Showing posts with label ಪುರಾಣ. Show all posts
Showing posts with label ಪುರಾಣ. Show all posts

23 January 2015

Bonfire of the Humanities


Samuel Moyn

Historians are losing their audience, and searching for the next trend won’t win it back.


History has a history, and historians rarely tire of quarreling over it. Yet for the past few centuries, historians have maintained an uneasy truce over the assumption that the search for “facts” should always take precedence over the more fractious difficulty of interpreting them. According to Arnaldo Momigliano, the great twentieth-century Italian scholar of ancient history, it was the Renaissance antiquarians who, though they did not write history, inadvertently made the modern historical profession possible by repudiating grand theory in order to establish cherished fact. The antiquarians collected remnants of the classical past, and understandably they needed to vouch for the reliability of their artifacts at a time when so many relics were wrongly sourced or outright fakes. Momigliano cited the nineteenth-century Oxford don Mark Pattison, who went so far as to remark about antiquarians—approvingly—that “thinking was not their profession.” It may remain the whispered credo required for admission to the guild.

More wary than anthropologists, literary critics or political scientists of speculative frameworks, historians generally have been most pleased with their ability simply to tell the truth—as if it were a secret to be uncovered through fact-finding rather than a riddle to be solved through interpretation. Anthony Grafton once honored Momigliano with the title “the man who saved history,” and it seems fair to say that the latter voiced the consensus of a profession that makes facts almost sacred and theories essentially secondary.

Even when historians started to think a little, they did so gingerly. If antiquarians merely paved the road for modern history, to proceed down it required doing more than displaying the hard-won truth. Momigliano reported that it took a while for our early modern intellectual ancestors to suspect that they could ever improve on the classical historians of Greece and Rome, thanks to the new facts that antiquarians had eked out. The true antiquarians simply stashed their goods and, Momigliano vividly wrote, shivered in “horror at the invasion of the holy precincts of history by a fanatic gang of philosophers who travelled very light.” But their heirs, like Edward Gibbon, author of the stupendous Decline and Fall of the Roman Empire, realized that storytellers would have to take on board speculation or “philosophy,” corralling facts within an intellectual scheme to lend them meaning. Facts alone were blind, just as theory was empty on its own. Yet Momigliano, sharing Pattison’s approval of the antiquarian origins of history, acknowledged the necessity of thinking almost regretfully, as if the results were an inevitably ramshackle edifice built on the bedrock of fact that it was the real job of historians to lay down. Theories could be stripped away, and stories renovated as fashion changed, but the facts on which the edifice was built would endure. The “ethics” of the profession, Momigliano testified, rested on the ability of historians to stay true to them.

In the early days of Gibbon’s Enlightenment, most of the frameworks on which historians relied were theories about the origins and progress of society; in the two centuries since, historians have been willing to have their facts consort with a wide variety of suitors, from nationalism to Marxism to postmodernism. The discipline has gone through so many self-styled theoretical “turns” that it is frankly hard to keep up. It is paradoxically because most historians have looked on theory with suspicion—as a lamentable necessity, at best, to allow the facts their day—that they have often been avid trend-watchers. Precisely because they are so fickle, opportunistic and superficial in their attitude to speculation, historians seem to change popular theories often, treating them not as foundations to be built on, but as seasonal outfits to clothe the facts they have so assiduously gathered.

* * *

Today, historians worry that they have lost their audience, and their distress has made the search for the next trend seem especially pressing. At the beginning of her new book, Writing History in the Global Era, Lynn Hunt remarks that “history is in crisis” because it can no longer answer “the nagging question” of why history matters. David Armitage and Jo Guldi, in theirHistory Manifesto, concur: in the face of today’s “bonfire of the humanities,” and a disastrous loss of interest in a topic in which the culture used to invest heavily (and in classes that students used to attend in droves), defining a new professional vocation is critical. History, so often viewed as a “luxury” or “indulgence,” needs to figure out how to “keep people awake at night,” as Simon Schama has said. Actually, the problem is worse: students today have endless diversions for the wee hours; the trouble for historians is keeping students awake during the day.

In the last few decades, Hunt has had the most reliable eye for new trends in the American historical profession, and what she considers important always amounts to more than the sum of her current enthusiasms. You may not like the enterprises she is bullish on; you may try to blow up one of her bandwagons—as I did in these pages when she invented human-rights history—only to find yourself riding it for life [“On the Genealogy of Morals,” April 16, 2007]. What you cannot dispute is that she has a preternatural sense of the new new thing being touted by historians to study old things.

Like a few other famous trendsetters, Hunt, who recently retired from UCLA, was trained in the 1970s during the rising tide of social history, when what mattered most was learning about the ordinary men—and, even more important, women—lost to the enormous condescension of posterity. Having focused for centuries on kings (and, eventually, presidents) and their wars and diplomats and negotiations, historians realized that they had mostly ignored the social forces pulsing from below, and they longed to identify with the forgotten people who had been written out of history simply because they were not elites. Social historians often had left-wing sympathies, and, following the lodestar of E.P. Thompson’s luminous The Making of the English Working Class (1963), they wanted social history to chronicle the rise in political consciousness of the laboring people (and, later, other oppressed or marginalized groups) who deserved justice. Because they were interested in the shape of society and not only its working classes, social historians drew on a then-newfangled body of thought. It was not just left-wing politics but Marxism as a theory of society that prospered under social history’s reign; in turn, the whole tradition of such thinking, from the Enlightenment to Emile Durkheim and Max Weber, became canonical.

Hunt left the fold in the 1980s, bolting for what she famously dubbed “the new cultural history.” Worlds became full of meaning, renegade social historians discovered, and the representations of power that people create, the rituals they practice, and the ways they interpret their worlds now trumped basic information about the social order. It wasn’t enough to understand the class structure at the time of the French Revolution, Hunt argued in her landmark book Politics, Culture, and Class in the French Revolution (1984); one also needed to understand the world of political symbols and “political culture” that made social action meaningful—especially since class turned out not to matter as much as the Marxists believed. Trading in Marxism for anthropology and “postmodern” theory, the new cultural history was, among other things, a protest against the tabulation of people according to static categories like “the workers” or “the peasantry,” and its breakthrough coincided with the failure of political efforts to win greater social equality.

Then Hunt changed her mind again. No sooner had the ink dried on The Family Romance of the French Revolution (1992)—a creative application of Sigmund Freud’s originally individualized psychoanalysis to a collective event, which remains her most interesting book—than she declared that “theory” had gone too far. It seemed, Hunt complained, to be little more than a recipe for saying whatever you want. “Postmodernists often put the word ‘reality’ in quotation marks to problematize the ‘there’ out there,” Hunt and several colleagues wrote in Telling the Truth About History (1994). But this statement wasn’t itself realistic—the point of theory is that no “reality” is self-interpreting—and her verdict could hardly prove the uselessness of broader frameworks of interpretation, except to those who treat them as secondary in the first place. Frightened by the whirling fashions that seemed to threaten mere chaos, Hunt rallied around facts. She declared the cultural turn a vast mistake, and postmodernism a tissue of error. From whatever heaven or hell they reside in, the antiquarians were smiling.

* * *

But if facts provide permanent refuge to historians, fashions continue to entice them. Twenty years on, Hunt is again scrutinizing the latest trends, and the opinions she offers about them inWriting History in the Global Era should not be taken lightly. She begins by reviewing the shift from social to cultural history. As she confesses, one big problem with the search for “meaning” in the past is that it was so vague as to be useless, even if it showed that a shortcoming of social history was an incessant focus on anonymous and supposedly objective processes. But cultural history proved to be another cul-de-sac. Hunt explains it with a different metaphor: “What began as a penetrating critique of the dominant paradigms ended up seeming less like a battering ram and more like that proverbial sucking sound of a flushing toilet.” In Hunt’s telling, the clear need even two decades ago was for a new “paradigm” for historians to apply to their facts. But what is it?

Where cultural history often emphasized the small and the local, Hunt continues, the current wave of interest in “globalization” favors the far-flung. It gets its name from a process exalted by Thomas Friedman and excoriated by Naomi Klein, and Hunt shows that historians have hardly been immune from suddenly discovering the world beyond their cramped former national or regional redoubts. She also shows that the very term “globalization” has experienced a crescendo in the past two decades, with books and articles pouring forth from presses offering global histories on a welter of subjects. We have been treated to global histories of cod, comics and cotton, and one publisher offers a series dedicated to global accounts of foodstuffs like figs, offal, pancakes and pizza. German historian Jürgen Osterhammel’s history of the nineteenth century, The Transformation of the World, shows what life was like when it took eighty days to travel around the globe, anticipating our age of supersonic movement of people and instantaneous transmission of bytes. Even Hunt has recently gotten into the act, editing a book about the French Revolution from a global perspective.

Proponents of globalizing history have persuasively argued that history has remained “Eurocentric,” but Hunt rightly asks whether the contemporary fashion of writing history across large spaces does more than drastically expand the canvas for historical depiction. “Is globalization a new paradigm for historical explanation that replaces those criticized by cultural theories?” she asks. It may enlarge the scale of study, focusing on long-distance trade, far-flung empire or cross-border war, but such a perspective could merely draw greater mountains of facts in view, without explaining what they mean or why they matter.

What global history emphatically does not prove is that the classic authorities for interpreting the past have become obsolete, especially since Karl Marx himself described the phenomenon now called globalization. Hunt’s starting point is different. She argues that because she and her fellow cultural historians so irreparably damaged the social theories that commanded history from Gibbon’s time to our own, the options for doing history now can only take one of two forms. One is to do without any reigning “paradigm,” which Hunt stipulates cultural history never had—beyond a general commitment to recapturing meaning, without agreement on how to interpret it. The other is to invent a new paradigm. Hunt’s fear is that globalization, because it foregrounds anonymous processes once favored by social historians, will end up preferring the sorts of frameworks they once relied upon. Globalization could, that is, make obsolete the insights of the cultural revolution Hunt originally sponsored, while doing nothing to lead historians beyond the limits she now thinks are intrinsic to a global focus.

To her credit, Hunt makes it clear that her need for a new dispensation is hardly universal within the profession. It is conventional to group Hunt with her generational colleagues Joan Scott and William Sewell, since all three bolted from social history in a crowd, and all three have regularly explained their turns over the years. (Sewell is the author of the greatest book in the historiographical landscape, Logics of History: Social Theory and Social Transformation [2005].) But as Hunt notes, Scott has stuck it out with postmodernism—apparently believing it more defensible than Hunt does—while Sewell has gone “backwards” to Marxism. Hunt is not satisfied with either choice: “Must historians choose between a return to the previous paradigms,” she wonders, “or no paradigm at all?”

For Hunt to ask this question, her twin premises—that cultural history utterly devastated social theory, while generating no real interpretive worldview of its own—must bear a lot of weight. Perhaps too much: Sewell doesn’t think the first is true, while Scott would bridle at the second. For that matter, you might wonder whether the source of the problem is the roller coaster of approaches and its endless loops, which produces the demand for a new new theory.

Bravely, Hunt forges ahead to shape her own paradigm, in what is the most interesting chapter of her book. She concludes that historians need a novel approach to society—or, more precisely, a theory of the mutual relationship between the individual self and the larger society. Neither social nor cultural history, which submerged the individual in a larger system of forces or meaning—often to the point of rendering him entirely insignificant—could possibly fit the bill, Hunt says. But there is good news: “Ideas about the society-self connection are now emerging from an unlikely conjunction of influences.” Her goal is to spell out what these are, as sources for a new paradigm.

Two of Hunt’s sources are evolutionary neuroscience and cognitive psychology, which she tinkered with in earlier work. Her enthusiasm for them appears strange, given that the rule of biological processes is hardly less anonymous and deterministic than a globalizing turn that effaces human agency. Importing newfangled theories from other esoteric fields and leaning on works of pop science doesn’t seem like a recipe for success. Remember the crop of historians of the late nineteenth and early twentieth century who put their bets on scientific racism? Nobody does, except as cautionary tales, because their work is worthless.

What becomes even more confusing is that Hunt grafts this trend onto a return to the hoary tradition of social theory that she explicitly admits is simply a broader version of the approaches that cultural history supposedly overturned. The idea that “the social is the ground of meaning”—in Hunt’s ultimate formula—was central to the tradition of thinking from the Neapolitan sage Giambattista Vico to Durkheim, Marx and Weber. It may be that social historians badly misunderstood this tradition in their efforts to think about society in terms of broad categories of people, just as cultural historians reversed the error in celebrating “meaning” as a separate object. But in her proposed return to the social, Hunt is essentially admitting that we progress not by seeking a new paradigm, but by fixing past mistakes. One of the biggest is the trend-driven thought that historians had to choose between studying society and studying culture, even if that false choice once made sense to Hunt and her generation.

For this reason, Hunt’s book sometimes reads as if we have to live her own intellectual life story in order to follow her venture to craft a new paradigm. It could be, however, that all this talk of “paradigms” is misleading—a distraction from the fact that the relation of self and society has been the constant concern of social theory since its origin, and that there is a huge range of options within that tradition to explore and improve upon. Hunt repudiates the common postmodern position that the self is a historical product, as if merely proposing a compromise between the claims of society and the self were specific or sufficient. Even when it comes to her own modish neuroscientific flourish, Hunt connects it to an older French thinker, Maurice Merleau-Ponty, and his broader notion that selves are embodied. But like Marcel Gauchet, a contemporary Frenchman on whom she draws heavily, Merleau-Ponty is merely one figure within a rich fund of resources in social thought.

Hunt raises but never resolves what may be the key quandary for historians today. The emergence of global history inevitably makes one wonder if the categories—starting with “society” itself—that Westerners have devised to study themselves are applicable to peoples of all times and climes. Hunt repudiates extremist commentators who insist that Western categories can only ever explain Western things. It is not clear that this overcomes the difficulty.

* * *

Whereas Hunt wants to reckon with the fashion of globalization, Armitage and Guldi are interested in larger time scales and not merely expanded geographical spaces. Armitage, a trusted Harvard colleague of mine, has never been above spotting trends himself, having already helped define the study of Atlantic history, Pacific history and international history. Now he has a couple of new themes—long-term history and present-minded history—and in his effort to expound them he is joined by Guldi, a younger whiz kid who is an expert in “big data.”

Their exciting argument goes like this: in the past few decades, historians have dropped their emphasis on what the French historian Fernand Braudel called the longue durée. In his celebrated history of the Mediterranean Sea littoral, published in 1949, Braudel insisted on the superior reality of the long-term rhythms of life. The commanding forces of demography and environment, Braudel assumed, made individuals—even kings—mere “dust.” Armitage and Guldi offer a series of reasons why, contrary to Braudel’s inspiring example, historians broke for the short term. Perhaps the main one was cultural history: “meaning” seemed inevitably tied to a specific time and place, in ways that grand stories across vastly different times would always slight. But there were other reasons, too, like the pressures of finding new topics in the professional competition for turf. The results, Armitage and Guldi believe, were profound, as the average time scale of history books was precipitously compressed.

But retrieving our sensitivity to what the pair somewhat mysteriously call “vibrations of deeper time” is not just an attempt to return to Braudel’s cool and remote surveys of aeons. The real reason to ascend to Olympian heights and the sweeping gaze they allow, Armitage and Guldi say, is to plunge into the political affairs of the city. How is it, they ask, that since classical times history played the role as magistra vitae—roughly, a teacher for living—and especially for the guidance of political actors, but now has been rudely displaced by other fields, and especially by dismal (and often disastrous) economic thinking? History used to be, if not exactly philosophy, then at least “philosophy teaching by examples,” as Thucydides originally put it, and as the early modern Viscount Bolingbroke repeated in his Letters on the Study and Use of History (1735).

In this plea for relevance, Armitage is cutting against the famous stricture of his mentor, the Cambridge University don Quentin Skinner: if thinking is to be done, it has to be done “for ourselves,” without the aid of historical perspective. Where Skinner voiced a conventional antiquarian view that the role of writing history is to cut the present off from very different pasts, Armitage and Guldi insist on the operative value of historical work, and indeed for the highest public causes. After chronicling the cult of the short term, the two turn to the pressing political reasons for abandoning it in order to bring the long term to bear on our present, with the help of new digital tools. Historians need, they say, to immerse themselves in the vast digital archives of searchable information now on offer, and compared to which their old search for archival documents looks narrow and quaint.

Even as they have some wise and penetrating things to say about the new services that big data affords, Armitage and Guldi make it clear that their brief is not for every historian to shift to the long term. In their defense, they cite none other than Lynn Hunt. Time-bound and local puzzles will always remain to be confronted; but for Armitage and Guldi, the really uplifting new new thing is that computerized data and computing power allow a set of rapid solutions to challenges that took Braudel and his ilk a decade to decipher. And these, they argue, could in turn allow historians a return to the public stage, whether it comes to debates about international governance or global land reform.

* * *

Armitage and Guldi are careful to distinguish their notion of the long term from other calls for “deep” and “big” history. Given her scientism, Hunt has a soft spot for the call for depth, one that is associated with another Harvard scholar, Daniel Smail, author of On Deep History and the Brain (2008). Smail refuses to restrict the history of humanity to the last few millennia and their documentary record, when archaeology and especially biology provide tools to extend history back much further. For acolytes of “big” history, like the Australian scholar David Christian, “deep” history that starts so late—with human beings—is itself too unambitious. It’s an argument that has resonated beyond the ivory tower. Bill Gates has been agitating for high schools to teach history starting with the Big Bang. “I just loved it,” Gates told The New York Times of his experience exercising on his treadmill while watching Christian explain the concept of big history on a video. “It was very clarifying for me. I thought, God, everybody should watch this thing!”

Perish the thought. Apart from the fact that Gates’s scientism sacrifices the critical perspective that humanists have learned to maintain since their disastrous nineteenth-century dalliance with biology and other natural sciences, the trouble with massive expansions of the time line, even just to the totality of human history, is simple: it forces historians to become scientists, effectively converting their discipline into what is already somebody else’s job. Gates’s big historians already exist: they are called physicists. In any case, this is not what Armitage and Guldi seem to want. They justifiably insist that humanistic inquiry like history is supposed to provide an alternative to “the natural-law models of evolutionary anthropologists, economists, and other arbiters of our society.” More than that, excessive expansion sacrifices the idea that the drama of human history is about the fate of our ends, and therefore what we ought to care most about, even when they affect the nonhuman world.

Yet even in their comparatively modest call for long time lines to confront burning problems (including a literally burning earth), Armitage and Guldi have no answer to what has always been the really hard question: How do you interpret facts across a tiny or huge time scale? Just as the globe provides a larger space, an extended time line merely allows a longer frame. To think about what happens in the sunlit uplands beyond the confinement of the local and time-bound, you need a theory. Data—including big data about the long term—is never self-interpreting. Nor is orientation toward the past for the sake of the future solely a problem for which more information is the solution; it is ultimately a philosophical problem that only speculation can solve. This was the point of social theory from Vico to Marx: to integrate necessary facts with a vision of human becoming, which never lacked an ethical and political dimension. Arguably, it is this, most of all, that people need today, not merely a proclivity for the long term.

Armitage and Guldi have no use for Marx except to inspire their title, and to allow them to begin their book by invoking the specter of the long term and to end it by demanding that the historians of the world unite. Unlike Hunt, they do not regard the newly won chronological sweep—like the larger space of globalization—as something that has to be filled by some theory or other that allows new or big (or old or little) data to be interpreted in compelling ways. Or if they do, it is not the focus of their brief for ambition.

Even our boldest trendsetters, then, do not see the wall between history and philosophy as the final frontier to breach, in part because it was the first one erected to define the discipline by antiquarians in love with their facts. Armitage and Guldi wisely remark that fashionable “critical turns” conceal “old patterns of thought that have become entrenched.” Of these, the most durable is not the affection for the short term, but the refusal to risk the certainty of facts for the sake of a fusion of history and philosophy.

* * *

In 1966, Hayden White published “The Burden of History,” his still invigorating attack on his professional colleagues. “History is perhaps the conservative discipline par excellence,” White wrote, coming out swinging, and perhaps most of all against the factological ethics so central to the modern craft. The consequences, according to White, were grave: “As history has become increasingly professionalized and specialized, the ordinary historian, wrapped up in the search for the elusive document that will establish him as an authority in a narrowly defined field, has had little time to inform himself of the latest developments in the more remote fields of art and science.”

Momigliano wrote a notorious polemic against White (a former teacher of mine) precisely for denigrating the recovery of factual truth, which he thought central to history. But if Momigliano turned that recovery into a punishing imperative of the historical superego, White wanted to substitute a different “ethics” for history—one that would make room for theory, or even insist on seeing beyond the contrast between history and theory, in the service of the present. Nearly 90 years old and still ahead of his time, White is back this year with his own lively new book, The Practical Past.

Because the past needs to be practical for us—there is no reason to care about it except insofar as it is useful to the present—White begins his book by once again putting Momigliano’s professional “ethics” in their proper place:

The older, rhetorically structured mode of historical writing openly promoted the study and contemplation of the past as propaedeutic to a life in the public sphere, as an alternative ground to theology and metaphysics (not to mention as an alternative to the kind of knowledge one might derive from experience of what Aristotle called the “banausic” life of commerce and trade), for the discovery or invention of principles by which to answer the central question of ethics: “What should (ought, must) I do?” Or to put it in Lenin’s terms: “What is to be done?”

It seems as if, in roundabout ways, all of our current historiographical trend-followers finally agree with White, in the face of what they regard as a great crisis for historical writing today. But it is one thing to call for speculation for the sake of relevance, and another to bring about a new marriage of history and philosophy. For the coming generation, one thing is clear: thinking will have to become our profession.

19 January 2015

ವಿಜ್ಙಾನ ವಿಶೇಷ | ನಾಗೇಶ್ ಹೆಗಡೆ

ಏಳು ಸಾವಿರ ವರ್ಷಗಳ ಹಿಂದೆ ಭಾರತೀಯರ ಎಂಜಿನಿಯರಿಂಗ್ ಕೌಶಲ ಭಾರೀ ಮುಂದಿತ್ತಂತೆ. ‘ಶಕುನ ವಿಮಾನ’, ‘ರುಕ್ಮ ವಿಮಾನ’, ‘ಸುಂದರ ವಿಮಾನ’ ಹೀಗೆ ನಾನಾ ಬಗೆಯ ವಿಮಾನಗಳು ಇದ್ದು­ವಂತೆ. ಈಗಿನ ವಿಮಾನಗಳಂತೆ ಮುಂದಿಕ್ಕಿ­ನಲ್ಲಿ ಮಾತ್ರ ಹಾರುವ ಬದಲು ಅವು ಹಿಂದಕ್ಕೂ ಚಲಿಸುತ್ತಿದ್ದುವಂತೆ. ಈ ವಿಮಾನಗಳು ಖಂಡಾಂತರ ಅಷ್ಟೇ ಅಲ್ಲ, ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೂ ಹೋಗಿ ಬರುತ್ತಿದ್ದುವಂತೆ. ಭಾರದ್ವಾಜ ಮಹರ್ಷಿ ಎಂಬಾತ ಇದನ್ನೆಲ್ಲ ಸಂಸ್ಕೃತ ಶ್ಲೋಕಗಳಲ್ಲಿ ವಿವರಿಸಿದ್ದಾನಂತೆ. ಅದಂತೆ ಇದಂತೆ.

ಹೀಗೆಂದು ಮುಂಬೈಯಲ್ಲಿ ಹತ್ತಾರು ಸಾವಿರ ವಿಜ್ಞಾನಿಗಳ ಸಮಾವೇಶದಲ್ಲಿ ನಿವೃತ್ತ ಪೈಲಟ್ ಮಹಾಶಯನೊಬ್ಬ ಚಿತ್ರ ಸಮೇತ ವಿವರಣೆ ನೀಡಿದ್ದು ಭಾರೀ ನಗೆಪಾಟಲಿಗೆ ಗುರಿ
ಯಾಗಿದೆ. ಭಾರತದ ವೈಜ್ಞಾನಿಕ ಸಾಧನೆಗಳನ್ನು ಬಿಚ್ಚಿಡ­ಬೇಕಾದ ಗಂಭೀರ ಸಮ್ಮೇಳನದಲ್ಲಿ ಈ ಬಗೆಯ ಕಪೋಲ ಕಲ್ಪಿತ ಸಂಗತಿಗಳ ಬಗ್ಗೆ ಉಪನ್ಯಾಸಕ್ಕೆ ಅವಕಾಶ ಕೊಟ್ಟಿದ್ದು ಇಡೀ ವಿಜ್ಞಾನ ಸಮೂಹಕ್ಕೇ ಅವಹೇಳನಕಾರಿ ಪ್ರಸಂಗ ಎಂದು ಟೀಕೆಗಳು ಬಂದಿವೆ.

ಪ್ರತಿ ಜನವರಿ ೩ನೇ ತಾರೀಖಿನಂದು ಪ್ರಧಾನಮಂತ್ರಿಯ ಸಮಕ್ಷಮದಲ್ಲಿ ಉದ್ಘಾಟನೆ­ಯಾ­ಗುವ ಐದು ದಿನಗಳ ‘ಭಾರತೀಯ ಸೈನ್ಸ್ ಕಾಂಗ್ರೆಸ್’ ಹೆಸರಿನ ಬೃಹತ್ ವಿಜ್ಞಾನ ಸಮ್ಮೇಳ­ನಕ್ಕೆ ೧೦೧ ವರ್ಷಗಳ ಇತಿಹಾಸವಿದೆ. ದೇಶದ ಎಲ್ಲ ಭಾಗಗಳಿಂದ ವಿಜ್ಞಾನಿಗಳು ಇಲ್ಲಿಗೆ ಬಂದು ತಂತಮ್ಮ ಸಂಶೋಧನೆಗಳ ಕುರಿತು ಹೇಳುತ್ತಾರೆ. ಆರೇಳು ವಿದೇಶೀ ನೊಬೆಲ್ ವಿಜೇತರನ್ನು ಕರೆಸಿ ಅವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾ­ಗುತ್ತದೆ. ರಾಷ್ಟ್ರದ ಇದುವರೆಗಿನ ಸಾಧನೆಗಳನ್ನು ಪ್ರದರ್ಶಿಸಿ ಮುಂದಿನ ವರ್ಷಗಳ ಗೊತ್ತುಗುರಿಗಳ ನೀಲನಕ್ಷೆಯನ್ನು ತೋರಿಸುವ ಈ ಘನಗಂಭೀರ ಮೇಳ ಹಿಂದೆಂದೂ ಇಂಥ ಹೀನಾಯ ಲೇವಡಿಗೆ ಗುರಿಯಾಗಿರಲಿಲ್ಲ.

ಸಾಮಾನ್ಯವಾಗಿ ಇಲ್ಲಿ ಮಂಡಿಸಲಾಗುವ ಪ್ರಬಂಧಗಳ ವಿಷಯಗಳನ್ನು ಆರೆಂಟು ತಿಂಗಳ ಹಿಂದೆಯೇ ನಿರ್ಧರಿಸಲಾಗುತ್ತದೆ. ಆದರೆ ಕೇಂದ್ರದಲ್ಲಿ ಹೊಸ ಸರ್ಕಾರ ಬಂದ ನಂತರ ‘ಸಂಸ್ಕೃತದಲ್ಲಿ ಪುರಾತನ ವಿಜ್ಞಾನ’ ಎಂಬ ವಿಷಯವನ್ನೂ ಸೇರಿಸಲಾಯಿತು. ನಾಗಪುರ ಸಮೀಪದ ರಾಮ್‌ಟೆಕ್‌ನಲ್ಲಿರುವ ‘ಕವಿಕುಲ­ಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯ’ದ ವತಿಯಿಂದ ಕೆಲವು ಪ್ರಬಂಧಗಳನ್ನು ಮಂಡಿಸಲು ನಿರ್ಧರಿಸಲಾಯಿತು. ಮುಂಬೈ ವಿಶ್ವವಿದ್ಯಾಲ­ಯದ ಸಂಸ್ಕೃತ ವಿಭಾಗವೂ ಸಾಥ್ ನೀಡಿತು. ಹಿಂದೆಂದೂ ಪುರಾತನ ಭಾರತದ ವಿಜ್ಞಾನ ಸಾಧನೆ ಕುರಿತು ಈ ವೇದಿಕೆಯಲ್ಲಿ ಚರ್ಚೆ ನಡೆದಿಲ್ಲವಾದ್ದರಿಂದ ವಿಜ್ಞಾನಿಗಳೂ ಇಂಥ­ದ್ದೊಂದು ಗೋಷ್ಠಿಗೆ ಆಕ್ಷೇಪಿಸಲಿಲ್ಲ. ಆದರೆ ಮಾಜಿ ಪೈಲಟ್ ಹಾಗೂ ವಿಮಾನ ಚಾಲನಾ ತರಬೇತುದಾರ ಕ್ಯಾಪ್ಟನ್ ಆನಂದ ಬೋಡಾಸ್ ತಮ್ಮ ಪ್ರಬಂಧವನ್ನು ಮಂಡಿಸಿದಾಗ ಅನೇಕರಿಗೆ ಕಸಿವಿಸಿಯಾಯಿತು. ಬೋಡಾಸ್ ಪ್ರಬಂಧದ ಮುಖ್ಯಾಂಶ ಹೀಗಿತ್ತು:

‘ಕ್ರಿಸ್ತಪೂರ್ವ ೭೦೦೦ದ ಸುಮಾರಿಗೆ ಮಹರ್ಷಿ ಭಾರದ್ವಾಜರು ವಿಮಾನ ಉಡ್ಡಯನ ಕುರಿತ ೯೭ ಗ್ರಂಥಗಳನ್ನು ಆಧರಿಸಿ ‘ಬೃಹತ್ ವೈಮಾನಿಕ ಶಾಸ್ತ್ರ’ ಎಂಬ ಕೃತಿಯನ್ನು ಬರೆದರು. ಆಗಿನ ಕಾಲದಲ್ಲಿ ೬೦ ಚದರ ಅಡಿಗಳಷ್ಟು ವಿಸ್ತಾ­ರದ ೨೦೦ ಅಡಿ ಎತ್ತರದ ಜಂಬೋ ವಿಮಾನ­ಗಳೂ ಇದ್ದವು; ಅಂಥವಕ್ಕೆ ಸಣ್ಣ ಸಣ್ಣ ೪೦ ಎಂಜಿನ್‌ಗಳನ್ನು ಜೋಡಿಸಲಾಗುತ್ತಿತ್ತು. ಎತ್ತ ಬೇಕಾದತ್ತ ತಿರುಗಬಲ್ಲ ಹೊಗೆ ಕೊಳವೆಗಳನ್ನು ಪ್ರಾಣಿಗಳ ಚರ್ಮದಿಂದ ತಯಾರಿಸುತ್ತಿದ್ದರು. ಸಮುದ್ರದ ಆಳದಲ್ಲಿ ಬೆಳೆಯುವ ಸಸ್ಯಗಳ ನಾರಿನ ಉಡುಪುಗಳನ್ನು ಪೈಲಟ್‌ಗಳು ತೊಡು­ತ್ತಿದ್ದರು; ಅಂದಿನ ದಿನಗಳಲ್ಲಿ ‘ರೂಪಾರ್ಕನ್ ರಹಸ್ಯ’ ಎಂಬ ರಡಾರ್ ಕೂಡ ಬಳಕೆಯಲ್ಲಿತ್ತು. ಅಂಥ ವ್ಯೋಮಯಾತ್ರೆಯ ಯಂತ್ರಗಳನ್ನು ತಯಾರಿಸುವ ಬಗ್ಗೆ ಭಾರದ್ವಾಜರು ೫೦೦ ಸೂತ್ರಗಳನ್ನು ಬರೆದಿಟ್ಟಿದ್ದಾರೆ. ಅವುಗಳನ್ನು ಆಧರಿಸಿ ಇಂದಿನ ಯುವ ವಿಜ್ಞಾನಿಗಳು ಬೇರೆ ಬೇರೆ ವಿಧದ ಮಿಶ್ರಲೋಹಗಳನ್ನು ತಯಾರಿಸಿ ನೋಡಬಹುದು...’

ತಯಾರಿಸಿ ನೋಡಿರೆಂದು ಕರೆ ಕೊಡುವ ಬದಲು ವೇದಕಾಲದ ಈ ತಥಾಕಥಿತ ಗ್ರಂಥದ ಸತ್ಯಾಸತ್ಯತೆ ಏನೆಂದು ಈ ಪೈಲಟ್ ಮಹಾಶಯ ತುಸು ಪರಿಶೀಲಿಸಿದ್ದರೆ ಸಾಕಿತ್ತು. ವೇದ­ಕಾಲದ್ದೆಂದು ಹೇಳಲಾದ ‘ವೈಮಾನಿಕ ಶಾಸ್ತ್ರ’ ಗ್ರಂಥವನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಏರೊನಾಟಿಕಲ್ ಎಂಜಿನಿಯರ್‌ಗಳು ೧೯೭೪ರಲ್ಲೇ ವಿಶ್ಲೇಷಣೆ ಮಾಡಿದ್ದರು. ‘ಅದು ವೇದಕಾಲದ್ದೂ ಅಲ್ಲ, ಅದರಲ್ಲಿ ವಿವರಿಸಲಾದ ಸಂಗತಿಗಳಲ್ಲಿ ವೈಜ್ಞಾನಿಕ ತಥ್ಯವೂ ಇಲ್ಲ’ ಎಂಬ ತೀರ್ಮಾನಕ್ಕೆ ಬಂದಿದ್ದರು. ‘ಶಕುನ ವಿಮಾನ’­ದಲ್ಲಿ ಇಂಧನವಾಗಿ ಹುರುಳಿ ಕಾಳು, ಪಾದರಸ, ಪ್ರಾಣಕ್ಷಾರ (ಆಮೋನಿಯಂ ಕ್ಲೋರೈಡ್), ಅಭ್ರಕ ಮತ್ತು ಬೆಳ್ಳಿಯ ವಿವರಣೆ­ಗಳಿವೆ. ‘ಸುಂದರ ವಿಮಾನ’ದಲ್ಲಿ ಗೋಮೂತ್ರ, ಆನೆಯ ಮೂತ್ರಗಳಂಥ ದ್ರವ್ಯಗಳಿಂದ ವಿದ್ಯುತ್ ಉತ್ಪಾ­ದಿಸಿ ಗಂಟೆಗೆ ೧೨,೮೦೦ ಮೈಲು ವೇಗದಲ್ಲಿ ವಿಮಾನವನ್ನು ಹಾರಿಸಬಹುದೆಂಬ ವಿವರಣೆ­ಗಳಿವೆ. ಆನೆಕಲ್ಲಿನ ಸುಬ್ಬರಾಯ ಶಾಸ್ತ್ರಿ ಎಂಬವರು ಈ ಸಂಸ್ಕೃತ ಶ್ಲೋಕಗಳನ್ನು ಬರೆದು ಎಂಜಿನಿಯರಿಂಗ್ ಕಾಲೇಜಿನ ಎಲ್ಲಪ್ಪ ಎಂಬ ಚಿತ್ರಕಾರನೊಬ್ಬನ ಸಹಾಯದಿಂದ ಚಿತ್ರಗಳನ್ನು ಬರೆಸಿದ್ದರೆಂದೂ ಇಂಥ ವಿಮಾನಗಳನ್ನು ನಿರ್ಮಿಸಿದ್ದೇ ಆದರೆ ಅವು ನೆಲಬಿಟ್ಟು ಏಳಲಾರವೆಂದೂ ಹೇಳಿದ್ದರು.

ಭಾರತದ ಗತ ಇತಿಹಾಸದಲ್ಲಿ ನಾವು ಮರೆಯಬಾರದ ಅವೆಷ್ಟೊ ಸಂಗತಿಗಳಿವೆ ನಿಜ. ಮುಂಬೈ ಸಮ್ಮೇಳನದ ಎರಡನೆಯ ದಿನದ ಈ ನಾಲ್ಕು ತಾಸುಗಳ ಸಂಸ್ಕೃತ ಅಧಿವೇಶನದಲ್ಲಿ ಮಂಡಿಸಲಾದ ಇತರ ಪ್ರಬಂಧಗಳಲ್ಲಿ ಅಂಥ ಅನೇಕ ವಿಚಾರಗಳಿದ್ದವು. ೨೯೦೦ ವರ್ಷಗಳ ಹಿಂದೆ ರಚಿಸಲಾಗಿದ್ದೆಂದು ಹೇಳಲಾದ ಬೌಧಾ­ಯನ ಶುಲ್ಭ ಸೂತ್ರಗಳ ಮುಖ್ಯಾಂಶಗಳನ್ನು ಎತ್ತಿ ಹೇಳಲಾಯಿತು. ಪೈಥಾಗೋರಸ್‌ಗಿಂತ ಮುನ್ನೂರು ವರ್ಷಗಳ ಮೊದಲೇ ಲಂಬಕೋನ ತ್ರಿಭುಜದ ಜ್ಯಾಮಿತೀಯ ನಿಯಮವನ್ನು ವರ್ಣಿಸಲಾಗಿತ್ತೆಂದೂ ಪಾಯ್ ಮೌಲ್ಯವನ್ನೂ ನಿರ್ಧರಿಸಲಾಗಿತ್ತೆಂದೂ ಗಣಿತ, ಶಸ್ತ್ರಚಿಕಿತ್ಸೆ ಮತ್ತು ಖಗೋಲಶಾಸ್ತ್ರ ಗಳಲ್ಲಿ ಭಾರತೀಯ ವಿಜ್ಞಾನಿಗಳ ಕೊಡುಗೆ ಅನನ್ಯವಾಗಿತ್ತೆಂದೂ ಸಂಸ್ಕೃತ ವಿದ್ವಾಂಸರು ವಿವರಣೆ ನೀಡಿದರು.

ರಾಷ್ಟ್ರದ ಅಭಿಮಾನವನ್ನು ಎತ್ತರಕ್ಕೇರಿ­ಸುವಲ್ಲಿ ಇವೆಲ್ಲ ಮಹತ್ವದ ಅಂಶಗಳೇನೊ ಹೌದು. ಆದರೆ ಹಿಂದಿನದನ್ನೆಲ್ಲ ಹೊಗಳುವ ಉತ್ಸಾಹದಲ್ಲಿ ವೈಜ್ಞಾನಿಕ ನಿಖರತೆಗೆ ಸಿಗದಂಥ ಸಂಗತಿಗಳಿಗೆಲ್ಲ ಒತ್ತು ಕೊಡುತ್ತ ಹೋದರೆ ಇತಿಹಾಸವೇ ನಗೆಪಾಟಲಿಗೀಡಾಗುತ್ತದೆ. ಕಳೆದ ವರ್ಷ ಆಗಿನ್ನೂ ಪ್ರಧಾನಿಯಾಗಿಲ್ಲದ ನರೇಂದ್ರ ಮೋದಿಯವರು ಇಂಥದ್ದೇ ಪರಿಸ್ಥಿತಿಯನ್ನು ಸೃಷ್ಟಿ­ಸಿದ್ದರು. ಪುರಾತನ ಭಾರತೀಯರಿಗೆ ಪ್ಲಾಸ್ಟಿಕ್ ಸರ್ಜರಿ ಗೊತ್ತಿದ್ದರಿಂದಲೇ ಮನುಷ್ಯ ದೇಹಕ್ಕೆ ಆನೆಯ ತಲೆಯನ್ನು ಕೂರಿಸಿದ ಗಣೇಶನ ಪರಿ­ಕಲ್ಪನೆ ಸಾಧ್ಯವಾಯಿತು ಎಂದಿದ್ದರು. ಕೌರವರ ಮತ್ತು ಕರ್ಣನ ಸೃಷ್ಟಿಯಲ್ಲಿ ಸ್ಟೆಮ್ ಸೆಲ್ ಸರ್ಜರಿಯ ಜ್ಞಾನವಿತ್ತು ಎಂತಲೂ ಹೇಳಿದ್ದರು. ಮುಂಬೈಯ ಈ ೧೦೨ನೇ ಸೈನ್ಸ್ ಕಾಂಗ್ರೆಸ್‌ನ ಉದ್ಘಾಟನೆಯಲ್ಲಿ ಸದ್ಯ ಅವರು ಇಂಥವನ್ನೆಲ್ಲ ಮತ್ತೆ ಮಾತಾಡಲಿಲ್ಲ. ವಿಜ್ಞಾನ, -ತಂತ್ರಜ್ಞಾನ­ವನ್ನು ಬಡವರ ಹಾಗೂ ಹಿಂದುಳಿದವರ ಸಮಗ್ರ ಅಭಿವೃದ್ಧಿಗೆ ಹೇಗೆ ಬಳಸಿಕೊಳ್ಳಬೇಕು ಎಂದು (ಹಿಂದಿನ ಎಲ್ಲ ಪ್ರಧಾನಿಗಳು ಈ ಸಂದರ್ಭದಲ್ಲಿ ಹೇಳಿದ ಹಾಗೆ) ಕರೆ ಕೊಟ್ಟರು. ಆದರೆ ಕ್ಯಾಪ್ಟನ್ ಬೋಡಾಸ್ ಅವರ ಕಾಲ್ಪನಿಕ ವಿಮಾನಗಳು ಭಾರತದ ಪುರಾತನ ಚರಿತ್ರೆಯನ್ನು ನಗೆಪಾಟಲು ಮಾಡುವುದರ ಜತೆಜತೆಗೇ ಮೋದಿಯವರ ಕಳೆದ ವರ್ಷದ ಅಪ್ರಬುದ್ಧ ಭಾಷಣಗಳನ್ನೂ ಮತ್ತೆ ನೆನಪಿಸಿಕೊಟ್ಟವು.

ಸಂಸ್ಕೃತ ಭಾಷೆಯ ಪ್ರಾಬಲ್ಯ ಏನೆಂದರೆ ಇಂದಿನ ಯುವಕರೂ ಮೂರು ಸಾವಿರ ವರ್ಷಗಳ ಹಿಂದಿನ ಭಾಷೆಯಲ್ಲೇ ಶ್ಲೋಕಗಳನ್ನು ರಚಿಸಬಹುದು. ವಿಜ್ಞಾನದ ದೌರ್ಬಲ್ಯ ಏನೆಂದರೆ ಮೌಖಿಕ ಪರಂಪರೆಯಲ್ಲಿ ಬಂದ ಸಂಸ್ಕೃತ ಶ್ಲೋಕಗಳನ್ನು ಎಷ್ಟು ವರ್ಷಗಳ ಹಿಂದೆ ರಚಿಸಲಾಗಿತ್ತು ಎಂಬುದನ್ನು ನಿರ್ಧರಿಸಲು ಅದಕ್ಕೆ ಸಾಧ್ಯವಾಗುವುದಿಲ್ಲ. ನಮ್ಮೆಲ್ಲ ಜನ­ಸಾಮಾನ್ಯರ ದೌರ್ಬಲ್ಯ ಏನೆಂದರೆ ಸಂಸ್ಕೃತ ಸಾಹಿತ್ಯದಲ್ಲಿ ಸತ್ಯ ಯಾವುದು, ಕಲ್ಪಿತ ವಿಚಾರ­ಗಳು ಯಾವವು ಎಂಬುದನ್ನು ವಿಂಗಡಿಸದೆ ಒಬ್ಬರಿಂದ ಕೇಳಿದ್ದನ್ನು ಇನ್ನೊಬ್ಬರಿಗೆ ಹೇಳುತ್ತ ಹೋಗುವುದು. ಈಗಲೂ ಪುರಾತನ ಭಾರತದ ಶ್ರೇಷ್ಠತೆಯನ್ನು ಹೇಳುವಾಗ ಪುಷ್ಪಕ ವಿಮಾನ ಹಾರಿದ್ದು, ಸತ್ತಂತಿದ್ದವನು ಸಂಜೀವಿನಿ ಮೂಲಿ­ಕೆಯ ಪ್ರಯೋಗದಿಂದಾಗಿ ಎದ್ದು ಕೂತಿದ್ದು, ಖಂಡಾಂತರ ಕ್ಷಿಪಣಿಯಂತೆ ಬ್ರಹ್ಮಾಸ್ತ್ರ ಹೊರಟಿದ್ದು, ಮಡಕೆಗಳಲ್ಲಿ ಕೌರವರ ಪಿಂಡ ಬೆಳೆದಿದ್ದು, ದೊನ್ನೆಯಲ್ಲಿ ದ್ರೋಣ ಜನಿಸಿದ್ದು ಇವೇ ಮುಂತಾದವು ನೆನಪಿಗೆ ಬರುತ್ತವೆ ವಿನಾ ಜ್ಯಾಮಿತೀಯ ಸೂತ್ರಗಳಾಗಲೀ ಗ್ರಹನಕ್ಷತ್ರಗಳ ವಿಚಾರವಾಗಲೀ ನಾಲಗೆಗೆ ಬರುವುದಿಲ್ಲ.

ಇಷ್ಟಕ್ಕೂ ವೇದಕಾಲದ ಜ್ಞಾನಸಂಪತ್ತೆಲ್ಲ ಭಾರತೀಯರ ಸಂಪತ್ತು ಎನ್ನುವುದು ಎಷ್ಟು ಸರಿ? ರಾಮಾಯಣದ ಘಟನೆಗಳು ನಡೆದಿದ್ದು ಭಾರತ­ದಲ್ಲಲ್ಲ, ಅಫ್ಘಾನ್‌ನಲ್ಲಿ ಎಂದು ಬೆಂಗಳೂರಿನ ಖಗೋಲ ವಿಜ್ಞಾನಿಗಳು ಇಪ್ಪತ್ತು ವರ್ಷಗಳ ಹಿಂದೆಯೇ ಸಾಬೀತುಪಡಿಸಿದ್ದನ್ನು ಈ ಅಂಕಣ­ದಲ್ಲಿ ದಾಖಲಿಸಲಾಗಿತ್ತು. ಶ್ರೀರಾಮನ ಜನ್ಮ ಕುಂಡಲಿಯಲ್ಲಿ ಗುರುತಿಸಲಾದ ಗ್ರಹ ನಕ್ಷತ್ರಗಳನ್ನು ಅವರು ಅಧ್ಯಯನ ಮಾಡಿದ್ದರು. ಅಫ್ಘಾನ್‌ನಲ್ಲಿ ಕೂತಿದ್ದರೆ ಮಾತ್ರ ಅಂಥ ಜಾತಕವನ್ನು ಬರೆದಿರಲು ಸಾಧ್ಯವೆಂತಲೂ ಅಲ್ಲಿನ ‘ಹರಿ ರುದ್’ ನದಿಯೇ ಸರಯೂ ಆಗಿದ್ದೀತೆಂದೂ ತರ್ಕಿಸಿದ್ದರು. ವೇದಗಳ ಸೃಷ್ಟಿಯೂ ಅದೇ ಭೌಗೋಲಿಕ ಪ್ರದೇಶದಲ್ಲಿ, ಹೆಚ್ಚೆಂದರೆ ಈಗಿನ ಪಾಕಿಸ್ತಾನದ ಸಿಂಧೂ ಕೊಳ್ಳದಲ್ಲಿ ನಡೆದಿತ್ತೆಂಬುದನ್ನು ಗಮನಿಸಿದರೆ, ನಮ್ಮ ಬಹುಪಾಲು ಭಾರತಕ್ಕೆ ಅದು ತೀರಾ ದೂರದ ಸಂಬಂಧ ಎಂತಲೇ ಹೇಳಬೇಕು. ಚ್ಯವನಪ್ರಾಶದಂಥ ಆಯುರ್ವೇದ ಲೇಹ್ಯದಲ್ಲಿ ವರ್ಣಿಸಲಾದ ಬಹಳಷ್ಟು ಮೂಲಿಕೆಗಳು ನಮ್ಮಲ್ಲಿ ಸಿಗುವುದಿಲ್ಲ ಅಥವಾ ಅವನ್ನು ತಪ್ಪು ಹೆಸರುಗಳಲ್ಲಿ ಗುರುತಿಸಿದ್ದೇವೆಂದು ಸಸ್ಯವಿಜ್ಞಾನಿ­ಗಳು ಹೇಳುತ್ತಾರೆ. ಸಂಸ್ಕೃತ ಭಾಷೆಯ ಅಂಟುಗುಣ ಅದೆಷ್ಟು ಗಾಢವೆಂದರೆ ಅಸಲೀ ಲೇಹ್ಯದ ಬದಲು ಅದರ ಸದ್ಗುಣಗಳನ್ನು ಹಾಡಿ ಹೊಗಳುವ ಮಾತುಗಳಷ್ಟೇ ನಮ್ಮ ನಾಲಗೆಯ ಮೇಲೆ ಸರಿದಾಡುತ್ತವೆ. ಭಾಷೆಯ ಬಲದಿಂದಾಗಿಯೇ ಹಿಂದಿನವರು ಹೆಣೆದ ರೋಚಕ ಕಲ್ಪನಾ ಕತೆಗಳು ಇಂದಿಗೂ ಸತ್ಯವೆನಿಸುವಷ್ಟು ದಟ್ಟವಾಗಿ ಜನಮಾನಸದಲ್ಲಿ ಉಳಿದಿವೆ.

‘ಮೇಘದೂತ’ದಲ್ಲಿ ಕಾಳಿದಾಸನ ಆಕಾಶಯಾನದ ವರ್ಣನೆ ಅದೆಷ್ಟು ಮೋಹಕ­ವೆಂದರೆ ಈಗಲೂ ಗೂಗಲ್ ನಕ್ಷೆಯಲ್ಲಿ ಅಂದಿನ ಭೂಚಿತ್ರಣಗಳೆಲ್ಲ ಸತ್ಯವೆಂದೇ ಸಾಧಿಸಲು ಸಾಧ್ಯ­ವೆಂದು ವಾದಿಸುವವರಿದ್ದಾರೆ. ರೈಟ್ ಸಹೋ­ದ­ರರು ವಿಮಾನವನ್ನು ನಿರ್ಮಿಸುವು­ದಕ್ಕಿಂತ ೪೦೦ ವರ್ಷಗಳ ಮೊದಲೇ ಇಟಲಿಯ ಲಿಯೊ­ನಾರ್ಡೊ ಡಾ ವಿಂಚಿ ವಿಮಾನ ಮತ್ತು ಪ್ಯಾರಾ­ಶೂಟ್‌ಗಳ ರಚನೆ ಹೇಗಿರಬೇಕೆಂದು ವರ್ಣಿಸಿ­ದ್ದಾನೆ. ಸಂಪರ್ಕ ಉಪಗ್ರಹಗಳು ಅಸ್ತಿತ್ವಕ್ಕೆ ಬರುವ ೩೦ ವರ್ಷಗಳ ಮೊದಲೇ ಆರ್ಥರ್ ಕ್ಲಾರ್ಕ್ ತನ್ನ ಕತೆಗಳಲ್ಲಿ ಅವುಗಳನ್ನು ಸಾಕಾರ-­ಗೊಳಿಸಿದ್ದಾನೆ. ಭಾರದ್ವಾಜ ಮಹರ್ಷಿ­ಯದೆಂದು ಹೇಳಲಾದ ವಿಮಾನಗಳ ಕಲ್ಪನೆ ಇನ್ನೂ ರೋಚಕವಾಗಿದೆ: ಹೊಗೆಯ ಮೂಲಕ ಮಾಯಾ ಆವರಣವನ್ನು ನಿರ್ಮಿಸಿ ಇಡೀ ವಿಮಾನವನ್ನೇ ಮರೆಮಾಚುವುದು ಹೇಗೆಂಬ ವಿವರಣೆ ಅದರಲ್ಲಿ ಇದೆಯೆಂದು ಹೇಳಿ ೧೯೭೩ರಲ್ಲಿ ಜಿ.ಆರ್. ಜೊಸಿಯರ್ ಎಂಬಾತ ಪ್ರಕಟಿಸಿದ ಇಂಗ್ಲಿಷ್ ಗ್ರಂಥವೊಂದು ಅಂತರಜಾಲದಲ್ಲಿ ಲಭ್ಯವಿದೆ. ‘ಪ್ರಕಾಂಡ ಪಂಡಿತ ಸುಬ್ಬರಾಯ ಶಾಸ್ತ್ರಿಯವರಿಗೆ ಇಂದ್ರಿಯ ಗೋಚರವಲ್ಲದ್ದನ್ನೂ ಕಾಣುವ ಶಕ್ತಿ ಇತ್ತು. ಭಾರದ್ವಾಜರ ವೈಮಾನಿಕ ಶಾಸ್ತ್ರವನ್ನು ಅವರು ೧.೮.೧೯೧೮ರಿಂದ ೨೩.೮.೧೯೨೩ರ ವರೆಗೆ ಮೌಖಿ­ಕವಾಗಿ ಹೇಳಿದ್ದನ್ನೆಲ್ಲ ೨೩ ನೋಟ್‌­ಬುಕ್‌ಗಳಲ್ಲಿ ವೆಂಕಟಾಚಲ ಶಾಸ್ತ್ರಿ ಎಂಬವರು ಬರೆದರು’ ಎಂದು ಅದರಲ್ಲಿ ಜೊಸಿಯರ್ ವಿವರಿಸಿದ್ದಾನೆ.

ಹಾಗೆ ದಿವ್ಯದೃಷ್ಟಿಯಲ್ಲಿ ಕಂಡಿದ್ದನ್ನು ವಿಜ್ಞಾನ ಎನ್ನಲಾದೀತೆ? ‘ಅಂಥ ಢೋಂಗಿ ಪ್ರಬಂಧಗಳ ಮಂಡನೆಗೆ ಅವಕಾಶ ಕೊಡಬೇಡಿ, ಭಾರತೀಯ ವಿಜ್ಞಾನಕ್ಕೆ, ಮುಂದಿನ ಪೀಳಿಗೆಗೆ ದ್ರೋಹವಾ­ಗುತ್ತದೆ’ ಎಂದು ಅಮೆರಿಕದ ನಾಸಾದಲ್ಲಿರುವ ಭಾರತೀಯ ಮೂಲದ ವಿಜ್ಞಾನಿ ಡಾ. ರಾಮಪ್ರಸಾದ್ ಗಾಂಧೀರಾಮನ್ ಎಂಬವರು ಸಮ್ಮೇಳನಕ್ಕೆ ಮೊದಲೇ ಆನ್‌ಲೈನ್ ಮನವಿ ಸಲ್ಲಿಸಿದ್ದರು. ಯಾರೂ ಕ್ಯಾರೇ ಅನ್ನಲಿಲ್ಲ. ‘ನಮ್ಮ ದೇಶದ ವಿಜ್ಞಾನ ಮತ್ತು ವಿಜ್ಞಾನಿಗಳ ಪ್ರತಿಷ್ಠೆಯನ್ನು ನಾವು ಮತ್ತೆ ಮರುಸ್ಥಾಪನೆ ಮಾಡ­ಬೇಕಿದೆ’ ಎಂದು ಪ್ರಧಾನಿ ಮೋದಿ­ಯವರು ಮುಂಬೈ ಸಮ್ಮೇಳನದ ಆರಂಭದಲ್ಲಿ ಹೇಳಿದ್ದರು. ಸಮ್ಮೇಳನ ಮುಗಿದ ಮೇಲೆ ಹೇಳಬೇಕಾದ ಮಾತು ಅದಾಗಿತ್ತು. 

15 January 2015

“ಭಾರತದಲ್ಲಿ 7 ಸಾವಿರ ವರ್ಷಗಳ ಹಿಂದೆಯೇ ವಿಮಾನಗಳನ್ನು ಆವಿಷ್ಕರಿಸಲಾಗಿತ್ತು. ಅವು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಮಾತ್ರವಲ್ಲದೆ ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೂ ಚಲಿಸುತ್ತಿದ್ದವು”
-ಕ್ಯಾಪ್ಟನ್ ಆನಂದ್ ಜೆ ಬೋದಸ್

ಮುಂಬೈ ವಿಶ್ವವಿದ್ಯಾಲಯದಲ್ಲಿ ಜನವರಿ 3-7ರವರೆಗೆ ನಡೆದ ಇಂಡಿಯನ್ ಸೈನ್ಸ್ ಕಾಂಗ್ರೆಸ್ನಲ್ಲಿ ಕ್ಯಾಪ್ಟನ್ ಆನಂದ್ ಬೋದಸ್ ಚಿಂತಕರೊಬ್ಬರು ನೀಡಿದ ಈ ಹೇಳಿಕೆ ಭಾರತದ ವಿಜ್ಞಾನಿಗಳು , ಇತಿಹಾಸಕಾರರು ಹಾಗೂ ಇತರೆ ಕ್ಷೇತ್ರದ ಚಿಂತಕರ ನಡುವೆ ಭಾರೀ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದೆ. ಕಾವೇರಿದ ವಾಗ್ವಾದಕ್ಕೂ ಕಾರಣವಾಗಿದೆ. ಇದರೊಂದಿಗೆ ಹಲವು ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ.

ಪ್ರೊ.ಎಸ್.ಎನ್.ಬಾಲಗಂಗಾಧರ

ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಭಾರತೀಯ ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದ ಮಗುವೊಂದಕ್ಕೆ ‘ಒಂದಲ್ಲಾ ಒಂದೂರಿನಲ್ಲಿ…’ ಎಂಬ ಸಾಲು ಚಿರಪರಿಚಿತ. ಮಕ್ಕಳು ಸಣ್ಣವರಿದ್ದಾಗ ಅವರ ತಾಯಂದಿರೋ, ಅಜ್ಜಿಯರೋ ಅವರಿಗೆ ಕಥೆಯನ್ನು ಹೇಳಿ ಮಲಗಿಸುವ ಪದ್ಧತಿಯಿದೆ. ಅಜ್ಜಿಯರಿರುವ ಮನೆಯಲ್ಲಿ ಅವರಿಗೇ ಹೆಚ್ಚು ಪುರುಸೊತ್ತು ಇರುವುದರಿಂದ ಅವರೇ ಈ ಕೆಲಸವನ್ನು ನಿರ್ವಹಿಸುತ್ತಾರೆ. ಹಾಗಾಗಿ ಅವನ್ನು ‘ಅಜ್ಜಿ ಕಥೆ’ ಎಂಬುದಾಗಿಯೂ ಅನ್ವರ್ಥನಾಮದಿಂದ ಗುರುತಿಸುತ್ತಾರೆ. ಈ ಕಥೆಗಳಲ್ಲೂ ಬೇರೆ ಬೇರೆ ವಯಸ್ಕರಿಗೆ ತಕ್ಕಂತೇ ಗ್ರೇಡುಗಳಿವೆ. ಒಂದು ಮಗು ಮಾತು ಕಲಿತಾಕ್ಷಣ ಪ್ರಾರಂಭಿಸುವ ಕಾಕಣ್ಣ-ಗುಬ್ಬಣ್ಣ ಮುಂತಾದ ಪ್ರಾಣಿಗಳ ಸರಳ ಕಥೆಗಳಿವೆ. ಪ್ರಾಣಿ ಪಕ್ಷಿಗಳ ಕುರಿತು ಅಂಥ ಮಕ್ಕಳು ತೋರಿಸುವ ಸ್ವಾಭಾವಿಕ ಕುತೂಹಲವನ್ನು ಆಧರಿಸಿ ಈ ಕಥೆಗಳಿರುತ್ತವೆ. ಮಗು ದೊಡ್ಡದಾದಂತೆಲ್ಲ ಕ್ರಮೇಣ ಮಕ್ಕಳ ನಡಾವಳಿಯಿಂದ ಹಿಡಿದು ದೊಡ್ಡವರ ನಡಾವಳಿಗಳ ಹಾಗೂ ಘಟನೆಗಳನ್ನೊಳಗೊಂಡ ಕಥೆಗಳವರೆಗೂ ಅದರ ಪ್ರಜ್ಞೆಯ ಭಾಗಗಳಾಗುತ್ತವೆ. ಆಗಲೇ ರಾಮಾಯಣ, ಮಹಾಭಾರತ, ಪುರಾಣ ಕಥೆಗಳು ಮಗುವಿಗೆ ಪರಿಚಯವಾಗುತ್ತವೆ. ಅಂಥ ಕುಟುಂಬವೊಂದರಲ್ಲಿ ಒಂದು ಮಗುವು ಹೊಸ ಕಥೆಯನ್ನು ಹೇಳಬೇಕೆಂದು ಹಿರಿಯರನ್ನು ಪೀಡಿಸುವುದೂ, ರಚ್ಚೆ ಹಿಡಿಯುವುದೂ, ಕಥೆಗಳಿಗೆ ಸಂಬಂಧಿಸಿದಂತೇ ಪ್ರಶ್ನೆಗಳನ್ನು ಹಾಕುವುದೂ, ಹಾಗೂ ತಾನೇ ಹೊಸ ಕಥೆಗಳನ್ನು ಕಟ್ಟಿ ಹೇಳುವುದೂ ಸಾಮಾನ್ಯ. ಈ ರೀತಿಯಾಗಿ ಒಂದು ಮಗುವು ತನ್ನ ಕುಟುಂಬದ ಸದಸ್ಯರಂತೇ ಅವರು ಹೇಳುವ ಕಥೆಗಳ ಪಾತ್ರಗಳ ಜೊತೆಗೂ ಒಡನಾಡುತ್ತ ಬೆಳೆಯುತ್ತದೆ.

ಇದರಲ್ಲೇನು ವಿಶೇಷವಿದೆ? ಎಂದು ನೀವೆನ್ನಬಹುದು. ಅಥವಾ ನನ್ನದು ಕಳೆದುಹೋದ ಜೀವನಕ್ರಮವೊಂದರ ಕುರಿತಾದ ಹಳವಂಡ ಎಂಬುದಾಗಿ ಕೂಡ ನಿಮಗನಿಸಬಹುದು. ‘ಕಥೆಗೆ ಕಾಲಿಲ್ಲ’ ಎಂಬಂತೇ ಏನೋ ಕಾಲಹರಣಕ್ಕೆ ಅಜ್ಜಿ ಮೊಮ್ಮಕ್ಕಳು ಪ್ರಯತ್ನಿಸಿದ್ದಾರೆ, ಅದನ್ನೇನು ದೊಡ್ಡದಾಗಿ ಹೇಳುವುದು? ಎನ್ನಲೂಬಹುದು. ನಿಮ್ಮ ಈ ಯಾವ ಅನಿಸಿಕೆಗಳೂ ಸುಳ್ಳಲ್ಲ. ನಮಗೆ ಇದೊಂದು ತೀರಾ ಸಾಮಾನ್ಯ ವಿಷಯ. ಹಾಗೂ ನಮ್ಮಲ್ಲಿ ಕಥಾ ಕಾಲಕ್ಷೇಪ ಎಂಬುದಾಗಿಯೇ ಇದನ್ನು ಗುರುತಿಸುತ್ತಾರೆ. ಯಾರೂ ಇದನ್ನು ನೀತಿಬೋಧನೆ, ಮಗುವಿಗೆ ಪ್ರಪಂಚದ ಕುರಿತಾಗಿ ಕಲಿಸುವುದು ಎಂದು ಕರೆಯುವುದು ಹೋಗಲಿ, ಹಾಗೆ ಅಂದುಕೊಳ್ಳುವುದೂ ಇಲ್ಲ. ಹಾಗಂತ ಈ ಕಥಾಲೋಕವೊಂದು ಕೇವಲ ಕನಸಿನಂಥ ಕಾಲ್ಪನಿಕ ಲೋಕವನ್ನು ಸೃಷ್ಟಿಸಲಿಕ್ಕಾಗಿ ಇರುವಂಥದ್ದು ಎಂಬುದಾಗಿ ಭಾವಿಸಿದರೆ ನಾವು ನಮ್ಮ ಸಂಸ್ಕೃತಿಯನ್ನು ಅರ್ಥೈಸುವಲ್ಲಿ ನಿರ್ಣಾಯಕವಾಗಿ ತಪ್ಪು ಮಾಡುತ್ತೇವೆ. ಹಾಗಾಗಿ ನನ್ನದು ಹಳವಂಡವಲ್ಲ. ಇದು ಕೇವಲ ಮಕ್ಕಳಿಗೆ ಮಾತ್ರವಲ್ಲ, ಬೆಳೆದು ದೊಡ್ಡವರಾಗಿ ಸಾಯುವವರೆಗೂ ನಾವು ಭಾರತೀಯರು ಕಥಾಲೋಕದಲ್ಲೇ ಬದುಕುತ್ತೇವೆ, ಕಥೆ ಕೇಳುತ್ತಲೇ ಸಾಯುತ್ತೇವೆ. ಪ್ರಪಂಚದ ಯಾವ ಸಂಸ್ಕೃತಿಯೂ ಸೃಷ್ಟಿಸದಂತಹ ಚಿತ್ರ ವಿಚಿತ್ರ, ಅದ್ಭುತ ರಮ್ಯ ಕಥೆಗಳನ್ನು ಸೃಷ್ಟಿಸಿದ್ದೇವೆ. ನಮ್ಮ ಪಂಚತಂತ್ರ, ಜಾತಕ ಕಥೆಗಳು, ಮಹಾಭಾರತ, ರಾಮಾಯಣ, ಪುರಾಣಗಳು, ಬೃಹತ್ಕಥಾಮಂಜರಿ, ಇಂಥವೇ ಅಸಂಖ್ಯ ಕಥೆಗಳ ಸಂಗ್ರಹಗಳು ಭಾರತದ ಎಲ್ಲಾ ಭಾಷೆಯಲ್ಲೂ, ಸಂಪ್ರದಾಯಗಳಲ್ಲೂ ವಿಫುಲವಾಗಿ ಸೃಷ್ಟಿಯಾಗಿವೆ.

ಇದೇ ನನಗೆ ವಿಶೇಷವಾಗಿ ಕಾಣಿಸುತ್ತಿದೆ. ದೊಡ್ಡವರಿಗೂ ಏಕೆ ಕಥೆಯ ಹುಚ್ಚು? ಪಾಶ್ಚಾತ್ಯರಿಗೆ ಇದು ವಿಲಕ್ಷಣವಾಗಿ ಕಂಡಿದೆ. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಮಕ್ಕಳ ಕಥೆಗಳೆಂದರೆ ಮನೋರಂಜನೆಯ ವಸ್ತುಗಳು. ಒಬ್ಬನು ಪ್ರೌಢನಾಗಿ ಬೆಳೆದಂತೆಲ್ಲ ಇಂಥ ಕಥೆಗಳನ್ನು ಸುಳ್ಳು ಹಾಗೂ ಅವಾಸ್ತವಿಕವೆಂಬುದಾಗಿ ಗುರುತಿಸಲು ಕಲಿಯಬೇಕು. ಹಾಗೆ ಗುರುತಿಸುವುದೇ ಅವನ ಪ್ರೌಢತೆಯ ಲಕ್ಷಣವಾಗುತ್ತದೆ. ಸತ್ಯಶೋಧನೆಗೆ ಈ ಪ್ರೌಢತೆಯು ಅತ್ಯಗತ್ಯ. ಹಾಗಾಗಿ ಪಾಶ್ಚಾತ್ಯರು ಈ ವಿಚಿತ್ರವನ್ನು ಗಮನಿಸಿದಾಗ ಅವರಿಗೆ ಸಾಧ್ಯವಾದ ಒಂದು ವಿವರಣೆಯೆಂದರೆ ಭಾರತೀಯರು ಇನ್ನೂ ಮನುಕುಲದ ಬಾಲ್ಯಾವಸ್ಥೆಯಲ್ಲೇ ಇದ್ದಾರೆ ಎಂಬುದು. ಇವರ ಬುದ್ಧಿಯು ಪ್ರೌಢಾವಸ್ಥೆಯನ್ನು ತಲುಪಿದ್ದೇ ಹೌದಾಗಿದ್ದರೆ ಅವರು ಹೀಗೇಕೆ ಮಕ್ಕಳಂತೇ ಕಾಲಿಲ್ಲದ ಕಥೆಗಳನ್ನು ಹೇಳಿಕೊಂಡು ತಿರುಗಬೇಕು? ಅದೂ ಅಲ್ಲದೇ ಪಾಶ್ಚಾತ್ಯರು ನಮ್ಮ ಸಂಸ್ಕೃತಿಯನ್ನು ನೋಡಿ, ಕೇಳಿ, ಓದಿ ತಿಳಿದುಕೊಂಡಿದ್ದೆಂದರೆ ಇವರಿಗೆ ಈ ಪ್ರಪಂಚದ ಕುರಿತು ಹೇಳಲಿಕ್ಕೆ ಕಥೆಗಳನ್ನು ಬಿಟ್ಟರೆ ಯಾವುದೇ ವೈಜ್ಞಾನಿಕ ವಿವರಣೆಗಳಿಲ್ಲ ಎಂಬುದು. ಹಾಗಾಗಿ ಭಾರತೀಯರ ಮನಸ್ಸು ಕಥೆಗಳ ಮಾಯಾಲೋಕದಿಂದ ಇನ್ನೂ ಹೊರಗೇ ಬಂದಿಲ್ಲ ಎಂಬುದಾಗಿ ಅವರು ತಿಳಿದರು. ಹಾಗಾಗಿ ಒಂದೋ ಪಾಶ್ಚಾತ್ಯರು ನಿರ್ಣಯಿಸಿದಂತೇ ಭಾರತೀಯರ ಬಾಲಿಶತನವನ್ನು ಈ ಕಥಾಲೋಕವು ತೋರಿಸುತ್ತದೆ. ಒಂದೊಮ್ಮೆ ಆ ನಿರ್ಣಯವು ಭಾರತೀಯರಾಗಿ ನಿಮಗೆ ಸರಿ ಕಾಣಿಸದಿದ್ದರೆ ಏಕೆ ಅದು ಸರಿಯಲ್ಲ ಎಂಬುದನ್ನು ವಿವರಿಸಬೇಕು.

ನಮ್ಮಲ್ಲಿ ಯಾವುದಾದರೂ ಆಚರಣೆಗೆ ಕಾರಣವನ್ನು ಕೇಳಿದಾಗ ನಮ್ಮ ಹಿರಿಯರು ಒಂದೋ ಅಥವಾ ಬಹಳಷ್ಟೋ ಕಥೆಗಳನ್ನು ಹೇಳಿಬಿಡುತ್ತಾರೆ. ಪಾಶ್ಚಾತ್ಯರು ಭಾರತೀಯ ಸಂಸ್ಕೃತಿಯ ಕುರಿತು ಕೇಳಿದ ಪ್ರಶ್ನೆಗಳಿಗೂ ಅವರಿಂದ ಇಂಥ ಉತ್ತರಗಳೇ ಬಂದಿದ್ದವು. ಅಂದರೆ ಊಹಿಸಿ, ಪ್ರಶ್ನೆಯು ಆಚರಣೆಗಳ ಕಾರಣ ಹಾಗೂ ಉದ್ದೇಶದ ಕುರಿತಾಗಿತ್ತು. ಅದಕ್ಕೆ ಸಿಕ್ಕಿದ ಉತ್ತರ ಕಥೆಯಾಗಿತ್ತು. ಆಗ ಬರಬಹುದಾದ ಒಂದು ತೀರ್ಮಾನವೆಂದರೆ ಈ ಜನರು ಕಥೆಗಳಲ್ಲಿ ನಿರ್ದೇಶಿಸಿದ ಕ್ರಿಯೆಗಳನ್ನು ನಂಬಿ ಅದರಂತೇ ಆಚರಿಸುತ್ತಾರೆ ಎಂಬುದು. ಪಾಶ್ಚಾತ್ಯರು ಹಾಗೇ ತೀರ್ಮಾನಿಸಿದರು ಹಾಗೂ ಅಂಥ ತೀರ್ಮಾನಗಳಿಂದ ನಮ್ಮ ಸಂಸ್ಕೃತಿಯ ಕುರಿತು ಯಾವ ಚಿತ್ರಣವು ಹೊಮ್ಮಿತು ಎಂಬುದನ್ನು ಈಗಾಗಲೇ ನೋಡಿದ್ದೇವೆ. ಸೈದ್ಧಾಂತಿಕ ಕಲಿಕೆಗೆ ಒತ್ತು ಕೊಡುವ ಸಂಸ್ಕೃತಿಯೊಂದು ಕ್ರಿಯಾ ಜ್ಞಾನಕ್ಕೆ ಒತ್ತುಕೊಡುವ ಸಂಸ್ಕೃತಿಯ ಕಥೆಗಳನ್ನು ತನ್ನದೇ ದೃಷ್ಟಿಕೋನಕ್ಕೆ ಸಮೀಕರಿಸಿದಾಗ ಹುಟ್ಟಿದ ಅಪಾರ್ಥ ಇದಾಗಿದೆ. ಅಂದರೆ ಇವರು ಈ ಕಥೆಗಳನ್ನು ಸತ್ಯ ಎಂಬುದಾಗಿ ನಂಬಿ ತಮ್ಮ ಕ್ರಿಯೆಯನ್ನು ರೂಢಿಸಿಕೊಂಡಿದ್ದಾರೆ ಎಂಬುದಾಗಿ ಪಾಶ್ಚಾತ್ಯರು ತೀರ್ಮಾನಿಸಿದರು.

ಕಥೆಗಳಿಗೂ ಅವುಗಳನ್ನು ಹೇಳುವ ಜನರ ಆಚರಣೆಗೂ ಈ ಮೇಲಿನ ರೀತಿಯ ಸಂಬಂಧ ಇರಲಿಕ್ಕೆ ಸಾಧ್ಯವಿಲ್ಲ. ಕಥೆಗಳನ್ನು ಹೇಳುವ ಜನರು ಅವನ್ನು ಸತ್ಯ ಹೇಳಿಕೆಗಳು ಎಂಬುದಾಗಿ ನಂಬಿಲ್ಲ. ಯಾರಾದರೂ ಭಾರತೀಯರು ಪಂಚತಂತ್ರ ಕಥೆಗಳಲ್ಲಿ ಬರುವ ನರಿ, ಹುಲಿ, ಏಡಿ, ಬಕಪಕ್ಷಿ, ಇವುಗಳೆಲ್ಲವೂ ಮನುಷ್ಯರಂತೇ ಮಾತನಾಡುತ್ತಿದ್ದವು ಅಥವಾ ಯೋಚಿಸುತ್ತಿದ್ದವು ಎಂಬುದಾಗಿ ಎಂದಾದರೂ ನಂಬಿದ್ದರೆ? ಈ ಕಥೆಗಳು ಸತ್ಯವೂ ಅಲ್ಲ ಸುಳ್ಳೂ ಅಲ್ಲದ ಸಂಗತಿಗಳನ್ನು ತಿಳಿಸುತ್ತವೆ. ಅಂದರೆ ಅವು ಪ್ರಪಂಚದಲ್ಲಿ ಏನು ನಡೆಯಿತು ಎಂಬುದರ ಕುರಿತ ಸತ್ಯ ಚಿತ್ರಣಗಳಲ್ಲ. ಅಂಥ ಚಿತ್ರಣಗಳನ್ನು ನೀಡುವುದು ಅವುಗಳ ಉದ್ದೇಶವೇ ಅಲ್ಲ. ಅವು ಕೇವಲ ಕ್ರಿಯಾ ವಿನ್ಯಾಸಗಳು ಅಷ್ಟೆ.

ನಮ್ಮ ಆಚರಣೆಗಳಿಗೆ ಕಥೆಗಳು ಕಾರಣಗಳಾಗಿ ಬರುವುದಿಲ್ಲ. ಉದಾಹರಣೆಗೆ, ಮಳೆ ಬರದಿದ್ದರೆ ಕಪ್ಪೆಯ ಮದುವೆಯನ್ನು ಮಾಡುವ ಪದ್ಧತಿ ನಮ್ಮಲ್ಲಿದೆ. ಕಪ್ಪೆಯ ಮದುವೆಯನ್ನು ಮಾಡಿದರೆ ಮಳೆ ಬರುತ್ತದೆ ಎಂಬುದಾಗಿ ಅವರೇಕೆ ನಂಬಿದ್ದಾರೆ ಎಂಬುದಾಗಿ ಅವರನ್ನು ಕೇಳುತ್ತೀರಿ ಅಂತಿಟ್ಟುಕೊಳ್ಳಿ. ಅವರೊಂದು ಕಥೆ ಹೇಳುತ್ತಾರೆ. ಅದರ ಪ್ರಕಾರ ಇಂತಿಂಥ ಸಂದರ್ಭದಲ್ಲಿ ಇಂಥ ಘಟನೆ ನಡೆದಿತ್ತು. ನಮ್ಮ ಆಚರಣೆಗಳ ಹಿಂದೆ ಇಂಥವೇ ಅಸಂಖ್ಯಾತ ಕಥೆಗಳಿರುತ್ತವೆ. ಈ ಕಥೆಗಳನ್ನು ಸತ್ಯವೆಂದು ನಂಬಿ ಅವರು ಆಚರಣೆ ಮಾಡುತ್ತಾರೆ ಅಂದುಕೊಂಡರೆ ಅದು ತಪ್ಪಾಗುತ್ತದೆ. ಹಾಗಿದ್ದ ಪಕ್ಷದಲ್ಲಿ ಒಂದೊಮ್ಮೆ ಕಪ್ಪೆಯ ಮದುವೆಯನ್ನು ಮಾಡಿದರೂ ಮಳೆ ಬರಲಿಲ್ಲ ಅಂತಾದರೆ ಆ ಕಥೆ ಸುಳ್ಳು ಎಂಬುದಾಗಿ ಅವರು ತಿಳಿಯಬೇಕು ಹಾಗೂ ಆ ಆಚರಣೆಯನ್ನು ಬಿಟ್ಟುಬಿಡಬೇಕು. ಈ ಕಥೆ ಏನು ಮಾಡುತ್ತದೆಯೆಂದರೆ, ಒಂದೊಮ್ಮೆ ಮಳೆ ಬಂದರೆ ಜನರು ‘ನೋಡಿ ಕಥೆಯಲ್ಲಿ ಹೇಳಿದಂತೇ ಆಯಿತು’ ಎಂಬುದಾಗಿ ಹೇಳುತ್ತಾರೆ. ಮಳೆ ಬರಲಿಲ್ಲ ಅಂದರೆ ‘ನಮ್ಮ ಆಚರಣೆಯಲ್ಲೇ ಏನೋ ಎಡವಟ್ಟಾಗಿದೆ’ ಅಂದುಕೊಳ್ಳುತ್ತಾರೆ. ಅಂದರೆ ಜನರಿಗೆ ತಮ್ಮ ಆಚರಣೆಗಳನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಕಥೆಗಳು ಒಂದು ವಿನ್ಯಾಸವನ್ನು ರಚಿಸಿಕೊಡುತ್ತಿವೆ ಅಷ್ಟೇ.

ಈ ವಿನ್ಯಾಸ ಏಕೆ ಬೇಕೆಂದರೆ ಈ ವಿಶ್ವದಲ್ಲಿ ಎಲ್ಲವೂ ಸರಿಯಾಗಿದೆ ಎಂಬ ಭಾವನೆಯನ್ನು ಅದು ನೀಡುತ್ತಿರುತ್ತದೆ. ಅಂದರೆ ಮೂಲತಃ ಯಾವುದೋ ಉದ್ದೇಶವನ್ನು, ವ್ಯವಸ್ಥೆಯನ್ನು ಯೋಜಿಸುವುದರಿಂದ ಅಥವಾ ಸತ್ಯದ ಕುರಿತ ಸಿದ್ಧಾಂತವನ್ನು ಕಟ್ಟುವುದರಿಂದ ತಮ್ಮ ಸಂಸ್ಕೃತಿ ಉಳಿದು ಬಂದಿದೆ ಎಂಬುದಾಗಿ ಅಂಥ ಜನರು ಭಾವಿಸುವುದಿಲ್ಲ. ಬದಲಾಗಿ ತಮ್ಮ ಆಚರಣೆಗಳೇ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತವೆ ಎಂಬ ಅರಿವು ಇಲ್ಲಿ ಮುಖ್ಯವಾಗುತ್ತದೆ. ಇಂಥ ಆಚರಣೆಗಳಿಗೆ ಸರಿಯಾದ ವಿನ್ಯಾಸವನ್ನು ರಚಿಸಿಕೊಡುವ ಮೂಲಕ ಎಲ್ಲವೂ ಸರಿಯಾಗಿದೆ ಎಂಬ ಭಾವನೆಯನ್ನು ಕಥೆಗಳು ಹುಟ್ಟಿಸುತ್ತವೆ. ಒಂದೊಮ್ಮೆ ಆ ಕಥೆಯನ್ನು ಇಟ್ಟುಕೊಂಡರೆ ಏನೋ ತಪ್ಪಾಗಿದೆ ಎನ್ನಿಸುವಂತಿದ್ದರೆ ಆ ಕಥೆಯು ಅಲ್ಲಿ ಮಾದರಿಯೇ ಆಗುವುದಿಲ್ಲ. ಅಂದರೆ ಆಚರಣೆಯನ್ನು ವಿನ್ಯಾಸಗೊಳಿಸಲಿಕ್ಕೆ ಕಥೆಗಳು ಬರುತ್ತವೆಯೇ ವಿನಃ ಆಚರಣೆಗಳಿಗೆ ಕಾರಣಗಳಾಗಿ ಅವು ಬರುವುದಿಲ್ಲ.

ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ಕಥೆಗಳ ಪ್ರಪಂಚಕ್ಕೆ ಬಂದರೆ ಕಾಣುವುದೇನು? ಅದೊಂದು ಜಗತ್ತು. ಅದರಲ್ಲಿ ಕ್ರಿಯೆಗಳ ವಿನ್ಯಾಸದ ಒಂದು ಮಾದರಿ ಇರುತ್ತದೆ. ಅಂದರೆ ಕೆಲವು ಘಟನೆಗಳು ಒಂದರ ಜೊತೆಗೊಂದು ಜೋಡಣೆಯಾಗಿ ಒಂದು ಕ್ರಿಯಾ ವಿನ್ಯಾಸವನ್ನು ರಚಿಸುತ್ತವೆ. ಒಂದೊಂದು ಕಥೆಯೂ ತನ್ನದೇ ವಿನ್ಯಾಸಗಳನ್ನು ಸೃಷ್ಟಿಸಿ ಅದರಷ್ಟಕ್ಕೇ ಜಗತ್ತಿನ ಒಂದೊಂದು ಮಾದರಿಯಾಗಿರುತ್ತದೆ. ಅಂದರೆ ಕಥೆಯ ಜಗತ್ತೆಂಬುದು ನಿರ್ದಿಷ್ಟ ಕ್ರಮದಲ್ಲಿ ಜರುಗುವ ಒಂದು ಕ್ರಿಯಾಸರಣಿಯನ್ನು ಒಳಗೊಂಡಿರುತ್ತದೆ. ಈ ಕಥಾಜಗತ್ತು ವಿಶ್ವಮಾದರಿಯೊಂದನ್ನು ಆ ಸಂಸ್ಕೃತಿಯ ಜನರಿಗೆ ನೀಡುತ್ತದೆ. ಅದರ ಮಹತ್ವವೇನೆಂಬುದನ್ನು ಅರ್ಥೈಸಲು ಮೊದಲು ನಾವು ವಿಶ್ವಮಾದರಿ ಎಂದರೇನೆಂಬುದನ್ನು ಅರ್ಥ ಮಾಡಿಕೊಳ್ಳುವ ಜರೂರಿದೆ.

ಈ ಜಗತ್ತಿನಲ್ಲಿ ಬದುಕುತ್ತಿರುವ ಮನುಷ್ಯರು ಪ್ರಪಂಚದಲ್ಲಿ ವ್ಯವಹರಿಸುವಾಗ ಈ ಪ್ರಪಂಚದ ಕುರಿತು ಒಂದಿಲ್ಲೊಂದು ಕಲ್ಪನೆಗಳನ್ನು ಇಟ್ಟುಕೊಂಡಿರುತ್ತಾರೆ. ಈ ಕಲ್ಪನೆಗಳು ಹೇಗೆ ಸೃಷ್ಟಿಯಾಗುತ್ತವೆ? ಪ್ರಪಂಚದ ಜೊತೆಗಿನ ನಮ್ಮ ಒಡನಾಟದ ನೆನಪುಗಳಿಂದ ಎಂಬುದು ತಕ್ಷಣದ ಹೊಳೆಯುವ ಉತ್ತರ. ಆದರೆ ದಿನನಿತ್ಯ ಈ ಪ್ರಪಂಚವನ್ನು ನೋಡುವ ಮಾತ್ರದಿಂದಲೇ ಈ ಪ್ರಪಂಚವು ಹೀಗಿದೆ ಎಂಬುದು ನೆನಪಿನಲ್ಲುಳಿದು ಬಿಡುವುದಿಲ್ಲ. ಆ ನೆನಪನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಅಂದರೆ ಈ ಪ್ರಪಂಚದ ಕುರಿತು ಒಂದು ಕಲ್ಪನೆಯನ್ನು ಮೊದಲು ಕಟ್ಟಿಕೊಳ್ಳಬೇಕಾಗುತ್ತದೆ. ತದನಂತರ ಆ ಕಲ್ಪನೆಯ ಮೂಲಕ ಈ ಪ್ರಪಂಚವನ್ನು ನೋಡಬೇಕಾಗುತ್ತದೆ. ಈ ಕ್ರಿಯೆಯೇ ನಮ್ಮ ಅನುಭವವನ್ನು ರಚಿಸುತ್ತದೆ. ಅಂದರೆ ಜಗತ್ತಿನಲ್ಲಿ ವಿಶ್ವಕಲ್ಪನೆಯು ಕಟ್ಟಿಕೊಟ್ಟ ಒಂದು ರಚನೆಯ ಮೂಲಕ ಬದುಕುವುದು. ವಿಶ್ವಕಲ್ಪನೆಗಳಿಲ್ಲದಿದ್ದಲ್ಲಿ ಅನುಭವವೂ ಸಾಧ್ಯವಿಲ್ಲ. ನೆನಪು ಯಾವುದರದ್ದು? ಅದು ಈ ಅನುಭವದ ನೆನಪೇ ಆಗಿರುತ್ತದೆ. ಅಂದರೆ ವಿಶ್ವಕಲ್ಪನೆಯನ್ನು ಕಟ್ಟಿಕೊಳ್ಳುವುದು ಈ ಮನುಷ್ಯರು ಪ್ರಪಂಚದಲ್ಲಿ ವ್ಯವಹರಿಸಲಿಕ್ಕೆ ಒಂದು ಪೂರ್ವನಿಬಂಧನೆಯಾಗಿದೆ. ಅದಿದ್ದರೆ ಮಾತ್ರವೇ ಈ ಪ್ರಪಂಚವು ಅವರಿಗೆ ಅರ್ಥವಾಗುತ್ತದೆ, ಅನುಭವಕ್ಕೆ ಬರುತ್ತದೆ ಹಾಗೂ ನೆನಪಿನಲ್ಲುಳಿಯುತ್ತದೆ. ಇಂಥ ವಿಶ್ವಕಲ್ಪನೆಯನ್ನು ಕಟ್ಟಿಕೊಡುವ ಘಟಕಗಳನ್ನು ವಿಶ್ವಮಾದರಿಗಳು ಎನ್ನಬಹುದು.

ಈ ಕಾರಣದಿಂದ ವಿಶ್ವಮಾದರಿಯಿಂದ ಪಡೆದದ್ದು ವಯಕ್ತಿಕ ಕಲ್ಪನೆಯಾಗಲಿಕ್ಕೆ ಸಾಧ್ಯವಿಲ್ಲ. ಅದು ಒಂದು ಸಂಸ್ಕೃತಿಯ ಸಾಮೂಹಿಕ ನೆನಪುಗಳನ್ನು ರಚಿಸುವ ಸಾಮಾನ್ಯ ಕಲ್ಪನೆಯಾಗಿರುತ್ತದೆ. ಅಂದರೆ ಒಂದು ಸಂಸ್ಕೃತಿಯ ಸದಸ್ಯನು ಉಳಿದೆಲ್ಲರ ಜೊತೆಗೆ ಹಂಚಿಕೊಳ್ಳುವ ಕಲ್ಪನೆಯಾಗಿರುತ್ತದೆ. ಈ ಮಾದರಿಗಳು ಸಾಮೂಹಿಕವಾಗಿ ಅಸ್ತಿತ್ವದಲ್ಲಿರುವ ಕಾರಣದಿಂದ ಉದ್ದೇಶ ರಹಿತವಾಗಿರುತ್ತವೆ. ಅಂದರೆ ಮನುಷ್ಯನು ಅದನ್ನು ತನಗೆ ಇಂತಿಂಥ ಕಾರಣಕ್ಕಾಗಿ ಬೇಕು ಎಂದು ಯೋಚಿಸಿ ಕಟ್ಟಿಕೊಂಡದ್ದಲ್ಲ. ಹಾಗಾಗಿ ಅದರಲ್ಲಿನ ನಿಯಮಗಳು, ರಚನೆಗಳು ಅಥವಾ ವಿನ್ಯಾಸಗಳು ಪ್ರಜ್ಞಾಪೂರ್ವಕವಾಗಿ ಯೋಜಿಸಿದಂಥವುಗಳಲ್ಲ. ಹಾಗಾಗಿ ಒಂದು ಸಂಸ್ಕೃತಿಯ ಸದಸ್ಯರು ಇಂಥ ವಿಶ್ವಮಾದರಿಗಳನ್ನು ಉದ್ದೇಶರಹಿತವಾಗಿ ಸಂಪಾದಿಸುತ್ತಾರೆ. ಅವರು ಒಂದು ಸಂಸ್ಕೃತಿಯ ಸದಸ್ಯರಾಗಿದ್ದ ಕಾರಣದಿಂದಲೇ ಈ ಮಾದರಿಗಳು ಅವರಿಗೆ ಸಹಜಜ್ಞಾನಗಳಾಗಿ ಬಂದಿರುತ್ತವೆ. ಅಂದರೆ ವಿಶ್ವಮಾದರಿಗಳು ಉದ್ದೇಶರಹಿತವಾದ ಕಲಿಕೆಗಳಾಗಿವೆ. ವಿಶ್ವಕಲ್ಪನೆಯನ್ನು ರಚಿಸಿಕೊಡುವುದೇ ಅವುಗಳ ಕಾರ್ಯ. ಭಾರತೀಯ ಸಂಸ್ಕೃತಿಯಲ್ಲಿ ಕಥೆಗಳು ಇಂಥ ವಿಶ್ವಮಾದರಿಗಳ ಸ್ಥಾನವನ್ನು ನಿರ್ವಹಿಸುತ್ತವೆ. ಮೊತ್ತಮೊದಲನೆಯದಾಗಿ ಅವು ನಮ್ಮ ಸಂಸ್ಕೃತಿಯು ವಿಶ್ವದ ಕುರಿತು ಕಟ್ಟಿಕೊಡುವ ಕಲ್ಪನೆಯನ್ನು ನಮಗೆ ಪರಿಚಯಿಸುತ್ತವೆ. ಒಂದು ಸಂಸ್ಕೃತಿಯ ಸದಸ್ಯನಾಗಿರುವ ಕಾರಣದಿಂದಲೇ ಕಥೆಗಳನ್ನು ಕೇಳುತ್ತ ಕೇಳುತ್ತ ಒಂದು ಮಗುವು ಈ ಕಲ್ಪನೆಯನ್ನು ತನ್ನದಾಗಿಸಿಕೊಳ್ಳುತ್ತದೆ.

ಕಥೆಗಳು ಉದ್ದೇಶರಹಿತ ಕಲಿಕೆಗಳಾಗಿವೆ ಅಂತಾದರೆ ಆ ಕಲಿಕೆಯು ಹೇಗೆ ನಡೆಯುತ್ತದೆ? ಇದನ್ನು ವಿವರಿಸುವುದು ನನಗೆ ಈ ಹಂತದಲ್ಲಿ ಕಷ್ಟ. ಏಕೆಂದರೆ ಈ ಕುರಿತು ನಾವು ಇನ್ನೂ ಸಂಶೋಧನೆಯನ್ನು ನಡೆಸಬೇಕಾಗಿದೆ. ಆದರೆ ಈ ಕುರಿತು ಕೆಲವು ಅಂಶಗಳನ್ನಂತೂ ಇಲ್ಲಿ ಮುಂದೊತ್ತಬಹುದು.

ಕಥೆಗಳು ನೀತಿ ಪಾಠದ ಮೂಲಕ ಕಲಿಸುವುದಿಲ್ಲ. ಹಾಗಾದರೆ ನಮ್ಮಲ್ಲಿ ನೀತಿ ಕಥೆಗಳಿಲ್ಲವೆ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ನಾವು ನೀತಿಪಾಠ ಎಂಬ ಶಬ್ದವನ್ನು ಮಾರಲ್ ಟೀಚಿಂಗ್ಸ್ ಎಂಬ ಅರ್ಥದಲ್ಲಿ ಬಳಸುತ್ತೇವೆ. ನಾನು ಈಗಾಗಲೇ ಪಾಶ್ಚಾತ್ಯ ನೈತಿಕ ಅಧಿಕಾರ ವಲಯದ ಕುರಿತು ಚರ್ಚಿಸಿದ್ದೇನೆ. ಅದು ಮೂಲತಃ ಗಾಡ್ನ ಆಜ್ಞೆಗಳ ಆಧಾರದ ಮೇಲೆ ರೂಪುಗೊಂಡಿದೆ ಎಂಬುದಾಗಿಯೂ ತಿಳಿಸಿದ್ದೆ. ಅಂದರೆ ನೈತಿಕ ಕ್ಷೇತ್ರ ಎಂಬುದಾಗಿ ಗುರುತಿಸಿದ ಕ್ರಿಯೆಗಳ ವಲಯಕ್ಕೆ ಸಂಬಂಧಿಸಿದಂತೇ ಕಡ್ಡಾಯವಾಗಿ (ought ಎಂಬರ್ಥದಲ್ಲಿ) ಪಾಲಿಸಲೇಬೇಕು/ಪಾಲಿಸಲೇಬಾರದು ಎಂಬ ನಿಯಮಾವಳಿಗಳಿರುತ್ತವೆ. ನಮ್ಮ ಕಥೆಗಳು ಇಂಥ ಹಿಂದೂಯಿಸಂನ ನೈತಿಕ ನಿಯಮಗಳನ್ನು ವಿಧಿಸುತ್ತವೆ ಎಂದುಕೊಳ್ಳುವುದು ತಪ್ಪು. ನಮ್ಮಲ್ಲಿ ನೀತಿಯನ್ನು ಹೇಗೆ ಕಂಡುಕೊಳ್ಳಬೇಕು ಎಂಬುದಕ್ಕೆ ನಿಯಮಗಳಿಲ್ಲ. ನೀತಿಯು ಕಂಡುಕೊಳ್ಳುವವನ ವಿವೇಚನೆಗೆ ಅಥವಾ ಯುಕ್ತಿಗೆ ಸಂಬಂಧಪಟ್ಟ ವಿಷಯವಾಗಿದೆ. ಹಾಗಾಗಿ ನಮ್ಮ ನೀತಿ ಕಥೆಗಳಾವವೂ ನೈತಿಕ ನಿಯಮಗಳನ್ನು ತಿಳಿಸುವ ಕೆಲಸವನ್ನು ಮಾಡುವುದಿಲ್ಲ. ಅದನ್ನು ಓದುಗನಿಗೆ ಬಿಡುತ್ತವೆ. ಹೆಚ್ಚೆಂದರೆ ಅವು ನೈತಿಕ ಜಿಜ್ಞಾಸೆಗೆ ವಸ್ತುಗಳಾಗಬಲ್ಲವು ಅಷ್ಟೆ.

ಅಂದರೆ ಈ ಕಥೆಗಳು ಏನು ಮಾಡುತ್ತವೆಯೆಂದರೆ ಕೆಲವು ಕ್ರಿಯೆಗಳನ್ನು ಜೋಡಿಸಿ ಒಂದು ವಿನ್ಯಾಸವನ್ನಾಗಿ ಮಾಡಿಕೊಡುತ್ತಿರುತ್ತವೆ. ಆ ವಿನ್ಯಾಸದೊಳಗೆ ಕೆಲವು ಪಾತ್ರಗಳು ಕೆಲವು ರೀತಿಯ ಸರಿ ತಪ್ಪು ತಿಳುವಳಿಕೆಗಳ ಆಧಾರದ ಮೇಲೆ ನಿರ್ಣಯ ತೆಗೆದುಕೊಳ್ಳುತ್ತಿರುತ್ತವೆ. ಇಂತಿಥ ಪಾತ್ರವು ಹೀಗೆ ನಿರ್ಣಯಿಸಿತು, ಹಾಗಾಗಿ ಅದರ ಪರಿಣಾಮ ಹೀಗಾಯಿತು ಎಂಬುದೊಂದು ಮಾದರಿಯನ್ನಷ್ಟೇ ಅವು ನೀಡುತ್ತಿರುತ್ತವೆಯೇ ವಿನಃ, ನೀವು ಕೂಡ ಹೀಗೇ ಮಾಡಿ ಎಂದು ಹೇಳುವುದಿಲ್ಲ. ಈ ಕಥೆಗಳನ್ನು ಮನುಷ್ಯ ಕ್ರಿಯೆಗಳಲ್ಲಿ ಏಳಬಹುದಾದ ಸಮಸ್ಯೆಗಳನ್ನು ಪರಿಹರಿಸಲಿಕ್ಕಾಗಿ ರಚಿಸಿದ್ದಾರೆ ಎಂದೂ ಅಂದುಕೊಳ್ಳಬಾರದು. ಅಂದರೆ ಮೊದಲು ಸಮಸ್ಯೆಗಳನ್ನು ಗುರುತಿಸಿ, ನಂತರ ಅವುಗಳಿಗೆ ಪರಿಹಾರವನ್ನು ಯೋಚಿಸಿ, ನಂತರ ಅವನ್ನು ಕಥಾ ರೂಪಕ್ಕೆ ಇಳಿಸಿದ್ದಲ್ಲ. ಈ ಕಥೆಗಳೂ ವಿಶ್ವ ಮಾದರಿಗಳಂತೆಯೇ ಉದ್ದೇಶ ರಹಿತವಾಗಿ ಸಾಮುದಾಯಿಕ ಪ್ರಜ್ಞೆಯ ಭಾಗವಾಗಿ ಚಾಲ್ತಿಯಲ್ಲಿ ಇರುತ್ತವೆ. ಅಂದರೆ ಒಂದು ಕಥೆಯು ಯಾವುದಾದರೂ ವ್ಯಕ್ತಿಯ ಯಾವುದಾದರೊಂದು ಸಮಸ್ಯೆಯನ್ನು ಪರಿಹರಿಸುತ್ತದೆಯೆ ಎಂಬುದು ಆ ಕಥೆಯನ್ನು ಮಾದರಿಯನ್ನಾಗಿ ಮಾಡಿಕೊಳ್ಳುವವನಿಗೆ ಬಿಟ್ಟದ್ದು. ಅಥವಾ ಯಾವಾಗಲೂ ಆಸಕ್ತಿರಹಿತವಾಗಿ ಕಂಡ ಕಥೆಯೊಂದು ಒಂದು ನಿರ್ದಿಷ್ಟ ಸಂದರ್ಭದಲ್ಲಿ ಒಬ್ಬನಿಗೆ ತನ್ನ ಸಮಸ್ಯೆಗಳನ್ನು ಒಳಗೊಂಡಂತೇ ಕಾಣಬಹುದು. ಇಲ್ಲವೇ, ತನಗೆ ಒಂದು ನಿರ್ದಿಷ್ಟ ಅನುಭವವನ್ನು ರಚಿಸಿಕೊಡಲು ಅದು ಸಹಕರಿಸುತ್ತದೆ ಎಂಬುದಾಗಿ ಅವನಿಗೆ ಹೊಳೆಯಬಹುದು.

ಒಬ್ಬ ವ್ಯಕ್ತಿಯು ತನ್ನ ಕ್ರಿಯೆಯನ್ನು ಈ ಕಥೆಗಳಿಂದ ಹೇಗೆ ಕಲಿಯುತ್ತಾನೆ ಎಂಬುದು ಇನ್ನೂ ಸ್ಪಷ್ಟವಿಲ್ಲ. ಕ್ರಿಯಾಜ್ಞಾನವಾಗಿ ಕಥೆಗಳು ಮಹತ್ವವನ್ನು ಪಡೆಯುತ್ತವೆ ಎಂಬುದಂತೂ ನಿಶ್ಚಯ. ಭಾರತೀಯ ಸಂಪ್ರದಾಯಗಳು ತಮ್ಮ ಶಿಕ್ಷಣದಲ್ಲಿ ಕ್ರಿಯಾ ಜ್ಞಾನಕ್ಕೆ ಒತ್ತುಕೊಡುತ್ತವೆ ಎಂಬುದಾಗಿ ಈಗಾಗಲೇ ತಿಳಿಸಿದ್ದೇನೆ. ಕ್ರಿಯೆಯ ಕುರಿತ ಸೈದ್ಧಾಂತಿಕ ತಿಳುವಳಿಕೆಗಿಂತ ಅವುಗಳ ಅನುಕರಣೆಯೇ ಕ್ರಿಯಾಜ್ಞಾನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕಥೆಗಳು ನಿರ್ದಿಷ್ಟ ಕ್ರಿಯಾ ಸರಣಿಗಳನ್ನು ಒಳಗೊಂಡ ಮಾದರಿಗಳಾಗಿವೆ. ಅವು ಯಾರಿಗೆ ಯಾವ ಥರದ ಕ್ರಿಯೆಗಳಿಗೆ ಅನುಕರಣೆಯ ಮಾದರಿಯಾಗುತ್ತವೆ ಎಂಬುದು ಪೂರ್ವನಿರ್ದೇಶಿತವಲ್ಲ. ಅದು ವ್ಯಕ್ತಿ ಭಿನ್ನವಾಗಿರುತ್ತದೆ, ಸಂದರ್ಭ ಭಿನ್ನವಾಗಿರುತ್ತದೆ. ಅನುಕರಣೆ ಯಾವಾಗಲೂ ಪ್ರಜ್ಞಾಪೂರ್ವಕವಾಗಿ ನಡೆಯುವುದಿಲ್ಲ. ಆದರೂ ಅವು ಅನುಕರಿಸುವವನಿಗೆ ಸರಿಯಾದ ಕ್ರಿಯೆಯ ಮಾದರಿಯನ್ನು ನೀಡಬಲ್ಲವು. ಅಥವಾ, ತಮ್ಮ ಕ್ರಿಯಾ ಸರಣಿಯ ಮೂಲಕ ತಮ್ಮೊಳಗೇ ಇಲ್ಲದ ಕ್ರಿಯೆಯೊಂದಕ್ಕೆ ಪ್ರೇರಣೆ ಅಥವಾ ಸೂಚನೆಯನ್ನೂ ನೀಡಬಲ್ಲವು. ಇದು ಅಧ್ಯಯನ ನಡೆಸಲಿಕ್ಕೆ ತುಂಬಾ ಆಸಕ್ತಿಪೂರ್ಣವಾದ ಕ್ಷೇತ್ರವಾಗಿದೆ ಎಂಬುದಂತೂ ನಿಸ್ಸಂದೇಹ.

ಪ್ರೊ.ಎಸ್.ಎನ್.ಬಾಲಗಂಗಾಧರ

ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಇತ್ತೀಚೆಗೆ ಭಾರತೀಯ ಪುರಾಣಗಳಿಗೆ ಹೊಸ ನಿರೂಪಣೆ ನೀಡುವ ಕೆಲವು ಪುಸ್ತಕಗಳು ವಿವಾದಕ್ಕೀಡಾಗುತ್ತಿವೆ. ಕನ್ನಡದಲ್ಲಿ ‘ಡುಂಢಿ’ ಎಂಬ ಕೃತಿಯಿಂದ ಹಿಡಿದು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ವೆಂಡಿ ಡೊನಿಗರ್ ಹಾಗೂ ಅವಳ ಶಿಷ್ಯರು ಭಾರತೀಯ ಸಂಸ್ಕೃತಿಯ ಕುರಿತು ಬರೆದ ಸಂಶೋಧನಾ ಗ್ರಂಥಗಳ ವರೆಗೂ ಈ ವಿವಾದಗಳು ಹಬ್ಬಿವೆ. ಈ ಕೃತಿಗಳ ಸ್ವರೂಪವೇನೇ ಇರಲಿ, ವಿವಾದವು ಮಾತ್ರ ಒಂದೇ ವಿಷಯದ ಕುರಿತಾಗಿದೆ. ಇವರು ಹಿಂದೂ ಸಂಸ್ಕೃತಿಯನ್ನು ಅವಹೇಳನ ಮಾಡುತ್ತಿದ್ದಾರೆ ಎಂಬುದೇ ತಕರಾರು. ಈ ತಕರಾರುಗಳನ್ನು ಸಂಘಟಿಸುತ್ತಿರುವವರು ಹಿಂದುತ್ವ ಸಂಘಟನೆಯ ಹಿನ್ನೆಲೆಯನ್ನು ಹೊಂದಿರುತ್ತಾರೆ. ಹಾಗಾಗಿ ಈ ವಿರೋಧವನ್ನು ‘ಹಿಂದೂ ಮೂಲಭೂತವಾದಿಗಳ ಆಕ್ರಮಣಶೀಲತೆ’ ಎಂಬುದಾಗಿ ಖಂಡಿಸಲಾಗುತ್ತದೆ. ‘ಹಿಂದೂ ಮೂಲಭೂತವಾದಿ’ ಎಂಬ ಶಬ್ದವು ನಮ್ಮ ಸೆಕ್ಯುಲರ್ ಪ್ರಭುತ್ವದಲ್ಲಿ ಒಂದು ಬಯ್ಗಳಿನ ಸ್ಥಾನವನ್ನು ಅಲಂಕರಿಸಿರುವುದು ಎಲ್ಲರಿಗೂ ತಿಳಿದ ವಿಷಯ. ಜೊತೆಗೇ ಇಂಥ ವಿರೋಧಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನಗಳು ಎಂಬ ಕೂಗೂ ಏಳುತ್ತದೆ. ಹಾಗಾಗಿ ಈ ವಿರೋಧವನ್ನು ಕಣ್ಮುಚ್ಚಿ ಖಂಡಿಸಬೇಕು ಎನ್ನುವುದರಲ್ಲಿ ಸಾಮಾಜಿಕ ಕಳಕಳಿಯಿರುವ ಯಾರಿಗೂ ಸಂದೇಹ ಹುಟ್ಟುವುದಿಲ್ಲ.

ಈ ‘ವೆಂಡಿ’ ಯಿಂದ ‘ಡುಂಢಿ’ಯ ವರೆಗೂ ನಡೆಯುತ್ತಿರುವ ವಿವಾದಗಳನ್ನು ಗಮನಿಸಿದಾಗ ಅವೆಲ್ಲವುಗಳಲ್ಲೂ ಒಂದು ಸಾಮಾನ್ಯ ಸಮಸ್ಯೆಯು ಮನೆಮಾಡಿರುವುದು ಕಂಡುಬರುತ್ತದೆ. ಪ್ರಶ್ನೆ ಇರುವುದು ನಮ್ಮ ಪುರಾಣ ಕಥೆಗಳನ್ನು ಹೇಗೆ ಅರ್ಥೈಸಬೇಕು ಎಂಬುದು. ಅಂದರೆ ಕಳೆದ ನೂರಾರು ವರ್ಷಗಳಿಂದ ಪಾಶ್ಚಾತ್ಯರು ಹಾಗೂ ಅವರನ್ನನುಸರಿಸಿದ ಭಾರತೀಯರು ನಮ್ಮ ಪುರಾಣಗಳನ್ನು ಅರ್ಥೈಸಲು ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಅವರು ಈ ಪ್ರಯತ್ನದ ಫಲವಾಗಿ ಥರಾವರಿ ನಿರೂಪಣೆಗಳನ್ನು ಬೆಳೆಸಿ ಅವುಗಳನ್ನು ವಿದ್ವತ್ ಪ್ರಪಂಚದಲ್ಲಿ ಚಾಲ್ತಿಯಲ್ಲಿ ತಂದಿದ್ದಾರೆ. ಇಂದು ಪುರಾಣಗಳಿಗೆ ಹೊಸ ನಿರೂಪಣೆಗಳನ್ನು ಕೊಡುತ್ತೇವೆಂಬುದಾಗಿ ಹೊರಟ ಯಾವುದೇ ವಿದ್ವಾಂಸನೂ ಕೂಡ ಇಂಥ ಒಂದಿಲ್ಲೊಂದು ನಿರೂಪಣೆಗಳನ್ನು ಬಳಸಿಕೊಂಡಿರುತ್ತಾನೆ. ಇಂಥ ತಿಳುವಳಿಕೆಯನ್ನೇ ಆಧರಿಸಿ ಭಾರತೀಯ ಭಾಷೆಗಳಲ್ಲಿ ಕಥೆಗಳು, ಕಾದಂಬರಿಗಳು, ನಾಟಕಗಳು ರಚನೆಯಾಗಿವೆ. ಇವುಗಳ ಲೇಖಕರೆಲ್ಲ ತಮ್ಮದು ಸೃಜನಶೀಲ ಬರವಣಿಗೆ ಎಂದು ಘೋಷಿಸಿಕೊಳ್ಳುತ್ತಾರಾದರೂ ಅವರು ನಿಜವಾಗಿಯೂ ಈ ಪಾಶ್ಚಾತ್ಯ ನಿರೂಪಣೆಗಳಿಗೇ ಬೇರೆ ಹಣೆಪಟ್ಟಿಯನ್ನು ನೀಡಿ ಬಿಕರಿ ಮಾಡುತ್ತಿರುತ್ತಾರೆ.

ಇದುವರೆಗೂ ರಾಶಿಬಿದ್ದ ಇಂಥ ನಿರೂಪಣೆಗಳಿಗೆ ಕೆಲವು ಉದಾಹರಣೆಗಳನ್ನು ನೀಡುವುದಾದರೆ, ವಿಷ್ಣು ಆರ್ಯ ಬ್ರಾಹ್ಮಣರ ಸಂಕೇತವಾದರೆ ಬಲಿ ಶೂದ್ರರ ಸಂಕೇತವಾಗುತ್ತಾನೆ, ರಾಕ್ಷಸರು ದ್ರಾವಿಡ ಜನಾಂಗದವರಾದರೆ ರಾಮನು ಆರ್ಯ ಆಕ್ರಮಣಕ್ಕೆ ಸಂಕೇತವಾಗಿದ್ದಾನೆ, ರಾಮಾಯಣದ ವಾನರರು ದಲಿತರಾಗಿದ್ದರು, ಶಂಬೂಕ ವಧೆ, ಏಕಲವ್ಯನ ಕಥೆ ಇತ್ಯಾದಿಗಳು ಬ್ರಾಹ್ಮಣರು ಶೂದ್ರ, ಬುಡಕಟ್ಟಿನ ಜನರನ್ನು ಶೋಷಿಸಿದ ಕಥೆಗಳಾಗಿವೆ. ಇಂಥ ಅಸಂಖ್ಯ ನಿರೂಪಣೆಗಳು ಇವೆ. ಪುರಾಣ ಕಥೆಗಳಲ್ಲಿ ಇಂಥ ನಿರೂಪಣೆಗಳನ್ನು ಹೊರಡಿಸುವುದು ಎಷ್ಟು ಸಲೀಸಾಗಿದೆಯೆಂದರೆ ಆ ಕೆಲಸಕ್ಕೆ ಅಧ್ಯಯನವೇ ಬೇಕಾಗಿಲ್ಲ. ಭಾರತೀಯ ಲೇಖಕರು ಹಾಗೂ ವಿಭಿನ್ನ ಹೋರಾಟಗಾರರು ನಮ್ಮ ಪುರಾಣಗಳನ್ನೆಲ್ಲ ಇಂಥ ನಿರೂಪಣೆಗಳಿಗೆ ಒಳಪಡಿಸಿದ್ದಾರೆ. ಅಷ್ಟಾಗಿಯೂ ಪುರಾಣಗಳ ಅರ್ಥವನ್ನು ಬರಿದು ಮಾಡಲಿಕ್ಕೆ ವಿದ್ವಾಂಸರಿಗೆ ಹಾಗೂ ಲೇಖಕರಿಗೆ ಆಗಿಲ್ಲ. ಹೊಸ ಹೊಸ ಹೋರಾಟಗಳು ಹುಟ್ಟಿದಂತೆಲ್ಲ ಅದೇ ಪುರಾಣದಲ್ಲಿ ಹೊಸ ಸಂದೇಶಗಳು ಅಡಗಿಕೊಂಡಿರುವುದು ಗಮನಕ್ಕೆ ಬರುತ್ತದೆ.

ಈ ಮೇಲಿನವೆಲ್ಲವೂ ಭಾರತೀಯ ಲೇಖಕರ ಫಲವಂತಿಕೆಗೆ ಸಾಕ್ಷಿಯಾದರೆ, ಅವರಿಗೆ ಆಧಾರವಾದ ಪಾಶ್ಚಾತ್ಯ ಸಮಾಜ ವಿಜ್ಞಾನಿಗಳೂ ಕೈಕಟ್ಟಿ ಕುಳಿತಿಲ್ಲ. ಅವರೂ ಹೊಸ ಹೊಸ ಅಂತಃಶಾಸ್ತ್ರೀಯ ಮಾರ್ಗಗಳನ್ನು ತೆರೆಯುತ್ತ ಪುರಾಣಗಳ ಅರ್ಥವನ್ನು ಶೋಧಿಸುತ್ತಿದ್ದಾರೆ. ಮಾನವಶಾಸ್ತ್ರ ಹಾಗೂ ಮನಃಶಾಸ್ತ್ರಗಳಲ್ಲಿ ಹೊಸ ಸಿದ್ಧಾಂತಗಳು ಬಂದ ಹಾಗೆಲ್ಲ ಪುರಾಣಗಳ ಹೊಸ ಹೊಸ ಅರ್ಥದ ಶೋಧನೆಯಾಗುತ್ತದೆ. ಇತ್ತೀಚೆಗೆ ವೆಂಡಿ ಡೊನಿಗರ್, ಪಾಲ್ ಕೋರ್ಟ್ರೈಟ್, ಜೆಫ್ರಿ ಕ್ರಿಪಾಲ್ ಮುಂತಾದವರು ಮನಃಶಾಸ್ತ್ರೀಯ ಸಿದ್ಧಾಂತಗಳನ್ನು ಬಳಸಿ ಭಾರತೀಯ ಪುರಾಣಗಳನ್ನು ಹಾಗೂ ರಾಮಕೃಷ್ಣರಂಥ ಸನ್ಯಾಸಿಗಳನ್ನು ಅರ್ಥೈಸಲು ಪ್ರಯತ್ನಿಸಿದ್ದರು. ಅವರ ಪ್ರಕಾರ ಈ ಪುರಾಣಗಳು ಲೈಂಗಿಕ ಸಂಕೇತಗಳಿಂದ ತುಂಬಿವೆ. ಅವು ಭಾರತೀಯರ ಲೈಂಗಿಕ ವಿಕೃತಿಯನ್ನೋ, ಆಶಯಗಳನ್ನೋ ಬಿಂಬಿಸುತ್ತವೆ. ಗಣಪತಿಯ ಸೊಂಡಿಲು ಕೂಡ ಲೈಂಗಿಕ ಸಂಕೇತವನ್ನು ಹೊಂದಿದೆ. ರಾಮಕೃಷ್ಣ ಪರಮಹಂಸರ ಅನುಭಾವದ ಹಿಂದೆ ಲೈಂಗಿಕ ಕಾರಣವಿದೆ. ಇಡೀ ಭಾರತೀಯ ಪುರಾಣ ಪ್ರಪಂಚವೇ ಫ್ರಾಯ್ಡ್ ಹಾಗೂ ಯುಂಗ್ರ ಮನಃಶಾಸ್ತ್ರೀಯ ಸಿದ್ಧಾಂತಗಳ ಪ್ರಕಾರ ಲೈಂಗಿಕ ವಿಕೃತಿಯನ್ನು ಪ್ರದರ್ಶಿಸುತ್ತದೆ.

ಇಂಥ ನಿರೂಪಣೆಗಳ ವಿರುದ್ಧ ಹಿಂದೂ ಸಂಪ್ರದಾಯವಾದಿಗಳು ಹೋರಾಟಕ್ಕಿಳಿದರು. ಈ ಕೃತಿಗಳನ್ನು ನಿಷೇಧಿಸಬೇಕೆಂಬುದಾಗಿ ಆಗ್ರಹಿಸಿದರು. ಆಗ ಎದ್ದ ಪ್ರಶ್ನೆಯೆಂದರೆ ವೈಜ್ಞಾನಿಕ ಅಧ್ಯಯನಗಳನ್ನು ನಡೆಸಬಾರದೆ? ಹೊಸ ನಿರೂಪಣೆಗಳನ್ನು ಮಾಡಬಾರದೆ? ತಾವೇನೂ ಕಲ್ಪಿಸಿಕೊಂಡು ಹೇಳುತ್ತಿಲ್ಲ. ಮನಃಶಾಸ್ತ್ರೀಯ ಸಿದ್ಧಾಂತಗಳು ಸುಳ್ಳು ಹೇಳುತ್ತವೆಯೆ? ಪ್ರಪಂಚದ ಎಲ್ಲೆಡೆಯಲ್ಲಿ ಮನೋರೋಗ ಚಿಕಿತ್ಸೆಯು ಇಂಥ ಸಿದ್ಧಾಂತಗಳನ್ನೇ ಆಧರಿಸಿಲ್ಲವೆ? ಇತ್ಯಾದಿ. ಈ ಪ್ರಶ್ನೆಗಳು ಯತಾರ್ಥವಾಗಿವೆ. ಏಕೆಂದರೆ ಈ ಮೇಲಿನ ಲೇಖಕರು ಭಾರತೀಯ ಸಂಸ್ಕೃತಿಯನ್ನು ವಿಕೃತವಾಗಿ ತೋರಿಸುವ ಸಲುವಾಗಿ ಸಂಶೋಧನೆ ಮಾಡಿದ್ದಲ್ಲ. ಭಾರತೀಯ ಪುರಾಣಗಳನ್ನು ಅರ್ಥೈಸುವ ನಿಟ್ಟಿನಲ್ಲಿ ಒಂದು ಹೊಸ ಮನಃಶಾಸ್ತ್ರೀಯ ಸಿದ್ಧಾಂತವನ್ನು ಬಳಸಿದ್ದಾರೆ ಹಾಗೂ ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಕೃತಿಗಳ ನಡುವೆ ಒಂದು ಸಂವಾದವನ್ನು ನಡೆಸಬಯಸುತ್ತಾರೆ. ಆದರೆ ಈ ಅಧ್ಯಯನಗಳು ತಮಗೆ ಸರಿ ಕಾಣಿಸದಿದ್ದರೂ ಇವುಗಳನ್ನು ಒಪ್ಪಿಕೊಳ್ಳುವ ಹಿಂಸೆ ಭಾರತೀಯರಿಗೆ ತಪ್ಪಿದ್ದಲ್ಲ. ಈ ಮಾತುಗಳನ್ನು ಒಪ್ಪಿದರೆ ಒಂದು ಸಮಸ್ಯೆ ಏಳುತ್ತದೆ: ಒಂದೋ, ಭಾರತೀಯ ಪುರಾಣಗಳನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಲೇಬಾರದು ಎನ್ನಬೇಕಾಗುತ್ತದೆ, ಇಲ್ಲ, ವೈಜ್ಞಾನಿಕ ಸತ್ಯಗಳನ್ನು ಪ್ರತಿಪಾದಿಸುವಾಗ ಭಾರತೀಯ ಸಂಪ್ರದಾಯಸ್ಥರಿಗೆ ಇಂಥ ಮಾನಸಿಕ ಹಿಂಸೆ ಹಾಗೂ ಸಂಘರ್ಷವು ಅನಿವಾರ್ಯ ಎನ್ನಬೇಕಾಗುತ್ತದೆ. ಇಂಥ ಆಯ್ಕೆಯನ್ನು ಇಟ್ಟರೆ ಪ್ರಜ್ಞಾವಂತರೆಲ್ಲರೂ ಎರಡನೆಯ ಆಯ್ಕೆಯನ್ನೇ ಮಾಡಿಕೊಳ್ಳುವುದು ಅನಿವಾರ್ಯ.

ಈ ಮೇಲಿನ ಆಯ್ಕೆಗಳು ವಿಚಿತ್ರವಾಗಿವೆ. ನಮಗೆ ವೈಜ್ಞಾನಿಕ ಸತ್ಯಗಳು ಬೇಕಾದರೆ ಹಿಂಸೆ ಅನಿವಾರ್ಯ. ಇದರಲ್ಲೇನು ವಿಚಿತ್ರವಿದೆ ಎಂಬುದಾಗಿ ನೀವು ಕೇಳಬಹುದು. ಆಧುನಿಕ ಪಾಶ್ಚಾತ್ಯ ವಿಜ್ಞಾನದ ಉತ್ಸರ್ಗದ ಕಾಲದಲ್ಲಿ ಚರ್ಚಿನ ಜೊತೆಗೆ ವಿಜ್ಞಾನಿಗಳು ಸಂಘರ್ಷಿಸಲಿಲ್ಲವೆ? ಇಂದೂ ಆ ಸಂಘರ್ಷವು ತಣ್ಣಗಾಗಿದೆಯೆ? ಇಂಥ ಉದಾಹರಣೆಯನ್ನು ಗಮನಕ್ಕೆ ತರುವುದರ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಕರೆಕೊಡುವುದು ಈಗ ಸಧ್ಯದಲ್ಲಿ ವಿದ್ವಾಂಸರಿಗೆ ತೆರೆದಿರುವ ಒಂದೇ ಮಾರ್ಗ. ಹಾಗಾಗಿ ನಮ್ಮ ಸಮಾಜದ ಏಳ್ಗೆಯನ್ನು ಗಮನದಲ್ಲಿರಿಸಿ ಈ ವಿರೋಧವನ್ನು ಹತ್ತಿಕ್ಕಬೇಕು. ನನ್ನ ಪ್ರಕಾರ ಸಮಸ್ಯೆ ಇಷ್ಟು ಸರಳವಾಗಿಲ್ಲ. ಪಾಶ್ಚಾತ್ಯ ಸಂಸ್ಕೃತಿಗೆ ಭಾರತವು ಮುಖಾಮುಖಿಯಾದಾಗಲೆಲ್ಲ ಏಳತಕ್ಕ ಸಮಸ್ಯೆಯಿದು. ಪಾಶ್ಚಾತ್ಯ ಸಂಸ್ಕೃತಿಯು ಅನ್ಯ ಸಂಸ್ಕೃತಿಯನ್ನು ವೈಜ್ಞಾನಿಕ ನಿರೂಪಣೆಗೊಳಪಡಿಸಿದಾಗ ಅಲ್ಲಿ ಒಂದು ಹಿಂಸೆ ಜರುಗುತ್ತದೆ. ಅದೆಂದರೆ ಅನ್ಯ ಸಂಸ್ಕೃತಿಗಳು ಪಾಶ್ಚಾತ್ಯರಿಗೆ ವಿಕೃತವಾಗಿ, ಅನೈತಿಕವಾಗಿ ಹಾಗೂ ಹಾಸ್ಯಾಸ್ಪದವಾಗಿ ಕಾಣತೊಡಗುತ್ತವೆ. ಭಾರತೀಯರು ಈ ಪ್ರಕ್ರಿಯೆಗೆ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಅದು ವೈಜ್ಞಾನಿಕ ಅಧ್ಯಯನವಾಗಿರುವುದರಿಂದ ಭಾರತೀಯರು ತಮ್ಮ ಕುರಿತ ಈ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂಬುದಾಗಿ ಈ ವಿದ್ವತ್ ಪ್ರಪಂಚವು ಆಗ್ರಹಿಸುತ್ತದೆ. ಅಂದರೆ ಸತ್ಯವಾಗಿಯೂ ಭಾರತೀಯರು ಹೀಗೇ ಇದ್ದಾರೆ ಎಂದು ನಂಬದೇ ವಿಧಿಯಿಲ್ಲ.

ನಾನು ಈ ಮೇಲಿನ ವಾದವನ್ನು ಪ್ರಶ್ನಿಸಬಯಸುತ್ತೇನೆ. ಇದು ಸಂಸ್ಕೃತಿಗಳ ಮುಖಾಮುಖಿಯ ಸಮಸ್ಯೆ. ಸಾಮಾಜಿಕ ಅಧ್ಯಯನವು ಪ್ರಪಂಚದ ಕುರಿತು ವಸ್ತುನಿಷ್ಠ ತಿಳುವಳಿಕೆಯನ್ನು ನೀಡುವುದರಿಂದ ಅದನ್ನಿಟ್ಟುಕೊಂಡು ಎರಡು ಸಂಸ್ಕೃತಿಗಳ ನಡುವಿನ ಅಪಾರ್ಥಗಳನ್ನು ನಿವಾರಿಸಬಹುದು ಎಂಬುದು ಸುಳ್ಳು. ಭಾರತೀಯ ಸಂಸ್ಕೃತಿ ಹಾಗೂ ಪಾಶ್ಚಾತ್ಯ ಸಂಸ್ಕೃತಿಯ ನಡುವೆ ಇರುವ ವ್ಯತ್ಯಾಸಗಳಿಂದಾಗಿ ಅವುಗಳ ಮುಖಾಮುಖಿಯಲ್ಲಿ ಸಮತೋಲನೆಯಿಲ್ಲ. ಈ ಮುಂದಿನ ದೃಷ್ಟಾಂತವನ್ನು ಗಮನಿಸಿ: ಪಾಶ್ಚಾತ್ಯ ವಿದ್ವಾಂಸನೊಬ್ಬನು ಗಣಪತಿಯ ಕುರಿತ ಪುರಾಣ ಕಥೆಯನ್ನು ಓದಿದಾಗ ಅವನಲ್ಲಿ ಒಂದು ಪ್ರಶ್ನೆ ಏಳುತ್ತದೆ: ಗಣಪತಿಗೇಕೆ ಸೊಂಡಿಲಿದೆ? ಅವನೇಕೆ ಪೂರ್ಣ ಮನುಷ್ಯರಂತಿರದೇ ಅರ್ಧ ಮನುಷ್ಯ ಅರ್ಧ ಆನೆಯಾಗಿದ್ದಾನೆ? ಇತ್ಯಾದಿ. ಅಂದರೆ ಭಾರತೀಯರು ಯಾವುದೋ ಉದ್ದೇಶವನ್ನು ಇಟ್ಟುಕೊಂಡು ಈ ಮೂರ್ತಿಯನ್ನು ಕಲ್ಪಿಸಿದ್ದಾರೆ. ಅದನ್ನು ತಿಳಿದುಕೊಳ್ಳಲು ಅವನು ಭಾರತೀಯನನ್ನು ಕೇಳುತ್ತಾನೆ ಅಂತಿಟ್ಟುಕೊಳ್ಳಿ. ಸಂಭಾಷಣೆ ಹೀಗೆ ಸಾಗುತ್ತದೆ:

ಪಾಶ್ಚಾತ್ಯ: ಈ ಆನೆ ತಲೆಯ ದೇವತೆ ಯಾರು?
ಭಾರತೀಯ: ಅವನು ಗಣಪತಿ, ಶಿವನ ಮಗ, ಶಿವ ಅಂದರೆ….ಇತ್ಯಾದಿ..ಇತ್ಯಾದಿ..
ಪಾಶ್ಚಾತ್ಯ: ಗಣಪತಿಗೇಕೆ ಆನೆಯ ತಲೆ ಇದೆ?
ಭಾರತೀಯ: ಓ ಅದಾ? ಅದನ್ನು ಶಿವನೇ ಅಂಟಿಸಿದ್ದು. ಅದಕ್ಕೊಂದು ಕಥೆಯಿದೆ. ಅದರ ಪ್ರಕಾರ ಪಾರ್ವತಿಯು ಗಣಪತಿಯನ್ನು ತನ್ನ ಮೈ ಕೊಳೆಯಿಂದ ಮಾಡಿದಳು….ಇತ್ಯಾದಿ..ಇತ್ಯಾದಿ..
ಪಾಶ್ಚಾತ್ಯ: ಅದು ಸರಿ, ಅದು ಪುರಾಣವಾಯಿತು. ನಾನು ಈ ಪುರಾಣ ಕಥೆಯ ಅರ್ಥವನ್ನು ಕೇಳುತ್ತಿದ್ದೇನೆ. ಆನೆಯ ತಲೆಯೇ ಏಕೆ ಕಥೆಯಲ್ಲಿ ಬರುತ್ತದೆ? ಮನುಷ್ಯನ ತಲೆಯೇಕಲ್ಲ?
ಭಾರತೀಯ: ನನಗೆ ಗೊತ್ತಿಲ್ಲ. (ಗೊತ್ತಿದೆ ಅಂದರೆ ಮತ್ತೊಂದು ಪುರಾಣ ಕಥೆಯನ್ನು ಅವನು ಹೇಳುತ್ತಾನೆ)
ಪಾಶ್ಚಾತ್ಯ: ಮತ್ತೆ ನೀನು ಏನು ನಡೆಯಿತೆಂಬುದನ್ನೇ ಹೇಳುತ್ತಿದ್ದೀಯಾ. ಯಾಕೆ ಈ ಕಥೆಯಲ್ಲಿ ಆನೆಯ ತಲೆಯನ್ನೇ ಕಲ್ಪಿಸಲಾಗಿದೆ?
ಭಾರತೀಯ: ???..!!!
ಪಾಶ್ಚಾತ್ಯ: ನೀನು ಈ ಕುರಿತು ಯೋಚಿಸಿಯೇ ಇಲ್ಲ ಅಂತಾಯ್ತು. ಹಾಗಾದರೆ ಕೇಳು, ಫ್ರಾಯ್ಡನ ಸಿದ್ಧಾಂತದ ಪ್ರಕಾರ ಅದನ್ನು ವಿವರಿಸಬಹುದು. ವಿವರಣೆ ಹೀಗಿದೆ….ಇತ್ಯಾದಿ.. ಇತ್ಯಾದಿ..
ಅಂದರೆ ಪಾಶ್ಚಾತ್ಯ ಸಂಸ್ಕೃತಿಯು ಎತ್ತುವ ಪ್ರಶ್ನೆ ಹಾಗೂ ವಿವರಣೆಯ ರೂಪದ ಉತ್ತರಗಳು ಭಾರತೀಯ ಕಥೆಗೆ ಪಾಶ್ಚಾತ್ಯ ಸಂಸ್ಕೃತಿಯು ನೀಡುವ ಒಂದು ಹೆಚ್ಚುವರಿ ಆಯಾಮವಾಗಿದೆ. ಆ ಆಯಾಮವು ಭಾರತೀಯ ಪುರಾಣಕ್ಕೆ ಇಲ್ಲ. ಇದ್ದಿದ್ದರೆ ಭಾರತೀಯರು ಅದನ್ನು ಹೇಳುತ್ತಿದ್ದರು. ಆ ಆಯಾಮವು ಭಾರತೀಯ ಪುರಾಣಗಳಿಗೆ ಏಕಿಲ್ಲವೆಂದರೆ ಭಾರತೀಯರು ಪಾಶ್ಚಾತ್ಯರ ಪ್ರಶ್ನೆಯನ್ನು ಕೇಳಿಕೊಂಡಿಲ್ಲ. ಈ ಮೇಲಿನ ಸಂದರ್ಭದಲ್ಲಿ ಆ ಪುರಾಣವನ್ನು ಸೃಷ್ಟಿಸಿದ ಮನುಷ್ಯನು ಹಾಗೇಕೆ ಪುರಾಣವನ್ನು ಬರೆದ? ಅವನ ಸಂಸ್ಕೃತಿಯ ಕುರಿತು ಯಾವ ಸತ್ಯವನ್ನು ಅದು ತಿಳಿಸುತ್ತದೆ? ಎಂಬುದನ್ನು ಶೋಧಿಸುವ ಕೆಲಸ ನಡೆದಿದೆ. ಅಂದರೆ ಪುರಾಣವನ್ನು ಸೃಷ್ಟಿಸಿದ ಸಂಸ್ಕೃತಿಯ ಜನರು ಏನನ್ನು ನಂಬಿಕೊಂಡು ಅಥವಾ ಉದ್ದೇಶವಾಗಿಟ್ಟುಕೊಂಡು ಪುರಾಣವನ್ನು ಕಟ್ಟಿದ್ದಾರೆ ಹಾಗೂ ಆಚರಣೆಯನ್ನು ಮಾಡುತ್ತಿದ್ದಾರೆ? ಎಂಬ ಕಾರಣ ವಿವರಣೆಯನ್ನು ನೀಡಲಾಗಿದೆ.

ಈ ಪ್ರಕ್ರಿಯೆಯಲ್ಲಿ ಗಣಪತಿಯ ಪುರಾಣವನ್ನು ಹೇಳಿಕೊಂಡು ಬಂದ ಜನರು ದಡ್ಡರಾಗಿ ಅಥವಾ ಮುಗ್ಧರಾಗಿ ಪರಿವರ್ತಿತರಾಗುತ್ತಾರೆ. ಆದರೆ ನಿಜವಾಗಿಯೂ ನೋಡಿದರೆ ಭಾರತೀಯರ ದಡ್ಡತನ ಅಥವಾ ಮುಗ್ಧತೆಯು ಪಾಶ್ಚಾತ್ಯ ವಿವರಣೆಯ ಕುರಿತಾಗಿದೆಯೇ ಹೊರತೂ ತಮ್ಮ ಪುರಾಣದ ಕುರಿತಲ್ಲ. ಆದರೆ ಇರುವುದೊಂದೇ ವಿವರಣೆ, ಅದು ಪಾಶ್ಚಾತ್ಯ ವಿವರಣೆ. ಹಾಗಾಗಿ ಪಾಶ್ಚಾತ್ಯ ವಿವರಣೆಯ ಕುರಿತ ದಡ್ಡತನವೇ ಅವರಿಗೆ ತಮ್ಮದೇ ಸಂಸ್ಕೃತಿಯ ಕುರಿತ ದಡ್ಡತನವೂ ಆಗಿ ಪರಿಣಮಿಸುತ್ತದೆ. ಅಷ್ಟೊಂದೇ ಅಲ್ಲ ಪಾಶ್ಚಾತ್ಯರು ನೀಡಿದ ವಿವರಣೆಯೇ ಅವರ ಸಂಸ್ಕೃತಿಯ ಕುರಿತ ಸತ್ಯದ ಸ್ಥಾನವನ್ನು ಅಲಂಕರಿಸುತ್ತದೆ. ಆ ವಿವರಣೆಯ ಪ್ರಕಾರ ಪುರಾಣವು ಲೈಂಗಿಕ ವಿಕೃತಿಯನ್ನು ಚಿತ್ರಿಸಬಹುದು. ಅದನ್ನು ಹೌದೆನ್ನಲೂ ಈ ಸಂಸ್ಕೃತಿಯಲ್ಲಿ ಬೌದ್ಧಿಕ ಸಂಪನ್ಮೂಲಗಳಿಲ್ಲ, ಇಲ್ಲವೆನ್ನಲೂ ಇಲ್ಲ, ಏಕೆಂದರೆ ಅವರಿಗೆ ಆ ಪ್ರಶ್ನೆ ಹಾಗೂ ಉತ್ತರ ಎರಡೂ ಇರಲಿಲ್ಲವಲ್ಲ! ಅಂಥ ಸಂದರ್ಭವು ಅವರನ್ನು ಮೂಕ ಸಾಕ್ಷಿಗಳನ್ನಾಗಿಟ್ಟುಕೊಂಡು ಅವರದೇ ಪುರಾಣಗಳ ಕುರಿತು ವಿವರಣೆಗಳ ಬೆಳೆಯನ್ನು ತೆಗೆಯಲು ಫಲವತ್ತಾದ ನೆಲವಾಗುತ್ತದೆ.

ಇದೊಂದು ವಿಚಿತ್ರವಾದ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಅವರು ನೀಡಿದ ವಿವರಣೆಯು ಕೊನೆಗೂ ಭಾರತೀಯರ ಸಹಜಜ್ಞಾನಕ್ಕೆ ಸರಿಯೆನ್ನಿಸುವುದಿಲ್ಲ. ಅದು ತಮ್ಮ ಸಂಸ್ಕೃತಿಯನ್ನು ವಿಕೃತವಾಗಿ ಹಾಸ್ಯಾಸ್ಪದವಾಗಿ ಚಿತ್ರಿಸುತ್ತದೆ ಎಂದೂ ಅನಿಸುತ್ತದೆ. ನಮ್ಮಲ್ಲಿ ಶಿವಲಿಂಗವು ಶಿವನ ಜನನೇಂದ್ರಿಯ ಎಂಬ ಪುರಾಣಕಥೆಗಳು ಇರಬಹುದು, ಆದರೆ ಯಾರೂ ಅದನ್ನು ಶಿವನ ಜನನೇಂದ್ರಿಯ ಎಂಬುದಾಗಿ ಭಾವಿಸಿಕೊಂಡು ಪೂಜೆ ಸಲ್ಲಿಸುವುದಿಲ್ಲ. ಅದನ್ನು ಶಿವ ಎಂಬುದಾಗಿ ಪೂಜಿಸುತ್ತಾರೆ. ಇವರಲ್ಲಿ ಯಾರಿಗೂ ಆ ಕಥೆಯೇ ಗೊತ್ತಿರಲಾರದು. ಗಣಪತಿಯ ಸಂದರ್ಭದಲ್ಲಂತೂ ಯಾರೂ ಅದೊಂದು ಹತ್ತಿಕ್ಕಿದ ಲೈಂಗಿಕ ಸಂಕೇತ ಎಂಬ ಊಹೆಯನ್ನೂ ಮಾಡಿರಲಿಕ್ಕಿಲ್ಲ. ಹಾಗಾಗಿ ಇಂಥ ವಿವರಣೆಯು ಅವರಿಗೆ ಆಘಾತವನ್ನು ನೀಡುತ್ತದೆ. ಆದರೆ ಈ ಪಾಶ್ಚಾತ್ಯರ ವಾದಗಳು ತರ್ಕಬದ್ಧವಾಗಿ ಕಾಣಿಸುತ್ತವೆ ಏಕೆಂದರೆ ಅವು ಒಂದಿಲ್ಲೊಂದು ಸಿದ್ಧಾಂತಗಳನ್ನು ಆಧರಿಸಿವೆ. ಆ ಒಂದು ವಾದವನ್ನು ಪ್ರಶ್ನಿಸುವವರು ಅದಕ್ಕೆ ಆಧಾರವಾದ ಪಾಶ್ಚಾತ್ಯ ಸಿದ್ಧಾಂತವನ್ನೇ ಅಧ್ಯಯನ ಮಾಡಬೇಕು.

ಒಂದೊಮ್ಮೆ ಅಧ್ಯಯನ ನಡೆಸಿ ಒಬ್ಬನು ಆ ಸಿದ್ಧಾಂತವು ಸರಿಯಿಲ್ಲ ಎನ್ನುತ್ತಾನೆ ಅಂತಿಟ್ಟುಕೊಳ್ಳಿ. ಆಗ ಅವನು ಈ ಪುರಾಣಗಳ ಕುರಿತು ಒಳ್ಳೆಯ ಚಿತ್ರಣವನ್ನು ನೀಡುವ ಮತ್ತೊಂದು ಪಾಶ್ಚಾತ್ಯ ಸಿದ್ಧಾಂತವನ್ನು ಬಳಸಿಕೊಳ್ಳಬೇಕಾಗುತ್ತದೆ. ಅದನ್ನು ಬಿಟ್ಟು ಬೇರೆ ಮಾರ್ಗವಿಲ್ಲ. ಏಕೆಂದರೆ ಈ ವಿವರಣೆಯ ಆಯಾಮವೇ ಈ ಸಂಪ್ರದಾಯಗಳಿಗಿಲ್ಲ. ಹಾಗಾಗಿ ಪುರಾಣಗಳ ಕುರಿತು ಪರ್ಯಾಯ ಸಿದ್ಧಾಂತಗಳನ್ನು ಹಾಗೂ ವಿವರಣೆಗಳನ್ನು ಕಟ್ಟುವ ಕೆಲಸವನ್ನು ಈ ಮೇಲಿನ ನಿರೂಪಣೆಯನ್ನು ವಿರೋಧಿಸುವವರೇ ಮಾಡಿಕೊಳ್ಳಬೇಕು. ಅಂದರೆ, ಒಂದೆಡೆ ಭಾರತೀಯನಿಗೆ ಈ ಮೇಲಿನ ವಿವರಣೆಯು ಸುಳ್ಳೆನ್ನಿಸುತ್ತದೆ, ಆದರೆ ಮತ್ತೊಂದೆಡೆ ಪರ್ಯಾಯ ವಿವರಣೆಯನ್ನು ಅಷ್ಟೇ ತರ್ಕಬದ್ಧವಾಗಿ ಮುಂದಿಡಲೂ ಸಾಧ್ಯವಿಲ್ಲ. ಇದು ಅವನಲ್ಲಿ ಹತಾಶೆಯನ್ನು ಹಾಗೂ ರೋಷವನ್ನು ಹುಟ್ಟಸುತ್ತದೆ.

ಪಾಶ್ಚಾತ್ಯ ಸಿದ್ಧಾಂತಗಳು ಭಾರತೀಯರ ಸಹಜಜ್ಞಾನಕ್ಕೆ ವಿರುದ್ಧವಾಗಿ ಕಾಣಿಸುವುದಕ್ಕೆ ಇವೆರಡೂ ಸಂಸ್ಕೃತಿಗಳ ನಡುವಿನ ವ್ಯತ್ಯಾಸವೇ ಕಾರಣ. ಮನಃಶಾಸ್ತ್ರದ ಸಿದ್ಧಾಂತಗಳನ್ನು ಒಪ್ಪಿಕೊಂಡ ಪಾಶ್ಚಾತ್ಯ ವಿದ್ವಾಂಸರಲ್ಲಿ ಇರುವ ಪೂರ್ವಗ್ರಹೀತದ ಪ್ರಕಾರ ರಿಲಿಜನ್ನಿನ ಆಚರಣೆ ಹಾಗೂ ವರ್ಷಿಪ್ಗಳು ಮನುಷ್ಯನ ಹತ್ತಿಕ್ಕಿದ ಲೈಂಗಿಕತೆಯನ್ನು ಪ್ರಕಟಪಡಿಸುತ್ತವೆ. ಹಿಂದೂಯಿಸಂ ಕೂಡ ರಿಲಿಜನ್ನು ಆಗಿರುವುದರಿಂದ ಅದರ ಪುರಾಣಗಳಲ್ಲೂ ಈ ಲೈಂಗಿಕತೆ ಕಾಣಿಸಬೇಕು. ಅಂದರೆ ಗಣಪತಿಯ ಕುರಿತ ವಿವರಣೆಯು ಮಂಜುಗಡ್ಡೆಯ ಮೊನೆ ಮಾತ್ರ. ಅದರ ಒಳಗೆ ಮನಃಶಾಸ್ತ್ರೀಯ ಪೂರ್ವಗ್ರಹೀತಗಳು ಇವೆ. ಈ ಮನಃಶಾಸ್ತ್ರೀಯ ಪೂರ್ವಗ್ರಹೀತಗಳ ಹಿಂದೆ ಥಿಯಾಲಜಿಯ ಗ್ರಹಿಕೆಗಳಿವೆ. ಉದಾಹರಣೆಗೆ ಆಚರಣೆಗಳ ಹಿಂದೆ ನಂಬಿಕೆಗಳಿರಬೇಕು ಎಂಬುದು. ಅದೇ ಗ್ರಹಿಕೆಯೇ ಇಂಟೆನ್ಶನಲ್ ಸೈಕಾಲಜಿಗೆ ಆಧಾರವಾಗಿದೆ. ಅಂದರೆ ಈಗ ಇರುವ ಸಾಮಾಜಿಕ ಅಧ್ಯಯನವು ಥಿಯಾಲಜಿಯ ಗ್ರಹಿಕೆಗಳನ್ನು ಕಳ್ಳಸಾಗಣೆ ಮಾಡುತ್ತಿದೆ. ಪಾಶ್ಚಾತ್ಯ ಮನಃಶಾಸ್ತ್ರವೂ ಇದಕ್ಕೆ ಹೊರತಲ್ಲ. ಇದರ ಪರಿಣಾಮವಾಗಿ ರಿಲಿಜನ್ನೇ ಇಲ್ಲದ ತೀರಾ ಬೇರೆಯದೇ ಆದ ಸಂಸ್ಕೃತಿಯ ಕುರಿತ ಗ್ರಹಿಕೆಯು ವಿಕೃತವಾಗುತ್ತದೆ.

ಹಾಗಾಗಿ ಪಶ್ಚಿಮೇತರ ಸಂಸ್ಕೃತಿಗಳಿಗೆ ಪಾಶ್ಚಾತ್ಯ ನಿರೂಪಣೆಗಳನ್ನು ಅಲ್ಲಗಳೆಯಲು ಇರುವ ಒಂದೇ ಮಾರ್ಗವೆಂದರೆ ತಮ್ಮ ಕುರಿತು ಪರ್ಯಾಯ ವಿವರಣೆಗಳನ್ನು ಬೆಳೆಸುವುದು. ಅದನ್ನು ಬೆಳೆಸಬೇಕಾದರೆ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ವ್ಯತ್ಯಾಸಗಳ ಕುರಿತು ಸಿದ್ಧಾಂತಗಳನ್ನು ಬೆಳೆಸಬೇಕು.

ಪ್ರೊ.ಎಸ್.ಎನ್.ಬಾಲಗಂಗಾಧರ 

ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಹಿಂದಿನ ಅಂಕಣಗಳಲ್ಲಿ ನಮ್ಮ ಇತಿಹಾಸ ಸಂಪ್ರದಾಯವು ಪಾಶ್ಚಾತ್ಯರಿಗೆ ಸುಳ್ಳಿನ ಕಂತೆಯಾಗಿ ಕಾಣಿಸಿದ ವಿಷಯವನ್ನು ಪ್ರಸ್ತಾಪಿಸಿದ್ದೆ. ಹಾಗಾಗಿ ಅವರು ನಮಗೆ ಹಿಸ್ಟರಿಯ ಅರಿವು ಇಲ್ಲ ಎಂಬುದಾಗಿ ತೀರ್ಮಾನಿಸಿದ್ದರು. ಮೆಕಾಲೆಯ ಸುಪ್ರಸಿದ್ಧ ನಡಾವಳಿಯಲ್ಲಿ ಅವನು ಉದ್ಗರಿಸಿದ ಪ್ರಕಾರ ಭಾರತೀಯರು ಗತಕಾಲದಲ್ಲಿ 30 ಅಡಿ ಎತ್ತರದ ರಾಜರು ಇದ್ದರು, 30000 ವರ್ಷ ಆಳ್ವಿಕೆ ನಡೆಸಿದ ರಾಜರು ಇದ್ದರು ಎಂಬ ಹಿಸ್ಟರಿಯನ್ನು ನಂಬಿದ್ದಾರೆ, ಅವರ ಭೂಗೋಲವು ಬೆಲ್ಲ ಬೆಣ್ಣೆಗಳ ಸಮುದ್ರಗಳು ಇವೆ ಎಂಬಿತ್ಯಾದಿ ಹಾಸ್ಯಾಸ್ಪದವಾದ ಸಂಗತಿಗಳನ್ನು ತಿಳಿಸುತ್ತದೆ. ಮೆಕಾಲೆಯ ಹೇಳಿಕೆಯೊಂದೇ ಅಲ್ಲ, ನಮ್ಮ ಇತಿಹಾಸ-ಪುರಾಣಗಳನ್ನು ಬಲ್ಲ ಯಾರಿಗಾದರೂ ಇದಕ್ಕೂ ವಿಚಿತ್ರವಾದ ವ್ರತ್ತಾಂತಗಳು ಖಂಡಿತವಾಗಿಯೂ ಗೊತ್ತಿರುತ್ತವೆ.

ಕೇವಲ ಮೆಕಾಲೆ ಮಾತ್ರವೇ ಅಲ್ಲ, ಅಂಥವೆಲ್ಲ ನಿಜ ಎಂದು ಯಾರಾದರೂ ವಾದಿಸಿದರೆ ನಮಗೇ ಅದು ಹಾಸ್ಯಾಸ್ಪದವಾಗಿ ಕಾಣಿಸುತ್ತದೆ. ಎರಡು ಸಾವಿರ ವರ್ಷಗಳ ಹಿಂದೆ ಪ್ರಾಣಿ ಪಕ್ಷಿಗಳು ಮಾತನಾಡುತ್ತಿದ್ದವು, ಋಷಿಗಳ ಶಾಪಕ್ಕೆ ಗಂಡುಗಳು ಹೆಣ್ಣಾಗುತ್ತಿದ್ದರು, ಮನುಷ್ಯರು 30 ಸಾವಿರ ವರ್ಷ ಬದುಕುತ್ತಿದ್ದರು, ಬೆಣ್ಣೆಯ, ಹಾಲಿನ ಸಮುದ್ರಗಳಿದ್ದವು, ಇತ್ಯಾದಿಗಳನ್ನು ನಿಜವೆಂಬುದಾಗಿ ಯಾವುದಾದರೂ ಭಾರತೀಯರು ಎಂದಾದರೂ ನಂಬಿದ್ದರೆ? ಹೋಗಲಿ, ಪಾಶ್ಚಾತ್ಯ ಹಿಸ್ಟರಿಯಿಂದ ಜ್ಞಾನೋದಯವಾಗುವುದಕ್ಕೂ ಪೂರ್ವದಲ್ಲಿ ಭಾರತೀಯರು ಹಾಗೇ ನಂಬಿಕೊಂಡಿದ್ದರು ಅಂತ ವಾದಕ್ಕೆ ಇಟ್ಟುಕೊಳ್ಳೋಣ. ಈಗ ನಮಗೆ ಅದು ಸುಳ್ಳು ಅಂತ ಗೊತ್ತಾಗಿದೆಯಲ್ಲ? ಗೊತ್ತಾದಮೇಲೂ ನಮ್ಮಂಥ ವಿದ್ಯಾವಂತರಿಗೆ ಈ ಪುರಾಣ ಕಥೆಗಳ ಅಗತ್ಯವೇನಿದೆ? ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ನಾವು ಸುಳ್ಳುಗಳನ್ನು ನಂಬಲು ಅವನ್ನು ಓದುತ್ತೇವೆಯೆ?

ಇಂದು ರಾಮಾಯಣದ ಕೆಲವು ಘಟನೆಗಳ ಕುರಿತಾಗಿ ಸತ್ಯ-ಸುಳ್ಳುಗಳ ವಿವಾದ ಎದ್ದಿರುವುದು ಎಲ್ಲರಿಗೂ ಗೊತ್ತು. ಹಾಗಾಗಿ ಇಂದಿನ ಯುವಜನರಲ್ಲಿ ರಾಮಾಯಣದ ಕುರಿತು ಸಾಮಾನ್ಯವಾಗಿ ಮೂಡುವ ಒಂದು ಪ್ರಶ್ನೆ ಎಂದರೆ ಅದು ನಿಜವಾಗಿಯೂ ನಡೆಯಿತೆ? ಎಂಬುದು. ಅವರ ಆತಂಕ ಏನೆಂದರೆ ಒಂದೊಮ್ಮೆ ಅದು ಸುಳ್ಳಾಗಿದ್ದರೆ ಅದನ್ನು ಪೂಜ್ಯವಾಗಿ ನೋಡಲು ಸಾಧ್ಯವಾಗದಿರಬಹುಸು. ಹೀಗೆ ಆತಂಕಪಡುವವರು ಮತ್ತೊಂದು ರೀತಿಯ ಪ್ರಶ್ನೆಯನ್ನು ಕೇಳಿಕೊಳ್ಳಲಿ: ವಾಲ್ಮೀಕಿ, ವ್ಯಾಸರಂಥ ಮಹರ್ಷಿಗಳು ಈ ಕೃತಿಗಳನ್ನು ಹೀಗೇ ಏಕೆ ರಚಿಸಿದರು? ನೈಜ ಘಟನೆಗಳನ್ನು ದಾಖಲಿಸುವುದೇ ಅವರ ಉದ್ದೇಶವಾಗಿದ್ದರೆ ಅವರಿಗೆ ನೈಜ ಘಟನೆಗಳನ್ನು ಮಾತ್ರವೇ ಆಯ್ದು ಬರೆಯುವಷ್ಟು ಬುದ್ಧಿಮತ್ತೆ ಹಾಗೂ ಸಾಮರ್ಥ್ಯ ಇರಲಿಲ್ಲವೆ? ಇಲ್ಲ ನಿಜಘಟನೆಗಳನ್ನು ಇಂದಿನ ಹಿಸ್ಟರಿಕಾರರ ಥರ ನೇರವಾಗಿ ಹೇಳುವ ಸಾಮರ್ಥ್ಯವಿರಲಿಲ್ಲವೆ? ಈ ಗ್ರಂಥಗಳಲ್ಲಿ ನಡೆದ ಘಟನೆಗಳ ಸತ್ಯ ಸುಳ್ಳುಗಳನ್ನು ಪ್ರಮಾಣೀಕರಿಸಲು ಹೊರಡುವವರು ಅವರಿಗೆ ಅಂಥ ಬುದ್ಧಿಮತ್ತೆ ಹಾಗೂ ಸಾಮರ್ಥ್ಯ ಇರಲಿಲ್ಲ ಎಂಬುದಾಗಿ ತೀರ್ಮಾನಿಸಿದ್ದಾರೆ ಅಂತಲೇ ಅರ್ಥ. ಇಲ್ಲ ಅವರಿಗೆ ಆ ಬುದ್ಧಿಮತ್ತೆ ಹಾಗೂ ಸಾಮರ್ಥ್ಯಗಳಿದ್ದವು ಎಂಬುದನ್ನು ಪರಿಗಣಿಸುತ್ತೇವೆ ಅಂತಾದಲ್ಲಿ, ಅವರು ಹಿಸ್ಟರಿಯನ್ನು ಬರೆಯುತ್ತಿಲ್ಲ, ಬೇರೇನನ್ನೋ ಬರೆಯುತ್ತಿದ್ದಾರೆ ಎಂಬುದನ್ನು ಅರಿಯುವುದೊಂದೇ ಮಾರ್ಗ.

ಈ ಪರ್ಯಾಯ ಮಾರ್ಗದಲ್ಲಿ ನೀವು ಹೊರಡಬಯಸುವಿರಾದರೆ ಒಂದು ವಿಷಯವನ್ನು ಗುರುತಿಸುವ ಅಗತ್ಯವಿದೆ. ಇಂದಿಗೂ ಕೂಡ ನಾವು ವಿದ್ಯಾವಂತರಾಗಿ ಪುರಾಣ ಕಥೆಗಳನ್ನು ಓದುತ್ತೇವೆ, ಅವುಗಳನ್ನಾಧರಿಸಿ ಬೇರೆ ಬೇರೆ ಕಲಾ ಪ್ರಕಾರಗಳನ್ನು ಸೃಷ್ಟಿಸುತ್ತೇವೆ, ಈ ಕಥೆಗಳು ನಮ್ಮ ಜೀವನಕ್ಕೆ ಮುಖ್ಯ ಎಂಬ ಅನಿಸಿಕೆಯನ್ನು ಹೊಂದಿದ್ದೇವೆ ಎಂಬುದಂತೂ ಸತ್ಯ. ಭಾರತದಲ್ಲಿ ನಿಜಘಟನೆಗಳನ್ನು ದಾಖಲಿಸುವ ಹಿಸ್ಟರಿಗಳ ಆರ್ಭಟ ಹೆಚ್ಚಾದಂತೆಲ್ಲ ಪುರಾಣಕಥೆಗಳು ಹೆದರಿ ಮೂಲೆಗೆ ಸರಿಯುತ್ತಿರುವುದು ಕಾಣುವುದಿಲ್ಲ. ಬದಲಾಗಿ ಅವು ಕೂಡ ಹಿಸ್ಟರಿಯನ್ನು ಕಲಿತ ವಿದ್ಯಾವಂತರಿಗೆ ಮೊದಲಿಗಿಂತ ಹೆಚ್ಚೆಚ್ಚು ಆಸಕ್ತಿಪೂರ್ಣವಾಗಿ ಕಾಣಿಸುತ್ತಿವೆ. ಇಂಥ ಕಥೆಗಳನ್ನು ನಮಗೆ ಹೇಳಿದವರು ಇವುಗಳು ನಿಜವಾಗಿಯೂ ನಡೆದವು ಎಂದು ನಂಬಬೇಕು ಎಂಬ ಷರತ್ತನ್ನು ಇಟ್ಟು ಕಥೆ ಹೇಳಿದರೆ? ನಾನು ಸಣ್ಣವನಿದ್ದಾಗ ಶಾಲೆಯಲ್ಲಿ ಕಲಿತ ಭೂಗೋಳ, ವಿಜ್ಞಾನ, ಹಿಸ್ಟರಿಗಳ ಪ್ರಕಾರ ಈ ಕಥೆಗಳಲ್ಲಿ ಬರುವ ವಿವರಗಳು ನಿಜವಾಗಿರಲು ಸಾಧ್ಯವೆ? ಎಂಬ ಪ್ರಶ್ನೆಗಳು ಏಳುತ್ತಿದ್ದವು. ಆದರೆ ಅಂಥ ಪ್ರಶ್ನೆಗಳನ್ನು ಕೇಳುವುದರಿಂದ ‘ತಲೆಹರಟೆ’ ಎಂಬ ಬಿರುದನ್ನು ಬಿಟ್ಟರೆ ನನಗೆ ಮತ್ತೇನೂ ಸಿಕ್ಕಲಿಲ್ಲ. ನಮ್ಮ ಪುರಾಣ ಕಥೆಗಳ ಸಂದರ್ಭದಲ್ಲಿ ಇವು ಕೇಳುವ ಪ್ರಶ್ನೆಗಳಲ್ಲ ಎಂಬುದನ್ನು ನಾನು ಕ್ರಮೇಣ ಕಂಡುಕೊಂಡೆ. ಅಂದರೆ ಘಟನೆಗಳು ಸತ್ಯವೆ? ಸುಳ್ಳೆ? ಎಂಬ ಪ್ರಶ್ನೆಗಳು ಈ ಕಥೆಗಳಿಗೆ ಅಪ್ರಸ್ತುತ.

ನಮ್ಮ ಸಾಮಾನ್ಯಜ್ಞಾನದ ಪ್ರಕಾರ ಒಂದು ಘಟನೆ ಸತ್ಯವಾಗದಿದ್ದರೆ ಅದು ಸುಳ್ಳಾಗಿರಲೇಬೇಕು. ಆದರೆ ಹಾಗಾಗಲೇಬೇಕೆಂದಿಲ್ಲ. ಅದು ಸತ್ಯವೂ ಸುಳ್ಳೂ ಎರಡೂ ಆಗಿರದಿರುವ ಸಾಧ್ಯತೆಯೂ ಇದೆ. ಹೀಗೆ ಹೇಳಿದಾಗ ನಾನು ಅಡ್ಡಗೋಡೆಯ ಮೇಲೆ ದೀಪವಿಡುತ್ತಿದ್ದೇನೆಂದು ನೀವು ಹೇಳುವ ಸಾಧ್ಯತೆಯಿದೆ. ಯಾವುದೋ ರಾಜಕೀಯ ಪಕ್ಷವನ್ನು ಬೆಂಬಲಿಸುವ ಕೆಲವು ಯುವಕರು ‘ರಾಮಸೇತುವು ನಿಜವಾಗಿಯೂ ಇತ್ತೆ?’ ಎಂದು ನನ್ನನ್ನು ಕೇಳುತ್ತಾರೆನ್ನಿ. ನಾನು ಅದು ಸತ್ಯವೂ ಅಲ್ಲ, ಸುಳ್ಳೂ ಅಲ್ಲ ಎಂದು ಉತ್ತರ ಕೊಟ್ಟರೆ ಏನಾಗುತ್ತದೆ? ನಾನು ಹಾರಿಕೆಯ ಉತ್ತರವನ್ನು ನೀಡುತ್ತಿದ್ದೇನೆ, ನನಗೆ ನೇರವಾಗಿ ಹೇಳುವ ಧೈರ್ಯವಿಲ್ಲ ಅಂತಲೇ ಅವರು ತೀರ್ಮಾನಿಸುತ್ತಾರೆ.

ಆದರೆ ನನ್ನದು ಹಾರಿಕೆಯ ಉತ್ತರವಲ್ಲ. ಇದೊಂದು ವೈಜ್ಞಾನಿಕ ಸಮಸ್ಯೆ. ಹಿಸ್ಟರಿಯ ಪ್ರಶ್ನೆಗಳು ಈ ಹಿನ್ನೆಲೆಯಿಂದ ಹುಟ್ಟುತ್ತವೆ ಎನ್ನುವುದನ್ನು ಗಮನಿಸಬೇಕು. ವಿಜ್ಞಾನದಲ್ಲಿ ಸತ್ಯ ಅಥವಾ ಸುಳ್ಳು ಎನ್ನುವುದು ಒಂದು ನಿರ್ದಿಷ್ಟ ಪ್ರಕಾರದ ವಾಕ್ಯಗಳಿಗೆ ಆರೋಪಿಸಬಹುದಾದ ಗುಣಲಕ್ಷಣವಾಗಿದೆ. ಅವು ಪ್ರಪಂಚದಲ್ಲಿ ನಿಜವಾಗಿಯೂ ಏನಿದೆ ಎಂಬುದನ್ನು ತಿಳಿಸಲು ಉದ್ದೇಶಿಸಿರುವ ವಾಕ್ಯಗಳು. ಅಂದರೆ ‘ರಾಮಾಯಣದಲ್ಲಿ ಹೇಳಲಾದ ರಾಮಸೇತುವು ಪ್ರಪಂಚದಲ್ಲಿ ವಾಸ್ತವಿಕವಾಗಿ ಇದ್ದ ಒಂದು ವಸ್ತುವನ್ನು ಸೂಚಿಸುತ್ತದೆಯೆ?’ ಎಂಬುದು ಆ ಪ್ರಶ್ನೆಯ ಸರಿಯಾದ ರೂಪ. ಒಂದೊಮ್ಮೆ ರಾಮಾಯಣವನ್ನು ಬರೆದವನಿಗೆ ಭಾರತದ ಯಾವುದೋ ಭಾಗದಲ್ಲಿ ರಾಮನೆಂಬವನು ಸೇತುವೆಯನ್ನು ಕಟ್ಟಿದ ನಿಜ ಘಟನೆಯನ್ನು ದಾಖಲಿಸುವ ಉದ್ದೇಶ ಇತ್ತು ಅನ್ನಿ. ಆದರೆ ಸೇತುವೆಯನ್ನು ಕಟ್ಟುವ ಘಟನೆ ನಡೆದೇ ಇರಲಿಲ್ಲ. ಅಂಥ ಸಂದರ್ಭದಲ್ಲಿ ಅವನ ಹೇಳಿಕೆ ಸುಳ್ಳಾಗುತ್ತದೆ. ಅಂದರೆ ಪ್ರಪಂಚದಲ್ಲಿ ವಾಸ್ತವಿಕವಾಗಿ ಇರಬಹುದಾದ ಸಂಗತಿಗಳನ್ನು ಚಿತ್ರಿಸುವ ಉದ್ದೇಶವನ್ನು ಹೊಂದಿದ ಹೇಳಿಕೆಗಳಿಗೆ ಮಾತ್ರವೇ ಸತ್ಯ-ಸುಳ್ಳುಗಳ ತರ್ಕ ಅನ್ವಯವಾಗುತ್ತದೆ. ರಾಮಾಯಣಕ್ಕೆ ರಾಮಸೇತುವನ್ನು ಉಲ್ಲೇಖಿಸುವಲ್ಲಿ ಆ ಉದ್ದೇಶವೇ ಇಲ್ಲ, ಅದರ ಉದ್ದೇಶವೇ ಬೇರೆ ಅಂತಿಟ್ಟುಕೊಳ್ಳಿ, ಆಗ ಆ ಹೇಳಿಕೆಯು ಸತ್ಯ-ಸುಳ್ಳುಗಳ ಪರಿಧಿಗೆ ಬರುವುದಿಲ್ಲ. ಅದು ಸತ್ಯವೂ ಅಲ್ಲ, ಸುಳ್ಳೂ ಅಲ್ಲ.

ಇತಿಹಾಸ ಪುರಾಣಗಳು ಪ್ರಪಂಚದ ಕುರಿತ ಸತ್ಯಹೇಳಿಕೆಗಳೆಂಬುದಾಗಿ ಪೂರ್ವದೇಶದವರು ತಿಳಿಯುವುದಿಲ್ಲ. ಆ ನಿರ್ದಿಷ್ಟ ಕಾರಣದಿಂದಲೇ ಅವನ್ನು ಸುಳ್ಳು ಎಂದಾಗಿ ಕೂಡ ಅವರು ತಿಳಿಯುವುದಿಲ್ಲ. ಹಾಗಾಗಿ ಹಿಸ್ಟರಿಯ ದೃಷ್ಟಿಯನ್ನಿಟ್ಟುಕೊಂಡು ಅವುಗಳು ಸುಳ್ಳು ಘಟನೆಗಳು ಎಂದಾಗ ಅವರಿಗೆ ಅದು ಸರಿ ಎನ್ನಿಸುವುದಿಲ್ಲ. ಅವರು ಅದನ್ನು ವಿರೋಧಿಸುತ್ತಾರೆ. ಆದರೆ ಇಂಥ ಹೇಳಿಕೆಗಳಲ್ಲಿನ ಸಮಸ್ಯೆ ಏನೆಂಬುದು ಅವರಿಗೆ ಹೊಲಬಾಗುವುದಿಲ್ಲವಾದ್ದರಿಂದ ಅವರಿಗೆ ತಮ್ಮ ಉತ್ತರವನ್ನು ಸರಿಯಾಗಿ ರೂಪಿಸಲೂ ಸಾಧ್ಯವಾಗುವುದಿಲ್ಲ. ಹಾಗಾಗಿ ಅವು ಸುಳ್ಳಲ್ಲ ಎಂದು ಹೇಳುತ್ತಾರೆ. ಸುಳ್ಳಲ್ಲ ಎನ್ನುವಾಗ ಅವರಿಗೆ ಅದು ಸತ್ಯ ಎಂದೇ ಅನ್ನಿಸುತ್ತದೆ. ಆಗ ಪ್ರಶ್ನೆ ಕೇಳುವವರು ‘ಓಹೋ ಇವರು ಅವನ್ನು ಹಿಸ್ಟರಿಯ ಸತ್ಯ ಎಂದು ನಂಬಿಕೊಂಡಿದ್ದಾರೆ’ ಅಂದುಕೊಳ್ಳುತ್ತಾರೆ. ಆದರೆ ಹಿಸ್ಟರಿಯು ಯಾವುದನ್ನು ಸತ್ಯ ಎಂಬುದಾಗಿ ಪರಿಗಣಿಸುತ್ತದೆ ಎಂಬುದು ಅವರಿಗೆ ತಿಳಿಯುವುದಿಲ್ಲ. ಅವರು ಕೊಡುವ ಉತ್ತರವೇ ಒಂದು, ವಿದ್ವಾಂಸರು ತಿಳಿದುಕೊಳ್ಳುವುದೇ ಇನ್ನೊಂದು ಆಗುತ್ತದೆ. ನಮ್ಮಲ್ಲಿ ಬಹಳಷ್ಟು ಜನರಿಗೆ ರಾಮಾಯಣದ ಘಟನೆಗಳು ಸತ್ಯ ಎಂಬ ಧೃಡ ವಿಶ್ವಾಸವಿದೆ, ಅವರು ಹಾಗೇ ವಾದವನ್ನೂ ಮಾಡುತ್ತಾರೆ. ಆದರೆ ಯಾವ ಅರ್ಥದಲ್ಲಿ?

ಈ ದೃಷ್ಟಿಯಿಂದ ಒಬ್ಬ ಬಾಲಿ ಯುವಕನ ಜೊತೆಗೆ ಪಾಶ್ಚಾತ್ಯ ವಿದ್ವಾಂಸನೊಬ್ಬನು ನಡೆಸಿದ ಸಂಭಾಷಣೆಯು ನನಗೆ ಆಸಕ್ತಿಪೂರ್ಣವಾಗಿ ಕಂಡಿತು. ರಾಮಾಯಣದ ಕುರಿತು ಪಾಶ್ಚಾತ್ಯ ಸಂಸ್ಕೃತಿಯವರಿಗೆ ಯಾವ ಪ್ರಶ್ನೆಗಳು ಏಳುತ್ತವೆ ಹಾಗೂ ಪೂರ್ವ ದೇಶದವರು ಅದನ್ನು ಯಾವ ರೀತಿಯ ಸತ್ಯ ಎಂಬುದಾಗಿ ನೋಡುತ್ತಾರೆ ಎಂಬುದಕ್ಕೆ ಅದೊಂದು ದೃಷ್ಟಾಂತವಾಗಿದೆ. ಆ ವಿದ್ವಾಂಸನು ಹಿಂದೂಗಳ ಪವಿತ್ರ ಗ್ರಂಥವಾದ ರಾಮನ ಇತಿಹಾಸವನ್ನು ಬಾಲಿ ಯುವಕನು ಸತ್ಯವೆಂದು ನಂಬಿದ್ದಾನೋ ಎಂದು ಕೇಳಿದಾಗ ಆ ಯುವಕನು ಯಾವುದೇ ಅನುಮಾನವಿಲ್ಲದೇ “ಹೌದು” ಎಂದು ಉತ್ತರಿಸಿದನು. ಈ ಸಂಭಾಷಣೆ ಹೀಗಿದೆ:
ವಿದ್ವಾಂಸ: “ಹಾಗಾದರೆ ರಾಜಕುಮಾರ ರಾಮನು ಎಲ್ಲೋ, ಯಾವಾಗಲೋ ಬದುಕಿದ್ದನು ಎಂಬುದಾಗಿ ನೀನು ನಂಬುತ್ತೀಯಾ?”
ಬಾಲಿ ಯುವಕ: “ಅವನು ಬದುಕಿದ್ದನೋ ಇಲ್ಲವೋ ಎಂಬುದು ನನಗೆ ತಿಳಿದಿಲ್ಲ”
ವಿದ್ವಾಂಸ: “ಹಾಗಾದರೆ ಇದೊಂದು ಕಥೆಯೆ?”
ಬಾಲಿ ಯುವಕ: “ಹೌದು ಇದೊಂದು ಕಥೆ”
ವಿದ್ವಾಂಸ: “ಹಾಗಾದರೆ ಯಾರೋ ಈ ಕಥೆಯನ್ನು ಬರೆದರು – ಅಂದರೆ ಒಬ್ಬ ಮನುಷ್ಯನು ಇದನ್ನು ಬರೆದನೆ?”
ಬಾಲಿ ಯುವಕ: “ಖಂಡಿತವಾಗಿಯೂ ಯಾವುದೋ ಮನುಷ್ಯನು ಈ ಕಥೆಯನ್ನು ಬರೆದನು”
ವಿದ್ವಾಂಸ: “ಹಾಗಾದರೆ ಯಾವುದೋ ಮನುಷ್ಯನು ಇದನ್ನು ಕಲ್ಪಿಸಿಕೊಂಡಿರಬಹುದು”
ಬಾಲಿ ಯುವಕ: “ಯಾರೋ ಈ ಕಥೆಯನ್ನು ಹುಟ್ಟು ಹಾಕಿರಬಹುದು. ಆದರೆ ಏನೇ ಆದರೂ ಇದು ಸತ್ಯ”.
ವಿದ್ವಾಂಸ: “ಹಾಗಾದರೆ ರಾಜಕುಮಾರ ರಾಮನು ಭೂಮಿಯ ಮೇಲೆ ಬದುಕಿರಲಿಲ್ಲ ಎಂದಂತಾಯಿತು”.
ಬಾಲಿ ಯುವಕ: “ನಿನಗೆ ಯಾವ ಮಾಹಿತಿ ಬೇಕಾಗಿದೆ? ಕಥೆ ಸತ್ಯವೆಂಬುದು ನಿನ್ನ ಪ್ರಶ್ನೆಯೋ ಅಥವಾ ಕೇವಲ ಅದು ನಡೆಯಿತೋ ಇಲ್ಲವೋ ಎಂಬ ಪ್ರಶ್ನೆಯೋ?”
ವಿದ್ವಾಂಸ: “ಕ್ರೈಸ್ತರು ತಮ್ಮ ದೇವರಾದ ಜೀಸಸ್ ಕ್ರೈಸ್ತನು ಭೂಮಿಯ ಮೇಲೆ ಬದುಕಿದ್ದ ಎಂಬುದಾಗಿಯೂ ನಂಬುತ್ತಾರೆ. ಹೊಸ ಒಡಂಬಡಿಕೆಯಲ್ಲಿ ಮನುಷ್ಯರು ಅದನ್ನು ವರ್ಣಿಸಿದ್ದಾರೆ. ಆದರೆ ಕ್ರೈಸ್ತರು ಅದೊಂದು ವಾಸ್ತವಿಕವಾದ ವರ್ಣನೆಯೆಂದು ನಂಬುತ್ತಾರೆ. ಅವರ ದೇವರು ಕೂಡ ಭೂಮಿಯ ಮೇಲೆ ವಾಸ್ತವಿಕವಾಗಿ ಇದ್ದನು”.
ಬಾಲಿ ಯುವಕ: “ಈ ವಿಷಯವು ನನಗೂ ತಿಳಿದಿದೆ. ನಿಮ್ಮ ದೇವರು ಭೂಮಿಯ ಮೇಲೆ ಇದ್ದಿರಲೇಬೇಕೆಂಬುದು ಏಕೆ ಅಷ್ಟೊಂದು ಮಹತ್ವದ ವಿಷಯವಾಗಬೇಕು ಎಂಬುದು ನನಗೆ ತಿಳಿಯುತ್ತಿಲ್ಲ.”

ಇಲ್ಲಿ ಪಾಶ್ಚಾತ್ಯ ವಿದ್ವಾಂಸನು ಕೇಳುತ್ತಿರುವುದು ಹಿಸ್ಟರಿಯ ಸತ್ಯದ ಬಗೆಗೆ. ಬಾಲಿ ಯುವಕನು ಒಂದೆಡೆ ರಾಮಾಯಣವು ಒಂದು ಕಥೆ ಎನ್ನುತ್ತಾನೆ, ಮತ್ತೊಂದೆಡೆ ಅದು ಸತ್ಯವೆನ್ನುತ್ತಾನೆ. ಅದು ಭೂಮಿಯ ಮೇಲೆ ನಡೆದ ಘಟನೆ ಎಂಬರ್ಥದಲ್ಲಿ ಅವನು ಅದನ್ನು ಸತ್ಯ ಎನ್ನುತ್ತಿಲ್ಲ. ಅದು ಭೂಮಿಯಮೇಲೆ ನಡೆಯಿತೋ ಇಲ್ಲವೋ ಎಂಬುದು ಅವನಿಗೆ ತಿಳಿದಿಲ್ಲ. ಅಂದರೆ ಅವನು ಹಿಸ್ಟರಿಯ ಸತ್ಯದ ಕುರಿತು ಮಾತನಾಡುತ್ತಿಲ್ಲ. ಅವನು ರಾಮಾಯಣ ಎಂಬುದೊಂದು ಗ್ರಂಥವಿದೆ ಹಾಗೂ ಅದರಲ್ಲಿ ಆ ಘಟನೆಗಳು ಹಾಗೆ ಇರುವುದು ಸತ್ಯ ಎನ್ನುತ್ತಿದ್ದಾನೆ. ಅಂದರೆ ಇಲ್ಲಿ ಸತ್ಯ ಎನ್ನುವುದು ರಾಮಾಯಣ ಎಂಬ ಗ್ರಂಥ ಹಾಗೂ ಅದರ ವಿವರಗಳಿಗೆ ಸಂಬಂಧಪಟ್ಟಿದ್ದೇ ವಿನಃ ನಾವಿರುವ ಪ್ರಪಂಚದಲ್ಲಿ ನಿಜವಾಗಿಯೂ ಆಗಿಹೋದ ಘಟನೆಗಳಿಗೆ ಸಂಬಂಧ ಪಟ್ಟದ್ದಲ್ಲ. ಉದಾಹರಣೆಗೆ, ರಾವಣನನ್ನು ಕೊಂದವರು ಯಾರು? ಎಂಬ ಪ್ರಶ್ನೆಗೆ ರಾಮ ಎಂದರೆ ನಿಜವಾಗುತ್ತದೆ, ಲಕ್ಷ್ಮಣ ಎಂದರೆ ಸುಳ್ಳಾಗುತ್ತದೆ. ರಾಮಾಯಣದಲ್ಲಿ ರಾಮನು ರಾವಣನನ್ನು ಕೊಂದದ್ದು ಸತ್ಯ, ಹನುಮಂತನು ಲಂಕೆಗೆ ಹಾರಿದ್ದೂ ಸತ್ಯ, ಅದೇ ರೀತಿ ಜಟಾಯು, ಮಾಯಾ ಜಿಂಕೆ, ಶೂರ್ಪನಖಿ, ಕುಂಭಕರ್ಣ ಎಲ್ಲರೂ ನಿಜವೇ. ರಾಮಾಯಣವೇ ಈ ಸತ್ಯ-ಸುಳ್ಳುಗಳಿಗೆ ಒರೆಯಾಗುತ್ತದೆ. ಆ ಕಾರಣಕ್ಕೆ ರಾಮ ರಾವಣರು ಭೂಮಿಯ ಮೇಲೆ ಇದ್ದರು ಎಂದಂತೇನೂ ಅಲ್ಲ. ಅಂದರೆ ಹಿಸ್ಟರಿಯ ಸತ್ಯ-ಸುಳ್ಳುಗಳು ರಾಮಾಯಣದ ಸಂಪ್ರದಾಯವನ್ನು ದಾಟಿಸಿಕೊಂಡು ಬಂದವರಿಗೆ ಅಪರಿಚಿತ ಹಾಗೂ ಅಪ್ರಸ್ತುತ. ಅವರ ಪ್ರಪಂಚವೇ ಬೇರೆ ಇದ್ದಂತಿದೆ.

ಕಥೆಗಳು ಈ ಪ್ರಭೇದಕ್ಕೆ ಸೇರುತ್ತವೆ. ಕಥೆಗಳನ್ನು ಸುಳ್ಳು ಕಥೆಗಳು ಹಾಗೂ ಸತ್ಯಕಥೆಗಳು ಎಂದು ವಿಭಾಗಿಸಿಕೊಂಡವರು ಪಾಶ್ಚಾತ್ಯರು. ಅವರು ಸತ್ಯ ಕಥೆಗಳನ್ನು ಹಿಸ್ಟರಿ ಎಂದೂ ಸುಳ್ಳು ಕಥೆಗಳನ್ನು ಮಿಥ್ ಎಂದೂ ವಿಭಾಗಿಸಿಕೊಂಡರು. ಸತ್ಯ ಕಥೆಗಳು ಮಾತ್ರವೇ ನಮಗೆ ಬೋಧಕವಾಗುತ್ತವೆ, ಸುಳ್ಳು ಕಥೆಗಳು ಕೇವಲ ಮನೋರಂಜನೆಗೆ ಮಾತ್ರವೇ ಲಾಯಖ್ಖು ಎಂಬ ಧೋರಣೆಯನ್ನು ಬೆಳೆಸಿದರು. ಇಲ್ಲ ಸುಳ್ಳು ಕಥೆಗಳು ಸತ್ಯವನ್ನು ಪರೋಕ್ಷವಾಗಿ ತಿಳಿಸುತ್ತವೆ ಎಂದು ನಿರ್ಧರಿಸಿದರು. ಅದರ ಪರಿಣಾಮವಾಗಿ ಕಥೆಗಳು ಕೇವಲ ಕಥೆಗಳಾಗಿ ಪಶ್ಚಿಮದ ಜನರಿಗೆ ಕಲಿಕೆಯ ಸಾಧನಗಳಾಗಿ ಉಳಿದಿಲ್ಲ. ಅವು ರಮ್ಯ, ಕಾಲ್ಪನಿಕ ಲೋಕಗಳು ಅಷ್ಟೆ. ಅವು ನಮ್ಮ ದಾರಿ ತಪ್ಪಿಸುವ ಕೆಲಸವನ್ನು ಮಾತ್ರ ಮಾಡಬಲ್ಲವು ಎಂಬುದು ಅವರ ಧೋರಣೆ. ಇದು ಒಂದು ಸಂಸ್ಕೃತಿಯ ಧೋರಣೆ ಅಷ್ಟೆ. ಈ ಧೋರಣೆ ಸಮಸ್ಯಾತ್ಮಕವಾಗಿದೆ. ಉದಾಹರಣೆಗೆ, ನಮ್ಮ ರಾಮಾಯಣ ಮಹಾಭಾರತಗಳು ಈಗಿರುವಂತೆಯೇ ಬೋಧಕವಾಗಬಲ್ಲವು ಹಾಗೂ ಅವು ಭಾರತೀಯರ ವರ್ತಮಾನದ ಹುಡುಕಾಟದ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸಿವೆ ಅಂತಾದರೆ ಅವು ಸತ್ಯಘಟನೆಗಳು ಎಂಬುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವೇನಿದೆ? ಈ ಪ್ರಶ್ನೆಯನ್ನು ಉತ್ತರಿಸಬೇಕಾದರೆ ಸತ್ಯಕಥೆಗಳು ನಮ್ಮ ಜೀವನವನ್ನು ಇನ್ನೂ ಚೆನ್ನಾಗಿ ಮಾಡುತ್ತವೆ, ಸುಳ್ಳುಕಥೆಗಳು ಅದನ್ನು ಹಾಳು ಮಾಡುತ್ತವೆ ಎಂಬುದನ್ನು ಸಿದ್ಧಪಡಿಸಬೇಕು. ಇದು ಸಿದ್ಧವಾಗುವವರೆಗೆ ಸತ್ಯಕಥೆಗಳು ಮಾತ್ರವೇ ನಮ್ಮ ಭವಿಷ್ಯಕ್ಕೆ ಒಳ್ಳೆಯದು ಎನ್ನಲು ವಿಶೇಷ ಕಾರಣಗಳು ಇಲ್ಲ.

ವಾಸ್ತವದಲ್ಲಿ ರಾಮಾಯಣದಂಥ ಕಥೆಗಳು ಸತ್ಯ ಹೇಳಿಕೆಗಳೂ ಅಲ್ಲ, ಸುಳ್ಳೂ ಹೇಳಿಕೆಗಳೂ ಅಲ್ಲ. ಅವು ತಮ್ಮದೇ ಆದ ರೀತಿಯಲ್ಲಿ ಮನುಷ್ಯ ಜನಾಂಗದ ಕಲಿಕೆಯ ಸಾಧನಗಳಾಗಿವೆ. ಇಂಥ ಕಲಿಕೆಯಲ್ಲಿ ಸತ್ಯ-ಸುಳ್ಳುಗಳ ಪ್ರಶ್ನೆ ಅಪ್ರಸ್ತುತವಾಗುತ್ತದೆ. ಅದು ಹೇಗೆಂಬುದನ್ನು ತಿಳಿದುಕೊಳ್ಳಲು ಅಂಥ ಕಲಿಕೆಯನ್ನು ಇನ್ನೂ ಉಳಿಸಿಕೊಂಡು ಬಂದ ಪೌರ್ವಾತ್ಯ ಸಂಸ್ಕೃತಿಯನ್ನು ಅಧ್ಯಯನಕ್ಕೊಳಪಡಿಸಬೇಕಾಗಿದೆ. ನಮ್ಮ ಇತಿಹಾಸ-ಪುರಾಣಗಳ ಸಂದರ್ಭದಲ್ಲಿ ಅವು ನಮಗೇನು ಕಲಿಸುತ್ತವೆ? ಹೇಗೆ ಕಲಿಸುತ್ತವೆ? ಇತ್ಯಾದಿ ಪ್ರಶ್ನೆಗಳು ಪ್ರಯೋಜಕವಾಗಬಹುದೇ ಹೊರತೂ ಅವುಗಳಲ್ಲಿ ಉಲ್ಲೇಖಿತವಾದ ಘಟನೆಗಳು ನಿಜವಾಗಿಯೂ ನಡೆದವೋ ಇಲ್ಲವೋ ಎಂಬ ಪ್ರಶ್ನೆಗಳಲ್ಲ. ಇಂಥ ಪ್ರಶ್ನೆಗಳನ್ನು ಕೇಳುತ್ತಿರುವವರು ಅದಾಗಲೇ ಇಂಥ ಕೃತಿಗಳ ಜೊತೆಗಿನ ತಮ್ಮ ಸಾಂಪ್ರದಾಯಿಕ ಕೊಂಡಿಗಳನ್ನು ಕಳಚಿಕೊಳ್ಳುತ್ತಿದ್ದಾರೆ ಅಂತಲೇ ಅರ್ಥ.

ಪ್ರೊ.ಎಸ್.ಎನ್.ಬಾಲಗಂಗಾಧರ 

ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಭಾರತೀಯ ಇತಿಹಾಸ ಸಂಪ್ರದಾಯಕ್ಕೆ ಸೇರಿದ ರಾಮಾಯಣ ಹಾಗೂ ಮಹಾಭಾರತಗಳಲ್ಲಿ ಬರುವ ಘಟನೆಗಳ ಸತ್ಯಾಸತ್ಯತೆಯ ಕುರಿತು ವಿವಾದಗಳು ಏಳುವುದು ಇಂದು ಸಾಮಾನ್ಯವಾಗಿ ಕಂಡುಬರುವ ಸಂಗತಿ. ಇಂಥ ವಿವಾದಗಳಲ್ಲಿ ಒಂದು ಪಕ್ಷದವರು ಈ ಕೃತಿಗಳು ಸತ್ಯಘಟನೆಗಳಲ್ಲ ಎನ್ನಲಿಕ್ಕೆ ಆಧಾರವನ್ನು ತೋರಿಸುತ್ತಾರೆ, ಮತ್ತೊಂದು ಪಕ್ಷದವರು ಅವು ಸತ್ಯ ಘಟನೆಗಳೇ ಎಂಬುದಕ್ಕೆ ಆಧಾರ ತೋರಿಸುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ ಇಂಥ ವಿವಾದಗಳನ್ನು ಆಶ್ರಯಿಸಿದ ಹೋರಾಟಗಳೂ, ಸಂಘರ್ಷಗಳೂ, ಕೋರ್ಟ್ ತೀರ್ಮಾನಗಳೂ, ರಾಜಕೀಯ ಪ್ರಣಾಲಿಕೆಗಳೂ ಜನರಿಗೆ ಗೊತ್ತಿರುವಂಥವೇ ಆಗಿವೆ. ಈ ವಿವಾದಗಳಲ್ಲಿ ಭಾಗವಹಿಸುವವರು ಮೇಲ್ನೋಟಕ್ಕೆ ಎರಡು ವಿರುದ್ಧ ಪಕ್ಷಗಳಂತೆ ಕಾಣಿಸುತ್ತಾರೆ. ಆದರೆ ವಾಸ್ತವದಲ್ಲಿ ಅವರಿಬ್ಬರೂ ಒಂದೇ ರೀತಿ ವಿಚಾರ ಮಾಡುತ್ತಿದ್ದಾರೆ. ಈ ಎರಡೂ ಪಕ್ಷದವರೂ ರಾಮಾಯಣ ಮಹಾಭಾರತಗಳನ್ನು ಹಿಸ್ಟರಿ ಎಂದು ಭಾವಿಸಿದ್ದಾರೆ ಹಾಗಾಗಿ ಅವುಗಳಲ್ಲಿ ಬರುವ ಘಟನೆಗಳನ್ನು ಸತ್ಯ ಅಥವಾ ಸುಳ್ಳೆಂದು ತೀರ್ಮಾನಿಸುವುದು ನಿರ್ಣಾಯಕ ಎಂಬುದಾಗಿ ಭಾವಿಸಿದ್ದಾರೆ.

ರಾಮಾಯಣ ಹಾಗೂ ಮಹಾಭಾರತಗಳಂತೆಯೇ ಇನ್ನೂ ಅನೇಕಾನೇಕ ಪ್ರಾಚೀನ ಕಾವ್ಯಗಳೂ, ಪುರಾಣಗಳೂ ಹಾಗೂ ಕಥೆಗಳೂ ಭಾರತದಲ್ಲಿ ಇವೆ. ಅವುಗಳಲ್ಲಿ ಉಳಿದ ಯಾವುದರ ಸತ್ಯಾಸತ್ಯತೆಯ ಕುರಿತೂ ವಿವಾದಗಳು ಏಳುವುದಿಲ್ಲ. ಉದಾಹರಣೆಗೆ ಅಷ್ಟಾದಶ ಪುರಾಣಗಳು, ಕಥಾಸರಿತ್ಸಾಗರ, ಪಂಚತಂತ್ರದ ಕಥೆಗಳು ಇತ್ಯಾದಿಗಳನ್ನು ಐತಿಹಾಸಿಕ ಸತ್ಯಾಸತ್ಯತೆಯ ದೃಷ್ಟಿಯಿಂದ ಯಾರೂ ನೋಡಬಯಸಿಲ್ಲ. ನೀವು ಹೇಳಬಹುದು, ಪಂಚತಂತ್ರದ ಕಥೆಗಳಲ್ಲಿ ಪ್ರಾಣಿಗಳು ಹಾಗೂ ಪಕ್ಷಿಗಳು ಮನುಷ್ಯರಂತೇ ಮಾತನಾಡುವ, ವ್ಯವಹರಿಸುವ ಸನ್ನಿವೇಶಗಳು ಇರುವುದರಿಂದ ಅವು ಕಟ್ಟು ಕಥೆಗಳು ಎಂಬುದು ಸ್ಪಷ್ಟ. ಆದರೆ ಮಹಾಭಾರತ ರಾಮಾಯಣಗಳಲ್ಲೂ ಇಂಥ ಪ್ರಾಣಿ ಪಕಿಗಳ ವ್ಯವಹಾರಗಳು ಇವೆಯಲ್ಲ? ನಾಯಿಗಳು ಶಾಪ ಕೊಡುತ್ತವೆ, ಕಪಿಗಳು ಸೈನಿಕರಾಗಿ ಹೋರಾಡುತ್ತವೆ, ಸೇತುವೆ ಕಟ್ಟುತ್ತವೆ. ಹಾವುಗಳು ಆಧ್ಯಾತ್ಮಿಕ ಪ್ರಶ್ನೆ ಕೇಳುತ್ತವೆ. ಪ್ರಾಣಿಪಕ್ಷಿಗಳೆಲ್ಲ ಮನುಷ್ಯರಂತೇ ವ್ಯವಹರಿಸುತ್ತವೆ. ಇನ್ನು ಇವುಗಳಲ್ಲಿ ಬರುವ ಅತಿಮಾನುಷ ಘಟನೆಗಳಂತೂ ಲೆಕ್ಕಕ್ಕಿಲ್ಲ. ಇಷ್ಟಾಗಿಯೂ ಈ ಎರಡು ಕೃತಿಗಳ ಸಂದರ್ಭದಲ್ಲಿ ಮಾತ್ರವೇ ಐತಿಹಾಸಿಕ ಆಧಾರಗಳನ್ನು ಶೋಧಿಸುವುದು ಇಂದಿನ ಭಾರತೀಯರಿಗೆ ಬಹುಮುಖ್ಯ ಎನಿಸುತ್ತದೆ. ಏಕೆ?

ಈ ಎರಡು ಕೃತಿಗಳನ್ನೇ ನಮ್ಮ ಪ್ರಾಚೀನರು ಇತಿಹಾಸ ಎಂಬುದಾಗಿ ಕರೆದಿದ್ದಾರೆ ಹಾಗೂ ನಾವು ಹಿಸ್ಟರಿಯನ್ನು ಇತಿಹಾಸ ಎಂಬುದಾಗಿ ತರ್ಜುಮೆ ಮಾಡಿಕೊಂಡಿದ್ದೇವೆ. ಈ ಶಬ್ದವು ಇಂದು ನಮಗೆ ಸಮಸ್ಯೆಯನ್ನು ಸೃಷ್ಟಿಸುತ್ತಿರುವುದಕ್ಕೆ ಇದೇ ಕಾರಣ. ಇತಿಹಾಸ ಎಂದಾಕ್ಷಣ ಅವುಗಳು ಸತ್ಯಘಟನೆಗಳು ಎಂದು ಸಾಧಿಸುವ ಆಗ್ರಹಕ್ಕೆ ಭಾರತೀಯರು ಸಿಲುಕಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮಹಾಭಾರತ ರಾಮಾಯಣಗಳನ್ನು ಹಿಸ್ಟರಿಗಳನ್ನಾಗಿ ಮಾಡುವ ಪ್ರಯತ್ನದಲ್ಲಿ ಅವು ಹಿಸ್ಟರಿ ಬರವಣಿಗೆಯ ಅಪೂರ್ಣ ಅವತಾರಗಳು ಎಂಬ ತೀರ್ಮಾನಕ್ಕೆ ಬಂದಿದ್ದೇವೆ ಎಂಬುದನ್ನು ಹಿಂದಿನ ಅಂಕಣದಲ್ಲಿ ಪ್ರಸ್ತಾಪಿಸಿದ್ದೆ. ಹಿಸ್ಟರಿ ಎಂಬುದು ಸತ್ಯ ಘಟನೆಗಳನ್ನಾಧರಿಸಿದ ಕಥನವಾಗಿದೆ. ಹಾಗೆ ಭಾವಿಸಿಕೊಂಡಾಗ ಈ ಕೃತಿಗಳು ಕೂಡ ಮೂಲತಃ ಸತ್ಯಕಥೆಗಳಾಗಿದ್ದು, ಕಾಲಾಂತರದಲ್ಲಿ ಅವುಗಳ ಜೊತೆಗೆ ಕಟ್ಟುಕಥೆಗಳು ಬೆರೆತುಕೊಂಡಿವೆ, ಸತ್ಯದ ಜೊತೆಗೆ ಮಿಥ್ಯ ಬೆರೆತುಕೊಂಡಿದೆ ಎಂಬ ಧೋರಣೆ ಸ್ವಾಭಾವಿಕವಾಗಿಯೇ ಹುಟ್ಟುತ್ತದೆ. ರಾಮಾಯಣ ಮಹಾಭಾರತಗಳಲ್ಲಿ ಸತ್ಯಕಥೆಯನ್ನು ಸುಳ್ಳು ಕಥೆಗಳಿಂದ ಬೇರ್ಪಡಿಸುವ ಪ್ರಶ್ನೆ ಈ ಹಿನ್ನೆಲೆಯಿಂದ ಹುಟ್ಟಿಕೊಳ್ಳುತ್ತವೆ. ಈ ಕಾಯಕಕ್ಕೆ ತೊಡಗಿದ ಯಾರೇ ಆದರೂ ಅವುಗಳನ್ನು ಹಿಸ್ಟರಿಗಳು ಎಂಬುದಾಗಿ ನಂಬಿದ್ದಾರೆ.

ಮಹಾಭಾರತ ಹಾಗೂ ರಾಮಾಯಣಗಳ ಸತ್ಯವನ್ನು ಶೋಧಿಸುವುದೆಂದರೆ ನಾವು ಏನು ಭಾವಿಸಿಕೊಂಡಿದ್ದೇವೆ? ಅದು ಹಿಸ್ಟರಿಯ ಸತ್ಯ. ಅಂದರೆ ಈ ಕೃತಿಗಳಲ್ಲಿ ಉಲ್ಲೇಖಿತವಾದ ಘಟನೆಗಳು, ಸ್ಥಳಗಳು ಹಾಗೂ ಪಾತ್ರಗಳು ನಿಜವಾಗಿಯೂ ಭೂಮಿಯ ಮೇಲೆ ಇದ್ದವು ಅಥವಾ ನಡೆದವು ಅಂತ ಅರ್ಥ. ಅಂದರೆ ರಾಮ, ರಾವಣ, ಕೃಷ್ಟ್ಣ, ಅರ್ಜುನ, ದ್ರೌಪದಿ ಇವರೆಲ್ಲ ನಿಜವಾಗಿಯೂ ಒಂದು ಕಾಲದಲ್ಲಿ ಭೂಮಿಯ ಮೇಲೆ ಇದ್ದರು. ಹಸ್ತಿನಾವತಿ, ಲಂಕೆ, ಇತ್ಯಾದಿಗಳೂ ಇದ್ದವು. ಕುರುಕ್ಷೇತ್ರ ಯುದ್ಧ, ಸೇತುಬಂಧನ, ಸರ್ಪಯಾಗ, ಇತ್ಯಾದಿ ಘಟನೆಗಳೆಲ್ಲವೂ ನಿಜವಾಗಿ ಒಂದು ಕಾಲದಲ್ಲಿ ನಡೆದವು, ಇತ್ಯಾದಿಗಳು ಈ ಹಿಸ್ಟರಿಯ ಸತ್ಯಗಳು. ಅಂದರೆ ಒಂದು ಕೃತಿಯನ್ನು ತೆಗೆದುಕೊಂಡು ಅದರ ಪಾತ್ರ, ಘಟನೆಗಳೆಲ್ಲವೂ ನಿಜವಾಗಿ ಇದ್ದವು ಎಂದು ತೋರಿಸುವುದೇ ಅವು ಸತ್ಯ ಎಂಬುದನ್ನು ನಿದರ್ಶಿಸಲಿಕ್ಕೆ ಮುಖ್ಯವಾಗುತ್ತವೆ. ಈ ಸತ್ಯವನ್ನು ತೋರಿಸುವುದಕ್ಕೆ ಅವುಗಳು ಯಾವ ಕಾಲದಲ್ಲಿ ನಡೆದವು ಎಂಬುದನ್ನು ನಿರ್ದಿಷ್ಟಪಡಿಸುವುದೂ ಮುಖ್ಯ.
ಈ ಹಂತದಲ್ಲಿ ಏಳುವ ಎರಡು ಪ್ರಶ್ನೆಗಳಿಗೆ ನಮಗಿನ್ನೂ ಉತ್ತರ ಸಿಕ್ಕಿಲ್ಲ. ಮೊದಲನೆಯದೆಂದರೆ ಈ ಕಥೆಗಳನ್ನು ನಮಗೆ ದಾಟಿಸಿದ ನಮ್ಮ ಪೂರ್ವಜರೇಕೆ ಈ ಘಟನೆಗಳ ಸತ್ಯಾಸತ್ಯತೆಯ ಕುರಿತು ದಿವ್ಯ ಅಜ್ಞಾನವನ್ನು ಬಿಟ್ಟು ಹೋಗಿದ್ದಾರೆ? ಎರಡನೆಯದೆಂದರೆ ಅವು ನಿಜವಾಗಿಯೂ ನಡೆದಿವೆ ಎಂಬುದು ನಮಗೇಕೆ ಮುಖ್ಯವಾಗಬೇಕು? ಮೊದಲನೆಯ ಪ್ರಶ್ನೆಗೆ ಉತ್ತರಗಳನ್ನು ನೀಡಲು ವಿದ್ವಾಂಸರು ಪ್ರಯತ್ನಿಸಿದ್ದರೂ ಯಾವುದೂ ಸಮರ್ಪಕವಾಗಿಲ್ಲ. ಬ್ರಾಹ್ಮಣ ಪುರೋಹಿತಶಾಹಿಗಳು ತಮ್ಮ ಸ್ವಾರ್ಥಕ್ಕಾಗಿ ಕಟ್ಟು ಕಥೆಗಳನ್ನು ಸೇರಿಸಿದ್ದಾರೆ, ಭಾರತೀಯರು ಬೌದ್ಧಿಕವಾಗಿ ಬಾಲಿಶ ಅವಸ್ಥೆಯಲ್ಲಿರುವುದರಿಂದ ಅವರಿಗೆ ಹಿಸ್ಟರಿ-ಕಟ್ಟುಕಥೆಗಳ ನಡುವಿನ ವ್ಯತ್ಯಾಸ ತಿಳಿದಿಲ್ಲ, ಇತ್ಯಾದಿ ವಿವರಣೆಗಳಿವೆ. ಇವುಗಳನ್ನು ಒಪ್ಪಿಕೊಂಡರೆ ನಮ್ಮ ಪೂರ್ವಜರಿಗೆ ದುರುದ್ದೇಶವನ್ನು ಅಥವಾ ಬುದ್ಧಿಮಾಂದ್ಯತೆಯನ್ನು ಆರೋಪಿಸಬೇಕಾಗುತ್ತದೆ. ಹಾಗಾಗಿ ಇದು ಅಸಾಧ್ಯ. ಎರಡನೆಯ ಪ್ರಶ್ನೆಯನ್ನು ನಾವಿನ್ನೂ ಕೇಳಿಕೊಂಡೇ ಇಲ್ಲ. ಅದೆಂದರೆ, ಈ ರಾಮ ಅಥವಾ ಧರ್ಮರಾಯರು ನಿಜವಾಗಿಯೂ ಇದ್ದರೇ ಎಂಬ ಮಾಹಿತಿಯು ರಾಮಾಯಣ ಅಥವಾ ಮಹಾಭಾರತವನ್ನು ಅರ್ಥಮಾಡಿಕೊಳ್ಳಲು ಅನಿವಾರ್ಯವೆ? ಅನಿವಾರ್ಯ ಅಂತಾದರೆ ಬ್ರಿಟಿಷ್ ಪೂರ್ವದ ಸಹಸ್ರಾರು ವರ್ಷಗಳಲ್ಲಿ ಭಾರತೀಯರು ಈ ಪ್ರಶ್ನೆಗಳನ್ನು ಕೇಳಿಯೇ ಇಲ್ಲ, ಹಾಗಾಗಿ ಅವರು ಈ ಕೃತಿಗಳನ್ನು ಅರ್ಥಮಾಡಿಕೊಂಡೇ ಇಲ್ಲ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ಇಲ್ಲ, ಅವರು ಅರ್ಥ ಮಾಡಿಕೊಂಡಿದ್ದರು ಅಂತಾದರೆ ಈ ಕೃತಿಗಳಲ್ಲಿ ಬರುವ ಪಾತ್ರಗಳು ಹಾಗೂ ಘಟನೆಗಳು ನಿಜವೇ ಸುಳ್ಳೇ ಎಂಬ ಜಿಜ್ಞಾಸೆಯು ನಮ್ಮವರಿಗಿಂದು ಮಹತ್ವದ್ದೆಂದು ಏಕೆ ಅನ್ನಿಸುತ್ತದೆ?

ಏಕೆ ಈ ಮೇಲಿನ ಫಜೀತಿಗಳು ಏಳುತ್ತವೆಯೆಂದರೆ ಇವು ರಾಮಾಯಣ ಮಹಾಭಾರತಗಳನ್ನು ರಚಿಸಿದ ಸಂಸ್ಕೃತಿಯ ಪ್ರಶ್ನೆಗಳಲ್ಲ. ನಾವು ಹಿಸ್ಟರಿಯ ಪ್ರಶ್ನೆಗಳನ್ನು ತಂದು ಈ ಕೃತಿಗಳಿಗೆ ಆರೋಪಿಸುತ್ತಿದ್ದೇವೆ. ಹಿಸ್ಟರಿಯಲ್ಲಿ ನಿಜ ಸುಳ್ಳಿನ ಪ್ರಶ್ನೆಗಳು ಏಕೆ ಮಹತ್ವ ಪಡೆಯುತ್ತವೆಯೆಂಬುದಕ್ಕೆ ಪಾಶ್ಚಾತ್ಯರಿಗೆ ಅವರದೇ ಆದ ಕಾರಣಗಳಿವೆ. ಪ್ರಾಚೀನ ಗ್ರೀಕರು ಹಿಸ್ಟರಿಗೂ ಮಿಥ್ಗಳಿಗೂ ಒಂದು ವ್ಯತ್ಯಾಸವನ್ನು ಗುರುತಿಸಿದ್ದರು ಹಾಗೂ ಮಿಥ್ಗಳು ಸುಳ್ಳುಕಥೆಗಳು, ಹಿಸ್ಟರಿ ಸತ್ಯಕಥೆ ಎಂಬುದಾಗಿ ಬೇರ್ಪಡಿಸಿದ್ದರು. ಹಿಸ್ಟೋರಿಯಾ ಎಂದರೆ ಸತ್ಯದ ಕುರಿತ ವಿಚಾರಣೆ. ಅದರ ಜೊತೆಗೇ ಪ್ಲೇಟೋನಂಥ ದಾರ್ಶನಿಕರು ಸುಳ್ಳುಗಳು ಜನರನ್ನು ದಾರಿ ತಪ್ಪಿಸುತ್ತವೆ, ಗ್ರೀಕರ ಜೀವನವು ಸತ್ಯವನ್ನಾಧರಿಸಿ ಇರಬೇಕು ಎಂಬುದಾಗಿ ಪ್ರತಿಪಾದಿಸಿದ್ದರು. ಹಾಗಾಗಿ ಇಂಥ ಸುಳ್ಳು ಕಥೆಗಳನ್ನು ಹೇಳುವವರನ್ನು ಗಡೀಪಾರು ಮಾಡಬೇಕೆಂದೂ ಅವನು ವಾದಿಸಿದನು. ಅವರನ್ನನುಸರಿಸಿ ಹಿಸ್ಟರಿ ಎಂಬುದು ಮಾತ್ರವೇ ಗತಕಾಲದ ಕುರಿತು ನಂಬಿಕೊಳ್ಳಬಹುದಾದ ಕಥನವಾಗಿದೆ ಎಂಬುದಾಗಿ ಪ್ರಾಚೀನ ರೋಮನ್ನರೂ ಕೂಡ ತಮ್ಮ ಗತಕಾಲದ ಕುರಿತು ಅಧಿಕೃತ ಮಾಹಿತಿಗಾಗಿ ಹಿಸ್ಟರಿಗಳನ್ನು ಬರೆದರು.

ಪ್ರಾಚೀನ ರೋಮನ್ನರ ಪಟ್ಟಣಗಳಲ್ಲಿಯೇ ಸೆಮೆಟಿಕ್ ರಿಲಿಜನ್ನುಗಳ ಅನುಯಾಯಿಗಳಾದ ಯಹೂದಿಗಳು ಹಾಗೂ ಕ್ರೈಸ್ತರು ಕೂಡ ತಮ್ಮ ಅಸ್ತಿತ್ವವನ್ನು ರೂಪಿಸಿಕೊಂಡರು. ಆ ಸಂದರ್ಭದಲ್ಲಿ ರೋಮನ್ನರಿಗೂ, ಸೆಮೆಟಿಕ್ ರಿಲಿಜನ್ನುಗಳಿಗೂ ಒಂದು ಸಂಘರ್ಷ ಪ್ರಾರಂಭವಾಯಿತು. ಏತಕ್ಕೆಂದರೆ, ರೋಮನ್ನರ ನಗರ ದೇವತೆಗಳ ಪೂಜೆ, ಉತ್ಸವಾದಿಗಳಲ್ಲಿ ಭಾಗವಹಿಸಲು ಯೆಹೂದಿಗಳು ಹಾಗೂ ಕ್ರೈಸ್ತರು ನಿರಾಕರಿಸುತ್ತಿದ್ದರು. ರೋಮನ್ನರ ಪ್ರಕಾರ ನಗರಕ್ಕೆ ಒಳ್ಳೆಯದಾಗಬೇಕಾದರೆ ನಗರವಾಸಿಗಳೆಲ್ಲರೂ ಈ ದೇವತೆಗಳ ಪೂಜೆಯಲ್ಲಿ ಪಾಲ್ಗೊಳ್ಳಬೇಕು, ಅದು ನಗರವಾಸಿಗಳ ಕರ್ತವ್ಯ. ಕ್ರೈಸ್ತ, ಯೆಹೂದಿಗಳ ಪ್ರಕಾರ ತಮ್ಮ ಗಾಡ್ನನ್ನು ಬಿಟ್ಟು ಬೇರೆ ಯಾವ ದೇವತೆಯನ್ನೂ ಪೂಜಿಸುವಂತಿಲ್ಲ ಎಂಬುದಾಗಿ ತಮ್ಮ ರಿಲಿಜನ್ನು ಕಟ್ಟುಪಾಡು ಮಾಡಿದೆ. ಹಾಗಾಗಿ ರೋಮನ್ ದೇವತೆಗಳನ್ನು ಪೂಜಿಸಿದರೆ ತಮ್ಮ ಗಾಡ್ ನನ್ನು ವಿರೋಧಿಸಿದಂತೇ ಆಗುತ್ತದೆ ಹಾಗೂ ಅದು ಪಾಪವಾಗುತ್ತದೆ. ರೋಮನ್ನರಿಗೆ ಈ ಪಟ್ಟು ಹೊಸದು, ಏಕೆಂದರೆ ಅವರು ತಮ್ಮ ನಗರಗಳಲ್ಲಿ ಅನೇಕ ದೇವತೆಗಳನ್ನು ಪೂಜಿಸುತ್ತಿದ್ದರು. ಹೊಸ ಹೊಸ ದೇವತೆಗಳೂ ಆ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದವು. ಒಂದು ದೇವತೆಯನ್ನು ಪೂಜಿಸಿದರೆ ಮತ್ತೊಂದಕ್ಕೆ ಸಿಟ್ಟು ಬರುವ ಕಥೆಯ ಮೇಲೆ ಅವರಿಗೆ ವಿಶ್ವಾಸ ಬರಲಿಲ್ಲ. ಅದಕ್ಕೂ ಮುಖ್ಯವಾಗಿ ಯೆಹೂದಿಗಳು ಹಾಗೂ ಕ್ರೈಸ್ತರ ಪರಂಪರೆ ಅಲ್ಲಿ ಯಾರಿಗೂ ಅಷ್ಟಾಗಿ ಗೊತ್ತಿರಲಿಲ್ಲ. ಹಾಗಾಗಿ ಕ್ರೈಸ್ತರು ಹಾಗೂ ಯೆಹೂದಿಗಳು ಸಲ್ಲದ ಕಾರಣಗಳನ್ನು ಹೇಳಿ ತಮ್ಮ ದೇವತೆಗಳಿಗೆ ಅಗೌರವ ತೋರಿಸುತ್ತಿದ್ದಾರೆ ಎಂಬುದಾಗಿ ಭಾವಿಸಿ ಅವರ ಜೊತೆಗೆ ಸಂಘರ್ಷಕ್ಕಿಳಿದರು.

ಈ ಮೇಲಿನ ಫಜೀತಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಯೆಹೂದಿಗಳು ತಮ್ಮದು ಪ್ರಾಚೀನ ಸಂಪ್ರದಾಯ ಎಂಬುದನ್ನು ಹಳೆ ಒಡಂಬಡಿಕೆಯ ಕಥೆಗಳನ್ನು ಉದಾಹರಿಸಿ ರೋಮನ್ನರಿಗೆ ಮನದಟ್ಟು ಮಾಡಲೆತ್ನಿಸಿದರು. ರೋಮನ್ನರು ಎಲ್ಲಾ ಸಂಪ್ರದಾಯಗಳನ್ನು ಗೌರವಿಸುತ್ತಿದ್ದರು. ಸಂಪ್ರದಾಯವೆಂದರೆ ಪೂರ್ವಜರಿಂದ ದತ್ತವಾದ ಆಚರಣೆಗಳು. ಪೂರ್ವಜರು ಅಷ್ಟೆಲ್ಲ ತಲೆಮಾರುಗಳ ವರೆಗೆ ಅವನ್ನು ದಾಟಿಸಿಕೊಂಡು ಬಂದಿದ್ದಾರೆಂಬುದೇ ಅವು ಆ ಸಮುದಾಯಕ್ಕೆ ಒಳ್ಳೆಯದನ್ನು ಮಾಡಿವೆ ಎಂಬುದಕ್ಕೆ ಪ್ರಮಾಣ. ಅಂದ ಮೇಲೆ ಅವು ತಮಗೆ ಒಪ್ಪಿಗೆಯಾಗಲಿ ಬಿಡಲಿ, ಅದು ಪೂರ್ವಜರಿಂದ ದತ್ತವಾಗಿ ಬಂದ ಪಕ್ಷದಲ್ಲಿ ಆಯಾ ಸಮುದಾಯಗಳು ಒಳ್ಳೆಯದು ಎಂದು ಭಾವಿಸಿದ್ದಲ್ಲಿ ಅದನ್ನು ತಾವೂ ಗೌರವಿಸಲೇ ಬೇಕು ಎಂಬುದು ರೋಮನ್ನರ ತರ್ಕ. ಈ ತರ್ಕವೇ ರೋಮನ್ನರ ಸಾಮ್ರಾಜ್ಯದಲ್ಲಿ ಸಂಪ್ರದಾಯಗಳ ಸಹಬಾಳ್ವೆಗೆ ಒಂದು ತಳಹದಿಯನ್ನು ನಿರ್ಮಿಸಿತ್ತು. ಯೆಹೂದಿಗಳು ತಮ್ಮದು ಪ್ರಾಚೀನ ಸಂಪ್ರದಾಯ ಎಂಬುದನ್ನು ನಿದರ್ಶಿಸಿದಾಗ ಅವರ ಕುರಿತಂತೇ ರೋಮನ್ನರು ತಮ್ಮ ಧೋರಣೆಯನ್ನು ಸಡಿಲಿಸಿದರು.

ಆದರೆ ಇದರಿಂದ ಕ್ರೈಸ್ತರ ಸಮಸ್ಯೆ ಬಗೆಹರಿಯಲಿಲ್ಲ. ಅವರೂ ತಮ್ಮದು ಯೆಹೂದಿಗಳಂತೆಯೇ ಪ್ರಾಚೀನ ಸಂಪ್ರದಾಯವೆಂಬುದನ್ನು ನಿದರ್ಶಿಸಬೇಕಿತ್ತು. ಅವರಿಗಿದ್ದ ಒಂದೇ ಕಥೆಯೆಂದರೆ ಸೃಷ್ಟಿಕರ್ತನಾದ ಗಾಡ್ ಎಂಬವನು ಯೆಹೂದಿಗಳ 13 ಬುಡಕಟ್ಟುಗಳಲ್ಲಿ ಹುಟ್ಟಿಬರುತ್ತೇನೆಂದು ಮಾತುಕೊಟ್ಟದ್ದ ಪ್ರಕಾರ ಜೀಸಸ್ ಕ್ರೈಸ್ತನಾಗಿ ಹುಟ್ಟಿ ಬಂದಿದ್ದಾನೆ, ಅವನ ಅನುಯಾಯಿಗಳೇ ತಾವು. ಈ ಕಥೆಯು ರೋಮಿನ ನಗರಗಳಲ್ಲಿ ಅವರನ್ನೊಂದು ಬಿಟ್ಟರೆ ಉಳಿದವರಿಗೆ ಗೊತ್ತಿರಲಿಲ್ಲ. ಅಂದರೆ ಯೆಹೂದಿಗಳ ಹಳೇ ಒಡಂಬಡಿಕೆಯ ಕಥೆಯನ್ನು ತಮ್ಮದೆಂದು ಹೇಳಿಕೊಳ್ಳದಿದ್ದರೆ ಅವರಿಗೆ ತಮ್ಮದಾದ ಪರಂಪರೆಯೇ ಇರಲಿಲ್ಲ. ಆದರೆ ಯೆಹೂದಿಗಳು ಅದನ್ನು ಈಗಾಗಲೇ ತಮ್ಮದೆಂದು ಹೇಳಿಕೊಂಡಿದ್ದರು. ಈ ಇಕ್ಕಟ್ಟಿಗೆ ಸಿಲುಕಿದ ಕ್ರೈಸ್ತರು ಅದರಿಂದ ಹೊರಬರುವ ಪ್ರಯತ್ನವಾಗಿ ಈ ಮುಂದಿನ ಹೆಜ್ಜೆಗಳನ್ನು ಇರಿಸಿದರು: 1) ತಮ್ಮದು ಸಂಪ್ರದಾಯವೇ ಅಲ್ಲ, ಅದು ರಿಲಿಜನ್ನು, ಹಾಗಾಗಿಯೇ ಶ್ರೇಷ್ಠ ಎಂಬುದಾಗಿ ವಾದಮಾಡಿದ್ದು. ಏಕೆಂದರೆ ಸಂಪ್ರದಾಯಗಳು ಹಿಂದಿನವರ ಅಂಧಾನುಕರಣೆಯೇ ಹೊರತೂ ಯಾವುದೇ ಸತ್ಯದ ನೆಲೆಗಟ್ಟಿನಿಂದ ಪ್ರಮಾಣಿತವಾದವುಗಳಲ್ಲ. ತಮ್ಮ ಆಚರಣೆಗಳು ಸತ್ಯ ಘಟನೆಯನ್ನು ಆಧರಿಸಿವೆ ಹಾಗಾಗಿ ಸಂಪ್ರದಾಯಗಳಿಗಿಂತಲೂ ಹೆಚ್ಚು ವಿಶ್ವಾಸಾರ್ಹವಾಗಿವೆ. 2) ತಮ್ಮದು ಸತ್ಯ ಘಟನೆ ಎಂಬುದನ್ನು ದೃಷ್ಟಾಂತ ಪಡಿಸಲು ತಮ್ಮದೇ ಹಿಸ್ಟರಿಯನ್ನು ರಚಿಸಿದ್ದು.

ಹಿಸ್ಟರಿಯೆಂಬುದು ಗತಕಾಲದ ಅಧಿಕೃತ ಜ್ಞಾನ ಎಂಬ ನಂಬಿಕೆಯನ್ನು ಹೊಂದಿದ್ದ ರೋಮನ್ನರ ಸಮಾಜದಲ್ಲಿ ಕ್ರೈಸ್ತರು ತಮ್ಮ ಸಮರ್ಥನೆಗಾಗಿ ಈ ಹಿಸ್ಟರಿಯನ್ನೇ ತಮ್ಮದನ್ನಾಗಿ ಮಾಡಿಕೊಂಡರು. ಆದರೆ ಅವರೇನೂ ಗ್ರೀಕರ ಹಾಗೆ ಸಾಕ್ಷ್ಯಾಧಾರಗಳನ್ನು ಪರೀಕ್ಷಿಸಿ ಕಂಡುಕೊಂಡ ನಿಜಗಳನ್ನು ಆಧರಿಸಿ ತರ್ಕಿಸಲಿಲ್ಲ. ಬದಲಾಗಿ ತಾವು ಹೇಳಿಕೊಂಡು ಬಂದ ಕಥೆಯೇ ನಿಜ ಎಂಬುದಾಗಿ ಹೇಳಿದರು, ಅದು ನಿಜವೇ ಏಕೆಂದರೆ ಈ ಸೃಷ್ಟಿಯನ್ನು ಮಾಡಿದವನೇ ಸ್ವತಃ ಜೀಸಸ್ನಿಗೆ ಅದನ್ನು ಹೇಳಿದ್ದಾನೆ. ಅದೇ ಈ ನಿಜಕ್ಕೆ ಪ್ರಮಾಣ. ಈ ಪ್ರಮಾಣದ ಪ್ರಕಾರ ಇಡೀ ಬೈಬಲ್ಲಿನ ಕಥೆಯೇ ಸತ್ಯ. ಹೀಗೆ ಕ್ರಿಶ್ಚಿಯಾನಿಟಿಯು ಬೈಬಲ್ಲಿನ ಕಥೆಯು ನಿಜವಾದ ಕಾರಣದಿಂದಲೇ ಕ್ರೈಸ್ತರ ರಿಲಿಜನ್ನು ಕೂಡ ಸತ್ಯ ಎನ್ನುತ್ತದೆ. ಹಾಗಾಗಿ ಈ ಬೈಬಲ್ಲು ಸುಳ್ಳಾದರೆ ಕ್ರಿಶ್ಚಿಯಾನಿಟಿಯೇ ಅಪ್ರಸ್ತುತವಾಗುತ್ತದೆ. ಈ ಮಟ್ಟಕ್ಕೆ ಹಿಸ್ಟರಿ ನಿರ್ಣಾಯಕವಾದುದರಿಂದ ತಮ್ಮ ಕಥೆಯು ಸತ್ಯವೋ ಸುಳ್ಳೋ ಎಂಬುದು ಕ್ರಿಶ್ಚಿಯಾನಿಟಿಯ ಮೇಲಿನ ನಂಬಿಕೆಯ ಪ್ರಶ್ನೆಯಾಗಿ ಮಾರ್ಪಡುತ್ತದೆ. ಇದು ಕೇವಲ ಕ್ರಿಶ್ಚಿಯಾನಿಟಿಯದೊಂದೇ ಸಮಸ್ಯೆಯಲ್ಲ. ಜೂಡಾಯಿಸಂ ಹಾಗೂ ಇಸ್ಲಾಂಗಳೂ ಕೂಡ ತಂತಮ್ಮ ಕಥೆಗಳು ನಿಜಘಟನೆಗಳೇ ಎಂದು ನಂಬುವುದು ತಮಗೆ ನಿರ್ಣಾಯಕ ಎಂದುಕೊಂಡಿವೆ. ಹಾಗಾಗೇ ಹಿಸ್ಟರಿಗಾಗಿ ಹೊಡೆದಾಡುವ, ಹಿಸ್ಟರಿಗೆ ಸಂಬಂಧಪಟ್ಟ ಸ್ಥಳಗಳನ್ನು ಸಂರಕ್ಷಿಸಿಕೊಳ್ಳುವುದನ್ನು ಸೆಮೆಟಿಕ್ ರಿಲಿಜನ್ನುಗಳು ನಿರ್ಣಾಯಕ ಎಂದುಕೊಳ್ಳುತ್ತವೆ. ವರ್ತಮಾನವನ್ನು ಹಿಸ್ಟರಿಯ ಸತ್ಯಗಳ ಮೂಲಕ ಪ್ರಮಾಣೀಕರಿಸುವುದು ಅವುಗಳಿಗೆ ಸಹಜವಾಗಿ ಕಾಣಿಸುತ್ತದೆ.

ಈ ಮಧ್ಯೆ ಯುರೋಪಿನಲ್ಲಿ ಪ್ರಚಲಿತದಲ್ಲಿ ಬಂದ ಪ್ರೊಟೆಸ್ಟಾಂಟ್ ಪಂಥದವರು ಕ್ಯಾಥೋಲಿಕ್ ಕ್ರೈಸ್ತರು ಬರೆದುಕೊಂಡು ಬಂದಿದ್ದ ಅತಿಮಾನುಷ ಕಥೆಗಳು ನಿಜವಾಗಲಿಕ್ಕೆ ಸಾಧ್ಯವಿಲ್ಲ ಎಂದರು. ಕ್ರಿಸ್ತನ ನಂತರ ಯಾರೂ ಅತಿಮಾನುಷ ಜೀವಿಗಳಿಲ್ಲ ಹಾಗಾಗಿ ಬೈಬಲ್ಲೊಂದನ್ನು ಬಿಟ್ಟು ಎಲ್ಲವೂ ಹುಲುಮಾನವರ ವೃತ್ತಾಂತಗಳೇ ಆಗಿವೆ. ಮನುಷ್ಯನಿಗೆ ಏನು ಸಹಜವೋ ಅದನ್ನು ಮಾತ್ರ ಅವರು ಮಾಡಿದ್ದಾರೆ. ಹಾಗಾಗಿ ಮನುಷ್ಯರ ಹಿಸ್ಟರಿಯು ಮನುಷ್ಯ ಸಾಧನೆಗಳ ನೈಜ ದಾಖಲೆಗಳಾಗಿರಲೇಬೇಕು ಎಂಬುದಾಗಿ ಅವರು ಆಗ್ರಹಿಸಿದರು. ಈ ರೀತಿಯಲ್ಲಿ ಹಿಸ್ಟರಿಯ ಸತ್ಯವನ್ನು ನೈಜ ವ್ಯಕ್ತಿ ಹಾಗೂ ಘಟನೆಗಳ ನೆಲೆಯಲ್ಲಿ ತಂದು ನಿಲ್ಲಿಸಿದರು.

ಪಾಶ್ಚಾತ್ಯ ಸೆಕ್ಯುಲರ್ ಹಿಸ್ಟರಿಯು ನಿಜದ ಕುರಿತ ಪ್ರೊಟೆಸ್ಟಾಂಟ್ ಧೋರಣೆಯನ್ನೇ ಸ್ವೀಕರಿಸಿ ನಿಜಘಟನೆಗಳನ್ನು ಶೋಧಿಸುವ ವೈಜ್ಞಾನಿಕ ವಿಧಾನಗಳನ್ನು, ಸಿದ್ಧಾಂತಗಳನ್ನು ಬೆಳೆಸಿತು. ಆದರೆ ಸೆಕ್ಯುಲರ್ ಹಿಸ್ಟರಿಯ ಸಿದ್ಧಾಂತಗಳು ಮಾತ್ರ ಮಾನವರ ಕುರಿತ ಥಿಯಾಲಜಿಯ ಗ್ರಹಿಕೆಗಳನ್ನು ಆಧರಿಸಿಯೇ ಇದ್ದವು. ಅದು ಹಿಸ್ಟರಿ ಎಂಬುದು ಗಾಡ್ನ ಯೋಜನೆಯಲ್ಲ, ಅದು ನಿಸರ್ಗದ ಅಥವಾ ಮಾನವನ ಯೋಜನೆ ಎಂಬ ತಿದ್ದುಪಡಿಯನ್ನು ಮಾಡಿತು ಅಷ್ಟೆ. ಜ್ಞಾನೋದಯ ಯುಗದಿಂದ ಬರೆದುಕೊಂಡು ಬಂದ ಈ ಸೆಕ್ಯುಲರ್ ಹಿಸ್ಟರಿಗೆ ನಿಸರ್ಗ ಅಥವಾ ಮಾನವನ ಯೋಜನೆ ಏನು ಎಂಬುದರ ಕುರಿತು ಒಮ್ಮತ ಹಾಗೂ ಸ್ಪಷ್ಟತೆ ಇದುವರೆಗೂ ಬಂದಿಲ್ಲ. ಆದರೆ ಗತಕಾಲದ ನಿಜ ಘಟನೆಗಳನ್ನು ಕಂಡುಹಿಡಿದು ಹಿಸ್ಟರಿಯನ್ನು ರಚಿಸಿಕೊಳ್ಳುವುದು ಮಾನವರ ವರ್ತಮಾನ ಹಾಗೂ ಭವಿಷ್ಯಕ್ಕೆ ಅತ್ಯಗತ್ಯ ಎಂಬ ನಂಬಿಕೆ ಅದರಿಂದ ವಿಚಲಿತವಾಗಿಲ್ಲ. ಹಾಗಾಗಿ ಹಿಸ್ಟರಿ ಬರವಣಿಗೆ ಎಂಬುದು ಅಂತಿಮವಾಗಿ ನಿಜ ಘಟನೆಗಳ ಶೋಧನೆಯಾಗಿ ಮಹತ್ವಪಡೆಯಿತು. ಅದು ವರ್ತಮಾನಕ್ಕೆ ಅತ್ಯಂತ ಮುಖ್ಯ ಎಂಬುದು ಅವರ ನಂಬಿಕೆ, ಆದರೆ ಅದು ಹೇಗೆಂಬುದು ಬುದ್ಧಿಗೆ ನಿಲುಕಿಲ್ಲ.

ಪಾಶ್ಚಾತ್ಯರು ಭಾರತದ ಹಿಸ್ಟರಿಯನ್ನು ರಚಿಸುವ ಸಂದರ್ಭದಲ್ಲಿ ಇಂಥ ಸತ್ಯಗಳಿಗಾಗಿ ನಮ್ಮ ಗ್ರಂಥಗಳನ್ನು ತಡಕಾಡಿದರು. ವಿಭಿನ್ನ ಸಂಸ್ಕೃತಿಗಳು ದಾಟಿಸಿಕೊಂಡು ಬಂದ ಕಥೆಗಳು ಆಯಾ ಸಂಸ್ಕೃತಿಗಳ ಹಿಸ್ಟರಿಯನ್ನು ತಿಳಿಸುತ್ತವೆ, ಹಾಗಾಗಿ ಇಂಥ ಗ್ರಂಥಗಳಲ್ಲಿ ಬರುವ ಕಥೆಗಳು ನಿಜವಾಗಿರಬೇಕು ಇಲ್ಲ ಸುಳ್ಳಾಗಿರಬೇಕು ಎಂಬ ಧೋರಣೆಯಿಂದ ಅವನ್ನು ನೋಡಿದರು. ಇವೆಲ್ಲ ಸುಳ್ಳು ಎಂಬ ನಿರ್ಣಯಕ್ಕೆ ಬಂದ ಮೆಕಾಲೆಯಂಥ ಕೆಲವರು ಅವೆಲ್ಲ ಜ್ಞಾನವೇ ಅಲ್ಲ, ನಿಷ್ಪ್ರಯೋಜಕ ಎಂಬುದಾಗಿ ಪರಿಗಣಿಸಿ ಅವನ್ನು ತಿರಸ್ಕರಿಸುವ ಸಲಹೆಯನ್ನು ನೀಡಿದರು. ಆದರೆ ಇನ್ನೂ ಕೆಲವರು ಈ ಕಥೆಗಳು ಸುಳ್ಳಿನ ಹೊದಿಕೆಯೊಳಗೆ ಪರೋಕ್ಷವಾಗಿ ಗತಕಾಲದ ನಿಜಘಟನೆಗಳನ್ನು ಬಚ್ಚಿಟ್ಟುಕೊಂಡಿವೆ ಎಂಬುದಾಗಿ ನಿರ್ಣಯಿಸಿ ಅವುಗಳನ್ನು ಪರಾಮರ್ಶೆಗೊಡ್ಡಿದರು. ಅವರನ್ನನುಸರಿಸಿ ಭಾರತೀಯರೂ ಕೂಡ ಈ ಪ್ರಾಚೀನ ಕಥೆಗಳಲ್ಲಿ ಸತ್ಯ ಘಟನೆಗಳು ಅಡಕವಾಗಿವೆ ಎಂಬ ಧೋರಣೆಯನ್ನು ರೂಢಿಸಿಕೊಂಡಿದ್ದಾರೆ.

ನಮ್ಮ ಪ್ರಾಚೀನ ಗ್ರಂಥಗಳನ್ನು ಹಿಸ್ಟರಿಗೆ ಸಮೀಕರಿಸಿದಾಗ ಅವನ್ನು ನೋಡುವ ಏಕೈಕ ವಿಧಾನವೆಂದರೆ ಅವುಗಳಲ್ಲಿ ಬರುವ ಘಟನೆಗಳು ನಿಜವೋ ಸುಳ್ಳೋ ಎಂಬುದು. ಒಂದೊಮ್ಮೆ ಅವು ಹಿಸ್ಟರಿಗಳು ಅಲ್ಲದಿದ್ದರೆ? ಅವು ಬೇರೇನನ್ನೂ ತಿಳಿಸಲಿಕ್ಕಾಗಿ ರಚನೆಯಾಗಿದ್ದರೆ? ಅವುಗಳ ನಿಜ ಸುಳ್ಳುಗಳ ಕುರಿತ ಬಡಿದಾಟವು ವ್ಯರ್ಥವಾಗುತ್ತದೆಯಷ್ಟೇ ಅಲ್ಲ ಈ ಗ್ರಂಥಗಳ ಜೊತೆಗೆ ಇರುವ ಪಾರಂಪರಿಕ ಸಂಬಂಧವನ್ನು ಕಡಿದುಕೊಳ್ಳುವುದರಿಂದ ಅವೂ ನಮ್ಮ ಪಾಲಿಗೆ ಅರ್ಥಹೀನವಾಗುತ್ತವೆ.

ಪ್ರೊ.ಎಸ್.ಎನ್.ಬಾಲಗಂಗಾಧರ 

ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಇಂದು ಸಾಮಾನ್ಯವಾಗಿ ನಮ್ಮ ಕಿವಿಗೆ ಬೀಳುವ ಒಂದು ಪ್ರಶ್ನೆಯೆಂದರೆ ‘ಭಾರತೀಯರಿಗೆ ಇತಿಹಾಸ ಪ್ರಜ್ಞೆ ಇದೆಯೆ?’ ಎಂಬುದು. ಈ ಪ್ರಶ್ನೆಗೆ ಇಲ್ಲ ಎಂಬುದಾಗಿ ಒಂದಷ್ಟು ಜನರು ಉತ್ತರಿಸಿದರೆ, ಇನ್ನೂ ಕೆಲವರು ಇದೆಯೆಂಬುದಾಗಿ ಶಪಥಮಾಡಿ ಹೇಳುತ್ತಾರೆ. ಆದರೆ ಈ ಚರ್ಚೆಯಲ್ಲಿ ತೊಡಗಿಕೊಂಡ ಎಷ್ಟು ಮಂದಿಗೆ ಈ ಪ್ರಶ್ನೆ ಅರ್ಥವಾಗಿದೆ ಎಂಬುದೇ ದೊಡ್ಡ ಯಕ್ಷಪ್ರಶ್ನೆಯಾಗಿದೆ. ಏಕೆಂದರೆ ನಮ್ಮ ಮಹಾಭಾರತ ರಾಮಾಯಣಗಳನ್ನು ಇತಿಹಾಸ ಎಂಬುದಾಗಿ ಪ್ರಾಚೀನ ಕಾಲದಿಂದಲೂ ಕರೆದುಕೊಂಡು ಬರಲಾಗಿದೆ. ಈ ಇತಿಹಾಸವೆಂದರೆ ಹಿಂದಿನ ಕಾಲದಲ್ಲಿ ನಡೆದಿವೆ ಎನ್ನಲಾದ ಘಟನೆಗಳು. ಅದರಲ್ಲೂ ‘ಹೀಗೇ ಇತ್ತು’ ಎಂದು ಖಚಿತವಾಗಿ ಹೇಳುವುದೇ ಇತಿಹಾಸದ ಶಬ್ದಾರ್ಥವಾಗಿದೆ. ಇದರ ಜೊತೆಗೇ ಚರಿತ ಎಂಬ ಪ್ರಕಾರವೂ ಭಾರತೀಯರಿಗೆ ಗೊತ್ತಿತ್ತು. ಹಿಂದೆ ಆಗಿಹೋದ ಮಹಾಪುರುಷರ ಜೀವನವನ್ನು ಚಿತ್ರಿಸುವುದೇ ಚರಿತದ ಉದ್ದೇಶ. ರಾಮ, ಕೃಷ್ಣರಂಥ ಅವತಾರ ಪುರುಷರೊಂದೇ ಅಲ್ಲದೇ ಹರ್ಷ, ವಿಕ್ರಮಾದಿತ್ಯರಂಥ ರಾಜರ ಕುರಿತೂ ಚರಿತಗಳು ರಚನೆಯಾಗಿವೆ. ಈ ರೀತಿಯಲ್ಲಿ ಕಳೆದು ಹೋದ ಕಾಲದ ಘಟನಾವಳಿಗಳನ್ನು ದಾಖಲಿಸುವ ವಿಭಿನ್ನ ಪ್ರಕಾರಗಳು ನಮ್ಮಲ್ಲಿ ಇದ್ದವು ಅಂತಾದರೆ ಇವರಿಗೆ ‘ಇತಿಹಾಸ ಪ್ರಜ್ಞೆ ಇದೆಯೆ?’ ಎಂಬ ಪ್ರಶ್ನೆ ಎಲ್ಲಿಂದ ಉದ್ಭವಿಸುತ್ತದೆ? ‘ಭಾರತೀಯರಿಗೆ ಇತಿಹಾಸ ಪ್ರಜ್ಞೆ ಇಲ್ಲ’ ಎಂಬುದಾಗಿ ತೀರ್ಮಾನಿಸಿದವರು ಈ ಪ್ರಶ್ನೆಗೆ ಉತ್ತರವನ್ನು ನೀಡುವುದಿರಲಿ ಪ್ರಶ್ನೆಯನ್ನೇ ಪರಿಗಣಿಸಿಲ್ಲ. ಇದಕ್ಕೆ ಸಕಾರಾತ್ಮಕವಾಗಿ ಉತ್ತರವನ್ನು ನೀಡಿದವರೂ ಕೂಡ ಈ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತಿದ್ದಾರೆ. ಏಕೆ ಎಂಬುದನ್ನು ಮುಂದೆ ನೋಡೋಣ.

ಈ ಮೇಲಿನ ವಿವಾದವು ಭಾರತೀಯರಿಗೆ ಹಿಸ್ಟರಿ ಎಂಬುದು ಗೊತ್ತಿದೆಯೋ ಇಲ್ಲವೊ ಎಂಬುದರ ಕುರಿತಾಗಿದೆ. ಹಿಸ್ಟರಿ ಎಂಬುದು ಪಾಶ್ಚಾತ್ಯ ನಾಗರೀಕತೆಯಲ್ಲಿ ಒಂದು ಪ್ರಮುಖವಾದ ಜ್ಞಾನವಾಗಿದೆ. ಗತಕಾಲದಲ್ಲಿ ನಿಜವಾಗಿಯೂ ಏನು ನಡೆಯಿತು ಎಂಬುದನ್ನು ತಿಳಿದುಕೊಳ್ಳುವುದೇ ಅದರ ಉದ್ದೇಶ. ನಿಜವನ್ನು ತಿಳಿದುಕೊಳ್ಳುವುದು ಹೇಗೆ ಎಂಬುದು ಹಿಸ್ಟರಿಗೆ ಒಂದು ಗಂಭೀರವಾದ ಪ್ರಶ್ನೆಯಾಗಿದೆ. ಹಾಗಾಗಿ ಅದು ಈ ಕುರಿತು ವೈಜ್ಞಾನಿಕ ವಿಧಾನಗಳನ್ನು ಬೆಳೆಸಿಕೊಂಡು ಬಂದಿದೆ. ಆಕರಗಳನ್ನು ಸಂಗ್ರಹಿಸುವುದು, ಅವುಗಳನ್ನು ವಿಶ್ಲೇಷಣೆಗೆ ಒಳಪಡಿಸುವುದು, ಘಟನೆಗಳನ್ನಿಟ್ಟುಕೊಂಡು ತರ್ಕಿಸುವುದು ಇತ್ಯಾದಿ ವಿಧಾನಗಳ ಮೂಲಕ ನಿಜವನ್ನು ಧೃಡಪಡಿಸಿಕೊಳ್ಳಬೇಕು. ಇಂಥ ತರ್ಕ, ವಿಶ್ಲೇಷಣೆಗಳೆಲ್ಲವೂ ಗತಕಾಲದ ಮನುಷ್ಯರಿಗೆ ಸಂಬಂಧಿಸಿದವುಗಳಾದ್ದರಿಂದ ಮಾನವನ ಸ್ವಭಾವ, ಉದ್ದೇಶಗಳ ಕುರಿತು ನಮಗಿರುವ ಜ್ಞಾನಕ್ಕೆ ಅವು ಸಂಗತವಾಗಿರಲೇಬೇಕು. ಇಂಥ ಮನುಷ್ಯ ಘಟನೆಗಳು ಯಾವ ಜಾಗದಲ್ಲಿ ನಡೆದವು, ಯಾವ ಕಾಲದಲ್ಲಿ ನಡೆದವು ಎಂಬುದನ್ನು ನಿರ್ದಿಷ್ಟ್ಟಪಡಿಸಿ ಅವನ್ನು ಪೋಣಿಸಿದಾಗ ಮಾತ್ರವೇ ಅದು ಹಿಸ್ಟರಿಯಾಗುತ್ತದೆ. ಪಾಶ್ಚಾತ್ಯರು ತಮ್ಮ ಹಿಸ್ಟರಿಯ ಘಟನೆಗಳ ಕಾಲವನ್ನು ಕ್ರಿಸ್ತಶಕದಲ್ಲಿ ಗುರುತಿಸಿ ಅವುಗಳ ಕಾಲಾನುಕ್ರಮಣಿಕೆಯನ್ನು ಕಟ್ಟುವ ಸಲುವಾಗಿಯೇ ಕ್ರೊನಾಲಜಿ ಎಂಬ ವಿಶೇಷ ಶಾಖೆಯನ್ನು ಬೆಳೆಸಿದ್ದರು. ಇಂಥ ಹಿಸ್ಟರಿಯು ನಾಗರೀಕ ಸಮಾಜವನ್ನು ರೂಪಿಸುವಲ್ಲಿ ತೀರಾ ಅನಿವಾರ್ಯವಾದ ಹಾಗೂ ಅಮೂಲ್ಯವಾದ ಜ್ಞಾನವಾಗಿದೆ ಎಂಬುದಾಗಿ ಪಾಶ್ಚಾತ್ಯರು ನಂಬಿದ್ದರು. ಹಾಗಾಗಿ ಸ್ವಾಭಾವಿಕವಾಗಿಯೇ ಅವರ ಶಿಕ್ಷಣದಲ್ಲೂ ಈ ವಿಷಯವು ಆದ್ಯತೆ ಪಡೆಯಿತು.

ಪಾಶ್ಚಾತ್ಯರು ಭಾರತಕ್ಕೆ ಬಂದು ಇಲ್ಲಿನ ಪಾರಂಪರಿಕ ಜ್ಞಾನವನ್ನು ಅಧ್ಯಯನಕ್ಕೊಳಪಡಿಸಿದಾಗ ಅವರಿಗೆ ಇಲ್ಲಿ ಹಿಸ್ಟರಿ ಎಂಬ ಪ್ರಕಾರವು ಕಂಡುಬರಲಿಲ್ಲ. ಭಾರತೀಯರು ಹಿಸ್ಟರಿಯನ್ನು ಬರೆದಿಟ್ಟಿಲ್ಲ ಎಂಬುದನ್ನು ಕಂಡುಕೊಳ್ಳಲಿಕ್ಕೂ ಅವರು ಅನೇಕ ವರ್ಷಗಳನ್ನು ತೆಗೆದುಕೊಂಡರು. ಭಾರತದಲ್ಲಿ ವಸಾಹತು ಸರ್ಕಾರದ ಸ್ಥಾಪನೆಯಾದ ತರುವಾಯ ಇಲ್ಲಿ ತಾವು ಅಳವಡಿಸಿಕೊಳ್ಳಬಹುದಾದ ಶಿಕ್ಷಣ ಹಾಗೂ ಆಡಳಿತ ವ್ಯವಸ್ಥೆಗೆ ಈ ಜನರ ಹಿಸ್ಟರಿಯನ್ನು ತಿಳಿದುಕೊಳ್ಳುವುದು ಅವರಿಗೆ ಮುಖ್ಯವೆನಿಸಿತು. ಅದನ್ನು ತಿಳಿದುಕೊಳ್ಳಲು ಅವರು ಕಂಡುಕೊಂಡ ಉಪಾಯವೆಂದರೆ ದೇಸೀ ಪಂಡಿತರನ್ನು ಕೇಳುವುದು. ಅವರಲ್ಲಿ ನಿಮ್ಮ ಹಿಸ್ಟರಿಯನ್ನು ತಿಳಿಸಿ ಎಂದು ಕೇಳಿದಾಗ ಅವರು ಭಾರತದ ಗತಕಾಲದ ಕುರಿತ ಕಥೆಗಳನ್ನು ಕೇಳುತ್ತಿದ್ದಾರೆ ಎಂಬುದಾಗಿ ದೇಸೀ ಪಂಡಿತರು ಗ್ರಹಿಸಿದರು. ಹಿಸ್ಟರಿ ಎಂಬ ನಿರ್ದಿಷ್ಟ ಪ್ರಕಾರದ ಕಥನವನ್ನು ತಮ್ಮಿಂದ ಕೇಳುತ್ತಿದ್ದಾರೆ ಎಂಬುದು ಅವರಿಗೆ ತಿಳಿಯಲಿಲ್ಲ. ಅವರಿಗೆ ಹಿಂದಿನ ಕಾಲದ ಕುರಿತು ತಿಳಿಸುತ್ತಿದ್ದ ಇತಿಹಾಸ, ಚರಿತ, ಪುರಾಣ ಇತ್ಯಾದಿಗಳನ್ನು ಅವರು ಸಾದರ ಪಡಿಸಿದರು. ಅದೇ ರೀತಿ ಇಂತಹ ಪಂಡಿತರ ನೇತೃತ್ವದಲ್ಲಿ ಭಾರತದ ವಿಭಿನ್ನ ಭಾಗಗಳಲ್ಲಿದ್ದ ಹಿಸ್ಟರಿಗಳನ್ನು ಕಲೆಹಾಕುವ ಪ್ರಯತ್ನದಲ್ಲಿ ಕಥೆಗಳು ಹಾಗೂ ಸ್ಥಳ ಪುರಾಣಗಳ ರಾಶಿ ಬಿದ್ದಿತು. ಈ ಎಲ್ಲಾ ಕಥೆಗಳನ್ನು ಭಾರತೀಯರ ಹಿಸ್ಟರಿ ಎಂಬುದಾಗಿ ನೋಡಲು ಪ್ರಯತ್ನಸಿದರೂ ಪಾಶ್ಚಾತ್ಯರಿಗೆ ಅದರಲ್ಲಿ ತಮ್ಮ ಹಿಸ್ಟರಿಗೆ ಹೋಲುವಂಥದ್ದು ಏನೂ ಕಾಣಲಿಲ್ಲ. ಕಾಗಕ್ಕ ಗುಬ್ಬಕ್ಕನ ಕಥೆಗಳು ಹಾಗೂ ಅವಾಸ್ತವಿಕವಾದ ಘಟನೆಗಳಲ್ಲಿ ಹಿಸ್ಟರಿಯ ಲಕ್ಷಣಗಳು ಕಾಣಿಸಲಿಲ್ಲ.

ಹಾಗಾಗಿ ‘Indians lack the sense of history’ ( ಭಾರತೀಯರಿಗೆ ಹಿಸ್ಟರಿಯ ಪ್ರಜ್ಞೆ ಇಲ್ಲ) ಎಂಬುದಾಗಿ ನಿರ್ಣಯಿಸಿದರು. 19ನೆಯ ಶತಮಾನದ ಪ್ರಾರಂಭದಲ್ಲಿ ಭಾರತದಲ್ಲಿ ಇಂಗ್ಲೀಷ್ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಳ್ಳುವಾಗ ಭಾರತದ ಸಾಂಪ್ರದಾಯಿಕ ಜ್ಞಾನವನ್ನು ಅದರಲ್ಲಿ ಕಲಿಸುವುದು ಅಪಾಯಕಾರಿ ಎಂಬುದಾಗಿ ಬ್ರಿಟಿಷರು ತೀರ್ಮಾನಿಸಿದರು. 30 ಅಡಿ ಎತ್ತರದ ರಾಜರು, 30ಸಾವಿರ ವರ್ಷ ಆಳಿದ ರಾಜರ ಕಥೆಗಳನ್ನು ಇತಿಹಾಸ ಎಂದು ಕಲಿಸುವುದರಿಂದ ಬ್ರಿಟಿಷರು ನಗೆಪಾಟಲಿಗೀಡಾಗುವುದರಲ್ಲಿ ಸಂಶಯವಿಲ್ಲ ಎಂಬುದಾಗಿ ಬಾಬಿಂಗ್ಟನ್ ಮೆಕಾಲೆಯು ತನ್ನ ನಡಾವಳಿಯಲ್ಲಿ ಒತ್ತಿ ಹೇಳಿದನು. ಹಾಗಾಗಿ ಪಾಶ್ಚಾತ್ಯರೇ ಭಾರತೀಯ ಹಿಸ್ಟರಿಯನ್ನು ರಚಿಸಿ ಅದನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡರು. ಹಿಸ್ಟರಿ ಸಂಶೋಧನೆಯ ಅಂಗವಾಗಿ ಗ್ರಂಥಗಳ, ಪತ್ರಾಗಾರ ದಾಖಲೆಗಳ ಹಾಗೂ ಪ್ರಾಕ್ತನ ವಸ್ತುಗಳ ಶೋಧನೆ ಪ್ರಾರಂಭವಾಯಿತು. ಹೀಗೆ ರಚಿತವಾದ ಹಿಸ್ಟರಿಯು ಭಾರತೀಯ ಗತಕಾಲದ ಕುರಿತು ತಿಳಿಸಿದ ಕಥೆಗೂ ಭಾರತೀಯರ ಇತಿಹಾಸ, ಪುರಾಣ ಕಥೆಗಳಿಗೂ ಅರ್ಥಾರ್ಥ ಸಂಬಂಧ ಇಲ್ಲದಿರುವುದು ಕ್ರಮೇಣ ಭಾರತೀಯರಿಗೆ ಅರಿವಾಗತೊಡಗಿತು. ಅಂದರೆ ಯಾವ ವಿಧಾನದಿಂದ ಪಾಶ್ಚಾತ್ಯರು ಭಾರತೀಯ ಹಿಸ್ಟರಿಯ ನಿಜಗಳನ್ನು ಕಟ್ಟಿ ತೋರಿಸಿದರೋ ಆ ವಿಧಾನಗಳನ್ನು ನಮ್ಮ ಇತಿಹಾಸ ಪುರಾಣಗಳಿಗೆ ಅನ್ವಯ ಮಾಡಿದಾಗ ಇವು ಸುಳ್ಳುಗಳಾಗಿ ಬದಲಾದವು. ಹಾಗಾಗಿ ನಮ್ಮ ಇತಿಹಾಸ ಪುರಾಣಗಳನ್ನು ಹಿಸ್ಟರಿ ಎಂಬುದಾಗಿ ಆಧುನಿಕ ಶಿಕ್ಷಣದಲ್ಲಿ ಅಧ್ಯಯನ ಮಾಡುವುದನ್ನು ಅವರೂ ನಿರೀಕ್ಷಿಸಲಿಲ್ಲ ಮತ್ತು ಭಾರತೀಯರಿಗೆ ಹಿಸ್ಟರಿಯ ಪ್ರಜ್ಞೆ ಇಲ್ಲ ಎಂಬ ಹೇಳಿಕೆಯು ಅವರಿಗೂ ಸರಿಯೆನ್ನಿಸಿತು. ಭಾರತೀಯರೂ ಕೂಡ ಭಾರತೀಯ ಹಿಸ್ಟರಿಯ ರಚನೆಯಲ್ಲಿ ಅತ್ಯುತ್ಸಾಹದಿಂದ ಪಾಶ್ಚಾತ್ಯರ ಜೊತೆಗೆ ಕೈಜೋಡಿಸಿದರು.

ಈ ಹಂತದಲ್ಲಿ ಇತಿಹಾಸ, ಚರಿತ್ರೆ ಇವೆಲ್ಲ ಹಿಸ್ಟರಿಯ ಭಾರತೀಯ ಅವತಾರಗಳು ಎಂಬ ಸಾಮಾನ್ಯಜ್ಞಾನವೂ ಅದರೊಂದಿಗೆ ರೂಪುಗೊಂಡಿದ್ದು ಕಂಡುಬರುತ್ತದೆ. ಹಾಗಾಗಿ ಹಿಸ್ಟರಿಯನ್ನು ದೇಶೀ ಭಾಷೆಗಳಲ್ಲಿ ಇತಿಹಾಸ, ಚರಿತ್ರೆ ಇತ್ಯಾದಿಯಾಗಿ ಭಾಷಾಂತರಿಸಿಕೊಳ್ಳಲಾಯಿತು. ಇದರ ಜೊತೆಗೇ ಹಿಸ್ಟರಿ ಎಂಬುದು ಗತಕಾಲದ ಕುರಿತ ಅಧಿಕೃತ ಜ್ಞಾನ ಹಾಗೂ ಇತಿಹಾಸ ಪುರಾಣಗಳು ವಿಶ್ವಾಸಾರ್ಹವಾದ ಜ್ಞಾನವಲ್ಲ ಎಂಬ ಧೋರಣೆಯೂ ಹುಟ್ಟಿಕೊಂಡಿತು. ಏಕೆಂದರೆ ಹಿಸ್ಟರಿ ಎಂಬುದಕ್ಕೆ ಯಾವ್ಯಾವ ಲಕ್ಷಣಗಳಿದ್ದವೋ ಅವುಗಳನ್ನು ಪ್ರಮಾಣವಾಗಿ ತೆಗೆದುಕೊಂಡು ದೇಶೀ ಸಂಪ್ರದಾಯಗಳನ್ನು ತುಲನೆಮಾಡಿದಾಗ ಅವುಗಳು ಅಪರಿಪೂರ್ಣ ಹಿಸ್ಟರಿಗಳಾಗಿ ತೋರಿದ್ದು ಸಹಜ. ಅವುಗಳಲ್ಲಿದ್ದ ದೋಷಗಳನ್ನು ಕಳೆದಾಗ ಅವು ಕೂಡ ಹಿಸ್ಟರಿಗಳಾಗಿ ಬದಲಾಗಬಲ್ಲವು. ಒಂದುಕಾಲದಲ್ಲಿ ಭಾರತೀಯರು ಹಿಸ್ಟರಿಯ ದಾಖಲೆಯನ್ನು ಇಟ್ಟಿದ್ದರು, ಅವುಗಳಲ್ಲಿ ಕಾಲಕ್ರಮೇಣ ಸುಳ್ಳುಗಳು, ಕಲ್ಪನೆಗಳು, ಅತಿಶಯೋಕ್ತಿಗಳು ನುಸುಳಿಕೊಂಡು ಪುರಾಣ ಕಥೆಗಳು ಹುಟ್ಟಿಕೊಂಡಿವೆ. ಹಾಗಾಗಿ ಇತಿಹಾಸವು ಮೂಲತಃ ಹಿಸ್ಟರಿಯೇ ಆಗಿದೆ ಎಂದೂ ಕೆಲವರು ನಿರೂಪಿಸಿದರು. ಈ ಎಲ್ಲ ಅಭಿಪ್ರಾಯಗಳ ಪರಿಣಾಮವಾಗಿ ಪುರಾಣ ಇತಿಹಾಸಗಳನ್ನು ಹಿಸ್ಟರಿಯನ್ನಾಗಿ ಬದಲಾಯಿಸುವ ಕಾರ್ಯಕ್ರಮವು ಚಾಲ್ತಿಯಲ್ಲಿ ಬಂದಿತು. ಅದು ಈ ಮುಂದಿನ ರೀತಿಗಳಲ್ಲಿ ನಡೆಯಿತು: 1) ಇಂಥ ಸುಳ್ಳುಗಳನ್ನು ಬೇರ್ಪಡಿಸಿ ಅನ್ಯ ಆಕರಗಳ ಜೊತೆಗೆ ಹೋಲಿಸಿ ಈಗಲೂ ಅವುಗಳಲ್ಲಿರುವ ಸತ್ಯಘಟನೆಗಳನ್ನು ತೆಗೆದು ಹಿಸ್ಟರಿಯನ್ನು ಕಟ್ಟಬಹುದು ಎಂಬುದಾಗಿ ಕೆಲವರು ವಾದಿಸಿದರು. 2) ಅದಕ್ಕೂ ಮುಖ್ಯವಾಗಿ ಪ್ರಾಚೀನ ಭಾರತೀಯರು ನಿಜಘಟನೆಗಳನ್ನು ಪುರಾಣ ಪ್ರತೀಕಗಳನ್ನಾಗಿ ಬದಲಾಯಿಸಿ ಈ ಕಥೆಗಳಲ್ಲಿ ತಿಳಿಸಿದ್ದಾರೆ. ಇಂಥ ಪ್ರತೀಕಗಳನ್ನು ಅರ್ಥಮಾಡಿಕೊಂಡರೆ ಅವುಗಳಿಂದ ಹಿಸ್ಟರಿಯನ್ನು ತೆಗೆಯಬಹುದು ಎಂಬ ಸಾಮಾನ್ಯ ಧೋರಣೆಯೂ ಬೆಳೆಯಿತು.

ಇಂಥ ಧೋರಣೆಗಳ ಪರಿಣಾಮವಾಗಿ ನಮ್ಮ ಇತಿಹಾಸ ಪುರಾಣದ ಕಥೆಗಳನ್ನು ಹಿಸ್ಟರಿಯನ್ನಾಗಿ ಬದಲಾಯಿಸುವ ಪ್ರಯತ್ನ ಪ್ರಾರಂಭವಾಯಿತು. ಮಹಾಭಾರತವು ಮೂರು ಸಾವಿರ ವರ್ಷಗಳ ಹಿಂದೆ ಗಂಗಾ ಯಮುನಾ ಪ್ರದೇಶದಲ್ಲಿದ್ದ ಕೆಲವು ಬುಡಕಟ್ಟುಗಳ ಹಿಸ್ಟರಿಯಾಯಿತು. ರಾಮಾಯಣವು ಆರ್ಯ-ದ್ರಾವಿಡ ಸಂಘರ್ಷದ ಹಿಸ್ಟರಿಯಾಯಿತು. ಬಲಿ-ವಾಮನ ಪುರಾಣವು ಬ್ರಾಹ್ಮಣರು ಶೂದ್ರರನ್ನು ವಂಚಿಸಿದ ಹಿಸ್ಟರಿಯಾಯಿತು. ಕಪಿಸೈನ್ಯವು ದಕ್ಷಿಣ ಭಾರತದ ಆದಿ ಜನಾಂಗಗಳಾದ ದಲಿತರಾದರು. ಇಲ್ಲೆಲ್ಲ ನಿಜ ಘಟನೆಗಳು ಎಂಬುದಾಗಿ ಯಾವುದನ್ನು ಈ ಇತಿಹಾಸ ಪುರಾಣಗಳಿಂದ ಕಂಡುಕೊಂಡರೋ ಅವೆಲ್ಲವೂ ಪಾಶ್ಚಾತ್ಯರು ಭಾರತೀಯ ಹಿಸ್ಟರಿಯ ನಿಜಗಳೆಂದು ಈಗಾಗಲೇ ಕಟ್ಟಿಕೊಟ್ಟ ಆರ್ಯರ ಆಕ್ರಮಣ, ಜಾತಿವ್ಯವಸ್ಥೆ, ಆದಿಮ ಸಮಾಜಗಳು, ಇತ್ಯಾದಿ ಕಲ್ಪನೆಗಳನ್ನು ಆಧರಿಸಿ ಇದ್ದವು. ಅಂದರೆ ಯುರೋಪಿನ ಹಿಸ್ಟರಿಯ ನಿಜಗಳಿಗೆ ಈ ಕಥೆಗಳನ್ನು ಹೊಂದಿಸುವ ಕೆಲಸಕ್ಕೇ ಹಿಸ್ಟರಿ ಸಂಶೋಧನೆ ಎಂಬ ಹೆಸರನ್ನು ನೀಡಲಾಗಿತ್ತು.

ಈ ಎಲ್ಲಾ ಪ್ರಯತ್ನಗಳ ಫಲವಾಗಿ ಭಾರತೀಯರಿಗೆ ಇತಿಹಾಸ ಪ್ರಜ್ಞೆ ಇದೆಯೆ? ಎಂಬ ಪ್ರಶ್ನೆಯು ನಮಗೆ ಅರ್ಥವಾದಂತೇ ಅನಿಸುತ್ತದೆ. ಆದರೆ ಇತಿಹಾಸ ಪ್ರಜ್ಞೆ ಎಂಬ ಪದವನ್ನು ಪ್ರಯೋಗಿಸಿದಾಗ ಒಂದು ಗೊಂದಲವು ಸ್ವಾಭಾವಿಕವಾಗಿಯೇ ಹುಟ್ಟುತ್ತದೆ. ಇದು ನಮ್ಮ ಇತಿಹಾಸವನ್ನು ಉದ್ದೇಶಿಸಿದೆಯೋ ಇಲ್ಲ ಹಿಸ್ಟರಿ ಎಂಬ ಶಬ್ದದ ತರ್ಜುಮೆಯೊ? ಈ ಹೇಳಿಕೆಯನ್ನು ಇತಿಹಾಸ ಎಂಬ ಶಬ್ದವನ್ನಿಟ್ಟಾದರೂ ಬರೆಯಿರಿ, ಇಲ್ಲ ಹಿಸ್ಟರಿ ಎಂಬ ಶಬ್ದವನ್ನಿಟ್ಟಾದರೂ ಬರೆಯಿರಿ, ಅದು ಹಿಸ್ಟರಿ ಎಂಬ ಪರಿಕಲ್ಪನೆಗೆ ಸಂಬಂಧಿಸಿದ್ದಾಗಿದೆಯೇ ವಿನಃ ಇತಿಹಾಸ-ಚರಿತ್ರೆ ಇತ್ಯಾದಿ ಪರಿಕಲ್ಪನೆಗಳಿಗಲ್ಲ. ಪಾಶ್ಚಾತ್ಯರು ತಮ್ಮ ಹಿಸ್ಟರಿಯನ್ನು ಇಲ್ಲಿ ಹುಡುಕಲು ಸೋತು ಉದ್ಗರಿಸಿದ ವಾಕ್ಯವಿದು. ಭಾರತೀಯರು ಅದನ್ನು ತಮ್ಮ ಭಾಷೆಗೆ ತರ್ಜುಮೆ ಮಾಡಿದ್ದಾರೆ ಅಷ್ಟೆ. ಅವರು ತಮ್ಮ ಇತಿಹಾಸ ಸಂಪ್ರದಾಯದ ಕುರಿತು ರೂಪಿಸಿದ ಪ್ರಶ್ನೆ ಇದಲ್ಲ. ಇಂದು ಭಾರತೀಯರಿಗೆ ಇತಿಹಾಸ ಪ್ರಜ್ಞೆ ಇದೆ ಎಂದು ವಾದಿಸುವವರು ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ವಾದಗಳನ್ನು ಮಂಡಿಸುತ್ತಿಲ್ಲ. ಹಾಗಾಗಿ ಗೊಂದಲವನ್ನು ಹೆಚ್ಚಿಸುತ್ತಿದ್ದಾರೆ.

ಈ ಗೊಂದಲದ ಪರಿಣಾಮವೇನಾಗಿದೆ? ಮಹಾಭಾರತ, ರಾಮಾಯಣಗಳೂ ಹಿಸ್ಟರಿ ಎಂದಾದಮೇಲೆ ಅವುಗಳ ದೇಶ ಕಾಲಗಳ ನೈಜತೆಗೆ ಒಂದಿಲ್ಲೊಂದು ದಿನ ಆಧಾರ ಸಿಕ್ಕೇ ಸಿಗಬೇಕು ಎಂಬ ಧೃಡ ವಿಶ್ವಾಸ ಭಾರತೀಯರಿಗಿದೆ. ಅಂದರೆ ನಮಗೂ ಇತಿಹಾಸ ಪ್ರಜ್ಞೆ ಇದೆ ಎಂಬುದಾಗಿ ವಾದಿಸುವವರಿಗೆ ಇರುವ ಒಂದೇ ಆಯ್ಕೆಯೆಂದರೆ ನಮ್ಮ ಇತಿಹಾಸ ಪುರಾಣಗಳನ್ನು ಹಿಸ್ಟರಿಯ ಪ್ರಮಾಣಗಳಿಗೆ ಒಡ್ಡಿ ಪರೀಕ್ಷಿಸುವುದು. ಈ ಕೆಲಸವನ್ನು ಎಡ-ಬಲ ಪಂಥೀಯರೆಲ್ಲರೂ ಶ್ರದ್ಧೆಯಿಂದ ಮಾಡಿದ್ದಾರೆ, ಮಾಡುತ್ತಿದ್ದಾರೆ. ಮಹಾಭಾರತ ಹಾಗೂ ರಾಮಾಯಣಗಳ ಕಾಲನಿರ್ಣಯದ ಕುರಿತು, ಪ್ರಾಕ್ತನ ಆಧಾರಗಳ ಕುರಿತು ಗಂಭೀರವಾದ ಅನ್ವೇಷಣೆಗಳು ನಡೆದಿವೆ. ಮಹಾಭಾರತ ಯುದ್ಧ, ಕಲಿಯುಗ ಪ್ರಾರಂಭ ಇತ್ಯಾದಿಗಳ ಕಾಲವನ್ನು ಲೆಕ್ಕಹಾಕಿ ತೋರಿಸಿ ಈ ಸವಾಲನ್ನು ಗೆದ್ದೇಬಿಟ್ಟಿದ್ದೇವೆ ಎಂದು ವಿಜಯೋತ್ಸಾಹ ಆಚರಿಸಿದವರೂ ಇದ್ದಾರೆ. ಇದರ ಫಲಿತಾಂಶವಾಗಿ ನಮ್ಮ ಇತಿಹಾಸ ಪುರಾಣಗಳ ಬಹುಭಾಗಗಳು ಯಾವುದೇ ಮಾನದಂಡದಿಂದಲೂ ಹಿಸ್ಟರಿಯ ಮಾನ್ಯತೆಯನ್ನು ಗಳಿಸಲು ಸೋತವು. ಯಾವುದೋ ಒಂದೆರಡು ಘಟನೆಗಳ ಕಾಲವನ್ನು ಹಾಗೂ ನೈಜತೆಯನ್ನು ಲೆಕ್ಕಹಾಕಿ ತೋರಿಸಿದರೆ ಅವು ಹಿಸ್ಟರಿಗಳಾಗಲು ಸಾಧ್ಯವಿಲ್ಲ. ಹಿಸ್ಟರಿಯೆಂದರೆ ನೈಜ ಘಟನೆಗಳನ್ನೇ ಆಯ್ದು ಅವುಗಳನ್ನು ಕಾಲ ದೇಶಗಳ ಅನುಕ್ರಮಣಿಕೆಯೊಳಗೇ ವಿಧಾನಶಾಸ್ತ್ರೀಯವಾಗಿ ಕಟ್ಟಿದ ಕಥೆಯಾಗಿದೆ. ಮಹಾಭಾರತ ರಾಮಾಯಣಗಳ ಪಾತ್ರಗಳು ಹಾಗೂ ಘಟನೆಗಳನ್ನು ಈ ಚೌಕಟ್ಟಿಗೆ ಸುಸಂಗತವಾಗಿ ಒಗ್ಗಿಸುವುದು ಅಸಾಧ್ಯ. ಹಾಗಾಗಿ ಇಂಥ ಪ್ರಯತ್ನಗಳ ಫಲವಾಗಿ ‘ಭಾರತೀಯರಿಗೆ ಕ್ರೊನಾಲಜಿಯ ಬಗ್ಗೆ, ನೈಜತೆಯ ಬಗ್ಗೆ ಆದರವಿಲ್ಲ’ ಎಂಬ ಹೊಸ ಬಿರುದನ್ನು ನಾವು ಸಂಪಾದಿಸಿದೆವು. ಒಟ್ಟಾರೆಯಾಗಿ ಹಿಸ್ಟರಿಯ ಹೀನಾಯ ರೂಪಗಳಾಗಿ ಮಹಾಭಾರತ ಹಾಗೂ ರಾಮಾಯಣಗಳು ಪರಿವರ್ತಿತವಾದವು.

ಅಂದರೆ ನಮಗೂ ಇತಿಹಾಸ ಪ್ರಜ್ಞೆ ಇದೆ ಎಂಬುದಾಗಿ ವಾದಿಸುವುದರ ಪರಿಣಾಮವು ಇದುವರೆಗೂ ಒಂದೇ ಫಲವನ್ನು ನೀಡಿದೆ: ಅದೆಂದರೆ ನಮ್ಮ ಇತಿಹಾಸ ಪುರಾಣಗಳಲ್ಲಿ ಕೆಲವು ಭಾಗಗಳು ಅಪೂರ್ಣ ಹಾಗೂ ಅವಿಕಸಿತ ಹಿಸ್ಟರಿಗಳಾಗಿದ್ದರೆ ಬಹುಭಾಗಗಳು ಕಟ್ಟುಕಥೆಯಾಗಿ ಮಾರ್ಪಡುವುದನ್ನು ತಪ್ಪಿಸಲು ನಮ್ಮಿಂದ ಸಾಧ್ಯವಿಲ್ಲ. ಅಂದರೆ ನಮ್ಮ ಇತಿಹಾಸವು ಕಟ್ಟುಕಥೆಯಾಗುವುದರಿಂದ ಅದು ಗತಕಾಲದ ಅಧಿಕೃತ ವಕ್ತಾರನಾಗಲು ಸಾಧ್ಯವಿಲ್ಲ. ಹಾಗಾಗಿಯೇ ನಮಗೂ ಇತಿಹಾಸ ಪ್ರಜ್ಞೆ ಇದೆ ಎಂದು ವಾದಿಸುವ ವಿದ್ವಾಂಸರಲ್ಲಿ ಯಾರೂ ಕೂಡ ನಮ್ಮ ಇತಿಹಾಸ-ಪುರಾಣಗಳನ್ನು ಅಧಿಕೃತ ಹಿಸ್ಟರಿ ಎಂಬಂತೇ ಶಾಲಾ ಕಾಲೇಜುಗಳಲ್ಲಿ ಕಲಿಸಬೇಕೆಂಬುದಾಗಿ ಬೇಡಿಕೆಯನ್ನಿಟ್ಟಿಲ್ಲ. ನಮ್ಮ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಹಿಸ್ಟರಿಯ ಸ್ಥಾನಮಾನವನ್ನು ಅವು ಹೊಂದುವುದು ಸಾಧ್ಯವಿಲ್ಲ ಎಂಬುದಾಗಿ ಈ ಕುರಿತು ಅಧ್ಯಯನ ನಡೆಸಿದ ಇತಿಹಾಸ ವಿದ್ವಾಂಸರೂ ನಿರ್ಣಯಿಸಿದಂತಿದೆ.

ಇದು ನಮ್ಮ ಸಂಪ್ರದಾಯಗಳ ಶ್ರೇಷ್ಠತೆಯನ್ನು ಸಾರಬೇಕೆನ್ನುವವರ ಉತ್ಸಾಹಕ್ಕೆ ತಣ್ಣೀರೆರಚುವುದು ಸ್ವಾಭಾವಿಕ. ಇದು ರಾಮಾಯಣ ಮಹಾಭಾರತಗಳನ್ನು ಪೂಜಿಸಿಕೊಂಡು ಬಂದವರಿಗೆ ಕೀಳರಿಮೆಯನ್ನು ಹುಟ್ಟುಹಾಕುತ್ತದೆ. ಇಂಥವರು ಆಯ್ದುಕೊಳ್ಳುತ್ತಿರುವ ಮಾರ್ಗವೆಂದರೆ ನಮ್ಮ ಇತಿಹಾಸ ಪುರಾಣಗಳು ಪರಿಪೂರ್ಣ ಹಿಸ್ಟರಿಗಳು ಎಂಬುದಾಗಿ ವಾದಿಸಿ ಅದನ್ನು ಹಿಸ್ಟರಿಯ ಮಾನದಂಡಗಳಿಂದಲೇ ಸಮರ್ಥಿಸುವುದು. ರಾಮಜನ್ಮಭೂಮಿ, ರಾಮಸೇತು ಇತ್ಯಾದಿ ವಿವಾದಗಳು ಈ ಧೋರಣೆಯಿಂದ ಹುಟ್ಟಿವೆ. ರಾಮಾಯಣ ಮಹಾಭಾರತದ ಒಂದೊಂದು ಕಥೆಯನ್ನು ಹಿಸ್ಟರಿಯ ಮಾನದಂಡಗಳಿಗೆ ಹಿಡಿದಷ್ಟೂ ಅವುಗಳ ಕೊರತೆ ನಿದರ್ಶನವಾಗುತ್ತ ಹೋಗುತ್ತದೆ. ಇಂಥ ಸರ್ಕಸ್ಸುಗಳ ಪರಿಣಾಮವಾಗಿ ಇತಿಹಾಸ-ಪುರಾಣಗಳ ಘನತೆ ಮೂರಾಬಟ್ಟೆಯಾಗುತ್ತಿದೆ ಹಾಗೂ ನಮ್ಮ ಪರಂಪರೆಯ ಜೊತೆಗೆ ನಮ್ಮ ಸಂಬಂಧವೇ ಕಡಿದುಹೋಗುತ್ತಿದೆ. ರಾಮಾಯಣ ಮಹಾಭಾರತಗಳನ್ನು ನಾವೇಕೆ ಪೂಜ್ಯವಾಗಿ ನೋಡುತ್ತೇವೆ? ಭಾರತೀಯರ ಜೀವನದಲ್ಲಿ ಅವು ಯಾವ ಸ್ಥಾನವನ್ನು ಪಡೆದಿವೆ, ನಾವು ಅವುಗಳಿಂದ ಏನನ್ನು ಕಲಿಯುತ್ತೇವೆ? ಇತ್ಯಾದಿ ಅರ್ಥಪೂರ್ಣ ಪ್ರಶ್ನೆಗಳೇ ನಮಗಿಂದು ಬೇಡವಾಗಿದೆ. ಅವುಗಳ ಘಟನೆಗಳು ನಿಜ ಎಂಬುದನ್ನು ಸಾಧಿಸಿ ತೋರಿಸುವುದೇ ನಮ್ಮ ಗುರಿಯಾಗಿದೆ.

ಈ ಕಥೆಗಳು ನಿಜ ಎಂಬುದನ್ನು ತೋರಿಸಿದರೆ ನಮಗೆ ಸಿಗುವುದೇನು? ಅವು ಹಿಸ್ಟರಿಗಳು ಎಂಬುದನ್ನು ಸಮರ್ಥಿಸಿದಂತಾಯಿತು ಅಷ್ಟೆ. ಅಂದರೆ ನಾವು ಪಾಶ್ಚಾತ್ಯರಿಗೆ ಸರಿಸಮ ಎಂದಂತಾಯಿತು. ಅದರಾಚೆಗೆ ಅದರಿಂದ ಮತ್ತೇನು ಪ್ರಯೋಜನ ಎಂಬುದು ನಮಗೆ ಗೊತ್ತಿಲ್ಲ. ಭಗವದ್ಗೀತೆಯನ್ನು ಹಿಸ್ಟರಿಯನ್ನಾಗಿ ಪರಿವರ್ತಿಸಿ ಅದರ ಕಾಲವನ್ನು ನಿಖರವಾಗಿ ನಿರ್ಣಯಿಸುವುದು ಭಗವದ್ಗೀತೆಯನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಎಳ್ಳಷ್ಟಾದರೂ ಸಹಕರಿಸುತ್ತದೆಯೆ? ಹೋಗಲಿ, ಮಹಾಭಾರತ ಯುದ್ಧದ ಕಾಲ ಮತ್ತು ಸ್ಥಳಗಳನ್ನು ತಿಳಿದುಕೊಂಡರೆ ‘ಧರ್ಮಕ್ಷೇತ್ರ ಕುರುಕ್ಷೇತ್ರ’ ಎಂಬ ಎಂಬ ಪರಿಕಲ್ಪನೆಯು ಅರ್ಥವಾಗುತ್ತದೆಯೆ? ಅದಕ್ಕೆ ಬದಲಾಗಿ ಇವು ಹಿಸ್ಟರಿ ಎಂದು ತೋರಿಸುವ ಅಬ್ಬರದಲ್ಲಿ ಅವುಗಳಿಗೆ ಅವುಗಳದ್ದೇ ಆದ ಅರ್ಥವಿದೆ ಎಂಬ ಸಂಗತಿಯೇ ಮರೆತುಹೋಗುತ್ತಿದೆ. ಇದಕ್ಕೆ ಬದಲಾಗಿ ನಮ್ಮ ಸಂಸ್ಕೃತಿಯಲ್ಲಿ ಅವುಗಳ ಮಹತ್ವವೇನು ಎಂಬುದನ್ನು ಶೋಧಿಸುವುದು ಫಲಪ್ರದವಾದ ಕೆಲಸವಾಗಬಹುದು. ಅಂಥ ಕೆಲಸದಿಂದ ಅವುಗಳ ಮಹತ್ವವೂ ಹೆಚ್ಚುತ್ತದೆ ಹಾಗೂ ನಮ್ಮ ಪರಂಪರೆಯ ಜೊತೆಗೆ ಅರ್ಥಪೂರ್ಣ ಸಂಬಂಧವನ್ನು ಸ್ಥಾಪಿಸಿಕೊಳ್ಳಲೂ ಸಾಧ್ಯವಾಗುತ್ತದೆ ಹಾಗೂ ನಮ್ಮ ಸಂಸ್ಕೃತಿಯ ಬಹುಮುಖ್ಯ ಅಂಗವಾದ ಈ ಇತಿಹಾಸ-ಪುರಾಣ ಸಂಪ್ರದಾಯವನ್ನು ಹಿಸ್ಟರಿಯ ಗಿಲೆಟಿನ್ ಯಂತ್ರದಿಂದ ತಪ್ಪಿಸಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.