15 February 2015

Debates show why Preamble’s original text left out the two words

Courtesy: http://www.thehindu.com/

KRISHNADAS RAJAGOPAL

Even as the omission of the words ‘secular’ and ‘socialist’ from the Preamble text in a government advertisement has stoked a controversy, the Constituent Assembly debates clearly show why the words were omitted in the original text. The debates saw Dr. B.R. Ambedkar reason that there was no need to include the term ‘secular’ as the entire Constitution embodied the concept of secular state, which meant non-discrimination on grounds of religion and equal rights and status to all citizens.

On the inclusion of the term ‘socialist,’ he said it is against the very grain of democracy to decide in the Constitution what kind of society the people of India should live in.

“It is perfectly possible today, for the majority people to hold that the socialist organisation of society is better than the capitalist organisation of society. But it would be perfectly possible for thinking people to devise some other form of social organisation which might be better than the socialist organisation of today or of tomorrow. I do not see therefore why the Constitution should tie down the people to live in a particular form and not leave it to the people themselves to decide it for themselves,” he had said. His words had influenced the final decision to omit the two words.

However, Prime Minister Indira Gandhi re-introduced the two words for political reasons in the 42nd Constitution Amendment of 1976. Constitutional expert Subhash Kashyap said: “The word ‘socialist’ was added to send a message politically that she stood for the poor. The word ‘secular’ was obviously meant for the minorities in the context of the birth control programmes of the emergency period. It was not as if the Constitution was not secular or socialist before the words were added. India has been secular before the 42nd Amendment and continues to be secular after it.” “It was merely playing politics,” Mr. Kashyap said.

He said the present controversy over the government advertisement was “innocuous.” “The advertisement only shows the Preamble originally signed by the Constituent Assembly members with the calligraphy of the famous artist, Nandalal Bose.”

It shows the Preamble as on January 26, 1950 when the country became a republic, he said.

ಕೃಪೆ: ಉದಯವಾಣಿ

ಅರಕೆರೆ ಜಯರಾಮ್‌

ಸಂವಿಧಾನದ ಪೀಠಿಕಾಭಾಗದಿಂದ "ಜಾತ್ಯತೀತ' (ಸೆಕ್ಯುಲರ್‌) ಹಾಗೂ "ಸಮಾಜವಾದಿ' (ಸೋಶಲಿಸ್ಟ್‌) ಎಂಬ ಪದಗಳನ್ನು ತೆಗೆದುಹಾಕುವ ಅಗತ್ಯ ಕುರಿತಂತೆ ಕೇಂದ್ರದ ಎನ್‌ಡಿಎ ಸರಕಾರದ ಕೆಲ ಸಚಿವರು ಚರ್ಚೆಯೊಂದನ್ನು ಆರಂಭಿಸಲು ಮುಂದಾಗಿದ್ದು, ಈ ವಿದ್ಯಮಾನ 1970ರ ದಶಕದ ಆದಿಭಾಗದಲ್ಲಿ ದೇಶದಲ್ಲಿ ಸಂಚಲನ ಮೂಡಿಸಿದ್ದ ತೀವ್ರ ಚರ್ಚೆಯೊಂದರ ನೆನಪನ್ನು ಮತ್ತೆ ಜೀವಂತಗೊಳಿಸಿದಂತಾಗಿದೆ. ಯಾವ ದೃಷ್ಟಿಯಿಂದ ನೋಡಿದರೂ ಇಂಥದೊಂದು ಚರ್ಚೆ ನಡೆಯಬೇಕಾದುದು ಅತ್ಯಂತ ಸ್ವಾಗತಾರ್ಹವೇ ಆಗಿದೆ. ನರಸಿಂಹರಾವ್‌ ಸರಕಾರ 1991ರಿಂದ ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಉದಾರೀಕರಣ ಹಾಗೂ ಜಾಗತೀಕರಣಗಳನ್ನು ಅಳವಡಿಸಿಕೊಂಡು ಮುಂದುವರಿದುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಸಂಗತಿ, ಸಮಾಜವಾದದೊಂದಿಗೆ ಬಲವಂತದ ಮದುವೆ ಮಾಡಿಕೊಂಡಂತಿರುವ ನಮ್ಮ ಸಂವಿಧಾನವನ್ನು ಪ್ರತಿದಿನವೂ ಗೇಲಿ ಮಾಡುತ್ತಲೇ ಇದೆ.

ಇಲ್ಲೊಂದು ಕುತೂಹಲಕಾರಿ ಅಂಶವೊಂದನ್ನು ಗಮನಿಸಬೇಕು. "ಸಮಾಜವಾದಿ', "ಜಾತ್ಯತೀತ' ಹಾಗೂ "ಪ್ರಜಾಸತ್ತಾತ್ಮಕ' ಎಂಬ ಪದಗಳನ್ನು ಸಂವಿಧಾನದಲ್ಲಿ ಸೇರ್ಪಡೆಗೊಳಿಸುವ ಕೆಲಸ ನಡೆದಿರುವುದು 1976ರಲ್ಲಿ; 42ನೆಯ ತಿದ್ದುಪಡಿಯ ಮೂಲಕ. ಅಂದರೆ, ದೇಶದಲ್ಲಿ ಪ್ರಜಾಪ್ರಭುತ್ವವೆಂಬುದು ಸಂಪೂರ್ಣ ಗೈರುಹಾಜರಾಗಿದ್ದ ಕಾಲದಲ್ಲಿ! ಅವು ಇಂದಿರಾಗಾಂಧಿ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದ್ದ ದಿನಗಳು.

ಸೆಕ್ಯುಲರ್‌ ಅಥವಾ ಜಾತ್ಯತೀತ ಎನ್ನುವ ಶಬ್ದ ಕೋಮುವಾದಿ ಧೋರಣೆಯ ಮನಸ್ಸುಗಳನ್ನು ಕೆದಕಿದಂತಾಗುವುದರಿಂದ ಅಥವಾ ಉದ್ರೇಕಿಸಿದಂತಾಗುವುದರಿಂದ ಈ ಪದವನ್ನು ಸಂವಿಧಾನದಿಂದ ತೆಗೆದುಹಾಕುವ ಪ್ರಶ್ನೆಯನ್ನು ಬದಿಗಿಡುವುದೇ ದೇಶದ ಪಾಲಿಗೆ ಕ್ಷೇಮಕರವೆಂಬುದು ನಿಜವಿರಬಹುದು. ಇದೇ ರೀತಿ, ಕಾಂಗ್ರೆಸ್‌ ಹಾಗೂ ಎಡಪಕ್ಷಗಳು ಅಲ್ಪಸಂಖ್ಯಾಕರ ಮನಸ್ಸಿನಲ್ಲಿ - ಅವರು ಸಹಜವಾಗಿ ಘಾಸಿಗೊಳ್ಳುವುದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ - ಭೀತಿಗಳನ್ನು ತುಂಬುವ ಸಾಧ್ಯತೆಯೂ ಇದೆ. ಇದಲ್ಲದೆ, ಸುಪ್ರೀಂ ಕೋರ್ಟ್‌ ಕೂಡ ತನ್ನ ಹಲವು ತೀರ್ಪುಗಳಲ್ಲಿ ಜಾತ್ಯತೀತತೆ ಸಂವಿಧಾನದ ಮೂಲ ಸಂರಚನೆಯ ಭಾಗವೇ ಆಗಿದೆ ಎಂದು ಸ್ಪಷ್ಟ ಪಡಿಸಿದೆ. ಇಂಥ ತೀರ್ಪುಗಳಲ್ಲಿ ಮುಖ್ಯವಾದುದು ಕಾಸರಗೋಡಿನ ಎಡನೀರು ಮಠಾಧಿಪತಿ ಶ್ರೀ ಕೇಶವಾನಂದ ಭಾರತಿಯವರಿಗೆ ಸಂಬಂಧಿಸಿದ ಪ್ರಕರಣದಲ್ಲಿ ನೀಡಲಾಗಿದ್ದ ತೀರ್ಪು (1973 ಎಪ್ರಿಲ್‌). 1994 ರಲ್ಲಿ ಎಸ್‌.ಆರ್‌. ಬೊಮ್ಮಾಯಿ - ಕೇಂದ್ರ ಸರಕಾರದ ನಡುವಣ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಹೊರಡಿಸಿದ್ದ ತೀರ್ಪಿನಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ.

ಇದೀಗ ಕೇಂದ್ರದಲ್ಲಿನ ಬಿಜೆಪಿ ಸಚಿವರು ಚರ್ಚೆಗೆ ಬನ್ನಿ ಎಂದು ಆಹ್ವಾನಿಸಿದ್ದಾರಷ್ಟೆ? ಈ ಚರ್ಚೆ ಕೇವಲ ಸಂವಿಧಾನದಿಂದ ಸೋಶಲಿಸ್ಟ್‌ ಎಂಬ ಪದವನ್ನು ತೆಗೆದುಹಾಕುವುದಕ್ಕಷ್ಟೆ ಸೀಮಿತವಾಗಬಾರದು. 1978ರಲ್ಲಿ ಸಂವಿಧಾನದ 44 ನೆಯ ತಿದ್ದುಪಡಿ ಮೂಲಕ ತೆಗೆದುಹಾಕಲಾಗಿದ್ದ ಆಸ್ತಿ ಕುರಿತ ಮೂಲಭೂತ ಹಕ್ಕಿನ ಉಲ್ಲೇಖವನ್ನು ಸಂವಿಧಾನದಲ್ಲಿ ಮರುಸೇರ್ಪಡೆಗೊಳಿಸುವ ಬಗೆಗೂ ಚರ್ಚೆಯಾಗಬೇಕು. ಅಚ್ಚರಿ ಎಂದರೆ ನಾಗರಿಕರ ಆಸ್ತಿಹಕ್ಕನ್ನು ನಿರಸನಗೊಳಿಸುವ ತಿದ್ದುಪಡಿ ತಂದಾಗ ಕೇಂದ್ರದಲ್ಲಿದ್ದುದು ಜನಸಂಘ (ಇಂದಿನ ಬಿಜೆಪಿ) ಸರಕಾರ. ಈ ತಿದ್ದುಪಡಿಯ ಮೂಲಕ ಮೂಲ ಸಂವಿಧಾನದ 19 (1) ಎಫ್ ವಿಧಿಯನ್ನು (ಆಸ್ತಿ ಕುರಿತ ಮೂಲಭೂತ ಹಕ್ಕು) ಹಾಗೂ 31ನೆಯ ವಿಧಿಯನ್ನು (ಕಡ್ಡಾಯ ಆಸ್ತಿ ಸ್ವಾಧೀನ) ರದ್ದುಗೊಳಿಸಲಾಯಿತು. ಈ ಪೈಕಿ ಮೊದಲನೆಯ ವಿಧಿಯ ಬದಲಿಗೆ 300 ಎ ವಿಧಿಯನ್ನು (ಅಧಿಕಾರ ಅಥವಾ ಕಾಯ್ದೆಯ ಬಲದ ಹೊರತು ಯಾವನೇ ವ್ಯಕ್ತಿಯೂ ತನ್ನ ಆಸ್ತಿ ಮೇಲಿನ ಹಕ್ಕನ್ನು ಕಳೆದುಕೊಳ್ಳುವಂತಿಲ್ಲ ಎಂಬ ಷರತ್ತು) ಅಳವಡಿಸಿಕೊಳ್ಳಲಾಯಿತು. ಅರ್ಥಾತ್‌, ಆಸ್ತಿ ಮೇಲಿನ ಹಕ್ಕೆಂದರೆ ಅದು ಕೇವಲ ಸಾಂವಿಧಾನಿಕ ಅಥವಾ ಕಾನೂನುರೀತ್ಯಾ ಹಕ್ಕೇ ಹೊರತು, ಮೂಲಭೂತ ಹಕ್ಕಲ್ಲ ಎಂಬಂತಾಯಿತು. ಹೀಗೆ, ಆಸ್ತಿ ಹಕ್ಕು ಸಂವಿಧಾನದ ಮೂಲಸ್ವರೂಪದಲ್ಲೇ ಅಂತರ್ಗತವಾಗಿದೆಯೆಂಬ ಶ್ರೀ ಕೇಶವಾನಂದ ಭಾರತಿಯವರ ಪ್ರಕರಣದಲ್ಲಿನ ತೀರ್ಪನ್ನು ಗಣನೆಗೆ ತೆಗೆದುಕೊಳ್ಳದೆಯೇ ಈ ತಿದ್ದುಪಡಿ ಮಾಡಲಾಯಿತು. ಆದರೂ ಸಂವಿಧಾನದಲ್ಲಿ ಹೊಸದಾಗಿ ಸೇರಿಸಿದ (300 ಎ) ವಿಧಿಯಡಿಯಲ್ಲಿ ಆಸ್ತಿಹಕ್ಕಿಗೆ ಮತ್ತಷ್ಟು ಬಲ ಬಂದಿದೆ ಎಂದು ಕೆಲ ಕಾನೂನುತಜ್ಞರು ಅಭಿಪ್ರಾಯಪಟ್ಟಿರುವುದುಂಟು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಯೋಚಿಸುವವರೂ ಇಲ್ಲದಿಲ್ಲ.

ಮೂಲ ಸಂವಿಧಾನದ ಬೇರೆ ಯಾವುದೇ ವಿಧಿಯೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಿವಾದ ಸೃಷ್ಟಿಸಿದ್ದಿಲ್ಲ, ಸರ್ಕಾರ, ನ್ಯಾಯಾಂಗದ ನಡುವೆ ದೊಡ್ಡ ರೀತಿಯಲ್ಲಿ ಘರ್ಷಣೆಗೆ ಕಾರಣವಾದುದೂ ಇಲ್ಲ. 19 (1) ಎಫ್ ವಿಧಿಯನ್ನು ಕಿತ್ತುಹಾಕುವವರೆಗಿನ ಕಾಲಾವಧಿಯಲ್ಲಿ ಸುಪ್ರೀಂ ಕೋರ್ಟ್‌ ಈ ವಿಧಿಗೆ ಸಂಬಂಧಿಸಿದಂತೆ 275 ತೀರ್ಪುಗಳನ್ನು ನೀಡಿ ದಾಖಲೆಯನ್ನೇ ಸೃಷ್ಟಿಸಿದೆ! ಅಲ್ಲದೇ 2010ರ ಅಕ್ಟೋಬರ್‌ನಲ್ಲಿ ಸುಪ್ರೀಂಕೋರ್ಟ್‌, ಆಸ್ತಿಹಕ್ಕನ್ನು ಮೂಲಭೂತ ಹಕ್ಕೆಂದು ಸಂವಿಧಾನದಲ್ಲಿ ಮರಳಿ ದಾಖಲಿಸಬೇಕೆಂದು ಹಾಗೂ ಸಮಾಜವಾದಿ ಎಂಬ ಪದವನ್ನು ಸಂವಿಧಾನದಿಂದ ತೆಗೆದುಹಾಕಬೇಕೆಂದು ಕೋರಿಕೊಳ್ಳಲಾಗಿದ್ದ ದೂರೊಂದನ್ನು ವಜಾಗೊಳಿಸಿತ್ತು.

44ನೆಯ ಸಂವಿಧಾನ ತಿದ್ದುಪಡಿಯಾದ 29 ವರ್ಷಗಳ ಬಳಿಕ, ಅಂದರೆ 2007ರಲ್ಲಿ ಈ ಎರಡೂ ವಿಷಯಗಳನ್ನು ಪ್ರಶ್ನಿಸಲಾಯಿತು. ದೂರನ್ನು ಸುಪ್ರೀಂಕೋರ್ಟಿನಲ್ಲಿ ದಾಖಲಿಸಿದ್ದು, ಗುಡ್‌ ಗವರ್ನೆನ್ಸ್‌ ಇಂಡಿಯಾ ಪೌಂಡೇಶನ್‌ ಎಂಬ ಕೋಲ್ಕತಾ ಮೂಲದ ಸಂಘಟನೆ. ಭಾರತದ ಶ್ರೇಷ್ಠ ನ್ಯಾಯಾಧೀಶರಾಗಿದ್ದ ಎಸ್‌.ಎಚ್‌. ಕಪಾಡಿಯಾ ನೇತೃತ್ವದ ಹಾಗೂ ನ್ಯಾ| ಕೆ.ಎಸ್‌. ರಾಧಾಕೃಷ್ಣನ್‌ ಮತ್ತು ನ್ಯಾ| ಸ್ವತಂತ್ರ ಕುಮಾರ್‌ ಸದಸ್ಯತ್ವದ ನ್ಯಾಯಪೀಠವೊಂದು ಈ ಅರ್ಜಿಯನ್ನು ತಿರಸ್ಕರಿಸಿ "ನಿಮ್ಮ ವಾದವನ್ನು ಒಪ್ಪಿಕೊಂಡರೆ ನಾವು ಆಸ್ತಿಹಕ್ಕು ಕುರಿತ ಈ ಹಿಂದಿನ ಪ್ರಕರಣಗಳಲ್ಲಿನ ತೀಪು‌ìಗಳನ್ನು ಅಲ್ಲಗಳೆದಂತಾಗುತ್ತದೆ; ಇತ್ತೀಚೆಗಷ್ಟೇ ಇಂಥದೇ ಅರ್ಜಿಯನ್ನು ತಿರಸ್ಕರಿಸಿಯಾಗಿದೆ. ಪುನಃ ಈ ವಿಷಯ ಶುರುಮಾಡುವುದು ಸಾಧ್ಯವಿಲ್ಲ' ಎಂದು ಸ್ಪಷ್ಟವಾಗಿ ತಿಳಿಸಿತು.

ವಿಶೇಷ ಆರ್ಥಿಕ ವಲಯ (ಎಸ್‌ಇಝಡ್‌ ) ಗಳ ಸ್ಥಾಪನೆಗಾಗಿ ಕೃಷಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದ್ದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ದೂರಿನ ಪ್ರಕರಣ ಇದಾಗಿತ್ತು. ಏನಿದ್ದರೂ ಇಂದಿರಾಗಾಂಧಿ ಸರಕಾರ 1971ರಲ್ಲಿ ಸಂವಿಧಾನದ 25ನೆಯ ತಿದ್ದುಪಡಿಯ ಮೂಲಕ ಆಸ್ತಿ ಹಕ್ಕನ್ನು ದುರ್ಬಲಗೊಳಿಸಿಯಾಗಿತ್ತು! ಈ ತಿದ್ದುಪಡಿಯ ಮೂಲಕ ಸರಕಾರ, 1970ರಲ್ಲಿ ಬ್ಯಾಂಕ್‌ ರಾಷ್ಟ್ರೀಕರಣ ಕುರಿತ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ಅನೂರ್ಜಿತಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌, "ಯಾವುದಾದರೂ ಆಸ್ತಿಯನ್ನು ಸರಕಾರ ಕಡ್ಡಾಯವಾಗಿ ಸ್ವಾಧೀನಪಡಿಸಿಕೊಂಡಲ್ಲಿ ಸೂಕ್ತ ಪರಿಹಾರ ಪಾವತಿಸಲು ಅದು (ಸರಕಾರ) ಬದ್ಧವಾಗಿರುತ್ತದೆ' ಎಂದು ಹೇಳಿತ್ತು.

ಆಸ್ತಿ ಹಕ್ಕು ಹಾಗೂ ಸೋಶಲಿಸ್ಟ್‌ ಪದ ಕೈಬಿಡುವ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ 2010ರಲ್ಲಿ ನೀಡಿದ್ದ ತೀರ್ಪನ್ನು ಒಂದು ಶಾಸನದ ಮೂಲಕ ತಳ್ಳಿಹಾಕುವ ಹಕ್ಕು ಸರಕಾರಕ್ಕಿದೆ! ಇತ್ತೀಚೆಗೆ ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದ ಕೊಲಿಜಿಯಂ (ನೇಮಕ ಸಮಿತಿ ) ವ್ಯವಸ್ಥೆಯನ್ನು ಅದು ರದ್ದು ಪಡಿಸಿದ್ದೂ ಇದೇ ವಿಧಾನದಿಂದ. ನ್ಯಾಯಾಧೀಶರುಗಳ ನೇಮಕಾತಿಯ ನಿರ್ವಹಣೆಗಾಗಿ ಈಗ "ನ್ಯಾಯಾಂಗೀಯ ನೇಮಕಾತಿ ಆಯೋಗ' ಅಸ್ತಿತ್ವಕ್ಕೆ ಬಂದಿದೆ. ಈ ಮೂಲಕ ಈ ನೇಮಕಾತಿಗಳ ವಿಷಯದಲ್ಲಿ ನ್ಯಾಯಾಂಗ ತನ್ನ ಪ್ರಾಮುಖ್ಯವನ್ನು ಕಳೆದುಕೊಂಡಂತಾಗಿದೆ.

ಸಂವಿಧಾನದಲ್ಲಿ "ಸಮಾಜವಾದಿ' ಎಂಬ ಪದ ರಾರಾಜಿಸುತ್ತಿದ್ದರೂ ಅದು ನಮ್ಮ ದೇಶವನ್ನು ಒಂದೇ ಒಂದು ಅಂಚಿನಷ್ಟೂ ಮುಂದೆ ಒಯ್ದಿಲ್ಲವೆಂಬ ಸತ್ಯ ಎಂಥ ಹೆಡ್ಡನಿಗೂ ಅರ್ಥವಾಗುವಂಥದೇ. ವಾಸ್ತವವಾಗಿ ನಾವು ಈ ಆದರ್ಶದಿಂದ ತುಂಬಾ ದೂರ ಸರಿದಿದ್ದೇವೆ, ಸರಿಯುತ್ತಿದ್ದೇವೆ. ನಮ್ಮ ರಾಷ್ಟ್ರ ಈಗ ತೀರಾ ಬಂಡವಾಳಶಾಹಿಯಾಗಿ ಬೆಳೆದುನಿಂತಿದೆ. ಆದಾಯದಲ್ಲಿನ ಅಸಮಾನತೆ ಬೆಳೆಯುತ್ತಲೇ ಇದೆ. ಸಂಪತ್ತಿನ ಶೇಖರಣೆಗೆ ಕಡಿವಾಣ, ಸರ್ವಜನ ಕಲ್ಯಾಣ ಇತ್ಯಾದಿಗಳನ್ನು ಒತ್ತಿಹೇಳುತ್ತಿರುವ ರಾಷ್ಟ್ರೀಯ ನೀತಿಗೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳು (39ನೆಯ ವಿಧಿಯಲ್ಲಿ ಹೇಳಿರುವಂಥವು) ಇಂದು ಅರ್ಥವಿಲ್ಲದ ಪದಗಳಾಗಿ ಬಿಟ್ಟಿವೆ. ತಾತ್ಪರ್ಯ ಇಷ್ಟೇ - ನಮ್ಮ ಸಂವಿಧಾನವನ್ನು ಹಾಗೂ ಆಡಳಿತ ವ್ಯವಸ್ಥೆಯನ್ನು ಯಾವುದೇ ಸಿದ್ಧಾಂತದ ಸೆರೆಯಾಳನ್ನಾಗಿಸಕೂಡದು. ನಾವೀಗ ಸಮಾಜವಾದಿ ಎಂಬ ಪದಕ್ಕೆ ವಿದಾಯ ಹೇಳಲು ಇದೇ ಅತ್ಯಂತ ಸೂಕ್ತ ಸಮಯ. ಉಳ್ಳವರು ಇನ್ನಷ್ಟು ಶ್ರೀಮಂತರಾಗುತ್ತ ಹೋಗುವ, ಬಡವರು ಮತ್ತೂ ಬಡವರಾಗುತ್ತ ಹೋಗುವ ವಿದ್ಯಮಾನದಿಂದ ಉದ್ಭವಿಸುವ ನಾನಾ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಈ ಪದ ನಿಜಕ್ಕೂ ವಿಫ‌ಲವಾಗಿದೆ.

Debating the secular-communal divide

Courtesy: http://www.thehindu.com/

AJAY GUDAVARTHY

The right-wing brand of politics seems to be a step ahead in articulating the idea of ‘justice for all,’ which should have ideally come from those championing secularism and more so from the religious minorities themselves

Come election time and we invariably indulge in India’s very own “Great Debate” on the secular-communal divide in our democracy. While the Left and regional parties, that wish to either launch a third alternative or align with the Congress, resort to the need to keep communal forces at bay and maintain the secular fabric of the nation, the Bharatiya Janata Party (BJP) and the Sangh Parivar lament minority appeasement and vote-bank politics and instead suggest universal development and providing education and employment to all. “Justice to all, appeasement of none” or “Sab ka Saath, Sab ka Vikas” is their new mantra. In terms of popular perception (that matters the most in democracy in general, but more so in the electoral season), this has now become almost an insurmountable divide.

Post the Sachar Committee report, there is enough data to prove that Muslims are badly off in terms of education and economic opportunities. In some cases, this means being worse off than even Dalits. Therefore, to make special provisions for Muslims, including demanding reservations on religious grounds or including them in the Other Backward Classes (OBC) category is only a necessary corrective measure. When Jats and Rajputs are being included in the OBC list and Gujjars in Rajasthan make the demand to be recognised as Scheduled Tribes, there is very little justification in denying Muslims their due share in the resources of the state. Even if the Constitution does not recognise affirmative action on religious grounds, there is enough sociological reasoning behind demanding special provisions for Muslims. Legal reasoning and pronouncements are not absolute. They need to be opened up to the emerging reality because many of the legal pronouncements themselves are based on no specific logic except in reinforcing popular perceptions about justice, including the cap on reservations not crossing 50 per cent that has no special logic except to maintain a perceived idea about merit, efficiency and equal opportunity in the system. Similarly, this skewed logic that special provisions encourage vote-bank politics has been a long-standing complaint not only with Muslims but also with regard to policies for Dalits and the OBCs. While the former is seen as minority-appeasement, the latter is believed to be aiding the flaring up of casteism in society. Recognising specific disabilities is not reinforcing the divide but only providing a corrective to the divide that already exists and is not created by such protective policies. Further, the idea that vote-bank politics is limited to Muslims and Dalits is itself a misconception perpetuated for way too long by the dominant social groups, both religious and caste-based. Is it not true that the upper castes and the upper classes vote as vote-banks in India? How else can one explain the popularity of the BJP in the urban areas and among caste Hindus? The dominant social-religious and caste groups take recourse to the reasoning of individual rational choice but have voted as clusters all along.

A discourse in crisis

However, the problem with the secular-communal divide does not end here. The language and discourse of secularism itself has entered an irretrievable crisis across the world. In Europe, the secular separation of religion and politics was followed up by multiculturalism as a preservation of cultural differences, which has only resulted in an increasing ghettoisation of religious minorities and the creation of “parallel societies” and demands, mostly on Muslim populations, to demonstrate loyalty, and adopt the “our” values of the dominant community. This has given a fillip to not only a separation of communities but also, what Slavoj Žižek refers to as “racism at distance.” Now, Europe is exploring the possibility of shifting from multiculturalism to pluralism in order to open up intercultural dialogic spaces. In India too, secularism has contributed to the entrenching of received ideas about religious minorities — mostly Muslims. It has rarely succeeded in opening up dialogue between religious communities. How much is known about what a majority of Muslims feel about M.F. Husain painting Hindu goddesses, or about Hindus being killed in Bangladesh or Baluchistan? There is an impending need to overcome the “fear” of listening to their voices. Similarly, in a democracy it is only proper to expect them to respond to forms of injustice that not merely hurt them but also other vulnerable social groups. As we do not expect women alone to speak up on women’s issues, or Muslims alone to speak on issues of communal violence, we cannot expect Muslims too to speak up only on issues related to religious minorities. It could in fact be argued that Muslim groups that protest against the exceptionalism of the state in Kashmir, and the witch-hunt in the name of terrorism and “suspect Muslims,” also speak up against these very methods against tribals in Chhattisgarh, and the citizens of the northeast. Unless the religious minorities do not come across as being “secular” themselves on some parameter, then the forces of the far-right will continue to exploit these silences for sectarian mobilisation. This is not to demand loyalty but to move beyond secular sectarianism in speaking for others. This is not a demand to prove the legitimacy of “their” belonging but a legitimate — dignifying — demand that ought to be made in any healthy democracy.

The search for the weak

The roots of communalism are fast shifting. They no longer exist “merely” in the memory of Partition or modern-day terrorism. They are in fact emerging from an entrenched caste psyche. Caste is a ladderlike structure with every group having a dual-positionality, with an oppressor above and the oppressed below. Keeping caste privileges and also undoing caste for every individual subgroup is as much about unsettling those above as keeping those below in their downgraded positioning. Anti-caste movements have exclusively addressed the atrocities of those above but never as much simultaneously articulated the caste hegemony towards those below by the very same sub group/sub caste. The momentum today is much in terms of maintaining this caste hegemony and subjugating those below. Subjugating those below is the most readily available strategy to undo the humiliation — as a quick psychological relief/empowerment — perpetuated by those above in the caste ladder. This reverse- osmosis of caste groups has led to a process of searching for and identifying groups that are relatively weak socially, politically and economically. This process goes down all the way to the smallest and most underprivileged caste groups. This is the psyche that allows for the dominant groups to self-represent themselves as victims, and the less-privileged as enjoying undue largesse and thereby as either opportunists with regard to Dalits or as aggressors with regard to Muslims. However, in this search for the weak, the buck seems to finally stop with identifying Muslims as the necessary “other.” They are weaker, perceived to be “outsiders”, and are perhaps the most vulnerable social group in India, combined with an imagination of the community as being aggressive.

The failure of the political project of building a “Bahujan Samaj” reveals the limits of the “secular upsurge” in India. The cynicism of the caste psyche that produces the Muslim as the “other” is ironically also the source to maintain and consolidate the Hindu fold against its internal fractures along caste lines for the Hindutva brand of mobilisation. Growing mobility for marginalised caste groups has resulted in increasing caste conflicts and, in turn, widespread communal violence. The entrenched sectarianism of the caste system cannot, however, be tackled with secular sectarianism that dithers from asking religious minorities to address issues of justice across religious and other social identities. Strangely, the Hindutva brand of politics seems to be a step ahead in articulating the idea of “justice for all,” which should have ideally come from those championing secularism and more so from the religious minorities themselves.

(Ajay Gudavarthy is with the Centre for Political Studies, Jawaharlal Nehru University, New Delhi.)

What’s all the fuss about?

Courtesy: http://www.thehindu.com/

Can the removal of the words ‘secular’ and ‘socialist’ from the Preamble distort the Constitution? What do these words mean to young India? We bring you reactions from across the nation.

secular_hindu Vrinda Bedi, 26, doesn’t have the time to read newspapers as she rushes to work every morning. On January 26, she did not notice the advertisement issued by the Ministry of Information and Broadcasting that showed the Preamble of the Constitution without the words ‘socialist’ and ‘secular’. “It really doesn’t matter to me,” she says. “How does it matter what is written and what is omitted? What matters is what we follow.”

The ad used the Preamble before its amendment in 1976, which was when the words were included. Not surprisingly, there was an outcry. However, the controversy posed an opportunity to let young India think about their relevance and import.

Many agree with Vrinda. “Clearly, those words being part of the Preamble has made little difference. Taking them off might actually be just as immaterial too,” says Ravi Daithankar, 31, a management professional from Pune.

However, some said that the omission was a signal of the times to come. “We grew up learning that India is a secular country. This thought has allowed me to follow my faith the way I wanted. But I feel there is a slight imbalance in our secular values of late; with people coming up with statements on how this country originally belonged to the Hindus and their outcry against religious conversions. I do not know how secularism will survive in future,” says 27-year-old Safa Abdul Razak from Coimbatore.

There are those who strongly feel that India’s secular credentials are safe. “Yes, India is secular because the term is an undisputable part of our Constitution. Different communities can display their gods, worship them, and celebrate festivals,” says Neha Mathur, Programme Director, Bright Spark Education, Hyderabad. Keshav Kumar Singh, a Pune-based businessman, agrees: “India, despite the blights in its democracy, is a remarkably secular country.”

But there are others who don’t agree. Are we even secular, asks 23-year-old Hyderabad-based entrepreneur Abhinav Reddy. “In reality, I don’t think so,” he says. “The fact that we have religion-based political parties suggests that we aren’t really people who abide by what’s written.” Sneha Johari, a 28-year-old from Pune, points out, “Both the anti-Sikh riots of 1984 and the post-Godhra 2002 anti-Muslim riots are cases in point that India is no longer secular.” Others recollect recent instances that they have witnessed, which have shattered their idea of India being secular. “I was 18 when my town was engulfed in massive murders,” says Rameshbhai Solanki, a businessman from Ahmedabad. “How can I then call this country secular?” A student of Delhi University, Deepti Mishra travelled to neighbouring Muzaffarnagar in 2013 when the religious riots happened. She still shudders at the thought of going back there.

Interestingly, the discussion around socialism was based in the past. “India has never been a socialist country. Look at the number of foreign direct investments. Also, we are the biggest tax-paying country. How much of this money is spent on the poor? Just compare the infrastructural facilities and quality of teaching in Government schools and the private ones. This will give us a sense of how socialistic India is,” says Razak.

Hari Shanker, a banker in Thiruvananthapuram, believes that India retains strains of socialism, despite being capitalist. “Despite a paradigm shift in our policy towards capitalisation and disinvestment, I believe that our country still holds the tenets of socialism close to its heart,” he says. “Post-liberalisation, a host of multinational giants have set shop in our country. Yet, the government strives to cater to the needs of the ordinary citizens through many welfare schemes. We still have a large public distribution system; rural employment programmes etc. Through a host of such welfare programmes, the government tries its best to ensure the welfare of its citizens. Of course many of these systems are far from perfect.”

Again many youngsters have a contrary view to this. Sundar Yazhin a student from Coimbatore, says “Every sector in the country is privatised. Education has turned into business. Medicine is just another tool for private players to fleece the poor.” Arun Daniel Yellamaty, founder of the Youngistaan Foundation in Hyderabad agrees with this. “The rich are getting richer and poor poorer in India,” he says; a view echoed by Alifiya M. Mamoowala, a home-maker from Coimbatore.

In fact, the terms ‘secularism’ and ‘socialist’ words were added during the 42nd amendment to the Constitution, during the Emergency. The rationale behind it was to reassure the nation that minorities would be safe and the moneyed class would not dominate the economy. To people like Ratnesh Jain, 31, from Pune, those words were important and remain relevant. “Apart from some cultural and industrial development in a handful of states like Maharashtra, Gujarat and Karnataka, others like Orissa, M.P. and Chhattisgarh lag behind in many welfare indicators. Even the progressive states are not free from the taint of chauvinism and communalism. So, I think the retention of secular and socialist, even though discarded in practice, acts as a check on mindless development and communalism.”

On January 26, activist Kavita Krishnan launched a signature campaign against the ad. “Shocking Govt ad on R-Day that cut ‘secular’ & ‘socialist’ from Preamble of Constitution of India,” read her tweet. Rajyavardhan Rathore, Minister of State for Information and Broadcasting, responded, “Are we to say that the governments before 1976 were not secular? That’s not the point. We were secular we will always be secular. We are honouring the first Preamble, hence this picture for the advertisement.” A day after the ad was published, the Shiv Sena demanded permanent deletion of the words “secular” and “socialist” from the Preamble to the Constitution.

India has amended the Constitution 99 times in the past 65 years. In comparison, since 1789, the US constitution has been amended only 33 times. “The Constitution is merely a guideline for the state. Not for the people of the state. The notion of what seems right to the people of a country comes from the prevalent cultural and social norm, not the Constitution. We need to debate if adding a certain word or group of words in the Constitution has any material impact (positive or negative) on the lives of the people,” says Daithankar.

In order for such debates around secularism and socialism to be more nuanced, the country needs to focus on education, says Jain. “Our country needs a thorough overhauling of our education system. We need students to start thinking critically of their environment from an early age.”

Devavrat Ravetkar from Pune, on the other hand, feels we need to encourage more political participation from the people. “We need to redesign our systems to strongly encourage increasing participation of citizens,” he says. Amla Sheen, 32, agrees. “We can’t just wake up one day and ask people what they feel about secularism and socialism. It needs to be a constant process. Also, we need to bear in mind that their definitions change periodically.”

During the Constituent Assembly debates, B.R. Ambedkar had expressed his concern over including the two words. Calling them superfluous, he said that the nation is free to decide what path it wants to chart. In this context, it seems pertinent to ask: what is the path the nation is now charting?

With inputs from PARSHATHY J. NATH in Coimbatore;

SHOUMOJIT BANERJEE in Pune;

RANJANI RAJENDRA in Hyderabad;

SARASWATHY NAGARAJAN, NITA SATHYENDRAN, ATHIRA M. in Thiruvananthapuram

06 February 2015

Constitution_of_India ಸಂವಿಧಾನದ ಪೀಠಿಕೆ ಭಾಗದಲ್ಲಿರುವ 'ಸೆಕ್ಯುಲರ್‌' ಮತ್ತು 'ಸೋಷಿಯಲಿಸ್ಟ್‌' ಪದವನ್ನು ತೆಗೆದುಹಾಕಲಾಗುವುದು ಎಂಬ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿಕೆ ಸೆಕ್ಯುಲರ್‌ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಸೆಕ್ಯುಲರ್‌ ಕುರಿತ ಚರ್ಚೆ ದಶಕಗಳಷ್ಟು ಹಳೆಯದಾದರೂ ಹೊಸ ಹೊಸ ವ್ಯಾಖ್ಯಾನಗಳೊಂದಿಗೆ ಅದು ಇಂದಿಗೂ ಮುಂದುವರಿದಿದೆ. ಬಹುಷಃ ಸೆಕ್ಯುಲರ್‌ ಪರಿಕಲ್ಪನೆಯ ವಿಭಿನ್ನ ವ್ಯಾಖ್ಯಾನದಲ್ಲಿಯೇ ಭಾರತೀಯ ಬೌದ್ಧಿಕತೆ ರೂಪು ತಳೆದಿದೆ ಎಂದರೂ ತಪ್ಪಾಗುವುದಿಲ್ಲ. ಯಾಕೆಂದರೆ, ಕೋಮುವಾದದ ವ್ಯಾಖ್ಯಾನ, ವಿವರಣೆಯಿಲ್ಲದೆ ಸೆಕ್ಯುಲರ್‌ ಕಲ್ಪನೆಯ ವಿವರಣೆ ಸಾಧ್ಯವೇ ಇಲ್ಲ. ಈ ಎರಡೂ ಕಲ್ಪನೆಗಳು ಭಾರತೀಯ ಬೌದ್ದಿಕತೆಯ ಜೀವಾಳ. 'ಭಾರತೀಯ ಸಂವಿಧಾನದ ಮೂಲಾಧಾರ, ಪ್ರಜಾಪ್ರಭುತ್ವ ಆತ್ಮ' ಎಂದೇ ಭಾವಿಸಲಾದ ಸೆಕ್ಯಲರ್‌ ಪದವನ್ನು ಅದರ ಪೀಠಿಕಾ ಭಾಗದಿಂದ ತೆಗೆದು ಹಾಕುವ ಸರಕಾರದ ಪ್ರಸ್ತಾವನೆ ಸಾಕಷ್ಟು ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಬಹುತೇಕ ಚಿಂತಕರು ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿರೋಧದ ಸ್ವರೂಪ ಅರಿತ ಕೇಂದ್ರ ಸರಕಾರ ಸಂವಿಧಾನದ ಪೀಠಿಕೆ ಭಾಗದಲ್ಲಿರುವ ಸೆಕ್ಯುಲರ್‌ ಪದವನ್ನು ತೆಗೆದುಹಾಕುವುದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ವಿವಾದವನ್ನು ತಣ್ಣಗಾಗಿಸುವ ಕೆಲಸ ಮಾಡಿದೆಯಾದರೂ ಚರ್ಚೆ ಮಾತ್ರ ಮುಂದುವರಿದೇ ಇದೆ.
ಸೆಕ್ಯುಲರ್ ಎನ್ನುವುದು ಕೇವಲ ಪದವಲ್ಲ ಅಥವಾ ಬರಿಯ ಪರಿಕಲ್ಪನೆ ಮಾತ್ರವೂ ಅಲ್ಲ. ಇದು ಒಂದು ಚಿಂತನಾಕ್ರಮ. ಧಾರ್ಮಿಕತೆಯಲ್ಲಿ ಸರಕಾರವೊಂದು ತಾಳಬೇಕಾದ ಒಂದು ಕಡ್ಡಾಯ ನಿಲುವು. ಸರಳವಾಗಿ ಮತ್ತು ನೇರವಾಗಿ ಹೇಳುವುದಾದರೆ, ಸೆಕ್ಯುಲರ್‌ ಎನ್ನುವುದು ಜನರ ಧರ್ಮ (ರಿಲಿಜನ್‌ ಎನ್ನುವ ಅರ್ಥದಲ್ಲಿ) ಅನುಸರಣೆಯಲ್ಲಿ ಪಾಲಿಸಬೇಕಾದ ನಿರ್ಲಿಪ್ತತೆ. ಧರ್ಮದಿಂದ ಪ್ರಭುತ್ವವೊಂದು ದೂರ ಉಳಿಯಬೇಕು ಎನ್ನುವುದು ಸೆಕ್ಯುಲರ್‌ ಚಿಂತನೆಯ ಮೌಲ್ಯ. ಅದು ಪಶ್ಚಿಮದಿಂದ ಆಮದಾದ ಪರಿಕಲ್ಪನೆಯಾದರೂ ಭಾರತದಲ್ಲಿ ಅದರ ಮೂಲ ಅರ್ಥಕ್ಕಿಂತ ಭಿನ್ನವಾದ ನೆಲೆಗಳಲ್ಲಿ ಮರು ವ್ಯಾಖ್ಯಾನಗೊಂಡಿದೆ. ಸೆಕ್ಯುಲರ್‌ ಎಂಬ ಚಿಂತನೆಯ ಮೂಲ ಅರ್ಥ ಮತ್ತು ಅದರ ಸ್ವರೂಪವನ್ನು ಗ್ರಹಿಸದಿದ್ದರೆ ಭಾರತೀಯ ಬೌದ್ಧಿಕತೆ ಗ್ರಹಿಕೆಗೆ ದಕ್ಕುವುದೇ ಇಲ್ಲ. ಈ ನಿಟ್ಟಿನಲ್ಲಿ ಸೆಕ್ಯುಲರ್‌ ಕುರಿತ ಚರ್ಚೆ ಅತ್ಯಂತ ಮಹತ್ವದ್ದಾಗಿದ್ದು, ಈ ಕುರಿತು ವಿವಿಧೆಡೆ ಪ್ರಕಟಗೊಂಡ ಲೇಖನಗಳನ್ನು ಸ್ಕಾಲರ್‌ ಇಂಡಿಯಾ ಸಂಗ್ರಹಿಸಿ ಕೊಡುತ್ತಿದೆ. ಜತೆಗೆ, ಈ ವಾದಗಳ ಸ್ವರೂಪ, ಚೌಕಟ್ಟನ್ನು ಅರ್ಥಮಾಡಿಕೊಳ್ಳಲು ನೆರವಾಗುವಂತಹ ಲೇಖನಗಳನ್ನೂ ಕೊಡಲಾಗಿದೆ.
-ಸಂಪಾದಕ

---------------------

ಸೆಕ್ಯುಲರ್‌ ಕುರಿತ ಚರ್ಚೆ ಆರಂಭವಾಗಲು ಕಾರಣವಾದ ಸುದ್ದಿ

ಭಾರತೀಯ ಚಿಂತಕರು ಸೆಕ್ಯುಲರ್‌ ಪರಿಕಲ್ಪನೆಯನ್ನು ಪರಿಭಾವಿಸಿದ ಪರಿ

ಸೆಕ್ಯುಲರ್‌ ಚಿಂತನೆಯ ಸ್ವರೂಪ, ಮೂಲಾರ್ಥ, ಭಾರತದಲ್ಲಿ ಅದರ ಬಳಕೆಯ ಪರಿಣಾಮಗಳ ಕುರಿತು ತಿಳಿಯಲು ಕೆಳಗಿನ ಲೇಖನಗಳನ್ನು ಓದಿ.

03 February 2015

ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ: ಪ್ರೊ.ರಾಜಾರಾಮ ಹೆಗಡೆ

ರಿಲಿಜನ್ನಿಗೆ ಜಾತಿ ಎಂಬ ಭಾಷಾಂತರ ಕೂಡ ಸಾಧ್ಯವಿದೆಯೆ? ಹೌದು ಎಂಬುದು ನನ್ನ ಉತ್ತರ. ನೀವೆಲ್ಲ ಜಾತ್ಯತೀತ ಎಂಬ ಶಬ್ದವನ್ನು ಪದೇ ಪದೇ ಕೇಳುತ್ತೀರಿ. ಭಾರತವು ಜಾತ್ಯತೀತ ರಾಷ್ಟ್ರ, ನಮ್ಮದು ಜಾತ್ಯತೀತ ಸರ್ಕಾರ, ಎನ್ನುತ್ತೇವೆ. ಜಾತ್ಯತೀತ ಪಕ್ಷಗಳೂ ಇಲ್ಲಿವೆ. ಹಾಗೆಂದರೇನು? ಎಂದು ಜನರನ್ನು ಪ್ರಶ್ನಿಸಿದರೆ ಬಹುತೇಕರಿಗೆ ಅರ್ಥ ಗೊತ್ತಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಕೇಳಿದ ತಕ್ಷಣ ಶಬ್ದವನ್ನು ಹಿಡಿದುಕೊಂಡು ಅಂದಾಜುಮಾಡಲು ಪ್ರಾರಂಭಿಸುತ್ತಾರೆ. ಜಾತಿಭೇದವನ್ನು ಮಾಡದೇ ಇರುವುದು, ರಾಜಕೀಯದಲ್ಲಿ ಜಾತಿಯನ್ನು ತರದಿರುವುರು, ಹೀಗೆ ಅನೇಕ ಉತ್ತರಗಳು ಬಂದಿವೆ. ಆದರೆ ನಮ್ಮ ರಾಜಕೀಯ ಸಿದ್ಧಾಂತ ಹಾಗೂ ಆಚರಣೆಗಳನ್ನು ಅನುಭವಿಸಿದ ಯಾರಿಗೂ ಈ ನಿರೂಪಣೆಯು ಸತ್ಯವೆಂಬುದಾಗಿ ನಂಬಲು ಆಧಾರಗಳಿಲ್ಲ. ಈ ಶಬ್ದದ ನಿಜವಾದ ಅರ್ಥ ‘ಸೆಕ್ಯುಲರ್’ ಅಂತ. ಸೆಕ್ಯುಲರ್ ಎಂದರೆ ‘ರಿಲಿಜನ್ನಿಗೆ ಹೊರತಾಗಿರುವ’ ಎಂಬ ಅರ್ಥವಿದೆ. ರಿಲಿಜನ್ನನ್ನು ಜಾತಿ ಎಂಬುದಾಗಿ ಭಾಷಾಂತರಿಸಿದಾಗ ಮಾತ್ರವೇ ‘ಜಾತ್ಯತೀತ’ ಎಂಬುದು ಸೆಕ್ಯುಲರ್ ಶಬ್ದದ ಭಾಷಾಂತರವಾಗಲು ಸಾಧ್ಯ.

ಸೆಕ್ಯುಲರ್ ಶಬ್ದಕ್ಕೆ ಧರ್ಮ ನಿರಪೇಕ್ಷ, ಸರ್ವಧರ್ಮ ಸಮಭಾವ ಇತ್ಯಾದಿ ಭಾಷಾಂತರಗಳನ್ನು ಕೂಡ ಪ್ರಯೋಗಿಸಲಾಗಿದೆ. ಏಕೋ ಅವು ಅಷ್ಟು ಪ್ರಚಲಿತದಲ್ಲಿ ಬಂದಿಲ್ಲ. ರಿಲಿಜನ್ ಶಬ್ದಕ್ಕೆ ‘ಧರ್ಮ’ ಎಂಬ ಭಾಷಾಂತರವೇ ಪ್ರಚಲಿತದಲ್ಲಿ ಇದ್ದರೂ ಕೂಡ ಧರ್ಮದಿಂದ ‘ಸೆಕ್ಯುಲರ್’ ಶಬ್ದದ ಭಾಷಾಂತರವನ್ನು ರೂಪಿಸಿದಾಗ ಅದು ಜನಪ್ರಿಯವಾಗುತ್ತಿಲ್ಲ ಎಂಬುದು ಕುತೂಹಲಕಾರಿಯಾಗಿದೆ. ಅಂದರೆ ಇವು ಯಾವವೂ ಅರ್ಥ ಗೊತ್ತಿದ್ದು ಬಳಸುವ ಶಬ್ದಗಳೇ ಅಲ್ಲ ಎಂದು ತೀರ್ಮಾನಿಸದೇ ಗತ್ಯಂತರವಿಲ್ಲ. ಧರ್ಮಕ್ಕೆ ಸತ್ಕಾರ್ಯ ಎಂಬ ಸಾಂಪ್ರದಾಯಿಕ ಅರ್ಥವನ್ನು ಇಟ್ಟುಕೊಂಡು ಬಳಸಿದರೆ ಈ ಶಬ್ದಗಳು ಆಘಾತಕಾರಿಯಾಗಿ ಕಾಣುತ್ತವೆ. ರಿಲಿಜನ್ನನ್ನು ಅವಲಂಬಿಸದಿರುವುದು, ಎಲ್ಲಾ ರಿಲಿಜನ್ನುಗಳನ್ನೂ ಸಮನಾಗಿ ನೋಡುವುದು ಎಂಬುದು ಈ ವಾಕ್ಯಗಳ ನಿಜವಾದ ಸಂದರ್ಭ. ಆದರೆ ಭಾರತೀಯ ಸಂಪ್ರದಾಯದಲ್ಲಿ ಬೆಳೆದವರಿಗೆ ಈ ಸಂದರ್ಭವು ಗೊತ್ತಿದ್ದರೂ ಈ ವಾಕ್ಯಗಳು ಅರ್ಥವಾಗುವುದಿಲ್ಲ ಎಂಬುದು ನಮ್ಮ ಅನುಭವ.

ಏಕೆ ಅರ್ಥವಾಗುವುದಿಲ್ಲವೆಂದರೆ ರಿಲಿಜನ್ ಹಾಗೂ ಅದರ ಸಮಸ್ಯೆಗಳನ್ನು ಪರಿಹರಿಸಲೆಂದು ಪಶ್ಚಿಮದಲ್ಲಿ ಬೆಳೆದ ಪರಿಕಲ್ಪನೆಗಳು ನಮ್ಮ ಸಂಸ್ಕೃತಿಗೆ ಅಪರಿಚಿತ ಹಾಗೂ ಅಪ್ರಸ್ತುತವಾಗಿವೆ. ಸೆಕ್ಯುಲರಿಸಂ ಅಂಥದೊಂದು ಪರಿಕಲ್ಪನೆ. ಸೆಕ್ಯುಲರಿಸಂ ಯುರೋಪಿನ ಪ್ರಭುತ್ವಗಳಿಗೆ ಏಕೆ ಅನಿವಾರ್ಯವಾಯಿತು ಎಂಬುದನ್ನು ಹಿಂದಿನ ಅಂಕಣವೊಂದರಲ್ಲಿ (ಮೂರನೆಯ ಅಂಕಣ) ಸಾಂದರ್ಭಿಕವಾಗಿ ತಿಳಿಸಿದ್ದೇನೆ. ಅಂದರೆ, ರಿಲಿಜನ್ನುಗಳ ಸತ್ಯ ಪ್ರತಿಪಾದನೆಯಲ್ಲಿ ಹಾಗೂ ಪೈಪೋಟಿಯಲ್ಲಿ ಪ್ರಭುತ್ವವು ಯಾರ ಪಕ್ಷವನ್ನೂ ವಹಿಸದೇ ತಟಸ್ಥವಾಗಿರುವ ನೀತಿಯೇ ಸೆಕ್ಯುಲರಿಸಂ. ಅಂಥ ಸೆಕ್ಯುಲರ್ ನೀತಿಯನ್ನು ಒಂದು ಆದರ್ಶ ಎಂಬುದಾಗಿ ಸ್ವೀಕರಿಸಿದ ಪಾಶ್ಚಾತ್ಯ ಪ್ರಭುತ್ವಗಳು ಅದು ಒಂದು ಸಾರ್ವತ್ರಿಕ ಆದರ್ಶವೆಂಬುದಾಗಿ ನಂಬಿಕೊಂಡಿದ್ದವು.

18ನೆಯ ಶತಮಾನದ ಕೊನೆಯಲ್ಲಿ ಬ್ರಿಟಿಷರು ಕಲ್ಕತ್ತಾದಲ್ಲಿ ಕಂಪೆನಿ ಸರ್ಕಾರವನ್ನು ಸ್ಥಾಪಿಸಿದಾಗ ಭಾರತದಲ್ಲಿ ವಸಾಹತು ಪ್ರಭುತ್ವವು ಪ್ರಾರಂಭವಾಯಿತೆನ್ನಬಹುದು. ಆಗ ಅವರು ಸೆಕ್ಯುಲರ್ ನೀತಿಯ ಆಧಾರದ ಮೇಲೆ ಆಡಳಿತವನ್ನು ರೂಪಿಸಿದರು. ಭಾರತದಲ್ಲಿ ಹಿಂದೂಯಿಸಂ, ಇಸ್ಲಾಂ ಇತ್ಯಾದಿ ರಿಲಿಜನ್ನುಗಳು ಇವೆ ಎಂಬುದಾಗಿ ಅವರು ಭಾವಿಸಿದ್ದರು. ಬುದ್ಧಿಸಂ, ಜೈನಿಸಂ, ಸಿಖ್ಖಿಸಂ, ಇತ್ಯಾದಿ ಇನ್ನೂ ಅನೇಕ ರಿಲಿಜನ್ನುಗಳು ಭಾರತದಲ್ಲಿ ಇವೆ ಎಂಬುದನ್ನೂ ಪಾಶ್ಚಾತ್ಯರು ಹತ್ತೊಂಭತ್ತನೆಯ ಶತಮಾನದಲ್ಲಿ ಕಂಡುಹಿಡಿದರು. ಈ ರಿಲಿಜನ್ನುಗಳು ಯಾವ ಡಾಕ್ಟ್ರಿನ್ನುಗಳನ್ನು ಉಪದೇಶಿಸುತ್ತವೆಯೋ ಅದಕ್ಕನುಗುಣವಾಗಿಯೇ ಇವರೆಲ್ಲ ತಮ್ಮ ಆಚರಣೆಯನ್ನು ನಡೆಸುತ್ತಿದ್ದಾರೆ ಎಂದು ಅವರು ನಂಬಿದ್ದರು. ಅಂಥ ಆಚರಣೆಗಳನ್ನು ನಿಷೇಧಿಸುವುದಾಗಲೀ, ಅವುಗಳಿಗೆ ವಿರುದ್ಧವಾದ ನೀತಿಗಳನ್ನು ರೂಪಿಸುವುದಾಗಲೀ ಸೆಕ್ಯುಲರ್ ಪ್ರಭುತ್ವಕ್ಕೆ ಸಾಧ್ಯವಿಲ್ಲ. ಏಕೆಂದರೆ ಹಾಗೆ ಮಾಡಿದಲ್ಲಿ ಪ್ರಭುತ್ವದ ನಿರ್ಲಿಪ್ತತೆಗೆ ಭಂಗ ಬರುತ್ತದೆ ಹಾಗೂ ಅದು ರಿಲಿಜನ್ನುಗಳ ವಿಷಯದಲ್ಲಿ ಪಕ್ಷಪಾತೀ ಧೋರಣೆಯಾಗುತ್ತದೆ.

ಹಿಂದೂಗಳ ಡಾಕ್ಟ್ರಿನ್ನುಗಳನ್ನು ಹುಡುಕಿ ಹೊರಟ ಬಿಟಿಷರು ಕೊನೆಯಿರದ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಹಿಂದೂಗಳ ಬಹುತೇಕ ಆಚರಣೆಗಳಿಗೆ ಇವರ ಧರ್ಮಗ್ರಂಥಗಳಲ್ಲಿ ಆಧಾರವೇ ಇಲ್ಲದಿರುವುದೂ ಗಮನಕ್ಕೆ ಬಂತು. ಆಚರಿಸುವವರು ಕೂಡ ತಾವು ತಮ್ಮ ಪೂರ್ವಜರ ಆಚರಣೆಗಳನ್ನು ಅನುಕರಿಸುತ್ತಿದ್ದೇವೆ ಎಂಬುದಾಗಿ ಹೇಳಿದರೇ ವಿನಃ ಡಾಕ್ಟ್ರಿನ್ನುಗಳ ಆಧಾರಗಳನ್ನು ನೀಡಲಿಲ್ಲ. ಹಾಗಾಗಿ ಅವೆಲ್ಲ ಮೂಢನಂಬಿಕೆಗಳೆಂಬುದಾಗಿ ಬ್ರಿಟಿಷರು ತೀರ್ಮಾನಿಸಿದರು. ತಾವು ನೋಡುತ್ತಿರುವ ಹಿಂದೂಯಿಸಂ ಬ್ರಾಹ್ಮಣ ಪುರೋಹಿತರಿಂದ ಭ್ರಷ್ಟವಾಗಿದೆಯೆಂಬುದು ಅವರಿಗೆ ಸ್ಪಷ್ಟವಾಯಿತು. ಶುದ್ಧವಾದ ಹಿಂದೂಧರ್ಮವನ್ನು ಮಾತ್ರವೇ ಮಾನ್ಯ ಮಾಡಬೇಕು. ಅಂಥ ಹುಸಿ ಆಚರಣೆಗಳನ್ನು ಅಮಾನ್ಯಗೊಳಿಸುವುದರಿಂದ ಸೆಕ್ಯುಲರ್ ಸಹಿಷ್ಣುತಾ ನೀತಿಗೇನೂ ಭಂಗ ಬರುವಂತೆ ಕಾಣಲಿಲ್ಲ. ಹಾಗಾಗಿ ಬ್ರಿಟಿಷರು ಭಾರತೀಯ ಸಮಾಜದ ಸುಧಾರಣೆಗೆ ಚಾಲನೆನೀಡಿದರು.

ಈ ಸಂಧರ್ಭದಲ್ಲೇ 1857ರಲ್ಲಿ ಕಂಪನಿ ಆಡಳಿತದ ವಿರುದ್ಧ ಸಂಗ್ರಾಮ ನಡೆಯಿತು. ಬ್ರಿಟಿಷರು ತಮ್ಮ ಸುಧಾರಣಾ ನೀತಿಗಳ ಮೂಲಕ ಭಾರತೀಯರ ಧಾರ್ಮಿಕ ನಂಬಿಕೆಗಳಲ್ಲಿ ಹಸ್ತಕ್ಷೇಪ ನಡೆಸಿದ್ದಾರೆ, ಭಾರತೀಯರು ಅದಕ್ಕೆ ಪ್ರತಿಯಾಗಿ ದಂಗೆ ಎದ್ದಿದ್ದಾರೆ ಎಂಬುದಾಗಿ ಬ್ರಿಟನ್ನಿನಲ್ಲಿ ಟೀಕೆಗಳು ಬಂದವು. ಸೆಕ್ಯುಲರ್ ನೀತಿಗೆ ಬದ್ಧವಾದ ಬ್ರಿಟಿಷ್ ದೊರೆಗಳು ಇದನ್ನು ಗಂಭೀರವಾಗೇ ತೆಗೆದುಕೊಂಡರು. ಅವರಿಗೂ ಕೂಡ ಈ ಸುಧಾರಣೆಗಳು ಹಸ್ತಕ್ಷೇಪವಾಗಿ ಪರಿಣಮಿಸಿ ತಮ್ಮ ಆಳ್ವಿಕೆಗೆ ಅಪಖ್ಯಾತಿ ಹಾಗೂ ಕುತ್ತು ಬರುವುದು ಬೇಕಿರಲಿಲ್ಲ. 1858ರಲ್ಲಿ ಕಂಪೆನಿಯ ಆಡಳಿತವನ್ನು ಕೊನೆಗೊಳಿಸಿ ವಿಕ್ಟೋರಿಯಾ ರಾಣಿಯು ಆಡಳಿತವು ಪ್ರಾರಂಭವಾಯಿತು.. ಆಗ ರಾಣಿಯು ತಾನಾಗಲೀ, ತನ್ನ ಆಡಳಿತಾಧಿಕಾರಿಗಳಾಗಲೀ ಭಾರತದ ಯಾವ ರಿಲಿಜನ್ನುಗಳಲ್ಲೂ ಹಸ್ತಕ್ಷೇಪ ನಡೆಸುವುದಿಲ್ಲವೆಂಬುದಾಗಿ ಘೋಷಣೆ ಹೊರಡಿಸಿದಳು. 1857ರ ನಂತರ ಭಾರತದ ಕುರಿತಂತೆ ಬ್ರಿಟಿಷ್ ಸೆಕ್ಯುಲರ್ ನೀತಿಯು ತನ್ನ ಹಳೆಯ ಜಾಡನ್ನು ಬಿಟ್ಟು ಹೊಸ ಆವಿಷ್ಕಾರಗಳನ್ನು ನಡೆಸಿತು. ಹಿಂದೂ, ಮುಸ್ಲಿಂ ರಿಲಿಜನ್ನುಗಳ ಪೂಜಾಸ್ಥಳಗಳನ್ನು ಹಾಗೂ ಸಂಪ್ರದಾಯಗಳನ್ನು ಸಮಾನವಾಗಿ ಪೋಷಿಸುವ ಕಾನೂನುಗಳನ್ನು ರೂಪಿಸಲಾಯಿತು. ಭಾರತದಲ್ಲಿನ ಬ್ರಿಟಿಷ್ ರಾಜಕೀಯಕ್ಕೆ ರಿಲಿಜನ್ನು ಸೂಕ್ಷ್ಮವಾದ ಹಾಗೂ ನಿರ್ಣಾಯಕವಾದ ವಿಚಾರವಾಗಿ ಪರಿಣಮಿಸಿತು.

ಇದರ ಪರಿಣಾಮವಾಗಿ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಭಾರತದ ವಿಭಿನ್ನ ರಿಲಿಜನ್ನುಗಳ ಹಿತಾಸಕ್ತಿಯ ರಕ್ಷಣೆಗಾಗಿ ಹೋರಾಟದ ಗುಂಪುಗಳು ಹುಟ್ಟಿಕೊಂಡವು. ಇಲ್ಲಿನ ಬಹುಸಂಖ್ಯಾತರ ರಿಲಿಜನ್ನು ಹಿಂದೂಯಿಸಂ ಎಂಬುದಾಗಿ ಎಲ್ಲರೂ ಒಪ್ಪಿಕೊಂಡಿದ್ದರು. ಈ ಬಹುಸಂಖ್ಯಾತರಿಂದ ಅಲ್ಪಸಂಖ್ಯಾತರಾದ ಮುಸ್ಲಿಮರ ಹಿತಕ್ಕೆ ಧಕ್ಕೆ ಬರಬಹುದೆಂಬುದಾಗಿ ಮುಸ್ಲಿಂ ಮುಂದಾಳುಗಳು ಸೆಕ್ಯುಲರ್ ನೀತಿಯನ್ನಾಶ್ರಯಿಸಿ ಬಂದೋಬಸ್ತು ಮಾಡಿಕೊಳ್ಳತೊಡಗಿದರು. ಬ್ರಿಟಿಷರು ಕೂಡ ಮುಸ್ಲಿಮರ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ ಪ್ರತ್ಯೇಕ ಮತಕ್ಷೇತ್ರಗಳಂಥ ನಡಾವಳಿಗಳನ್ನು ಅಂಗೀಕರಿಸಿದರು. ಹಿಂದೂಗಳು ಹಿಂದೂ ಮಹಾಸಭಾ, ಆರ್.ಎಸ್. ಎಸ್ ಗಳನ್ನು ಹುಟ್ಟುಹಾಕಿಕೊಂಡು ಹಿಂದೂ ಹಿತಾಸಕ್ತಿಗಾಗಿ ಹೋರಾಡಿದರು. ಭಾರತದ ವಿಭಜನೆಗೂ, ನಂತರ ಹುಟ್ಟಿದ ಪ್ರಭುತ್ವಗಳಲ್ಲಿ ಬಹುಸಂಖ್ಯಾತ-ಅಲ್ಪಸಂಖ್ಯಾತ ರಿಲಿಜನ್ನುಗಳ ಸ್ಥಾನಮಾನಗಳ ಕುರಿತ ಚರ್ಚೆಗೂ, ಹಿಂಸಾಕಾಂಡಗಳಿಗೂ ಆಧಾರವಾಗಿ ಈ ಸೆಕ್ಯುಲರ್ ರಾಜಕೀಯದ ಪರಂಪರೆಯಿದೆ.

ಇಂಥ ಪ್ರಯೋಗಗಳ ಫಲಶ್ರುತಿಯೇನು? ಬ್ರಿಟಿಷರ ಸೆಕ್ಯುಲರ್ ಪ್ರಯೋಗಗಳು ಇಂದು ಒಡೆದು ಆಳುವ ನೀತಿ ಎಂಬುದಾಗಿ ಕುಪ್ರಸಿದ್ಧವಾಗಿವೆ. ಇಂಥ ಸೆಕ್ಯುಲರ್ ನೀತಿಯ ಪ್ರಯೋಜನವನ್ನು ಪಡೆದುಕೊಳ್ಳಲು ಹುಟ್ಟಿದ ರಾಜಕೀಯ ಗುಂಪುಗಳನ್ನು ಕೋಮುವಾದಿಗಳು, ಮುಸ್ಲಿಂ ಪ್ರತ್ಯೇಕತಾವಾದಿಗಳು, ಹಿಂದೂ ಮೂಲಭೂತವಾದಿಗಳು ಎಂಬುದಾಗಿ ನಕಾರಾತ್ಮಕವಾಗಿಯೇ ನೋಡುತ್ತೇವೆ. ಹಾಗೂ ಅವು ಸ್ವತಂತ್ರ ಭಾರತದ ಇತಿಹಾಸದಲ್ಲಿ ಸಮುದಾಯದ ಶಾಂತಿಯನ್ನು ಕದಡುವಲ್ಲಿ. ಕಾನೂನು-ಸುವ್ಯವಸ್ಥೆಗೆ ಸವಾಲುಗಳನ್ನು ಸೃಷ್ಟಿಸುವಲ್ಲಿ ಅತ್ಯಂತ ಪ್ರಧಾನ ಪಾತ್ರವಹಿಸಿವೆ. ಅದಕ್ಕಿಂತ ದೊಡ್ಡ ವಿಪರ್ಯಾಸವೆಂದರೆ ಈ ಉದಾತ್ತ ನೀತಿಯ ಫಲವಾಗಿ ರಿಲಿಜನ್ನಿನ ಆಧಾರದ ಮೇಲೆ ದೇಶ ವಿಭಜನೆಯಾಗಿ ಲಕ್ಷಾಂತರ ಭಾರತೀಯರು ಹಿಂದೂ-ಮುಸ್ಲಿಂ ಎಂಬ ಹೆಸರಿನಲ್ಲಿ ಹತ್ಯೆಗೊಳಗಾದರು. ಇವೆಲ್ಲವೂ ನಮಗೆ ಸೆಕ್ಯುಲರ್ ರಾಜನೈತಿಕ ಪ್ರಯೋಗಗಳಾಗಿ ಕಾಣಿಸುವ ಬದಲು ದುಃಸ್ವಪ್ನಗಳಾಗಿ ಕಾಡುತ್ತಿವೆ ಎಂಬುದೇ ಸೆಕ್ಯುಲರಿಸಂನ ದೊಡ್ಡ ವ್ಯಂಗ್ಯ
ಇಂಥ ಹಿಂಸಾಕಾಂಡವು ಬ್ರಿಟಿಷರ ಸೆಕ್ಯುಲರ್ ರಾಜಕೀಯದ ಫಲ ಎಂಬುದನ್ನು ಗುರುತಿಸಲು ನೆಹರೂ ಆಡಳಿತವು ವಿಫಲವಾಯಿತು. ಬದಲಾಗಿ ಅದನ್ನು ಧಾರ್ಮಿಕ ಮೂಲಭೂತವಾದ, ಕೋಮುವಾದ ಎಂದೆಲ್ಲ ವರ್ಣಿಸಲಾಯಿತು. ರಾಜಕೀಯವನ್ನು ಧಾರ್ಮಿಕ ಸಂಸ್ಥೆ ಹಾಗೂ ಆಚರಣೆಗಳಿಂದ ರಕ್ಷಿಸುವ ಪಣ ತೊಡಲಾಯಿತು. ಧರ್ಮವು ಪ್ರತಿಗಾಮಿ ಶಕ್ತಿ, ಅದು ರಾಜಕೀಯವನ್ನು ಹಾಳುಮಾಡುತ್ತದೆ, ಸಮುದಾಯಗಳನ್ನು ಒಡೆಯುತ್ತದೆ, ಹಿಂಸೆಯನ್ನು ಹುಟ್ಟಿಸುತ್ತದೆ, ಇತ್ಯಾದಿ ಅಭಿಪ್ರಾಯಗಳು ನೆಹರೂ ಸೆಕ್ಯುಲರಿಸಂನ ಆಧಾರ ವಾಕ್ಯಗಳಾದವು. ಜೊತೆಗೇ ಧಾರ್ಮಿಕ ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರ ಹದ್ದಿನ ಕಣ್ಣುಗಳಿಂದ ರಕ್ಷಿಸುವ ಮತ್ತಷ್ಟು ಕಾಯ್ದೆಗಳೂ, ಅವರನ್ನು ಓಲೈಸುವ ತಂತ್ರಗಳೂ ರಚನೆಯಾದವು. ಆದರೆ ನೆಹರೂ ಸೆಕ್ಯುಲರಿಸಂಗೆ ಪ್ರತಿಫಲವಾಗಿ ಎಂಭತ್ತರ ದಶಕದಿಂದ ಭಾರತವು ಹಿಂದೆಂದೂ ಕಂಡರಿಯದ ಕೋಮು ಗಲಭೆಗಳು ಹಾಗೂ ಹಿಂಸಾಕಾಂಡಗಳನ್ನು ಕಂಡಿತು. ಅಂದರೆ ಸೆಕ್ಯುಲರ್ ಆದರ್ಶವನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದಷ್ಟೂ ಅದು ನಮ್ಮ ಸಮಾಜದಲ್ಲಿ ಹಿಂಸೆಯನ್ನು ಹೆಚ್ಚಿಸುತ್ತಿದೆ ಎಂಬುದು ಇತಿಹಾಸದಿಂದ ನಿದರ್ಶಿತವಾಗಿದೆ.

ದುರಾದೃಷ್ಟವೆಂದರೆ, ಭಾರತೀಯರ ಜೀವನದಲ್ಲಿ ಇಷ್ಟೆಲ್ಲಾ ತುಮುಲವನ್ನು ಹುಟ್ಟುಹಾಕಿದ ಈ ಸೆಕ್ಯುಲರಿಸಂ ಏನು ಎಂಬುದು ಇಂದು ಕೂಡ ಅದನ್ನು ಬಳಸುವವರಿಗೆ ಸ್ಪಷ್ಟವಿಲ್ಲ. ದೇಶೀ ಭಾಷೆಗಳ ಭಾಷಾಂತರದಲ್ಲಿ ಈ ಅಜ್ಞಾನ ಸ್ಪಷ್ಟವಾಗಿದೆ. ನಾನು ಕೇವಲ ಭಾಷಾಂತರದ ಬಗ್ಗೆ ಹೇಳುತ್ತಿಲ್ಲ. ಜಾತ್ಯತೀತ, ಸರ್ವಧರ್ಮ ಸಮಭಾವ ಇತ್ಯಾದಿಗಳೆಲ್ಲ ಸೆಕ್ಯುಲರಿಸಂ ಶಬ್ದದ ಭಾಷಾಂತರಗಳು ಎಂಬುದನ್ನು ತಿಳಿದಿರುವ ಜನರ ಕುರಿತೇ ಹೇಳುತ್ತಿದ್ದೇನೆ. ಈ ವಿಷಯದಲ್ಲಿ ಉದ್ದಾಮ ಪಂಡಿತರಿಗೂ ಕೂಡ ಅದು ಸ್ಪಷ್ಟವಿಲ್ಲ. ಅವರು ಸೆಕ್ಯುಲರಿಸಂಗೆ ಭಾರತದಲ್ಲಿ ಬೇರೆಯದೇ ಏನೋ ಅರ್ಥವಿರಬೇಕು ಎಂದು ಹುಡುಕುತ್ತಿದ್ದಾರೆ, ಆ ಅರ್ಥ ಗೊತ್ತಾಗಿದೆ ಎನ್ನುವವರೂ ಕೂಡ ಅದು ಏನು ಎಂಬುದನ್ನು ಇನ್ನೂ ಗುಟ್ಟಾಗಿಯೇ ಇಟ್ಟಿದ್ದಾರೆ. ಭಾರತದಲ್ಲಿ ಸೆಕ್ಯುಲರಿಸಂ ಇನ್ನೂ ಪರಿಪೂರ್ಣವಾಗಿ ಅನುಷ್ಠಾನಗೊಂಡಿಲ್ಲದಿರುವುದರಿಂದ ಈ ಅವಸ್ಥೆ ಬಂದಿದೆ ಎಂದೂ ಅನ್ನುವವರಿದ್ದಾರೆ. ಅರ್ಧಂಬರ್ಧ ಅನುಷ್ಠಾನದಿಂದಲೇ ಇಷ್ಟೆಲ್ಲ ಅನಾಹುತಗಳಾಗಿರುವಾಗ ಅದರ ಪರಿಪೂರ್ಣ ಅನುಷ್ಠಾನದಿಂದ ಏನಾಗಬಹುದು ಎಂಬುದನ್ನು ನಿಮ್ಮ ಊಹೆಗೇ ಬಿಟ್ಟಿದ್ದೇನೆ.

ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

ಈ ಮೇಲಿನ ಪ್ರಶ್ನೆಗೆ ನನ್ನ ಉತ್ತರವು ನಕಾರಾತ್ಮಕವಾಗಿದೆ. ಸೆಕ್ಯುಲರ‍್ ವಾದಿಯಾಗಿರಲು ರಿಲಿಜನ್ನಿನಿಂದ ಹೊರಬರುವ ಅಗತ್ಯವಿಲ್ಲ ಎಂಬುದಾಗಿ ನಮ್ಮ ಈ ವರೆಗಿನ ಚರಿತ್ರೆ ತಿಳಿಸುತ್ತದೆ. ಸೆಕ್ಯುಲರ್ ವಲಯವು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಕ್ರಿಶ್ಚಿಯಾನಿಟಿ ಎಂಬ ರಿಲಿಜನ್ನಿನ ಮತ್ತೊಂದು ಮುಖವಾಗಿದೆಯೇ ವಿನಃ ಅದು ವಿಶ್ವವ್ಯಾಪೀ ವಾಸ್ತವವಲ್ಲ ಎಂಬುದನ್ನು ಈಗಾಗಲೇ ಗಮನಿಸಿದ್ದೇವೆ. ಅಷ್ಟೇ ಅಲ್ಲ, ಅದು ಮುಖಮರೆಸಿಕೊಂಡ ಕ್ರಿಶ್ಚಿಯಾನಿಟಿಯೇ ಆಗಿದೆ ಎಂಬುದು ನನ್ನ ವಾದ. ಹಾಗಾಗಿ ಪ್ರಪಂಚದ ಯಾವುದೇ ಸಂಸ್ಕೃತಿಗೆ ಸೇರಿದವರಿರಬಹುದು, ಈ ಪಾಶ್ಚಾತ್ಯ ಸೆಕ್ಯುಲರ್ ವಿಚಾರಧಾರೆಯನ್ನು ಅಳವಡಿಸಿಕೊಳ್ಳುವಾಗ ಕ್ರಿಶ್ಚಿಯನ್ನರ ಥಿಯಾಲಜಿಯ ಸತ್ಯಗಳನ್ನು ಸ್ವೀಕರಿಸಿರುತ್ತಾರೆ ಹಾಗೂ ಆ ಮಟ್ಟಿಗೆ ಕ್ರೈಸ್ತರಾಗುತ್ತರೆ.

ಈ ವಾದವು ಮೇಲ್ನೋಟಕ್ಕೆ ವಿಚಿತ್ರವಾಗಿ ಕಾಣಿಸುವುದರಲ್ಲಿ ಸಂಶಯವಿಲ್ಲ. ಏಕೆಂದರೆ ನಮ್ಮ ಸಾಮಾನ್ಯ ಜ್ಞಾನದ ಪ್ರಕಾರ ಸೆಕ್ಯುಲರ್ ಎನ್ನುವುದು ರಿಲಿಜನ್ನಿಗೆ ಸಂಬಂಧಪಡದ್ದು ಹಾಗೂ ಸೆಕ್ಯುಲರೀಕರಣವೆಂದರೆ ರಿಲಿಜನ್ನಿನಿಂದ ಹೊರಬರುವ ಒಂದು ಪ್ರಕ್ರಿಯೆ. ಅಂದರೆ ಒಬ್ಬನು ಸೆಕ್ಯುಲರ್ ವಾದವನ್ನು ಒಪ್ಪಿಕೊಳ್ಳಬೇಕಾದರೆ ರಿಲಿಜನ್ನಿನ ಪ್ರತಿಪಾದನೆಗಳನ್ನು ನಿರಾಕರಿಸಬೇಕಾಗುತ್ತದೆ. ಪಾಶ್ಚಾತ್ಯ ಚರಿತ್ರೆಯು ನಮಗೆ ತಿಳಿಸುವ ಪ್ರಕಾರ ಯುರೋಪಿನಲ್ಲಿ 18ನೆಯ ಶತಮಾನದ ನಂತರ ಈ ಪ್ರಕ್ರಿಯೆ ಪ್ರಾರಂಭವಾಯಿತು. ಯುರೋಪಿನ ಪ್ರಭುತ್ವಗಳು ಚರ್ಚಿನ ನಿಯಂತ್ರಣದಿಂದ ಹೊರಬಂದು ತಮ್ಮ ಸ್ವಾಯತ್ತತೆಯನ್ನು ಪಡೆದುಕೊಂಡವು. ಯುರೋಪಿನ ಜ್ಞಾನೋದಯ ಯುಗದ ಚಿಂತಕರು ಚರ್ಚು ಹಾಗೂ ಬೈಬಲ್ಲನ್ನು ನಿರಾಕರಿಸಿ ಈ ಪ್ರಪಂಚದ ಕುರಿತು ಬದಲೀ ವಿವರಣೆಗಳನ್ನು ಬೆಳೆಸಿದರು. ಪಾಶ್ಚಾತ್ಯ ವಿಜ್ಞಾನದ ಬೆಳವಣಿಗೆಯೂ ಈ ಪ್ರಕ್ರಿಯೆಯೊಂದಿಗೆ ತಳಕುಹಾಕಿಕೊಂಡಿದೆ. ಇದನ್ನೆಲ್ಲ ಆಧುನೀಕರಣ ಅಥವಾ ಆಧುನಿಕತೆ ಎಂಬುದಾಗಿ ವರ್ಣಿಸಲಾಗುತ್ತದೆ. ಆಧುನಿಕ ಯುರೋಪಿನ ಚರಿತ್ರೆಯೆಂದರೆ ಸೆಕ್ಯುಲರೀಕರಣದ ಚರಿತ್ರೆಯಾಗಿದೆ. ಈ ಜೀವನಕ್ರಮದಲ್ಲಿ ವೈಜ್ಞಾನಿಕ ಮನೋಭಾವ, ವೈಚಾರಿಕತೆ, ಹಾಗೂ ಜೀವನ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ, ಇತ್ಯಾದಿಗಳು ಅತ್ಯಗತ್ಯ.

ಯುರೋಪಿನಲ್ಲಿ ರಿಲಿಜನ್ನಿನ ಪ್ರಭಾವದಿಂದ ಹೊರಬರುವ ಧ್ಯೇಯವನ್ನಿಟ್ಟುಕೊಂಡು ಬೆಳೆದುಬಂದ ಸೆಕ್ಯುಲರ್ ಚಿಂತನೆ ಹಾಗೂ ಜೀವನಕ್ರಮಗಳು ವಸಾಹತೀಕರಣದಿಂದಾಗಿ ವಿಶ್ವವ್ಯಾಪಿಯಾದವು. ಐರೋಪ್ಯರು ಮನುಕುಲದ ಅಪೂರ್ವ ಸಾಧನೆಯಾದ ಹಾಗೂ ನಾಗರೀಕತೆಯ ಮಾನದಂಡವಾದ ಈ ಸೆಕ್ಯುಲರ್ ಚಿಂತನೆ ಹಾಗೂ ಅದರಿಂದ ಹುಟ್ಟಿದ ಆಧುನಿಕ ಮೌಲ್ಯಗಳನ್ನು ತಮ್ಮ ಪ್ರಭುತ್ವಗಳಲ್ಲಿ ಅನುಷ್ಠಾನಕ್ಕೆ ತಂದರು. ಹಾಗೂ ತೃತೀಯ ಜಗತ್ತಿನ ತಮ್ಮ ವಸಾಹತುಗಳ ಅಭಿವೃದ್ಧಿಗೆ ಮಾನದಂಡವಾಗಿ ಬಳಸಿದರು. ವಸಾಹತು ಆಳ್ವಿಕೆಯೆಂಬುದು ಮೂಲತಃ ಶೋಷಣೆಯಾಗಿದೆ ಎಂಬುದನ್ನು ಯುರೋಪಿನ ಚಿಂತಕರು ಗುರುತಿಸಿದರೂ ಕೂಡ ಅದು ವಸಾಹತುಗಳಿಗೆ ಒಂದು ಕಹಿ ಔಷಧಿ ಎಂಬಂತೇ ಗ್ರಹಿಸಿದರು. ಆಧುನಿಕ ನಾಗರೀಕ ಜೀವನಕ್ರಮವನ್ನು ರೂಢಿಸುವ ಕಾರ್ಯವನ್ನು ಎಸಗಿದ್ದರಿಂದ ಅದು ವಸಾಹತುಗಳಿಗೆ ಅತ್ಯಗತ್ಯವಾಗಿದೆ ಎಂಬುದಾಗಿ ತರ್ಕಿಸಿದರು. ಈ ರೀತಿಯಾಗಿ ಯುರೋಪಿನ ಆಧುನಿಕ ಜೀವನ ಕ್ರಮ ಹಾಗೂ ಮೌಲ್ಯಗಳು ವಿಶ್ವವ್ಯಾಪಿಯಾದವು. ಇಂದು ಈ ಪ್ರಕ್ರಿಯೆಯು ಇಡೀ ಪ್ರಪಂಚವನ್ನೇ ವ್ಯಾಪಿಸಿಕೊಂಡಿದೆ.

ಈ ಪ್ರಕ್ರಿಯೆಯ ಜೊತೆಗೆ ಪ್ರಪಂಚದ ಕುರಿತ ಪಾಶ್ಚಾತ್ಯ ವೈಜ್ಞಾನಿಕ ವಿವರಣೆಗಳು ಹಾಗೂ ಯುರೋಪಿನ ಜ್ಞಾನೋದಯ ಯುಗದ ಚಿಂತನೆಗಳು ಎಲ್ಲೆಡೆ ಪಸರಿಸಿದವು. ಅವುಗಳಲ್ಲಿ ಸಮಾಜ ವಿಜ್ಞಾನದ ಸಿದ್ಧಾಂತಗಳು ಹಾಗೂ ವಿವರಣೆಗಳೂ ಸೇರಿವೆ. ಈ ವಿವರಣೆಗಳು ಕ್ರಿಶ್ಚಿಯಾನಿಟಿಯು ನಮ್ಮ ವಿಶ್ವದ ಕುರಿತು ಹಾಗೂ ಮನುಷ್ಯನ ಕುರಿತು ನೀಡಿದ ವಿವರಣೆಗಳನ್ನು ಪ್ರಶ್ನಿಸಿ ಅದರ ಸ್ಥಾನದಲ್ಲಿ ಪ್ರತಿಷ್ಠಾಪಿತವಾದವು. ವಿಜ್ಞಾನದ ಬೆಳವಣಿಗೆಯ ಕಾಲಘಟ್ಟದಲ್ಲಿ ಅದರ ಸಿದ್ಧಾಂತಗಳು ಚರ್ಚಿನ ಪ್ರತಿಪಾದನೆಗಳನ್ನು ಅಲ್ಲಗಳೆಯುವ ಸಂದರ್ಭಗಳು ಸೃಷ್ಟಿಯಾದಾಗ ಚರ್ಚು ವಿಜ್ಞಾನಿಗಳನ್ನು ಹತ್ತಿಕ್ಕಲು ಪ್ರಯತ್ನಿಸಿದ್ದೂ ನಮಗೆ ಗೊತ್ತಿರುವ ವಿಷಯವೇ ಆಗಿದೆ. ಈ ವಿಶ್ವವು ಗಾಡ್ನ ಸೃಷ್ಟಿಯಲ್ಲ, ಅದಕ್ಕೆ ಅದರದೇ ಸೃಷ್ಟಿ ನಿಯಮಗಳಿವೆ ಹಾಗೂ ಪ್ರಕ್ರಿಯೆಗಳಿವೆ ಎಂಬುದನ್ನು ವಿವರಿಸಲು ಹೊರಟ ನಿಸರ್ಗ ವಿಜ್ಞಾನವು ತನ್ನದೇ ಪರ್ಯಾಯ ವಿವರಣೆಗಳನ್ನು ಬೆಳೆಸಿತು. ಈ ವಿವರಣೆಗಳನ್ನು ಪ್ರಾಯೋಗಿಕವಾಗಿ ದೃಷ್ಟಾಂತಪಡಿಸಲಾಯಿತು ಹಾಗೂ ದಿನನಿತ್ಯದ ಜೀವನದಲ್ಲಿ ಈ ಜ್ಞಾನದ ಫಲವಾಗಿ ತಂತ್ರಜ್ಞಾನದ ಕ್ರಾಂತಿಯೇ ನಡೆಯಿತು. ಹಾಗಾಗಿ ವಿಜ್ಞಾನವೇ ಈ ಪ್ರಪಂಚವನ್ನು ತಿಳಿಯಲು ನಿಜವಾದ ಮಾರ್ಗವೇ ಹೊರತೂ ಥಿಯಾಲಜಿಯಲ್ಲ, ಥಿಯಾಲಜಿ ಎಂಬುದು ಕಪೋಲಕಲ್ಪಿತ ಮಿಥ್ಯೆ ಎಂಬ ಅಭಿಪ್ರಾಯವು ಜನಜನಿತವಾಯಿತು.

ನಿಸರ್ಗದ ಕುರಿತ ಸೆಕ್ಯುಲರ್ ವಿವರಣೆಗಳ ಜೊತೆಗೇ ಮನುಷ್ಯನ ಕುರಿತ ಸೆಕ್ಯುಲರ್ ವಿವರಣೆಗಳೂ ಅಸ್ತಿತ್ವದಲ್ಲಿ ಬಂದವು. ಈ ಮನುಷ್ಯನನ್ನು, ಅವನ ಯೋಚನಾಕ್ರಮವನ್ನು ಹಾಗೂ ಅವನ ಜೀವನ ಕ್ರಮವನ್ನು ವೈಜ್ಞಾನಿಕವಾಗಿ ವಿವರಿಸುವ ನಿಟ್ಟಿನಲ್ಲಿ ಜ್ಞಾನೋದಯ ಯುಗದ ಚಿಂತಕರು ಸಿದ್ಧಾಂತಗಳನ್ನು ಹುಟ್ಟುಹಾಕಿದರು. ಸಮಾಜ ಎಂದರೇನು? ಪ್ರಭುತ್ವ ವ್ಯವಸ್ಥೆ ಏಕೆ ಅಸ್ತಿತ್ವದಲ್ಲಿ ಬಂದಿದೆ? ಮನುಷ್ಯನ ವೈವಿಧ್ಯಮಯ ಜೀವನ ಕ್ರಮಗಳು ಹೇಗೆ ಮತ್ತು ಏಕೆ ಅಸ್ತಿತ್ವದಲ್ಲಿ ಬಂದವು? ರಿಲಿಜನ್ನನ್ನು ಮನುಷ್ಯನು ಏಕೆ ಹುಟ್ಟುಹಾಕಿದ? ಇಂಥ ಪ್ರಶ್ನೆಗಳನ್ನೆಲ್ಲ ರಿಲಿಜನ್ನನ್ನು ಬಿಟ್ಟು ಉತ್ತರಿಸುವ ಜೊತೆಗೆ ಈ ಮನುಷ್ಯನ ಭವಿತವ್ಯದ ಕುರಿತೂ ರಿಲಿಜನ್ನಿಗೆ ಪರ್ಯಾಯವಾದ ಚಿಂತನೆಗಳು ಬೆಳೆದವು. ಇಂಥ ಚಿಂತನೆಗಳು ವೈಜ್ಞಾನಿಕವಾಗಿ ಮನುಷ್ಯನ ಕುರಿತು ಗಳಿಸಿಕೊಂಡ ತಿಳುವಳಿಕೆಯನ್ನೇ ಆಧರಿಸಿದ್ದವೇ ವಿನಃ ಚರ್ಚುಗಳ ಪ್ರತಿಪಾದನೆಯನ್ನಲ್ಲ. ಸೆಕ್ಯುಲರೀಕರಣದ ಭಾಗವಾಗಿ ಚರ್ಚುಗಳಿಗೆ ಪರ್ಯಾಯವಾಗಿ ಅಸ್ತಿತ್ವದಲ್ಲಿ ಬಂದ ಪ್ರಭುತ್ವಗಳು ಈ ಸೆಕ್ಯುಲರ್ ಚಿಂತನೆಗಳನ್ನು ಆಧರಿಸಿ ಪ್ರಭುತ್ವ ವ್ಯವಸ್ಥೆಯ ಸುಧಾರಣೆ ಹಾಗೂ ಪ್ರಜೆಗಳ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡವು. ಯುರೋಪಿನಲ್ಲಿ ಪ್ರಭುತ್ವ ವ್ಯವಸ್ಥೆಯ ಆಧುನಿಕ ರೂಪಗಳು ವಿಕಾಸವಾದವು.

ಆದರೆ ಮಾನವನ ಕುರಿತ ಸೆಕ್ಯುಲರ್ ಸಿದ್ಧಾಂತಗಳನ್ನು ಪರೀಕ್ಷಿಸಿದಾಗ ನಮಗೆ ಕಂಡುಬರುವುದೆಂದರೆ ಅವು ಮೂಲತಃ ಕ್ರೈಸ್ತ ಥಿಯಾಲಜಿಯ ಸರಕುಗಳೇ ಆಗಿವೆ. ಉದಾಹರಣೆಗೆ ಆಧುನಿಕ ರಿಲಿಜನ್ನಿನ ವಿಜ್ಞಾನವು ತಿಳಿಸುವಂತೇ ಪ್ರಪಂಚದ ಎಲ್ಲಾ ಸಂಸ್ಕೃತಿಗಳಲ್ಲೂ ರಿಲಿಜನ್ನುಗಳಿವೆ: ಹಿಂದೂಯಿಸಂ, ಬುದ್ಧಿಸಂ, ಶಿಂಟೋಯಿಸಂ, ತಾವೋಯಿಸಂ, ವಿಭಿನ್ನ ಆದಿಮ ಬುಡಕಟ್ಟುಗಳ ರಿಲಿಜನ್ನುಗಳು, ಇತ್ಯಾದಿ. ಆದರೆ ಇವುಗಳನ್ನು ರಿಲಿಜನ್ನುಗಳೆಂದು ಯಾವ ಆಧಾರದ ಮೇಲೆ ಗುರುತಿಸುತ್ತಿದ್ದೇವೆ ಎಂಬುದನ್ನು ತಿಳಿಸಲು ಈ ವಿದ್ವಾಂಸರು ಅಸಮರ್ಥರಾಗಿದ್ದಾರೆ. ಅಂದರೆ ಗಾಡ್ ಎಲ್ಲ ಮಾನವರಿಗೂ ರಿಲಿಜನ್ನನ್ನು ನೀಡಿದ್ದಾನೆ ಎಂಬ ಕ್ರೈಸ್ತ ಥಿಯಾಲಜಿಯನ್ನೇ ರಿಲಿಜನ್ನಿನ ವೈಜ್ಞಾನಿಕ ಸಿದ್ಧಾಂತವನ್ನಾಗಿ ಪರಿವರ್ತಿಸಲಾಗಿದೆ. ಇದೇ ರೀತಿಯಲ್ಲಿ ಪಾಶ್ಚಾತ್ಯ ರಾಜಕೀಯ, ಮನಃಶಾಸ್ತ್ರೀಯು, ಮಾನವಶಾಸ್ತ್ರೀಯ ಹಾಗೂ ಸಾಮಾಜಿಕ ಸಿದ್ಧಾಂತಗಳೆಲ್ಲವೂ ಥಿಯಾಲಜಿಯ ವರ್ಣನೆಗಳನ್ನಾಧರಿಸಿ ರೂಪುಗೊಂಡಿವೆ ಎಂಬುದನ್ನು ದೃಷ್ಟಾಂತಗಳ ಮೂಲಕ ತೋರಿಸಬಹುದು. ಸ್ವತಃ ರಿಲಿಜನ್-ಸೆಕ್ಯುಲರ್ ಎಂಬ ವಿಂಗಡಣೆಯೂ ಈ ಸಾಲಿಗೇ ಸೇರುತ್ತದೆ. ಅಂದರೆ ಈ ಆಧುನಿಕ ವಿಚಾರಗಳ ಹೆಸರಿನಲ್ಲಿ ನಿಜವಾಗಿಯೂ ಪ್ರಸಾರವಾದದ್ದು ಥಿಯಾಲಜಿಯೇ.

ಈ ರೀತಿಯಲ್ಲಿ ಸೆಕ್ಯುಲರೀಕರಣವೆಂಬುದು ಕ್ರಿಶ್ಚಿಯಾನಿಟಿಯ ಪ್ರಸರಣದ ಒಂದು ವಿಧಾನವಾಗಿದೆ. ಸೆಕ್ಯುಲರೀಕರಣದ ಮೂಲಕ ಕ್ರಿಶ್ಚಿಯನ್ ಥಿಯಾಲಜಿಯು ಇಂದು ಪ್ರಪಂಚದ ತುಂಬೆಲ್ಲ ವ್ಯಾಪಿಸುವಂತಾಗಿದೆ. ವ್ಯತ್ಯಾಸವೇನೆಂದರೆ ಇಲ್ಲಿ ಕ್ರಿಶ್ಚಿಯಾನಿಟಿಯು ಮೇಲ್ನೋಟಕ್ಕೆ ಕಾಣಿಸುವುದಿಲ್ಲ. ಅಂದರೆ ಸೆಮೆಟಿಕ್ ದೇವಕಲ್ಪನೆಗಳು ಹಾಗೂ ಕಥೆಗಳು ಇಲ್ಲಿ ಪ್ರಸ್ತುತತೆಯನ್ನು ಕಳೆದುಕೊಂಡಿವೆ, ಆದರೆ ಅದನ್ನಾಧರಿಸಿದ ಲೋಕದೃಷ್ಟಿಯೊಂದು ಅವ್ಯಾಹತವಾಗಿ ಪ್ರಸಾರವಾಗುತ್ತಿದೆ.

ಈ ಬೆಳವಣಿಗೆಗಳೆಲ್ಲವೂ ಕ್ರಿಶ್ಚಿಯಾನಿಟಿಯ ಆಂತರಿಕ ಬೆಳವಣಿಗೆಗಳಾಗಿವೆ. ನನ್ನ ಪ್ರಕಾರ ಕ್ರಿಶ್ಚಿಯಾನಿಟಿಯು ಜಗತ್ತಿನಲ್ಲಿ ಪ್ರಸಾರವಾಗಲಿಕ್ಕೆ ಎರಡು ಕ್ರಮಗಳಿವೆ. ಮೊದಲನೆಯದು ಮತಪರಿರ್ತನೆ, ಎರಡನೆಯದು ಸೆಕ್ಯುಲರೀಕರಣ. ತಾನೊಂದೇ ಸತ್ಯ ಎಂಬ ಪ್ರತಿಪಾದನೆಯನ್ನು ಮಾಡುವ ರಿಲಿಜನ್ನಿಗೆ ಅನ್ಯವನ್ನೆಲ್ಲವನ್ನೂ ತನ್ನದನ್ನಾಗಿ ಪರಿವರ್ತಿಸುವ ಪೃವೃತ್ತಿಯಿರುತ್ತದೆ. ಮತಪರಿವರ್ತನೆಯಲ್ಲಿ ಅದು ನಿರ್ದಿಷ್ಟವಾಗಿ ಇಸ್ಲಾಂ, ಕ್ರೈಸ್ತ ಎಂಬ ರೂಪನ್ನು ಇಟ್ಟುಕೊಂಡು ಆ ಕೆಲಸವನ್ನು ಮಾಡುತ್ತಿರುತ್ತದೆ. ಆದರೆ ಆ ಕೆಲಸದಲ್ಲಿ ಅದರ ನಿರ್ದಿಷ್ಟ ರೂಪವೇ ಅದಕ್ಕೆ ತೊಡಕಾಗುತ್ತದೆ. ಅಂದರೆ ಆ ರೂಪಿನ ದೆಸೆಯಿಂದ ಅದರ ಅನ್ಯತೆಯು ಬಹಿರಂಗವಾಗಿ ಕಾಣಿಸುತ್ತದೆ. ಈ ರೀತಿಯ ಪ್ರಸಾರವು ಸೀಮಿತವಾದುದು.

ಕ್ರಿಶ್ಚಿಯಾನಿಟಿಯು ಈ ಸವಾಲನ್ನು ಪ್ರಾಚೀನ ಕಾಲದಿಂದಲೂ ಎದುರಿಸಿದೆ. ಇದನ್ನು ಕ್ರೈಸ್ತಶಾಸ್ತ್ರದ ಉಭಯ ಸಂಕಟ ಎಂಬುದಾಗಿ ವಿದ್ವಾಂಸರು ಗುರುತಿಸುತ್ತಾರೆ. ಈ ಉಭಯಸಂಕಟದ ಒಂದು ಕಡೆಯಲ್ಲಿ ಕ್ರಿಸ್ತ ಮತ್ತೊಂದು ಕಡೆ ಗಾಡ್ ಕಲ್ಪನೆಗಳಿವೆ. ಕ್ರಿಶ್ಚಿಯಾನಿಟಿಯು ಕ್ರಿಸ್ತನನ್ನೇ ಆಧರಿಸಿ ಅಸ್ತಿತ್ವಕ್ಕೆ ಬಂದ ರಿಲಿಜನ್ನಾಗಿದೆ. ಕ್ರಿಸ್ತನೇ ಇಲ್ಲದಿದ್ದರೆ ಆ ರಿಲಿಜನ್ನೂ ಇರುವುದಿಲ್ಲ. ಆದರೆ ತಾನು ಸಮಸ್ತ ಮನುಕುಲದ ರಿಲಿಜನ್ನು, ತಾನು ಹೇಳುವುದೇ ಸಾರ್ವತ್ರಿಕ ಸತ್ಯ ಎಂದು ಪ್ರತಿಪಾದಿಸುವ ಈ ಪಂಥಕ್ಕೆ ಕ್ರಿಸ್ತನ ಕಥೆಯೇ ಮಿತಿಯನ್ನು ಹೇರುತ್ತದೆ. ಈ ಮಿತಿಯಿಂದ ಹೊರಬರಲಿಕ್ಕೆ ಗಾಡ್ನ ಮೇಲೆ ಒತ್ತುಕೊಟ್ಟು ಥಿಯಾಲಜಿಯನ್ನು ಬೆಳೆಸಲಾಯಿತು. ಕ್ರಿಸ್ತನು ಕ್ರಿಸ್ತನಾಗಿದ್ದುದು ಈ ಗಾಡ್ ನಿಂದಾಗಿಯೇ. ಅವನೇ ಜಗತ್ತಿನ ಜನರಿಗೆಲ್ಲಾ ರಿಲಿಜನ್ನನ್ನು ನೀಡಿದ್ದಾನೆ ಎಂಬ ನಿರೂಪಣೆ ಬೆಳೆಯಿತು. ಆದರೆ ಈ ರೀತಿಯ ನಿರೂಪಣೆಗೆ ಮತ್ತೊಂದು ತೊಂದರೆ ಇದೆ. ಅದೇನೆಂದರೆ, ಕ್ರಿಸ್ತ ಹಾಗೂ ಚರ್ಚುಗಳು ಇಲ್ಲಿ ಗೌಣವಾಗುತ್ತವೆ. ಅಷ್ಟಾದರೂ ಅದು ರಿಲಿಜನ್ನಿನ ಪ್ರತಿಪಾದನೆ ಎಂಬುದು ವ್ಯಕ್ತವಾಗಿ ಕಾಣಿಸುವವರೆಗೆ ಅದಕ್ಕೆ ಪೇಗನ್ನರಿಂದ ಪ್ರತಿರೋಧವಿದ್ದೇ ಇರುತ್ತದೆ. ಆ ಪ್ರತಿರೋಧವನ್ನೂ ಕಳೆಯುವ ಪ್ರಯತ್ನದಲ್ಲಿ ಕ್ರಿಶ್ಚಿಯಾನಿಟಿಯ ನಿರ್ದಿಷ್ಟ ರೂಪವನ್ನು ಎಷ್ಟೆಷ್ಟು ಕೈಬಿಡಲಾಯಿತೋ ಅಷ್ಟಷ್ಟು ಅದು ಪೇಗನ್ನರಲ್ಲಿ ಸಾರ್ವತ್ರಿಕವಾಯಿತು. ಈ ಪ್ರಯತ್ನವೇ ಸೆಕ್ಯುಲರೀಕರಣ ಎಂಬುದು ನನ್ನ ಅಭಿಪ್ರಾಯ.

ಸೆಕ್ಯುಲರೀಕರಣವು ಕ್ರಿಶ್ಚಿಯಾನಿಟಿಯೊಳಗಿನ ಆಂತರಿಕ ಸುಧಾರಣೆಯಿಂದಾಗಿಯೇ ಒಡಮೂಡಿದ ಚಳವಳಿಯಾಗಿದೆ ಎಂಬ ಸಂಗತಿಯನ್ನು ಗಮನಿಸಿದಾಗ ಈ ಮೇಲಿನ ವಿಚಾರಗಳು ಸ್ಪಷ್ಟವಾಗುತ್ತವೆ. ಈ ಸುಧಾರಣೆಯು ಮೊದಲು 16ನೆಯ ಶತಮಾನದಲ್ಲಿ ಪ್ರೊಟೆಸ್ಟಾಂಟ್ ಚಳವಳಿಯ ರೂಪವನ್ನು ಪಡೆಯಿತು. ಪ್ರೊಟೆಸ್ಟಾಂಟರು ಕ್ಯಾಥೋಲಿಕ್ ಕ್ರೈಸ್ತರ ಸಂಸ್ಥೆಗಳನ್ನು ಹಾಗೂ ಆಚರಣೆಗಳನ್ನು ಧಿಃಕರಿಸಿದರು. ರಿಲಿಜನ್ನಿನ ಮೇಲೆ ಚರ್ಚಿನ ಏಕಸ್ವಾಮ್ಯತೆ, ಪುರೋಹಿತಶಾಹಿ, ಕಟ್ಟುಕಟ್ಟಳೆಗಳು, ಇತ್ಯಾದಿ ರಿಲಿಜನ್ನಿನ ಬಹಿರಂಗ ರೂಪಗಳನ್ನು ಅಪ್ರಸ್ತುತವನ್ನಾಗಿ ಮಾಡಿದರು. ಹಾಗೂ ಮಾನವ ಮತ್ತು ಗಾಡ್ ನ ಸಂಬಂಧವನ್ನು ಖಾಸಗೀ ನೆಲೆಯಲ್ಲಿ ನಿರೂಪಿಸಿ ಅದಕ್ಕೆ ಅಮೂರ್ತ ರೂಪವನ್ನು ಕೊಟ್ಟರು. ಈ ವಾದವನ್ನೇ ಮುಂದುವರಿಸಿದ ಕೆಲವು ತತ್ವಶಾಸ್ತ್ರಜ್ಞರು ಗಾಡ್ ಇಲ್ಲದಿದ್ದರೂ ರಿಲಿಜನ್ನು ಅನುಭವಕ್ಕೆ ಬರಲು ಸಾಧ್ಯ ಎಂಬ ಪ್ರತಿಪಾದನೆಯನ್ನು ಮಾಡಿದರು. ಅಂದರೆ ಗಾಡ್ನನ್ನು ನಿರಾಕರಿಸುವ ರಿಲಿಜನ್ನಿನ ಕಲ್ಪನೆಯೂ ಹುಟ್ಟಕೊಂಡಿತು. ರಿಲಿಜನ್ನಿನ ಕುರಿತ ಆಧುನಿಕ ಚಿತ್ರಣಗಳು ರೂಪುತಳೆದದ್ದು ಈ ಹಿನ್ನೆಲೆಯಲ್ಲೇ. ಅಂದರೆ ರಿಲಿಜನ್ನನ್ನು ಗಾಡ್ ನ ಕಲ್ಪನೆಯ ಸಹಾಯವಿಲ್ಲದೇ ವಿವರಿಸುವ ಅಧ್ಯಯನಗಳು ಅಲ್ಲಿಂದ ಮೊದಲಾದವು. ರಿಲಿಜನ್ನೆಂದರೆ ಪವಿತ್ರ ಹಾಗೂ ಅಪವಿತ್ರ ಪರಿಕಲ್ಪನೆಗಳಿಂದ ಹುಟ್ಟಿದ್ದು ಎಂಬುದಾಗಿ ಕೂಡ ಸಮಾಜಶಾಸ್ತ್ರಜ್ಞರು ವ್ಯಾಖ್ಯೆ ಮಾಡಿದರು. ಈ ಸೆಕ್ಯುಲರ್ ವ್ಯಾಖ್ಯೆಗಳ ಸಹಾಯದಿಂದ ಜಗತ್ತಿನ ಎಲ್ಲಾ ಸಂಸ್ಕೃತಿಗಳಲ್ಲೂ ರಿಲಿಜನ್ನಿನ ಅನುಭವ ಹಾಗೂ ಪವಿತ್ರ-ಅಪವಿತ್ರ ವಿಂಗಡಣೆಗಳನ್ನು ತೋರಿಸಿ ರಿಲಿಜನ್ನು ಸರ್ವವ್ಯಾಪಿಯಾದುದು, ಹಾಗೂ ಅದು ತಿಳಿಸುವ ಸತ್ಯಗಳೂ ಸಾರ್ವತ್ರಿಕವಾಗಿವೆ ಎಂಬುದಕ್ಕೆ ಆಧಾರವನ್ನು ತೋರಿಸಲಾಯಿತು.

ಸೆಕ್ಯುಲರೀಕರಣವು ಕ್ರಿಶ್ಚಿಯಾನಿಟಿಯ ನಿರ್ದಿಷ್ಟ ರೂಪವನ್ನು ಮರೆಮಾಚುವುದರಿಂದ ಅದನ್ನು ಸ್ವೀಕರಿಸುವವರಿಗೆ ಅವು ಮತಪ್ರತಿಪಾದನೆಗಳಾಗಿ ಕಾಣದೇ ಕೇವಲ ವೈಜ್ಞಾನಿಕ ಸತ್ಯಗಳಾಗಿ ಕಾಣಿಸುತ್ತವೆ. ಪಾಶ್ಚಾತ್ಯ ಸಮಾಜ ವಿಜ್ಞಾನದ ಸಿದ್ಧಾಂತಗಳ ಮೂಲಕ ನಾವು ಮಾನವ ಸಮಾಜದ ಕುರಿತ ಸಾಮಾನ್ಯ ಸತ್ಯಗಳೆಂದು ಯಾವುದನ್ನು ಸ್ವೀಕರಿಸಿದ್ದೇವೆಯೋ ಅವು ರಿಲಿಜನ್ನುಗಳಿಗೇ ವಿಶಿಷ್ಟವಾದವುಗಳು. ಆದರೆ ಅವು ಮನುಷ್ಯರ ಕುರಿತ ಸಾಮಾನ್ಯ ಸತ್ಯಗಳು ಎಂಬುದಾಗಿ ನಾವು ಭಾವಿಸುತ್ತೇವೆ. ಆ ಮೂಲಕ ಥಿಯಾಲಜಿಯ ಸಿದ್ಧಾಂತಗಳನ್ನು ಒಪ್ಪಿಕೊಳ್ಳುತ್ತೇವೆ. ಆಗ ನಮಗೆ ನಮ್ಮ ಜೀವನ ಕ್ರಮವೇ ಅನ್ಯವಾಗಿ ಕಾಣಿಸಲು ಪ್ರಾರಂಭವಾಗುತ್ತದೆ. ನಾವು ಒಪ್ಪಿಕೊಂಡ ಸತ್ಯಗಳ ಎದುರು ನಮ್ಮ ಪಾರಂಪರಿಕ ಜೀವನಕ್ರಮವೇ ದೋಷಪೂರ್ಣವಾಗಿ ಕಾಣಿಸತೊಡಗುತ್ತದೆ. ಅದನ್ನು ಅಳಿಸುವಲ್ಲಿ ನಾವೇ ಪ್ರಯತ್ನಶೀಲರಾಗುತ್ತೇವೆ. ಈ ರೀತಿಯಲ್ಲಿ ರಿಲಿಜನ್ನಿನ ಪ್ರಸರಣ ಕಾರ್ಯದಲ್ಲಿ ನಾವೂ ಕೈಜೋಡಿಸುತ್ತೇವೆ. ಈ ರೀತಿಯ ಪ್ರಸರಣಕ್ಕೆ ಅಪರಿಮಿತ ಸಾಧ್ಯತೆಗಳಿವೆ.

ಭಾರತದಂತಹ ದೇಶಗಳಲ್ಲಿ ರಿಲಿಜನ್ನೇ ಇಲ್ಲದಿದ್ದಮೇಲೆ ಸೆಕ್ಯುಲರೀಕರಣದ ಪ್ರಕ್ರಿಯೆಗೆ ಅರ್ಥವಿಲ್ಲ. ನಮಗೆ ಸಾಧ್ಯವಿರುವುದು ಪಾಶ್ಚಾತ್ಯ ಸೆಕ್ಯುಲರೀಕರಣಕ್ಕೆ ಒಳಗಾಗುತ್ತ ನಮ್ಮನ್ನು ರೂಪಾಂತರಿಸಿಕೊಳ್ಳುವುದೊಂದೇ ಪ್ರಕ್ರಿಯೆ. ಇದರ ಅಂಗವಾಗಿ ರಿಲಿಜನ್ನಿನ ಲೋಕದೃಷ್ಟಿಗೆ ಅನ್ಯವಾದ ನಮ್ಮ ಸಂಪ್ರದಾಯಗಳು ನಮ್ಮ ಏಳ್ಗೆಗೆ ಬಹುಮುಖ್ಯವಾದ ತೊಡಕುಗಳಾಗಿ ಕಾಣಿಸುತ್ತವೆ. ಹಾಗಾಗಿ ಸಹಜವಾಗಿಯೇ ನಮ್ಮ ಸಮಾಜದ ಏಳ್ಗೆಯ ಕುರಿತು ಚಿಂತಿಸುವ ಎಲ್ಲರಿಗೂ ಸಂಪ್ರದಾಯವನ್ನು ಪ್ರಶ್ನಿಸುವುದು ಹಾಗೂ ಸಂದೇಹಿಸುವುದು ಮೊದಲನೆಯ ಹೆಜ್ಜೆಯಾಗಿದೆ. ಕೆಲವರು ಸಂಪ್ರದಾಯಗಳಲ್ಲಿ ಒಳ್ಳೆಯದನ್ನು ಗುರುತಿಸಬೇಕೆನ್ನುತ್ತ ತಾವೇನೋ ಬೇರೆಯದನ್ನು ಹೇಳುತ್ತಿದ್ದೇವೆಂದು ಭಾವಿಸುತ್ತಾರೆ. ಬದಲಾಗುವುದು ಸಂಪ್ರದಾಯಗಳಿಗೆ ಸಹಜ ಪ್ರಕ್ರಿಯೆಯಾಗಿರುವುದರಿಂದ ಈ ರೀತಿಯ ಧೋರಣೆಗಳು ಮೇಲ್ನೋಟಕ್ಕೆ ವಿವೇಕಯುತವಾಗಿ ಕಾಣಿಸುತ್ತವೆಯೇನೋ ಸರಿ. ಆದರೆ ಅಂಥವರಿಗೆ ನಮ್ಮ ಸಂಪ್ರದಾಯಗಳಲ್ಲಿನ ಒಳ್ಳೆಯದನ್ನು ಹಾಗೂ ಕೆಟ್ಟದ್ದನ್ನು ಗುರುತಿಸುವ ಮಾನದಂಡಗಳನ್ನೂ ಸೆಕ್ಯುಲರೀಕರಣವೇ ನೀಡುತ್ತದೆ. ಆ ಮಾನದಂಡಗಳನ್ನೇ ಉಪಯೋಗಿಸುತ್ತಿರುವವರೆಗೆ ಇಂಥ ಹೇಳಿಕೆಗಳಿಂದ ಪ್ರಯೋಜನವಿಲ್ಲ. ಇಂಥ ಹೇಳಿಕೆಗಳು ನಮ್ಮ ಸಂಪ್ರದಾಯಗಳನ್ನು ರಿಲಿಜನ್ನಿನ ಲೋಕದೃಷ್ಟಿಗೆ ಅನುಗುಣವಾಗಿ ಒಡೆದು ಕಟ್ಟುವ ಕೆಲಸವನ್ನು ಮಾತ್ರವೇ ಸೂಚಿಸಬಲ್ಲವು. ಸೆಕ್ಯುಲರೀಕರಣದ ಪ್ರಕ್ರಿಯೆಯನ್ನು ರಿಲಿಜನ್ನಿಲ್ಲದ ಸಂಸ್ಕೃತಿಗಳು ನಿರ್ವಹಿಸುವ ವೈಖರಿಗೆ ಅದೊಂದು ಉದಾಹರಣೆ ಆಗಬಹುದಷ್ಟೆ.

ಪ್ರೊ.ಎಸ್.ಎನ್.ಬಾಲಗಂಗಾಧರ, ಕನ್ನಡ ನಿರೂಪಣೆ:  ಪ್ರೊ.ರಾಜಾರಾಮ ಹೆಗಡೆ

secular 2 ಸೆಕ್ಯುಲರ್ ಎಂದರೆ ‘ರಿಲಿಜನ್ನಿಗೆ ಸೇರದಿರುವುದು ಅಥವಾ  ಅದಕ್ಕೆ ಹೊರತಾಗಿರುವುದು’ ಎಂಬ ಅರ್ಥ ಬರುತ್ತದೆ. ರಿಲಿಜನ್ ಎಂಬ ಶಬ್ದದಂತೇ ಈ ಶಬ್ದಕ್ಕೆ ಕೂಡ ಭಾರತೀಯ ಭಾಷೆಗಳಲ್ಲಿ ಅನುವಾದವು ಸಾಧ್ಯವಿಲ್ಲ. ಹಾಗಾಗಿಯೇ ರಾಜಕೀಯದ ಸಂದರ್ಭದಲ್ಲಿ ಸೆಕ್ಯುಲರಿಸಂ ಎಂಬ ಶಬ್ದಕ್ಕೆ ಧರ್ಮ ನಿರಪೇಕ್ಷ, ಜಾತ್ಯಾತೀತವಾದ, ಇತ್ಯಾದಿ ತಪ್ಪು ತಪ್ಪಾದ ಭಾಷಾಂತರಗಳನ್ನು ಮಾಡಲಾಗಿದೆ. ಸೆಕ್ಯುಲರ್ ಎಂಬ ಶಬ್ದವನ್ನು ಇತರ ಸಂದರ್ಭಗಳಲ್ಲಿ ಲೌಕಿಕ, ಪ್ರಾಪಂಚಿಕ, ಐಹಿಕ ಇತ್ಯಾದಿ ಭಾಷಾಂತರಗಳಿಂದ ಸೂಚಿಸಲಾಗುತ್ತದೆ. ಆದರೆ ಈ ಶಬ್ದಗಳು ಕೂಡ ಸೆಕ್ಯುಲರ್ ಶಬ್ದದ ಭಾಷಾಂತರಗಳಾಗಲಾರವು. ಸೆಕ್ಯುಲರ್ ಎಂಬ ಶಬ್ದವಿರಬೇಕಾದರೆ ರಿಲಿಜನ್ ಎಂಬ ಪರಿಕಲ್ಪನೆ ಬೇಕೇ ಬೇಕು. ಅವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಭಾರತೀಯ ಸಂಸ್ಕೃತಿಯಲ್ಲಿ ಈ ನಾಣ್ಯವು ಚಲಾವಣೆಯಲ್ಲಿಲ್ಲ.

ಕ್ರಿಶ್ಚಿಯಾನಿಟಿಯಲ್ಲಿ ರಿಲಿಜನ್ನಿನ ಆಚರಣೆಗಳು ಚರ್ಚಿಗೆ ಸಂಬಂಧಪಟ್ಟಿವೆ. ಅವು ಪವಿತ್ರ ಆಚರಣೆಗಳು. ಅದರ ಹೊರಗೆ ಕ್ರೈಸ್ತರು ಆಚರಿಸುವ ಆಚರಣೆಗಳನ್ನು ಈ ಆಚರಣೆಗಳಿಂದ ಸ್ಪಷ್ಟವಾಗಿ ಪ್ರತ್ಯೇಕಿಸಿ ಗುರುತಿಸಬಹುದು. ಅವುಗಳಿಗೆ ಚರ್ಚಿನ ನಿರ್ದೇಶನಗಳಿಲ್ಲ. ಅಂದರೆ ರಿಲಿಜನ್ನಿಗೆ ಸಂಬಂಧಿಸಿದ ಆಚರಣೆಗಳನ್ನು ಮಾಡಬೇಕಾದರೆ ಅದನ್ನು ಚರ್ಚಿನ ವ್ಯವಸ್ಥೆಯಲ್ಲೇ ನೆರವೇರಿಸಬೇಕು. ನೀವೇ ನಿಮ್ಮ ಮನೆಗಳಲ್ಲಿ, ಬೀದಿಗಳಲ್ಲಿ, ಅಂಗಡಿಗಳಲ್ಲಿ ಹಾಗೂ ಇತರ ಸಂಸ್ಥೆಗಳಲ್ಲಿ ಮಾಡಿಕೊಳ್ಳುವ ವ್ಯವಹಾರವನ್ನು ರಿಲಿಜನ್ ಎಂದು ಕರೆಯಲು ಸಾಧ್ಯವಿಲ್ಲ. ಹಾಗಾಗಿ ಚರ್ಚನ್ನು ಬಿಟ್ಟು ಉಳಿದೆಲ್ಲಾ ಸಂಸ್ಥೆಗಳನ್ನೂ ಸೆಕ್ಯುಲರ್ ಸಂಸ್ಥೆಗಳು ಎಂಬುದಾಗಿ ಗುರುತಿಸಿದಲ್ಲಿ ಗೊಂದಲ ಏಳುವ ಸಾಧ್ಯತೆಯೇ ಇಲ್ಲ. ಇಂಥ ಸಂಸ್ಥೆಗಳನ್ನು ಮನುಷ್ಯ ಪ್ರಭುತ್ವವು ತನ್ನ ಅಧಿಕಾರ ವಲಯದಲ್ಲಿ ನಿಯಂತ್ರಿಸುತ್ತದೆ. ಪಾಶ್ಚಾತ್ಯ ಸಂಸ್ಕೃತಿಯು ತನ್ನ ಜನರ ಜೀವನವನ್ನು ಈ ಎರಡು ಸ್ಪಷ್ಟವಾಗಿ ಪ್ರತ್ಯೇಕಿಸಿದ ಅಧಿಕಾರ ವಲಯಗಳಲ್ಲಿ ವ್ಯವಸ್ಥಿತಗೊಳಿಸಿಕೊಂಡು ಬಂದಿದೆ. ಈ ಎರಡೂ ವಲಯಗಳ ನಡುವೆ ಅಧಿಕಾರದ ಪೈಪೋಟಿ ಉದ್ದಕ್ಕೂ ನಡೆದುಕೊಂಡುಬಂದಿದೆ. ಈ ಕಾರಣದಿಂದ ಅಲ್ಲಿನ ಸಾಮಾಜಿಕ ಹಾಗೂ ರಾಜಕೀಯ ಅಧಿಕಾರದ ಕುರಿತ ಚಿಂತನೆಗಳು ಕೂಡ ಈ ಪರಿಭಾಷೆಗಳನ್ನು ನಿರ್ಣಾಯಕವಾಗಿ ಆಧರಿಸಿವೆ.
ರಿಲಿಜನ್ ಎಂಬ ಶಬ್ದವನ್ನು ರಿಲಿಗೇರ್ ಎಂಬ ಧಾತುವಿನಿಂದ ಪಡೆದುಕೊಳ್ಳಲಾಗಿದೆ. ರಿಲಿಗೇರ್ ಶಬ್ದಕ್ಕೆ ಕ್ರೈಸ್ತರು ಕೊಟ್ಟುಕೊಂಡ ಅರ್ಥದ ಪ್ರಕಾರ ಅದು ‘ಮಾನವ ಮತ್ತು ಗಾಡ್ ನ ಅನುಬಂಧ’. ಮಧ್ಯಕಾಲದಲ್ಲಿ ಕ್ರೈಸ್ತ ಚರ್ಚು ತನ್ನ ಅಧಿಕಾರವಲಯವನ್ನು ಸೇಕ್ರೆಡ್ ಅಥವಾ ಹೋಲೀ (ಪವಿತ್ರ) ಎಂಬುದಾಗಿ ಪ್ರತಿಪಾದಿಸಿತ್ತು. ಮಾನವನನ್ನೂ ಹಾಗೂ ಈ ಪ್ರಪಂಚವನ್ನೂ ಸೃಷ್ಟಿಸಿದ ಗಾಡ್ ಸ್ವತಃ ಪ್ರವಾದಿಗೆ ಪ್ರಕಟಗೊಂಡು ರಿಲಿಜನ್ನನ್ನು ನೀಡಿದ್ದಾನೆ. ಅದನ್ನಾಧರಿಸಿ ಈ ರಿಲಿಜನ್ನನ್ನು ಭೂಮಿಯ ಮೇಲೆ ರಕ್ಷಿಸಿಕೊಂಡು ಪ್ರಸಾರಮಾಡಿಕೊಂಡುಹೋಗುವ ಸಲುವಾಗಿ ಚರ್ಚೆಂಬ ಸಂಸ್ಥೆ ಅವಶ್ಯಕವಾಯಿತು. ಚರ್ಚಿನ ನಿರ್ದೇಶನದಲ್ಲಿ ನಡೆಯುವ ಚಟುವಟಿಕೆಗಳು ದೈವೀ ವಾಣಿಯನ್ನಾಧರಿಸಿರುವುದರಿಂದ ಅವು ಪವಿತ್ರವಾದವುಗಳು ಹಾಗೂ ಅವೇ ಮನುಷ್ಯನನ್ನು ಗಾಡ್ ಜೊತೆಗೆ ಬಂಧಿಸುವ ಸಾಧನಗಳು. ಹಾಗಾಗಿ ಚರ್ಚು ತನ್ನ ಅನುಯಾಯಿಗಳಿಗೆ ನಿರ್ದೇಶಿಸುವ ಅಂಥ ಚಟುವಟಿಕೆಗಳು ರಿಲಿಜನ್ನಿಗೆ ಸಂಬಂಧಿಸಿವೆ. ಹಾಗಾಗಿ ಸಾವಿರಾರು ವರ್ಷಗಳಿಂದ ಈ ಚರ್ಚಿನ ಆಶ್ರಯದಲ್ಲಿಯೇ, ಅದಕ್ಕೆ ಸೀಮಿತವಾಗಿಯೇ ರಿಲಿಜನ್ನು ಬೆಳೆದುಕೊಂಡು ಬಂದಿದೆ.

ಚರ್ಚು ಎಂಬ ಸಂಸ್ಥೆಯ ಅಧಿಕಾರದ ಸೀಮಾರೇಖೆಗಳನ್ನು ನಿರ್ದಿಷ್ಟಪಡಿಸಿದಾಗ ಅದರ ಹೊರಗೂ ಒಂದು ಪ್ರಪಂಚವು ಹಾಗೇ ಉಳಿದುಕೊಳ್ಳುವುದು ಸಹಜ. ಅಂದರೆ ಮನುಷ್ಯನ ಅನೇಕ ಚಟುವಟಿಕೆಗಳು ಕೇವಲ ಆತನ ಐಹಿಕ ಅರ್ಥಸಾಧನೆಯ ಉದ್ದೇಶದಿಂದ ನಡೆಯುತ್ತವೆ ಹಾಗೂ ನಡೆಯಲೇಬೇಕು. ಅದರ ಜೊತೆಗೇ ಚರ್ಚು ಒಂದು ಜನಜೀವನವನ್ನು ಎಷ್ಟರ ಮಟ್ಟಿಗೆ ಆವರಿಸಿಕೊಳ್ಳಬಹುದು ಎಂಬ ಸವಾಲು ಕೂಡ ಇತ್ತು. ದಿನನಿತ್ಯ ಉಣ್ಣುವುದು ಉಡುವುದರಿಂದ ಹಿಡಿದು ಅನುಯಾಯಿಗಳು ಅನೇಕ ಚಟುವಟಿಕೆಗಳನ್ನು ಮಾಡುತ್ತಾರೆ. ಇವೆಲ್ಲವನ್ನೂ ರಿಲಿಜನ್ನಿಗೆ ಸಂಬಂಧಿಸಿದ್ದು ಎನ್ನುವುದು ಸಾಧ್ಯವೇ ಇಲ್ಲ. ಚರ್ಚಿನ ಈ ಸಮಸ್ಯೆಯನ್ನು ಮತಪರಿವರ್ತನೆಯ ಹಿನ್ನೆಲೆಯಲ್ಲಿಟ್ಟು ನೋಡಿದಾಗ ಚರ್ಚಿನ ಸಮಸ್ಯೆಯ ಅಗಾಧತೆಯನ್ನು ಅಂದಾಜುಮಾಡಬಹುದು. ಪೇಗನ್ ಸಮುದಾಯಗಳಲ್ಲಿ ಮತಪರಿವರ್ತನೆಯನ್ನು ನಡೆಸಿದಾಗ ಪೇಗನ್ನರ ಜೀವನದಲ್ಲಿನ ಯಾವ ಯಾವ ಚಟುವಟಿಕೆಗಳನ್ನು ಚರ್ಚು ಬದಲಿಸಬೇಕು? ಯಾವವನ್ನು ನಿಷೇಧಿಸಬೇಕು? ಯಾವವನ್ನು ನಿರ್ಲಿಪ್ತವಾಗಿ ನೋಡಬೇಕು? ಎಂಬ ಸಮಸ್ಯೆಯು ಜ್ವಲಂತವಾಗಿ ಚರ್ಚಿನ ಎದುರಿಗಿತ್ತು. ಅಂಥ ವಾಸ್ತವವನ್ನು ಎದುರಿಸುವ ಸಲುವಾಗಿ ಚರ್ಚು ರಿಲಿಜನ್ನಿಗೆ ಸಂಬಂಧಿಸಿಲ್ಲದ ಚಟುವಟಿಕೆಗಳನ್ನು ಹಾಗೂ ಅವುಗಳ ಸ್ವಾಯತ್ತ ವಲಯವನ್ನು ಗುರುತಿಸಿ ಅದನ್ನು ಪ್ರೊಫೇನ್ ಅಥವಾ ಸೆಕ್ಯುಲರ್ ಪ್ರಪಂಚವೆಂಬುದಾಗಿ ಕರೆದುಕೊಳ್ಳುತ್ತಾ ಬಂದಿತು. ಅಂದರೆ ಗಾಡ್ನನ್ನು ಸೇರುವ ಸಾಧನವಲ್ಲದ ಹಾಗೂ ಮಾನವನ ಐಹಿಕ ಜೀವನಕ್ಕೆ ಮಾತ್ರವೇ ಸಂಬಂಧಪಟ್ಟ ಚಟುವಟಿಕೆಗಳು, ಸಂಸ್ಥೆಗಳು ಹಾಗೂ ಚಿಂತನೆಗಳು ಸೆಕ್ಯುಲರ್ ಎಂಬುದಾಗಿ ಕರೆಸಿಕೊಂಡವು.

ಚರ್ಚು ಗಾಡ್ ಗೆ ಸಂಬಂಧಪಟ್ಟಿದ್ದರಿಂದ ಹಾಗೂ ಆ ಕಾರಣದಿಂದ ರಿಲಿಜನ್ನಿಗೆ ಸಂಬಂಧಪಟ್ಟಿದ್ದರಿಂದ ಅದು ಪವಿತ್ರ ವಲಯ. ಸೆಕ್ಯುಲರ್ ಪ್ರಪಂಚವು ರಿಲಿಜನ್ನಿಗೆ ಹೊರತಾದ ವಲಯವಾದುದರಿಂದ ಅದು ಪವಿತ್ರವಲ್ಲದ ವಲಯವೆಂಬುದಾಗಿ ಚರ್ಚು ಗ್ರಹಿಸಿತ್ತು. ಪ್ರೊಫೇನ್ ಎಂಬ ಶಬ್ದವು ಅಪವಿತ್ರ ಎಂಬ ಅರ್ಥವನ್ನೂ ಹೊಂದಿದೆ. ಅಂದರೆ ಸೆಕ್ಯಲರ್ ಪ್ರಪಂಚವು ಯಾವ ಕಾರಣಕ್ಕೂ ಚರ್ಚಿಗಿಂತ ಮಹತ್ವದ್ದಲ್ಲ ಎಂಬುದು ಚರ್ಚುಗಳ ನಿರೂಪಣೆ. ಇಂಥ ನಿರೂಪಣೆಯು ಚರ್ಚು ಹಾಗೂ ರಾಜಪ್ರಭುತ್ವಗಳ ಸಂದರ್ಭದಲ್ಲಿ ಒಂದು ಪೈಪೋಟಿಯನ್ನು ಹುಟ್ಟುಹಾಕಿತು. ಅದರ ಐತಿಹಾಸಿಕ ಸಂದರ್ಭ ಹೀಗಿದೆ: ಪ್ರಾಚೀನ ರೋಮನ್ ಸಾಮ್ರಾಜ್ಯದ ಕೊನೆಯ ಸಾಮ್ರಾಟನಾದ ಕಾನ್ಸ್ಟೆಂಟೈನನನ್ನು ಕ್ರೈಸ್ತರು ಪರಿವರ್ತನೆ ಮಾಡಿದರು. ಆ ಮೂಲಕ ರೋಮನ್ ಸಾಮ್ರಾಜ್ಯವು ಚರ್ಚಿನ ಪ್ರಭಾವಕ್ಕೆ ಒಳಪಟ್ಟಿತು. ಆದರೆ ಈ ಘಟನೆಯಾದ ಅಲ್ಪಾವಧಿಯಲ್ಲೇ ರೋಂ ಸಾಮ್ರಾಜ್ಯದ ಪತನವಾಯಿತು. ರೋಂ ಸಾಮ್ರಾಟನ ಪರಿವರ್ತನೆಗೂ ಆ ಸಾಮ್ರಾಜ್ಯದ ಪತನಕ್ಕೂ ಕಾರ್ಯಕಾರಣ ಸಂಬಂಧವನ್ನು ಕಲ್ಪಿಸಿ ಕ್ರೈಸ್ತರ ವಿರುದ್ಧ ಟೀಕೆಗಳು ಪೇಗನ್ನರಿಂದ ಬಂದವು. ರೋಮನ್ ನಗರ ದೇವತೆಗಳನ್ನು ಪೂಜಿಸಲು ಕ್ರೈಸ್ತರು ನಿರಾಕರಿಸುತ್ತಾರೆ, ಹಾಗಾಗಿ ಆ ದೇವತೆಗಳ ಕೋಪಕ್ಕೆ ಸಾಮ್ರಾಜ್ಯವೇ ಬಲಿಯಾಯಿತು ಎಂಬುದೇ ಆ ಟೀಕೆ. ಇಂಥದೊಂದು ಟೀಕೆಯಿಂದಾಗಿ ಮನುಷ್ಯ ಪ್ರಭುತ್ವಕ್ಕೆ ಸಂಬಂಧಿಸಿದಂತೆ ಗಾಡ್ನ ಉದ್ದೇಶವೇನು? ಚರ್ಚಿನ ಎದುರು ಮನುಷ್ಯರ ಪ್ರಭುತ್ವಗಳ ಸ್ಥಾನಮಾನಗಳೇನು? ಎಂಬ ಜಿಜ್ಞಾಸೆಗಳು ಹುಟ್ಟಿಕೊಂಡವು. ಆ ಸಂದರ್ಭದಲ್ಲಿ ಸೇಂಟ್ ಅಗಸ್ಟೈನ್ ಎಂಬವನು ಚರ್ಚೆಂಬುದು ಗಾಡ್ನ ರಾಜ್ಯ ಹಾಗೂ ರಾಜರುಗಳ ಆಳ್ವಿಕೆಯೆಂಬುದು ಮತ್ರ್ಯರ ರಾಜ್ಯ, ಮಾನವನನ್ನೂ ಗಾಡ್ನೇ ಸೃಷ್ಟಿಸಿದ್ದಾನೆ ಹಾಗೂ ಅವನೇ ಶಾಶ್ವತ ಹಾಗೂ ಪರಿಪೂರ್ಣ. ಮಾನವನು ಮತ್ರ್ಯನಾಗಿರುವುದರಿಂದ ಅವನ ರಾಜ್ಯವು ಅಶಾಶ್ವತವಾಗಿರುವುದು ಸಹಜವೇ ಆಗಿದೆ. ಗಾಡ್ನ ಉದ್ದೇಶಕ್ಕೆ ಅನುಗುಣವಾಗಿ ಮಾನವನಿರುವುದರಿಂದ ಹಾಗೂ ಮಾನವನಿಗೆ ಅವನ ಉದ್ದೇಶವು ಗೊತ್ತಿಲ್ಲದಿರುವುದರಿಂದ ಮತ್ರ್ಯರ ರಾಜ್ಯವು ಗಾಡ್ನ ರಾಜ್ಯಕ್ಕೆ, ಅಂದರೆ ಅದರ ಪ್ರತಿನಿಧಿಯಾದ ಚರ್ಚಿಗೆ ಆಧೀನವಾಗಿರುವುದೊಂದೇ ಮಾರ್ಗ.

ಮಧ್ಯಕಾಲೀನ ಯುರೋಪಿನಲ್ಲಿ ಕ್ರಿಶ್ಚಿಯಾನಿಟಿಯು ಸರ್ವವ್ಯಾಪಿಯಾದ ನಂತರ ಮನುಷ್ಯ ಪ್ರಭುತ್ವವು ಚರ್ಚಿನ ಪ್ರಭುತ್ವದ ಆಧೀನತೆಯಲ್ಲಿ ತನ್ನ ಪ್ರಸ್ತುತತೆಯನ್ನು ಪಡೆಯಿತು. 18ನೆಯ ಶತಮಾನದ ನಂತರ ಯುರೋಪಿನಲ್ಲಾದ ಬದಲಾವಣೆಗಳಿಂದಾಗಿ ಮನುಷ್ಯ ಪ್ರಭುತ್ವವನ್ನು ಸೆಕ್ಯುಲರ್ ವಲಯವನ್ನಾಗಿ ಪರಿವರ್ತಿಸುವ ಒತ್ತಡ ನಿರ್ಮಾಣವಾಯಿತು. ಈ ಒತ್ತಡವು ಸೃಷ್ಟಿಯಾಗುವುದಕ್ಕೆ ಪೂರ್ವಭಾವಿಯಾಗಿ ಪ್ರೊಟೆಸ್ಟಾಂಟ್ ಚಳವಳಿ, ಜ್ಞಾನೋದಯ ಯುಗದ ವಿಚಾರವಾದ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳು ಕೆಲಸಮಾಡಿವೆ. ಒಟ್ಟಿನಲ್ಲಿ ಮನುಷ್ಯ ಪ್ರಭುತ್ವಗಳು ಸ್ಟೇಟ್ ಸೆಕ್ಯುಲರಿಸಂ ಎಂಬ ಪ್ರತಿಪಾದನೆಯನ್ನು ಎತ್ತಿಹಿಡಿದವು. ಆ ಪ್ರಕಾರ ಸ್ಟೇಟ್ ಎಂಬುದು ಸೆಕ್ಯುಲರ್ ವಲಯವೇ ಹೊರತೂ ರಿಲಿಜನ್ನಿನದಲ್ಲ. ಹಾಗಾದಾಗಲೇ ಮನುಷ್ಯರ ಕಲ್ಯಾಣ ಹಾಗೂ ಪ್ರಗತಿ ಸಾಧ್ಯ, ಇತ್ಯಾದಿ. ಅಂದರೆ ನಮ್ಮ ಜೀವನದ ಯಾವ ಭಾಗವು ರಿಲಿಜನ್ನಿಗೆ ಸೇರಿದೆ ಹಾಗೂ ಯಾವ ಭಾಗವು ಸೆಕ್ಯುಲರ್ ಪ್ರಪಂಚಕ್ಕೆ ಸೇರಿದೆ ಎಂಬ ಜಿಜ್ಞಾಸೆಯ ಮುಂದುವರಿಕೆಯನ್ನೇ ಈ ಮೇಲಿನ ಉದಾಹರಣೆಯಲ್ಲಿ ಕಾಣುತ್ತೇವೆ.

ಯುರೋಪಿನಲ್ಲಿ ಆಧುನಿಕ ಕಾಲದಲ್ಲಿ ಈ ಸೆಕ್ಯುಲರ್-ರಿಲಿಜಿಯಸ್ ಎಂಬ ವಿಂಗಡಣೆಯನ್ನು ಇಟ್ಟುಕೊಂಡ ಚರ್ಚುಗಳು ಕೇವಲ ರಾಜಕೀಯದಲ್ಲೊಂದೇ ಅಲ್ಲ, ತತ್ವಚಿಂತನೆಯಲ್ಲಿ, ಕಾನೂನಿನಲ್ಲಿ, ಸಾಮಾಜಿಕ ಸಂಸ್ಥೆಗಳಲ್ಲಿ, ಕಲಾಪ್ರಕಾರಗಳಲ್ಲಿ, ಹೀಗೆ ವಿಭಿನ್ನ ಕ್ರೇತ್ರಗಳಲ್ಲಿ ಪ್ರಸ್ತುತವಾದವು. ಇಂಥ ಚಿಂತನೆಗಳು ವ್ಯಾವಹಾರಿಕ ಹಾಗೂ ಪ್ರಾಯೋಗಿಕ ಸಮಸ್ಯೆಯಿಂದ ಹುಟ್ಟಿರದಿದ್ದರೆ ಹಾಗೂ ಜನರಿಗೆ ಅವು ಪ್ರಸ್ತುತವೆನ್ನಿಸದಿದ್ದರೆ ಹೀಗೆ ಐರೋಪ್ಯ ಸಂಸ್ಕೃತಿಯನ್ನೇ ಕಾಡುವ ಚರ್ಚೆಯಾಗಿ ಅದು ಬೆಳೆಯುತ್ತಿರಲಿಲ್ಲ ಎಂಬುದೂ ಸ್ಪಷ್ಟ. ಯುರೋಪಿನ ಇತಿಹಾಸವನ್ನು ಗಮನಿಸಿದಾಗ ಉದ್ದಕ್ಕೂ ಕ್ರಿಶ್ಚಿಯಾನಿಟಿಯಿಂದಾಗಿಯೇ ಈ ಎರಡೂ ವಲಯಗಳೂ ಅಸ್ತಿತ್ವಕ್ಕೆ ಬಂದು ತಮ್ಮ ಪ್ರಸ್ತುತತೆಯನ್ನು ಉಳಿಸಿಕೊಂಡು ಬಂದಿವೆ ಎಂಬುದೂ ಸ್ಪಷ್ಟವಾಗುತ್ತದೆ. ಅಂದರೆ, ಸೆಕ್ಯುಲರ್ ವಲಯವು ಕ್ರಿಶ್ಚಿಯಾನಿಟಿಯು ತನ್ನೊಳಗೇ ಮಾಡಿಕೊಂಡ ಒಂದು ವಿಂಗಡಣೆಯಾಗಿದೆ. ಈ ವಿಂಗಡಣೆಯನ್ನಿಟ್ಟುಕೊಂಡೇ ಅದು ಯುರೋಪಿನಾದ್ಯಂತ ಪಸರಿಸಿದೆ ಹಾಗೂ ಆ ರಿಲಿಜನ್ನಿನಿಂದಲೇ ರೂಪಿತವಾದ ಐರೋಪ್ಯ ಸಂಸ್ಕೃತಿಯ ಜನರಿಗೆ ಆ ವಿಂಗಡಣೆಯು ಪ್ರಸ್ತುತವೆನ್ನಿಸುತ್ತದೆ.

ಈ ಹಿನ್ನೆಲೆಯನ್ನುಳ್ಳ ಪಾಶ್ಚಾತ್ಯರು ವಿಶ್ವದ ಇತರ ಸಂಸ್ಕೃತಿಗಳನ್ನು ಕೂಡಾ ಹಾಗೇ ಅನುಭವಕ್ಕೆ ತಂದುಕೊಂಡರು. ಉದಾಹರಣೆಗೆ ಭಾರತೀಯ ಸಂಸ್ಕೃತಿಯನ್ನು ಗಮನಿಸಿದಾಗ ಅವರಿಗೆ ಇಲ್ಲಿನ ಕೆಲವು ಆಚರಣೆಗಳು ರಿಲಿಜನ್ನಿಗೆ ಸೇರಿದಂತೇ ಕಂಡವು. ದೇವರುಗಳು, ಗ್ರಂಥಗಳು, ಪೂಜೆ, ಮಂತ್ರ-ತಂತ್ರ ಇತ್ಯಾದಿಗಳು ರಿಲಿಜನ್ನುಗಳಂತೇ ಕಂಡು ಅವುಗಳನ್ನು ಹಿಂದೂಯಿಸಂ, ಬುದ್ಧಿಸಂ ಇತ್ಯಾದಿಯಾಗಿ ಗುರುತಿಸಿದರು. ಆದರೆ ಈ ಹಿಂದೂಯಿಸಂ ಮುಂತಾದ ರಿಲಿಜನ್ನುಗಳ ರೂಪುರೇಷೆಗಳನ್ನು ನಿರ್ದಿಷ್ಟ ಪಡಿಸುತ್ತಾ ಹೋದಂತೆ ಗಾಳಿಯಲ್ಲಿ ಗುದ್ದಾಡಿದ ಅನುಭವವಾಯಿತು. ಅದೇ ರೀತಿಯಲ್ಲಿ ಈ ಜನರಿಗೆ ಒಂದು ಸೆಕ್ಯುಲರ್ ಪ್ರಪಂಚವೂ ಕೂಡ ಇದೆಯೆಂಬುದರಲ್ಲಿಯೂ ಅವರಿಗೆ ಯಾವುದೇ ಸಂಶಯವಿರಲಿಲ್ಲ. ಈ ಜನರೂ ಊಟ, ಉಡುಗೆ, ಆಟಪಾಠ, ಇತ್ಯಾದಿ ಸೆಕ್ಯುಲರ್ ಜೀವನವನ್ನು ಹೊಂದಿದಂತೇ ಕಂಡಿತು. ಆದರೆ ಸಮಸ್ಯೆ ಬಂದದ್ದು ಸೆಕ್ಯುಲರ್ ಜೀವನವನ್ನು ಹೇಗೆ ಗುರುತಿಸಬೇಕೆಂಬುದರಲ್ಲಿ. ಏಕೆಂದರೆ ಹಿಂದೂಯಿಸಂಗೆ ಸೇರಿದ ಲಕ್ಷಣಗಳು ಈ ಜನರ ಸರ್ವ ವ್ಯವಹಾರಗಳಲ್ಲೂ ಯಾವುದೇ ಭೇದಕ್ಕೆ ಆಸ್ಪದ ಕೊಡದೇ ವ್ಯಾಪಿಸಿಕೊಂಡಂತೆನಿಸಿತು. ಈ ಸಮಸ್ಯೆಗಳನ್ನೆಲ್ಲ ಪರಿಹರಿಸಿಕೊಳ್ಳಲು ‘ಹಿಂದೂಯಿಸಂ ಒಂದು ಜೀವನ ಕ್ರಮ’ ಎನ್ನುವ ವ್ಯಾಖ್ಯೆ ತೀರಾ ಅನುಕೂಲಕರವಾಗಿದೆ ಎಂಬ ಅಭಿಪ್ರಾಯಕ್ಕೆ ನಾವಿಂದು ಬಂದಿದ್ದೇವೆ. ಆದರೆ ಆ ವ್ಯಾಖ್ಯೆಯನ್ನು ಒಪ್ಪಿಕೊಂಡರೆ ಮತ್ತೊಂದು ಸಮಸ್ಯೆ ಏಳುತ್ತದೆ. ಈ ಜನರ ಸಮಗ್ರ ಜೀವನಕ್ರಮವೇ ರಿಲಿಜನ್ನಾಗಿದ್ದುದು ನಿಜವೇ ಆದಲ್ಲಿ, ಅಲ್ಲಿ ಸೆಕ್ಯುಲರ್ ಯಾವುದು ಎಂಬುದನ್ನು ಹೇಗೆ ಕಂಡುಹಿಡಿಯುವುದು?

ಅಂದರೆ, ಈ ಸಮಸ್ಯೆ ಏಕೆ ಏಳುತ್ತದೆಯೆಂದರೆ ಭಾರತೀಯ ಸಂಸ್ಕೃತಿಯಲ್ಲಿ ಈ ಮೇಲಿನ ಎರಡೂ ಪರಿಭಾಷೆಗಳೂ ಇಲ್ಲ, ವಿಂಗಡಣೆಗಳೂ ಇಲ್ಲ. ಈ ರಿಲಿಜನ್ ಮತ್ತು ಸೆಕ್ಯುಲರ್ ಎಂಬ ಪರಿಭಾಷೆಗಳನ್ನು ಲೌಕಿಕ-ಅಲೌಕಿಕ, ಐಹಿಕ-ಪಾರಮಾರ್ಥಿಕ ಇತ್ಯಾದಿ ಶಬ್ದಗುಚ್ಛಗಳಿಂದ ಅನುವಾದಿಸಿ ನಮ್ಮದನ್ನಾಗಿ ಮಾಡಿಕೊಳ್ಳಬಹುದಲ್ಲವೆ? ಎಂಬ ಸಲಹೆಯನ್ನು ನೀವು ನೀಡಬಹುದು. ಆದರೆ ಅಲೌಕಿಕ, ಪಾರಮಾರ್ಥಿಕ ಇತ್ಯಾದಿ ಶಬ್ದಗಳೆಲ್ಲ ರಿಲಿಜನ್ ಎಂಬ ಸಂಸ್ಥೆಗಳಲ್ಲ, ಅಥವಾ ಅವುಗಳಿಗೆ ಸಂಬಂಧಪಟ್ಟ ಆಚರಣೆಗಳು ಪ್ರತ್ಯೇಕ ಸಂಸ್ಥೆ ಅಥವಾ ಅಧಿಕಾರ ವಲಯವಾಗಿ ಬೆಳೆದಿಲ್ಲ. ಹಾಗಾಗಿ ಅವುಗಳು ಅಧಿಕಾರ ವಲಯಗಳ ವಿಂಗಡಣೆಗಳಲ್ಲ. ನಾನು ಹೀಗೆ ಹೇಳಿದಾಕ್ಷಣ ‘ಹಾಗಾದರೆ ಭಾರತದಲ್ಲಿ ಬ್ರಾಹ್ಮಣ ಪುರೋಹಿತಶಾಹಿಯು ಆ ಕೆಲಸವನ್ನು ಮಾಡುತ್ತಿಲ್ಲವೆ?” ಎಂಬ ಆಕ್ಷೇಪಣೆ ಬಂದೇ ಬರುತ್ತದೆ. ಆದರೆ ಈ ಪುರೋಹಿತಶಾಹಿ ಎಂಬ ಪರಿಕಲ್ಪನೆ ಕೂಡಾ ರಿಲಿಜನ್ನುಗಳಿಂದ ಕಡ ತೆಗೆದುಕೊಂಡದ್ದಾಗಿದೆ. ಅದೇನು ಎಂಬುದು ನಮಗೆ ನಿಜವಾಗಿಯೂ ಗೊತ್ತಿಲ್ಲದಿರುವುದರಿಂದ ನಮ್ಮಲ್ಲಿ ಇದ್ದುದೆಲ್ಲ ಅದರಂತೇ ಕಾಣಿಸುತ್ತದೆ.

ಉದಾಹರಣೆಗೆ ದೇವರು, ಪೂಜೆ, ಪ್ರಾರ್ಥನೆ ಇತ್ಯಾದಿಗಳನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡು ಅದಕ್ಕೇ ಪ್ರತ್ಯೇಕ ಸ್ಥಳವನ್ನು ಹಾಗೂ ಕ್ರಮವನ್ನು ಕಲ್ಪಿಸಿರುವ ಅಧಿಕಾರ ವ್ಯವಸ್ಥೆ ನಮ್ಮಲ್ಲಿ ಕಂಡುಬರುವುದಿಲ್ಲ. ಈ ಮೇಲಿನ ಆಚರಣೆಗಳನ್ನು ದೇವಾಲಯಗಳಲ್ಲೊಂದೇ ಅಲ್ಲ, ಮನೆಮನೆಗಳಲ್ಲಿ, ಬೀದಿಗಳಲ್ಲಿ, ಆಫೀಸುಗಳಲ್ಲಿ, ಪಾರ್ಕುಗಳಲ್ಲಿ, ಆಸ್ಪತ್ರೆ, ಬಸ್ಸ್ಟ್ಯಾಂಡು, ಇತ್ಯಾದಿ ಎಲ್ಲಾ ಜಾಗಗಳಲ್ಲೂ, ಅಂದರೆ ಈ ಸಂಸ್ಕೃತಿಗೆ ಸೇರಿದ ಮನುಷ್ಯರು ಇರುವ ಎಲ್ಲೆಡೆಯಲ್ಲೂ ಯಾವುದೇ ನಿರ್ದೇಶನ ಹಾಗೂ ನಿಯಂತ್ರಣಗಳಿಲ್ಲದೇ ನಡೆಸಲಾಗುತ್ತದೆ. ಭಾರತೀಯರ ಜೀವನದಲ್ಲಿ ದೇವರು, ಪೂಜೆ ಇತ್ಯಾದಿಗಳು ಇಲ್ಲದ ಅಥವಾ ಇರಲೇಬೇಕಾದ ವಲಯಗಳ ವಿಂಗಡಣೆಯನ್ನು ಗುರುತಿಸಲು ಸಾಧ್ಯವಿಲ್ಲ. ಇಲ್ಲಿ ದೇವರುಗಳನ್ನು ಪೂಜೆ ಮಾಡಲೇ ಬೇಕೆಂದೂ ಇಲ್ಲ. ಭಾರತೀಯರ ಆರ್ಥಿಕ, ರಾಜಕೀಯ, ಸಾಮಾಜಿಕ ಜೀವನ ಅಂತೆಲ್ಲ ಏನೇನು ಐಹಿಕ ಪ್ರಭೇದಗಳನ್ನು ಗುರುತಿಸಬಹುದೋ ಅವುಗಳಲ್ಲೆಲ್ಲ ದೇವರುಗಳ ಕಲ್ಪನೆ ಹಾಗೂ ಅವರ ಪೂಜೆ ಸದಾ ಪ್ರಸ್ತುತವಾಗಿವೆ. ಕಳ್ಳರನ್ನು ಹಿಡಿಯಲಿಕ್ಕೆ, ನ್ಯಾಯ ತೀರ್ಮಾನಕ್ಕೆ, ಸೇಡು ತಿರಿಸಿಕೊಳ್ಳಲಿಕ್ಕೆ, ಹೀಗೆ ಈ ಆಚರಣೆಗಳು ಪೂರೈಸದ ಐಹಿಕ ಅಗತ್ಯಗಳಿಲ್ಲ. ಭಾರತೀಯರ ನೃತ್ಯ, ಶಿಲ್ಪ, ಸಂಗೀತ ಇತ್ಯಾದಿ ಸಮಸ್ತ ಕಲಾಪ್ರಕಾರಗಳಲ್ಲಿ ದೇವರುಗಳು ಪ್ರಸ್ತುತತೆ ಪಡೆಯುವುದೊಂದೇ ಅಲ್ಲದೇ ಅವುಗಳಲ್ಲಿ ದೈವಭಕ್ತಿಯೇ ಸೃಜನಶೀಲತೆಯ ಮೂಲ ಸೆಲೆಯಾಗಿದೆ. ಹಾಗಂತ ಅವುಗಳನ್ನು ಪಾರಮಾರ್ಥಿಕ ಚಟುವಟಿಕೆಗಳು ಎಂಬುದಾಗಿ ಯಾರೂ ಗ್ರಹಿಸುವುದಿಲ್ಲ. ಈ ಕಲೆಗಳನ್ನೆಲ್ಲ ಯಾವುದೇ ಹಿಂಜರಿಕೆ ಹಾಗೂ ಪ್ರತಿರೋಧಗಳಿಲ್ಲದೇ ಉದ್ಯಮಗಳಲ್ಲಿ, ಜಾಹೀರಾತುಗಳಲ್ಲಿ, ಸರ್ಕಾರೀ ಪ್ರಚಾರ ಕಾರ್ಯಗಳಲ್ಲಿ, ಮನೋರಂಜನೆಯಲ್ಲಿ, ಹೀಗೆ ನಮ್ಮ ಊಹೆಗೆ ನಿಲುಕುವ ಎಲ್ಲಾ ರೀತಿಯಲ್ಲೂ ಐಹಿಕ ಹಾಗೂ ಲೌಕಿಕ ಅರ್ಥಸಾಧನೆಗಾಗಿ ಬಳಸಲಾಗುತ್ತಿದೆ. ಅದು ಯಾವ ಮಟ್ಟಕ್ಕೆ ಹೋಗಬಹುದೆಂದರೆ ಬೆಂಗಳೂರಿನಲ್ಲಿ ರಸ್ತೆಯಂಚಿನಲ್ಲಿ ಜನರು ಹೊಲಸು ಮಾಡುವುದನ್ನು ನಿಲ್ಲಿಸಲು ಕೂಡಾ ದೇವರ ಫೋಟೋಗಳನ್ನು ಅಳವಡಿಸಿರುವುದನ್ನು ನೀವು ಕಾಣಬಹುದು.

ಇಂಥದ್ದೊಂದು ಜನಜೀವನದ ಮೇಲೆ ಸೆಕ್ಯುಲರ್-ರಿಲಿಜಿಯಸ್ ಎಂಬ ವಿಂಗಡಣೆಯನ್ನು ಹಾಕಲು ಹೋದಾಗ ಮುಗಿಯದ ಗೊಂದಲಗಳನ್ನು ಎದುರಿಸದೇ ಬೇರೆ ಗತಿಯಿಲ್ಲ. ಆ ವಿಂಗಡಣೆಯೇ ಇಲ್ಲಿ ಅಪ್ರಸ್ತುತವಾದುದು ಎಂಬುದನ್ನು ಅರಿಯುವುದೊಂದೇ ಈ ಗೊಂದಲಗಳಿಂದ ಹೊರಬರುವ ಮಾರ್ಗ.