* ಡಂಕಿನ್ ಝಳಕಿ
ಇದು ರಾಜೇಂದ್ರ ಚೆನ್ನಿಯವರು ಲಡಾಯಿ ಬ್ಲಾಗ್ನಲ್ಲಿ ಬರೆದ ಲೇಖನಕ್ಕೆ (ರಾಜೇಂದ್ರ ಚೆನ್ನಿಯವರ ಲೇಖನ ಓದಲು ಕ್ಲಿಕ್ ಮಾಡಿ) ನನ್ನ ಪ್ರತಿಕ್ರಿಯೆ. ಅವರ ಲೇಖನ ಸಾಕಷ್ಟು ಉದ್ದವಿದ್ದರೂ ಅದರಲ್ಲಿ ಉತ್ತರ ಕೊಡಲು ಯೋಗ್ಯವಾದ ವಿಚಾರಗಳಿರುವುದು ಎರಡು ಅಥವಾ ಮೂರು ಮಾತ್ರ. ಉಳಿದದ್ದೆಲ್ಲಾ ವೈಯುಕ್ತಿಕ ನಿಂದನೆಗಳು, ಆಧಾರ ರಹಿತ ಆಪಾದನೆಗಳು, ಮತ್ತು ಬಾಲಿಶ ಹಾಸ್ಯಗಳು. ಅವುಗಳಿಗೆ ಉತ್ತರ ಕೊಡುವುದು ಘನತೆಯ ವಿಚಾರವಲ್ಲ.
೧.ಮೇಲುಚಲನೆಯ ಕುರಿತು: ಡಾ.ಷಣ್ಮುಖರವರು ಹೇಳುವ ನನ್ನ “ಪ್ರಬಂಧದಲ್ಲಿ ಎಲ್ಲೂ ಈಗ ಇರುವ ವಚನಗಳು ಜಾತಿ(ವ್ಯವಸ್ಥೆ) ವಿರೋಧಿ ಚಳುವಳಿ ಎಂಬ ಕಥೆಯನ್ನು ವೀರಶೈವರು ತಮ್ಮ ಮೇಲುಚಲನೆಗಾಗಿ ಹರಡಿದರು ಎನ್ನುವ ವಾದವಿಲ್ಲ” ಎಂಬುದನ್ನು ಅಲ್ಲಗಳೆಯುತ್ತಾ ಚೆನ್ನಿಯವರು ನಾನು ನನ್ನ ಪ್ರಬಂಧದಲ್ಲಿ ತನ್ನ ಅಸ್ಮಿತೆ ಹಾಗೂ ಸಂಘಟನೆಯನ್ನು ಬಲಪಡಿಸುವ ಪ್ರಯತ್ನದಲ್ಲಿ ಬ್ರಿಟಿಷರು ಕಟ್ಟಿಕೊಟ್ಟ ಚಿತ್ರಣಗಳನ್ನು ತನಗೆ ಅಪ್ಯಾಯಮಾನವಾಗಿ ಕಂಡಿದ್ದರಿಂದ ಆಧುನಿಕ ವೀರಶೈವ ಶಿಕ್ಷಿತ ವರ್ಗವು ಒಪ್ಪಿಕೊಂಡಿತು ಎಂದು ವಾದಿಸುತ್ತೇನೆ ಎಂದು ಹೇಳುತ್ತಾರೆ.
ಈ ಕುರಿತು ಈಗಾಗಲೇ ಬಹಳಷ್ಟು ತಪ್ಪು ಅಭಿಪ್ರಾಯಗಳು ಚಲಾವಣೆಗೆ ಬಂದಿರುವುದರಿಂದ, ನನ್ನ ವಾದ ಏನು ಎಂಬುದನ್ನು ಮತ್ತೊಮ್ಮೆ ವಿಶದ ಪಡಿಸುತ್ತೇನೆ.
ವಸಾಹತು ಬರಹಗಾರರು ಮಾಡಿದ್ದೇನೆಂದರೆ, ನಮ್ಮಲ್ಲಿ ಶತಮಾನಗಳಿಂದ ಇದ್ದ (೧) ಆಧ್ಯಾತ್ಮದ ನೆಲೆಯಲ್ಲಿ ಜಾತಿ ಮತ್ತು ಕುಲಕ್ಕೆ ಸಂಬಂಧಿಸಿದಂತಹ ಮದ,ಮಾತ್ಸರ್ಯಗಳನ್ನು ಅಲ್ಲಗಳೆಯುವ ಮತ್ತು (೨) ಬ್ರಾಹ್ಮಣ ಮತ್ತು ಇತರ (ಉದಾ. ಲಿಂಗಾಯತ) ಸಮುದಾಯಗಳ ನಡುವೆ ಇರುವ ಜಗಳ, ವಾಗ್ದಾಳಿ (polemics) ಇತ್ಯಾದಿಗಳಂತಹ ಎರಡು ಬೇರೆ ಬೇರೆ ವಿಚಾರಗಳನ್ನು ಒಂದೇ ನೆಲೆಯಲ್ಲಿ ನೋಡಿದ್ದು. ಇದರೊಂದಿಗೆ ಇನ್ನೂ ಒಂದು ವಿಚಾರವನ್ನು ನಾವಿಲ್ಲಿ ಗಮನಿಸಬೇಕು. ಭಾರತದ ಸಮಾಜವನ್ನು ಅರಿಯಲು ತಿಣುಕಾಡಿದ ವಸಾಹತು ಬರಹಗಾರರು, ಬ್ರಾಹ್ಮಣರ ವಿರುದ್ಧ ವಾಗ್ದಾಳಿಗೆ ಇಳಿಯುವವರೆಲ್ಲಾ (ತಾವು ಭಾರತದಲ್ಲಿ ಇದೆ ಎಂದು ನಂಬಿದ್ದ) ಬ್ರಾಹ್ಮಣ ಶಾಹಿ, ಜಾತಿವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ ಎಂದೇ ಕಂಡರು. ಹೀಗೆ ಬ್ರಾಹ್ಮಣ ಶಾಹಿ, ಜಾತಿವ್ಯವಸ್ಥೆಯ ವಿರುದ್ಧ ತಮ್ಮಂತೆಯೇ ಹೋರಾಟಕ್ಕೆ ಇಳಿದಿರುವವರನ್ನು ಪ್ರಗತಿಪರರು, ನೈತಿಕ ಪ್ರಜ್ಞೆ ಉಳ್ಳವರು ಎಂದು ಅವರು ಕಂಡಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ.ಕ್ರಮೇಣ ಇಂತಹ ‘ಪ್ರಗತಿಪರ,ನೈತಿಕ’ ಜನರನ್ನು ಹಲವು ವಿಧಗಳಲ್ಲಿ (ಕೆಲಸ ಕೊಟ್ಟು, ಕೋರ್ಟುಗಳ ಮುಂತಾದ ವಿಚಾರದಲ್ಲಿ ಸಹಾಯ ಮಾಡಿ) ಪುರಸ್ಕರಿಸುತ್ತಾ ಬಂದದ್ದು ನಾವು ಇತಿಹಾಸದಲ್ಲಿ ನೋಡಬಹುದು.ಈ ವಿಚಾರ ತಾರ್ಕಿಕವಾಗಿಯೂ,ಐತಿಹಾಸಿಕವಾಗಿಯೂ ತೋರಿಸಿಕೊಡಬಹುದಾದ ವಿಷಯ. ನನ್ನ ನಾಲ್ಕು ವರ್ಷ ಹಳೆಯ PhD ಪ್ರಬಂಧದಲ್ಲಿ ಇದನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ. (ಈಗ ಬರೆಯುತ್ತಿರುವ ಪುಸ್ತಕದಲ್ಲಿ ಇದನ್ನು ಇನ್ನೂ ಹೆಚ್ಚಿನ ಆಧಾರಗಳೊಂದಿಗೆ ಮಂಡಿಸುತ್ತೇನೆ.)
ನನ್ನ ಈ ವಾದವನ್ನು ಚೆನ್ನಿಯವರು ಹೇಳುವಂತೆ “ಈಗ ಇರುವ ವಚನಗಳು ಜಾತಿ(ವ್ಯವಸ್ಥೆ) ವಿರೋಧಿ ಚಳುವಳಿ ಎಂಬ ಕಥೆಯನ್ನು ವೀರಶೈವರು ತಮ್ಮ ಮೇಲುಚಲನೆಗಾಗಿ ಹರಡಿದರು” ಎಂದು ವಿವರಿಸಲು ಬರುವುದಿಲ್ಲ. ಏಕೆಂದರೆ, ಹೀಗೆ ಹೇಳಬೇಕಾದರೆ ಇಡೀಯ ಲಿಂಗಾಯತ ಸಮುದಾಯ ಒಮ್ಮೆ ಕುಳಿತುಕೊಂಡು “ವಚನಗಳು ನಿಜವಾಗಿಯೂ ಜಾತಿ ವಿರೋಧಿ ಸಾಹಿತ್ಯವಲ್ಲ, ಆದರೆ ಹಾಗೆ ಹೇಳಿಕೊಂಡರೆ ನಮಗೆ ಲಾಭವಾಗುತ್ತದೆ” ಎಂದು ನಿರ್ಧರಿಸಿ, ಒಂದು ಕಾರ್ಯತಂತ್ರವನ್ನು ನಿರೂಪಿಸಿ ಅದನ್ನು ಆಚರಣೆಗೆ ತಂದರು ಎಂದು ಹೇಳ ಬೇಕಾಗುತ್ತದೆ. ಅಂದರೆ ಒಂದು ಇಡೀಯ ಸಮುಧಾಯವನ್ನು ಕುಂತಂತ್ರಿ, ಅನೈತಿಕ ಎಂದು ಕರೆಯ ಬೇಕಾಗುತ್ತದೆ. ಹೀಗೆ ಹೇಳುವುದು ಒಂದು ಸತ್ಯವೂ ಅಲ್ಲದ, ಸುಳ್ಳೂ ಅಲ್ಲದ ಸ್ಟಿರಿಯೋಟೈಪ್. ಮುಸ್ಲಿಮರೆಲ್ಲರೂ ಉಗ್ರವಾದಿಗಳು, ಕ್ರೈಸ್ತರೆಲ್ಲರೂ ಕುಡುಕರು ಎನ್ನುವಂಥ ಸ್ಟಿರಿಯೋಟೈಪ್ ಹೇಳಿಕೆಯಂತೆ ಇದೂ ಕೂಡ ಒಂದು ಸ್ಟಿರಿಯೋಟೈಪ್. ನಮ್ಮ ಸಂಶೋಧನೆಯು ಇಂತಹ ಸ್ಟಿರಿಯೋಟೈಪ್ ಹೇಳಿಕೆಯನ್ನು ಮಾಡುತ್ತಿಲ್ಲ. (ಸ್ಟಿರಿಯೋಟೈಪ್ ಹೇಳಿಕೆಗಳ ಕುರಿತ ನಮ್ಮ ಸಂಶೋಧನೆಗೆ, ಆ ಕುರಿತು ನಾವು ಬರೆದಿರುವ ಲೇಖನಗಳನ್ನು ಓದಬಹುದು.)
ಹಾಗಾದರೆ ನಾನು/ನಾವು ಹೇಳುತ್ತಿರುವುದೇನು? ನಮ್ಮ ವಾದ ಹೀಗಿದೆ. ವಸಾಹತುಶಾಹಿಯು ಒಂದು ನಿರ್ಧಿಷ್ಟ ರೀತಿಯಲ್ಲಿ ಚಿಂತಿಸುವ ತಾರ್ಕಿಕ ಅನಿವಾರ್ಯತೆಯನ್ನು ಹುಟ್ಟು ಹಾಕಿತು. ತಾವು ಪ್ರಗತಿಪರರು, ಜಾತಿವ್ಯವಸ್ಥೆಯ ವಿರುದ್ಧ ಹೋರಾಡಿದವರು ಎಂದು ತೋರಿಸಿಕೊಟ್ಟರೆ ಮನ್ನಣೆ ಮತ್ತು ಪುರಸ್ಕಾರಗಳು ಸಿಗುವ ಪರಿಸ್ಥಿತಿಯನ್ನು ಬೆಳೆಸಿತು. ಇದರಿಂದಾಗಿ, ಲಿಂಗಾಯತ ಸಮುದಾಯವು ತಾನು ಜಾತಿವ್ಯವಸ್ಥೆಯ ವಿರುದ್ಧ ಹಿಂದಿನಿಂದಲೂ ಹೋರಾಡುತ್ತಾ ಬಂದಿದ್ದೇವೆ ಎಂದು ತೋರಿಸಿಕೊಡುವ ಅನಿವಾರ್ಯತೆಗೆ ಸಿಕ್ಕಿ ಕೊಂಡಿತು. (ಇದೇ ರೀತಿಯ ಬೇರೆ ಉದಾಹರಣೆಗಳಿಗೆ ನಮ್ಮ ಇತರ ಬರಹಗಳನ್ನು, ಚರ್ಚೆಗಳನ್ನು ನೋಡಬಹುದು.) ಬಾಲಗಂಗಾಧರರು ಹೇಳುವ ‘ವಸಾಹತುಪ್ರಜ್ಞೆ’ಯ ಒಂದು ಆಯಾಮ ಇದೇ: ವಸಾಹತುಶಾಹಿಯು ಹುಟ್ಟುಹಾಕಿದ ಒಂದು ನಿರ್ಧಿಷ್ಟ ರೀತಿಯಲ್ಲಿ ಚಿಂತಿಸುವ ತಾರ್ಕಿಕ ಅನಿವಾರ್ಯತೆ.
೨. ಚೆನ್ನಿಯವರು ಕೇಳುತ್ತಾರೆ: “ಇಲ್ಲಿರುವ ಪ್ರಶ್ನೆಗಳೆಂದರೆ ಬ್ರಿಟಿಷ್ ಓರಿಯಂಟಲಿಸ್ಟ್ ಎಂದು ಕರೆಯಬಹುದಾದ ಬರಹಗಳು ವೀರಶೈವ ಧರ್ಮದ ಬಗ್ಗೆ ಏಕಮುಖವಾದ ಚಿತ್ರವನ್ನು ಕೊಟ್ಟಿವೆಯೆ?” ಇದಕ್ಕೆ ನನ್ನ ಉತ್ತರ ತುಂಬಾ ಸರಳವಾಗಿದೆ. ನಾವು ಒಂದು ಕಾಲದಲ್ಲಿ ಪ್ರಬಲವಾಗಿರುವ, ಹೆಜೆಮೊನಿಕ್ ಆಗಿರುವ ವಿಚಾರಗಳ ಕುರಿತು ಮಾತನಾಡುವಾಗ, ಅಲ್ಲಿ ಇಲ್ಲಿ ಕಾಣಿಸುವ ವ್ಯತಿರಿಕ್ತವಾದ ಧ್ವನಿಗಳು, ವಿಚಾರಗಳು ನಮಗೆ ಮುಖ್ಯವಾಗುವುದಿಲ್ಲ. ಇದಕ್ಕೆ ಹೊರತಾಗಿ ಮಾತನಾಡುವುದಾದರೆ, ೧೭ನೆಯ ಶತಮಾನದಿಂದ ಈಚೆಗೆ “ಓರಿಯಂಟಲಿಸ್ಟ್ ಎಂದು ಕರೆಯಬಹುದಾದ ಬರಹಗಳು” ವೀರಶೈವ ಸಂಪ್ರದಾಯದ ಕುರಿತು ನಮಗೆ ಕಟ್ಟಿಕೊಡುವ ಚಿತ್ರಣ ಬಗ್ಗೆ ಏಕಮುಖವಾದದ್ದೆ. ಇಲ್ಲವೆನ್ನುವವರು ಅದನ್ನು ಆಧಾರ ಸಮೇತ ತೋರಿಸಿಕೊಡಬೇಕು.
೩. “ಅಂದಾಜು ಹತ್ತರಿಂದ ಹದಿನೈದನೇ ಶತಮಾನದವರೆಗೆ ಪ್ರವರ್ಧಮಾನವಾದ ಒಂದು ಸಂಪ್ರದಾಯದ ಬಗ್ಗೆ ಬ್ರಿಟಿಷ್ರ ಆಗಮನದ ಮೊದಲು ಯಾವುದೇ ವಿವರಣೆಗಳು,ವ್ಯಾಖ್ಯಾನಗಳು ಇರಲೇ ಇಲ್ಲವೇ? ಈ ವಿವರಣೆಗಳು ಜಾತಿ, ಜಾತಿಪದ್ಧತಿ, ಬ್ರಾಹ್ಮಣ ಪುರೋಹಿತಶಾಹಿ ಇವುಗಳು ತಮ್ಮ ಯಾವ ‘ಅನುಭವ’ವನ್ನು ವಿವರಿಸಲೇ ಇಲ್ಲವೇ?” ಎಂದು ಕೇಳುತ್ತಾರೆ ಚೆನ್ನಿಯವರು. ಇದೇ ಎಂದರೆ ತೋರಿಸಿಕೊಡಿ. ನೆನಪಿರಲಿ ತೋರಿಸಿಕೊಡಬೇಕಾದದ್ದು ಅಲ್ಲಿ ಇಲ್ಲಿ ಕಾಣಿಸುವ ವ್ಯತಿರಿಕ್ತವಾದ ಧ್ವನಿಗಳು, ವಿಚಾರಗಳು ಅಲ್ಲ, ಒಂದು ಕಾಲದಲ್ಲಿ ಕಾಣಿಸುವ ಪ್ರಬಲವಾಗಿರುವ, ಹೆಜೆಮೊನಿಕ್ ಆಗಿರುವ ವಿಚಾರಗಳು ಮತ್ತು ಧ್ವನಿಗಳು.
“ಆಧ್ಯಾತ್ಮಿಕ/ಸಾಮಾಜಿಕ ಎನ್ನುವ ವಿಂಗಡಣೆಯೇ ವಸಾಹತುಶಾಹಿ ಪ್ರಜ್ಞೆಯ ಫಲವಾಗಿದೆ. ಇದನ್ನು ವಸಾಹತುಶಾಹಿ-ಪೂರ್ವ ಸಂದರ್ಭಕ್ಕೆ ಅನ್ವಯಿಸುವ ಡಂಕಿನ್ರ ಪ್ರಬಂಧ Orientalism ನ ಪುನರುತ್ಪಾದನೆಯಾಗಿದೆ” ಎನ್ನುತ್ತಾರೆ ಚೆನ್ನಿಯವರು. ಚೆನ್ನಿಯವರು ಇದನ್ನೂ ತೋರಿಸಿ ಕಡಬೇಕಾಗುತ್ತದೆ. ಬರಿಯ ಹೇಳಿಕೆಗಳು, ಹಾಸ್ಯ ಸಂಶೋಧನೆಯಾಗುವುದಿಲ್ಲ. ಹೀಗೆ, ಯಾವುದನ್ನೂ ತೋರಿಸಿಕೋಡದೆ, ಒಂದಷ್ಟು ಹಾಸ್ಯ ಮಾಡಿ, ಕಡೆಗೆ “ಹೀಗಾಗಿ ಅವರ ಸಂಶೋಧನೆಯ ವೈಚಾರಿಕ ಚೌಕಟ್ಟು ದುರ್ಬಲ ಮಾತ್ರವಲ್ಲ ಸಿಂಧುವಾಗಿದೆ (invalid)” ಎಂದು ಚೆನ್ನಿಯವರು ಘೋಸಿಸುವುದು, ಅದನ್ನು “obscene arrogance” ಎಂದು ಬಯ್ಯುವುದು ಬೌದ್ಧಿಕ ಚರ್ಚೆ ಎನಿಸಿಕೊಳ್ಳುತ್ತದೆ ಕರ್ನಾಟಕದಲ್ಲಿ ಎಂದರೆ, ವೈಚಾರಿಕತೆ, ಸಂಶೋಧನೆಯ ಶಿಸ್ತು ಇತ್ಯಾದಿಗಳು ನಮ್ಮಲ್ಲಿ ಯಾವ ಮಟ್ಟಕ್ಕೆ ಕುಸಿದಿದೆ ಎಂದು ಗೊತ್ತಾಗುತ್ತದೆ.
೪. ಇನ್ನು ಕಾರ್ಲ್ ಪಾಪರ್ (Carl Popper) ಹೇಳುವ ವಿಚಾರಕ್ಕೆ ಬರೋಣ. ಪಾಪರ್ ಹೇಳುವ “ನಿಲುವುಗಳನ್ನು ಜಗತ್ತಿನ ವಿದ್ವತ್ ಪ್ರಪಂಚ ಈಗಾಗಲೇ ಅತ್ಯಂತ ಪ್ರಶ್ನಾರ್ಹವಾಗಿ ನೋಡಿದೆ. ಇಂಥ ಸಂದೇಹಾಸ್ಪದ ತರ್ಕಪದ್ಧತಿಗಳ ಮೇಲೆ ನಿಂತಿರುವ ತಮ್ಮ ಸಂಶೋಧನೆಯನ್ನು ಜಗತ್ತಿನ ಅಖೈರಾದ ಸತ್ಯವೆಂದರೆ ಅದನ್ನು ನಂಬಬೇಕಾಗಿಲ್ಲ” ಎಂದು ಹೇಳುತ್ತಾರೆ ಚೆನ್ನಿಯವರು. ಬಹುಶಃ ‘ಗೂಗಲ್’ನಿಂದ, ವಿಕಿಪೀಡಿಯದಿಂದ ಸಂಶೋಧನೆ ಮಾಡ ಹೊರಟರೆ ಹೀಗೆ ಆಗುತ್ತದೆ ಅಂತ ಕಾಣುತ್ತೆ. ಪಾಪರ್ ಹೇಳುವ falsification ವಿಚಾರವನ್ನು ಮುಂದಿನ (Imre Lakotas, Larry Laudan ಮುಂತಾದ) ಚಿಂತಕರು ಇನ್ನೂ ತೀಕ್ಷಣವಾಗಿ ನಿರೂಪಿಸಿದ್ದು, ಅದರಲ್ಲಿನ ಓರೆಕೋರೆಗಳನ್ನು ತಿದ್ದಿದ್ದು ಎಲ್ಲರಿಗೂ ತಿಳಿದ ವಿಚಾರವೇ. ಇದನ್ನು “ಜಗತ್ತಿನ ವಿದ್ವತ್ ಪ್ರಪಂಚ ಅತ್ಯಂತ ಪ್ರಶ್ನಾರ್ಹವಾಗಿ ನೋಡಿದೆ” ಎಂದು ಹೇಳುವವರಿಗೆ ಇಲ್ಲ ಪಾಪರ್ ಅರ್ಥ ಆಗಿಲ್ಲ, ಅಥವಾ ಅವರು ಪಾಪರ್ ಕುರಿತು ವಿಕಿಪೀಡಿಯದ ಲೇಖನಕ್ಕಿಂತ ಹೆಚ್ಚಿನದೇನೂ ಓದಿಲ್ಲ ಎಂದೇ ಹೇಳಬೇಕಾಗುತ್ತದೆ.
ಇದು ರಾಜೇಂದ್ರ ಚೆನ್ನಿಯವರು ಲಡಾಯಿ ಬ್ಲಾಗ್ನಲ್ಲಿ ಬರೆದ ಲೇಖನಕ್ಕೆ (ರಾಜೇಂದ್ರ ಚೆನ್ನಿಯವರ ಲೇಖನ ಓದಲು ಕ್ಲಿಕ್ ಮಾಡಿ) ನನ್ನ ಪ್ರತಿಕ್ರಿಯೆ. ಅವರ ಲೇಖನ ಸಾಕಷ್ಟು ಉದ್ದವಿದ್ದರೂ ಅದರಲ್ಲಿ ಉತ್ತರ ಕೊಡಲು ಯೋಗ್ಯವಾದ ವಿಚಾರಗಳಿರುವುದು ಎರಡು ಅಥವಾ ಮೂರು ಮಾತ್ರ. ಉಳಿದದ್ದೆಲ್ಲಾ ವೈಯುಕ್ತಿಕ ನಿಂದನೆಗಳು, ಆಧಾರ ರಹಿತ ಆಪಾದನೆಗಳು, ಮತ್ತು ಬಾಲಿಶ ಹಾಸ್ಯಗಳು. ಅವುಗಳಿಗೆ ಉತ್ತರ ಕೊಡುವುದು ಘನತೆಯ ವಿಚಾರವಲ್ಲ.
೧.ಮೇಲುಚಲನೆಯ ಕುರಿತು: ಡಾ.ಷಣ್ಮುಖರವರು ಹೇಳುವ ನನ್ನ “ಪ್ರಬಂಧದಲ್ಲಿ ಎಲ್ಲೂ ಈಗ ಇರುವ ವಚನಗಳು ಜಾತಿ(ವ್ಯವಸ್ಥೆ) ವಿರೋಧಿ ಚಳುವಳಿ ಎಂಬ ಕಥೆಯನ್ನು ವೀರಶೈವರು ತಮ್ಮ ಮೇಲುಚಲನೆಗಾಗಿ ಹರಡಿದರು ಎನ್ನುವ ವಾದವಿಲ್ಲ” ಎಂಬುದನ್ನು ಅಲ್ಲಗಳೆಯುತ್ತಾ ಚೆನ್ನಿಯವರು ನಾನು ನನ್ನ ಪ್ರಬಂಧದಲ್ಲಿ ತನ್ನ ಅಸ್ಮಿತೆ ಹಾಗೂ ಸಂಘಟನೆಯನ್ನು ಬಲಪಡಿಸುವ ಪ್ರಯತ್ನದಲ್ಲಿ ಬ್ರಿಟಿಷರು ಕಟ್ಟಿಕೊಟ್ಟ ಚಿತ್ರಣಗಳನ್ನು ತನಗೆ ಅಪ್ಯಾಯಮಾನವಾಗಿ ಕಂಡಿದ್ದರಿಂದ ಆಧುನಿಕ ವೀರಶೈವ ಶಿಕ್ಷಿತ ವರ್ಗವು ಒಪ್ಪಿಕೊಂಡಿತು ಎಂದು ವಾದಿಸುತ್ತೇನೆ ಎಂದು ಹೇಳುತ್ತಾರೆ.
ಈ ಕುರಿತು ಈಗಾಗಲೇ ಬಹಳಷ್ಟು ತಪ್ಪು ಅಭಿಪ್ರಾಯಗಳು ಚಲಾವಣೆಗೆ ಬಂದಿರುವುದರಿಂದ, ನನ್ನ ವಾದ ಏನು ಎಂಬುದನ್ನು ಮತ್ತೊಮ್ಮೆ ವಿಶದ ಪಡಿಸುತ್ತೇನೆ.
ವಸಾಹತು ಬರಹಗಾರರು ಮಾಡಿದ್ದೇನೆಂದರೆ, ನಮ್ಮಲ್ಲಿ ಶತಮಾನಗಳಿಂದ ಇದ್ದ (೧) ಆಧ್ಯಾತ್ಮದ ನೆಲೆಯಲ್ಲಿ ಜಾತಿ ಮತ್ತು ಕುಲಕ್ಕೆ ಸಂಬಂಧಿಸಿದಂತಹ ಮದ,ಮಾತ್ಸರ್ಯಗಳನ್ನು ಅಲ್ಲಗಳೆಯುವ ಮತ್ತು (೨) ಬ್ರಾಹ್ಮಣ ಮತ್ತು ಇತರ (ಉದಾ. ಲಿಂಗಾಯತ) ಸಮುದಾಯಗಳ ನಡುವೆ ಇರುವ ಜಗಳ, ವಾಗ್ದಾಳಿ (polemics) ಇತ್ಯಾದಿಗಳಂತಹ ಎರಡು ಬೇರೆ ಬೇರೆ ವಿಚಾರಗಳನ್ನು ಒಂದೇ ನೆಲೆಯಲ್ಲಿ ನೋಡಿದ್ದು. ಇದರೊಂದಿಗೆ ಇನ್ನೂ ಒಂದು ವಿಚಾರವನ್ನು ನಾವಿಲ್ಲಿ ಗಮನಿಸಬೇಕು. ಭಾರತದ ಸಮಾಜವನ್ನು ಅರಿಯಲು ತಿಣುಕಾಡಿದ ವಸಾಹತು ಬರಹಗಾರರು, ಬ್ರಾಹ್ಮಣರ ವಿರುದ್ಧ ವಾಗ್ದಾಳಿಗೆ ಇಳಿಯುವವರೆಲ್ಲಾ (ತಾವು ಭಾರತದಲ್ಲಿ ಇದೆ ಎಂದು ನಂಬಿದ್ದ) ಬ್ರಾಹ್ಮಣ ಶಾಹಿ, ಜಾತಿವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ ಎಂದೇ ಕಂಡರು. ಹೀಗೆ ಬ್ರಾಹ್ಮಣ ಶಾಹಿ, ಜಾತಿವ್ಯವಸ್ಥೆಯ ವಿರುದ್ಧ ತಮ್ಮಂತೆಯೇ ಹೋರಾಟಕ್ಕೆ ಇಳಿದಿರುವವರನ್ನು ಪ್ರಗತಿಪರರು, ನೈತಿಕ ಪ್ರಜ್ಞೆ ಉಳ್ಳವರು ಎಂದು ಅವರು ಕಂಡಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ.ಕ್ರಮೇಣ ಇಂತಹ ‘ಪ್ರಗತಿಪರ,ನೈತಿಕ’ ಜನರನ್ನು ಹಲವು ವಿಧಗಳಲ್ಲಿ (ಕೆಲಸ ಕೊಟ್ಟು, ಕೋರ್ಟುಗಳ ಮುಂತಾದ ವಿಚಾರದಲ್ಲಿ ಸಹಾಯ ಮಾಡಿ) ಪುರಸ್ಕರಿಸುತ್ತಾ ಬಂದದ್ದು ನಾವು ಇತಿಹಾಸದಲ್ಲಿ ನೋಡಬಹುದು.ಈ ವಿಚಾರ ತಾರ್ಕಿಕವಾಗಿಯೂ,ಐತಿಹಾಸಿಕವಾಗಿಯೂ ತೋರಿಸಿಕೊಡಬಹುದಾದ ವಿಷಯ. ನನ್ನ ನಾಲ್ಕು ವರ್ಷ ಹಳೆಯ PhD ಪ್ರಬಂಧದಲ್ಲಿ ಇದನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ. (ಈಗ ಬರೆಯುತ್ತಿರುವ ಪುಸ್ತಕದಲ್ಲಿ ಇದನ್ನು ಇನ್ನೂ ಹೆಚ್ಚಿನ ಆಧಾರಗಳೊಂದಿಗೆ ಮಂಡಿಸುತ್ತೇನೆ.)
ನನ್ನ ಈ ವಾದವನ್ನು ಚೆನ್ನಿಯವರು ಹೇಳುವಂತೆ “ಈಗ ಇರುವ ವಚನಗಳು ಜಾತಿ(ವ್ಯವಸ್ಥೆ) ವಿರೋಧಿ ಚಳುವಳಿ ಎಂಬ ಕಥೆಯನ್ನು ವೀರಶೈವರು ತಮ್ಮ ಮೇಲುಚಲನೆಗಾಗಿ ಹರಡಿದರು” ಎಂದು ವಿವರಿಸಲು ಬರುವುದಿಲ್ಲ. ಏಕೆಂದರೆ, ಹೀಗೆ ಹೇಳಬೇಕಾದರೆ ಇಡೀಯ ಲಿಂಗಾಯತ ಸಮುದಾಯ ಒಮ್ಮೆ ಕುಳಿತುಕೊಂಡು “ವಚನಗಳು ನಿಜವಾಗಿಯೂ ಜಾತಿ ವಿರೋಧಿ ಸಾಹಿತ್ಯವಲ್ಲ, ಆದರೆ ಹಾಗೆ ಹೇಳಿಕೊಂಡರೆ ನಮಗೆ ಲಾಭವಾಗುತ್ತದೆ” ಎಂದು ನಿರ್ಧರಿಸಿ, ಒಂದು ಕಾರ್ಯತಂತ್ರವನ್ನು ನಿರೂಪಿಸಿ ಅದನ್ನು ಆಚರಣೆಗೆ ತಂದರು ಎಂದು ಹೇಳ ಬೇಕಾಗುತ್ತದೆ. ಅಂದರೆ ಒಂದು ಇಡೀಯ ಸಮುಧಾಯವನ್ನು ಕುಂತಂತ್ರಿ, ಅನೈತಿಕ ಎಂದು ಕರೆಯ ಬೇಕಾಗುತ್ತದೆ. ಹೀಗೆ ಹೇಳುವುದು ಒಂದು ಸತ್ಯವೂ ಅಲ್ಲದ, ಸುಳ್ಳೂ ಅಲ್ಲದ ಸ್ಟಿರಿಯೋಟೈಪ್. ಮುಸ್ಲಿಮರೆಲ್ಲರೂ ಉಗ್ರವಾದಿಗಳು, ಕ್ರೈಸ್ತರೆಲ್ಲರೂ ಕುಡುಕರು ಎನ್ನುವಂಥ ಸ್ಟಿರಿಯೋಟೈಪ್ ಹೇಳಿಕೆಯಂತೆ ಇದೂ ಕೂಡ ಒಂದು ಸ್ಟಿರಿಯೋಟೈಪ್. ನಮ್ಮ ಸಂಶೋಧನೆಯು ಇಂತಹ ಸ್ಟಿರಿಯೋಟೈಪ್ ಹೇಳಿಕೆಯನ್ನು ಮಾಡುತ್ತಿಲ್ಲ. (ಸ್ಟಿರಿಯೋಟೈಪ್ ಹೇಳಿಕೆಗಳ ಕುರಿತ ನಮ್ಮ ಸಂಶೋಧನೆಗೆ, ಆ ಕುರಿತು ನಾವು ಬರೆದಿರುವ ಲೇಖನಗಳನ್ನು ಓದಬಹುದು.)
ಹಾಗಾದರೆ ನಾನು/ನಾವು ಹೇಳುತ್ತಿರುವುದೇನು? ನಮ್ಮ ವಾದ ಹೀಗಿದೆ. ವಸಾಹತುಶಾಹಿಯು ಒಂದು ನಿರ್ಧಿಷ್ಟ ರೀತಿಯಲ್ಲಿ ಚಿಂತಿಸುವ ತಾರ್ಕಿಕ ಅನಿವಾರ್ಯತೆಯನ್ನು ಹುಟ್ಟು ಹಾಕಿತು. ತಾವು ಪ್ರಗತಿಪರರು, ಜಾತಿವ್ಯವಸ್ಥೆಯ ವಿರುದ್ಧ ಹೋರಾಡಿದವರು ಎಂದು ತೋರಿಸಿಕೊಟ್ಟರೆ ಮನ್ನಣೆ ಮತ್ತು ಪುರಸ್ಕಾರಗಳು ಸಿಗುವ ಪರಿಸ್ಥಿತಿಯನ್ನು ಬೆಳೆಸಿತು. ಇದರಿಂದಾಗಿ, ಲಿಂಗಾಯತ ಸಮುದಾಯವು ತಾನು ಜಾತಿವ್ಯವಸ್ಥೆಯ ವಿರುದ್ಧ ಹಿಂದಿನಿಂದಲೂ ಹೋರಾಡುತ್ತಾ ಬಂದಿದ್ದೇವೆ ಎಂದು ತೋರಿಸಿಕೊಡುವ ಅನಿವಾರ್ಯತೆಗೆ ಸಿಕ್ಕಿ ಕೊಂಡಿತು. (ಇದೇ ರೀತಿಯ ಬೇರೆ ಉದಾಹರಣೆಗಳಿಗೆ ನಮ್ಮ ಇತರ ಬರಹಗಳನ್ನು, ಚರ್ಚೆಗಳನ್ನು ನೋಡಬಹುದು.) ಬಾಲಗಂಗಾಧರರು ಹೇಳುವ ‘ವಸಾಹತುಪ್ರಜ್ಞೆ’ಯ ಒಂದು ಆಯಾಮ ಇದೇ: ವಸಾಹತುಶಾಹಿಯು ಹುಟ್ಟುಹಾಕಿದ ಒಂದು ನಿರ್ಧಿಷ್ಟ ರೀತಿಯಲ್ಲಿ ಚಿಂತಿಸುವ ತಾರ್ಕಿಕ ಅನಿವಾರ್ಯತೆ.
೨. ಚೆನ್ನಿಯವರು ಕೇಳುತ್ತಾರೆ: “ಇಲ್ಲಿರುವ ಪ್ರಶ್ನೆಗಳೆಂದರೆ ಬ್ರಿಟಿಷ್ ಓರಿಯಂಟಲಿಸ್ಟ್ ಎಂದು ಕರೆಯಬಹುದಾದ ಬರಹಗಳು ವೀರಶೈವ ಧರ್ಮದ ಬಗ್ಗೆ ಏಕಮುಖವಾದ ಚಿತ್ರವನ್ನು ಕೊಟ್ಟಿವೆಯೆ?” ಇದಕ್ಕೆ ನನ್ನ ಉತ್ತರ ತುಂಬಾ ಸರಳವಾಗಿದೆ. ನಾವು ಒಂದು ಕಾಲದಲ್ಲಿ ಪ್ರಬಲವಾಗಿರುವ, ಹೆಜೆಮೊನಿಕ್ ಆಗಿರುವ ವಿಚಾರಗಳ ಕುರಿತು ಮಾತನಾಡುವಾಗ, ಅಲ್ಲಿ ಇಲ್ಲಿ ಕಾಣಿಸುವ ವ್ಯತಿರಿಕ್ತವಾದ ಧ್ವನಿಗಳು, ವಿಚಾರಗಳು ನಮಗೆ ಮುಖ್ಯವಾಗುವುದಿಲ್ಲ. ಇದಕ್ಕೆ ಹೊರತಾಗಿ ಮಾತನಾಡುವುದಾದರೆ, ೧೭ನೆಯ ಶತಮಾನದಿಂದ ಈಚೆಗೆ “ಓರಿಯಂಟಲಿಸ್ಟ್ ಎಂದು ಕರೆಯಬಹುದಾದ ಬರಹಗಳು” ವೀರಶೈವ ಸಂಪ್ರದಾಯದ ಕುರಿತು ನಮಗೆ ಕಟ್ಟಿಕೊಡುವ ಚಿತ್ರಣ ಬಗ್ಗೆ ಏಕಮುಖವಾದದ್ದೆ. ಇಲ್ಲವೆನ್ನುವವರು ಅದನ್ನು ಆಧಾರ ಸಮೇತ ತೋರಿಸಿಕೊಡಬೇಕು.
೩. “ಅಂದಾಜು ಹತ್ತರಿಂದ ಹದಿನೈದನೇ ಶತಮಾನದವರೆಗೆ ಪ್ರವರ್ಧಮಾನವಾದ ಒಂದು ಸಂಪ್ರದಾಯದ ಬಗ್ಗೆ ಬ್ರಿಟಿಷ್ರ ಆಗಮನದ ಮೊದಲು ಯಾವುದೇ ವಿವರಣೆಗಳು,ವ್ಯಾಖ್ಯಾನಗಳು ಇರಲೇ ಇಲ್ಲವೇ? ಈ ವಿವರಣೆಗಳು ಜಾತಿ, ಜಾತಿಪದ್ಧತಿ, ಬ್ರಾಹ್ಮಣ ಪುರೋಹಿತಶಾಹಿ ಇವುಗಳು ತಮ್ಮ ಯಾವ ‘ಅನುಭವ’ವನ್ನು ವಿವರಿಸಲೇ ಇಲ್ಲವೇ?” ಎಂದು ಕೇಳುತ್ತಾರೆ ಚೆನ್ನಿಯವರು. ಇದೇ ಎಂದರೆ ತೋರಿಸಿಕೊಡಿ. ನೆನಪಿರಲಿ ತೋರಿಸಿಕೊಡಬೇಕಾದದ್ದು ಅಲ್ಲಿ ಇಲ್ಲಿ ಕಾಣಿಸುವ ವ್ಯತಿರಿಕ್ತವಾದ ಧ್ವನಿಗಳು, ವಿಚಾರಗಳು ಅಲ್ಲ, ಒಂದು ಕಾಲದಲ್ಲಿ ಕಾಣಿಸುವ ಪ್ರಬಲವಾಗಿರುವ, ಹೆಜೆಮೊನಿಕ್ ಆಗಿರುವ ವಿಚಾರಗಳು ಮತ್ತು ಧ್ವನಿಗಳು.
“ಆಧ್ಯಾತ್ಮಿಕ/ಸಾಮಾಜಿಕ ಎನ್ನುವ ವಿಂಗಡಣೆಯೇ ವಸಾಹತುಶಾಹಿ ಪ್ರಜ್ಞೆಯ ಫಲವಾಗಿದೆ. ಇದನ್ನು ವಸಾಹತುಶಾಹಿ-ಪೂರ್ವ ಸಂದರ್ಭಕ್ಕೆ ಅನ್ವಯಿಸುವ ಡಂಕಿನ್ರ ಪ್ರಬಂಧ Orientalism ನ ಪುನರುತ್ಪಾದನೆಯಾಗಿದೆ” ಎನ್ನುತ್ತಾರೆ ಚೆನ್ನಿಯವರು. ಚೆನ್ನಿಯವರು ಇದನ್ನೂ ತೋರಿಸಿ ಕಡಬೇಕಾಗುತ್ತದೆ. ಬರಿಯ ಹೇಳಿಕೆಗಳು, ಹಾಸ್ಯ ಸಂಶೋಧನೆಯಾಗುವುದಿಲ್ಲ. ಹೀಗೆ, ಯಾವುದನ್ನೂ ತೋರಿಸಿಕೋಡದೆ, ಒಂದಷ್ಟು ಹಾಸ್ಯ ಮಾಡಿ, ಕಡೆಗೆ “ಹೀಗಾಗಿ ಅವರ ಸಂಶೋಧನೆಯ ವೈಚಾರಿಕ ಚೌಕಟ್ಟು ದುರ್ಬಲ ಮಾತ್ರವಲ್ಲ ಸಿಂಧುವಾಗಿದೆ (invalid)” ಎಂದು ಚೆನ್ನಿಯವರು ಘೋಸಿಸುವುದು, ಅದನ್ನು “obscene arrogance” ಎಂದು ಬಯ್ಯುವುದು ಬೌದ್ಧಿಕ ಚರ್ಚೆ ಎನಿಸಿಕೊಳ್ಳುತ್ತದೆ ಕರ್ನಾಟಕದಲ್ಲಿ ಎಂದರೆ, ವೈಚಾರಿಕತೆ, ಸಂಶೋಧನೆಯ ಶಿಸ್ತು ಇತ್ಯಾದಿಗಳು ನಮ್ಮಲ್ಲಿ ಯಾವ ಮಟ್ಟಕ್ಕೆ ಕುಸಿದಿದೆ ಎಂದು ಗೊತ್ತಾಗುತ್ತದೆ.
೪. ಇನ್ನು ಕಾರ್ಲ್ ಪಾಪರ್ (Carl Popper) ಹೇಳುವ ವಿಚಾರಕ್ಕೆ ಬರೋಣ. ಪಾಪರ್ ಹೇಳುವ “ನಿಲುವುಗಳನ್ನು ಜಗತ್ತಿನ ವಿದ್ವತ್ ಪ್ರಪಂಚ ಈಗಾಗಲೇ ಅತ್ಯಂತ ಪ್ರಶ್ನಾರ್ಹವಾಗಿ ನೋಡಿದೆ. ಇಂಥ ಸಂದೇಹಾಸ್ಪದ ತರ್ಕಪದ್ಧತಿಗಳ ಮೇಲೆ ನಿಂತಿರುವ ತಮ್ಮ ಸಂಶೋಧನೆಯನ್ನು ಜಗತ್ತಿನ ಅಖೈರಾದ ಸತ್ಯವೆಂದರೆ ಅದನ್ನು ನಂಬಬೇಕಾಗಿಲ್ಲ” ಎಂದು ಹೇಳುತ್ತಾರೆ ಚೆನ್ನಿಯವರು. ಬಹುಶಃ ‘ಗೂಗಲ್’ನಿಂದ, ವಿಕಿಪೀಡಿಯದಿಂದ ಸಂಶೋಧನೆ ಮಾಡ ಹೊರಟರೆ ಹೀಗೆ ಆಗುತ್ತದೆ ಅಂತ ಕಾಣುತ್ತೆ. ಪಾಪರ್ ಹೇಳುವ falsification ವಿಚಾರವನ್ನು ಮುಂದಿನ (Imre Lakotas, Larry Laudan ಮುಂತಾದ) ಚಿಂತಕರು ಇನ್ನೂ ತೀಕ್ಷಣವಾಗಿ ನಿರೂಪಿಸಿದ್ದು, ಅದರಲ್ಲಿನ ಓರೆಕೋರೆಗಳನ್ನು ತಿದ್ದಿದ್ದು ಎಲ್ಲರಿಗೂ ತಿಳಿದ ವಿಚಾರವೇ. ಇದನ್ನು “ಜಗತ್ತಿನ ವಿದ್ವತ್ ಪ್ರಪಂಚ ಅತ್ಯಂತ ಪ್ರಶ್ನಾರ್ಹವಾಗಿ ನೋಡಿದೆ” ಎಂದು ಹೇಳುವವರಿಗೆ ಇಲ್ಲ ಪಾಪರ್ ಅರ್ಥ ಆಗಿಲ್ಲ, ಅಥವಾ ಅವರು ಪಾಪರ್ ಕುರಿತು ವಿಕಿಪೀಡಿಯದ ಲೇಖನಕ್ಕಿಂತ ಹೆಚ್ಚಿನದೇನೂ ಓದಿಲ್ಲ ಎಂದೇ ಹೇಳಬೇಕಾಗುತ್ತದೆ.
ವಚನ ಸಾಹಿತ್ಯ ಹಾಗೂ ಜಾತಿ ವ್ಯವಸ್ಥೆ: ರಾಜೇಂದ್ರ ಚೆನ್ನಿಯವರಿಗೊಂದು ಪ್ರತಿಕ್ರಿಯೆ