23 July 2013

ಚರ್ಚೆಗೆ ಆಹ್ವಾನ 


ಕನ್ನಡದಲ್ಲಿ 'ಅನುವಾದ' (translation) ಸಾಹಿತ್ಯ ಬೆಳೆಯುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ 'ಅನುವಾದ ಅಧ್ಯಯನ' (Translation studies) ವಿಭಾಗಗಳೂ, ಅನುವಾದ ಅಕಾಡೆಮಿಗಳೂ ರೂಪುಗೊಂಡಿವೆ. ಕನ್ನಡದ ಪ್ರಮುಖ ಕೃತಿಗಳನ್ನು ಇತರೆ ಭಾಷೆಗಳಿಗೆ, ಇತರೆ ಭಾಷೆಯ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸುವ (ಅಥವಾ ಭಾಷಾಂತರಿಸುವ) ಕೆಲಸ ಭರದಿಂದ ನಡೆದಿದೆ. ಇತ್ತ, 'ಪ್ರಾಚೀನ ಕನ್ನಡ ಸಾಹಿತ್ಯ ಬಹುತೇಕ ಅನುವಾದ ಇಲ್ಲವೇ ಭಾಷಾಂತರ' ಎಂದು ಕಳೆದ 50 ವರ್ಷಗಳಿಂದ ಕನ್ನಡ ಚಿಂತಕರು ಬಲವಾಗಿ ವಾದಿಸುತ್ತಾ ಬಂದಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ, ' ಪ್ರಾಚೀನ ಕನ್ನಡ ಸಾಹಿತ್ಯ ಅನುವಾದ ಅಥವಾ ರೂಪಾಂತರ ಅಲ್ಲವೇ ಅಲ್ಲ' ಎನ್ನುವ ವಾದವನ್ನು ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಮಾಧವ ಪೆರಾಜೆ ಅವರು ಇದೇ ಮೊದಲ ಬಾರಿಗೆ ಮಂಡಿಸಿದ್ದಾರೆ. ಈ ವಿಷಯವನ್ನು ನಿಮ್ಮ ಮುಂದೆ ಚರ್ಚೆಗಿಡುತ್ತಿದ್ದೇವೆ. ನಿಮ್ಮ ಪ್ರತಿಕ್ರಿಯೆಗಳನ್ನು scholarcolony@gmail.comಗೆ ಕಳಿಸಬಹುದು. ಅಥವಾ ನಮ್ಮ ಫೇಸ್‌ಬುಕ್‌ ಪುಟದಲ್ಲೂ (www.facebook.com/scholaradda) ಚರ್ಚಿಸಬಹುದು.

-ಸಂಪಾದಕ

***

ಪ್ರಾಚೀನ ಕನ್ನಡ ಸಾಹಿತ್ಯ ಅನುವಾದವೇ? 

* ಡಾ. ಮಾಧವ ಪೆರಾಜೆ.


ಈ ಲೇಖನವು ಪ್ರಾಚೀನ ಕನ್ನಡ ಸಾತ್ಯವು ಅನುವಾದ ಇಲ್ಲವೇ ರೂಪಾಂತರ ಅಥವಾ ತುಂಡುಭಾಷಾಂತರ ಎನ್ನುವ ಈಗ ಪ್ರಚಲಿತರುವ ದ್ಟಕೋನವನ್ನು ಆಮೂಲಾಗ್ರವಾಗಿ ಪರಾಮರ್ಶಿಸುವ ಉದ್ದೇಶವನ್ನೊಳಗೊಂಡಿದೆ. ಮೊದಲಿಗೆ ಅಂತಹ ಚರ್ಚೆಯೊಂದರ ಮುಖ್ಯ ಪ್ರತಿಪಾದನೆಗಳನ್ನು ಇಲ್ಲಿ ಸಂಗ್ರಸಲಾಗಿದೆ.
      ಪ್ರಾಚೀನ ಕನ್ನಡ ಸಾತ್ಯವು ಅನುವಾದದಿಂದ ಆರಂಭಗೊಳ್ಳುತ್ತದೆ ಎನ್ನುವುದನ್ನು ಮೊದಲಿಗೆ ಪ್ರತಿಪಾದಿಸಿದ ದೇಸಿ ದ್ವಾಂಸರೆಂದರೆ, ರಂ.ಶ್ರೀ.ಮುಗಳಿ ಅವರೇ ಆಗಿದ್ದಾರೆ. ಕನ್ನಡ ಸಾತ್ಯದಲ್ಲಿ ಸರಸ್ವತಿಯ ದರ್ಶನ(1956) ಪುಸ್ತಕದಲ್ಲಿ ಅವರು ಹೀಗೆ ಹೇಳಿದ್ದಾರೆ-
 ಕನ್ನಡ ಸಾತ್ಯದಲ್ಲಿ ಮೊದಲನೆಯ ಉಪಲಬ್ಧಗ್ರಂಥವಾದ ’ಕರಾಜಮಾರ್ಗ’ದಿಂದಲೇ ಪ್ರಾರಂಭವನ್ನು ಮಾಡಬೇಕಾಗಿದೆ. ಅದಕ್ಕೆ ಮೊದಲು ಇದ್ದಿರಬಹುದಾದ ಪುಲವಾದ ಗದ್ಯಪದ್ಯವಾಙ್ಮಯವು ಸರಸ್ವತಿಯ ಷಯದಲ್ಲಿಯೂ ಸರಸ್ವತೀನದಿಯಂತೆ ಗುಪ್ತಗಾಮಿನಿಯಾಗಿದೆ. ಪ್ರಾಚೀನ ಕನ್ನಡ ಶಿಲಾಶಾಸನಗಳೇನೋ 5ನೆಯ ಶತಕದಿಂದ 9ನೆಯ ಶತಕದವರೆಗೆ ದೊರೆತಿವೆ. ಆದರೆ ಪ್ರಸಕ್ತ ಷಯಕ್ಕೆ ಉಪಯುಕ್ತ ಸಾಮಗ್ರಿ ಅವುಗಳಲ್ಲಿ ಬಹುಶಃ ಇಲ್ಲ. ’ಕರಾಜಮಾರ್ಗ’ವು ದಂಡಿಯ ’ಕಾವ್ಯಾದರ್ಶ’ದ ಅನುವಾದರೂಪ ಗ್ರಂಥ. ಮೂಲವನ್ನು ಅದು ಅನುಸರಿಸಿರುವಂತೆ  ಕಂಗೊಳಿಸುತ್ತದೆ...

 ಡಾ.ಕೀರ್ತಿನಾಥ ಕುರ್ತಕೋಟಿಯವರು ಅನುವಾದ ಮತ್ತು ಪುನರ್‌ಲೇಖನ ಎನ್ನುವ ಲೇಖನದಲ್ಲಿ ಹೀಗೆ ಹೇಳುತ್ತಾರೆ-
ಕನ್ನಡ ಕಗಳ ಲಕ್ಷ್ಯವೆಲ್ಲ ಸಂಸ್ಕೃತದ ಅಭಿಜಾತದ ಕಾವ್ಯದ ಮೇಲೆ ಕೇಂದ್ರೀಕತವಾಗಿತ್ತು. ಪ್ರಾಚೀನ ಕಾಲದಲ್ಲಿ ಕಾವ್ಯ ಕೇವಲ ರಸಭಾವಗಳ ಆಷ್ಕಾರವಾಗಿರಲಿಲ್ಲ, ಅದು ತಿಳುವಳಿಕೆಯ ಅಭಿವ್ಯಕ್ತಿಯೂ ಆಗಿತ್ತು. ಅಭಿಜಾತ ಯುಗದ ಜ್ಞಾನ ಪರಿಷ್ಕೃತವಾಗಿದ್ದ ಶಾಸ್ತ್ರಗ್ರಂಥಗಳಲ್ಲಿ ಅಷ್ಟೇ ಅಲ್ಲದೆ ಕಾವ್ಯಕತಿಗಳಲ್ಲಿ ಕೂಡ ದೊರೆಯುತ್ತದೆ.....
     ಪ್ರಾಚೀನ ಕನ್ನಡ ಸಾತ್ಯವನ್ನು ಅನುವಾದದ ಪ್ರಕಾರವೆಂದು ಪ್ರಾಚೀನ ಕನ್ನಡ ಸಾತ್ಯದಲ್ಲಿ ದ್ವಾಂಸರು ಹೇಗೆ ವ್ಯವಸ್ಥಿತವಾಗಿ ಸಾರಿದ್ದಾರೆ ಎನ್ನುವುದನ್ನು ಈಗಾಗಲೇ ಚರ್ಚಿಸಲಾಯಿತು. ಹಾಗೆ ನೋಡಿದರೆ  ಪ್ರಾಚೀನ ಕನ್ನಡ ಸಾತ್ಯ ಅನುವಾದ, ಭಾಷಾಂತರ ಎನ್ನುವವರು ಅನುವಾದವೆಂದರೆ ಏನು, ಅನುವಾದ ಎನ್ನುವ ಪರಿಕಲ್ಪನೆಯ ಮೂಲ ಎಲ್ಲಿದೆ ಎನ್ನುವ  ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ರೋಗದ ಮೂಲವನ್ನು ಪರೀಕ್ಷೆ ಮಾಡದೆ ಸಮಸ್ಯೆಯನ್ನು ಪರಿಹರಿಸಿದರೆ ಏನಾಗುವುದೋ ಇಲ್ಲಿಯೂ ಹಾಗೆಯೇ ಆಗಿದೆ. ಮೂಲತಃ ಅನುವಾದ, ಭಾಷಾಂತರ ಎನ್ನುವ ಪರಿಕಲ್ಪನೆಯೇ ಬೈಬಲ್ ಪ್ರಣೀತವಾದುದು.  ಇದಕ್ಕೆ ಆಧಾರಗಳು ಬೈಬಲ್‌ನಲ್ಲಿವೆ. ಹಳೆ ಒಡಂಬಡಿಕೆಯಲ್ಲಿ(Old Testament) ಬರುವ 11ನೆಯ ಅಧ್ಯಾಯವನ್ನು ಗಮನಿಸಿ:
ಲೋಕದವರೆಲ್ಲರಿಗೂ ಒಂದೇ ಭಾಷೆ ಇತ್ತು. ಭಾಷಾಭೇದವೇನೊ ಇರಲಿಲ್ಲ. ಅವರು ಪೂರ್ವದಿಕ್ಕಿಗೆ ಮುಂದೆ ಮುಂದೆ ಪ್ರಯಾಣ ಮಾಡುತ್ತಿರುವಾಗ ಶಿನಾರ್ ದೇಶದಲ್ಲಿ ಬೈಲುಸೀಮೆ ಸಿಕ್ಕಲು ಅಲ್ಲೇ ವಾಸಮಾಡಿಕೊಂಡು ತಮ್ಮ ತಮ್ಮೊಳಗೆ ಬನ್ನಿ, ಒಳ್ಳೊಳ್ಳೇ ಸುಟ್ಟ ಇಟ್ಟಿಗೆಗಳನ್ನು ಮಾಡೋಣ; ಒಂದು ಪಟ್ಟಣವನ್ನೂ ಆಕಾಶವನ್ನು ಮುಟ್ಟುವ ಗೋಪುರವನ್ನೂ ಕಟ್ಟಿ ದೊಡ್ಡ ಹೆಸರನ್ನು ಪಡೆಯೋಣ; ಹೀಗೆ ಮಾಡಿದರೆ ಭೂಮಿಯ ಮೇಲೆಲ್ಲಾ ಚದುರುವುದಕ್ಕೆ ಆಸ್ಪದವಾಗುವುದಿಲ್ಲ ಅಂದುಕೊಂಡರು. ಕಟ್ಟುವಾಗ ಕಲ್ಲಿಗೆ ಬದಲಾಗಿ ಇಟ್ಟಿಗೆಯನ್ನೂ ಸುಣ್ಣಕ್ಕೆ ಬದಲಾಗಿ ಕಲ್ಲುಗಳನ್ನೂ ಉಪಯೋಗಿಸಿದರು. 
ನರಪುತ್ರರು ಕಟ್ಟುತ್ತಿದ್ದ ಆ ಪಟ್ಟಣವನ್ನೂ ಗೋಪುರವನ್ನೂ ನೋಡುವದಕ್ಕೆ ಯೆಹೋವನು ಇಳಿದು ಬಂದನು. ನೋಡಿದ ಮೇಲೆ ಆತನು ಇವರು ಒಂದೇ ಜನಾಂಗ; ಇವರೆಲ್ಲರಿಗೂ ಒಂದೇ 
ಭಾಷೆ. ಪ್ರಾರಂಭದಲ್ಲೇ ಇಷ್ಟು ದೊಡ್ಡ ಕೆಲಸ ಮಾಡುವವರಾಗಿರಲು ಮುಂದೆ ಏನು ಆಲೋಚಿಸಿದರೂ ಇವರಿಗೆ ಅಸಾಧುವಲ್ಲ. ನಾವು ಇಳಿದು ಇವರಲ್ಲಿ ಒಬ್ಬರ ಮಾತು ಒಬ್ಬರಿಗೆ ತಿಳಿಯದಂತೆ ಇವರ ಭಾಷೆಯನ್ನು ತಾರುಮಾರುಮಾಡೋಣ ಬನ್ನಿ ಅಂದನು. ಹಾಗೆಯೇ ಮಾಡಿ ಯೆಹೋವನು ಅವರನ್ನು ಅಲ್ಲಿಂದ ಭೂಲೋಕದಲ್ಲೆಲ್ಲಾ ಚದರಿಸಿದನು. ಅವರು ಆ ಪಟ್ಟಣ ಕಟ್ಟುವದನ್ನು ನಿಲ್ಲಿಸಿಬಿಟ್ಟರು. ಸಮಸ್ತಲೋಕದ ಭಾಷೆಯನ್ನು ಯೆಹೋವನು ಅಲ್ಲಿ ತಾರುಮಾರುಮಾಡಿ ಅವರನ್ನು ಅಲ್ಲಿಂದ ಭೂಲೋಕದಲ್ಲೆಲ್ಲಾ ಚದರಿಸಿದ್ದರಿಂದ ಆ ಪಟ್ಟಣಕ್ಕೆ ಬಾಬೆಲ್ ಎಂಬ ಹೆಸರಾಯಿತು. (ನೋಡಿ, ಸತ್ಯ ವೇದವು ಪು.10-11)
ಈ ಚಿಂತನೆ ಮತ್ತೆ ಹೊಸ ಒಡಂಬಡಿಕೆಯಲ್ಲಿ (New Testament) ಮುಂದುವರಿಯುತ್ತವೆ. ಇದರಲ್ಲಿ ಪೌಲನು ಕೊರಿಯಂಥರಿಗೆ ಬರೆದ ಮೊದಲನೆಯ ಪತ್ರದ 14ನೆಯ ಭಾಗ ಹೀಗಿದೆ;
  ......ಪರವಶ ಭಾಷೆಯಲ್ಲಿ ಮಾತನಾಡುವವನು ತಾನಾಡುವ ಮಾತಿಗೆ ಅರ್ಥವನ್ನು ಹೇಳುವ ಸಾಮರ್ಥ್ಯಕ್ಕಾಗಿ ದೇವರನ್ನು ಪ್ರಾರ್ಥಿಸಲಿ ಏಕೆಂದರೆ ನಾನು ಪರವಶಾಭಾಷೆಯಲ್ಲಿ ಪ್ರಾರ್ಥಿಸಿದರೆ ನನ್ನ ಆತ್ಮವೇನೋ ಪ್ರಾರ್ಥಿಸಿದಂತೆ ಆಗುತ್ತದೆ. ಆದರೆ ಮನಸ್ಸು ಅದನ್ನು ಗ್ರಸುವುದಿಲ್ಲ. ಹಾಗಾದರೆ ಈಗ ನಾನೇನು ಮಾಡಬೇಕು? ಆತ್ಮದಿಂದಲೂ ಪ್ರಾರ್ಥಿಸಬೇಕು. ಸಭೆಯಲ್ಲಿ ನೀನು ಆತ್ಮದಿಂದ ಮಾತ್ರ ದೇವರ ಸ್ತುತಿ ಮಾಡಿದರೆ ನಿನ್ನ ಹಾಗೆ ಪರವಶನಲ್ಲದವನು ನಿನ್ನ ಕತಜ್ಞತಾ ಸ್ತುತಿಗೆ ’ಆಮೆನ್’ ಎಂದು ಹೇಗೆ ತಾನೇ ಹೇಳಬಲ್ಲನು? ನೀನು ಹೇಳುವುದೇ ಅವನಿಗೆ ತಿಳಿಯುವುದಿಲ್ಲವಲ್ಲ? ನೀನು ಮಾಡುವ ಕತಜ್ಞತಾಸ್ತುತಿ ಎಷ್ಟು ಚೆನ್ನಾಗಿದ್ದರೂ ಅವನಮಟ್ಟಿಗೆ ಅದು ನಿಷ್ಪ್ರಯೋಜಕವೇ. ನಾನಾದರೋ ದೇವರ ದಯೆುಂದ ನಿಮಗಿಂತಲೂ ುಗಿಲಾಗಿ ಪರವಶಾಭಾಷೆಗಳನ್ನು ಆಡಬಲ್ಲೆ. ಆದರೂ ಸಭೆಯಲ್ಲಿ ಪರವಶನಾಗಿ ಹತ್ತು ಸಾರ ನುಡಿಗಳನ್ನಾಡುವ ಬದಲು ಮನಸ್ಸಾರೆ ಇದೇ ಮಾತುಗಳನ್ನಾಡಿ ಉಪದೇಶಿಸುವುದು ಉತ್ತಮವೆಂದು ನನಗೆ ತೋರುತ್ತದೆ.

ಸಹೋದರರೇ, ಬುದ್ಧಿಯ ಷಯದಲ್ಲಿ ಬಾಲಕರಾಗಬೇಡಿರಿ ದುಷ್ಟ ಷಯಗಳಲ್ಲಿ ಶಿಶುಗಳಂತೆ ಮುಗ್ಧರಾಗಿರಿ; ಬುದ್ಧಿಯ ಷಯದಲ್ಲಿ ಪ್ರಾಯಸ್ಥರಂತೆ ಪ್ರೌಢರಾಗಿರಿ. ಪತ್ರಗ್ರಂಥದಲ್ಲಿ ಇಂತಿದೆ;
ಅನ್ಯಭಾಷೆಯವರ ಮುಖಾಂತರ
ಅನ್ಯ ದೇಶೀಯರ ಬಾಯ ಮುಖಾಂತರ
ನಾನೆನ್ನ ಜನರೊಡನೆ ಮಾತಾಡಿದಾಗಲೂ 
ಎನ್ನ ಮಾತಿಗೆ ಕಿಗೊಡರವರು, ಎಂದರು ಪ್ರಭು
     ಪರವಶಭಾಷೆಗಳನ್ನು ಆಡುವುದರ ಸಾಕ್ಷ್ಯ ಶ್ವಾಸಿಗಳಿಗಲ್ಲಾ, ಅಶ್ವಾಸಿಗಳಿಗೆ. ದೇವರ ವಾಕ್ಯವನ್ನು ಪ್ರತಿಬೋಧಿಸುವುದರ ಮೂಲಕ ಸಾಕ್ಷ್ಯವು ಅಶ್ವಾಸಿಗಳಿಗಲ್ಲ, ಶ್ವಾಸಿಗಳಿಗೆ. ಒಂದು ಕಡೆ ಎಲ್ಲರೂ ಸಭೆ ಸೇರಿದಾಗ ಪ್ರತಿಯೊಬ್ಬನೂ ಪರವಶಭಾಷೆಗಳನ್ನು ಆಡಲು ಆರಂಭಿಸಿದರೆ ಅಲ್ಲಿಗೆ ಬರುವ ಅಪರಿಚಿತರು ಅಶ್ವಾಸಿಗಳು ನಿಮ್ಮನ್ನು ಹುಚ್ಚನೆಂದು ಕರೆಯಲಾರರೇ? ಬದಲಾಗಿ ಬರುವ ಅಪರಿಚಿತರ ಹಾಗೂ ಅಶ್ವಾಸಿಗಳ ಮುಂದೆ ಎಲ್ಲರೂ ದೇವರ ವಾಕ್ಯವನ್ನು ಪ್ರಬೋಧಿಸಿದರೆ ಅವರಲ್ಲಿ ಒಬ್ಬನಾದರೂ ತಾನು ಕೇಳಿದ ಮಾತಿನಿಂದ ತನ್ನನ್ನು ತಾನೇ ಪರೀಕ್ಷಿಸಿಕೊಳ್ಳುತ್ತಾನೆ. ಅವನ ಅಂತರಾಳದ ಚಾರಗಳು ಬಯಲಾಗುತ್ತವೆ. ಅವನು ಅಡ್ಡಬಿದ್ದು ದೇವರನ್ನು ಆರಾಧಿಸುತ್ತಾನೆ. ದೇವರು ನಿಜವಾಗಿಯೂ ನಿಮ್ಮ ಮಧ್ಯೆ ಇದ್ದಾನೆ ಎಂದು ಪ್ರಚುರಪಡಿಸುತ್ತಾನೆ. (ನೋಡಿ.ಶುಭ ಸಂದೇಶ ಹೊಸ ಒಡಂಬಡಿಕೆ, ಬೈಬಲ್ ಸೊಸೈಟಿ ಆಫ್ ಇಂಡಿಯಾ.)
ಹೀಗೆ ಹಳೆ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆಗಳಲ್ಲಿ ಸಾರಿರುವಂತೆ ದೇವ ಭಾಷೆ ಎನ್ನುವ ಒಂದು ಭಾಷೆ ಇದೆ. ಅದು ಗಾಡ್ (God) ಬೈಬಲ್ ಅನ್ನು ಹೇಳಿರುವ ಭಾಷೆಯಾಗಿದೆ. ಉಳಿದ ಎಲ್ಲಾ ಭಾಷೆಗಳು ಅದಕ್ಕಿಂತ ಕನಿಷ್ಠವಾದವು. ಹಾಗಾದುದರಿಂದ ಮೂಲ ಭಾಷೆ ಎಂದರೆ ಬೈಬಲ್‌ನ ಭಾಷೆ(ಹೀಬ್ರೂ) ಆಗಿವೆ. ಉಳಿದವು ಉದ್ದೇಶಿತ ಭಾಷೆಗಳಾಗಿವೆ.
ಬೈಬಲ್ಲಿನ ಈ ಚಿಂತನೆಯನ್ನು ಅನುಸರಿಸಿಯೇ ಪಾಶ್ಚಿಮಾತ್ಯರಲ್ಲಿ ಅನುವಾದಕ್ಕೆ ಸಂಬಂಧಿಸಿದ ಎಲ್ಲಾ ಚರ್ಚೆಗಳು ಬೆಳೆದಿರುವುದು. ಇಂತಹ ಎಲ್ಲಾ ಚಿಂತನೆಗಳನ್ನು ಇಲ್ಲಿ ಚರ್ಚಿಸಲು ಸಮಯಲ್ಲ. ಪ್ರಾತಿನಿಧಿಕವಾಗಿ ವಾಲ್ಟರ್ ಬೆಂಜಮೀನ್ ಎನ್ನುವ ಜರ್ಮನ್ ದ್ವಾಂಸನ ಚಿಂತನೆಗಳನ್ನು ಇಲ್ಲಿ ಶೇಷವಾಗಿ ಪ್ರಸ್ತಾಪಿಸಲಾಗಿದೆ. ಏಕೆಂದರೆ ಪಾಶ್ಚಾತ್ಯ ಚಿಂತನೆಗಳಲ್ಲಿ-ಅದರಲ್ಲಿಯೂ ಅನುವಾದಕ್ಕೆ ಸಂಬಂಧಿಸಿದಂತೆ- ಆತನ ಚಿಂತನೆಗಳು ಬಹಳ ಪ್ರಭಾವಶಾಲಿಯಾದವು. ಪಾಶ್ಚಿಮಾತ್ಯ ಚಿಂತನೆಗಳಲ್ಲೆಲ್ಲಾ ಆತನ ಚಿಂತನೆಯ ಪ್ರಭಾವಗಳಿವೆ. ಆತನ  ‘The task of the translation’ ಎನ್ನುವ ಪ್ರಬಂಧವು ಭಾಷಾಂತರಕ್ಕೆ ಸಂಬಂಧಿಸಿದಂತೆ ಪಾಶ್ಚಾತ್ಯರಲ್ಲಿ ಒಂದು ಪ್ರಮುಖ ಚಿಂತನೆಯಾಗಿದೆ. 1968ರಲ್ಲಿ ಇದು ಇಂಗ್ಲಿಷ್‌ಗೆ ಅನುವಾದವಾದಲ್ಲಿಂದ ಅದರ ಸುತ್ತ ಮತ್ತಷ್ಟು ವಾಗ್ವಾದಗಳು ಆರಂಭವಾಗಿವೆ.
     ಬೆಂಜಮೀನನ ಚಿಂತನೆಗಳನ್ನು ಇನ್ನೂ ಸಂಕ್ಷಿಪ್ತಗೊಳಿಸಿ ಹೇಳುವುದಾದರೆ ಅದು ಬೈಬಲ ಪ್ರಣೇತ ಚಿಂತನೆಗಳನ್ನು, ಬೈಬಲಿನ ಗಾಡ್‌ನ ಚಿಂತನೆಗಳನ್ನು (Bibilical God) ಹೇಳುತ್ತದೆ. ಮೂಲ ಭಾಷೆಯು ಅಥವಾ ಶುದ್ಧ ಭಾಷೆಯು ಬೈಬಲ್ ಪ್ರಣೀತವಾದುದಾಗಿ ಅದು ಬೈಬಲಿನಲ್ಲಿ ಹೇಳಿರುವ ಗಾಡ್‌ಗೆ ಸಂಬಂಧಿಸಿದುದಾಗಿದೆಯಲ್ಲದೇ ಅನುವಾದವೆನ್ನುವುದು ಆ ಬೈಬಲಿನ ಸಮೀಪಕ್ಕೆ ಹೋಗುವುದೇ ಆಗಿರುತ್ತದೆ ಎಂದು ಅದು ನಂಬುತ್ತದೆ. ಅಂದರೆ ಅನುವಾದವು ಎಷ್ಟೆಷ್ಟು ಸಮರ್ಪಕವಾಗಿರುತ್ತದೋ ಅಷ್ಟಷ್ಟು ಬೈಬಲಿಗೆ ಸುೀಪವಾಗುತ್ತದೆ. ಅಷ್ಟು ಮಾತ್ರವಲ್ಲ ಅಷ್ಟರ ಮಟ್ಟಿಗೆ ಅದು ಕ್ರೈಸ್ತ ಥಿಯಾಲಜಿಗೂ ಸುಮೀಪವಾಗುತ್ತದೆ.
ಒಟ್ಟಿನಲ್ಲಿ ಬೈಬಲ್‌ಗೂ ಬೆಂಜಮೀನನ ಪ್ರತಿಪಾದನೆಗಳಿಗೂ ಸಂಬಂಧದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಹಾಗೆಯೇ ಇದರ ಜತೆಗೆ ಅನುವಾದಕ್ಕೆ ಸಂಬಂಧಿಸಿದ ಪಶ್ಚಿಮದ ಚಿಂತನೆಗಳು ನೇರವಾಗಿ ಕ್ರಿಶ್ಚಿನ್‌ಥಿಯಾಲಜಿಗೆ ಸಂಬಂಧಿಸಿದ ಷಯಗಳು ಎಂದಾುತು. ಬೇರೆ ಮಾತಿನಲ್ಲಿ ಹೇಳುವುದಾದರೆ ಅನುವಾದ ಎನ್ನುವ ವಾಗ್ವಾದವೇ ಬೈಬಲ್, ’ಗಾಡ್’ ಮೊದಲಾದುವುಗಳಿಗೆ ಸಂಬಂಧಿಸಿದುವುಗಳಾಗಿವೆ. ಆ ಕಾರಣಕ್ಕಾಗಿಯೇ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಅನುವಾದಗಳಾಗಿರುವುದು ಬೈಬಲ್ ಎನ್ನುವ ಗ್ರಂಥವೇ ಆಗಿದೆ!
ಕ್ರಿಶ್ಚನ್‌ಥಿಯಾಲಜಿಗೆ ಸಂಬಂಧಿಸಿದ ಭಾಷಾಂತರದ ವಾಗ್ವಾದಗಳು ನಮ್ಮಲ್ಲಿ ಮೂಲಭೂತವಾದ ಸಿದ್ಧಾಂತವನ್ನು ರೂಪಿಸುವುದರ ಬದಲು ಗೊಂದಲಗಳನ್ನೇ ಸ್ಟಸಿವೆ. ಮುಖ್ಯವಾಗಿ ಕನ್ನಡದಂತಹ ಭಾಷೆಗಳಲ್ಲಿ translationಗೆ ಪರ್ಯಾಯವಾದ ಒಂದು ಪದವೇ ಸಿಗುವುದಿಲ್ಲ. ಉದಾಹರಣೆಗೆ ಈಗಿರುವ ’ಅನುವಾದ’ ಎನ್ನುವ ಪದವನ್ನೇ ಗಮನಿಸೋಣ. ಈ ಪದದ ಅತ್ಯಂತ ಪ್ರಾಚೀನ ರೂಪ ಪಂಪನಲ್ಲಿ ಸಿಗುತ್ತದೆ. ಆದಿಪುರಾಣಂ ಕಾವ್ಯದಲ್ಲಿ ಅದರ ಪ್ರಯೋಗ ಹೀಗಿದೆ;
      ಮುನಿಜನದೋದಿಸಿದೋಜೆಯೊ
ಳನುವದಿಪುದಿದೊಂದೆ ಕೊಂಡಕುಂದಾನ್ವಯನಂ.....
       ಇದು 'ಅನುವಾದ’ಪದದ ಪ್ರಾಚೀನ ರೂಪ. ಈಗ ಅನುವಾದ ಎಂದು ನಾವು ಪ್ರಯೋಗಿಸುವ ಪದದ ಪ್ರಾಚೀನ ಪ್ರಯೋಗ ಅನುವದ ಎಂದು ಇಲ್ಲಿದೆ. ಅನುವದದ  ಅರ್ಥ ಉಚ್ಚರಿಸುವುದು ಎಂದಾಗುತ್ತದೆ. ಗಿಣಿ ಹೇಳಿದ ಹಾಗೆ ಎಂಬರ್ಥ. ಹತ್ತನೇ ಶತಮಾನದಲ್ಲಿ ಅನುವದ ಎನ್ನುವ ಪದ ಕಂಡುಬಂದರೆ ಹನ್ನೊಂದನೇ ಶತಮಾನದಲ್ಲಿ (ಅಂದರೆ ಕಾವ್ಯಾವಲೋಕನದಲ್ಲಿ) ’ಅನುವಾದ’ ಎನ್ನುವ ಪದ ಕಂಡುಬರುತ್ತದೆ. ಉದಾ: ಅನುಕರಣದೊಳೊಂದಿದ ಮಾತಿನಲ್ಲಿ ನಿರ್ದೋಶಮಾಗೆ ಸಲ್ಗುಂ ಪೇಳ್ದಿದಿನಿತುಂ ಸ್ವರೂಪ ಕಥನದೊಳನುವಾದಂ ಭಿನ್ನಮಪ್ಪುದರಿಂದಂ... ಎಂದು ಪ್ರಯೋಗದೆ. ಅಷ್ಟಾದರೂ ಅನುವದ, ಅನುವಾದ ಎನ್ನುವ ಪದಗಳ ನಡುವೆ 10ನೇ ಶತಮಾನದಿಂದ 11ನೇ ಶತಮಾನದ ವರೆಗೆ ವ್ಯತ್ಯಾಸವೇ ಕಂಡುಬರುವುದಿಲ್ಲ. ಇನ್ನು ಭಾಷಾಂತರ ಎನ್ನುವ ಪದ ಕನ್ನಡದಲ್ಲಿ ಬಳಕೆಗೊಂಡಿರುವುದೇ 19ನೇ ಶತಮಾನದಲ್ಲಿ.
     ಆದುದರಿಂದ ಭಾಷಾಂತರ, ಅನುವಾದ ಎನ್ನುವ ಪದ ನನಗೆ ಗೊತ್ತಿರುವ ಹಾಗೆ ಈಗಿನ ಅರ್ಥದಲ್ಲಿ ಪ್ರಾಚೀನ ಕನ್ನಡ ಸಾತ್ಯದಲ್ಲಿ ಕಂಡು ಬರುವುದಿಲ್ಲ. ತರ್ಜುಮೆ ಇತ್ಯಾದಿ ಪದಗಳು ಕನ್ನಡ ಪದಗಳಲ್ಲ. ಹಾಗೆಯೇ ಈ ಪ್ರಕ್ರಿಯೆಯನ್ನು ಪ್ರಾಚೀನ ಕನ್ನಡ ಕವಿಗಳು ನಿರ್ವಚಿಸಿದ ರೀತಿಯೂ ಈಗ ಪಾಶ್ಚಾತ್ಯರು ಹೇಳುವ ಹಾಗಿಲ್ಲ. ಉದಾಹರಣೆಗೆ ಮಹಾಭಾರತವನ್ನು ಅರಿಕೇಸರಿಯ ಕಥೆಯನ್ನಾಗಿ ಪರಿವರ್ತಿಸಿದ ಪಂಪ ತನ್ನ ಕಾವ್ಯವನ್ನು ಅನುವಾದ ಎನ್ನುವುದಿಲ್ಲ; ಪಂಪಭಾರತದ ಈ ಪದ್ಯ ಪ್ರಸಿದ್ಧವಾದುದೇ-
  ವ್ಯಾಸಮುನೀಂದ್ರ ರುಂದ್ರವಚನಾಮತ ವಾರ್ಧಿಯನೀಸುವೆಂ ಕವಿ|
ವ್ಯಾಸನನೆಂಬ ಗರ್ವಮೆನಗಿಲ್ಲ...
    ಈ ಪದ್ಯದಲ್ಲಿ ‘source language’ ಹಾಗೆಯೇ ‘target language’ ಎನ್ನುವ ಪರಿಕಲ್ಪನೆಯೇ ಇಲ್ಲ. ಈಗಿರುವ ಪಾಶ್ಚಾತ್ಯ ಸಿದ್ಧಾಂತಗಳಿಂದ ’ಈಸುವೆನ್’ ಎನ್ನುವ ಪರಿಕಲ್ಪನೆಯನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕೆಂಬುದು ನಮಗೆ ಸಮಸ್ಯೆಯಾಗುತ್ತದೆ. ಕನ್ನಡದ ಸಂದರ್ಭದಲ್ಲಿ ಅದಕ್ಕೆ ಮೀರು, ವಿರಹಿಸು, ಸಾಧಿಸು ಎನ್ನುವ ಅರ್ಥ ಬರುತ್ತದೆ. ಬೆಂಜಮೀನ್ ಹೇಳುವ ಹಾಗೆ ‘translater’  ಎನ್ನುವ ವ್ಯಕ್ತಿಯು ಮರೆಮಾಚಿದ ಹಾಗೆ ಇಲ್ಲಿ ಕಂಡುಬರುವುದಿಲ್ಲ.
 
ರಿಲಿಜಿಯನ್ ರೂಪುಗೊಳ್ಳಬೇಕಾದರೆ ಸಂಸ್ಕೃತಿಯುಳ್ಳ ಜನಾಂಗ, ಶ್ರೇಷ್ಟವಾದ ಭಾಷೆ, ಪತ್ರ ಗ್ರಂಥ,  ಪ್ರವಾದಿ ಈ ಮೂಲ ಅಗತ್ಯಗಳು ಇರಲೇಬೇಕು ಅದಿಲ್ಲದಿದ್ದರೆ ರಿಲಿಜಿಯನ್ ರೂಪುಗೊಳ್ಳುವುದೇ ಇಲ್ಲ. ಈ ಮೂಲ ಅಗತ್ಯಗಳಲ್ಲಿ ಒಂದಾದ ಶ್ರೇಷ್ಠ ಭಾಷೆಯ ಕುರಿತು ಇದೀಗ ನಾವು ಚರ್ಚಿಸುತ್ತಿದ್ದೇವೆ. ಅಂದರೆ ಶ್ರೇಷ್ಠ ಭಾಷೆಯಲ್ಲಿ ಗಾಡ್ ಪತ್ರ ಗ್ರಂಥವನ್ನು ಅವನ ಅನುಯಾುಗಳಿಗೆ ಅವತ್ತೇರ್ಣಗೊಳಿಸುತ್ತಾನೆ. ಉಳಿದ ಭಾಷೆಗಳು ಮತ್ತು ಜನಗಳು ಕನಿಷ್ಟರಾದುದರಿಂದಲೇ ಗಾಡ್ ಉದ್ದೇಶಪೂರ್ವಕವಾಗಿ ಈ ಆಯ್ಕೆಯನ್ನು ಮಾಡುತ್ತಾನೆ. ಕನಿಷ್ಟರಾದವರು ಕೀಳು ಭಾಷೆಯಲ್ಲಿ ಗಾಡ್‌ನ ಪತ್ರವಾಣಿಯನ್ನು ಬೇಕಾದರೆ ಅನುವಾದ ಮಾಡಿಕೊಳ್ಳಬಹುದು ಎನ್ನುವುದೇ ಇದರ ಅರ್ಥ. ಆದರೆ ಶ್ರೇಷ್ಠ ಭಾಷೆಯಲ್ಲಿ ಇರುವುದು  ಯಾವಾಗಲೂ ಕನಿಷ್ಟ ಭಾಷೆಗೆ ಗಾಡ್‌ನ ಪತ್ರವಾಣಿಯಂತೆ ಹರಿದು ಬರುವುದೇ ಇಲ್ಲ. ಭಾಷಾಂತರಕ್ಕೆ ಸಂಬಂಧಿಸಿದ ಚರ್ಚೆಗಳು ಆರಂಭವಾಗುವುದೇ ಈ ಮೂಲ ನೆಲೆಗಟ್ಟಿನಲ್ಲಿ. ಸೋರ್ಸ್ ಲಾಂಗ್ವೇಜ್ ಮತ್ತು ಟಾರ್ಗೆಟ್ ಲಾಂಗ್ವೇಜ್ ಎನ್ನುವ ಪರಿಕಲ್ಪನೆ ರೂಪುಗೊಳ್ಳುವುದೇ ಈ ಹಿನ್ನೆಲೆಯಲ್ಲಿ.

ಈಗ ಭಾಷಾಂತರಕ್ಕೆ ಸಂಬಂಧಿಸಿದ ಮುಖ್ಯ ಪರಿಕಲ್ಪನೆಗಳಾದ ಅಡಪ್ಟೇಶನ್ ಮತ್ತು ಅಪ್ರಾಪ್ರಿಯೇಶನ್ ಎಂಬವು ನೇರವಾಗಿ ಭಾಷಾಂತರಕ್ಕೆ ಸಂಬಂಧಿಸಿದ ಪರಿಕಲ್ಪನೆಗಳು ಅಲ್ಲವೇ ಅಲ್ಲ. ಅವು ಕ್ರಿಸ್ಚಿಯಾನಿಟಿ ರಿಲಿಜಿಯನ್ನಾಗಿ ರೂಪುಗೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದವು. ಹಾಗೆಯೇ ಓಲ್ಡ್ ತೆಸ್ಟಾಮೆಂಟಾ ಮತ್ತು ನ್ಯೂ ಟೆಸ್ಟಾಮೆಂಟಾಗಳೂ ಕ್ರಿಶ್ಚಿಯಾನಿಟಿಗಿಂತ ಪೂರ‌್ವದವು. ಕ್ರಿಶ್ಚಿಯಾನಿಟಿಯು ರಿಲಿಜಿಯನ್ ಆಗುವ ಹಂತದಲ್ಲಿ ಅವುಗಳನ್ನು ತನ್ನೊಳಗೆ ಸೇರಿಸಿಕೊಂಡಿತು. ಇಲ್ಲಿಂದಲೇ ನಮ್ಮ ಭಾಷಾಂತರ ಸಿದ್ಧಾಂತಿಗಳು ಹಗಲೆಲ್ಲ ಗುಣುಗುಣಿಸುವ ಮಂತ್ರಗಳಾದ ಅಡಪ್ಟೇಶನ್ ಮತ್ತು ಅಪ್ರಾಪ್ರಿಯೇಷನ್‌ಗಳು ರೂಪುಗೊಂಡಿರುವುದು. (ವಿವರಗಳಿಗೆ ನೋಡಿ: ಚಿಂತನ ಬಯಲು ಸಂ1, ಸಂ1 ಮತ್ತು ಸಂ1, ಸಂ3)
                               
(ಲೇಖಕರು: ಪ್ರಾಧ್ಯಾಪಕರು, ದ್ರಾವಿಡ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ-ಹಂಪಿ )  

5 comments:

  1. nice article every one should read it specially those who are working on linguistic research they must take this arguments very seriously thank you ಡಾ. ಮಾಧವ ಪೆರಾಜೆ for a good peace of reading

    ReplyDelete
  2. ನಮಸ್ತೆ ಸರ್, ಇದು ತುಂಬಾ ಮುಖ್ಯವಾದ ಮತ್ತು ಅತ್ಯವಶ್ಯಕವಾಗಿ ಇಂದು ಚರ್ಚಿತವಾಗಲೇಬೇಕಾದ ವಿಷಯವನ್ನು ಹೇಳಿದ್ದೀರಿ. ಎಲ್ಲಾ ಭಾಷಾಂತರಕಾರರು ಇದನ್ನು ಗಮನಿಸಿ ಚರ್ಚಿಸಲೇಬೇಕು. ಅನುವಾದ ಧರ್ಮಕ್ಕೆ ಸಂಬಂಧಿಸಿದ್ದು ಅನ್ನೋ ರೀತಿಯಲ್ಲಿ ನೀವು ಹೇಳ್ತಾ ಇದ್ದೀರಿ. ಆದರೆ ಧರ್ಮಕ್ಕಿಂತ ಅದರ ಸಂಬಂಧ ಇರೋದು ಭಾಷೆಯ ಜೊತೆಗೆ. ಭಾಷೆಯ ಬಗೆಗೆ ಧರ್ಮ ಗ್ರಂಥದಲ್ಲಿ ನೀವು ನೀಡಿರುವ ಈ ಕಲ್ಪನೆಗಳು ಅವು ಕಲ್ಪನೆಗಳಷ್ಟೆ ಆಗಿರಬಹುದು. ಭಾಷೆಯ ಬಗೆಗೆ ಅವುಗಳ ವೈವಿಧ್ಯತೆ ಮತ್ತು ಉಗಮದ ಬಗ್ಗೆ ಬೇರೆಯೇ ವೈಜಾನಿಕ ಕಾರಣಗಳು ಇವೆ ಅಲ್ವಾ? ಹಾಗೆಯೇ ಭಾಷಾಂತರದ ಪರಿಕಲ್ಪನೆಗಳು ಈ ಸಂಧರ್ಭದಲ್ಲಿ ಬೇರೆಬೇರೆ ಅರ್ಥಗಳನ್ನು ಪಡೆದಿರಬಹುದು. -ಸುದೀಪ್.ಬಿ.ಎಸ್

    ReplyDelete
  3. ನಾವು ಚರ್ಚೆಗೆ ಇಟ್ಟಿರುವ ವಿಷಯದ ಮಹತ್ವವನ್ನು ನೀವು ಅರಿತಿದ್ದಕ್ಕೆ ಧನ್ಯವಾದ ಸುದೀಪ್‌. ಆದರೆ, ಬಹುಷಃ ನೀವು ಲೇಖನವನ್ನು ಮತ್ತೊಮ್ಮೆ ಓದಬೇಕು. ಯಾಕೆಂದರೆ, 'ಅನುವಾದ' ಧರ್ಮಕ್ಕೆ ಸಂಬಂಧಿಸಿದ್ದು ಎಂದರೆ, transaltion ಅಥವಾ ಅನುವಾದ ಎನ್ನುವ ಪರಿಕಲ್ಪನೆ ಹುಟ್ಟಿದ್ದು ಧಾರ್ಮಿಕ ಮೂಲದಿಂದ ಅಂದರೆ ಕ್ರಿಶ್ಚಿಯಾನಿಟಿಯಿಂದ ಎಂದರ್ಥ. ಇನ್ನೂ ಸರಳವಾಗಿ ಹೇಳುವುದಾದರೆ, 'ಅನುವಾದ' ಎನ್ನುವ ಚಿಂತನೆಯೇ ಕ್ರಿಶ್ಚಿಯಾನಿಟಿಯಿಂದ ಬಂದದ್ದು ಹಾಗಾಗಿ ಅದು ಪಾಶ್ಚಾತ್ಯ ಮೂಲದ್ದು. ಹೀಗಿರುವಾಗ, ಕನ್ನಡದಲ್ಲಿ ಪ್ರಾಚೀನ ಕಾಲದಲ್ಲೇ 'ಅನುವಾದ' ಎಂಬ ಚಿಂತನೆ ಇತ್ತು. ನಮ್ಮ ಪ್ರಾಚೀನ ಕವಿಗಳು ಸೃಷ್ಟಿಸಿರುವ ಸಾಹಿತ್ಯ ಬಹುತೇಕ ಅನುವಾದ ಇಲ್ಲವೇ ರೂಪಾಂತರ ಎನ್ನುವ ಕನ್ನಡ ಚಿಂತಕರ ವಾದ ಎಷ್ಟು ಸರಿ? ಎನ್ನುವುದು ಮಾಧವ ಪೆರಾಜೆ ಅವರ ಪ್ರಶ್ನೆ. ಇದಕ್ಕೆ ಕನ್ನಡದ 'ಅನುವಾದ' ಚಿಂತಕರೇ ಉತ್ತರಿಸಬೇಕು.

    ಇನ್ನು ನಿಮ್ಮ 'ಧರ್ಮಕ್ಕಿಂತ ಅದರ ಸಂಬಂಧ ಇರೋದು ಭಾಷೆಯ ಜೊತೆಗೆ' ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ: ಧರ್ಮವನ್ನು 'ಗಾಡ್‌' ಉಪದೇಶಿಸಿರುವುದು ಭಾಷೆಯಲ್ಲೇ ಅದೂ ಅವನದೇ (ದೈವ ಭಾಷೆ) ಭಾಷೆಯಲ್ಲಿ. ದೇವರ ಭಾಷೆಯಿಂದ ಇತರ ಭಾಷೆಗಳಿಗೆ 'ಗಾಡ್‌' ವಾಣಿಯನ್ನು ಪರಿವರ್ತಿಸಬೇಕೇ ಬೇಡವೇ ಎಂಬ ದೀರ್ಘ ಚರ್ಚೆಯಲ್ಲಿ 'ಅನುವಾದ' ಎಂಬ ಕಲ್ಪನೆ ಹುಟ್ಟಿದೆ. ಅದೇ ಮುಂದೆ 'ಅನುವಾದ ಅಧ್ಯಯನ'ವಾಗಿ ಪ್ರತ್ಯೇಕ ಜ್ಞಾನಶಿಸ್ತಾಗೆ ಜಗತ್ತಿನೆಲ್ಲೆಡೆ ಹರಡಿಕೊಂಡಿದೆ.

    ReplyDelete
  4. nice forum for discussion., thanq scholar india, ajakkala girisha

    ReplyDelete