ಚರ್ಚೆಗೆ ಆಹ್ವಾನ
ಕನ್ನಡದಲ್ಲಿ 'ಅನುವಾದ' (translation) ಸಾಹಿತ್ಯ ಬೆಳೆಯುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ 'ಅನುವಾದ ಅಧ್ಯಯನ' (Translation studies) ವಿಭಾಗಗಳೂ, ಅನುವಾದ ಅಕಾಡೆಮಿಗಳೂ ರೂಪುಗೊಂಡಿವೆ. ಕನ್ನಡದ ಪ್ರಮುಖ ಕೃತಿಗಳನ್ನು ಇತರೆ ಭಾಷೆಗಳಿಗೆ, ಇತರೆ ಭಾಷೆಯ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸುವ (ಅಥವಾ ಭಾಷಾಂತರಿಸುವ) ಕೆಲಸ ಭರದಿಂದ ನಡೆದಿದೆ. ಇತ್ತ, 'ಪ್ರಾಚೀನ ಕನ್ನಡ ಸಾಹಿತ್ಯ ಬಹುತೇಕ ಅನುವಾದ ಇಲ್ಲವೇ ಭಾಷಾಂತರ' ಎಂದು ಕಳೆದ 50 ವರ್ಷಗಳಿಂದ ಕನ್ನಡ ಚಿಂತಕರು ಬಲವಾಗಿ ವಾದಿಸುತ್ತಾ ಬಂದಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ, ' ಪ್ರಾಚೀನ ಕನ್ನಡ ಸಾಹಿತ್ಯ ಅನುವಾದ ಅಥವಾ ರೂಪಾಂತರ ಅಲ್ಲವೇ ಅಲ್ಲ' ಎನ್ನುವ ವಾದವನ್ನು ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಮಾಧವ ಪೆರಾಜೆ ಅವರು ಇದೇ ಮೊದಲ ಬಾರಿಗೆ ಮಂಡಿಸಿದ್ದಾರೆ. ಈ ವಿಷಯವನ್ನು ನಿಮ್ಮ ಮುಂದೆ ಚರ್ಚೆಗಿಡುತ್ತಿದ್ದೇವೆ. ನಿಮ್ಮ ಪ್ರತಿಕ್ರಿಯೆಗಳನ್ನು scholarcolony@gmail.comಗೆ ಕಳಿಸಬಹುದು. ಅಥವಾ ನಮ್ಮ ಫೇಸ್ಬುಕ್ ಪುಟದಲ್ಲೂ (
www.facebook.com/scholaradda) ಚರ್ಚಿಸಬಹುದು.
-ಸಂಪಾದಕ
***
ಪ್ರಾಚೀನ ಕನ್ನಡ ಸಾಹಿತ್ಯ ಅನುವಾದವೇ?
* ಡಾ. ಮಾಧವ ಪೆರಾಜೆ.
ಈ ಲೇಖನವು ಪ್ರಾಚೀನ ಕನ್ನಡ ಸಾತ್ಯವು ಅನುವಾದ ಇಲ್ಲವೇ ರೂಪಾಂತರ ಅಥವಾ ತುಂಡುಭಾಷಾಂತರ ಎನ್ನುವ ಈಗ ಪ್ರಚಲಿತರುವ ದ್ಟಕೋನವನ್ನು ಆಮೂಲಾಗ್ರವಾಗಿ ಪರಾಮರ್ಶಿಸುವ ಉದ್ದೇಶವನ್ನೊಳಗೊಂಡಿದೆ. ಮೊದಲಿಗೆ ಅಂತಹ ಚರ್ಚೆಯೊಂದರ ಮುಖ್ಯ ಪ್ರತಿಪಾದನೆಗಳನ್ನು ಇಲ್ಲಿ ಸಂಗ್ರಸಲಾಗಿದೆ.
ಪ್ರಾಚೀನ ಕನ್ನಡ ಸಾತ್ಯವು ಅನುವಾದದಿಂದ ಆರಂಭಗೊಳ್ಳುತ್ತದೆ ಎನ್ನುವುದನ್ನು ಮೊದಲಿಗೆ ಪ್ರತಿಪಾದಿಸಿದ ದೇಸಿ ದ್ವಾಂಸರೆಂದರೆ, ರಂ.ಶ್ರೀ.ಮುಗಳಿ ಅವರೇ ಆಗಿದ್ದಾರೆ. ಕನ್ನಡ ಸಾತ್ಯದಲ್ಲಿ ಸರಸ್ವತಿಯ ದರ್ಶನ(1956) ಪುಸ್ತಕದಲ್ಲಿ ಅವರು ಹೀಗೆ ಹೇಳಿದ್ದಾರೆ-
ಕನ್ನಡ ಸಾತ್ಯದಲ್ಲಿ ಮೊದಲನೆಯ ಉಪಲಬ್ಧಗ್ರಂಥವಾದ ’ಕರಾಜಮಾರ್ಗ’ದಿಂದಲೇ ಪ್ರಾರಂಭವನ್ನು ಮಾಡಬೇಕಾಗಿದೆ. ಅದಕ್ಕೆ ಮೊದಲು ಇದ್ದಿರಬಹುದಾದ ಪುಲವಾದ ಗದ್ಯಪದ್ಯವಾಙ್ಮಯವು ಸರಸ್ವತಿಯ ಷಯದಲ್ಲಿಯೂ ಸರಸ್ವತೀನದಿಯಂತೆ ಗುಪ್ತಗಾಮಿನಿಯಾಗಿದೆ. ಪ್ರಾಚೀನ ಕನ್ನಡ ಶಿಲಾಶಾಸನಗಳೇನೋ 5ನೆಯ ಶತಕದಿಂದ 9ನೆಯ ಶತಕದವರೆಗೆ ದೊರೆತಿವೆ. ಆದರೆ ಪ್ರಸಕ್ತ ಷಯಕ್ಕೆ ಉಪಯುಕ್ತ ಸಾಮಗ್ರಿ ಅವುಗಳಲ್ಲಿ ಬಹುಶಃ ಇಲ್ಲ. ’ಕರಾಜಮಾರ್ಗ’ವು ದಂಡಿಯ ’ಕಾವ್ಯಾದರ್ಶ’ದ ಅನುವಾದರೂಪ ಗ್ರಂಥ. ಮೂಲವನ್ನು ಅದು ಅನುಸರಿಸಿರುವಂತೆ ಕಂಗೊಳಿಸುತ್ತದೆ...
Posted in Translation, ಅನುವಾದ, ಡಾ. ಮಾಧವ ಪೆರಾಜೆ, ಭಾಷಾಂತರ, ಭಾಷಾಂತರ ನಮ್ಮಲ್ಲೂ ಇತ್ತೇ?
ಭಾಷಾಂತರ ಪರಿಕಲ್ಪನೆ ಕನ್ನಡದಲ್ಲಿ ಇರಲಿಲ್ಲವೇ?