15 January 2015

ಪ್ರೊ.ಎಸ್.ಎನ್.ಬಾಲಗಂಗಾಧರ

ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಇತ್ತೀಚೆಗೆ ಭಾರತೀಯ ಪುರಾಣಗಳಿಗೆ ಹೊಸ ನಿರೂಪಣೆ ನೀಡುವ ಕೆಲವು ಪುಸ್ತಕಗಳು ವಿವಾದಕ್ಕೀಡಾಗುತ್ತಿವೆ. ಕನ್ನಡದಲ್ಲಿ ‘ಡುಂಢಿ’ ಎಂಬ ಕೃತಿಯಿಂದ ಹಿಡಿದು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ವೆಂಡಿ ಡೊನಿಗರ್ ಹಾಗೂ ಅವಳ ಶಿಷ್ಯರು ಭಾರತೀಯ ಸಂಸ್ಕೃತಿಯ ಕುರಿತು ಬರೆದ ಸಂಶೋಧನಾ ಗ್ರಂಥಗಳ ವರೆಗೂ ಈ ವಿವಾದಗಳು ಹಬ್ಬಿವೆ. ಈ ಕೃತಿಗಳ ಸ್ವರೂಪವೇನೇ ಇರಲಿ, ವಿವಾದವು ಮಾತ್ರ ಒಂದೇ ವಿಷಯದ ಕುರಿತಾಗಿದೆ. ಇವರು ಹಿಂದೂ ಸಂಸ್ಕೃತಿಯನ್ನು ಅವಹೇಳನ ಮಾಡುತ್ತಿದ್ದಾರೆ ಎಂಬುದೇ ತಕರಾರು. ಈ ತಕರಾರುಗಳನ್ನು ಸಂಘಟಿಸುತ್ತಿರುವವರು ಹಿಂದುತ್ವ ಸಂಘಟನೆಯ ಹಿನ್ನೆಲೆಯನ್ನು ಹೊಂದಿರುತ್ತಾರೆ. ಹಾಗಾಗಿ ಈ ವಿರೋಧವನ್ನು ‘ಹಿಂದೂ ಮೂಲಭೂತವಾದಿಗಳ ಆಕ್ರಮಣಶೀಲತೆ’ ಎಂಬುದಾಗಿ ಖಂಡಿಸಲಾಗುತ್ತದೆ. ‘ಹಿಂದೂ ಮೂಲಭೂತವಾದಿ’ ಎಂಬ ಶಬ್ದವು ನಮ್ಮ ಸೆಕ್ಯುಲರ್ ಪ್ರಭುತ್ವದಲ್ಲಿ ಒಂದು ಬಯ್ಗಳಿನ ಸ್ಥಾನವನ್ನು ಅಲಂಕರಿಸಿರುವುದು ಎಲ್ಲರಿಗೂ ತಿಳಿದ ವಿಷಯ. ಜೊತೆಗೇ ಇಂಥ ವಿರೋಧಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನಗಳು ಎಂಬ ಕೂಗೂ ಏಳುತ್ತದೆ. ಹಾಗಾಗಿ ಈ ವಿರೋಧವನ್ನು ಕಣ್ಮುಚ್ಚಿ ಖಂಡಿಸಬೇಕು ಎನ್ನುವುದರಲ್ಲಿ ಸಾಮಾಜಿಕ ಕಳಕಳಿಯಿರುವ ಯಾರಿಗೂ ಸಂದೇಹ ಹುಟ್ಟುವುದಿಲ್ಲ.

ಈ ‘ವೆಂಡಿ’ ಯಿಂದ ‘ಡುಂಢಿ’ಯ ವರೆಗೂ ನಡೆಯುತ್ತಿರುವ ವಿವಾದಗಳನ್ನು ಗಮನಿಸಿದಾಗ ಅವೆಲ್ಲವುಗಳಲ್ಲೂ ಒಂದು ಸಾಮಾನ್ಯ ಸಮಸ್ಯೆಯು ಮನೆಮಾಡಿರುವುದು ಕಂಡುಬರುತ್ತದೆ. ಪ್ರಶ್ನೆ ಇರುವುದು ನಮ್ಮ ಪುರಾಣ ಕಥೆಗಳನ್ನು ಹೇಗೆ ಅರ್ಥೈಸಬೇಕು ಎಂಬುದು. ಅಂದರೆ ಕಳೆದ ನೂರಾರು ವರ್ಷಗಳಿಂದ ಪಾಶ್ಚಾತ್ಯರು ಹಾಗೂ ಅವರನ್ನನುಸರಿಸಿದ ಭಾರತೀಯರು ನಮ್ಮ ಪುರಾಣಗಳನ್ನು ಅರ್ಥೈಸಲು ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಅವರು ಈ ಪ್ರಯತ್ನದ ಫಲವಾಗಿ ಥರಾವರಿ ನಿರೂಪಣೆಗಳನ್ನು ಬೆಳೆಸಿ ಅವುಗಳನ್ನು ವಿದ್ವತ್ ಪ್ರಪಂಚದಲ್ಲಿ ಚಾಲ್ತಿಯಲ್ಲಿ ತಂದಿದ್ದಾರೆ. ಇಂದು ಪುರಾಣಗಳಿಗೆ ಹೊಸ ನಿರೂಪಣೆಗಳನ್ನು ಕೊಡುತ್ತೇವೆಂಬುದಾಗಿ ಹೊರಟ ಯಾವುದೇ ವಿದ್ವಾಂಸನೂ ಕೂಡ ಇಂಥ ಒಂದಿಲ್ಲೊಂದು ನಿರೂಪಣೆಗಳನ್ನು ಬಳಸಿಕೊಂಡಿರುತ್ತಾನೆ. ಇಂಥ ತಿಳುವಳಿಕೆಯನ್ನೇ ಆಧರಿಸಿ ಭಾರತೀಯ ಭಾಷೆಗಳಲ್ಲಿ ಕಥೆಗಳು, ಕಾದಂಬರಿಗಳು, ನಾಟಕಗಳು ರಚನೆಯಾಗಿವೆ. ಇವುಗಳ ಲೇಖಕರೆಲ್ಲ ತಮ್ಮದು ಸೃಜನಶೀಲ ಬರವಣಿಗೆ ಎಂದು ಘೋಷಿಸಿಕೊಳ್ಳುತ್ತಾರಾದರೂ ಅವರು ನಿಜವಾಗಿಯೂ ಈ ಪಾಶ್ಚಾತ್ಯ ನಿರೂಪಣೆಗಳಿಗೇ ಬೇರೆ ಹಣೆಪಟ್ಟಿಯನ್ನು ನೀಡಿ ಬಿಕರಿ ಮಾಡುತ್ತಿರುತ್ತಾರೆ.

ಇದುವರೆಗೂ ರಾಶಿಬಿದ್ದ ಇಂಥ ನಿರೂಪಣೆಗಳಿಗೆ ಕೆಲವು ಉದಾಹರಣೆಗಳನ್ನು ನೀಡುವುದಾದರೆ, ವಿಷ್ಣು ಆರ್ಯ ಬ್ರಾಹ್ಮಣರ ಸಂಕೇತವಾದರೆ ಬಲಿ ಶೂದ್ರರ ಸಂಕೇತವಾಗುತ್ತಾನೆ, ರಾಕ್ಷಸರು ದ್ರಾವಿಡ ಜನಾಂಗದವರಾದರೆ ರಾಮನು ಆರ್ಯ ಆಕ್ರಮಣಕ್ಕೆ ಸಂಕೇತವಾಗಿದ್ದಾನೆ, ರಾಮಾಯಣದ ವಾನರರು ದಲಿತರಾಗಿದ್ದರು, ಶಂಬೂಕ ವಧೆ, ಏಕಲವ್ಯನ ಕಥೆ ಇತ್ಯಾದಿಗಳು ಬ್ರಾಹ್ಮಣರು ಶೂದ್ರ, ಬುಡಕಟ್ಟಿನ ಜನರನ್ನು ಶೋಷಿಸಿದ ಕಥೆಗಳಾಗಿವೆ. ಇಂಥ ಅಸಂಖ್ಯ ನಿರೂಪಣೆಗಳು ಇವೆ. ಪುರಾಣ ಕಥೆಗಳಲ್ಲಿ ಇಂಥ ನಿರೂಪಣೆಗಳನ್ನು ಹೊರಡಿಸುವುದು ಎಷ್ಟು ಸಲೀಸಾಗಿದೆಯೆಂದರೆ ಆ ಕೆಲಸಕ್ಕೆ ಅಧ್ಯಯನವೇ ಬೇಕಾಗಿಲ್ಲ. ಭಾರತೀಯ ಲೇಖಕರು ಹಾಗೂ ವಿಭಿನ್ನ ಹೋರಾಟಗಾರರು ನಮ್ಮ ಪುರಾಣಗಳನ್ನೆಲ್ಲ ಇಂಥ ನಿರೂಪಣೆಗಳಿಗೆ ಒಳಪಡಿಸಿದ್ದಾರೆ. ಅಷ್ಟಾಗಿಯೂ ಪುರಾಣಗಳ ಅರ್ಥವನ್ನು ಬರಿದು ಮಾಡಲಿಕ್ಕೆ ವಿದ್ವಾಂಸರಿಗೆ ಹಾಗೂ ಲೇಖಕರಿಗೆ ಆಗಿಲ್ಲ. ಹೊಸ ಹೊಸ ಹೋರಾಟಗಳು ಹುಟ್ಟಿದಂತೆಲ್ಲ ಅದೇ ಪುರಾಣದಲ್ಲಿ ಹೊಸ ಸಂದೇಶಗಳು ಅಡಗಿಕೊಂಡಿರುವುದು ಗಮನಕ್ಕೆ ಬರುತ್ತದೆ.

ಈ ಮೇಲಿನವೆಲ್ಲವೂ ಭಾರತೀಯ ಲೇಖಕರ ಫಲವಂತಿಕೆಗೆ ಸಾಕ್ಷಿಯಾದರೆ, ಅವರಿಗೆ ಆಧಾರವಾದ ಪಾಶ್ಚಾತ್ಯ ಸಮಾಜ ವಿಜ್ಞಾನಿಗಳೂ ಕೈಕಟ್ಟಿ ಕುಳಿತಿಲ್ಲ. ಅವರೂ ಹೊಸ ಹೊಸ ಅಂತಃಶಾಸ್ತ್ರೀಯ ಮಾರ್ಗಗಳನ್ನು ತೆರೆಯುತ್ತ ಪುರಾಣಗಳ ಅರ್ಥವನ್ನು ಶೋಧಿಸುತ್ತಿದ್ದಾರೆ. ಮಾನವಶಾಸ್ತ್ರ ಹಾಗೂ ಮನಃಶಾಸ್ತ್ರಗಳಲ್ಲಿ ಹೊಸ ಸಿದ್ಧಾಂತಗಳು ಬಂದ ಹಾಗೆಲ್ಲ ಪುರಾಣಗಳ ಹೊಸ ಹೊಸ ಅರ್ಥದ ಶೋಧನೆಯಾಗುತ್ತದೆ. ಇತ್ತೀಚೆಗೆ ವೆಂಡಿ ಡೊನಿಗರ್, ಪಾಲ್ ಕೋರ್ಟ್ರೈಟ್, ಜೆಫ್ರಿ ಕ್ರಿಪಾಲ್ ಮುಂತಾದವರು ಮನಃಶಾಸ್ತ್ರೀಯ ಸಿದ್ಧಾಂತಗಳನ್ನು ಬಳಸಿ ಭಾರತೀಯ ಪುರಾಣಗಳನ್ನು ಹಾಗೂ ರಾಮಕೃಷ್ಣರಂಥ ಸನ್ಯಾಸಿಗಳನ್ನು ಅರ್ಥೈಸಲು ಪ್ರಯತ್ನಿಸಿದ್ದರು. ಅವರ ಪ್ರಕಾರ ಈ ಪುರಾಣಗಳು ಲೈಂಗಿಕ ಸಂಕೇತಗಳಿಂದ ತುಂಬಿವೆ. ಅವು ಭಾರತೀಯರ ಲೈಂಗಿಕ ವಿಕೃತಿಯನ್ನೋ, ಆಶಯಗಳನ್ನೋ ಬಿಂಬಿಸುತ್ತವೆ. ಗಣಪತಿಯ ಸೊಂಡಿಲು ಕೂಡ ಲೈಂಗಿಕ ಸಂಕೇತವನ್ನು ಹೊಂದಿದೆ. ರಾಮಕೃಷ್ಣ ಪರಮಹಂಸರ ಅನುಭಾವದ ಹಿಂದೆ ಲೈಂಗಿಕ ಕಾರಣವಿದೆ. ಇಡೀ ಭಾರತೀಯ ಪುರಾಣ ಪ್ರಪಂಚವೇ ಫ್ರಾಯ್ಡ್ ಹಾಗೂ ಯುಂಗ್ರ ಮನಃಶಾಸ್ತ್ರೀಯ ಸಿದ್ಧಾಂತಗಳ ಪ್ರಕಾರ ಲೈಂಗಿಕ ವಿಕೃತಿಯನ್ನು ಪ್ರದರ್ಶಿಸುತ್ತದೆ.

ಇಂಥ ನಿರೂಪಣೆಗಳ ವಿರುದ್ಧ ಹಿಂದೂ ಸಂಪ್ರದಾಯವಾದಿಗಳು ಹೋರಾಟಕ್ಕಿಳಿದರು. ಈ ಕೃತಿಗಳನ್ನು ನಿಷೇಧಿಸಬೇಕೆಂಬುದಾಗಿ ಆಗ್ರಹಿಸಿದರು. ಆಗ ಎದ್ದ ಪ್ರಶ್ನೆಯೆಂದರೆ ವೈಜ್ಞಾನಿಕ ಅಧ್ಯಯನಗಳನ್ನು ನಡೆಸಬಾರದೆ? ಹೊಸ ನಿರೂಪಣೆಗಳನ್ನು ಮಾಡಬಾರದೆ? ತಾವೇನೂ ಕಲ್ಪಿಸಿಕೊಂಡು ಹೇಳುತ್ತಿಲ್ಲ. ಮನಃಶಾಸ್ತ್ರೀಯ ಸಿದ್ಧಾಂತಗಳು ಸುಳ್ಳು ಹೇಳುತ್ತವೆಯೆ? ಪ್ರಪಂಚದ ಎಲ್ಲೆಡೆಯಲ್ಲಿ ಮನೋರೋಗ ಚಿಕಿತ್ಸೆಯು ಇಂಥ ಸಿದ್ಧಾಂತಗಳನ್ನೇ ಆಧರಿಸಿಲ್ಲವೆ? ಇತ್ಯಾದಿ. ಈ ಪ್ರಶ್ನೆಗಳು ಯತಾರ್ಥವಾಗಿವೆ. ಏಕೆಂದರೆ ಈ ಮೇಲಿನ ಲೇಖಕರು ಭಾರತೀಯ ಸಂಸ್ಕೃತಿಯನ್ನು ವಿಕೃತವಾಗಿ ತೋರಿಸುವ ಸಲುವಾಗಿ ಸಂಶೋಧನೆ ಮಾಡಿದ್ದಲ್ಲ. ಭಾರತೀಯ ಪುರಾಣಗಳನ್ನು ಅರ್ಥೈಸುವ ನಿಟ್ಟಿನಲ್ಲಿ ಒಂದು ಹೊಸ ಮನಃಶಾಸ್ತ್ರೀಯ ಸಿದ್ಧಾಂತವನ್ನು ಬಳಸಿದ್ದಾರೆ ಹಾಗೂ ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳ ನಡುವೆ ಒಂದು ಸಂವಾದವನ್ನು ನಡೆಸಬಯಸುತ್ತಾರೆ. ಆದರೆ ಈ ಅಧ್ಯಯನಗಳು ತಮಗೆ ಸರಿ ಕಾಣಿಸದಿದ್ದರೂ ಇವುಗಳನ್ನು ಒಪ್ಪಿಕೊಳ್ಳುವ ಹಿಂಸೆ ಭಾರತೀಯರಿಗೆ ತಪ್ಪಿದ್ದಲ್ಲ. ಈ ಮಾತುಗಳನ್ನು ಒಪ್ಪಿದರೆ ಒಂದು ಸಮಸ್ಯೆ ಏಳುತ್ತದೆ: ಒಂದೋ, ಭಾರತೀಯ ಪುರಾಣಗಳನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಲೇಬಾರದು ಎನ್ನಬೇಕಾಗುತ್ತದೆ, ಇಲ್ಲ, ವೈಜ್ಞಾನಿಕ ಸತ್ಯಗಳನ್ನು ಪ್ರತಿಪಾದಿಸುವಾಗ ಭಾರತೀಯ ಸಂಪ್ರದಾಯಸ್ಥರಿಗೆ ಇಂಥ ಮಾನಸಿಕ ಹಿಂಸೆ ಹಾಗೂ ಸಂಘರ್ಷವು ಅನಿವಾರ್ಯ ಎನ್ನಬೇಕಾಗುತ್ತದೆ. ಇಂಥ ಆಯ್ಕೆಯನ್ನು ಇಟ್ಟರೆ ಪ್ರಜ್ಞಾವಂತರೆಲ್ಲರೂ ಎರಡನೆಯ ಆಯ್ಕೆಯನ್ನೇ ಮಾಡಿಕೊಳ್ಳುವುದು ಅನಿವಾರ್ಯ.

ಈ ಮೇಲಿನ ಆಯ್ಕೆಗಳು ವಿಚಿತ್ರವಾಗಿವೆ. ನಮಗೆ ವೈಜ್ಞಾನಿಕ ಸತ್ಯಗಳು ಬೇಕಾದರೆ ಹಿಂಸೆ ಅನಿವಾರ್ಯ. ಇದರಲ್ಲೇನು ವಿಚಿತ್ರವಿದೆ ಎಂಬುದಾಗಿ ನೀವು ಕೇಳಬಹುದು. ಆಧುನಿಕ ಪಾಶ್ಚಾತ್ಯ ವಿಜ್ಞಾನದ ಉತ್ಸರ್ಗದ ಕಾಲದಲ್ಲಿ ಚರ್ಚಿನ ಜೊತೆಗೆ ವಿಜ್ಞಾನಿಗಳು ಸಂಘರ್ಷಿಸಲಿಲ್ಲವೆ? ಇಂದೂ ಆ ಸಂಘರ್ಷವು ತಣ್ಣಗಾಗಿದೆಯೆ? ಇಂಥ ಉದಾಹರಣೆಯನ್ನು ಗಮನಕ್ಕೆ ತರುವುದರ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಕರೆಕೊಡುವುದು ಈಗ ಸಧ್ಯದಲ್ಲಿ ವಿದ್ವಾಂಸರಿಗೆ ತೆರೆದಿರುವ ಒಂದೇ ಮಾರ್ಗ. ಹಾಗಾಗಿ ನಮ್ಮ ಸಮಾಜದ ಏಳ್ಗೆಯನ್ನು ಗಮನದಲ್ಲಿರಿಸಿ ಈ ವಿರೋಧವನ್ನು ಹತ್ತಿಕ್ಕಬೇಕು. ನನ್ನ ಪ್ರಕಾರ ಸಮಸ್ಯೆ ಇಷ್ಟು ಸರಳವಾಗಿಲ್ಲ. ಪಾಶ್ಚಾತ್ಯ ಸಂಸ್ಕೃತಿಗೆ ಭಾರತವು ಮುಖಾಮುಖಿಯಾದಾಗಲೆಲ್ಲ ಏಳತಕ್ಕ ಸಮಸ್ಯೆಯಿದು. ಪಾಶ್ಚಾತ್ಯ ಸಂಸ್ಕೃತಿಯು ಅನ್ಯ ಸಂಸ್ಕೃತಿಯನ್ನು ವೈಜ್ಞಾನಿಕ ನಿರೂಪಣೆಗೊಳಪಡಿಸಿದಾಗ ಅಲ್ಲಿ ಒಂದು ಹಿಂಸೆ ಜರುಗುತ್ತದೆ. ಅದೆಂದರೆ ಅನ್ಯ ಸಂಸ್ಕೃತಿಗಳು ಪಾಶ್ಚಾತ್ಯರಿಗೆ ವಿಕೃತವಾಗಿ, ಅನೈತಿಕವಾಗಿ ಹಾಗೂ ಹಾಸ್ಯಾಸ್ಪದವಾಗಿ ಕಾಣತೊಡಗುತ್ತವೆ. ಭಾರತೀಯರು ಈ ಪ್ರಕ್ರಿಯೆಗೆ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಅದು ವೈಜ್ಞಾನಿಕ ಅಧ್ಯಯನವಾಗಿರುವುದರಿಂದ ಭಾರತೀಯರು ತಮ್ಮ ಕುರಿತ ಈ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂಬುದಾಗಿ ಈ ವಿದ್ವತ್ ಪ್ರಪಂಚವು ಆಗ್ರಹಿಸುತ್ತದೆ. ಅಂದರೆ ಸತ್ಯವಾಗಿಯೂ ಭಾರತೀಯರು ಹೀಗೇ ಇದ್ದಾರೆ ಎಂದು ನಂಬದೇ ವಿಧಿಯಿಲ್ಲ.

ನಾನು ಈ ಮೇಲಿನ ವಾದವನ್ನು ಪ್ರಶ್ನಿಸಬಯಸುತ್ತೇನೆ. ಇದು ಸಂಸ್ಕೃತಿಗಳ ಮುಖಾಮುಖಿಯ ಸಮಸ್ಯೆ. ಸಾಮಾಜಿಕ ಅಧ್ಯಯನವು ಪ್ರಪಂಚದ ಕುರಿತು ವಸ್ತುನಿಷ್ಠ ತಿಳುವಳಿಕೆಯನ್ನು ನೀಡುವುದರಿಂದ ಅದನ್ನಿಟ್ಟುಕೊಂಡು ಎರಡು ಸಂಸ್ಕೃತಿಗಳ ನಡುವಿನ ಅಪಾರ್ಥಗಳನ್ನು ನಿವಾರಿಸಬಹುದು ಎಂಬುದು ಸುಳ್ಳು. ಭಾರತೀಯ ಸಂಸ್ಕೃತಿ ಹಾಗೂ ಪಾಶ್ಚಾತ್ಯ ಸಂಸ್ಕೃತಿಯ ನಡುವೆ ಇರುವ ವ್ಯತ್ಯಾಸಗಳಿಂದಾಗಿ ಅವುಗಳ ಮುಖಾಮುಖಿಯಲ್ಲಿ ಸಮತೋಲನೆಯಿಲ್ಲ. ಈ ಮುಂದಿನ ದೃಷ್ಟಾಂತವನ್ನು ಗಮನಿಸಿ: ಪಾಶ್ಚಾತ್ಯ ವಿದ್ವಾಂಸನೊಬ್ಬನು ಗಣಪತಿಯ ಕುರಿತ ಪುರಾಣ ಕಥೆಯನ್ನು ಓದಿದಾಗ ಅವನಲ್ಲಿ ಒಂದು ಪ್ರಶ್ನೆ ಏಳುತ್ತದೆ: ಗಣಪತಿಗೇಕೆ ಸೊಂಡಿಲಿದೆ? ಅವನೇಕೆ ಪೂರ್ಣ ಮನುಷ್ಯರಂತಿರದೇ ಅರ್ಧ ಮನುಷ್ಯ ಅರ್ಧ ಆನೆಯಾಗಿದ್ದಾನೆ? ಇತ್ಯಾದಿ. ಅಂದರೆ ಭಾರತೀಯರು ಯಾವುದೋ ಉದ್ದೇಶವನ್ನು ಇಟ್ಟುಕೊಂಡು ಈ ಮೂರ್ತಿಯನ್ನು ಕಲ್ಪಿಸಿದ್ದಾರೆ. ಅದನ್ನು ತಿಳಿದುಕೊಳ್ಳಲು ಅವನು ಭಾರತೀಯನನ್ನು ಕೇಳುತ್ತಾನೆ ಅಂತಿಟ್ಟುಕೊಳ್ಳಿ. ಸಂಭಾಷಣೆ ಹೀಗೆ ಸಾಗುತ್ತದೆ:

ಪಾಶ್ಚಾತ್ಯ: ಈ ಆನೆ ತಲೆಯ ದೇವತೆ ಯಾರು?
ಭಾರತೀಯ: ಅವನು ಗಣಪತಿ, ಶಿವನ ಮಗ, ಶಿವ ಅಂದರೆ….ಇತ್ಯಾದಿ..ಇತ್ಯಾದಿ..
ಪಾಶ್ಚಾತ್ಯ: ಗಣಪತಿಗೇಕೆ ಆನೆಯ ತಲೆ ಇದೆ?
ಭಾರತೀಯ: ಓ ಅದಾ? ಅದನ್ನು ಶಿವನೇ ಅಂಟಿಸಿದ್ದು. ಅದಕ್ಕೊಂದು ಕಥೆಯಿದೆ. ಅದರ ಪ್ರಕಾರ ಪಾರ್ವತಿಯು ಗಣಪತಿಯನ್ನು ತನ್ನ ಮೈ ಕೊಳೆಯಿಂದ ಮಾಡಿದಳು….ಇತ್ಯಾದಿ..ಇತ್ಯಾದಿ..
ಪಾಶ್ಚಾತ್ಯ: ಅದು ಸರಿ, ಅದು ಪುರಾಣವಾಯಿತು. ನಾನು ಈ ಪುರಾಣ ಕಥೆಯ ಅರ್ಥವನ್ನು ಕೇಳುತ್ತಿದ್ದೇನೆ. ಆನೆಯ ತಲೆಯೇ ಏಕೆ ಕಥೆಯಲ್ಲಿ ಬರುತ್ತದೆ? ಮನುಷ್ಯನ ತಲೆಯೇಕಲ್ಲ?
ಭಾರತೀಯ: ನನಗೆ ಗೊತ್ತಿಲ್ಲ. (ಗೊತ್ತಿದೆ ಅಂದರೆ ಮತ್ತೊಂದು ಪುರಾಣ ಕಥೆಯನ್ನು ಅವನು ಹೇಳುತ್ತಾನೆ)
ಪಾಶ್ಚಾತ್ಯ: ಮತ್ತೆ ನೀನು ಏನು ನಡೆಯಿತೆಂಬುದನ್ನೇ ಹೇಳುತ್ತಿದ್ದೀಯಾ. ಯಾಕೆ ಈ ಕಥೆಯಲ್ಲಿ ಆನೆಯ ತಲೆಯನ್ನೇ ಕಲ್ಪಿಸಲಾಗಿದೆ?
ಭಾರತೀಯ: ???..!!!
ಪಾಶ್ಚಾತ್ಯ: ನೀನು ಈ ಕುರಿತು ಯೋಚಿಸಿಯೇ ಇಲ್ಲ ಅಂತಾಯ್ತು. ಹಾಗಾದರೆ ಕೇಳು, ಫ್ರಾಯ್ಡನ ಸಿದ್ಧಾಂತದ ಪ್ರಕಾರ ಅದನ್ನು ವಿವರಿಸಬಹುದು. ವಿವರಣೆ ಹೀಗಿದೆ….ಇತ್ಯಾದಿ.. ಇತ್ಯಾದಿ..
ಅಂದರೆ ಪಾಶ್ಚಾತ್ಯ ಸಂಸ್ಕೃತಿಯು ಎತ್ತುವ ಪ್ರಶ್ನೆ ಹಾಗೂ ವಿವರಣೆಯ ರೂಪದ ಉತ್ತರಗಳು ಭಾರತೀಯ ಕಥೆಗೆ ಪಾಶ್ಚಾತ್ಯ ಸಂಸ್ಕೃತಿಯು ನೀಡುವ ಒಂದು ಹೆಚ್ಚುವರಿ ಆಯಾಮವಾಗಿದೆ. ಆ ಆಯಾಮವು ಭಾರತೀಯ ಪುರಾಣಕ್ಕೆ ಇಲ್ಲ. ಇದ್ದಿದ್ದರೆ ಭಾರತೀಯರು ಅದನ್ನು ಹೇಳುತ್ತಿದ್ದರು. ಆ ಆಯಾಮವು ಭಾರತೀಯ ಪುರಾಣಗಳಿಗೆ ಏಕಿಲ್ಲವೆಂದರೆ ಭಾರತೀಯರು ಪಾಶ್ಚಾತ್ಯರ ಪ್ರಶ್ನೆಯನ್ನು ಕೇಳಿಕೊಂಡಿಲ್ಲ. ಈ ಮೇಲಿನ ಸಂದರ್ಭದಲ್ಲಿ ಆ ಪುರಾಣವನ್ನು ಸೃಷ್ಟಿಸಿದ ಮನುಷ್ಯನು ಹಾಗೇಕೆ ಪುರಾಣವನ್ನು ಬರೆದ? ಅವನ ಸಂಸ್ಕೃತಿಯ ಕುರಿತು ಯಾವ ಸತ್ಯವನ್ನು ಅದು ತಿಳಿಸುತ್ತದೆ? ಎಂಬುದನ್ನು ಶೋಧಿಸುವ ಕೆಲಸ ನಡೆದಿದೆ. ಅಂದರೆ ಪುರಾಣವನ್ನು ಸೃಷ್ಟಿಸಿದ ಸಂಸ್ಕೃತಿಯ ಜನರು ಏನನ್ನು ನಂಬಿಕೊಂಡು ಅಥವಾ ಉದ್ದೇಶವಾಗಿಟ್ಟುಕೊಂಡು ಪುರಾಣವನ್ನು ಕಟ್ಟಿದ್ದಾರೆ ಹಾಗೂ ಆಚರಣೆಯನ್ನು ಮಾಡುತ್ತಿದ್ದಾರೆ? ಎಂಬ ಕಾರಣ ವಿವರಣೆಯನ್ನು ನೀಡಲಾಗಿದೆ.

ಈ ಪ್ರಕ್ರಿಯೆಯಲ್ಲಿ ಗಣಪತಿಯ ಪುರಾಣವನ್ನು ಹೇಳಿಕೊಂಡು ಬಂದ ಜನರು ದಡ್ಡರಾಗಿ ಅಥವಾ ಮುಗ್ಧರಾಗಿ ಪರಿವರ್ತಿತರಾಗುತ್ತಾರೆ. ಆದರೆ ನಿಜವಾಗಿಯೂ ನೋಡಿದರೆ ಭಾರತೀಯರ ದಡ್ಡತನ ಅಥವಾ ಮುಗ್ಧತೆಯು ಪಾಶ್ಚಾತ್ಯ ವಿವರಣೆಯ ಕುರಿತಾಗಿದೆಯೇ ಹೊರತೂ ತಮ್ಮ ಪುರಾಣದ ಕುರಿತಲ್ಲ. ಆದರೆ ಇರುವುದೊಂದೇ ವಿವರಣೆ, ಅದು ಪಾಶ್ಚಾತ್ಯ ವಿವರಣೆ. ಹಾಗಾಗಿ ಪಾಶ್ಚಾತ್ಯ ವಿವರಣೆಯ ಕುರಿತ ದಡ್ಡತನವೇ ಅವರಿಗೆ ತಮ್ಮದೇ ಸಂಸ್ಕೃತಿಯ ಕುರಿತ ದಡ್ಡತನವೂ ಆಗಿ ಪರಿಣಮಿಸುತ್ತದೆ. ಅಷ್ಟೊಂದೇ ಅಲ್ಲ ಪಾಶ್ಚಾತ್ಯರು ನೀಡಿದ ವಿವರಣೆಯೇ ಅವರ ಸಂಸ್ಕೃತಿಯ ಕುರಿತ ಸತ್ಯದ ಸ್ಥಾನವನ್ನು ಅಲಂಕರಿಸುತ್ತದೆ. ಆ ವಿವರಣೆಯ ಪ್ರಕಾರ ಪುರಾಣವು ಲೈಂಗಿಕ ವಿಕೃತಿಯನ್ನು ಚಿತ್ರಿಸಬಹುದು. ಅದನ್ನು ಹೌದೆನ್ನಲೂ ಈ ಸಂಸ್ಕೃತಿಯಲ್ಲಿ ಬೌದ್ಧಿಕ ಸಂಪನ್ಮೂಲಗಳಿಲ್ಲ, ಇಲ್ಲವೆನ್ನಲೂ ಇಲ್ಲ, ಏಕೆಂದರೆ ಅವರಿಗೆ ಆ ಪ್ರಶ್ನೆ ಹಾಗೂ ಉತ್ತರ ಎರಡೂ ಇರಲಿಲ್ಲವಲ್ಲ! ಅಂಥ ಸಂದರ್ಭವು ಅವರನ್ನು ಮೂಕ ಸಾಕ್ಷಿಗಳನ್ನಾಗಿಟ್ಟುಕೊಂಡು ಅವರದೇ ಪುರಾಣಗಳ ಕುರಿತು ವಿವರಣೆಗಳ ಬೆಳೆಯನ್ನು ತೆಗೆಯಲು ಫಲವತ್ತಾದ ನೆಲವಾಗುತ್ತದೆ.

ಇದೊಂದು ವಿಚಿತ್ರವಾದ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಅವರು ನೀಡಿದ ವಿವರಣೆಯು ಕೊನೆಗೂ ಭಾರತೀಯರ ಸಹಜಜ್ಞಾನಕ್ಕೆ ಸರಿಯೆನ್ನಿಸುವುದಿಲ್ಲ. ಅದು ತಮ್ಮ ಸಂಸ್ಕೃತಿಯನ್ನು ವಿಕೃತವಾಗಿ ಹಾಸ್ಯಾಸ್ಪದವಾಗಿ ಚಿತ್ರಿಸುತ್ತದೆ ಎಂದೂ ಅನಿಸುತ್ತದೆ. ನಮ್ಮಲ್ಲಿ ಶಿವಲಿಂಗವು ಶಿವನ ಜನನೇಂದ್ರಿಯ ಎಂಬ ಪುರಾಣಕಥೆಗಳು ಇರಬಹುದು, ಆದರೆ ಯಾರೂ ಅದನ್ನು ಶಿವನ ಜನನೇಂದ್ರಿಯ ಎಂಬುದಾಗಿ ಭಾವಿಸಿಕೊಂಡು ಪೂಜೆ ಸಲ್ಲಿಸುವುದಿಲ್ಲ. ಅದನ್ನು ಶಿವ ಎಂಬುದಾಗಿ ಪೂಜಿಸುತ್ತಾರೆ. ಇವರಲ್ಲಿ ಯಾರಿಗೂ ಆ ಕಥೆಯೇ ಗೊತ್ತಿರಲಾರದು. ಗಣಪತಿಯ ಸಂದರ್ಭದಲ್ಲಂತೂ ಯಾರೂ ಅದೊಂದು ಹತ್ತಿಕ್ಕಿದ ಲೈಂಗಿಕ ಸಂಕೇತ ಎಂಬ ಊಹೆಯನ್ನೂ ಮಾಡಿರಲಿಕ್ಕಿಲ್ಲ. ಹಾಗಾಗಿ ಇಂಥ ವಿವರಣೆಯು ಅವರಿಗೆ ಆಘಾತವನ್ನು ನೀಡುತ್ತದೆ. ಆದರೆ ಈ ಪಾಶ್ಚಾತ್ಯರ ವಾದಗಳು ತರ್ಕಬದ್ಧವಾಗಿ ಕಾಣಿಸುತ್ತವೆ ಏಕೆಂದರೆ ಅವು ಒಂದಿಲ್ಲೊಂದು ಸಿದ್ಧಾಂತಗಳನ್ನು ಆಧರಿಸಿವೆ. ಆ ಒಂದು ವಾದವನ್ನು ಪ್ರಶ್ನಿಸುವವರು ಅದಕ್ಕೆ ಆಧಾರವಾದ ಪಾಶ್ಚಾತ್ಯ ಸಿದ್ಧಾಂತವನ್ನೇ ಅಧ್ಯಯನ ಮಾಡಬೇಕು.

ಒಂದೊಮ್ಮೆ ಅಧ್ಯಯನ ನಡೆಸಿ ಒಬ್ಬನು ಆ ಸಿದ್ಧಾಂತವು ಸರಿಯಿಲ್ಲ ಎನ್ನುತ್ತಾನೆ ಅಂತಿಟ್ಟುಕೊಳ್ಳಿ. ಆಗ ಅವನು ಈ ಪುರಾಣಗಳ ಕುರಿತು ಒಳ್ಳೆಯ ಚಿತ್ರಣವನ್ನು ನೀಡುವ ಮತ್ತೊಂದು ಪಾಶ್ಚಾತ್ಯ ಸಿದ್ಧಾಂತವನ್ನು ಬಳಸಿಕೊಳ್ಳಬೇಕಾಗುತ್ತದೆ. ಅದನ್ನು ಬಿಟ್ಟು ಬೇರೆ ಮಾರ್ಗವಿಲ್ಲ. ಏಕೆಂದರೆ ಈ ವಿವರಣೆಯ ಆಯಾಮವೇ ಈ ಸಂಪ್ರದಾಯಗಳಿಗಿಲ್ಲ. ಹಾಗಾಗಿ ಪುರಾಣಗಳ ಕುರಿತು ಪರ್ಯಾಯ ಸಿದ್ಧಾಂತಗಳನ್ನು ಹಾಗೂ ವಿವರಣೆಗಳನ್ನು ಕಟ್ಟುವ ಕೆಲಸವನ್ನು ಈ ಮೇಲಿನ ನಿರೂಪಣೆಯನ್ನು ವಿರೋಧಿಸುವವರೇ ಮಾಡಿಕೊಳ್ಳಬೇಕು. ಅಂದರೆ, ಒಂದೆಡೆ ಭಾರತೀಯನಿಗೆ ಈ ಮೇಲಿನ ವಿವರಣೆಯು ಸುಳ್ಳೆನ್ನಿಸುತ್ತದೆ, ಆದರೆ ಮತ್ತೊಂದೆಡೆ ಪರ್ಯಾಯ ವಿವರಣೆಯನ್ನು ಅಷ್ಟೇ ತರ್ಕಬದ್ಧವಾಗಿ ಮುಂದಿಡಲೂ ಸಾಧ್ಯವಿಲ್ಲ. ಇದು ಅವನಲ್ಲಿ ಹತಾಶೆಯನ್ನು ಹಾಗೂ ರೋಷವನ್ನು ಹುಟ್ಟಸುತ್ತದೆ.

ಪಾಶ್ಚಾತ್ಯ ಸಿದ್ಧಾಂತಗಳು ಭಾರತೀಯರ ಸಹಜಜ್ಞಾನಕ್ಕೆ ವಿರುದ್ಧವಾಗಿ ಕಾಣಿಸುವುದಕ್ಕೆ ಇವೆರಡೂ ಸಂಸ್ಕೃತಿಗಳ ನಡುವಿನ ವ್ಯತ್ಯಾಸವೇ ಕಾರಣ. ಮನಃಶಾಸ್ತ್ರದ ಸಿದ್ಧಾಂತಗಳನ್ನು ಒಪ್ಪಿಕೊಂಡ ಪಾಶ್ಚಾತ್ಯ ವಿದ್ವಾಂಸರಲ್ಲಿ ಇರುವ ಪೂರ್ವಗ್ರಹೀತದ ಪ್ರಕಾರ ರಿಲಿಜನ್ನಿನ ಆಚರಣೆ ಹಾಗೂ ವರ್ಷಿಪ್ಗಳು ಮನುಷ್ಯನ ಹತ್ತಿಕ್ಕಿದ ಲೈಂಗಿಕತೆಯನ್ನು ಪ್ರಕಟಪಡಿಸುತ್ತವೆ. ಹಿಂದೂಯಿಸಂ ಕೂಡ ರಿಲಿಜನ್ನು ಆಗಿರುವುದರಿಂದ ಅದರ ಪುರಾಣಗಳಲ್ಲೂ ಈ ಲೈಂಗಿಕತೆ ಕಾಣಿಸಬೇಕು. ಅಂದರೆ ಗಣಪತಿಯ ಕುರಿತ ವಿವರಣೆಯು ಮಂಜುಗಡ್ಡೆಯ ಮೊನೆ ಮಾತ್ರ. ಅದರ ಒಳಗೆ ಮನಃಶಾಸ್ತ್ರೀಯ ಪೂರ್ವಗ್ರಹೀತಗಳು ಇವೆ. ಈ ಮನಃಶಾಸ್ತ್ರೀಯ ಪೂರ್ವಗ್ರಹೀತಗಳ ಹಿಂದೆ ಥಿಯಾಲಜಿಯ ಗ್ರಹಿಕೆಗಳಿವೆ. ಉದಾಹರಣೆಗೆ ಆಚರಣೆಗಳ ಹಿಂದೆ ನಂಬಿಕೆಗಳಿರಬೇಕು ಎಂಬುದು. ಅದೇ ಗ್ರಹಿಕೆಯೇ ಇಂಟೆನ್ಶನಲ್ ಸೈಕಾಲಜಿಗೆ ಆಧಾರವಾಗಿದೆ. ಅಂದರೆ ಈಗ ಇರುವ ಸಾಮಾಜಿಕ ಅಧ್ಯಯನವು ಥಿಯಾಲಜಿಯ ಗ್ರಹಿಕೆಗಳನ್ನು ಕಳ್ಳಸಾಗಣೆ ಮಾಡುತ್ತಿದೆ. ಪಾಶ್ಚಾತ್ಯ ಮನಃಶಾಸ್ತ್ರವೂ ಇದಕ್ಕೆ ಹೊರತಲ್ಲ. ಇದರ ಪರಿಣಾಮವಾಗಿ ರಿಲಿಜನ್ನೇ ಇಲ್ಲದ ತೀರಾ ಬೇರೆಯದೇ ಆದ ಸಂಸ್ಕೃತಿಯ ಕುರಿತ ಗ್ರಹಿಕೆಯು ವಿಕೃತವಾಗುತ್ತದೆ.

ಹಾಗಾಗಿ ಪಶ್ಚಿಮೇತರ ಸಂಸ್ಕೃತಿಗಳಿಗೆ ಪಾಶ್ಚಾತ್ಯ ನಿರೂಪಣೆಗಳನ್ನು ಅಲ್ಲಗಳೆಯಲು ಇರುವ ಒಂದೇ ಮಾರ್ಗವೆಂದರೆ ತಮ್ಮ ಕುರಿತು ಪರ್ಯಾಯ ವಿವರಣೆಗಳನ್ನು ಬೆಳೆಸುವುದು. ಅದನ್ನು ಬೆಳೆಸಬೇಕಾದರೆ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸಗಳ ಕುರಿತು ಸಿದ್ಧಾಂತಗಳನ್ನು ಬೆಳೆಸಬೇಕು.

ಪ್ರೊ.ಎಸ್.ಎನ್.ಬಾಲಗಂಗಾಧರ 

ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಹಿಂದಿನ ಅಂಕಣಗಳಲ್ಲಿ ನಮ್ಮ ಇತಿಹಾಸ ಸಂಪ್ರದಾಯವು ಪಾಶ್ಚಾತ್ಯರಿಗೆ ಸುಳ್ಳಿನ ಕಂತೆಯಾಗಿ ಕಾಣಿಸಿದ ವಿಷಯವನ್ನು ಪ್ರಸ್ತಾಪಿಸಿದ್ದೆ. ಹಾಗಾಗಿ ಅವರು ನಮಗೆ ಹಿಸ್ಟರಿಯ ಅರಿವು ಇಲ್ಲ ಎಂಬುದಾಗಿ ತೀರ್ಮಾನಿಸಿದ್ದರು. ಮೆಕಾಲೆಯ ಸುಪ್ರಸಿದ್ಧ ನಡಾವಳಿಯಲ್ಲಿ ಅವನು ಉದ್ಗರಿಸಿದ ಪ್ರಕಾರ ಭಾರತೀಯರು ಗತಕಾಲದಲ್ಲಿ 30 ಅಡಿ ಎತ್ತರದ ರಾಜರು ಇದ್ದರು, 30000 ವರ್ಷ ಆಳ್ವಿಕೆ ನಡೆಸಿದ ರಾಜರು ಇದ್ದರು ಎಂಬ ಹಿಸ್ಟರಿಯನ್ನು ನಂಬಿದ್ದಾರೆ, ಅವರ ಭೂಗೋಲವು ಬೆಲ್ಲ ಬೆಣ್ಣೆಗಳ ಸಮುದ್ರಗಳು ಇವೆ ಎಂಬಿತ್ಯಾದಿ ಹಾಸ್ಯಾಸ್ಪದವಾದ ಸಂಗತಿಗಳನ್ನು ತಿಳಿಸುತ್ತದೆ. ಮೆಕಾಲೆಯ ಹೇಳಿಕೆಯೊಂದೇ ಅಲ್ಲ, ನಮ್ಮ ಇತಿಹಾಸ-ಪುರಾಣಗಳನ್ನು ಬಲ್ಲ ಯಾರಿಗಾದರೂ ಇದಕ್ಕೂ ವಿಚಿತ್ರವಾದ ವ್ರತ್ತಾಂತಗಳು ಖಂಡಿತವಾಗಿಯೂ ಗೊತ್ತಿರುತ್ತವೆ.

ಕೇವಲ ಮೆಕಾಲೆ ಮಾತ್ರವೇ ಅಲ್ಲ, ಅಂಥವೆಲ್ಲ ನಿಜ ಎಂದು ಯಾರಾದರೂ ವಾದಿಸಿದರೆ ನಮಗೇ ಅದು ಹಾಸ್ಯಾಸ್ಪದವಾಗಿ ಕಾಣಿಸುತ್ತದೆ. ಎರಡು ಸಾವಿರ ವರ್ಷಗಳ ಹಿಂದೆ ಪ್ರಾಣಿ ಪಕ್ಷಿಗಳು ಮಾತನಾಡುತ್ತಿದ್ದವು, ಋಷಿಗಳ ಶಾಪಕ್ಕೆ ಗಂಡುಗಳು ಹೆಣ್ಣಾಗುತ್ತಿದ್ದರು, ಮನುಷ್ಯರು 30 ಸಾವಿರ ವರ್ಷ ಬದುಕುತ್ತಿದ್ದರು, ಬೆಣ್ಣೆಯ, ಹಾಲಿನ ಸಮುದ್ರಗಳಿದ್ದವು, ಇತ್ಯಾದಿಗಳನ್ನು ನಿಜವೆಂಬುದಾಗಿ ಯಾವುದಾದರೂ ಭಾರತೀಯರು ಎಂದಾದರೂ ನಂಬಿದ್ದರೆ? ಹೋಗಲಿ, ಪಾಶ್ಚಾತ್ಯ ಹಿಸ್ಟರಿಯಿಂದ ಜ್ಞಾನೋದಯವಾಗುವುದಕ್ಕೂ ಪೂರ್ವದಲ್ಲಿ ಭಾರತೀಯರು ಹಾಗೇ ನಂಬಿಕೊಂಡಿದ್ದರು ಅಂತ ವಾದಕ್ಕೆ ಇಟ್ಟುಕೊಳ್ಳೋಣ. ಈಗ ನಮಗೆ ಅದು ಸುಳ್ಳು ಅಂತ ಗೊತ್ತಾಗಿದೆಯಲ್ಲ? ಗೊತ್ತಾದಮೇಲೂ ನಮ್ಮಂಥ ವಿದ್ಯಾವಂತರಿಗೆ ಈ ಪುರಾಣ ಕಥೆಗಳ ಅಗತ್ಯವೇನಿದೆ? ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ನಾವು ಸುಳ್ಳುಗಳನ್ನು ನಂಬಲು ಅವನ್ನು ಓದುತ್ತೇವೆಯೆ?

ಇಂದು ರಾಮಾಯಣದ ಕೆಲವು ಘಟನೆಗಳ ಕುರಿತಾಗಿ ಸತ್ಯ-ಸುಳ್ಳುಗಳ ವಿವಾದ ಎದ್ದಿರುವುದು ಎಲ್ಲರಿಗೂ ಗೊತ್ತು. ಹಾಗಾಗಿ ಇಂದಿನ ಯುವಜನರಲ್ಲಿ ರಾಮಾಯಣದ ಕುರಿತು ಸಾಮಾನ್ಯವಾಗಿ ಮೂಡುವ ಒಂದು ಪ್ರಶ್ನೆ ಎಂದರೆ ಅದು ನಿಜವಾಗಿಯೂ ನಡೆಯಿತೆ? ಎಂಬುದು. ಅವರ ಆತಂಕ ಏನೆಂದರೆ ಒಂದೊಮ್ಮೆ ಅದು ಸುಳ್ಳಾಗಿದ್ದರೆ ಅದನ್ನು ಪೂಜ್ಯವಾಗಿ ನೋಡಲು ಸಾಧ್ಯವಾಗದಿರಬಹುಸು. ಹೀಗೆ ಆತಂಕಪಡುವವರು ಮತ್ತೊಂದು ರೀತಿಯ ಪ್ರಶ್ನೆಯನ್ನು ಕೇಳಿಕೊಳ್ಳಲಿ: ವಾಲ್ಮೀಕಿ, ವ್ಯಾಸರಂಥ ಮಹರ್ಷಿಗಳು ಈ ಕೃತಿಗಳನ್ನು ಹೀಗೇ ಏಕೆ ರಚಿಸಿದರು? ನೈಜ ಘಟನೆಗಳನ್ನು ದಾಖಲಿಸುವುದೇ ಅವರ ಉದ್ದೇಶವಾಗಿದ್ದರೆ ಅವರಿಗೆ ನೈಜ ಘಟನೆಗಳನ್ನು ಮಾತ್ರವೇ ಆಯ್ದು ಬರೆಯುವಷ್ಟು ಬುದ್ಧಿಮತ್ತೆ ಹಾಗೂ ಸಾಮರ್ಥ್ಯ ಇರಲಿಲ್ಲವೆ? ಇಲ್ಲ ನಿಜಘಟನೆಗಳನ್ನು ಇಂದಿನ ಹಿಸ್ಟರಿಕಾರರ ಥರ ನೇರವಾಗಿ ಹೇಳುವ ಸಾಮರ್ಥ್ಯವಿರಲಿಲ್ಲವೆ? ಈ ಗ್ರಂಥಗಳಲ್ಲಿ ನಡೆದ ಘಟನೆಗಳ ಸತ್ಯ ಸುಳ್ಳುಗಳನ್ನು ಪ್ರಮಾಣೀಕರಿಸಲು ಹೊರಡುವವರು ಅವರಿಗೆ ಅಂಥ ಬುದ್ಧಿಮತ್ತೆ ಹಾಗೂ ಸಾಮರ್ಥ್ಯ ಇರಲಿಲ್ಲ ಎಂಬುದಾಗಿ ತೀರ್ಮಾನಿಸಿದ್ದಾರೆ ಅಂತಲೇ ಅರ್ಥ. ಇಲ್ಲ ಅವರಿಗೆ ಆ ಬುದ್ಧಿಮತ್ತೆ ಹಾಗೂ ಸಾಮರ್ಥ್ಯಗಳಿದ್ದವು ಎಂಬುದನ್ನು ಪರಿಗಣಿಸುತ್ತೇವೆ ಅಂತಾದಲ್ಲಿ, ಅವರು ಹಿಸ್ಟರಿಯನ್ನು ಬರೆಯುತ್ತಿಲ್ಲ, ಬೇರೇನನ್ನೋ ಬರೆಯುತ್ತಿದ್ದಾರೆ ಎಂಬುದನ್ನು ಅರಿಯುವುದೊಂದೇ ಮಾರ್ಗ.

ಈ ಪರ್ಯಾಯ ಮಾರ್ಗದಲ್ಲಿ ನೀವು ಹೊರಡಬಯಸುವಿರಾದರೆ ಒಂದು ವಿಷಯವನ್ನು ಗುರುತಿಸುವ ಅಗತ್ಯವಿದೆ. ಇಂದಿಗೂ ಕೂಡ ನಾವು ವಿದ್ಯಾವಂತರಾಗಿ ಪುರಾಣ ಕಥೆಗಳನ್ನು ಓದುತ್ತೇವೆ, ಅವುಗಳನ್ನಾಧರಿಸಿ ಬೇರೆ ಬೇರೆ ಕಲಾ ಪ್ರಕಾರಗಳನ್ನು ಸೃಷ್ಟಿಸುತ್ತೇವೆ, ಈ ಕಥೆಗಳು ನಮ್ಮ ಜೀವನಕ್ಕೆ ಮುಖ್ಯ ಎಂಬ ಅನಿಸಿಕೆಯನ್ನು ಹೊಂದಿದ್ದೇವೆ ಎಂಬುದಂತೂ ಸತ್ಯ. ಭಾರತದಲ್ಲಿ ನಿಜಘಟನೆಗಳನ್ನು ದಾಖಲಿಸುವ ಹಿಸ್ಟರಿಗಳ ಆರ್ಭಟ ಹೆಚ್ಚಾದಂತೆಲ್ಲ ಪುರಾಣಕಥೆಗಳು ಹೆದರಿ ಮೂಲೆಗೆ ಸರಿಯುತ್ತಿರುವುದು ಕಾಣುವುದಿಲ್ಲ. ಬದಲಾಗಿ ಅವು ಕೂಡ ಹಿಸ್ಟರಿಯನ್ನು ಕಲಿತ ವಿದ್ಯಾವಂತರಿಗೆ ಮೊದಲಿಗಿಂತ ಹೆಚ್ಚೆಚ್ಚು ಆಸಕ್ತಿಪೂರ್ಣವಾಗಿ ಕಾಣಿಸುತ್ತಿವೆ. ಇಂಥ ಕಥೆಗಳನ್ನು ನಮಗೆ ಹೇಳಿದವರು ಇವುಗಳು ನಿಜವಾಗಿಯೂ ನಡೆದವು ಎಂದು ನಂಬಬೇಕು ಎಂಬ ಷರತ್ತನ್ನು ಇಟ್ಟು ಕಥೆ ಹೇಳಿದರೆ? ನಾನು ಸಣ್ಣವನಿದ್ದಾಗ ಶಾಲೆಯಲ್ಲಿ ಕಲಿತ ಭೂಗೋಳ, ವಿಜ್ಞಾನ, ಹಿಸ್ಟರಿಗಳ ಪ್ರಕಾರ ಈ ಕಥೆಗಳಲ್ಲಿ ಬರುವ ವಿವರಗಳು ನಿಜವಾಗಿರಲು ಸಾಧ್ಯವೆ? ಎಂಬ ಪ್ರಶ್ನೆಗಳು ಏಳುತ್ತಿದ್ದವು. ಆದರೆ ಅಂಥ ಪ್ರಶ್ನೆಗಳನ್ನು ಕೇಳುವುದರಿಂದ ‘ತಲೆಹರಟೆ’ ಎಂಬ ಬಿರುದನ್ನು ಬಿಟ್ಟರೆ ನನಗೆ ಮತ್ತೇನೂ ಸಿಕ್ಕಲಿಲ್ಲ. ನಮ್ಮ ಪುರಾಣ ಕಥೆಗಳ ಸಂದರ್ಭದಲ್ಲಿ ಇವು ಕೇಳುವ ಪ್ರಶ್ನೆಗಳಲ್ಲ ಎಂಬುದನ್ನು ನಾನು ಕ್ರಮೇಣ ಕಂಡುಕೊಂಡೆ. ಅಂದರೆ ಘಟನೆಗಳು ಸತ್ಯವೆ? ಸುಳ್ಳೆ? ಎಂಬ ಪ್ರಶ್ನೆಗಳು ಈ ಕಥೆಗಳಿಗೆ ಅಪ್ರಸ್ತುತ.

ನಮ್ಮ ಸಾಮಾನ್ಯಜ್ಞಾನದ ಪ್ರಕಾರ ಒಂದು ಘಟನೆ ಸತ್ಯವಾಗದಿದ್ದರೆ ಅದು ಸುಳ್ಳಾಗಿರಲೇಬೇಕು. ಆದರೆ ಹಾಗಾಗಲೇಬೇಕೆಂದಿಲ್ಲ. ಅದು ಸತ್ಯವೂ ಸುಳ್ಳೂ ಎರಡೂ ಆಗಿರದಿರುವ ಸಾಧ್ಯತೆಯೂ ಇದೆ. ಹೀಗೆ ಹೇಳಿದಾಗ ನಾನು ಅಡ್ಡಗೋಡೆಯ ಮೇಲೆ ದೀಪವಿಡುತ್ತಿದ್ದೇನೆಂದು ನೀವು ಹೇಳುವ ಸಾಧ್ಯತೆಯಿದೆ. ಯಾವುದೋ ರಾಜಕೀಯ ಪಕ್ಷವನ್ನು ಬೆಂಬಲಿಸುವ ಕೆಲವು ಯುವಕರು ‘ರಾಮಸೇತುವು ನಿಜವಾಗಿಯೂ ಇತ್ತೆ?’ ಎಂದು ನನ್ನನ್ನು ಕೇಳುತ್ತಾರೆನ್ನಿ. ನಾನು ಅದು ಸತ್ಯವೂ ಅಲ್ಲ, ಸುಳ್ಳೂ ಅಲ್ಲ ಎಂದು ಉತ್ತರ ಕೊಟ್ಟರೆ ಏನಾಗುತ್ತದೆ? ನಾನು ಹಾರಿಕೆಯ ಉತ್ತರವನ್ನು ನೀಡುತ್ತಿದ್ದೇನೆ, ನನಗೆ ನೇರವಾಗಿ ಹೇಳುವ ಧೈರ್ಯವಿಲ್ಲ ಅಂತಲೇ ಅವರು ತೀರ್ಮಾನಿಸುತ್ತಾರೆ.

ಆದರೆ ನನ್ನದು ಹಾರಿಕೆಯ ಉತ್ತರವಲ್ಲ. ಇದೊಂದು ವೈಜ್ಞಾನಿಕ ಸಮಸ್ಯೆ. ಹಿಸ್ಟರಿಯ ಪ್ರಶ್ನೆಗಳು ಈ ಹಿನ್ನೆಲೆಯಿಂದ ಹುಟ್ಟುತ್ತವೆ ಎನ್ನುವುದನ್ನು ಗಮನಿಸಬೇಕು. ವಿಜ್ಞಾನದಲ್ಲಿ ಸತ್ಯ ಅಥವಾ ಸುಳ್ಳು ಎನ್ನುವುದು ಒಂದು ನಿರ್ದಿಷ್ಟ ಪ್ರಕಾರದ ವಾಕ್ಯಗಳಿಗೆ ಆರೋಪಿಸಬಹುದಾದ ಗುಣಲಕ್ಷಣವಾಗಿದೆ. ಅವು ಪ್ರಪಂಚದಲ್ಲಿ ನಿಜವಾಗಿಯೂ ಏನಿದೆ ಎಂಬುದನ್ನು ತಿಳಿಸಲು ಉದ್ದೇಶಿಸಿರುವ ವಾಕ್ಯಗಳು. ಅಂದರೆ ‘ರಾಮಾಯಣದಲ್ಲಿ ಹೇಳಲಾದ ರಾಮಸೇತುವು ಪ್ರಪಂಚದಲ್ಲಿ ವಾಸ್ತವಿಕವಾಗಿ ಇದ್ದ ಒಂದು ವಸ್ತುವನ್ನು ಸೂಚಿಸುತ್ತದೆಯೆ?’ ಎಂಬುದು ಆ ಪ್ರಶ್ನೆಯ ಸರಿಯಾದ ರೂಪ. ಒಂದೊಮ್ಮೆ ರಾಮಾಯಣವನ್ನು ಬರೆದವನಿಗೆ ಭಾರತದ ಯಾವುದೋ ಭಾಗದಲ್ಲಿ ರಾಮನೆಂಬವನು ಸೇತುವೆಯನ್ನು ಕಟ್ಟಿದ ನಿಜ ಘಟನೆಯನ್ನು ದಾಖಲಿಸುವ ಉದ್ದೇಶ ಇತ್ತು ಅನ್ನಿ. ಆದರೆ ಸೇತುವೆಯನ್ನು ಕಟ್ಟುವ ಘಟನೆ ನಡೆದೇ ಇರಲಿಲ್ಲ. ಅಂಥ ಸಂದರ್ಭದಲ್ಲಿ ಅವನ ಹೇಳಿಕೆ ಸುಳ್ಳಾಗುತ್ತದೆ. ಅಂದರೆ ಪ್ರಪಂಚದಲ್ಲಿ ವಾಸ್ತವಿಕವಾಗಿ ಇರಬಹುದಾದ ಸಂಗತಿಗಳನ್ನು ಚಿತ್ರಿಸುವ ಉದ್ದೇಶವನ್ನು ಹೊಂದಿದ ಹೇಳಿಕೆಗಳಿಗೆ ಮಾತ್ರವೇ ಸತ್ಯ-ಸುಳ್ಳುಗಳ ತರ್ಕ ಅನ್ವಯವಾಗುತ್ತದೆ. ರಾಮಾಯಣಕ್ಕೆ ರಾಮಸೇತುವನ್ನು ಉಲ್ಲೇಖಿಸುವಲ್ಲಿ ಆ ಉದ್ದೇಶವೇ ಇಲ್ಲ, ಅದರ ಉದ್ದೇಶವೇ ಬೇರೆ ಅಂತಿಟ್ಟುಕೊಳ್ಳಿ, ಆಗ ಆ ಹೇಳಿಕೆಯು ಸತ್ಯ-ಸುಳ್ಳುಗಳ ಪರಿಧಿಗೆ ಬರುವುದಿಲ್ಲ. ಅದು ಸತ್ಯವೂ ಅಲ್ಲ, ಸುಳ್ಳೂ ಅಲ್ಲ.

ಇತಿಹಾಸ ಪುರಾಣಗಳು ಪ್ರಪಂಚದ ಕುರಿತ ಸತ್ಯಹೇಳಿಕೆಗಳೆಂಬುದಾಗಿ ಪೂರ್ವದೇಶದವರು ತಿಳಿಯುವುದಿಲ್ಲ. ಆ ನಿರ್ದಿಷ್ಟ ಕಾರಣದಿಂದಲೇ ಅವನ್ನು ಸುಳ್ಳು ಎಂದಾಗಿ ಕೂಡ ಅವರು ತಿಳಿಯುವುದಿಲ್ಲ. ಹಾಗಾಗಿ ಹಿಸ್ಟರಿಯ ದೃಷ್ಟಿಯನ್ನಿಟ್ಟುಕೊಂಡು ಅವುಗಳು ಸುಳ್ಳು ಘಟನೆಗಳು ಎಂದಾಗ ಅವರಿಗೆ ಅದು ಸರಿ ಎನ್ನಿಸುವುದಿಲ್ಲ. ಅವರು ಅದನ್ನು ವಿರೋಧಿಸುತ್ತಾರೆ. ಆದರೆ ಇಂಥ ಹೇಳಿಕೆಗಳಲ್ಲಿನ ಸಮಸ್ಯೆ ಏನೆಂಬುದು ಅವರಿಗೆ ಹೊಲಬಾಗುವುದಿಲ್ಲವಾದ್ದರಿಂದ ಅವರಿಗೆ ತಮ್ಮ ಉತ್ತರವನ್ನು ಸರಿಯಾಗಿ ರೂಪಿಸಲೂ ಸಾಧ್ಯವಾಗುವುದಿಲ್ಲ. ಹಾಗಾಗಿ ಅವು ಸುಳ್ಳಲ್ಲ ಎಂದು ಹೇಳುತ್ತಾರೆ. ಸುಳ್ಳಲ್ಲ ಎನ್ನುವಾಗ ಅವರಿಗೆ ಅದು ಸತ್ಯ ಎಂದೇ ಅನ್ನಿಸುತ್ತದೆ. ಆಗ ಪ್ರಶ್ನೆ ಕೇಳುವವರು ‘ಓಹೋ ಇವರು ಅವನ್ನು ಹಿಸ್ಟರಿಯ ಸತ್ಯ ಎಂದು ನಂಬಿಕೊಂಡಿದ್ದಾರೆ’ ಅಂದುಕೊಳ್ಳುತ್ತಾರೆ. ಆದರೆ ಹಿಸ್ಟರಿಯು ಯಾವುದನ್ನು ಸತ್ಯ ಎಂಬುದಾಗಿ ಪರಿಗಣಿಸುತ್ತದೆ ಎಂಬುದು ಅವರಿಗೆ ತಿಳಿಯುವುದಿಲ್ಲ. ಅವರು ಕೊಡುವ ಉತ್ತರವೇ ಒಂದು, ವಿದ್ವಾಂಸರು ತಿಳಿದುಕೊಳ್ಳುವುದೇ ಇನ್ನೊಂದು ಆಗುತ್ತದೆ. ನಮ್ಮಲ್ಲಿ ಬಹಳಷ್ಟು ಜನರಿಗೆ ರಾಮಾಯಣದ ಘಟನೆಗಳು ಸತ್ಯ ಎಂಬ ಧೃಡ ವಿಶ್ವಾಸವಿದೆ, ಅವರು ಹಾಗೇ ವಾದವನ್ನೂ ಮಾಡುತ್ತಾರೆ. ಆದರೆ ಯಾವ ಅರ್ಥದಲ್ಲಿ?

ಈ ದೃಷ್ಟಿಯಿಂದ ಒಬ್ಬ ಬಾಲಿ ಯುವಕನ ಜೊತೆಗೆ ಪಾಶ್ಚಾತ್ಯ ವಿದ್ವಾಂಸನೊಬ್ಬನು ನಡೆಸಿದ ಸಂಭಾಷಣೆಯು ನನಗೆ ಆಸಕ್ತಿಪೂರ್ಣವಾಗಿ ಕಂಡಿತು. ರಾಮಾಯಣದ ಕುರಿತು ಪಾಶ್ಚಾತ್ಯ ಸಂಸ್ಕೃತಿಯವರಿಗೆ ಯಾವ ಪ್ರಶ್ನೆಗಳು ಏಳುತ್ತವೆ ಹಾಗೂ ಪೂರ್ವ ದೇಶದವರು ಅದನ್ನು ಯಾವ ರೀತಿಯ ಸತ್ಯ ಎಂಬುದಾಗಿ ನೋಡುತ್ತಾರೆ ಎಂಬುದಕ್ಕೆ ಅದೊಂದು ದೃಷ್ಟಾಂತವಾಗಿದೆ. ಆ ವಿದ್ವಾಂಸನು ಹಿಂದೂಗಳ ಪವಿತ್ರ ಗ್ರಂಥವಾದ ರಾಮನ ಇತಿಹಾಸವನ್ನು ಬಾಲಿ ಯುವಕನು ಸತ್ಯವೆಂದು ನಂಬಿದ್ದಾನೋ ಎಂದು ಕೇಳಿದಾಗ ಆ ಯುವಕನು ಯಾವುದೇ ಅನುಮಾನವಿಲ್ಲದೇ “ಹೌದು” ಎಂದು ಉತ್ತರಿಸಿದನು. ಈ ಸಂಭಾಷಣೆ ಹೀಗಿದೆ:
ವಿದ್ವಾಂಸ: “ಹಾಗಾದರೆ ರಾಜಕುಮಾರ ರಾಮನು ಎಲ್ಲೋ, ಯಾವಾಗಲೋ ಬದುಕಿದ್ದನು ಎಂಬುದಾಗಿ ನೀನು ನಂಬುತ್ತೀಯಾ?”
ಬಾಲಿ ಯುವಕ: “ಅವನು ಬದುಕಿದ್ದನೋ ಇಲ್ಲವೋ ಎಂಬುದು ನನಗೆ ತಿಳಿದಿಲ್ಲ”
ವಿದ್ವಾಂಸ: “ಹಾಗಾದರೆ ಇದೊಂದು ಕಥೆಯೆ?”
ಬಾಲಿ ಯುವಕ: “ಹೌದು ಇದೊಂದು ಕಥೆ”
ವಿದ್ವಾಂಸ: “ಹಾಗಾದರೆ ಯಾರೋ ಈ ಕಥೆಯನ್ನು ಬರೆದರು – ಅಂದರೆ ಒಬ್ಬ ಮನುಷ್ಯನು ಇದನ್ನು ಬರೆದನೆ?”
ಬಾಲಿ ಯುವಕ: “ಖಂಡಿತವಾಗಿಯೂ ಯಾವುದೋ ಮನುಷ್ಯನು ಈ ಕಥೆಯನ್ನು ಬರೆದನು”
ವಿದ್ವಾಂಸ: “ಹಾಗಾದರೆ ಯಾವುದೋ ಮನುಷ್ಯನು ಇದನ್ನು ಕಲ್ಪಿಸಿಕೊಂಡಿರಬಹುದು”
ಬಾಲಿ ಯುವಕ: “ಯಾರೋ ಈ ಕಥೆಯನ್ನು ಹುಟ್ಟು ಹಾಕಿರಬಹುದು. ಆದರೆ ಏನೇ ಆದರೂ ಇದು ಸತ್ಯ”.
ವಿದ್ವಾಂಸ: “ಹಾಗಾದರೆ ರಾಜಕುಮಾರ ರಾಮನು ಭೂಮಿಯ ಮೇಲೆ ಬದುಕಿರಲಿಲ್ಲ ಎಂದಂತಾಯಿತು”.
ಬಾಲಿ ಯುವಕ: “ನಿನಗೆ ಯಾವ ಮಾಹಿತಿ ಬೇಕಾಗಿದೆ? ಕಥೆ ಸತ್ಯವೆಂಬುದು ನಿನ್ನ ಪ್ರಶ್ನೆಯೋ ಅಥವಾ ಕೇವಲ ಅದು ನಡೆಯಿತೋ ಇಲ್ಲವೋ ಎಂಬ ಪ್ರಶ್ನೆಯೋ?”
ವಿದ್ವಾಂಸ: “ಕ್ರೈಸ್ತರು ತಮ್ಮ ದೇವರಾದ ಜೀಸಸ್ ಕ್ರೈಸ್ತನು ಭೂಮಿಯ ಮೇಲೆ ಬದುಕಿದ್ದ ಎಂಬುದಾಗಿಯೂ ನಂಬುತ್ತಾರೆ. ಹೊಸ ಒಡಂಬಡಿಕೆಯಲ್ಲಿ ಮನುಷ್ಯರು ಅದನ್ನು ವರ್ಣಿಸಿದ್ದಾರೆ. ಆದರೆ ಕ್ರೈಸ್ತರು ಅದೊಂದು ವಾಸ್ತವಿಕವಾದ ವರ್ಣನೆಯೆಂದು ನಂಬುತ್ತಾರೆ. ಅವರ ದೇವರು ಕೂಡ ಭೂಮಿಯ ಮೇಲೆ ವಾಸ್ತವಿಕವಾಗಿ ಇದ್ದನು”.
ಬಾಲಿ ಯುವಕ: “ಈ ವಿಷಯವು ನನಗೂ ತಿಳಿದಿದೆ. ನಿಮ್ಮ ದೇವರು ಭೂಮಿಯ ಮೇಲೆ ಇದ್ದಿರಲೇಬೇಕೆಂಬುದು ಏಕೆ ಅಷ್ಟೊಂದು ಮಹತ್ವದ ವಿಷಯವಾಗಬೇಕು ಎಂಬುದು ನನಗೆ ತಿಳಿಯುತ್ತಿಲ್ಲ.”

ಇಲ್ಲಿ ಪಾಶ್ಚಾತ್ಯ ವಿದ್ವಾಂಸನು ಕೇಳುತ್ತಿರುವುದು ಹಿಸ್ಟರಿಯ ಸತ್ಯದ ಬಗೆಗೆ. ಬಾಲಿ ಯುವಕನು ಒಂದೆಡೆ ರಾಮಾಯಣವು ಒಂದು ಕಥೆ ಎನ್ನುತ್ತಾನೆ, ಮತ್ತೊಂದೆಡೆ ಅದು ಸತ್ಯವೆನ್ನುತ್ತಾನೆ. ಅದು ಭೂಮಿಯ ಮೇಲೆ ನಡೆದ ಘಟನೆ ಎಂಬರ್ಥದಲ್ಲಿ ಅವನು ಅದನ್ನು ಸತ್ಯ ಎನ್ನುತ್ತಿಲ್ಲ. ಅದು ಭೂಮಿಯಮೇಲೆ ನಡೆಯಿತೋ ಇಲ್ಲವೋ ಎಂಬುದು ಅವನಿಗೆ ತಿಳಿದಿಲ್ಲ. ಅಂದರೆ ಅವನು ಹಿಸ್ಟರಿಯ ಸತ್ಯದ ಕುರಿತು ಮಾತನಾಡುತ್ತಿಲ್ಲ. ಅವನು ರಾಮಾಯಣ ಎಂಬುದೊಂದು ಗ್ರಂಥವಿದೆ ಹಾಗೂ ಅದರಲ್ಲಿ ಆ ಘಟನೆಗಳು ಹಾಗೆ ಇರುವುದು ಸತ್ಯ ಎನ್ನುತ್ತಿದ್ದಾನೆ. ಅಂದರೆ ಇಲ್ಲಿ ಸತ್ಯ ಎನ್ನುವುದು ರಾಮಾಯಣ ಎಂಬ ಗ್ರಂಥ ಹಾಗೂ ಅದರ ವಿವರಗಳಿಗೆ ಸಂಬಂಧಪಟ್ಟಿದ್ದೇ ವಿನಃ ನಾವಿರುವ ಪ್ರಪಂಚದಲ್ಲಿ ನಿಜವಾಗಿಯೂ ಆಗಿಹೋದ ಘಟನೆಗಳಿಗೆ ಸಂಬಂಧ ಪಟ್ಟದ್ದಲ್ಲ. ಉದಾಹರಣೆಗೆ, ರಾವಣನನ್ನು ಕೊಂದವರು ಯಾರು? ಎಂಬ ಪ್ರಶ್ನೆಗೆ ರಾಮ ಎಂದರೆ ನಿಜವಾಗುತ್ತದೆ, ಲಕ್ಷ್ಮಣ ಎಂದರೆ ಸುಳ್ಳಾಗುತ್ತದೆ. ರಾಮಾಯಣದಲ್ಲಿ ರಾಮನು ರಾವಣನನ್ನು ಕೊಂದದ್ದು ಸತ್ಯ, ಹನುಮಂತನು ಲಂಕೆಗೆ ಹಾರಿದ್ದೂ ಸತ್ಯ, ಅದೇ ರೀತಿ ಜಟಾಯು, ಮಾಯಾ ಜಿಂಕೆ, ಶೂರ್ಪನಖಿ, ಕುಂಭಕರ್ಣ ಎಲ್ಲರೂ ನಿಜವೇ. ರಾಮಾಯಣವೇ ಈ ಸತ್ಯ-ಸುಳ್ಳುಗಳಿಗೆ ಒರೆಯಾಗುತ್ತದೆ. ಆ ಕಾರಣಕ್ಕೆ ರಾಮ ರಾವಣರು ಭೂಮಿಯ ಮೇಲೆ ಇದ್ದರು ಎಂದಂತೇನೂ ಅಲ್ಲ. ಅಂದರೆ ಹಿಸ್ಟರಿಯ ಸತ್ಯ-ಸುಳ್ಳುಗಳು ರಾಮಾಯಣದ ಸಂಪ್ರದಾಯವನ್ನು ದಾಟಿಸಿಕೊಂಡು ಬಂದವರಿಗೆ ಅಪರಿಚಿತ ಹಾಗೂ ಅಪ್ರಸ್ತುತ. ಅವರ ಪ್ರಪಂಚವೇ ಬೇರೆ ಇದ್ದಂತಿದೆ.

ಕಥೆಗಳು ಈ ಪ್ರಭೇದಕ್ಕೆ ಸೇರುತ್ತವೆ. ಕಥೆಗಳನ್ನು ಸುಳ್ಳು ಕಥೆಗಳು ಹಾಗೂ ಸತ್ಯಕಥೆಗಳು ಎಂದು ವಿಭಾಗಿಸಿಕೊಂಡವರು ಪಾಶ್ಚಾತ್ಯರು. ಅವರು ಸತ್ಯ ಕಥೆಗಳನ್ನು ಹಿಸ್ಟರಿ ಎಂದೂ ಸುಳ್ಳು ಕಥೆಗಳನ್ನು ಮಿಥ್ ಎಂದೂ ವಿಭಾಗಿಸಿಕೊಂಡರು. ಸತ್ಯ ಕಥೆಗಳು ಮಾತ್ರವೇ ನಮಗೆ ಬೋಧಕವಾಗುತ್ತವೆ, ಸುಳ್ಳು ಕಥೆಗಳು ಕೇವಲ ಮನೋರಂಜನೆಗೆ ಮಾತ್ರವೇ ಲಾಯಖ್ಖು ಎಂಬ ಧೋರಣೆಯನ್ನು ಬೆಳೆಸಿದರು. ಇಲ್ಲ ಸುಳ್ಳು ಕಥೆಗಳು ಸತ್ಯವನ್ನು ಪರೋಕ್ಷವಾಗಿ ತಿಳಿಸುತ್ತವೆ ಎಂದು ನಿರ್ಧರಿಸಿದರು. ಅದರ ಪರಿಣಾಮವಾಗಿ ಕಥೆಗಳು ಕೇವಲ ಕಥೆಗಳಾಗಿ ಪಶ್ಚಿಮದ ಜನರಿಗೆ ಕಲಿಕೆಯ ಸಾಧನಗಳಾಗಿ ಉಳಿದಿಲ್ಲ. ಅವು ರಮ್ಯ, ಕಾಲ್ಪನಿಕ ಲೋಕಗಳು ಅಷ್ಟೆ. ಅವು ನಮ್ಮ ದಾರಿ ತಪ್ಪಿಸುವ ಕೆಲಸವನ್ನು ಮಾತ್ರ ಮಾಡಬಲ್ಲವು ಎಂಬುದು ಅವರ ಧೋರಣೆ. ಇದು ಒಂದು ಸಂಸ್ಕೃತಿಯ ಧೋರಣೆ ಅಷ್ಟೆ. ಈ ಧೋರಣೆ ಸಮಸ್ಯಾತ್ಮಕವಾಗಿದೆ. ಉದಾಹರಣೆಗೆ, ನಮ್ಮ ರಾಮಾಯಣ ಮಹಾಭಾರತಗಳು ಈಗಿರುವಂತೆಯೇ ಬೋಧಕವಾಗಬಲ್ಲವು ಹಾಗೂ ಅವು ಭಾರತೀಯರ ವರ್ತಮಾನದ ಹುಡುಕಾಟದ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸಿವೆ ಅಂತಾದರೆ ಅವು ಸತ್ಯಘಟನೆಗಳು ಎಂಬುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವೇನಿದೆ? ಈ ಪ್ರಶ್ನೆಯನ್ನು ಉತ್ತರಿಸಬೇಕಾದರೆ ಸತ್ಯಕಥೆಗಳು ನಮ್ಮ ಜೀವನವನ್ನು ಇನ್ನೂ ಚೆನ್ನಾಗಿ ಮಾಡುತ್ತವೆ, ಸುಳ್ಳುಕಥೆಗಳು ಅದನ್ನು ಹಾಳು ಮಾಡುತ್ತವೆ ಎಂಬುದನ್ನು ಸಿದ್ಧಪಡಿಸಬೇಕು. ಇದು ಸಿದ್ಧವಾಗುವವರೆಗೆ ಸತ್ಯಕಥೆಗಳು ಮಾತ್ರವೇ ನಮ್ಮ ಭವಿಷ್ಯಕ್ಕೆ ಒಳ್ಳೆಯದು ಎನ್ನಲು ವಿಶೇಷ ಕಾರಣಗಳು ಇಲ್ಲ.

ವಾಸ್ತವದಲ್ಲಿ ರಾಮಾಯಣದಂಥ ಕಥೆಗಳು ಸತ್ಯ ಹೇಳಿಕೆಗಳೂ ಅಲ್ಲ, ಸುಳ್ಳೂ ಹೇಳಿಕೆಗಳೂ ಅಲ್ಲ. ಅವು ತಮ್ಮದೇ ಆದ ರೀತಿಯಲ್ಲಿ ಮನುಷ್ಯ ಜನಾಂಗದ ಕಲಿಕೆಯ ಸಾಧನಗಳಾಗಿವೆ. ಇಂಥ ಕಲಿಕೆಯಲ್ಲಿ ಸತ್ಯ-ಸುಳ್ಳುಗಳ ಪ್ರಶ್ನೆ ಅಪ್ರಸ್ತುತವಾಗುತ್ತದೆ. ಅದು ಹೇಗೆಂಬುದನ್ನು ತಿಳಿದುಕೊಳ್ಳಲು ಅಂಥ ಕಲಿಕೆಯನ್ನು ಇನ್ನೂ ಉಳಿಸಿಕೊಂಡು ಬಂದ ಪೌರ್ವಾತ್ಯ ಸಂಸ್ಕೃತಿಯನ್ನು ಅಧ್ಯಯನಕ್ಕೊಳಪಡಿಸಬೇಕಾಗಿದೆ. ನಮ್ಮ ಇತಿಹಾಸ-ಪುರಾಣಗಳ ಸಂದರ್ಭದಲ್ಲಿ ಅವು ನಮಗೇನು ಕಲಿಸುತ್ತವೆ? ಹೇಗೆ ಕಲಿಸುತ್ತವೆ? ಇತ್ಯಾದಿ ಪ್ರಶ್ನೆಗಳು ಪ್ರಯೋಜಕವಾಗಬಹುದೇ ಹೊರತೂ ಅವುಗಳಲ್ಲಿ ಉಲ್ಲೇಖಿತವಾದ ಘಟನೆಗಳು ನಿಜವಾಗಿಯೂ ನಡೆದವೋ ಇಲ್ಲವೋ ಎಂಬ ಪ್ರಶ್ನೆಗಳಲ್ಲ. ಇಂಥ ಪ್ರಶ್ನೆಗಳನ್ನು ಕೇಳುತ್ತಿರುವವರು ಅದಾಗಲೇ ಇಂಥ ಕೃತಿಗಳ ಜೊತೆಗಿನ ತಮ್ಮ ಸಾಂಪ್ರದಾಯಿಕ ಕೊಂಡಿಗಳನ್ನು ಕಳಚಿಕೊಳ್ಳುತ್ತಿದ್ದಾರೆ ಅಂತಲೇ ಅರ್ಥ.

ಪ್ರೊ.ಎಸ್.ಎನ್.ಬಾಲಗಂಗಾಧರ 

ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಭಾರತೀಯ ಇತಿಹಾಸ ಸಂಪ್ರದಾಯಕ್ಕೆ ಸೇರಿದ ರಾಮಾಯಣ ಹಾಗೂ ಮಹಾಭಾರತಗಳಲ್ಲಿ ಬರುವ ಘಟನೆಗಳ ಸತ್ಯಾಸತ್ಯತೆಯ ಕುರಿತು ವಿವಾದಗಳು ಏಳುವುದು ಇಂದು ಸಾಮಾನ್ಯವಾಗಿ ಕಂಡುಬರುವ ಸಂಗತಿ. ಇಂಥ ವಿವಾದಗಳಲ್ಲಿ ಒಂದು ಪಕ್ಷದವರು ಈ ಕೃತಿಗಳು ಸತ್ಯಘಟನೆಗಳಲ್ಲ ಎನ್ನಲಿಕ್ಕೆ ಆಧಾರವನ್ನು ತೋರಿಸುತ್ತಾರೆ, ಮತ್ತೊಂದು ಪಕ್ಷದವರು ಅವು ಸತ್ಯ ಘಟನೆಗಳೇ ಎಂಬುದಕ್ಕೆ ಆಧಾರ ತೋರಿಸುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ ಇಂಥ ವಿವಾದಗಳನ್ನು ಆಶ್ರಯಿಸಿದ ಹೋರಾಟಗಳೂ, ಸಂಘರ್ಷಗಳೂ, ಕೋರ್ಟ್ ತೀರ್ಮಾನಗಳೂ, ರಾಜಕೀಯ ಪ್ರಣಾಲಿಕೆಗಳೂ ಜನರಿಗೆ ಗೊತ್ತಿರುವಂಥವೇ ಆಗಿವೆ. ಈ ವಿವಾದಗಳಲ್ಲಿ ಭಾಗವಹಿಸುವವರು ಮೇಲ್ನೋಟಕ್ಕೆ ಎರಡು ವಿರುದ್ಧ ಪಕ್ಷಗಳಂತೆ ಕಾಣಿಸುತ್ತಾರೆ. ಆದರೆ ವಾಸ್ತವದಲ್ಲಿ ಅವರಿಬ್ಬರೂ ಒಂದೇ ರೀತಿ ವಿಚಾರ ಮಾಡುತ್ತಿದ್ದಾರೆ. ಈ ಎರಡೂ ಪಕ್ಷದವರೂ ರಾಮಾಯಣ ಮಹಾಭಾರತಗಳನ್ನು ಹಿಸ್ಟರಿ ಎಂದು ಭಾವಿಸಿದ್ದಾರೆ ಹಾಗಾಗಿ ಅವುಗಳಲ್ಲಿ ಬರುವ ಘಟನೆಗಳನ್ನು ಸತ್ಯ ಅಥವಾ ಸುಳ್ಳೆಂದು ತೀರ್ಮಾನಿಸುವುದು ನಿರ್ಣಾಯಕ ಎಂಬುದಾಗಿ ಭಾವಿಸಿದ್ದಾರೆ.

ರಾಮಾಯಣ ಹಾಗೂ ಮಹಾಭಾರತಗಳಂತೆಯೇ ಇನ್ನೂ ಅನೇಕಾನೇಕ ಪ್ರಾಚೀನ ಕಾವ್ಯಗಳೂ, ಪುರಾಣಗಳೂ ಹಾಗೂ ಕಥೆಗಳೂ ಭಾರತದಲ್ಲಿ ಇವೆ. ಅವುಗಳಲ್ಲಿ ಉಳಿದ ಯಾವುದರ ಸತ್ಯಾಸತ್ಯತೆಯ ಕುರಿತೂ ವಿವಾದಗಳು ಏಳುವುದಿಲ್ಲ. ಉದಾಹರಣೆಗೆ ಅಷ್ಟಾದಶ ಪುರಾಣಗಳು, ಕಥಾಸರಿತ್ಸಾಗರ, ಪಂಚತಂತ್ರದ ಕಥೆಗಳು ಇತ್ಯಾದಿಗಳನ್ನು ಐತಿಹಾಸಿಕ ಸತ್ಯಾಸತ್ಯತೆಯ ದೃಷ್ಟಿಯಿಂದ ಯಾರೂ ನೋಡಬಯಸಿಲ್ಲ. ನೀವು ಹೇಳಬಹುದು, ಪಂಚತಂತ್ರದ ಕಥೆಗಳಲ್ಲಿ ಪ್ರಾಣಿಗಳು ಹಾಗೂ ಪಕ್ಷಿಗಳು ಮನುಷ್ಯರಂತೇ ಮಾತನಾಡುವ, ವ್ಯವಹರಿಸುವ ಸನ್ನಿವೇಶಗಳು ಇರುವುದರಿಂದ ಅವು ಕಟ್ಟು ಕಥೆಗಳು ಎಂಬುದು ಸ್ಪಷ್ಟ. ಆದರೆ ಮಹಾಭಾರತ ರಾಮಾಯಣಗಳಲ್ಲೂ ಇಂಥ ಪ್ರಾಣಿ ಪಕಿಗಳ ವ್ಯವಹಾರಗಳು ಇವೆಯಲ್ಲ? ನಾಯಿಗಳು ಶಾಪ ಕೊಡುತ್ತವೆ, ಕಪಿಗಳು ಸೈನಿಕರಾಗಿ ಹೋರಾಡುತ್ತವೆ, ಸೇತುವೆ ಕಟ್ಟುತ್ತವೆ. ಹಾವುಗಳು ಆಧ್ಯಾತ್ಮಿಕ ಪ್ರಶ್ನೆ ಕೇಳುತ್ತವೆ. ಪ್ರಾಣಿಪಕ್ಷಿಗಳೆಲ್ಲ ಮನುಷ್ಯರಂತೇ ವ್ಯವಹರಿಸುತ್ತವೆ. ಇನ್ನು ಇವುಗಳಲ್ಲಿ ಬರುವ ಅತಿಮಾನುಷ ಘಟನೆಗಳಂತೂ ಲೆಕ್ಕಕ್ಕಿಲ್ಲ. ಇಷ್ಟಾಗಿಯೂ ಈ ಎರಡು ಕೃತಿಗಳ ಸಂದರ್ಭದಲ್ಲಿ ಮಾತ್ರವೇ ಐತಿಹಾಸಿಕ ಆಧಾರಗಳನ್ನು ಶೋಧಿಸುವುದು ಇಂದಿನ ಭಾರತೀಯರಿಗೆ ಬಹುಮುಖ್ಯ ಎನಿಸುತ್ತದೆ. ಏಕೆ?

ಈ ಎರಡು ಕೃತಿಗಳನ್ನೇ ನಮ್ಮ ಪ್ರಾಚೀನರು ಇತಿಹಾಸ ಎಂಬುದಾಗಿ ಕರೆದಿದ್ದಾರೆ ಹಾಗೂ ನಾವು ಹಿಸ್ಟರಿಯನ್ನು ಇತಿಹಾಸ ಎಂಬುದಾಗಿ ತರ್ಜುಮೆ ಮಾಡಿಕೊಂಡಿದ್ದೇವೆ. ಈ ಶಬ್ದವು ಇಂದು ನಮಗೆ ಸಮಸ್ಯೆಯನ್ನು ಸೃಷ್ಟಿಸುತ್ತಿರುವುದಕ್ಕೆ ಇದೇ ಕಾರಣ. ಇತಿಹಾಸ ಎಂದಾಕ್ಷಣ ಅವುಗಳು ಸತ್ಯಘಟನೆಗಳು ಎಂದು ಸಾಧಿಸುವ ಆಗ್ರಹಕ್ಕೆ ಭಾರತೀಯರು ಸಿಲುಕಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮಹಾಭಾರತ ರಾಮಾಯಣಗಳನ್ನು ಹಿಸ್ಟರಿಗಳನ್ನಾಗಿ ಮಾಡುವ ಪ್ರಯತ್ನದಲ್ಲಿ ಅವು ಹಿಸ್ಟರಿ ಬರವಣಿಗೆಯ ಅಪೂರ್ಣ ಅವತಾರಗಳು ಎಂಬ ತೀರ್ಮಾನಕ್ಕೆ ಬಂದಿದ್ದೇವೆ ಎಂಬುದನ್ನು ಹಿಂದಿನ ಅಂಕಣದಲ್ಲಿ ಪ್ರಸ್ತಾಪಿಸಿದ್ದೆ. ಹಿಸ್ಟರಿ ಎಂಬುದು ಸತ್ಯ ಘಟನೆಗಳನ್ನಾಧರಿಸಿದ ಕಥನವಾಗಿದೆ. ಹಾಗೆ ಭಾವಿಸಿಕೊಂಡಾಗ ಈ ಕೃತಿಗಳು ಕೂಡ ಮೂಲತಃ ಸತ್ಯಕಥೆಗಳಾಗಿದ್ದು, ಕಾಲಾಂತರದಲ್ಲಿ ಅವುಗಳ ಜೊತೆಗೆ ಕಟ್ಟುಕಥೆಗಳು ಬೆರೆತುಕೊಂಡಿವೆ, ಸತ್ಯದ ಜೊತೆಗೆ ಮಿಥ್ಯ ಬೆರೆತುಕೊಂಡಿದೆ ಎಂಬ ಧೋರಣೆ ಸ್ವಾಭಾವಿಕವಾಗಿಯೇ ಹುಟ್ಟುತ್ತದೆ. ರಾಮಾಯಣ ಮಹಾಭಾರತಗಳಲ್ಲಿ ಸತ್ಯಕಥೆಯನ್ನು ಸುಳ್ಳು ಕಥೆಗಳಿಂದ ಬೇರ್ಪಡಿಸುವ ಪ್ರಶ್ನೆ ಈ ಹಿನ್ನೆಲೆಯಿಂದ ಹುಟ್ಟಿಕೊಳ್ಳುತ್ತವೆ. ಈ ಕಾಯಕಕ್ಕೆ ತೊಡಗಿದ ಯಾರೇ ಆದರೂ ಅವುಗಳನ್ನು ಹಿಸ್ಟರಿಗಳು ಎಂಬುದಾಗಿ ನಂಬಿದ್ದಾರೆ.

ಮಹಾಭಾರತ ಹಾಗೂ ರಾಮಾಯಣಗಳ ಸತ್ಯವನ್ನು ಶೋಧಿಸುವುದೆಂದರೆ ನಾವು ಏನು ಭಾವಿಸಿಕೊಂಡಿದ್ದೇವೆ? ಅದು ಹಿಸ್ಟರಿಯ ಸತ್ಯ. ಅಂದರೆ ಈ ಕೃತಿಗಳಲ್ಲಿ ಉಲ್ಲೇಖಿತವಾದ ಘಟನೆಗಳು, ಸ್ಥಳಗಳು ಹಾಗೂ ಪಾತ್ರಗಳು ನಿಜವಾಗಿಯೂ ಭೂಮಿಯ ಮೇಲೆ ಇದ್ದವು ಅಥವಾ ನಡೆದವು ಅಂತ ಅರ್ಥ. ಅಂದರೆ ರಾಮ, ರಾವಣ, ಕೃಷ್ಟ್ಣ, ಅರ್ಜುನ, ದ್ರೌಪದಿ ಇವರೆಲ್ಲ ನಿಜವಾಗಿಯೂ ಒಂದು ಕಾಲದಲ್ಲಿ ಭೂಮಿಯ ಮೇಲೆ ಇದ್ದರು. ಹಸ್ತಿನಾವತಿ, ಲಂಕೆ, ಇತ್ಯಾದಿಗಳೂ ಇದ್ದವು. ಕುರುಕ್ಷೇತ್ರ ಯುದ್ಧ, ಸೇತುಬಂಧನ, ಸರ್ಪಯಾಗ, ಇತ್ಯಾದಿ ಘಟನೆಗಳೆಲ್ಲವೂ ನಿಜವಾಗಿ ಒಂದು ಕಾಲದಲ್ಲಿ ನಡೆದವು, ಇತ್ಯಾದಿಗಳು ಈ ಹಿಸ್ಟರಿಯ ಸತ್ಯಗಳು. ಅಂದರೆ ಒಂದು ಕೃತಿಯನ್ನು ತೆಗೆದುಕೊಂಡು ಅದರ ಪಾತ್ರ, ಘಟನೆಗಳೆಲ್ಲವೂ ನಿಜವಾಗಿ ಇದ್ದವು ಎಂದು ತೋರಿಸುವುದೇ ಅವು ಸತ್ಯ ಎಂಬುದನ್ನು ನಿದರ್ಶಿಸಲಿಕ್ಕೆ ಮುಖ್ಯವಾಗುತ್ತವೆ. ಈ ಸತ್ಯವನ್ನು ತೋರಿಸುವುದಕ್ಕೆ ಅವುಗಳು ಯಾವ ಕಾಲದಲ್ಲಿ ನಡೆದವು ಎಂಬುದನ್ನು ನಿರ್ದಿಷ್ಟಪಡಿಸುವುದೂ ಮುಖ್ಯ.
ಈ ಹಂತದಲ್ಲಿ ಏಳುವ ಎರಡು ಪ್ರಶ್ನೆಗಳಿಗೆ ನಮಗಿನ್ನೂ ಉತ್ತರ ಸಿಕ್ಕಿಲ್ಲ. ಮೊದಲನೆಯದೆಂದರೆ ಈ ಕಥೆಗಳನ್ನು ನಮಗೆ ದಾಟಿಸಿದ ನಮ್ಮ ಪೂರ್ವಜರೇಕೆ ಈ ಘಟನೆಗಳ ಸತ್ಯಾಸತ್ಯತೆಯ ಕುರಿತು ದಿವ್ಯ ಅಜ್ಞಾನವನ್ನು ಬಿಟ್ಟು ಹೋಗಿದ್ದಾರೆ? ಎರಡನೆಯದೆಂದರೆ ಅವು ನಿಜವಾಗಿಯೂ ನಡೆದಿವೆ ಎಂಬುದು ನಮಗೇಕೆ ಮುಖ್ಯವಾಗಬೇಕು? ಮೊದಲನೆಯ ಪ್ರಶ್ನೆಗೆ ಉತ್ತರಗಳನ್ನು ನೀಡಲು ವಿದ್ವಾಂಸರು ಪ್ರಯತ್ನಿಸಿದ್ದರೂ ಯಾವುದೂ ಸಮರ್ಪಕವಾಗಿಲ್ಲ. ಬ್ರಾಹ್ಮಣ ಪುರೋಹಿತಶಾಹಿಗಳು ತಮ್ಮ ಸ್ವಾರ್ಥಕ್ಕಾಗಿ ಕಟ್ಟು ಕಥೆಗಳನ್ನು ಸೇರಿಸಿದ್ದಾರೆ, ಭಾರತೀಯರು ಬೌದ್ಧಿಕವಾಗಿ ಬಾಲಿಶ ಅವಸ್ಥೆಯಲ್ಲಿರುವುದರಿಂದ ಅವರಿಗೆ ಹಿಸ್ಟರಿ-ಕಟ್ಟುಕಥೆಗಳ ನಡುವಿನ ವ್ಯತ್ಯಾಸ ತಿಳಿದಿಲ್ಲ, ಇತ್ಯಾದಿ ವಿವರಣೆಗಳಿವೆ. ಇವುಗಳನ್ನು ಒಪ್ಪಿಕೊಂಡರೆ ನಮ್ಮ ಪೂರ್ವಜರಿಗೆ ದುರುದ್ದೇಶವನ್ನು ಅಥವಾ ಬುದ್ಧಿಮಾಂದ್ಯತೆಯನ್ನು ಆರೋಪಿಸಬೇಕಾಗುತ್ತದೆ. ಹಾಗಾಗಿ ಇದು ಅಸಾಧ್ಯ. ಎರಡನೆಯ ಪ್ರಶ್ನೆಯನ್ನು ನಾವಿನ್ನೂ ಕೇಳಿಕೊಂಡೇ ಇಲ್ಲ. ಅದೆಂದರೆ, ಈ ರಾಮ ಅಥವಾ ಧರ್ಮರಾಯರು ನಿಜವಾಗಿಯೂ ಇದ್ದರೇ ಎಂಬ ಮಾಹಿತಿಯು ರಾಮಾಯಣ ಅಥವಾ ಮಹಾಭಾರತವನ್ನು ಅರ್ಥಮಾಡಿಕೊಳ್ಳಲು ಅನಿವಾರ್ಯವೆ? ಅನಿವಾರ್ಯ ಅಂತಾದರೆ ಬ್ರಿಟಿಷ್ ಪೂರ್ವದ ಸಹಸ್ರಾರು ವರ್ಷಗಳಲ್ಲಿ ಭಾರತೀಯರು ಈ ಪ್ರಶ್ನೆಗಳನ್ನು ಕೇಳಿಯೇ ಇಲ್ಲ, ಹಾಗಾಗಿ ಅವರು ಈ ಕೃತಿಗಳನ್ನು ಅರ್ಥಮಾಡಿಕೊಂಡೇ ಇಲ್ಲ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ಇಲ್ಲ, ಅವರು ಅರ್ಥ ಮಾಡಿಕೊಂಡಿದ್ದರು ಅಂತಾದರೆ ಈ ಕೃತಿಗಳಲ್ಲಿ ಬರುವ ಪಾತ್ರಗಳು ಹಾಗೂ ಘಟನೆಗಳು ನಿಜವೇ ಸುಳ್ಳೇ ಎಂಬ ಜಿಜ್ಞಾಸೆಯು ನಮ್ಮವರಿಗಿಂದು ಮಹತ್ವದ್ದೆಂದು ಏಕೆ ಅನ್ನಿಸುತ್ತದೆ?

ಏಕೆ ಈ ಮೇಲಿನ ಫಜೀತಿಗಳು ಏಳುತ್ತವೆಯೆಂದರೆ ಇವು ರಾಮಾಯಣ ಮಹಾಭಾರತಗಳನ್ನು ರಚಿಸಿದ ಸಂಸ್ಕೃತಿಯ ಪ್ರಶ್ನೆಗಳಲ್ಲ. ನಾವು ಹಿಸ್ಟರಿಯ ಪ್ರಶ್ನೆಗಳನ್ನು ತಂದು ಈ ಕೃತಿಗಳಿಗೆ ಆರೋಪಿಸುತ್ತಿದ್ದೇವೆ. ಹಿಸ್ಟರಿಯಲ್ಲಿ ನಿಜ ಸುಳ್ಳಿನ ಪ್ರಶ್ನೆಗಳು ಏಕೆ ಮಹತ್ವ ಪಡೆಯುತ್ತವೆಯೆಂಬುದಕ್ಕೆ ಪಾಶ್ಚಾತ್ಯರಿಗೆ ಅವರದೇ ಆದ ಕಾರಣಗಳಿವೆ. ಪ್ರಾಚೀನ ಗ್ರೀಕರು ಹಿಸ್ಟರಿಗೂ ಮಿಥ್ಗಳಿಗೂ ಒಂದು ವ್ಯತ್ಯಾಸವನ್ನು ಗುರುತಿಸಿದ್ದರು ಹಾಗೂ ಮಿಥ್ಗಳು ಸುಳ್ಳುಕಥೆಗಳು, ಹಿಸ್ಟರಿ ಸತ್ಯಕಥೆ ಎಂಬುದಾಗಿ ಬೇರ್ಪಡಿಸಿದ್ದರು. ಹಿಸ್ಟೋರಿಯಾ ಎಂದರೆ ಸತ್ಯದ ಕುರಿತ ವಿಚಾರಣೆ. ಅದರ ಜೊತೆಗೇ ಪ್ಲೇಟೋನಂಥ ದಾರ್ಶನಿಕರು ಸುಳ್ಳುಗಳು ಜನರನ್ನು ದಾರಿ ತಪ್ಪಿಸುತ್ತವೆ, ಗ್ರೀಕರ ಜೀವನವು ಸತ್ಯವನ್ನಾಧರಿಸಿ ಇರಬೇಕು ಎಂಬುದಾಗಿ ಪ್ರತಿಪಾದಿಸಿದ್ದರು. ಹಾಗಾಗಿ ಇಂಥ ಸುಳ್ಳು ಕಥೆಗಳನ್ನು ಹೇಳುವವರನ್ನು ಗಡೀಪಾರು ಮಾಡಬೇಕೆಂದೂ ಅವನು ವಾದಿಸಿದನು. ಅವರನ್ನನುಸರಿಸಿ ಹಿಸ್ಟರಿ ಎಂಬುದು ಮಾತ್ರವೇ ಗತಕಾಲದ ಕುರಿತು ನಂಬಿಕೊಳ್ಳಬಹುದಾದ ಕಥನವಾಗಿದೆ ಎಂಬುದಾಗಿ ಪ್ರಾಚೀನ ರೋಮನ್ನರೂ ಕೂಡ ತಮ್ಮ ಗತಕಾಲದ ಕುರಿತು ಅಧಿಕೃತ ಮಾಹಿತಿಗಾಗಿ ಹಿಸ್ಟರಿಗಳನ್ನು ಬರೆದರು.

ಪ್ರಾಚೀನ ರೋಮನ್ನರ ಪಟ್ಟಣಗಳಲ್ಲಿಯೇ ಸೆಮೆಟಿಕ್ ರಿಲಿಜನ್ನುಗಳ ಅನುಯಾಯಿಗಳಾದ ಯಹೂದಿಗಳು ಹಾಗೂ ಕ್ರೈಸ್ತರು ಕೂಡ ತಮ್ಮ ಅಸ್ತಿತ್ವವನ್ನು ರೂಪಿಸಿಕೊಂಡರು. ಆ ಸಂದರ್ಭದಲ್ಲಿ ರೋಮನ್ನರಿಗೂ, ಸೆಮೆಟಿಕ್ ರಿಲಿಜನ್ನುಗಳಿಗೂ ಒಂದು ಸಂಘರ್ಷ ಪ್ರಾರಂಭವಾಯಿತು. ಏತಕ್ಕೆಂದರೆ, ರೋಮನ್ನರ ನಗರ ದೇವತೆಗಳ ಪೂಜೆ, ಉತ್ಸವಾದಿಗಳಲ್ಲಿ ಭಾಗವಹಿಸಲು ಯೆಹೂದಿಗಳು ಹಾಗೂ ಕ್ರೈಸ್ತರು ನಿರಾಕರಿಸುತ್ತಿದ್ದರು. ರೋಮನ್ನರ ಪ್ರಕಾರ ನಗರಕ್ಕೆ ಒಳ್ಳೆಯದಾಗಬೇಕಾದರೆ ನಗರವಾಸಿಗಳೆಲ್ಲರೂ ಈ ದೇವತೆಗಳ ಪೂಜೆಯಲ್ಲಿ ಪಾಲ್ಗೊಳ್ಳಬೇಕು, ಅದು ನಗರವಾಸಿಗಳ ಕರ್ತವ್ಯ. ಕ್ರೈಸ್ತ, ಯೆಹೂದಿಗಳ ಪ್ರಕಾರ ತಮ್ಮ ಗಾಡ್ನನ್ನು ಬಿಟ್ಟು ಬೇರೆ ಯಾವ ದೇವತೆಯನ್ನೂ ಪೂಜಿಸುವಂತಿಲ್ಲ ಎಂಬುದಾಗಿ ತಮ್ಮ ರಿಲಿಜನ್ನು ಕಟ್ಟುಪಾಡು ಮಾಡಿದೆ. ಹಾಗಾಗಿ ರೋಮನ್ ದೇವತೆಗಳನ್ನು ಪೂಜಿಸಿದರೆ ತಮ್ಮ ಗಾಡ್ ನನ್ನು ವಿರೋಧಿಸಿದಂತೇ ಆಗುತ್ತದೆ ಹಾಗೂ ಅದು ಪಾಪವಾಗುತ್ತದೆ. ರೋಮನ್ನರಿಗೆ ಈ ಪಟ್ಟು ಹೊಸದು, ಏಕೆಂದರೆ ಅವರು ತಮ್ಮ ನಗರಗಳಲ್ಲಿ ಅನೇಕ ದೇವತೆಗಳನ್ನು ಪೂಜಿಸುತ್ತಿದ್ದರು. ಹೊಸ ಹೊಸ ದೇವತೆಗಳೂ ಆ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದವು. ಒಂದು ದೇವತೆಯನ್ನು ಪೂಜಿಸಿದರೆ ಮತ್ತೊಂದಕ್ಕೆ ಸಿಟ್ಟು ಬರುವ ಕಥೆಯ ಮೇಲೆ ಅವರಿಗೆ ವಿಶ್ವಾಸ ಬರಲಿಲ್ಲ. ಅದಕ್ಕೂ ಮುಖ್ಯವಾಗಿ ಯೆಹೂದಿಗಳು ಹಾಗೂ ಕ್ರೈಸ್ತರ ಪರಂಪರೆ ಅಲ್ಲಿ ಯಾರಿಗೂ ಅಷ್ಟಾಗಿ ಗೊತ್ತಿರಲಿಲ್ಲ. ಹಾಗಾಗಿ ಕ್ರೈಸ್ತರು ಹಾಗೂ ಯೆಹೂದಿಗಳು ಸಲ್ಲದ ಕಾರಣಗಳನ್ನು ಹೇಳಿ ತಮ್ಮ ದೇವತೆಗಳಿಗೆ ಅಗೌರವ ತೋರಿಸುತ್ತಿದ್ದಾರೆ ಎಂಬುದಾಗಿ ಭಾವಿಸಿ ಅವರ ಜೊತೆಗೆ ಸಂಘರ್ಷಕ್ಕಿಳಿದರು.

ಈ ಮೇಲಿನ ಫಜೀತಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಯೆಹೂದಿಗಳು ತಮ್ಮದು ಪ್ರಾಚೀನ ಸಂಪ್ರದಾಯ ಎಂಬುದನ್ನು ಹಳೆ ಒಡಂಬಡಿಕೆಯ ಕಥೆಗಳನ್ನು ಉದಾಹರಿಸಿ ರೋಮನ್ನರಿಗೆ ಮನದಟ್ಟು ಮಾಡಲೆತ್ನಿಸಿದರು. ರೋಮನ್ನರು ಎಲ್ಲಾ ಸಂಪ್ರದಾಯಗಳನ್ನು ಗೌರವಿಸುತ್ತಿದ್ದರು. ಸಂಪ್ರದಾಯವೆಂದರೆ ಪೂರ್ವಜರಿಂದ ದತ್ತವಾದ ಆಚರಣೆಗಳು. ಪೂರ್ವಜರು ಅಷ್ಟೆಲ್ಲ ತಲೆಮಾರುಗಳ ವರೆಗೆ ಅವನ್ನು ದಾಟಿಸಿಕೊಂಡು ಬಂದಿದ್ದಾರೆಂಬುದೇ ಅವು ಆ ಸಮುದಾಯಕ್ಕೆ ಒಳ್ಳೆಯದನ್ನು ಮಾಡಿವೆ ಎಂಬುದಕ್ಕೆ ಪ್ರಮಾಣ. ಅಂದ ಮೇಲೆ ಅವು ತಮಗೆ ಒಪ್ಪಿಗೆಯಾಗಲಿ ಬಿಡಲಿ, ಅದು ಪೂರ್ವಜರಿಂದ ದತ್ತವಾಗಿ ಬಂದ ಪಕ್ಷದಲ್ಲಿ ಆಯಾ ಸಮುದಾಯಗಳು ಒಳ್ಳೆಯದು ಎಂದು ಭಾವಿಸಿದ್ದಲ್ಲಿ ಅದನ್ನು ತಾವೂ ಗೌರವಿಸಲೇ ಬೇಕು ಎಂಬುದು ರೋಮನ್ನರ ತರ್ಕ. ಈ ತರ್ಕವೇ ರೋಮನ್ನರ ಸಾಮ್ರಾಜ್ಯದಲ್ಲಿ ಸಂಪ್ರದಾಯಗಳ ಸಹಬಾಳ್ವೆಗೆ ಒಂದು ತಳಹದಿಯನ್ನು ನಿರ್ಮಿಸಿತ್ತು. ಯೆಹೂದಿಗಳು ತಮ್ಮದು ಪ್ರಾಚೀನ ಸಂಪ್ರದಾಯ ಎಂಬುದನ್ನು ನಿದರ್ಶಿಸಿದಾಗ ಅವರ ಕುರಿತಂತೇ ರೋಮನ್ನರು ತಮ್ಮ ಧೋರಣೆಯನ್ನು ಸಡಿಲಿಸಿದರು.

ಆದರೆ ಇದರಿಂದ ಕ್ರೈಸ್ತರ ಸಮಸ್ಯೆ ಬಗೆಹರಿಯಲಿಲ್ಲ. ಅವರೂ ತಮ್ಮದು ಯೆಹೂದಿಗಳಂತೆಯೇ ಪ್ರಾಚೀನ ಸಂಪ್ರದಾಯವೆಂಬುದನ್ನು ನಿದರ್ಶಿಸಬೇಕಿತ್ತು. ಅವರಿಗಿದ್ದ ಒಂದೇ ಕಥೆಯೆಂದರೆ ಸೃಷ್ಟಿಕರ್ತನಾದ ಗಾಡ್ ಎಂಬವನು ಯೆಹೂದಿಗಳ 13 ಬುಡಕಟ್ಟುಗಳಲ್ಲಿ ಹುಟ್ಟಿಬರುತ್ತೇನೆಂದು ಮಾತುಕೊಟ್ಟದ್ದ ಪ್ರಕಾರ ಜೀಸಸ್ ಕ್ರೈಸ್ತನಾಗಿ ಹುಟ್ಟಿ ಬಂದಿದ್ದಾನೆ, ಅವನ ಅನುಯಾಯಿಗಳೇ ತಾವು. ಈ ಕಥೆಯು ರೋಮಿನ ನಗರಗಳಲ್ಲಿ ಅವರನ್ನೊಂದು ಬಿಟ್ಟರೆ ಉಳಿದವರಿಗೆ ಗೊತ್ತಿರಲಿಲ್ಲ. ಅಂದರೆ ಯೆಹೂದಿಗಳ ಹಳೇ ಒಡಂಬಡಿಕೆಯ ಕಥೆಯನ್ನು ತಮ್ಮದೆಂದು ಹೇಳಿಕೊಳ್ಳದಿದ್ದರೆ ಅವರಿಗೆ ತಮ್ಮದಾದ ಪರಂಪರೆಯೇ ಇರಲಿಲ್ಲ. ಆದರೆ ಯೆಹೂದಿಗಳು ಅದನ್ನು ಈಗಾಗಲೇ ತಮ್ಮದೆಂದು ಹೇಳಿಕೊಂಡಿದ್ದರು. ಈ ಇಕ್ಕಟ್ಟಿಗೆ ಸಿಲುಕಿದ ಕ್ರೈಸ್ತರು ಅದರಿಂದ ಹೊರಬರುವ ಪ್ರಯತ್ನವಾಗಿ ಈ ಮುಂದಿನ ಹೆಜ್ಜೆಗಳನ್ನು ಇರಿಸಿದರು: 1) ತಮ್ಮದು ಸಂಪ್ರದಾಯವೇ ಅಲ್ಲ, ಅದು ರಿಲಿಜನ್ನು, ಹಾಗಾಗಿಯೇ ಶ್ರೇಷ್ಠ ಎಂಬುದಾಗಿ ವಾದಮಾಡಿದ್ದು. ಏಕೆಂದರೆ ಸಂಪ್ರದಾಯಗಳು ಹಿಂದಿನವರ ಅಂಧಾನುಕರಣೆಯೇ ಹೊರತೂ ಯಾವುದೇ ಸತ್ಯದ ನೆಲೆಗಟ್ಟಿನಿಂದ ಪ್ರಮಾಣಿತವಾದವುಗಳಲ್ಲ. ತಮ್ಮ ಆಚರಣೆಗಳು ಸತ್ಯ ಘಟನೆಯನ್ನು ಆಧರಿಸಿವೆ ಹಾಗಾಗಿ ಸಂಪ್ರದಾಯಗಳಿಗಿಂತಲೂ ಹೆಚ್ಚು ವಿಶ್ವಾಸಾರ್ಹವಾಗಿವೆ. 2) ತಮ್ಮದು ಸತ್ಯ ಘಟನೆ ಎಂಬುದನ್ನು ದೃಷ್ಟಾಂತ ಪಡಿಸಲು ತಮ್ಮದೇ ಹಿಸ್ಟರಿಯನ್ನು ರಚಿಸಿದ್ದು.

ಹಿಸ್ಟರಿಯೆಂಬುದು ಗತಕಾಲದ ಅಧಿಕೃತ ಜ್ಞಾನ ಎಂಬ ನಂಬಿಕೆಯನ್ನು ಹೊಂದಿದ್ದ ರೋಮನ್ನರ ಸಮಾಜದಲ್ಲಿ ಕ್ರೈಸ್ತರು ತಮ್ಮ ಸಮರ್ಥನೆಗಾಗಿ ಈ ಹಿಸ್ಟರಿಯನ್ನೇ ತಮ್ಮದನ್ನಾಗಿ ಮಾಡಿಕೊಂಡರು. ಆದರೆ ಅವರೇನೂ ಗ್ರೀಕರ ಹಾಗೆ ಸಾಕ್ಷ್ಯಾಧಾರಗಳನ್ನು ಪರೀಕ್ಷಿಸಿ ಕಂಡುಕೊಂಡ ನಿಜಗಳನ್ನು ಆಧರಿಸಿ ತರ್ಕಿಸಲಿಲ್ಲ. ಬದಲಾಗಿ ತಾವು ಹೇಳಿಕೊಂಡು ಬಂದ ಕಥೆಯೇ ನಿಜ ಎಂಬುದಾಗಿ ಹೇಳಿದರು, ಅದು ನಿಜವೇ ಏಕೆಂದರೆ ಈ ಸೃಷ್ಟಿಯನ್ನು ಮಾಡಿದವನೇ ಸ್ವತಃ ಜೀಸಸ್ನಿಗೆ ಅದನ್ನು ಹೇಳಿದ್ದಾನೆ. ಅದೇ ಈ ನಿಜಕ್ಕೆ ಪ್ರಮಾಣ. ಈ ಪ್ರಮಾಣದ ಪ್ರಕಾರ ಇಡೀ ಬೈಬಲ್ಲಿನ ಕಥೆಯೇ ಸತ್ಯ. ಹೀಗೆ ಕ್ರಿಶ್ಚಿಯಾನಿಟಿಯು ಬೈಬಲ್ಲಿನ ಕಥೆಯು ನಿಜವಾದ ಕಾರಣದಿಂದಲೇ ಕ್ರೈಸ್ತರ ರಿಲಿಜನ್ನು ಕೂಡ ಸತ್ಯ ಎನ್ನುತ್ತದೆ. ಹಾಗಾಗಿ ಈ ಬೈಬಲ್ಲು ಸುಳ್ಳಾದರೆ ಕ್ರಿಶ್ಚಿಯಾನಿಟಿಯೇ ಅಪ್ರಸ್ತುತವಾಗುತ್ತದೆ. ಈ ಮಟ್ಟಕ್ಕೆ ಹಿಸ್ಟರಿ ನಿರ್ಣಾಯಕವಾದುದರಿಂದ ತಮ್ಮ ಕಥೆಯು ಸತ್ಯವೋ ಸುಳ್ಳೋ ಎಂಬುದು ಕ್ರಿಶ್ಚಿಯಾನಿಟಿಯ ಮೇಲಿನ ನಂಬಿಕೆಯ ಪ್ರಶ್ನೆಯಾಗಿ ಮಾರ್ಪಡುತ್ತದೆ. ಇದು ಕೇವಲ ಕ್ರಿಶ್ಚಿಯಾನಿಟಿಯದೊಂದೇ ಸಮಸ್ಯೆಯಲ್ಲ. ಜೂಡಾಯಿಸಂ ಹಾಗೂ ಇಸ್ಲಾಂಗಳೂ ಕೂಡ ತಂತಮ್ಮ ಕಥೆಗಳು ನಿಜಘಟನೆಗಳೇ ಎಂದು ನಂಬುವುದು ತಮಗೆ ನಿರ್ಣಾಯಕ ಎಂದುಕೊಂಡಿವೆ. ಹಾಗಾಗೇ ಹಿಸ್ಟರಿಗಾಗಿ ಹೊಡೆದಾಡುವ, ಹಿಸ್ಟರಿಗೆ ಸಂಬಂಧಪಟ್ಟ ಸ್ಥಳಗಳನ್ನು ಸಂರಕ್ಷಿಸಿಕೊಳ್ಳುವುದನ್ನು ಸೆಮೆಟಿಕ್ ರಿಲಿಜನ್ನುಗಳು ನಿರ್ಣಾಯಕ ಎಂದುಕೊಳ್ಳುತ್ತವೆ. ವರ್ತಮಾನವನ್ನು ಹಿಸ್ಟರಿಯ ಸತ್ಯಗಳ ಮೂಲಕ ಪ್ರಮಾಣೀಕರಿಸುವುದು ಅವುಗಳಿಗೆ ಸಹಜವಾಗಿ ಕಾಣಿಸುತ್ತದೆ.

ಈ ಮಧ್ಯೆ ಯುರೋಪಿನಲ್ಲಿ ಪ್ರಚಲಿತದಲ್ಲಿ ಬಂದ ಪ್ರೊಟೆಸ್ಟಾಂಟ್ ಪಂಥದವರು ಕ್ಯಾಥೋಲಿಕ್ ಕ್ರೈಸ್ತರು ಬರೆದುಕೊಂಡು ಬಂದಿದ್ದ ಅತಿಮಾನುಷ ಕಥೆಗಳು ನಿಜವಾಗಲಿಕ್ಕೆ ಸಾಧ್ಯವಿಲ್ಲ ಎಂದರು. ಕ್ರಿಸ್ತನ ನಂತರ ಯಾರೂ ಅತಿಮಾನುಷ ಜೀವಿಗಳಿಲ್ಲ ಹಾಗಾಗಿ ಬೈಬಲ್ಲೊಂದನ್ನು ಬಿಟ್ಟು ಎಲ್ಲವೂ ಹುಲುಮಾನವರ ವೃತ್ತಾಂತಗಳೇ ಆಗಿವೆ. ಮನುಷ್ಯನಿಗೆ ಏನು ಸಹಜವೋ ಅದನ್ನು ಮಾತ್ರ ಅವರು ಮಾಡಿದ್ದಾರೆ. ಹಾಗಾಗಿ ಮನುಷ್ಯರ ಹಿಸ್ಟರಿಯು ಮನುಷ್ಯ ಸಾಧನೆಗಳ ನೈಜ ದಾಖಲೆಗಳಾಗಿರಲೇಬೇಕು ಎಂಬುದಾಗಿ ಅವರು ಆಗ್ರಹಿಸಿದರು. ಈ ರೀತಿಯಲ್ಲಿ ಹಿಸ್ಟರಿಯ ಸತ್ಯವನ್ನು ನೈಜ ವ್ಯಕ್ತಿ ಹಾಗೂ ಘಟನೆಗಳ ನೆಲೆಯಲ್ಲಿ ತಂದು ನಿಲ್ಲಿಸಿದರು.

ಪಾಶ್ಚಾತ್ಯ ಸೆಕ್ಯುಲರ್ ಹಿಸ್ಟರಿಯು ನಿಜದ ಕುರಿತ ಪ್ರೊಟೆಸ್ಟಾಂಟ್ ಧೋರಣೆಯನ್ನೇ ಸ್ವೀಕರಿಸಿ ನಿಜಘಟನೆಗಳನ್ನು ಶೋಧಿಸುವ ವೈಜ್ಞಾನಿಕ ವಿಧಾನಗಳನ್ನು, ಸಿದ್ಧಾಂತಗಳನ್ನು ಬೆಳೆಸಿತು. ಆದರೆ ಸೆಕ್ಯುಲರ್ ಹಿಸ್ಟರಿಯ ಸಿದ್ಧಾಂತಗಳು ಮಾತ್ರ ಮಾನವರ ಕುರಿತ ಥಿಯಾಲಜಿಯ ಗ್ರಹಿಕೆಗಳನ್ನು ಆಧರಿಸಿಯೇ ಇದ್ದವು. ಅದು ಹಿಸ್ಟರಿ ಎಂಬುದು ಗಾಡ್ನ ಯೋಜನೆಯಲ್ಲ, ಅದು ನಿಸರ್ಗದ ಅಥವಾ ಮಾನವನ ಯೋಜನೆ ಎಂಬ ತಿದ್ದುಪಡಿಯನ್ನು ಮಾಡಿತು ಅಷ್ಟೆ. ಜ್ಞಾನೋದಯ ಯುಗದಿಂದ ಬರೆದುಕೊಂಡು ಬಂದ ಈ ಸೆಕ್ಯುಲರ್ ಹಿಸ್ಟರಿಗೆ ನಿಸರ್ಗ ಅಥವಾ ಮಾನವನ ಯೋಜನೆ ಏನು ಎಂಬುದರ ಕುರಿತು ಒಮ್ಮತ ಹಾಗೂ ಸ್ಪಷ್ಟತೆ ಇದುವರೆಗೂ ಬಂದಿಲ್ಲ. ಆದರೆ ಗತಕಾಲದ ನಿಜ ಘಟನೆಗಳನ್ನು ಕಂಡುಹಿಡಿದು ಹಿಸ್ಟರಿಯನ್ನು ರಚಿಸಿಕೊಳ್ಳುವುದು ಮಾನವರ ವರ್ತಮಾನ ಹಾಗೂ ಭವಿಷ್ಯಕ್ಕೆ ಅತ್ಯಗತ್ಯ ಎಂಬ ನಂಬಿಕೆ ಅದರಿಂದ ವಿಚಲಿತವಾಗಿಲ್ಲ. ಹಾಗಾಗಿ ಹಿಸ್ಟರಿ ಬರವಣಿಗೆ ಎಂಬುದು ಅಂತಿಮವಾಗಿ ನಿಜ ಘಟನೆಗಳ ಶೋಧನೆಯಾಗಿ ಮಹತ್ವಪಡೆಯಿತು. ಅದು ವರ್ತಮಾನಕ್ಕೆ ಅತ್ಯಂತ ಮುಖ್ಯ ಎಂಬುದು ಅವರ ನಂಬಿಕೆ, ಆದರೆ ಅದು ಹೇಗೆಂಬುದು ಬುದ್ಧಿಗೆ ನಿಲುಕಿಲ್ಲ.

ಪಾಶ್ಚಾತ್ಯರು ಭಾರತದ ಹಿಸ್ಟರಿಯನ್ನು ರಚಿಸುವ ಸಂದರ್ಭದಲ್ಲಿ ಇಂಥ ಸತ್ಯಗಳಿಗಾಗಿ ನಮ್ಮ ಗ್ರಂಥಗಳನ್ನು ತಡಕಾಡಿದರು. ವಿಭಿನ್ನ ಸಂಸ್ಕೃತಿಗಳು ದಾಟಿಸಿಕೊಂಡು ಬಂದ ಕಥೆಗಳು ಆಯಾ ಸಂಸ್ಕೃತಿಗಳ ಹಿಸ್ಟರಿಯನ್ನು ತಿಳಿಸುತ್ತವೆ, ಹಾಗಾಗಿ ಇಂಥ ಗ್ರಂಥಗಳಲ್ಲಿ ಬರುವ ಕಥೆಗಳು ನಿಜವಾಗಿರಬೇಕು ಇಲ್ಲ ಸುಳ್ಳಾಗಿರಬೇಕು ಎಂಬ ಧೋರಣೆಯಿಂದ ಅವನ್ನು ನೋಡಿದರು. ಇವೆಲ್ಲ ಸುಳ್ಳು ಎಂಬ ನಿರ್ಣಯಕ್ಕೆ ಬಂದ ಮೆಕಾಲೆಯಂಥ ಕೆಲವರು ಅವೆಲ್ಲ ಜ್ಞಾನವೇ ಅಲ್ಲ, ನಿಷ್ಪ್ರಯೋಜಕ ಎಂಬುದಾಗಿ ಪರಿಗಣಿಸಿ ಅವನ್ನು ತಿರಸ್ಕರಿಸುವ ಸಲಹೆಯನ್ನು ನೀಡಿದರು. ಆದರೆ ಇನ್ನೂ ಕೆಲವರು ಈ ಕಥೆಗಳು ಸುಳ್ಳಿನ ಹೊದಿಕೆಯೊಳಗೆ ಪರೋಕ್ಷವಾಗಿ ಗತಕಾಲದ ನಿಜಘಟನೆಗಳನ್ನು ಬಚ್ಚಿಟ್ಟುಕೊಂಡಿವೆ ಎಂಬುದಾಗಿ ನಿರ್ಣಯಿಸಿ ಅವುಗಳನ್ನು ಪರಾಮರ್ಶೆಗೊಡ್ಡಿದರು. ಅವರನ್ನನುಸರಿಸಿ ಭಾರತೀಯರೂ ಕೂಡ ಈ ಪ್ರಾಚೀನ ಕಥೆಗಳಲ್ಲಿ ಸತ್ಯ ಘಟನೆಗಳು ಅಡಕವಾಗಿವೆ ಎಂಬ ಧೋರಣೆಯನ್ನು ರೂಢಿಸಿಕೊಂಡಿದ್ದಾರೆ.

ನಮ್ಮ ಪ್ರಾಚೀನ ಗ್ರಂಥಗಳನ್ನು ಹಿಸ್ಟರಿಗೆ ಸಮೀಕರಿಸಿದಾಗ ಅವನ್ನು ನೋಡುವ ಏಕೈಕ ವಿಧಾನವೆಂದರೆ ಅವುಗಳಲ್ಲಿ ಬರುವ ಘಟನೆಗಳು ನಿಜವೋ ಸುಳ್ಳೋ ಎಂಬುದು. ಒಂದೊಮ್ಮೆ ಅವು ಹಿಸ್ಟರಿಗಳು ಅಲ್ಲದಿದ್ದರೆ? ಅವು ಬೇರೇನನ್ನೂ ತಿಳಿಸಲಿಕ್ಕಾಗಿ ರಚನೆಯಾಗಿದ್ದರೆ? ಅವುಗಳ ನಿಜ ಸುಳ್ಳುಗಳ ಕುರಿತ ಬಡಿದಾಟವು ವ್ಯರ್ಥವಾಗುತ್ತದೆಯಷ್ಟೇ ಅಲ್ಲ ಈ ಗ್ರಂಥಗಳ ಜೊತೆಗೆ ಇರುವ ಪಾರಂಪರಿಕ ಸಂಬಂಧವನ್ನು ಕಡಿದುಕೊಳ್ಳುವುದರಿಂದ ಅವೂ ನಮ್ಮ ಪಾಲಿಗೆ ಅರ್ಥಹೀನವಾಗುತ್ತವೆ.

ಪ್ರೊ.ಎಸ್.ಎನ್.ಬಾಲಗಂಗಾಧರ 

ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಇಂದು ಸಾಮಾನ್ಯವಾಗಿ ನಮ್ಮ ಕಿವಿಗೆ ಬೀಳುವ ಒಂದು ಪ್ರಶ್ನೆಯೆಂದರೆ ‘ಭಾರತೀಯರಿಗೆ ಇತಿಹಾಸ ಪ್ರಜ್ಞೆ ಇದೆಯೆ?’ ಎಂಬುದು. ಈ ಪ್ರಶ್ನೆಗೆ ಇಲ್ಲ ಎಂಬುದಾಗಿ ಒಂದಷ್ಟು ಜನರು ಉತ್ತರಿಸಿದರೆ, ಇನ್ನೂ ಕೆಲವರು ಇದೆಯೆಂಬುದಾಗಿ ಶಪಥಮಾಡಿ ಹೇಳುತ್ತಾರೆ. ಆದರೆ ಈ ಚರ್ಚೆಯಲ್ಲಿ ತೊಡಗಿಕೊಂಡ ಎಷ್ಟು ಮಂದಿಗೆ ಈ ಪ್ರಶ್ನೆ ಅರ್ಥವಾಗಿದೆ ಎಂಬುದೇ ದೊಡ್ಡ ಯಕ್ಷಪ್ರಶ್ನೆಯಾಗಿದೆ. ಏಕೆಂದರೆ ನಮ್ಮ ಮಹಾಭಾರತ ರಾಮಾಯಣಗಳನ್ನು ಇತಿಹಾಸ ಎಂಬುದಾಗಿ ಪ್ರಾಚೀನ ಕಾಲದಿಂದಲೂ ಕರೆದುಕೊಂಡು ಬರಲಾಗಿದೆ. ಈ ಇತಿಹಾಸವೆಂದರೆ ಹಿಂದಿನ ಕಾಲದಲ್ಲಿ ನಡೆದಿವೆ ಎನ್ನಲಾದ ಘಟನೆಗಳು. ಅದರಲ್ಲೂ ‘ಹೀಗೇ ಇತ್ತು’ ಎಂದು ಖಚಿತವಾಗಿ ಹೇಳುವುದೇ ಇತಿಹಾಸದ ಶಬ್ದಾರ್ಥವಾಗಿದೆ. ಇದರ ಜೊತೆಗೇ ಚರಿತ ಎಂಬ ಪ್ರಕಾರವೂ ಭಾರತೀಯರಿಗೆ ಗೊತ್ತಿತ್ತು. ಹಿಂದೆ ಆಗಿಹೋದ ಮಹಾಪುರುಷರ ಜೀವನವನ್ನು ಚಿತ್ರಿಸುವುದೇ ಚರಿತದ ಉದ್ದೇಶ. ರಾಮ, ಕೃಷ್ಣರಂಥ ಅವತಾರ ಪುರುಷರೊಂದೇ ಅಲ್ಲದೇ ಹರ್ಷ, ವಿಕ್ರಮಾದಿತ್ಯರಂಥ ರಾಜರ ಕುರಿತೂ ಚರಿತಗಳು ರಚನೆಯಾಗಿವೆ. ಈ ರೀತಿಯಲ್ಲಿ ಕಳೆದು ಹೋದ ಕಾಲದ ಘಟನಾವಳಿಗಳನ್ನು ದಾಖಲಿಸುವ ವಿಭಿನ್ನ ಪ್ರಕಾರಗಳು ನಮ್ಮಲ್ಲಿ ಇದ್ದವು ಅಂತಾದರೆ ಇವರಿಗೆ ‘ಇತಿಹಾಸ ಪ್ರಜ್ಞೆ ಇದೆಯೆ?’ ಎಂಬ ಪ್ರಶ್ನೆ ಎಲ್ಲಿಂದ ಉದ್ಭವಿಸುತ್ತದೆ? ‘ಭಾರತೀಯರಿಗೆ ಇತಿಹಾಸ ಪ್ರಜ್ಞೆ ಇಲ್ಲ’ ಎಂಬುದಾಗಿ ತೀರ್ಮಾನಿಸಿದವರು ಈ ಪ್ರಶ್ನೆಗೆ ಉತ್ತರವನ್ನು ನೀಡುವುದಿರಲಿ ಪ್ರಶ್ನೆಯನ್ನೇ ಪರಿಗಣಿಸಿಲ್ಲ. ಇದಕ್ಕೆ ಸಕಾರಾತ್ಮಕವಾಗಿ ಉತ್ತರವನ್ನು ನೀಡಿದವರೂ ಕೂಡ ಈ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತಿದ್ದಾರೆ. ಏಕೆ ಎಂಬುದನ್ನು ಮುಂದೆ ನೋಡೋಣ.

ಈ ಮೇಲಿನ ವಿವಾದವು ಭಾರತೀಯರಿಗೆ ಹಿಸ್ಟರಿ ಎಂಬುದು ಗೊತ್ತಿದೆಯೋ ಇಲ್ಲವೊ ಎಂಬುದರ ಕುರಿತಾಗಿದೆ. ಹಿಸ್ಟರಿ ಎಂಬುದು ಪಾಶ್ಚಾತ್ಯ ನಾಗರೀಕತೆಯಲ್ಲಿ ಒಂದು ಪ್ರಮುಖವಾದ ಜ್ಞಾನವಾಗಿದೆ. ಗತಕಾಲದಲ್ಲಿ ನಿಜವಾಗಿಯೂ ಏನು ನಡೆಯಿತು ಎಂಬುದನ್ನು ತಿಳಿದುಕೊಳ್ಳುವುದೇ ಅದರ ಉದ್ದೇಶ. ನಿಜವನ್ನು ತಿಳಿದುಕೊಳ್ಳುವುದು ಹೇಗೆ ಎಂಬುದು ಹಿಸ್ಟರಿಗೆ ಒಂದು ಗಂಭೀರವಾದ ಪ್ರಶ್ನೆಯಾಗಿದೆ. ಹಾಗಾಗಿ ಅದು ಈ ಕುರಿತು ವೈಜ್ಞಾನಿಕ ವಿಧಾನಗಳನ್ನು ಬೆಳೆಸಿಕೊಂಡು ಬಂದಿದೆ. ಆಕರಗಳನ್ನು ಸಂಗ್ರಹಿಸುವುದು, ಅವುಗಳನ್ನು ವಿಶ್ಲೇಷಣೆಗೆ ಒಳಪಡಿಸುವುದು, ಘಟನೆಗಳನ್ನಿಟ್ಟುಕೊಂಡು ತರ್ಕಿಸುವುದು ಇತ್ಯಾದಿ ವಿಧಾನಗಳ ಮೂಲಕ ನಿಜವನ್ನು ಧೃಡಪಡಿಸಿಕೊಳ್ಳಬೇಕು. ಇಂಥ ತರ್ಕ, ವಿಶ್ಲೇಷಣೆಗಳೆಲ್ಲವೂ ಗತಕಾಲದ ಮನುಷ್ಯರಿಗೆ ಸಂಬಂಧಿಸಿದವುಗಳಾದ್ದರಿಂದ ಮಾನವನ ಸ್ವಭಾವ, ಉದ್ದೇಶಗಳ ಕುರಿತು ನಮಗಿರುವ ಜ್ಞಾನಕ್ಕೆ ಅವು ಸಂಗತವಾಗಿರಲೇಬೇಕು. ಇಂಥ ಮನುಷ್ಯ ಘಟನೆಗಳು ಯಾವ ಜಾಗದಲ್ಲಿ ನಡೆದವು, ಯಾವ ಕಾಲದಲ್ಲಿ ನಡೆದವು ಎಂಬುದನ್ನು ನಿರ್ದಿಷ್ಟ್ಟಪಡಿಸಿ ಅವನ್ನು ಪೋಣಿಸಿದಾಗ ಮಾತ್ರವೇ ಅದು ಹಿಸ್ಟರಿಯಾಗುತ್ತದೆ. ಪಾಶ್ಚಾತ್ಯರು ತಮ್ಮ ಹಿಸ್ಟರಿಯ ಘಟನೆಗಳ ಕಾಲವನ್ನು ಕ್ರಿಸ್ತಶಕದಲ್ಲಿ ಗುರುತಿಸಿ ಅವುಗಳ ಕಾಲಾನುಕ್ರಮಣಿಕೆಯನ್ನು ಕಟ್ಟುವ ಸಲುವಾಗಿಯೇ ಕ್ರೊನಾಲಜಿ ಎಂಬ ವಿಶೇಷ ಶಾಖೆಯನ್ನು ಬೆಳೆಸಿದ್ದರು. ಇಂಥ ಹಿಸ್ಟರಿಯು ನಾಗರೀಕ ಸಮಾಜವನ್ನು ರೂಪಿಸುವಲ್ಲಿ ತೀರಾ ಅನಿವಾರ್ಯವಾದ ಹಾಗೂ ಅಮೂಲ್ಯವಾದ ಜ್ಞಾನವಾಗಿದೆ ಎಂಬುದಾಗಿ ಪಾಶ್ಚಾತ್ಯರು ನಂಬಿದ್ದರು. ಹಾಗಾಗಿ ಸ್ವಾಭಾವಿಕವಾಗಿಯೇ ಅವರ ಶಿಕ್ಷಣದಲ್ಲೂ ಈ ವಿಷಯವು ಆದ್ಯತೆ ಪಡೆಯಿತು.

ಪಾಶ್ಚಾತ್ಯರು ಭಾರತಕ್ಕೆ ಬಂದು ಇಲ್ಲಿನ ಪಾರಂಪರಿಕ ಜ್ಞಾನವನ್ನು ಅಧ್ಯಯನಕ್ಕೊಳಪಡಿಸಿದಾಗ ಅವರಿಗೆ ಇಲ್ಲಿ ಹಿಸ್ಟರಿ ಎಂಬ ಪ್ರಕಾರವು ಕಂಡುಬರಲಿಲ್ಲ. ಭಾರತೀಯರು ಹಿಸ್ಟರಿಯನ್ನು ಬರೆದಿಟ್ಟಿಲ್ಲ ಎಂಬುದನ್ನು ಕಂಡುಕೊಳ್ಳಲಿಕ್ಕೂ ಅವರು ಅನೇಕ ವರ್ಷಗಳನ್ನು ತೆಗೆದುಕೊಂಡರು. ಭಾರತದಲ್ಲಿ ವಸಾಹತು ಸರ್ಕಾರದ ಸ್ಥಾಪನೆಯಾದ ತರುವಾಯ ಇಲ್ಲಿ ತಾವು ಅಳವಡಿಸಿಕೊಳ್ಳಬಹುದಾದ ಶಿಕ್ಷಣ ಹಾಗೂ ಆಡಳಿತ ವ್ಯವಸ್ಥೆಗೆ ಈ ಜನರ ಹಿಸ್ಟರಿಯನ್ನು ತಿಳಿದುಕೊಳ್ಳುವುದು ಅವರಿಗೆ ಮುಖ್ಯವೆನಿಸಿತು. ಅದನ್ನು ತಿಳಿದುಕೊಳ್ಳಲು ಅವರು ಕಂಡುಕೊಂಡ ಉಪಾಯವೆಂದರೆ ದೇಸೀ ಪಂಡಿತರನ್ನು ಕೇಳುವುದು. ಅವರಲ್ಲಿ ನಿಮ್ಮ ಹಿಸ್ಟರಿಯನ್ನು ತಿಳಿಸಿ ಎಂದು ಕೇಳಿದಾಗ ಅವರು ಭಾರತದ ಗತಕಾಲದ ಕುರಿತ ಕಥೆಗಳನ್ನು ಕೇಳುತ್ತಿದ್ದಾರೆ ಎಂಬುದಾಗಿ ದೇಸೀ ಪಂಡಿತರು ಗ್ರಹಿಸಿದರು. ಹಿಸ್ಟರಿ ಎಂಬ ನಿರ್ದಿಷ್ಟ ಪ್ರಕಾರದ ಕಥನವನ್ನು ತಮ್ಮಿಂದ ಕೇಳುತ್ತಿದ್ದಾರೆ ಎಂಬುದು ಅವರಿಗೆ ತಿಳಿಯಲಿಲ್ಲ. ಅವರಿಗೆ ಹಿಂದಿನ ಕಾಲದ ಕುರಿತು ತಿಳಿಸುತ್ತಿದ್ದ ಇತಿಹಾಸ, ಚರಿತ, ಪುರಾಣ ಇತ್ಯಾದಿಗಳನ್ನು ಅವರು ಸಾದರ ಪಡಿಸಿದರು. ಅದೇ ರೀತಿ ಇಂತಹ ಪಂಡಿತರ ನೇತೃತ್ವದಲ್ಲಿ ಭಾರತದ ವಿಭಿನ್ನ ಭಾಗಗಳಲ್ಲಿದ್ದ ಹಿಸ್ಟರಿಗಳನ್ನು ಕಲೆಹಾಕುವ ಪ್ರಯತ್ನದಲ್ಲಿ ಕಥೆಗಳು ಹಾಗೂ ಸ್ಥಳ ಪುರಾಣಗಳ ರಾಶಿ ಬಿದ್ದಿತು. ಈ ಎಲ್ಲಾ ಕಥೆಗಳನ್ನು ಭಾರತೀಯರ ಹಿಸ್ಟರಿ ಎಂಬುದಾಗಿ ನೋಡಲು ಪ್ರಯತ್ನಸಿದರೂ ಪಾಶ್ಚಾತ್ಯರಿಗೆ ಅದರಲ್ಲಿ ತಮ್ಮ ಹಿಸ್ಟರಿಗೆ ಹೋಲುವಂಥದ್ದು ಏನೂ ಕಾಣಲಿಲ್ಲ. ಕಾಗಕ್ಕ ಗುಬ್ಬಕ್ಕನ ಕಥೆಗಳು ಹಾಗೂ ಅವಾಸ್ತವಿಕವಾದ ಘಟನೆಗಳಲ್ಲಿ ಹಿಸ್ಟರಿಯ ಲಕ್ಷಣಗಳು ಕಾಣಿಸಲಿಲ್ಲ.

ಹಾಗಾಗಿ ‘Indians lack the sense of history’ ( ಭಾರತೀಯರಿಗೆ ಹಿಸ್ಟರಿಯ ಪ್ರಜ್ಞೆ ಇಲ್ಲ) ಎಂಬುದಾಗಿ ನಿರ್ಣಯಿಸಿದರು. 19ನೆಯ ಶತಮಾನದ ಪ್ರಾರಂಭದಲ್ಲಿ ಭಾರತದಲ್ಲಿ ಇಂಗ್ಲೀಷ್ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಳ್ಳುವಾಗ ಭಾರತದ ಸಾಂಪ್ರದಾಯಿಕ ಜ್ಞಾನವನ್ನು ಅದರಲ್ಲಿ ಕಲಿಸುವುದು ಅಪಾಯಕಾರಿ ಎಂಬುದಾಗಿ ಬ್ರಿಟಿಷರು ತೀರ್ಮಾನಿಸಿದರು. 30 ಅಡಿ ಎತ್ತರದ ರಾಜರು, 30ಸಾವಿರ ವರ್ಷ ಆಳಿದ ರಾಜರ ಕಥೆಗಳನ್ನು ಇತಿಹಾಸ ಎಂದು ಕಲಿಸುವುದರಿಂದ ಬ್ರಿಟಿಷರು ನಗೆಪಾಟಲಿಗೀಡಾಗುವುದರಲ್ಲಿ ಸಂಶಯವಿಲ್ಲ ಎಂಬುದಾಗಿ ಬಾಬಿಂಗ್ಟನ್ ಮೆಕಾಲೆಯು ತನ್ನ ನಡಾವಳಿಯಲ್ಲಿ ಒತ್ತಿ ಹೇಳಿದನು. ಹಾಗಾಗಿ ಪಾಶ್ಚಾತ್ಯರೇ ಭಾರತೀಯ ಹಿಸ್ಟರಿಯನ್ನು ರಚಿಸಿ ಅದನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡರು. ಹಿಸ್ಟರಿ ಸಂಶೋಧನೆಯ ಅಂಗವಾಗಿ ಗ್ರಂಥಗಳ, ಪತ್ರಾಗಾರ ದಾಖಲೆಗಳ ಹಾಗೂ ಪ್ರಾಕ್ತನ ವಸ್ತುಗಳ ಶೋಧನೆ ಪ್ರಾರಂಭವಾಯಿತು. ಹೀಗೆ ರಚಿತವಾದ ಹಿಸ್ಟರಿಯು ಭಾರತೀಯ ಗತಕಾಲದ ಕುರಿತು ತಿಳಿಸಿದ ಕಥೆಗೂ ಭಾರತೀಯರ ಇತಿಹಾಸ, ಪುರಾಣ ಕಥೆಗಳಿಗೂ ಅರ್ಥಾರ್ಥ ಸಂಬಂಧ ಇಲ್ಲದಿರುವುದು ಕ್ರಮೇಣ ಭಾರತೀಯರಿಗೆ ಅರಿವಾಗತೊಡಗಿತು. ಅಂದರೆ ಯಾವ ವಿಧಾನದಿಂದ ಪಾಶ್ಚಾತ್ಯರು ಭಾರತೀಯ ಹಿಸ್ಟರಿಯ ನಿಜಗಳನ್ನು ಕಟ್ಟಿ ತೋರಿಸಿದರೋ ಆ ವಿಧಾನಗಳನ್ನು ನಮ್ಮ ಇತಿಹಾಸ ಪುರಾಣಗಳಿಗೆ ಅನ್ವಯ ಮಾಡಿದಾಗ ಇವು ಸುಳ್ಳುಗಳಾಗಿ ಬದಲಾದವು. ಹಾಗಾಗಿ ನಮ್ಮ ಇತಿಹಾಸ ಪುರಾಣಗಳನ್ನು ಹಿಸ್ಟರಿ ಎಂಬುದಾಗಿ ಆಧುನಿಕ ಶಿಕ್ಷಣದಲ್ಲಿ ಅಧ್ಯಯನ ಮಾಡುವುದನ್ನು ಅವರೂ ನಿರೀಕ್ಷಿಸಲಿಲ್ಲ ಮತ್ತು ಭಾರತೀಯರಿಗೆ ಹಿಸ್ಟರಿಯ ಪ್ರಜ್ಞೆ ಇಲ್ಲ ಎಂಬ ಹೇಳಿಕೆಯು ಅವರಿಗೂ ಸರಿಯೆನ್ನಿಸಿತು. ಭಾರತೀಯರೂ ಕೂಡ ಭಾರತೀಯ ಹಿಸ್ಟರಿಯ ರಚನೆಯಲ್ಲಿ ಅತ್ಯುತ್ಸಾಹದಿಂದ ಪಾಶ್ಚಾತ್ಯರ ಜೊತೆಗೆ ಕೈಜೋಡಿಸಿದರು.

ಈ ಹಂತದಲ್ಲಿ ಇತಿಹಾಸ, ಚರಿತ್ರೆ ಇವೆಲ್ಲ ಹಿಸ್ಟರಿಯ ಭಾರತೀಯ ಅವತಾರಗಳು ಎಂಬ ಸಾಮಾನ್ಯಜ್ಞಾನವೂ ಅದರೊಂದಿಗೆ ರೂಪುಗೊಂಡಿದ್ದು ಕಂಡುಬರುತ್ತದೆ. ಹಾಗಾಗಿ ಹಿಸ್ಟರಿಯನ್ನು ದೇಶೀ ಭಾಷೆಗಳಲ್ಲಿ ಇತಿಹಾಸ, ಚರಿತ್ರೆ ಇತ್ಯಾದಿಯಾಗಿ ಭಾಷಾಂತರಿಸಿಕೊಳ್ಳಲಾಯಿತು. ಇದರ ಜೊತೆಗೇ ಹಿಸ್ಟರಿ ಎಂಬುದು ಗತಕಾಲದ ಕುರಿತ ಅಧಿಕೃತ ಜ್ಞಾನ ಹಾಗೂ ಇತಿಹಾಸ ಪುರಾಣಗಳು ವಿಶ್ವಾಸಾರ್ಹವಾದ ಜ್ಞಾನವಲ್ಲ ಎಂಬ ಧೋರಣೆಯೂ ಹುಟ್ಟಿಕೊಂಡಿತು. ಏಕೆಂದರೆ ಹಿಸ್ಟರಿ ಎಂಬುದಕ್ಕೆ ಯಾವ್ಯಾವ ಲಕ್ಷಣಗಳಿದ್ದವೋ ಅವುಗಳನ್ನು ಪ್ರಮಾಣವಾಗಿ ತೆಗೆದುಕೊಂಡು ದೇಶೀ ಸಂಪ್ರದಾಯಗಳನ್ನು ತುಲನೆಮಾಡಿದಾಗ ಅವುಗಳು ಅಪರಿಪೂರ್ಣ ಹಿಸ್ಟರಿಗಳಾಗಿ ತೋರಿದ್ದು ಸಹಜ. ಅವುಗಳಲ್ಲಿದ್ದ ದೋಷಗಳನ್ನು ಕಳೆದಾಗ ಅವು ಕೂಡ ಹಿಸ್ಟರಿಗಳಾಗಿ ಬದಲಾಗಬಲ್ಲವು. ಒಂದುಕಾಲದಲ್ಲಿ ಭಾರತೀಯರು ಹಿಸ್ಟರಿಯ ದಾಖಲೆಯನ್ನು ಇಟ್ಟಿದ್ದರು, ಅವುಗಳಲ್ಲಿ ಕಾಲಕ್ರಮೇಣ ಸುಳ್ಳುಗಳು, ಕಲ್ಪನೆಗಳು, ಅತಿಶಯೋಕ್ತಿಗಳು ನುಸುಳಿಕೊಂಡು ಪುರಾಣ ಕಥೆಗಳು ಹುಟ್ಟಿಕೊಂಡಿವೆ. ಹಾಗಾಗಿ ಇತಿಹಾಸವು ಮೂಲತಃ ಹಿಸ್ಟರಿಯೇ ಆಗಿದೆ ಎಂದೂ ಕೆಲವರು ನಿರೂಪಿಸಿದರು. ಈ ಎಲ್ಲ ಅಭಿಪ್ರಾಯಗಳ ಪರಿಣಾಮವಾಗಿ ಪುರಾಣ ಇತಿಹಾಸಗಳನ್ನು ಹಿಸ್ಟರಿಯನ್ನಾಗಿ ಬದಲಾಯಿಸುವ ಕಾರ್ಯಕ್ರಮವು ಚಾಲ್ತಿಯಲ್ಲಿ ಬಂದಿತು. ಅದು ಈ ಮುಂದಿನ ರೀತಿಗಳಲ್ಲಿ ನಡೆಯಿತು: 1) ಇಂಥ ಸುಳ್ಳುಗಳನ್ನು ಬೇರ್ಪಡಿಸಿ ಅನ್ಯ ಆಕರಗಳ ಜೊತೆಗೆ ಹೋಲಿಸಿ ಈಗಲೂ ಅವುಗಳಲ್ಲಿರುವ ಸತ್ಯಘಟನೆಗಳನ್ನು ತೆಗೆದು ಹಿಸ್ಟರಿಯನ್ನು ಕಟ್ಟಬಹುದು ಎಂಬುದಾಗಿ ಕೆಲವರು ವಾದಿಸಿದರು. 2) ಅದಕ್ಕೂ ಮುಖ್ಯವಾಗಿ ಪ್ರಾಚೀನ ಭಾರತೀಯರು ನಿಜಘಟನೆಗಳನ್ನು ಪುರಾಣ ಪ್ರತೀಕಗಳನ್ನಾಗಿ ಬದಲಾಯಿಸಿ ಈ ಕಥೆಗಳಲ್ಲಿ ತಿಳಿಸಿದ್ದಾರೆ. ಇಂಥ ಪ್ರತೀಕಗಳನ್ನು ಅರ್ಥಮಾಡಿಕೊಂಡರೆ ಅವುಗಳಿಂದ ಹಿಸ್ಟರಿಯನ್ನು ತೆಗೆಯಬಹುದು ಎಂಬ ಸಾಮಾನ್ಯ ಧೋರಣೆಯೂ ಬೆಳೆಯಿತು.

ಇಂಥ ಧೋರಣೆಗಳ ಪರಿಣಾಮವಾಗಿ ನಮ್ಮ ಇತಿಹಾಸ ಪುರಾಣದ ಕಥೆಗಳನ್ನು ಹಿಸ್ಟರಿಯನ್ನಾಗಿ ಬದಲಾಯಿಸುವ ಪ್ರಯತ್ನ ಪ್ರಾರಂಭವಾಯಿತು. ಮಹಾಭಾರತವು ಮೂರು ಸಾವಿರ ವರ್ಷಗಳ ಹಿಂದೆ ಗಂಗಾ ಯಮುನಾ ಪ್ರದೇಶದಲ್ಲಿದ್ದ ಕೆಲವು ಬುಡಕಟ್ಟುಗಳ ಹಿಸ್ಟರಿಯಾಯಿತು. ರಾಮಾಯಣವು ಆರ್ಯ-ದ್ರಾವಿಡ ಸಂಘರ್ಷದ ಹಿಸ್ಟರಿಯಾಯಿತು. ಬಲಿ-ವಾಮನ ಪುರಾಣವು ಬ್ರಾಹ್ಮಣರು ಶೂದ್ರರನ್ನು ವಂಚಿಸಿದ ಹಿಸ್ಟರಿಯಾಯಿತು. ಕಪಿಸೈನ್ಯವು ದಕ್ಷಿಣ ಭಾರತದ ಆದಿ ಜನಾಂಗಗಳಾದ ದಲಿತರಾದರು. ಇಲ್ಲೆಲ್ಲ ನಿಜ ಘಟನೆಗಳು ಎಂಬುದಾಗಿ ಯಾವುದನ್ನು ಈ ಇತಿಹಾಸ ಪುರಾಣಗಳಿಂದ ಕಂಡುಕೊಂಡರೋ ಅವೆಲ್ಲವೂ ಪಾಶ್ಚಾತ್ಯರು ಭಾರತೀಯ ಹಿಸ್ಟರಿಯ ನಿಜಗಳೆಂದು ಈಗಾಗಲೇ ಕಟ್ಟಿಕೊಟ್ಟ ಆರ್ಯರ ಆಕ್ರಮಣ, ಜಾತಿವ್ಯವಸ್ಥೆ, ಆದಿಮ ಸಮಾಜಗಳು, ಇತ್ಯಾದಿ ಕಲ್ಪನೆಗಳನ್ನು ಆಧರಿಸಿ ಇದ್ದವು. ಅಂದರೆ ಯುರೋಪಿನ ಹಿಸ್ಟರಿಯ ನಿಜಗಳಿಗೆ ಈ ಕಥೆಗಳನ್ನು ಹೊಂದಿಸುವ ಕೆಲಸಕ್ಕೇ ಹಿಸ್ಟರಿ ಸಂಶೋಧನೆ ಎಂಬ ಹೆಸರನ್ನು ನೀಡಲಾಗಿತ್ತು.

ಈ ಎಲ್ಲಾ ಪ್ರಯತ್ನಗಳ ಫಲವಾಗಿ ಭಾರತೀಯರಿಗೆ ಇತಿಹಾಸ ಪ್ರಜ್ಞೆ ಇದೆಯೆ? ಎಂಬ ಪ್ರಶ್ನೆಯು ನಮಗೆ ಅರ್ಥವಾದಂತೇ ಅನಿಸುತ್ತದೆ. ಆದರೆ ಇತಿಹಾಸ ಪ್ರಜ್ಞೆ ಎಂಬ ಪದವನ್ನು ಪ್ರಯೋಗಿಸಿದಾಗ ಒಂದು ಗೊಂದಲವು ಸ್ವಾಭಾವಿಕವಾಗಿಯೇ ಹುಟ್ಟುತ್ತದೆ. ಇದು ನಮ್ಮ ಇತಿಹಾಸವನ್ನು ಉದ್ದೇಶಿಸಿದೆಯೋ ಇಲ್ಲ ಹಿಸ್ಟರಿ ಎಂಬ ಶಬ್ದದ ತರ್ಜುಮೆಯೊ? ಈ ಹೇಳಿಕೆಯನ್ನು ಇತಿಹಾಸ ಎಂಬ ಶಬ್ದವನ್ನಿಟ್ಟಾದರೂ ಬರೆಯಿರಿ, ಇಲ್ಲ ಹಿಸ್ಟರಿ ಎಂಬ ಶಬ್ದವನ್ನಿಟ್ಟಾದರೂ ಬರೆಯಿರಿ, ಅದು ಹಿಸ್ಟರಿ ಎಂಬ ಪರಿಕಲ್ಪನೆಗೆ ಸಂಬಂಧಿಸಿದ್ದಾಗಿದೆಯೇ ವಿನಃ ಇತಿಹಾಸ-ಚರಿತ್ರೆ ಇತ್ಯಾದಿ ಪರಿಕಲ್ಪನೆಗಳಿಗಲ್ಲ. ಪಾಶ್ಚಾತ್ಯರು ತಮ್ಮ ಹಿಸ್ಟರಿಯನ್ನು ಇಲ್ಲಿ ಹುಡುಕಲು ಸೋತು ಉದ್ಗರಿಸಿದ ವಾಕ್ಯವಿದು. ಭಾರತೀಯರು ಅದನ್ನು ತಮ್ಮ ಭಾಷೆಗೆ ತರ್ಜುಮೆ ಮಾಡಿದ್ದಾರೆ ಅಷ್ಟೆ. ಅವರು ತಮ್ಮ ಇತಿಹಾಸ ಸಂಪ್ರದಾಯದ ಕುರಿತು ರೂಪಿಸಿದ ಪ್ರಶ್ನೆ ಇದಲ್ಲ. ಇಂದು ಭಾರತೀಯರಿಗೆ ಇತಿಹಾಸ ಪ್ರಜ್ಞೆ ಇದೆ ಎಂದು ವಾದಿಸುವವರು ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ವಾದಗಳನ್ನು ಮಂಡಿಸುತ್ತಿಲ್ಲ. ಹಾಗಾಗಿ ಗೊಂದಲವನ್ನು ಹೆಚ್ಚಿಸುತ್ತಿದ್ದಾರೆ.

ಈ ಗೊಂದಲದ ಪರಿಣಾಮವೇನಾಗಿದೆ? ಮಹಾಭಾರತ, ರಾಮಾಯಣಗಳೂ ಹಿಸ್ಟರಿ ಎಂದಾದಮೇಲೆ ಅವುಗಳ ದೇಶ ಕಾಲಗಳ ನೈಜತೆಗೆ ಒಂದಿಲ್ಲೊಂದು ದಿನ ಆಧಾರ ಸಿಕ್ಕೇ ಸಿಗಬೇಕು ಎಂಬ ಧೃಡ ವಿಶ್ವಾಸ ಭಾರತೀಯರಿಗಿದೆ. ಅಂದರೆ ನಮಗೂ ಇತಿಹಾಸ ಪ್ರಜ್ಞೆ ಇದೆ ಎಂಬುದಾಗಿ ವಾದಿಸುವವರಿಗೆ ಇರುವ ಒಂದೇ ಆಯ್ಕೆಯೆಂದರೆ ನಮ್ಮ ಇತಿಹಾಸ ಪುರಾಣಗಳನ್ನು ಹಿಸ್ಟರಿಯ ಪ್ರಮಾಣಗಳಿಗೆ ಒಡ್ಡಿ ಪರೀಕ್ಷಿಸುವುದು. ಈ ಕೆಲಸವನ್ನು ಎಡ-ಬಲ ಪಂಥೀಯರೆಲ್ಲರೂ ಶ್ರದ್ಧೆಯಿಂದ ಮಾಡಿದ್ದಾರೆ, ಮಾಡುತ್ತಿದ್ದಾರೆ. ಮಹಾಭಾರತ ಹಾಗೂ ರಾಮಾಯಣಗಳ ಕಾಲನಿರ್ಣಯದ ಕುರಿತು, ಪ್ರಾಕ್ತನ ಆಧಾರಗಳ ಕುರಿತು ಗಂಭೀರವಾದ ಅನ್ವೇಷಣೆಗಳು ನಡೆದಿವೆ. ಮಹಾಭಾರತ ಯುದ್ಧ, ಕಲಿಯುಗ ಪ್ರಾರಂಭ ಇತ್ಯಾದಿಗಳ ಕಾಲವನ್ನು ಲೆಕ್ಕಹಾಕಿ ತೋರಿಸಿ ಈ ಸವಾಲನ್ನು ಗೆದ್ದೇಬಿಟ್ಟಿದ್ದೇವೆ ಎಂದು ವಿಜಯೋತ್ಸಾಹ ಆಚರಿಸಿದವರೂ ಇದ್ದಾರೆ. ಇದರ ಫಲಿತಾಂಶವಾಗಿ ನಮ್ಮ ಇತಿಹಾಸ ಪುರಾಣಗಳ ಬಹುಭಾಗಗಳು ಯಾವುದೇ ಮಾನದಂಡದಿಂದಲೂ ಹಿಸ್ಟರಿಯ ಮಾನ್ಯತೆಯನ್ನು ಗಳಿಸಲು ಸೋತವು. ಯಾವುದೋ ಒಂದೆರಡು ಘಟನೆಗಳ ಕಾಲವನ್ನು ಹಾಗೂ ನೈಜತೆಯನ್ನು ಲೆಕ್ಕಹಾಕಿ ತೋರಿಸಿದರೆ ಅವು ಹಿಸ್ಟರಿಗಳಾಗಲು ಸಾಧ್ಯವಿಲ್ಲ. ಹಿಸ್ಟರಿಯೆಂದರೆ ನೈಜ ಘಟನೆಗಳನ್ನೇ ಆಯ್ದು ಅವುಗಳನ್ನು ಕಾಲ ದೇಶಗಳ ಅನುಕ್ರಮಣಿಕೆಯೊಳಗೇ ವಿಧಾನಶಾಸ್ತ್ರೀಯವಾಗಿ ಕಟ್ಟಿದ ಕಥೆಯಾಗಿದೆ. ಮಹಾಭಾರತ ರಾಮಾಯಣಗಳ ಪಾತ್ರಗಳು ಹಾಗೂ ಘಟನೆಗಳನ್ನು ಈ ಚೌಕಟ್ಟಿಗೆ ಸುಸಂಗತವಾಗಿ ಒಗ್ಗಿಸುವುದು ಅಸಾಧ್ಯ. ಹಾಗಾಗಿ ಇಂಥ ಪ್ರಯತ್ನಗಳ ಫಲವಾಗಿ ‘ಭಾರತೀಯರಿಗೆ ಕ್ರೊನಾಲಜಿಯ ಬಗ್ಗೆ, ನೈಜತೆಯ ಬಗ್ಗೆ ಆದರವಿಲ್ಲ’ ಎಂಬ ಹೊಸ ಬಿರುದನ್ನು ನಾವು ಸಂಪಾದಿಸಿದೆವು. ಒಟ್ಟಾರೆಯಾಗಿ ಹಿಸ್ಟರಿಯ ಹೀನಾಯ ರೂಪಗಳಾಗಿ ಮಹಾಭಾರತ ಹಾಗೂ ರಾಮಾಯಣಗಳು ಪರಿವರ್ತಿತವಾದವು.

ಅಂದರೆ ನಮಗೂ ಇತಿಹಾಸ ಪ್ರಜ್ಞೆ ಇದೆ ಎಂಬುದಾಗಿ ವಾದಿಸುವುದರ ಪರಿಣಾಮವು ಇದುವರೆಗೂ ಒಂದೇ ಫಲವನ್ನು ನೀಡಿದೆ: ಅದೆಂದರೆ ನಮ್ಮ ಇತಿಹಾಸ ಪುರಾಣಗಳಲ್ಲಿ ಕೆಲವು ಭಾಗಗಳು ಅಪೂರ್ಣ ಹಾಗೂ ಅವಿಕಸಿತ ಹಿಸ್ಟರಿಗಳಾಗಿದ್ದರೆ ಬಹುಭಾಗಗಳು ಕಟ್ಟುಕಥೆಯಾಗಿ ಮಾರ್ಪಡುವುದನ್ನು ತಪ್ಪಿಸಲು ನಮ್ಮಿಂದ ಸಾಧ್ಯವಿಲ್ಲ. ಅಂದರೆ ನಮ್ಮ ಇತಿಹಾಸವು ಕಟ್ಟುಕಥೆಯಾಗುವುದರಿಂದ ಅದು ಗತಕಾಲದ ಅಧಿಕೃತ ವಕ್ತಾರನಾಗಲು ಸಾಧ್ಯವಿಲ್ಲ. ಹಾಗಾಗಿಯೇ ನಮಗೂ ಇತಿಹಾಸ ಪ್ರಜ್ಞೆ ಇದೆ ಎಂದು ವಾದಿಸುವ ವಿದ್ವಾಂಸರಲ್ಲಿ ಯಾರೂ ಕೂಡ ನಮ್ಮ ಇತಿಹಾಸ-ಪುರಾಣಗಳನ್ನು ಅಧಿಕೃತ ಹಿಸ್ಟರಿ ಎಂಬಂತೇ ಶಾಲಾ ಕಾಲೇಜುಗಳಲ್ಲಿ ಕಲಿಸಬೇಕೆಂಬುದಾಗಿ ಬೇಡಿಕೆಯನ್ನಿಟ್ಟಿಲ್ಲ. ನಮ್ಮ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಹಿಸ್ಟರಿಯ ಸ್ಥಾನಮಾನವನ್ನು ಅವು ಹೊಂದುವುದು ಸಾಧ್ಯವಿಲ್ಲ ಎಂಬುದಾಗಿ ಈ ಕುರಿತು ಅಧ್ಯಯನ ನಡೆಸಿದ ಇತಿಹಾಸ ವಿದ್ವಾಂಸರೂ ನಿರ್ಣಯಿಸಿದಂತಿದೆ.

ಇದು ನಮ್ಮ ಸಂಪ್ರದಾಯಗಳ ಶ್ರೇಷ್ಠತೆಯನ್ನು ಸಾರಬೇಕೆನ್ನುವವರ ಉತ್ಸಾಹಕ್ಕೆ ತಣ್ಣೀರೆರಚುವುದು ಸ್ವಾಭಾವಿಕ. ಇದು ರಾಮಾಯಣ ಮಹಾಭಾರತಗಳನ್ನು ಪೂಜಿಸಿಕೊಂಡು ಬಂದವರಿಗೆ ಕೀಳರಿಮೆಯನ್ನು ಹುಟ್ಟುಹಾಕುತ್ತದೆ. ಇಂಥವರು ಆಯ್ದುಕೊಳ್ಳುತ್ತಿರುವ ಮಾರ್ಗವೆಂದರೆ ನಮ್ಮ ಇತಿಹಾಸ ಪುರಾಣಗಳು ಪರಿಪೂರ್ಣ ಹಿಸ್ಟರಿಗಳು ಎಂಬುದಾಗಿ ವಾದಿಸಿ ಅದನ್ನು ಹಿಸ್ಟರಿಯ ಮಾನದಂಡಗಳಿಂದಲೇ ಸಮರ್ಥಿಸುವುದು. ರಾಮಜನ್ಮಭೂಮಿ, ರಾಮಸೇತು ಇತ್ಯಾದಿ ವಿವಾದಗಳು ಈ ಧೋರಣೆಯಿಂದ ಹುಟ್ಟಿವೆ. ರಾಮಾಯಣ ಮಹಾಭಾರತದ ಒಂದೊಂದು ಕಥೆಯನ್ನು ಹಿಸ್ಟರಿಯ ಮಾನದಂಡಗಳಿಗೆ ಹಿಡಿದಷ್ಟೂ ಅವುಗಳ ಕೊರತೆ ನಿದರ್ಶನವಾಗುತ್ತ ಹೋಗುತ್ತದೆ. ಇಂಥ ಸರ್ಕಸ್ಸುಗಳ ಪರಿಣಾಮವಾಗಿ ಇತಿಹಾಸ-ಪುರಾಣಗಳ ಘನತೆ ಮೂರಾಬಟ್ಟೆಯಾಗುತ್ತಿದೆ ಹಾಗೂ ನಮ್ಮ ಪರಂಪರೆಯ ಜೊತೆಗೆ ನಮ್ಮ ಸಂಬಂಧವೇ ಕಡಿದುಹೋಗುತ್ತಿದೆ. ರಾಮಾಯಣ ಮಹಾಭಾರತಗಳನ್ನು ನಾವೇಕೆ ಪೂಜ್ಯವಾಗಿ ನೋಡುತ್ತೇವೆ? ಭಾರತೀಯರ ಜೀವನದಲ್ಲಿ ಅವು ಯಾವ ಸ್ಥಾನವನ್ನು ಪಡೆದಿವೆ, ನಾವು ಅವುಗಳಿಂದ ಏನನ್ನು ಕಲಿಯುತ್ತೇವೆ? ಇತ್ಯಾದಿ ಅರ್ಥಪೂರ್ಣ ಪ್ರಶ್ನೆಗಳೇ ನಮಗಿಂದು ಬೇಡವಾಗಿದೆ. ಅವುಗಳ ಘಟನೆಗಳು ನಿಜ ಎಂಬುದನ್ನು ಸಾಧಿಸಿ ತೋರಿಸುವುದೇ ನಮ್ಮ ಗುರಿಯಾಗಿದೆ.

ಈ ಕಥೆಗಳು ನಿಜ ಎಂಬುದನ್ನು ತೋರಿಸಿದರೆ ನಮಗೆ ಸಿಗುವುದೇನು? ಅವು ಹಿಸ್ಟರಿಗಳು ಎಂಬುದನ್ನು ಸಮರ್ಥಿಸಿದಂತಾಯಿತು ಅಷ್ಟೆ. ಅಂದರೆ ನಾವು ಪಾಶ್ಚಾತ್ಯರಿಗೆ ಸರಿಸಮ ಎಂದಂತಾಯಿತು. ಅದರಾಚೆಗೆ ಅದರಿಂದ ಮತ್ತೇನು ಪ್ರಯೋಜನ ಎಂಬುದು ನಮಗೆ ಗೊತ್ತಿಲ್ಲ. ಭಗವದ್ಗೀತೆಯನ್ನು ಹಿಸ್ಟರಿಯನ್ನಾಗಿ ಪರಿವರ್ತಿಸಿ ಅದರ ಕಾಲವನ್ನು ನಿಖರವಾಗಿ ನಿರ್ಣಯಿಸುವುದು ಭಗವದ್ಗೀತೆಯನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಎಳ್ಳಷ್ಟಾದರೂ ಸಹಕರಿಸುತ್ತದೆಯೆ? ಹೋಗಲಿ, ಮಹಾಭಾರತ ಯುದ್ಧದ ಕಾಲ ಮತ್ತು ಸ್ಥಳಗಳನ್ನು ತಿಳಿದುಕೊಂಡರೆ ‘ಧರ್ಮಕ್ಷೇತ್ರ ಕುರುಕ್ಷೇತ್ರ’ ಎಂಬ ಎಂಬ ಪರಿಕಲ್ಪನೆಯು ಅರ್ಥವಾಗುತ್ತದೆಯೆ? ಅದಕ್ಕೆ ಬದಲಾಗಿ ಇವು ಹಿಸ್ಟರಿ ಎಂದು ತೋರಿಸುವ ಅಬ್ಬರದಲ್ಲಿ ಅವುಗಳಿಗೆ ಅವುಗಳದ್ದೇ ಆದ ಅರ್ಥವಿದೆ ಎಂಬ ಸಂಗತಿಯೇ ಮರೆತುಹೋಗುತ್ತಿದೆ. ಇದಕ್ಕೆ ಬದಲಾಗಿ ನಮ್ಮ ಸಂಸ್ಕೃತಿಯಲ್ಲಿ ಅವುಗಳ ಮಹತ್ವವೇನು ಎಂಬುದನ್ನು ಶೋಧಿಸುವುದು ಫಲಪ್ರದವಾದ ಕೆಲಸವಾಗಬಹುದು. ಅಂಥ ಕೆಲಸದಿಂದ ಅವುಗಳ ಮಹತ್ವವೂ ಹೆಚ್ಚುತ್ತದೆ ಹಾಗೂ ನಮ್ಮ ಪರಂಪರೆಯ ಜೊತೆಗೆ ಅರ್ಥಪೂರ್ಣ ಸಂಬಂಧವನ್ನು ಸ್ಥಾಪಿಸಿಕೊಳ್ಳಲೂ ಸಾಧ್ಯವಾಗುತ್ತದೆ ಹಾಗೂ ನಮ್ಮ ಸಂಸ್ಕೃತಿಯ ಬಹುಮುಖ್ಯ ಅಂಗವಾದ ಈ ಇತಿಹಾಸ-ಪುರಾಣ ಸಂಪ್ರದಾಯವನ್ನು ಹಿಸ್ಟರಿಯ ಗಿಲೆಟಿನ್ ಯಂತ್ರದಿಂದ ತಪ್ಪಿಸಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

V Krishna Ananth

In a series of lectures that he gave sometimes in the 1960s, EH Carr argued that interpreting the past, which indeed is what history writing is all about, is not the same as inventing a past. Interpretation is about making sense of the past from the concerns of the present. In other words, Carr's precept was that there is nothing called the history of an event or of a certain time. However, as important as it is to re-interpret the past and hence rewrite history, it is equally important to ensure that such attempts are based on facts. Carr holds that the historian's task is to cook the palate out of the fish available on the slab. His lectures that were published subsequently (titled What is History?) are till day among the necessary texts for students of history.

Note on Settings: History vs. Mythology



What is Mythology?
Mythology is a narrative explaining how the world came to be in its present form. This is also the frame most authors are writing from when they develop their back story: how did the setting get the way it is?
The difference is that the events in a myth are metaphors, whereas a back story is supposed to be a self-consistent historical account.

MYTH AND HISTORY


Myth and history represent alternative ways of looking at the past. Defining history is hardly easier than defining myth, but a historical approach necessarily involves both establishing a chronological framework for events and comparing and contrasting rival traditions in order to produce a coherent account. The latter process, in particular, requires the presence of writing in order that conflicting versions of the past may be recorded and evaluated. Where writing is absent, or where literacy is restricted, traditions embedded in myths through oral transmission may constitute the principal sources of authority for the past.

* ಎಚ್‌.ಎಸ್‌.ಮುಕುಂದ


ಏಳುಸಾವಿರ ವರ್ಷಗಳ ಹಿಂದೆ ಭಾರತದಲ್ಲಿ ಅಂತರಗ್ರಹ ವಿಮಾನದ ಬಳಕೆ ಇತ್ತು ಎಂಬ ವಾದವನ್ನು ವಿಜ್ಞಾನಿಗಳು ಅಲ್ಲಗಳೆದಿದ್ದು, ‘ಅದೇ ತಂತ್ರಜ್ಞಾನ ಬಳಸಿ ವಿಮಾನ ಹಾರಬಿಡಲಿ, ನೋಡೋಣ’ ಎಂದು ಸವಾಲೆಸೆದಿದ್ದಾರೆ. 40 ವರ್ಷಗಳ ಹಿಂದೆಯೇ ಈ ಕುರಿತು ಅಧ್ಯಯನ ನಡೆಸಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಇದೊಂದು ‘ಆಧಾರರಹಿತ’ ಎಂದು ತಳ್ಳಿಹಾಕಿದ್ದರು.



  ಬಿ ಕೆ ಗಣೇಶ್

ಮುಂಬಯಿಯಲ್ಲಿ ಈಚೆಗೆ ಸಮಾವೇಶಗೊಂಡ ‘ಭಾರತೀಯ ವಿಜ್ಞಾನ ಕಾಂಗ್ರೆಸ್’ನ ಕಿಕ್ಕಿರಿದ ಸಭಾಂಗಣದಲ್ಲಿ ಕ್ಯಾಪ್ಟನ್ ಆನಂದ್ ಜೆ ಬೊಡಾಸ್ ಮಾತಿಗೆ ಇಡೀ ಸಭೆಯೇ ದಂಗಾಗಿಬಿಟ್ಟಿತು. ಪೈಲಟ್ ತರಬೇತಿ ಕೇಂದ್ರವೊಂದರಲ್ಲಿ ಪ್ರಾಂಶುಪಾಲರಾಗಿದ್ದ ಅವರ ಮಾತುಗಳು ಇಡೀ ಕಾರ‌್ಯಕ್ರಮದ ದಿಕ್ಕನ್ನೇ ಬದಲಿಸಿಬಿಟ್ಟಿತು. ನೆರೆದಿದ್ದ ವಿಜ್ಞಾನಿಗಳು ಹೌಹಾರಿಬಿಟ್ಟರು. ವಿಜ್ಞಾನ ಕಾಂಗ್ರೆಸ್ ಸ್ಥಾಪನೆಯ ಉದ್ದೇಶಕ್ಕೇ ಸವಾಲಿದು ಎಂದು ವಿಜ್ಞಾನಿಗಳು ಪ್ರತಿಕ್ರಿಯಿಸಿದರು.

Perils of Petty Politics in the Time of History and Science Congresses

Pushpesh Pant

The country hasn’t lacked amusement in the past fortnight. The Indian History Congress has passed a resolution cautioning—just short of censoring— the PM to steer the ship of state clear of the minefield that is considered by its members the Exclusive Economic Zone of professional historians. The dons (pun unintended) are oblivious of the fact that those who make history have scant regard for the views of mere practitioners of the art or craft or science, call them gold diggers, grave diggers or by any other name. If historians of a certain hue were bitten by the ‘scientific’ bug, our scientists swerved dramatically towards history—to be honest, they seemed to have suddenly discovered the secrets of time travel. Many of us were surprised by the eloquence of speeches at the Indian Science Congress exhorting us to acknowledge the wisdom of our ancestors. From plastic surgery to nano technology, nuclear science to space exploration, ancient India had it all and more. Those of us who prefer our intellectual stimulation unadulterated have inevitably suffered from a severe hangover left behind by the heady cocktail of myth, history, science and science fiction.

Perhaps it is best to make it clear at the outset ‘where we stand’. We certainly don’t take all that is narrated/complied in the Ramayana, Mahabharata and the various Puranas literally. Nor can we convince ourselves that ‘none other than Indians’ are favoured by nature or Gods more than the unfortunate people born and dwelling elsewhere. While we do believe that the borders between physics and metaphysics are blurred, not all frontiers of different disciplines are fuzzy. What is important to remember is that people’s shared memories are shaped and opinions formed by lived experiences, not papers presented or resolutions passed—laudatory or condemnatory—in History Congresses, nor can scientific temper be cultivated or injected by insertion of amendments in the Constitution.

Even before the NDA II government had been installed, grave threats were expressed during the run-up to elections that how the saffron brigade was waiting in the wings to destroy our social fabric and pluralistic heritage, and alarm bells were rung to warn voting for Modi could only spell disaster. Once he came to power, we were told, the Nehruvian idea of India would be lost forever and the country pushed to the precipice of another Partition. Dark forces of fascism would destroy democracy and so on. The Congress chorus regarding the ‘nightmare’ failed to enthuse the voters and the caricature of a political party was all but wiped off in the elections.

Over six months have passed and no calamity has befallen us. True, some Central ministers have shown a penchant for faux pas and repeatedly floundered. But none has yet touched the depths that deep-diving sycophants in UPA I and II regularly reached effortlessly. But we digress.

Deliberations of the Indian History Congress and Science Congress have failed to cause the slightest ripple. Retirement drama staged by Dhoni and pillorying PK have pushed not only these but also the ‘Ghar Wapsi’ antics of the Hardcore Hindu Nukkad Natak Co. off the headlines. What is clear is that it’s not only the family proprietary concern run by Sonia and Rahul Gandhi that is in dire straits. Mulayam, Maya, Mamata too are under great pressure. Matrimonial alliances didn’t ensure the survival of monarchies in Europe or avert destructive imperial rivalries. Nor, in the changed context, they are likely to provide firm foundations for Yadav supremacy in Hindi heartland. The fellow travelling historians, it seems, are destined or determined to bear the ‘loneliness of the long distance’ runners humming Tagore’s Ekla Chalo Re.

Congressmen appear totally lost. They can’t make up their mind whether the ‘aggressively secular’ stance will go down well with the people—including themselves—whose DNA has undeniable traces of ‘soft’ Hindutva. The hardliners in Sangh Parivar may not be members of a happy joint family, but the ‘secular fanatics’ are people who present a sadder picture of defeated soldiers in disarray. People like Azam Khan don’t make their task easy with inane but dangerously provocative ‘jocular’ statements.

We began by stating that recent events haven’t lacked amusement. Much to our regret, we must conclude with great anguish that the New Year has begun with some extremely disturbing trends. The interception of an intruding suspicious boat in Indian waters by the Coast Guard and its sinking after an explosion is being treated in a most irresponsible manner by the critics of the present government. Matters concerning national security and intelligence pertaining to threats to it can’t be trivialised. Nor can all military and intelligence operations—overt or covert—discussed threadbare in public. We must learn to rise above party politics—from History and Science Congresses—to combat poverty and pollution.

Pushpesh Pant is a former professor of International Studies at Jawaharlal Nehru University, New Delhi
Jacob Koshy

When concluding a public lecture on Einstein at the Indian Science Congress in the first week of 2015, Abhay Ashtekar, an Indian-born theoretical physicist at Pennsylvania State University and among the founders of loop quantum gravity — an esoteric mathematical approach to better understand gravity's role in the universe — remarked, rather bleakly, that it was no longer possible for human beings to entirely grasp the complexity of the universe by thought alone. "Today, without sophisticated instruments, expensive space probes and gargantuan detectors, knowledge of the beginnings and evolution of the universe would have been impossible," he summarised to a resounding ovation.

However, the applause Ashtekar drew, after his hour-long recce of 100 years of cosmology, was several decibels lower than the plaudits from a 500-strong audience for Captain Anand Jayaram Bodas, who 24 hours earlier, on the same podium, expounded on a 200-foot plane that was powered by 40 engines with "flexible exhaust pipes made of fabric and animal skin". The aeroplane, the ex-pilot noted "was just one of many common in the Vedic Age". He sourced his information to texts and scriptures originally authored by Maharshi Bhardwaj, who "lived between 6,000 and 7,000 BC".

Bodas, who with his remarks made it to the front pages of most newspapers, didn't take questions such as how these planes were fuelled, what were the aerodynamic principles involved and refused an interview with this reporter saying "journalists had misrepresented his words by referring to his assertions as 'mythical'". In his presentation, he added that several techniques of making aircraft bodies with alloys were mentioned and of the 500 verses that made up the body of Bhardwaj's work, only 100 had survived. He nevertheless exhorted students to make aircraft bodies using techniques mentioned in the texts.

Had Bodas used a 15-year-old, easily available technology called Google, he would've come across a 1974 paper in the journal Scientific Opinion titled 'A Critical Study of the Work Vymanika Shastra', by HS Mukunda, SM Deshpande, HR Nagendra, A Prabhu and SP Govindaraju. The authors who are aerospace and mechanical engineers, and then at the Indian Institute of Science, Bengaluru, argued that Vymanika Shastra, one of the antiquarian books cited by Bodas that mentioned the various kinds of planes Bodas explicated, didn't seem older than 1922. Their research paper, analysing each of the various planes mentioned in the book, concludes that "...the descriptions of their making in the text do not seem to make much sense from the point of view of making them in actual practice..." and there is "no mention at all of the weights of different components. This is serious, as that is fundamental to the flying of heavier-than-air machines".

Calling Attention

While Bodas may have garnered the maximum attention at the fest — perhaps more than the several Nobel laureates, biologists, particle physicists and rivalled prime minister Modi's de rigueur extempore perorations — he is at the apex of a revisionist clamour that over the last few months has seen several ministers attribute plastic surgery, stem cells, Heisenberg's uncertainty principle, algebra and Pythagoras theorem as having been developed by India and "given away" to the rest of the world. However, Science Congress' organisers say that it was unfortunate that one "publicity monger" had managed to hijack all the attention and eclipsed many more thought-provoking sessions on 'Make in India', 'Swachh Bharat Mission' and medical breakthroughs.

SB Nimse, president, Indian Science Congress Association, said that he had made a conscious effort to invigorate the century-old Science Congress by ensuring that leading, active researchers from all over the world congregate, exchange ideas and inspire young students to the possibilities of science. The proposal to include a session on scientific ideas in ancient Indian literature — the first such in the organisation's history — came from the Kavikulaguru Kalidas Sanskrit University, Nagpur and, while Nimse emphasised that he had no role in conceiving such a session, it appeared a good idea. "While they initially requested a day-long session, I insisted it be only a few hours and moreover it seemed worthwhile to have a discussion on scientific thought in our ancient texts," said Nimse. "There is considerable scholarship, for instance, on the conception of multiple infinities in old Jain literature and how even Fields medallist Manjul Bhargava's [one of the speakers at the Science Congress] prize-winning work was party influenced by his reading of [19th century] German mathematician Carl Friedrich Gauss in the original." Nimse emphasised that there was no request or pressure from the government to include such a session and that whether such as session would be included in future was "up to the future president".

Sage Talk

Neither Nimse nor environment minister Prakash Javadekar, who was one of the speakers at the science and Sanskrit session, was present for the research papers that were presented and discussed. These included, apart from Bodas' presentation, talks on ancient Indian surgery, architecture and the neuroscience of yoga. Many of these works relied on a firmer historical base than Bodas' bibliography. For instance, Ashwin Sawant's work on the surgical tools and techniques in ancient India relied on the Sushruta Samhita, an important work of the Ayurveda canon, and yet the dominant argument that permeated most of the findings was that all valuable science was discovered in India and refined to immaculate perfection between roughly 2,000 BC and 500 AD. All such knowledge was known to 'sages' and over time this knowledge was "lost" or made "impure" as they began to be practised unscientifically by a larger pool of semi-trained practitioners and worse, impeded by the dominance of Buddhism, Jainism and later Islam.

Sawant, an Ayurveda physician and a PhD student, dressed in an immaculate grey suit, concluded with an exhortation that "...Sushruta is asking for credit to be known worldwide as the father of surgery". He argued that sophisticated techniques, such as corrective nose surgery, and the use of scalpels so sharp that they could "split hair", were lost because of the subsequent dominance of "certain religions". Also, he argued, "Buddhism's advocacy of non-violence gained such precedence that even the use of scalpels were considered to be violent and over time, surgery started to be practiced by 'lower classes' and they lost their refinement."

Rahul Altekar, another speaker on the same forum, claimed that principles of architecture in the Vastu Shastra were so refined that "houses were prescribed to last for an average of 500 years". Only one of the papers, by Veena Londhe and Leena Phadke, presented experimental work that purported to show the superiority of yoga asanas when compared to popular aerobic exercises of the present day such as jogging. When Phadke stated that measurements by her associates, which included researchers from the University of Munich, of electrical activity in the brain in people performing the 'sirsasana,' or a headstand, was similar to that when we are supine or extremely calm, the audience again broke into raptures. She however didn't explain why such a headstand, then, was preferable to lying down if the resultant "brain activity" was the same and why this was healthier than deep breathing.

Future of the Past

"I am a Hindu, proud of it and yet there is an inviolable line between science and belief," said KS Saraswat, a professor at the Birbal Sahni Institute of Paleobotany, Lucknow. He was part of a separate panel at the Science Congress, which presented work at a session called the 'Future of the Past', or on what were the latest archaeological techniques and discoveries being employed to understand India's early history.

In his presentation, he showed photos of lithographs and temple iconography from several Indian, Thai and Chinese temples to argue that fruits such as maize, cashew and the Brazilian pineapple — canonically believed to have been introduced to India and the East only after the European discovery of the Americas in the 16th century — were actually known to India and the East in the first millennium itself. Though this is a matter of academic dispute, Saraswat is disinterested in its implications. "This is not even my work and am relying on previous research in the US, but I'm not going to make the argument that maize was discovered in India or that Indians knew the Americas long ago," said Saraswat, "and that's because I don't have the evidence. It doesn't matter what I actually believe."

Researchers, who are exploring provocative ideas and challenging conventional West-backed histories, said that sessions such as the science and Sanskrit impede their work.

"The vimanwallahs do more harm than good because they assume any science done in the West is conspiratorial and biased toward India. Sure, there are sometimes problems with American and European interpretations, but they must be refuted in the language of science," said Mayank Vahia, a physicist at the Tata Institute of Fundamental Research, Mumbai. With interests ranging from cosmic rays and ancient astronomy, Vahia was part of a group of Indian scientists that refuted a 2004 thesis from US scientists, that the Indus script — the language of the Harappan civilisation — may not be a language at all but a mere collection of symbols, a body blow to what is understood about that civilisation. The defence of Vahia and his colleagues published in 2009 in Science — a top academic journal — used evidence from computational linguistics, statistical principles used in the auto-complete feature of texting and thermodynamics.

Other scientists argue that jingoistic science discredits the genuinely astounding achievements of ancient Indian knowledge. "I've some, but not an exhaustive, background in the history of algebra and astronomy and there is no doubt that Aryabhata predated Europe in several aspects of trigonometry," said Ashtekar, "but planes and missiles are ludicrous. How is it then that half of India doesn't have electricity? Let's us not insult the great minds of our antiquity with stuff like this." Saraswat is however resigned to the idea that this clash between cultures and the use of science to establish utopian golden ages will never go away and is embedded deep into the human DNA. "As long as people are divided by countries and their own regional histories, these conflicts will continue. Only if humanity comes together to unearth our past can we really hope to understand the course of civilisations. That, I'm sure, is impossible."

The author is a science writer

Science friction

Samit Basu

Millennia ago, a Vedic spaceship took off from India and colonized another planet. The Indians in it were perfectly happy: in order to minimize internal differences and language superiority squabbles and avoid the End of Days (the invention of Facebook), they'd abandoned language altogether, and used their highly advanced plastic surgery skills to give themselves perfectly sculpted bodies, which it made no sense to cover with clothes. Like all NRIs, they liked to come back to the homeland occasionally to see how poor conditions were and feel smug about their choices. The result of all this? PK is totally true, people.

Bad science? Yes. Bad science fiction? Definitely. I'm hoping to deliver the keynote address at the Indian Science Congress next year. We live in an era where even presumably well-educated adults have problems telling fact and fiction apart. That certainly explains the events at the recently concluded Indian Science Congress, which demonstrated that apart from inventing everything in the world thousands of years ago and then presumably losing these marvels while planet-hopping, undergoing elephant-head plastic surgery or tweeting in Sanskrit, Indians also lead the world in the production of bad science fiction authors.

Having been a bad science fiction author writing about vamans, rakshasas, vanars, vimanas and nuclear-powered bows for over a decade now, I have just realized my big mistake. I never thought the events in the books I wrote were true, which would have been the key to untold wealth, a ministerial berth, probably, and a permanent seat on the speaking roster of the Indian Science Congress — even in times when India's actually doing well in non-mythic science, with Mangalyaan and recent Nobel Prizes and whatever else. Science fiction, like most of literature, mythology, science, history and selfies, is essentially an attempt to use specific tools to find answers about big questions about the human condition: Who are we? Why are here? How do things work? But the goals of all of these fields are different, as are the tools they use. Sci-fi/fantasy, like mythology, folklore and fable, uses fantastic, larger-than-life devices, characters and objects, imaginary-scientific or magical, to inspire, understand and investigate humanity. Good science fiction and fantasy create alternate, whatif universes, create contexts and explanations for ways the worlds in them differ from ours, and use the resultant mixture to tell stories that, like all good stories, help readers understand who they are. But they're clear about one thing — the worlds they create are mirror universes, not this one.

When imagination took wing….

V Gangadhar

Airports, explained fiction writers like Arthur Hailey, were noisy places, whose high decibel levels disturbed residents of sylvan suburbs and stirred environmentalists to protest. The recently concluded 102nd Indian Science Congress in Mumbai had a different story to tell us, however. Papers read out by Indian ‘aviation experts’ at the Congress mentioned how aeroplanes flying 7,000 years ago travelled from continent to continent and planet to planet noiselessly.

We learnt hitherto unknown facts from the aviation technology expert, Captain Anand Bodas. Sanjaya in the Mahabharat gave a running commentary on the 18-day war to the blind Kaurava king Dhritarashtra.

The narration and its subsequent interpretation found its way to modern Vedic times as per the ‘Vaimanik Shastra.’ Such ancient aviation theories were documented nearly 7,000 years ago, by sages like Bharadwaj.

As the Science Congress progressed, many such theories were debunked by modern scientists and students of science from the Indian Institute of Science, Bengaluru and the IITs. They saw these claims as grotesque attempts to glorify the past, encourage superstition and showing no understanding of aerodynamics. Should we posit fantastic theories on battlefields of the past or should we use those battlefields as springboards for further research? Captain Bodas and others did not hesitate to link aviation to Rigveda.

The links between ancient surgery in India and those mentioned in ancient Greece made no sense. The minority Indian groups also drew attention to our sophisticated ancient Indian surgery techniques, unlike some present day instances, where limbs are sometimes wrongly amputated.

Medicine experts at the Science Congress asserted that ancient Greek surgeons used excellent tools and passed them on to ancient Indians. Surgery came to them naturally. Sailors on British and European vessels, from the 17th century onwards, who needed dental treatment, were plied with liquor to numb them to the pain of the surgery. The ancient Greeks were more sophisticated and used chloroform, which made the process easier.

The Science Congress did not refer to the more recent quirks in the US and Europe, like Russian scientists munching on peanuts on the eve of a rocket launch. When Indian scientists and astronomers gathered to witness and study a total solar eclipse some years ago in Hyderabad, foreign scientists present wondered why their Indian colleagues disappeared on and off, coming back looking much fresher. Obviously they had disappeared for a quick ‘holy’ bath, followed by a mini-puja, with ‘prasad’ and whatnot. A happy mix of ancient ritual and modern science.

Inspired by Prime Minister Narendra Modi, the Science Congress diehard Conservatives put out dozens of ‘Old is gold’ nuggets of information, met with much applause by the PM and his group. How many of us knew that Mathematics, Algebra, Zero, Infinity and the decimal system were known to our ancients and that we gave these ideas to the West? Modi himself applauded cosmetic surgery that took place aeons ago. It was made clear at the science meet that much of the teaching and learning was done in Sanskrit.

Ancient India was generous enough to share her scientific knowledge with other nations and civilisations. Dr Harsh Vardhan, the BJP minister from Delhi, explained that sharing knowledge came naturally to our ancient scientific Indians. We gave the Pythagoras Theorem to ancient Greece (we don’t know what for). Visiting potentates liked zebra meat and ancient Indian kings obliged them with herds of zebras, explaining that ‘all zebras’ had been donated and thus this branch of mathematics came to be known as Algebra.

With the NDA Government determined to popularise ancient science and Sanskrit, several more innovations are likely to follow. The next topic of research could be transmigration of souls (souls of living birds and animals entering human bodies or human souls entering other human bodies, as in the case of King Vikramaditya). We could understand bird language thus and tweet better, perhaps.

These are included in the science syllabus for the 2016 Science Conference in Vikramaditya Nagar. With India opting to follow the World Trade Order and Intellectual Copyright Act, there is an ambitious plan to ‘pinch’ some copyright material from foreign sources. Just to make up for the Algebra from Arabia and Geometry from Greece.

The aviation front opens up newer skies. Our flying ‘aakash sundaris’ could take crash courses in make-up from female members of ancient cabin crew, who relied on naturally available beauty aids. We should give back generously for all that we have got.

In honour of Pythagoras, we should name a few of our major roads (and parks) after him, but must make sure these roads are pothole-free because his theorem did not account for these modern day pitfalls. Of course, one gets the hiccups thinking of the scientist who jumped out of the bath, shouting out the Sanskrit equivalent of Eureka and one must pray that he was halfway decently clad, in the finest short-stapled cotton we were producing at that time.

Alternate history: Passing off fiction as fact

Sitharam Yechury

It is not often that two distinctive developments, separated by distance across the globe, should have a bearing on contemporary India. One is the terrorist attack on the satirical weekly magazine Charlie Hebdo which killed 12 people in Paris on January 7.

The other is the stunning defeat of sitting Sri Lankan President Mahinda Rajapaksa in the elections held on January 8. Brimming with over-confidence that he would be re-elected for another six years, for having ended a 30-year-long civil war in the country, Rajapaksa, called these elections two years ahead of schedule. His defeat shows, once again in history, the frailty and futility of arrogance that accompanies authoritarian rule in a democracy.

This latter development has a bearing on us, with the current ruling dispensation increasingly showing tendencies of all power flowing from the Prime Minister’s Office.

The authoritarian trends are increasingly seen with the strengthening of the current ‘Ordinance Raj’. The Union finance minister has reportedly said that while the Rajya Sabha can have “its say”, the government will have “its way”. President Pranab Mukherjee’s reported unprecedented cautioning of this government on frequent recourse to take the ordinance route seems to be falling on deaf ears.

The former development, once again, shows that rousing religious passions spreading intolerance lead to unpardonable crimes against humanity through terrorist attacks. Aggressive pursuit of the Hindutva agenda and sharpening communal polarisation through campaigns of ‘love jihad’ or ‘ghar wapsi’ engender such tendencies in our country.

Communalism and fundamentalism in our country grow by feeding on each other. In order to strengthen themselves, they seek to glorify the past, to conquer the present and capture the future. To glorify the past, mythology replaces history and masquerades as the repository of scientific advance. Thus, there is a tendency to continue to refuse to learn the correct lessons from these developments.

A case in point is the recent 102nd annual Indian Science Congress. Instead of discussing India’s current scientific achievements and defining its future direction, it became the platform to propagate ‘unscientific temper’. Section V, Article 51A (h) of our Constitution on Fundamental Duties of every citizen enjoins upon us, among other things, “To develop the scientific temper, humanism and the spirit of inquiry and reform”.

The science congress should have impressed upon the prime minister, who customarily inaugurates this meet, irrespective of the government in power, to spend more than the current measly 0.88% of our GDP on research and development for India’s emergence as a global power. The United States spends 2.74% and China around 2%. The GDP of both these countries is much larger than India’s, meaning that they spend multiple amounts more in absolute terms.

Instead, this science congress made various claims, glorifying Indian science in the ancient past (read: glory of ‘Hindu civilisation’) like aircraft technology existed in India 7,000 years ago, etc. Such fabrication of our ancient history has been emboldened, also, by the prime minister’s earlier claims that plastic surgery in ancient India could implant an elephant’s head on a human body to create Lord Ganesha and that ancient India was well-versed with ‘stem cells research’ and in ‘in-vitro fertilisation’ like procedures that permitted the immaculate conception and birth of Karna.

Of course, there were many landmark scientific achievements in ancient India. The advances in astronomy and mathematics were path-breaking. But they came more than four millennia later than claimed! However, modern science would have been impossible without the invention of the zero, not merely as a tool for accounting (in which many other ancient civilisations preceded us) but as a philosophical and mathematical concept whose opposite is the infinite.

This gave birth to negative numbers, irrational numbers, quadratic equations, mathematical constants, etc, and the philosophical ‘battle of ideas’. Though Arab traders carried these scientific achievements to the western world, to be fair, they credited “the lands beyond the Indus river”, Hindustan, for these advances.

However, 7,000 years ago, what was the state of human civilisation in these lands? Archaeologists have painstakingly documented this evolution through scientific methods like ‘carbon dating’. Between 5,000 and 4,000 BCE, the stage is described as having reached “handmade ceramic; cotton cultivated”. This is based on the findings at Mehrgarh-II, an early site of the Indus Valley Civilisation.

Further, assuming such were ancient India’s achievements as claimed, why could various kingdoms in these lands not resist, indeed stop, periodic invasions, the establishment of Empires leading to the colonisation of India? Did not our scientific growth stagnate after the Brahmanical caste hierarchical order re-triumphed over Buddhism, denying access of learning and knowledge to the vast majority of our people? Buddhism had encouraged such a milieu, permitting scientific advance to thrive.

Often the Hindutva brigade accuses Marxist historians of debunking the ‘glory of the ancient Hindu civilisation’. However, the most elaborate expositions of advances made in ancient India have come from the writings of Marxists like Irfan Habib (born a Muslim), Rahul Sankirtyayan, DD Kosambi, Devi Prasad Chattopadhyaya and many others.

Historians of the Hindutva variety, on the other hand, did not make any significant study of our ancient past that would stand up to serious intellectual scrutiny.

Such rewriting of history is now being done, through the spread of ‘unscientific temper’, to glorify and establish as MS Golwalkar propagated the uninterrupted glory of the “Hindu civilisation” in these lands since ancient times.

The RSS/BJP are vigorously working to transform, by sharpening communal polarisation, the modern secular democratic Indian Republic into the RSS project of a rabidly intolerant fascistic ‘Hindu Rashtra’, where religious minorities and atheists will not be treated as equal citizens. The realisation of this project, unless resisted and defeated, will permit such a transformation of India, as we know of it today. 

Sitaram Yechury is CPI(M) Politburo member and Rajya Sabha MP

An 'ancient' treatise no older than 1904

DIVYA GANDHI

Aircraft based on drawings and text of Vyamanika Shastra cannot fly...


Vymanika Sastra, the “Vedic” aeronautical treatise by an ancient Rishi describing giant indigenous airplanes that travelled between cities and continents 7,000 years ago, it turns out, is no older than 1904, the year of the Wright brothers’ first successful flight.

Aeronautical engineers of the Indian Institute of Science (IISc), who, in a 1974 paper, scrutinised the Sanskrit text and its Hindi and English translations, concluded that the work had neither Vedic origins nor scientific credence. The Vymanika Sastra, however, does betray “knowledge of modern machinery,” they say in the paper published in Scientific Opinion decades ago.

At the 102nd Indian Science Congress held earlier this month in Mumbai, retired pilot Captain Anand J. Bodas presented a paper on “Ancient Indian aviation technology” and spoke of India’s ancient aircraft described in the Sanskrit text by “Maharshi Bharadwaja.” The giant 60X60-ft airplanes with 40 engines and a radar system, “rooparkanrahasya”, could travel between cities, countries and planets, he said raising considerable controversy at the conference.

“In a 1974 paper, IISc scientists found Vymanika Sastra has neither Vedic origins nor scientific credence.”

The group of five IISc scientists, however, says in their paper that the aircraft described in Vymanika Sastra is a “gross violation of Newton’s laws.” The paper adds that “none of the planes has properties or capabilities of being flown; the geometries are unimaginably horrendous from the point of view of flying; and the principles of propulsion make them resist rather than assist flying.” In short, “If the craft is taken to mean what the drawings and the text say, it can be stated that the craft is a decided impossibility.”


The scientists looked at four airplanes described in the Vymanika Shastra and studied them for their aeronautical principles, geometry, materials, chemistry and operational data: Shakuna Vimana made from “prana kshara” (ammonium chloride), Bengal gram, mercury, borax, mica, silver and ‘panchamrita’; Sundara Vimana comprising five tiers and capable of flying at 12,800 mph on electricity produced in vessels containing, among other concoctions, cow and elephant urine; Tripura Vimana that could fly in air and also move in water and on land; and Rukma Vimana.

They concluded that “It appears that his work cannot be dated earlier than 1904 and contains details which, on the basis of our present knowledge, force us to conclude the non-feasibility of heavier-than[-air] craft of earlier times.”

Co-author of the scientific paper, S.M. Deshpande, a former Professor of Aerospace Engineering at the IISc told The Hindu: “In the course of our research, we found quite conclusively that the text was written by Subbaraya Shastry from Anekal — not by a Rishi Bharadwaja — and no earlier than 1904.” Shastry dictated the text during “trance-like spells” in the form of shlokas to a scribe and commissioned drawings from a draughtsman from an engineering college, Professor Deshpande said.

The illustrations “definitely point to a knowledge of modern machinery,” says their paper. “This can be explained on the basis of the fact that Shri Ellappa who made the drawings was in a local engineering college and was thus familiar with names and details of some machinery.” The scientists add: “What we feel [is] unfortunate… is that some people tend to eulogise and glorify whatever they can find about our past, even without valid evidence. In the absence of any evidence, efforts will be made to produce part of the evidence in favour of antiquity.”

Professor Deshpande said he and his colleagues were, 40 years ago, “driven by scientific curiosity” to study this work to see if it was possible to create an aircraft based on the text from an aeronautical point of view. “But we were disappointed.”