ ಈಡೀ ಪ್ರಯತ್ನ ಕೇವಲ ಭಾವನಾತ್ಮಕ ಹೇಳಿಕೆಗಳಾಗುತ್ತವೆ ಇಲ್ಲವೇ ಒಂದಾರು ಕತೆಗಳಾಗುತ್ತವೆ. . . ಜ್ಞಾನ ವಾಗುವುದಿಲ್ಲ ಅದೂ ಆಗಬೇಕಾದರೆ ನೀವು ಅದನ್ನು ಜ್ಞಾನದ ಮಾದರಿಯಲ್ಲಿಯೇ ಮಂಡಿಸಬೇಕು ಗೆಳೆಯ.ಎಂದೂ ವಿವರಿಸಿದೆ.
ಇದಕ್ಕೆ ಪ್ರತಿಕ್ರೀಯಿಸಿದ ರವಿ ಅರೆಹಳ್ಳಿ ಇವರು ಆನು ದೇವಾ ಹೊರಗಣದವನು ಕೃತಿಯನ್ನು ಬೆಂಬಲಿಸಿದ ಮನಸುಗಳೇ ಇಂದು ಡಂಕಿನರ ವಾದದ ತಳಹದಿಯನ್ನು ಅಲುಗಾಡಿಸುತ್ತಿರುವ ಅನಿವಾರ್ಯತೆಯನ್ನು ನಾವು ಬೆಂಬಲಿಸಲೇಬೇಕಿದೆ. ಪ್ರತಿಭೆ ಎನ್ನುವುದಕ್ಕೆ ಹಲವು ಆಯಾಮಗಳ ಒಳಗೊಳುವಿಕೆ ಇರುವಾಗ ನೋಟು ಎಣಿಸುವ ಮಶೀನಿನಂತೆ ವ್ಯವಹರಿಸುವ ಡಂಕಿನ ಬಳಗದ ಶೋಧಕಗಳ ಮೂಲ ಹುಡುಕುವ ವಿಧಿ ಈಗಷ್ಟೆ ಶುರುವಾಗಿದೆ. ಇತಿಹಾಸ ಅಂಕಿ ಅಂಶಗಳನ್ನು ಎಷ್ಟು ಚೆನ್ನಾಗಿ ನೆನಪಿಟ್ಟುಕೊಳ್ಳುತ್ತೋ ಅಷ್ಟೆ ಬೇಗ ಅಳಿಸಿಯೂ ಬಿಡುತ್ತದೆ. ಅದರ ಪರಿಣಾಮಗಳಷ್ಟೆ ಕಾಲಾತೀತವಾಗಿ ಉಳಿಯುತ್ತವೆ. ಈವತ್ತಿಗೂ ಆನು ದೇವಾ ಹೊರಗಣದವನು ಕೃತಿ ನಿಷೇಧಿತ ಕೃತಿಯಾಗಿರುವುದು ಡಂಕಿನರ ಹಿಂದಿರುವ ಪ್ರಾಯೋಜಿತ ಮನಸುಗಳಿಂದಾನೆ ತಾನೆ ಎಂಬ ಮಾತನ್ನು ಹೇಳಿದರು .
ಇದಕ್ಕೆ ನಾನೂ, Ravi arehalli ತುಂಬಾ ಜನರ ತಪ್ಪು ತಿಳುವಳಿಕೆಯೆ.ಅದು ನನ್ನ ಪ್ರಕಾರ (ತಪ್ಪಿದ್ದರೆ ಡಂಕಿನ್ ಸರಿಮಾಡಿ) ಡಂಕಿನ್ ತಮ್ಮ ಒಂದೂ ವಾದದ ವಿವರಣೆಗೆ ಅಂಕಿ-ಅಂಶಗಳನ್ನು ಬಳಸಿಕೊಂಡಿದ್ದಾರೆಯೇ ವಿನಹ ಅವರ ಇಡೀ ವಾದವೇ ಅಂಕಿ-ಅಂಶಗಳ ಮೇಲೆ ನಿಂತಿಲ್ಲ . . .‌ಅದೂ ಅಲ್ಲದೆ ನಮ್ಮ ವ್ಯವಸ್ಥೆಯಲ್ಲಿ ನೀತಿ ನಿರೋಪಣೆಗಳು ಜಾರಿಗೊಳ್ಳುವುದೇ ಆಯಾ ಇಲಾಖೆಗಳು ನೀಡುವ ಅಂಕಿ-ಅಂಶಗಳ ಆಧಾರದ ಮೇಲೆ ಉದಾಹರಣೆಗೆ ಬಡತನ ಹೋಗಲಾಡಿಸಬೇಕು ಎಂದೂ ಹೊರಡುವ ಪ್ರಭುತ್ವ ಬಡತನ ಎಂದರೇನು? ಅವರುಗಳ ಸಂಖ್ಯೆ ಎಷ್ಟಿದೆ ? ಬಡತನಕ್ಕೆ ಕಾರಣಗಳೇನು? ಎಂದೂ ಅಂಕಿ-ಅಂಶ ಮತ್ತು ವರಧಿಯ ಆಧಾರದಲ್ಲಿ ಸರ್ಕಾರದ ಅರ್ಥಿಕ ತಜ್ಞರು ಯೋಜನೆ ರೂಪಿಸುತ್ತಾರೆಯೋ ಅಥವಾ ನಾಲ್ಕಾರು ಕಾದಂಬರಿಗಳಲ್ಲಿ/ಬಾಷಣಗಳಲ್ಲಿ ಸಾಹಿತಿಗಳು ಬಡತನದ ಕುರಿತು ಇರುವ ಭಾವುಕ ಹೇಳಿಕೆಗಳ ಮೇಲೆ ಯೋಜನೆ ರೂಪಿಸುತ್ತಾರೆಯೋ ಸಾಹಿತಿಗಳ ಹೇಳಿಕೆಗಳೂ ಪ್ರಭುತ್ವದ ನಿರ್ದಾರಗಳನ್ನು ಪ್ರಭಾವಿಸಬಹುದೇ ಹೊರತು ಅವುಗಳ ಆಧಾರದಲ್ಲಿ ನೀತಿ ನಿರೋಪಣೆ ನಡೆಯುವುದಿಲ್ಲ ನೀತಿ ನಿರೂಪಣೆಗೆ ಬೇಕಿರುವುದು ಅಂಕಿ-ಅಂಶ ಮತ್ತು ಅವುಗಳ ಆಧಾರದಲ್ಲಿ ತಜ್ಞರು ನೀಡುವ ವರಧಿಗಳು. ಎಂದು ವಿವರಿಸಿದೆ.
ಇದಕ್ಕೆ ರವಿಯವರು yes ನೀವು ಹೇಳೋದೇ ಸರಿ. ಆದರೆ ಅಂಕಿ ಅಂಶಗಳು ಒದಗಿ ಬಂದ ಆಧಾರಗಳ ಮೂಲವೂ ಬಹಳ ಅನುಮಾನಾಸ್ಪದವಾಗಿ ಇರುವಾಗ ಚರ್ಚೆ ಅವುಗಳ ಸುತ್ತಲೆ ಸುತ್ತೋದು ಸಹಜ. ಅಂಕಿ ಅಂಶಗಳನ್ನಷ್ಟೆ ಇಟ್ಟುಕೊಂಡು ಯೋಜನೆ ರೂಪಿಸವುದಾದರೆ “ತಜ್ಞರು” ಯಾಕೆ ಬೇಕು ಅರ್ಥ ಆಗುತ್ತಿಲ್ಲ. ಒಂದು ಮಶೀನು ಕೂಡ ಅಂಕಿ ಅಂಶಗಳನ್ನಿಟ್ಟುಕೊಂಡು ಯೋಜನೆ ರೂಪಿಸಬಹುದು ಅಲ್ವೆ. ಅನುಭವಗಳ ಮೂಟೆಗಳನ್ನಿಟ್ಟುಕೊಂಡ ತಜ್ಞರು ಯಾಕೆ… ಭಾವುಕತೆ ಒಂದು ಹಂತದ ತನಕ ತಡೆ ಒಡ್ಡಿದರೂ ಯೋಜನೆ, ಯೋಚನೆಗಳ ಮೂಲಕ್ಕೆ ಅನುಭವ ನೀಡುವ ಕಸುವು ಬಹಳ ಹೆಚ್ಚೇ ಇರುತ್ತೆ. ದೇವನೂರು ಮತ್ತು ಕಂಬಾರರಂತವರು ವಚನ ಚಳುವಳಿಯ ಅನುಭವ, ಫಲಿತಗಳನ್ನು ತಮ್ಮದಾಗಿಸಿಕೊಂಡ ಬಹುಸಂಖ್ಯಾತ “ತಜ್ಞ”ರಲ್ಲಿ ಸೇರುತ್ತಾರೆ ಎನ್ನುವುದನ್ನು ನೀವು ಒಪ್ಪುವುದಾದರೆ….ಅವರು ವರ್ತಮಾನದಲ್ಲಿ ಮಶೀನುಗಳಿಂತ ಹೆಚ್ಚು ಅಗತ್ಯವಾಗುತ್ತಾರೆ. ಎಂದು ವಿವರಿಸಿದರು ಅದಕ್ಕೆ ನಾನೂ ದೇವನೂರು ಮತ್ತು ಕಂಬಾರರಂತವರು ವಚನ ಚಳುವಳಿಯ ಅನುಭವ, ಫಲಿತಗಳನ್ನು ತಮ್ಮದಾಗಿಸಿಕೊಂಡ ಬಹುಸಂಖ್ಯಾತ “ತಜ್ಞ”ರಲ್ಲಿ ಸೇರುತ್ತಾರೆ ಎನ್ನುವುದನ್ನು ನೀವು ಒಪ್ಪುವುದಾದರೆ? ಎಂದೂ ಕೇಳಿದ್ದಿರಿ ಖಂಡಿತಾ ಒಪ್ಪುತ್ತೇನೆ ಅದೇ ರೀತಿ ಡಂಕಿನ್ರವರು ಸಹ ವಚನ ಚಳುವಳಿಯ ಅನುಭವ, ಫಲಿತಗಳನ್ನು ಭಿನ್ನ ಮಾದರಿಯಲ್ಲಿ ಪಡೆಯುವ ಪ್ರಯತ್ನ ಮಾಡಿದ್ದಾರೆ ಜ್ಞಾನ ಬೆಳೆಯುವುದೇ ಹೀಗೆ ಅದಕ್ಕೆ ಇಷ್ಟು ಅಸಹನೆ ಎಕೆ? ತಪ್ಪಿದ್ದರೆ ವಿಮರ್ಶಿಸಿ? ಅದು ಬಿಟ್ಟು ದೇವನೂರು ಮತ್ತು ಕಂಬಾರರಂತವರು ಪಡೆದ ವಚನ ಚಳುವಳಿಯ ಫಲಿತವೇ ಅಂತಿಮ ಇನ್ಯರು ವಚನಗಳ ಕುರಿತು ಬೇರೆ ನೆಲೆಯಲ್ಲಿ ಯೋಚಿಸಲೇ ಭಾರದು ಯೋಚಿಸಿದವರ ಮೇಲೆ ಕಣ್ನಿಡಿ ಎನ್ನುವ ನಿಲುವು ಎಷ್ಟು ಸರಿ. . . ಇದು ಒಂದೂ ಸಂಶೋಧನೆಗೆ ಮುಖಾಮುಖಿಯಾಗಿವ ಮಾದರಿಯೇ ರವಿ ನಿವೇ ಹೇಳಿ ಎಂದೂ ವಿವರಿಸಿದೆ ಅದಕ್ಕೆ ಮಂಜುನಾಥ್ ರವರು ಡಂಕಿನ್ ವಿದೇಶದಲ್ಲಿ ಕುಳಿತು ನಮ್ಮ ಸಮಾಜದ ಕುರಿತು ಸಂಶೋಧನೆ ಮಾಡುತ್ತಿದ್ದಾರೆ ಇದಕ್ಕೆ ಮಹತ್ವ ಇಲ್ಲ ಎಂಬ  ಅವರಿಗೆ ಅಂಬೇಡ್ಕರ‍್ ಅವರು ನಮ್ಮ ಸಮಾಜದ ಶೋಷಣೆಗಳ ಕುರಿತು ತಮ್ಮ ನಿಲುವುಗಳನ್ನು ರೂಪಿಸಿಕೊಂಡಿದ್ದು ವಿದೇಶದ ಗ್ರಂಥಾಲಯಗಲ್ಲಿಯೇ ಗೆಳೆಯ . . . ಹಾಗದರೆ ಅವರು ತಪ್ಪೆ. . . ಹಾಗೆ ಡಂಕಿನ್ ಅವರೂ ಇಲ್ಲಿಯವರೆ ಇಲ್ಲಿನ ಸಮಾಜದ ಕುರಿತು ಸಂಶೋಧನೆ ಮಾಡಿಯೇ ವಿದೇಶಕ್ಕೆ ಹೋಗಿರುವುದು ಅದು ಉನ್ನತ ಶಿಕ್ಷಣಕ್ಕೆ.. . . ವಿಷಯ ಅದಲ್ಲ ಎಲ್ಲಿದ್ದರೆ ಎನೂ ನಾವು ಮಾತನಾಡುವ ನೆಲೆ ಸರಿಯಾಗಿರಬೇಕು ಅಷ್ಟೆ. ಎಂಬ ನನ್ನ ವಿವರಣೆ ಉತ್ತರವಾಯಿತು. . .
ಇದಾದ ನಂತರ ಚರ್ಚೆ ಬೇರೆ ನೆಲೆಯತ್ತ ಹೊರಳಿತು ಅದರ ವಿವರ ಹೀಗಿದೆ  …
http://savithru.blogspot.in/2013/04/blog-post_29.html?m=1 ಸಮಾಜಿಕ ತಾಣದಲ್ಲಿ ನೀಡಿರುವ ಕೆಲವು ವಚನಗಳ ಕುರಿತು ಚರ್ಚೆ ನಡೆಯಿತು ಅದಕ್ಕೆ ನಾನು ನಮ್ಮಲ್ಲಿ ಬಹುತೇಕರು ಬಾಲು ಅವರ ಬರವಣಿಗೆಗಳನ್ನು ಒರಿಜಿನಲ್ ಓದಿಲ್ಲ (ಓದಿದ್ದರೆ ಅವರ ಲೇಖನಗಳ ಆಧಾರದ ಮೇಲೆ ಚರ್ಚೆ ನಡೆಯುತ್ತಿತ್ತು) ಬದಲಾಗಿ ಅವರ ಚಿಂತನೆಯ ಕುರಿತ ಹಲವಾರು ಸೆಕೆಂಡರಿ source ಆಧಾರದ ಮೇಲೆ ಚರ್ಚೆ ಮಾಡುತ್ತಿದ್ದೇವೆ. . . ಮೇಲೆ ನೀಡಿರುವ ಲಿಂಕ್ ನಲ್ಲಿನ ವಚನಗಳು ಪ್ರಾಥಮಿಕ ಮಾಹಿತಿಯೇ ಅಲ್ಲಿ ನಡೆದಿದೆ ಎನ್ನಲಾದ ಘಟನೆಗೆ ಜಾತಿ ವ್ಯವಸ್ಥೆ ಕಾರಣ ಎಂದೂ ನಾವು ಅಂದುಕೊಳ್ಳುತ್ತಿದ್ದೇವೆ. ಅದು ಜಾತಿ ತಾರತಮ್ಯ ಇದ್ದ ಸಮಾಜದಲ್ಲಿ ನಡೆದ ಘಟನೆ ಅಷ್ಟೆ.ಆ ರೀತಿಯ ಘಟನೆಗಳು ಈಗಲೂ ನಡೆಯುತ್ತಿವೆ ಪರಿಹಾರ ಏನು? ಜಾತಿ ವ್ಯವಸ್ಥೆ ಇದೆ.ಅದ್ದರಿಂದ ಈ ಘಟನೆ ನಡೆಯುತ್ತಿವೆ ಅದ್ದರಿಂದ ಅದನ್ನು ಇಲ್ಲವಾಗಿಸಬೇಕು ಎಂಬ ನಮ್ಮ ಚಿಂತಕರ ಬಡಬಡಿಕೆ ಅತನ ಅವಮಾನಕ್ಕೆ ಪರಿಹಾರವಾಗುತ್ತವೆಯೇ? ಇಲ್ಲ. ಇದರಿಂದ ಶೋಷಣೆ ಮಾಡಿದವನಿಗೆ ತನ್ನ ತಪ್ಪಿನ ಅರಿವೆ ಆಗದೆ ನಾನೂ ಮಾಡಿದ್ದೆ ಸರಿ ಎಂಬ ಸಮರ್ಥನೆ ಸಿಗುತ್ತದೆ.

ಶೋಷಣೆಗೆ ಒಳಗಾದವನಿಗೆ ನಾನೂ ಈ ಜಾತಿಯಲ್ಲಿ ಹುಟ್ಟಿದ್ದೆ ಇದಕ್ಕೆಲ್ಲ ಕಾರಣ ಅನ್ನುವ ಹತಾಷೇ ಮೂಡುತ್ತದೆ.ಅವನು ಪ್ರಜ್ಞಾವಂತನಾಗಿದ್ದರೆ ತನ್ನ ಮುಂದಿನ ಪೀಳಿಗೆಯನ್ನು ಮೇಲ್ಜಾತಿಗಳ ರೀತಿ ಬೆಳೆಸುತ್ತಾನೆ. ಅಂದರೆ, ಅಮಾಯಕರನ್ನು ಶೋಷಿತರನ್ನಾಗಿಸುತ್ತಾನೆ (ವಿದ್ಯಾವಂತ ಮತ್ತು ನೌಕರ ದಲಿತರನ್ನು ನೊಡಿ ಅರ್ಥವಾಗುತ್ತದೆ) ಸುಮ್ಮನೆ ಯೋಚಿಸಿ, ಜಾತಿವ್ಯವಸ್ಥೆ ಇದೆ ಎಂದೂ ಒಪ್ಪಿಕೊಂಡರೆ ಅದರ ಅಧಾರದ ಮೇಲೆ ದಲಿತರ ಕುರಿತು ಏನೆಲ್ಲಾ ಅಸಹ್ಯ ಹೇಳಿಕೆಗಳು ನೀಡಲ್ಪಟ್ಟಿವೆಯೋ ಅವೆಲ್ಲ ಸತ್ಯವೆ ಆಗಿ ಬಿಡುತ್ತವೆ. . . ಅಲ್ಲವೆ?ಅಂದರೆ, ದಲಿತರು ಕುಲಹಿನರು, ಕೊಳಕರು, ಸಂಸ್ಕಾರ ಹಿನರು ಚಂಡಾಲರು ಒಂದೇ ಮಾತಿನಲ್ಲಿ ಹೇಳುವುದಾರೆ ಮನುಷ್ಯಾಗಿ ಬದುಕುತ್ತಿರುವ ಪ್ರಾಣಿಗಳು ನಾಗರಿಕ ಸಮಾಜದಲ್ಲಿ ನಾಗರಿಕರಂತೆ ಬದುಕಲು ಅರ್ಹತೆ ಇಲ್ಲದವರು ಸ್ವಂತ ಬುದ್ದಿ ಇಲ್ಲದವರು ಪರಾವಲಂಬಿಗಳು ಅದ್ದರಿಂದಲೇ ಅವರು ಈ ಸಮಾಜದ ಮುಖ್ಯವಾಹಿನಿಯಿಂದ ದೂರವಿರಬೇಕು ಇತ್ಯಾದಿ … ವಿವರಣೆಗಳೇ ಜಾತಿ ಶ್ರೇಣಿಕರಣದ ಕೊನೆಗೆ ಅವರನ್ನು ತಳ್ಳಲ್ಪಟ್ಟಿವೆ ಎಂಬ ವಿವರಣೆಗಳೂ ಸರಿಯೇ? ಸೊ ಕಾಲ್ಢ್ ಜಾತಿ ವ್ಯವಸ್ಥೆಯ ಸಿದ್ದಾಂತ ಇವೇ ಕಾರಣಗಳಿಗಾಗಿಯೇ ಅವರನ್ನು ತನ್ನ ಶ್ರೇಣಿಕರಣದ ಕೊನೆಯಲ್ಲಿ ಇಟ್ಟಿದೆ ಅಥವಾ ಹೊರಗೆ ಇಟ್ಟಿದೆ(ಇದಕ್ಕೆ ಸಾವಿರ ಆಧಾರಗಳು ಸಿಗುತ್ತವೆ). . ಜಾತಿ ವ್ಯವಸ್ಥೆ ಇದೆ ಮತ್ತು ಅದರಲ್ಲಿ ದಲಿತರೂ ಕೊನೆಯಲ್ಲಿ ಇದ್ದಾರೆ ಎಂದೂ ಸಾರಿ ಸಾರಿ ಹೇಳುವ ನೀವು ದಲಿತರೂ ಎಕೆ ಅಲ್ಲಿದ್ದಾರೆ ಎಂಬ ಜಾತಿ ಸಿದ್ದಾಂತದ ಮೇಲಿನ ಹೇಳಿಕೆಗಳನ್ನು ಒಪ್ಪಿದಂತೆಯೇ ಅಲ್ಲವೆ. . . . ಅದ್ದರಿಂದ ಇಂದೂ ದಲಿತ ಶೋಷಣೆಗೆ ತಮ್ಮಗಳ (ಜಾತಿ ಸಿದ್ದಾಂತ ಇದೆ ದಲಿತರು ಅಲ್ಲಿ ಕೆಳಗಿದ್ದಾರೆ ) ನಿಲುವು ಸಮರ್ಥನೆ ಒದಗಿಸುತ್ತಿಲ್ಲವೆ.

ನನ್ನ ಪ್ರಕಾರ ಜಾತಿ ವ್ಯವಸ್ಥೆ ಇದೆ ಅಂತ ವಾದಿಸುತ್ತಿರುವವರು ಹಾಗೆ ಅಂದುಕೊಳ್ಳಲೇ ಬೇಕು ಜಾತಿ ವ್ಯವಸ್ಥೆ ಅಂದರೆನೇ “ಶ್ರೇಣೀಕರಣ ಇತ್ತು” ಮತ್ತು “ಅದರಲ್ಲಿ ದಲಿತರು ಕೆಳಗಿದ್ದರು” ಎಂಬ ವೈಜ್ಞಾನಿಕ ವಿವರಣೆ ಎಂದೂ ವಿವರಿಸಿದೆ. ನಂತರ, ಸಾಹಿಲ್ ನನಗೆ ಅಂಬೇಡ್ಕರ್,ಪೂಲೆ ಇವರುಗಳ ಕುರಿತು ಅಭಿಪ್ರಾಯ ಕೇಳಿದರು. ಅದಕ್ಕೆ ನಾನೂ, ಭಾರತದ ಸಂಧರ್ಭದಲ್ಲಿ ಸಮಾಜಿಕ ಸಮಸ್ಯಗಳನ್ನು ಭಿನ್ನವಾಗಿ ನೋಡಿದವರಲ್ಲಿ ಇವರೂ ಪ್ರಮುಖರು.ಅದಕ್ಕೆ ಅವರುಗಳ ಬರವಣಿಗೆಗೆಗಳೇ ಸಾಕ್ಷೀ. ಆದರೆ, ತಾವು ಅನುಭವದಿಂದ ಕಂಡುಕೊಂಡ ಅವಮಾನಗಳಿಗೆ, ಶೋಷಣೆಗಳಿಗೆ ಅವರೂ ಪರಿಹಾರ ಹುಡುಕಿದ್ದು ಮತ್ತದೇ ಯೋರೋಪಿಯನ್ ಸಿದ್ಧಾಂತಗಳಲ್ಲಿ. ಇದೂ ಸಮಸ್ಯೆ ಖಂಡಿತಾ ಆ ಕಾಲದಲ್ಲಿಯೇ ಭಾರತೀಯ ಸಮಾಜದ ಕುರಿತ ಒಂದೂ ಸಾಲಿಡ್ ಸಿದ್ಧಾಂತ ರಚಿಸುವ ಎಲ್ಲಾ ಅವಕಾಶ ಮತ್ತು ಅರ್ಹತೆ ಇದ್ದರೂ ಆ ಕೆಲಸ ಆಗಲಿಲ್ಲ. ಕಾರಣ, ಇಂಗ್ಲೀಷ್ ಶಿಕ್ಷಣ ಮತ್ತು ಅದು ಸೃಷ್ಟಿಸಿದ ಬೌದ್ಧಿಕ ಚೌಕಟ್ಟು ಇರಬಹುದು ಇಲ್ಲಾ ಅಂಬೆಡ್ಕರ್ ಕಾಲಕ್ಕಾಗಲೇ ಭಾರತೀಯ ಜ್ಞಾನ ಎಂಬಂತೆ ರಚಿತವಾಗಿದ್ದ ಕಲೊನಿಯಲ್ ಇತಿಹಾಸವೂ ಕಾರಣವಿರಬಹುದು. . . (ಅಂಬೇಡ್ಕರ್ ತಮ್ಮ ವಾದಕ್ಕೆ ಬಳಸಿದ ಒದು ಇದನ್ನು ಸಮರ್ಥಿಸುತ್ತದೆ) ಇದರ ಅರ್ಥ, ಅಂಬೇಡ್ಕರ್ ಪೂಲೆ ಮುಖ್ಯ ಅಲ್ಲ ಅಂತ ಖಂಡಿತಾ ಅಲ್ಲ.ಅಂದಿನ ಕಾಲದಲ್ಲಿಯೇ, ಸಮಾಜಿಕ ಸಮಸ್ಯೆಗಳನ್ನು ಶೋಷಣೆಗಳನ್ನು ಅಂತ್ಯಂತ ಯಶಸ್ವಿಯಾಗಿ ಗುರುತಿಸಿ ವಿರೋಧಿಸಿದ ಅವರ ನಿಲುವು ಎಂದಿಗೂ ಪ್ರಶಂಶನೀಯ ಮತ್ತು ಮೌಲ್ವಿಕವಾದುದು.ಆದರೆ, ಅವುಗಳ ಪರಿಹಾರಕ್ಕೆ ಅವರೂ ತೋರಿದ ದಾರಿ ಯಶಸ್ವಿಯಾಗಲಿಲ್ಲ ಅದನ್ನೂ ಅಂಬೇಡ್ಕರ್ ಅವರೆ ಒಪ್ಪುತ್ತಾರೆ. . (ಕಲಿತ ದಲಿತರ ಕುರಿತ ತಮ್ಮ ಅಭಿಪ್ರಾಯ ಮತ್ತು ಚುನಾವಣೆಯ ಸೋಲಿನ ಸಮಯದಲ್ಲಿ) ಮತ್ತು ತಾನೂ ತಂದು ನಿಲ್ಲಿಸಿದ ರಥವನ್ನು ಮುಂದಕ್ಕೆ ತರುವ ಯುವಕರನ್ನು ಭವಿಷ್ಯದ ಭಾರತದಲ್ಲಿ ಕಾಣಬಯಸುತ್ತಾರೆ.

ಇದರ ಅರ್ಥ ತಮ್ಮ ಕಾಲದ ಸಂಶೋಧನೆಯನ್ನು ಮುಂದುವರೆಸುವ ಮಾದರಿ ಯುವಪಡೆ ಅವರ ಕನಸಾಗಿತ್ತು ನಿಜಕ್ಕೂ ಹಾಗೆ ಆಗಿದೆಯೇ?ಈಗಿರುವ ಕೆಲವರು ಅಥವಾ ಬಹುಪಾಲು ಜನರು ಅವರ ಅಮೂಲ್ಯ ಚಿಂತನೆಗಳನ್ನು ವಾದಗಳನ್ನು ಕೇವಲ ತಮ್ಮ ರಾಜಕೀಯ ನಿಲುವು ಗಟ್ಟಿಗಳಿಸಿಕೊಳ್ಳಲು ಡಿಫೇನ್ಸಿವ್ ಆಗಿ ಬಳಸುತ್ತಿದ್ದಾರೆ ಇದನ್ನು ನೀವು ಒಪ್ಪುತ್ತಿರ ಎಂಬುದು ನನ್ನ ಭಾವನೆ ಇನ್ನೂ ಸಂಶೋಧನೆ ಮಾಡಲೇ ಬೇಡಿ ಎಂಬ ಹೇರಿಕೆಗಳು ಬೇರೆ ಹೇರುತ್ತಿದ್ದಾರೆ.ನೀವೇ ಯೋಚಿಸಿ ಜಾತಿವ್ಯವಸ್ಥೆ ಇದೆ. ಎಂದೂ ಒಪ್ಪೊಕೊಂಡರೆ ಅದರ ಆಧಾರದ ಮೇಲೆ ದಲಿತರ ಕುರಿತು ಎನೆಲ್ಲಾ ಅಸಹ್ಯ ಹೇಳಿಕೆಗಳು ನೀಡಲ್ಪಟ್ಟಿವೆಯೋ ಅವೆಲ್ಲ ಸತ್ಯವೆ ಆಗಿ ಬಿಡುತ್ತವೆ. . . ಅಲ್ಲವೆ ಅಂದರೆ ದಲಿತರು ಕುಲಹಿನರು, ಕೊಳಕರು, ಸಂಸ್ಕಾರ ಹಿನರು ಚಂಡಾಲರು ಒಂದೇ ಮಾತಿನಲ್ಲಿ ಹೇಳುವುದಾರೆ ಮನುಷ್ಯಾಗಿ ಬದುಕುತ್ತಿರುವ ಪ್ರಾಣಿಗಳು ನಾಗರಿಕ ಸಮಾಜದಲ್ಲಿ ನಾಗರಿಕರಂತೆ ಬದುಕಲು ಅರ್ಹತೆ ಇಲ್ಲದವರು ಸ್ವಂತ ಬುದ್ದಿ ಇಲ್ಲದವರು ಪರಾವಲಂಬಿಗಳು ಅದ್ದರಿಂದಲೇ ಅವರು ಈ ಸಮಾಜದ ಮುಖ್ಯವಾಹಿನಿಯಿಂದ ದೂರವಿರಬೇಕು ಇತ್ಯಾದಿ ಇತ್ಯದಿ. . . ವಿವರಣೆಗಳೇ ಜಾತಿ ಶ್ರೇಣಿಕರಣದ ಕೊನೆಗೆ ಅವರನ್ನು ತಳ್ಳಲ್ಪಟ್ಟಿವೆ ಎಂಬ ವಿವರಣೆಗಳೂ ಸರಿಯೇ? ಸೊ ಕಾಲ್ಢ್ ಜಾತಿ ವ್ಯವಸ್ಥೆಯ ಸಿದ್ದಾಂತ ಇವೇ ಕಾರಣಗಳಿಗಾಗಿಯೇ ಅವರನ್ನು ತನ್ನ ಶ್ರೇಣಿಕರಣದ ಕೊನೆಯಲ್ಲಿ ಇಟ್ಟಿದೆ ಅಥವಾ ಹೊರಗೆ ಇಟ್ಟಿದೆ(ಇದಕ್ಕೆ ಸಾವಿರ ಆಧಾರಗಳು ಸಿಗುತ್ತವೆ). . ಜಾತಿ ವ್ಯವಸ್ಥೆ ಇದೆ ಮತ್ತು ಅದರಲ್ಲಿ ದಲಿತರೂ ಕೊನೆಯಲ್ಲಿ ಇದ್ದಾರೆ ಎಂದೂ ಸಾರಿ ಸಾರಿ ಹೇಳುವ ನೀವು ದಲಿತರೂ ಎಕೆ ಅಲ್ಲದ್ದಾರೆ ಎಂಬ ಜಾತಿ ಸಿದ್ದಾಂತದ ಮೇಲಿನ ಹೇಳಿಕೆಗಳನ್ನು ಒಪ್ಪಿದಂತೆಯೇ ಅಲ್ಲವೆ. . . . ಅದ್ದರಿಂದ ಇಂದೂ ದಲಿತ ಶೋಷಣೆಗೆ ತಮ್ಮಗಳ (ಜಾತಿ ಸಿದ್ದಾಂತ ಇದೆ ದಲಿತರು ಅಲ್ಲಿ ಕೆಳಗಿದ್ದಾರೆ ) ನಿಲುವು ಸಮರ್ಥನೆ ಒದಗಿಸುತ್ತಿಲ್ಲವೆ. . . .ನನ್ನ ಪ್ರಕಾರ ಜಾತಿ ವ್ಯವಸ್ಥೆ ಇದೆ ಅಂತ ವಾದಿಸುತ್ತಿರುವವರು ಹಾಗೆ ಅಂದುಕೊಳ್ಳಲೇ ಬೇಕು ಜಾತಿ ವ್ಯವಸ್ಥೆ ಅಂದರೆನೇ “ಶ್ರೇಣೀಕರಣ ಇತ್ತು” ಮತ್ತು “ಅದರಲ್ಲಿ ದಲಿತರು ಕೆಳಗಿದ್ದರು” ಎಂಬ ವೈಜ್ಞಾನಿಕ ವಿವರಣೆ ಇದನ್ನೂ ಅಲ್ಲಗಳೆಯಲೂ ಸಾಧ್ಯವೇ ಆಧಾರ ಸಮೇತ ವಿವರಿಸಿ.  ಎಂಬ ಪ್ರಶ್ನೆಯನ್ನು ಹಾಕಿದೆ ಚರ್ಚೆ ಸಮಾಪ್ತಿಯಾಯಿತು. . .  ನಂತರ ಮುಂದುವರಿದರೂ ಯಾವ ಉತ್ತಮ ಹೊಳಹುಗಳು ದೊರೆಯಲಿಲ್ಲ.

ಪ್ರೊ.ರಾಜಾರಾಮ ಹೆಗಡೆ ದೇವನೂರರ ಲೇಖನಕ್ಕೆ ಪ್ರತಿಕ್ರಿಯಿಸಿದ್ದಾರೆ)

0 comments:

Post a Comment