07 January 2017

ವಿಶ್ವವಾಣಿಯಲ್ಲಿ ರುಲ್ಫೋ

ಎಲ್. ಎನ್ ರಿಂದ ಅನುವಾದಿತ ಪುಸ್ತಕ- ರುಲ್ಫೋ ಸಮಗ್ರ ಸಾಹಿತ್ಯ- ಬೆಂಕಿಬಿದ್ದ ಬಯಲು ಮತ್ತು ಪೆದ್ರೋ ಪರಾಮೂ ಭಾನುವಾರ ಬಿಡುಗಡೆಯಾಗುತ್ತಿದೆ. ಇದರ ಬಗೆಗೆ ವಿಶ್ವವಾಣಿ ಪ್ರಕಟಿಸಿರುವ ಅನುವಾದಕರ ಮಾತು ಇಲ್ಲಿದೆ
ಪರಸ್ಪರ ಪ್ರಕಾಶನ ಮತ್ತೆ ಮಹತ್ವದ ಮೂರು ಪುಸ್ತಕಗಳನ್ನು ಹೊರತರುತ್ತಿದೆ. ಇದೇ ಭಾನುವಾರ ಸಂಜೆ 5.30ಕ್ಕೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವಿದೆ. ಪ್ರಖ್ಯಾತ ವಿಮರ್ಶಕರಾದ ಕೆ.ವಿ ನಾರಾಯಣ ಅವರು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮತ್ತೊಬ್ಬ ವಿಮರ್ಶಕ ಓ.ಎಲ್ ನಾಗಭೂಷಣ ಸ್ವಾಮಿ ಮತ್ತು ಜನಪ್ರಿಯ ಕಥೆಗಾರ ಕೆ.ಸತ್ಯನಾರಾಯಣ ಹಾಗೂ ಎನ್ ಎಸ್ ಶ್ರೀಧರ ಮೂರ್ತಿ ನಮ್ಮ ಜೊತೆಯಲ್ಲಿರುತ್ತಾರೆ. ತಪ್ಪದೇ ಕಾರ್ಯಕ್ರಮಕ್ಕೆ ಬನ್ನಿ....